Author: admin
ಸೌಂದರ್ಯ ಸಾಧನಗಳು ಎಲ್ಲರಿಗೂ ಚಿರಪರಿಚಿತ. ಇದನ್ನು ಉಪಯೋಗಿಸಿ ಸುಂದರವಾಗಿ ಕಾಣಿಸಿಕೊಳ್ಳುತ್ತೇನೆಂಬ ಭ್ರಮೆಗೆ ಒಳಗಾಗುವವರಲ್ಲಿ ಕೇವಲ ಮಹಿಳೆಯರು, ಮಕ್ಕಳು ಅಷ್ಟೇ ಅಲ್ಲದೇ ಪುರುಷರು ಕೂಡಾ ಹಿಂದೆ ಇಲ್ಲ. ಸುಂದರವಾಗಿ ಕಾಣಲು ಯಾರು ತಾನೇ ಇಚ್ಚಿಸುವುದಿಲ್ಲ. ಮೈಕಾಂತಿ, ಕಣ್ಣು, ಮೂಗು, ಹುಬ್ಬು, ತುಟಿ ಎಲ್ಲದರ ಸೌಂದರ್ಯ ಹೆಚ್ಚಿಸಿಕೊಳ್ಳುವ ತರಾತುರಿಯಲ್ಲಿ ಸಿಕ್ಕ ಸಿಕ್ಕ ಸೌಂದರ್ಯ ವರ್ಧಕ ಬಳಕೆಗೆ ಶರಣಾಗುವುದು ಸರಿ ಅಲ್ಲ. ಸೌಂದರ್ಯ ಸಾಧನಗಳ ಅಗತ್ಯ ಇದೆಯೇ. ಇದ್ದರೆ ಯಾಕೆ ಬೇಕು. ಸಹಜತೆಯೇ ಸೌಂದರ್ಯ ಯಾಕಾಗಬಾರದು ಎನ್ನುವುದನ್ನು ಯೋಚಿಸಿ. ನಾನು ವೈಯಕ್ತಿಕವಾಗಿ ಯಾವುದೇ ಸೌಂದರ್ಯ ಸಾಧನಗಳನ್ನು ಬಳಸುತ್ತಿಲ್ಲ. ಬಳಸಿದವಳೂ ಅಲ್ಲ ಎಂಬ ಕಾರಣಕ್ಕೆ ಇತರರಿಗೆ ಚೌಕಟ್ಟನ್ನು ಹಾಕುವ, ಮೌಲ್ಯವನ್ನು ಹೇರುವ ಉದ್ದೇಶದಿಂದ ಈ ಲೇಖನ ಬರೆದಿಲ್ಲ. ಬದಲಿಗೆ ಸೌಂದರ್ಯ ಸಾಧನಗಳ ಬಳಕೆಯಿಂದ ಆಗುವ ಅನಾಹುತದತ್ತ ಗಮನ ಹರಿಸಿ ಎಚ್ಚೆತ್ತುಕೊಳ್ಳಲಿ ಎಂಬುದು ನನ್ನ ಭಾವನೆ ಹಾಗೂ ಈ ಲೇಖನದ ಉದ್ದೇಶ. ಚಿರಸೌಂದರ್ಯ ಹೆಚ್ಚಿಸಿಕೊಳ್ಳಲು ಹಲವಾರು ಉಪಾಯಗಳನ್ನು ಹುಡುಕುವುದರಲ್ಲಿ ನಿರತರಾಗಿ ತನಗೆ ವಿವೇಚನಾ ಶಕ್ತಿ ಇದೆ ಎಂಬುದನ್ನು ಕೊಚ್ಚಿಕೊಳ್ಳುವ…
ವಿದ್ಯಾಗಿರಿ: ‘ವೈಯಕ್ತಿಕ ಬದುಕನ್ನು ಸಮಾಜದಲ್ಲಿ ಅತ್ಯುತ್ತಮವಾಗಿ ಕಟ್ಟುಕೊಳ್ಳುವುದೇ ದೇಶ ಕಟ್ಟುವ ಕಾರ್ಯ’ ಎಂದು ಐಪಿಎಸ್ ಅಧಿಕಾರಿ, ಕರ್ನಾಟಕ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತ ಎನ್. ಶಶಿಕುಮಾರ್ ಹೇಳಿದರು. ಆಳ್ವಾಸ್ ಪದವಿ ಕಾಲೇಜು ಡಾ.ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡ ವಿವಿಧ ವಿದ್ಯಾರ್ಥಿ ಘಟಕಗಳ ದಿನಾಚರಣೆ ‘ಇನಾಮು – 2024’ ಉದ್ಘಾಟಿಸಿ ಅವರು ಮಾತನಾಡಿದರು. ಹಲವು ಯುವಕರು ನಾವು ದೇಶ ಕಟ್ಟುತ್ತೇವೆ.. ಎಂಬಿತ್ಯಾದಿಯಾಗಿ ಉತ್ಪ್ರೇಕ್ಷೆಯಿಂದ ಹೇಳುತ್ತಾರೆ. ಒಂದೇ ಬಾರಿಗೆ ಭಾರಿ ಭಾರ ಹೊರಬೇಡಿ. ನಮ್ಮ ಬದುಕು, ಮನೆಯವರ ಬದುಕು, ಊರು- ಸಮಾಜಕ್ಕೆ ಕೊಡುಗೆ ನೀಡುವ ಮೂಲಕ ಮಾತ್ರ ದೇಶ ಕಟ್ಟಲು ಸಾಧ್ಯ. ಅದಕ್ಕೆ ಮೌಲ್ಯಾಧಾರಿತ ಬದುಕು ಕಟ್ಟಿಕೊಳ್ಳಿ ಎಂದರು. ವ್ಯಕ್ತಿತ್ವ ವಿಕಸನದಲ್ಲಿ ತರಗತಿ ಶಿಕ್ಷಣ ಎನ್ನುವುದು ಒಂದು ಭಾಗವಷ್ಟೇ. ಅದನ್ನು ಹೊರತುಪಡಿಸಿ ಪಠ್ಯೇತರ ಚಟುವಟಿಕೆಗಳು ಸಾಕಷ್ಟಿವೆ. ಇವುಗಳಲ್ಲಿ ತೊಡಗಿಸಿಕೊಳ್ಳುವ ಬಹುದೊಡ್ಡ ಜವಾಬ್ದಾರಿಯುತ ಕಾರ್ಯವನ್ನು ಆಳ್ವಾಸ್ ಮಾಡುತ್ತಿದೆ ಎಂದು ಶ್ಲಾಘಿಸಿದರು. ಗುರಿ ಸ್ಪಷ್ಟವಿದ್ದಾಗ ಮಾತ್ರ ಆ ಗುರಿಯನ್ನು ತಲುಪುವ ಮಾರ್ಗದರ್ಶನ…
ಪ್ರಥಮ ಹಂತದಲ್ಲಿ ಸುಮಾರು 30 ಕೋ. ರೂ ವೆಚ್ಚದಲ್ಲಿ ಸಮಗ್ರವಾಗಿ ಜೀರ್ಣೋದ್ದಾರಗೊಳ್ಳುತ್ತಿರುವ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಮಾ.2, 2025 ರಂದು ಜರುಗಲಿರುವ ಮಾರಿಯಮ್ಮ ದೇವಿಯ ಪುನಃ ಪ್ರತಿಷ್ಠೆ ಸಹಿತ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಮಂಗಳವಾರ ಪ್ರಧಾನ ತಂತ್ರಿ ವಿದ್ವಾನ್ ಕೆ. ಪಿ. ಕುಮಾರಗುರು ತಂತ್ರಿಗಳ ನೇತೃತ್ವದಲ್ಲಿ ಪ್ರಧಾನ ಅರ್ಚಕ ಮೇ, ಮೂ ಶ್ರೀನಿವಾಸ ತಂತ್ರಿ ಕಲ್ಯ ಅವರ ಉಪಸ್ಥಿತಿಯಲ್ಲಿ ನೂತನ ಗರ್ಭಗುಡಿಯಲ್ಲಿ ಗೋನಿವಾಸ ಧಾರ್ಮಿಕ ಕಾರ್ಯಕ್ರಮ ಜರಗಿದವು. ಕಳೆದ ಎ.9 ರಂದು ಕಾಪು ಮಾರಿಯಮ್ಮ, ಉಚ್ಚಂಗಿ ದೇವಿಯ ನಿರ್ಮಾಣ ಹಂತದ ನೂತನ ಗರ್ಭಗುಡಿಯಲ್ಲಿ ಸಾನಿಧ್ಯ ವೃದ್ಧಿಗಾಗಿ ಪ್ರಾಚೀನ ಸಪ್ರದಾಯದಂತೆ ಭೂಕರ್ಷನ ಖನನ ಹರಣ, ದಾಹ, ಪೂರಣ ಸಹಿತ ನವಧಾನ್ಯಗಳಿಂದ ಬೀಜ ಪವನ ನಡೆಸಲಾಗಿದ್ದು ಅದರ ಮುಂದುವರಿದ ಭಾಗವಾಗಿ ಮೊಳಕೆಯೊಡೆದಿರುವ ನವಧಾನ್ಯಗಳನ್ನು ಗೋವುಗಳಿಂದ ಮೇಯಿಸುವ ಕಾರ್ಯಕ್ರಮವೇ ಗೋನಿವಾಸವಾಗಿದ್ದು ಏಕಕಾಲದಲ್ಲಿ ಕರುಗಳ ಸಹಿತ ಒಂಬತ್ತು ಗೋವುಗಳನ್ನು ಕೊಳಲು ವಾದನದೊಂದಿಗೆ ನಿರ್ಮಾಣ ಹಂತದ ಗರ್ಭಗುಡಿಯವರೆಗೆ ಕರೆದೊಯ್ದು ಅಲ್ಲಿ ಸಾಮೂಹಿಕ ಗೋಪೂಜೆ ನಡೆಸಿ, ಬಳಿಕ ವಾಸ್ತವ್ಯ…
ಒಡಿಯೂರು ಶ್ರೀ ಕ್ಷೇತ್ರದಲ್ಲಿ ಗುರುದೇವ ಸೇವಾ ಬಳಗ ಮಹಾರಾಷ್ಟ್ರ ಘಟಕದ ಸವಿನೆನಪು ಶಾಶ್ವತವಾಗಿ ಉಳಿಯುವಂತಹ ಯೋಜನೆ ರೂಪಿಸುತ್ತೇವೆ: ಕಡಂದಲೆ ಪರಾರಿ ನ್ಯಾ. ಪ್ರಕಾಶ್ ಎಲ್ ಶೆಟ್ಟಿ
ಕೆಲವು ದಶಕಗಳ ಹಿಂದೆ ಕುಗ್ರಾಮವಾಗಿದ್ದ ಒಡಿಯೂರು ಗ್ರಾಮವನ್ನು ಶ್ರೀ ಗುರುದೇವಾನಂದ ಸ್ವಾಮೀಜಿಯವರು ತಮ್ಮ ಆಧ್ಯಾತ್ಮಿಕ ಸಾಧನೆಯ ಮೂಲಕ ಸುಗ್ರಾಮವಾಗಿ ಲಕ್ಷಾಂತರ ಭಕ್ತರ ಕಷ್ಟಗಳ, ದುಃಖಗಳ ನಿವಾರಣೆಗೆ ಮಾರ್ಗದರ್ಶಕರಾಗಿ ಪೂರ್ತಿ ಗ್ರಾಮವನ್ನು ಅಭಿವೃದ್ಧಿಗೊಳಿಸಿದ ಮಹಾನ್ ಚಿಂತಕರು. ಶ್ರೀ ಗುರುದೇವದತ್ತ ಸಂಸ್ಥಾನಮ್ ಮೂಲಕ ಜಾತಿ, ಧರ್ಮ ಭಾಷೆಯನ್ನು ತಾರತಮ್ಯ ಇಲ್ಲದೇ ಸಾಮಾಜಿಕ, ಶೈಕ್ಷಣಿಕ, ಗ್ರಾಮ ಅಭಿವೃದ್ಧಿ ಯೋಜನೆ, ಗೋ ಸುರಕ್ಷಣಾ ಕೇಂದ್ರ, ತುಳು ಭಾಷೆಯನ್ನು ವೃದ್ಧಿಸುವುದಕ್ಕಾಗಿ ಕ್ಷೇತ್ರದ ಕೆಲಸ ಮಹತ್ತರವಾದದ್ದು. ಭಕ್ತರಿಂದ ಬಂದ ಎಲ್ಲಾ ರೀತಿಯ ಸೇವೆಗಳನ್ನು ಭಕ್ತರಿಗೆ ನೀಡುವ ಅದ್ಭುತ ಕೆಲಸ ನಡೆಯುತ್ತಿದೆ. ಅಲ್ಪ ಸಮಯದಲ್ಲಿ ಅಭಿವೃದ್ಧಿಗೊಂಡ ಕ್ಷೇತ್ರ ಇನ್ನೊಂದು ಇರುವುದು ಅಸಾಧ್ಯ. 25 ವರ್ಷಗಳಿಂದ ಬಹಳಷ್ಟು ಅಭಿವೃದ್ಧಿಗೊಂಡಿದೆ. ಹಲವಾರು ಯೋಜನೆಯ ಮೂಲಕ ಅಭಿವೃದ್ಧಿಯನ್ನು ಮಾಡಿದ ಸ್ವಾಮೀಜಿಯವರು, ಮಹಾರಾಷ್ಟ್ರದಲ್ಲಿ 25 ವರ್ಷಗಳ ಹಿಂದೆ ಒಡಿಯೂರು ಶ್ರೀ ಗುರುದೇವ ಸೇವಾ ಬಳಗ ಮಹಾರಾಷ್ಟ್ರ ಘಟಕವನ್ನು ಪ್ರಾರಂಭಿಸುವ ಮೂಲಕ ಈ ರಾಜ್ಯದ ಭಕ್ತರು ಒಡಿಯೂರು ಕ್ಷೇತ್ರದ ಅಭಿವೃದ್ಧಿಗೆ ಸೇವೆ ಮಾಡಲು ಅವಕಾಶ ಮಾಡಿಕೊಟ್ಟವರು. ಇದೀಗ ಈ…
ಮೂಡುಬಿದರೆ: ಗ್ರಾಮೀಣ ಭಾಗದ ಮಹಿಳೆಯರಲ್ಲಿ ಸಂಕೋಚ ಸ್ವಭಾವ ಹಾಗೂ ಸ್ವಯಂ ಜಾಗೃತಿಯ ಕೊರತೆಯಿಂದಾಗಿ ಮಹಿಳೆಯರಲ್ಲಿ ಕ್ಯಾನ್ಸರ್ನ ಬಗ್ಗೆ ಅರಿವು ಮೂಡಿಸಬೇಕಾಗಿದೆ. ಇಂತಹ ಜಾಗೃತಿ ಕ್ಯಾಂಪ್ಗಳು ಒಂದು ದಿನಕ್ಕೆ ಸೀಮಿತವಾಗದೇ, ಹಂತ ಹಂತವಾಗಿ ಮುಂದುವರಿಯಬೇಕು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಹೇಳಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮತ್ತು ಆಳ್ವಾಸ್ ಹೆಲ್ತ್ ಸೆಂಟರ್ನ ಸಹಯೋಗದಲ್ಲಿ ಮಹಿಳೆಯರಲ್ಲಿ ಕ್ಯಾನ್ಸರ್ ಜಾಗೃತಿ ಮತ್ತು ತಪಾಸಣಾ ಶಿಬಿರವು ಆಳ್ವಾಸ್ನ ಕೃಷಿಸಿರಿ ವೇದಿಕೆಯಲ್ಲಿ ನಡೆಯಿತು. ಕ್ಯಾನ್ಸರ್ನ ರೋಗಲಕ್ಷಣಗಳು ಸರಿಯಾದ ಸಮಯದಲ್ಲಿ ಪತ್ತೆ ಹಚ್ಚಬೇಕು. ಆಗ ಮಾತ್ರ ಸೂಕ್ತ ಚಿಕಿತ್ಸೆಯನ್ನು ನೀಡಲು ಸಾಧ್ಯ. ಇತ್ತೀಚಿನ ದಿನಗಳಲ್ಲಿ ಇದಕ್ಕೆ ಬೇಕಾದ ಚಿಕಿತ್ಸೆಗಳು ಲಭ್ಯವಿದ್ದು, ಆರಂಭಿಕ ಹಂತದಲ್ಲಿ ಚಿಕಿತ್ಸೆಯನ್ನು ನೀಡಿದರೆ, ಪ್ರಾಣಾಪಾಯದಿಂದ ತಪ್ಪಿಸಬಹುದು ಎಂದರು. ಎಜೆ ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಕೇಂದ್ರದ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾದ ಡಾ. ಕವಿತಾ ಡಿಸೋಜ ಮಾತನಾಡಿ, ಅತೀ ಹೆಚ್ಚು ಮಹಿಳೆಯರು ಸ್ತನದ ಕ್ಯಾನ್ಸರ್ನಿಂದ ಬಳಲುತ್ತಿದ್ದರೆ, ಗರ್ಭಕಂಠದ ಕ್ಯಾನ್ಸರ್ಗೆ ತುತ್ತಾದವರು ಎರಡನೇ…
ಅಂತರ್ಜಾಲ ಸುದ್ದಿ ಮಾಧ್ಯಮ ಕ್ಷೇತ್ರದಲ್ಲಿ ಬಹಳಷ್ಟು ಹೆಸರು ಮಾಡಿದ ಮಾತ್ರವಲ್ಲ, ಸಹಸ್ರಾರು ಬಂಟರ ಸಾಧನೆಗಳನ್ನು ಸಮಾಜಕ್ಕೆ ಪರಿಚಯಿಸಿದ ‘ಬಂಟ್ಸ್ ನೌ’ ಅಂತರ್ಜಾಲ ಸುದ್ದಿ ಮಾಧ್ಯಮ ಸಂಸ್ಥೆಯ ವತಿಯಿಂದ ಅನುಬಂಧ – 2024 ಕಾರ್ಯಕ್ರಮ ಮೇ 19 ರಂದು ಮಂಗಳೂರು ಪುರಭವನದಲ್ಲಿ ಅಪರಾಹ್ನ 3 ರಿಂದ ರಾತ್ರಿ 10 ರ ತನಕ ನಡೆಯಲಿದೆ. ಬಂಟರ ಸಂಘ ಮುಂಬಯಿ ಇದರ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಅರ್ಥಪೂರ್ಣ, ಸಮಾಜ ಹಿತ ಕಾರ್ಯಕ್ರಮವನ್ನು ಕೆ. ಅಜಿತ್ ಕುಮಾರ್ ರೈ ಮಾಲಾಡಿ, ಡಾ. ಎ. ಸದಾನಂದ ಶೆಟ್ಟಿ, ಅರಿಯಡ್ಕ ಚಿಕ್ಕಪ್ಪ ನಾಯ್ಕ್, ಬಸ್ರೂರು ಅಪ್ಪಣ್ಣ ಹೆಗ್ಡೆ, ಡಾ. ಸುನೀತಾ ಎಂ. ಶೆಟ್ಟಿಯವರು ಸಾಂಕೇತಿಕವಾಗಿ ತುಳುನಾಡಿನ ಸಂಪ್ರದಾಯದಂತೆ ವಿವಿಧ ಆಕರ್ಷಕ ಶೈಲಿಗಳಲ್ಲಿ ಉದ್ಘಾಟಿಸಲಿದ್ದಾರೆ. ಈ ಸಂಭ್ರಮದಲ್ಲಿ ಗೌರವ ಅತಿಥಿಗಳಾಗಿ ಜಸ್ಟಿಸ್ ಸಂತೋಷ್ ಹೆಗ್ಡೆ, ಡಾ. ಎಚ್. ಎಸ್ ಬಲ್ಲಾಳ್, ಡಾ. ಎ.ಜೆ. ಶೆಟ್ಟಿ, ಕರ್ನಿರೆ ವಿಶ್ವನಾಥ್ ಶೆಟ್ಟಿ, ಡಾ. ಸತೀಶ್ ಕುಮಾರ್ ಭಂಡಾರಿ, ಅಜಿತ್…
ಇಂದು ವ್ಯವಹಾರಿಕ ಅಗತ್ಯಕ್ಕೆ ಇತರ ಭಾಷೆಗಳ ಕಲಿಕೆ ಅನಿವಾರ್ಯವಾದರೂ, ಮಾತೃಭಾಷೆ ಮೇಲಿನ ಅಭಿಮಾನ ಎಂದಿಗೂ ಮರೆಯಾಗಬಾರದು. ಎಲ್ಲರನ್ನೂ ಒಗ್ಗೂಡಿಸುವ ಶಕ್ತಿ ಮಾತೃಭಾಷೆಯಲ್ಲಿದೆ ಎಂದು ಹಿರಿಯ ಸಾಹಿತಿ ಸದಾನಂದ ನಾರಾವಿ ಹೇಳಿದರು. ನಗರದ ಕೊಡಿಯಾಲ್ ಬೈಲ್ ನ ಶಾರದಾ ವಿದ್ಯಾಲಯದಲ್ಲಿ ಜರುಗಿದ ‘ತುಲುವೆರೆ ಕಲ ವರ್ಸೊಚ್ಚಯ’ದಲ್ಲಿ ಸಮಾರೋಪ ಭಾಷಣ ಮಾಡಿದರು. ಶೈಕ್ಷಣಿಕ ದೃಷ್ಟಿಯಿಂದಲೂ ಭಾಷೆಯ ಕಲಿಕೆ ಹೆಚ್ಚಿದಷ್ಟೂ ಜ್ಞಾನದ ಮಟ್ಟ ವೃದ್ಧಿಸುತ್ತದೆ ಎಂಬುದು ಸ್ಪಷ್ಟವಾಗಿದೆ. ಅಲ್ಲದೇ ಸಕಾರಾತ್ಮಕ ಚಿಂತನೆ ಸೃಷ್ಟಿಯಾಗುತ್ತದೆ. ಈ ನಿಟ್ಟಿನಲ್ಲಿ ಬಹುಭಾಷಾ ಕಲಿಕೆ ಮಹತ್ವದ ಪಾತ್ರ ವಹಿಸುತ್ತದೆ. ಭಾಷೆಯನ್ನು ದ್ವೇಷಿಸುವ ಮನೋಭಾವ ಸಲ್ಲದು. ವರ್ಷದ ಅವಧಿಯಲ್ಲಿ ಸಂಘಟನೆ ಪದಾಧಿಕಾರಿಗಳು ಅಭಿನಂದನಾರ್ಹರು. ಸಾಹಿತಿ, ಕವಿಗಳಿಗೆ ಪ್ರೋತ್ಸಾಹ ನೀಡುತ್ತಿರುವ ಸಂಘಟನೆ ಕಾರ್ಯ ನಿರಂತರವಾಗಿರಲಿ, ಇನ್ನಷ್ಟು ಕೃತಿಗಳು ಹೊರಬರಲಿ ಎಂದು ಆಶಿಸಿದರು. ಶಾರದಾ ವಿದ್ಯಾಲಯ ಪ್ರಾಂಶುಪಾಲ ದಯಾನಂದ ಕಟೀಲ್ ಕಾರ್ಯಕ್ರಮ ಉದ್ಘಾಟಿಸಿದರು. ಸಂಘಟನೆ ಅಧ್ಯಕ್ಷೆ ಗೀತಾ ಲಕ್ಷ್ಮೀಶ್ ಅಧ್ಯಕ್ಷತೆ ವಹಿಸಿದ್ದರು. ಸಂಘಟನೆ ಯೂಟ್ಯೂಬ್ ಚಾನೆಲನ್ನು ನಿರೂಪಕ ಕದ್ರಿ ನವನೀತ ಶೆಟ್ಟಿ ಲೋಕಾರ್ಪಣೆಗೊಳಿಸಿದರು. ಸಾಹಿತಿ, ಸಂಘಟಕ…
ಆಯ್ದ ಕೊಬ್ಬರಿ ಉಪಯೋಗಿಸಿ ಸಾಂಪ್ರದಾಯಿಕವಾಗಿ ಗಾಣದಿಂದ ತೆಗೆದ ರಾಸಾಯನಿಕ ಕಲಬೆರಕೆಯಿಲ್ಲದ ಪರಿಶುದ್ಧ ಎಣ್ಣೆ ಹಾಗೂ ಇತರ ನೈಸರ್ಗಿಕ ಉತ್ಪನ್ನಗಳ ಮಿಲ್ ‘ಶುದ್ಧಂ ಗಾಣ’ ಮೇ 2 ರಂದು ಸರ್ವೆ ಗೋಪಿಕಾ ಸಂಕೀರ್ಣದಲ್ಲಿ ಶುಭಾರಂಭಗೊಂಡಿತು. ದ.ಕ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಶಿವನಾಥ ರೈ ಮೇಗಿನಗುತ್ತು ಅವರು ನೂತನ ಮಿಲ್ ನ್ನು ಉದ್ಘಾಟಿಸಿ ಶುಭ ಹಾರೈಸಿದರು. ಪ್ರಶಾಂತ್ ರೈ ಮನವಳಿಕೆ, ಎ ಜನಾರ್ದನ ರೈ ಸೊರಕೆ, ಆನಂದ ಭಂಡಾರ್ಕರ್ ಹಾಗೂ ಗಂಗಾಧರ ಹೆಗ್ಡೆಯವರು ದೀಪ ಪ್ರಜ್ವಲನಗೊಳಿಸಿದರು. ಮುಂಡೂರು ಗ್ರಾ. ಪಂ ಅಧ್ಯಕ್ಷ ಚಂದ್ರಶೇಖರ್ ಎನ್ ಎಸ್ ಡಿ, ಸದಸ್ಯ ಕಮಲೇಶ್ ಸರ್ವೆದೋಳಗುತ್ತು, ಮುಂಡೂರು ಸಿಎ ಬ್ಯಾಂಕ್ ಅಧ್ಯಕ್ಷ ಸುರೇಶ್ ಕುಮಾರ್ ಸೊರಕೆ, ಅಮರನಾಥ ರೈ ಸೊರಕೆ, ಪ್ರವೀಣ್ ರೈ ಪಂಜೊಟ್ಟು, ಶಾಂತರಾಮ ಶೆಟ್ಟಿ, ಅಭಿಲಾಶ್, ಜಿ.ಕೆ ಪ್ರಸನ್ನ ಭಟ್, ಮಹಾಬಲ ರೈ ಮೇಗಿನಗುತ್ತು, ಪ್ರಶಾಂತ್ ರೈ, ಧನ್ಯ ಪಿ ರೈ, ಹರೀಶ್ ಭಂಡಾರಿ, ಮನೋಹರ್ ಅಡ್ಯಂತಾಯ ಬೋಳಂತೂರು, ಆನಂದ್ ಸೂರಂಬೈಲು, ಆಶಾ…
ವಿದ್ಯಾಗಿರಿ: ಪ್ರತಿಯೊಬ್ಬ ವ್ಯಕ್ತಿಯು ತನ್ನ ಜೀವನದಹಾದಿಯಲ್ಲಿ, ಪ್ರತಿ ಹಂತದ ಬೆಳವಣಿಗೆಯನ್ನು ದಾಖಲಿಸಿಡುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ತಿಳಿಸಿದರು. ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಶುಕ್ರವಾರ, ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ಹೊರತಂದ ‘ಆಳ್ವಾಸ್ ವೈಭವ’ ಅರ್ಪಣಾ ಗೀತೆಯ ಬಿಡುಗಡೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಇಂದಿನ ದಿನಗಳಲ್ಲಿ ದಾಖಲೆಗಳು ಇಲ್ಲದೆ ಇದ್ದರೆ ಯಾರು ನಮ್ಮನ್ನು ಒಪ್ಪಿಕೊಳ್ಳುವುದಿಲ್ಲ. ನಮ್ಮ ಸಾಧನೆಗಳನ್ನು ಮೌಖಿಕವಾಗಿ ಹೇಳಿಕೊಳ್ಳುವುದರಿಂದ ಯಾವುದೇ ಪ್ರಯೋಜನವಿಲ್ಲ. ವಿದ್ಯಾರ್ಥಿಗಳು ತಮ್ಮ ದಿನ ನಿತ್ಯದ ಚಟುವಟಿಕೆಗಳನ್ನು ದಾಖಲೀಕರಿಸುವ ಪ್ರವೃತ್ತಿಯನ್ನು ಬೆಳೆಸಿಕೊಂಡಾಗ, ಭವಿಷ್ಯದಲ್ಲಿ ಉಪಯೋಗಕ್ಕೆ ಬರಲಿದೆ ಎಂದರು. ನಂತರ ತಾವು ದೇಶ- ವಿದೇಶಗಳಲ್ಲಿ ನೃತ್ಯ ಪ್ರದರ್ಶನ ನೀಡಿದ ಅನುಭವವನ್ನು ಹಂಚಿಕೊಂಡರು. ಆಳ್ವಾಸ್ ವೈಭವ ಅರ್ಪಣಾ ಗೀತೆ ತಂಡವನ್ನು ಉದ್ದೇಶಿಸಿ ಮಾತನಾಡಿದ ಅವರು ನಮ್ಮಿಂದ ಲಭಿಸಿದ ಚಿಕ್ಕ ಸಹಕಾರದ ಹೊರತಾಗಿಯೂ, ವಿದ್ಯಾರ್ಥಿಗಳ ಶ್ರಮದಿಂದ ಉತ್ತಮ ವೀಡಿಯೋ ಮೂಡಿಬಂದಿದೆ. ಈ ವೀಡಿಯೋ ಆಳ್ವಾಸ್ನ ಚಟುವಟಿಕೆಗಳನ್ನು ಸಣ್ಣ ತುಣುಕಿನ ಮೂಲಕ ತೋರಿಸುವ ಪ್ರಯತ್ನ ಶ್ಲಾಘನೀಯ…
“ಉದ್ಯೋಗನಂ ಪುರುಷ ಸಿಂಗಂ ಉಪೈತಿ ಲಕ್ಷ್ಮೀ” ಉದ್ಯೋಗಿಯಾದ ಪುರುಷ ಶ್ರೇಷ್ಠನಲ್ಲಿ ಸಂಪತ್ತು ತಾನಾಗಿ ಬಂದು ನೆಲೆಸುತ್ತದೆ ಎಂಬುದು ಈ ಮಾತಿನ ಅರ್ಥವಾಗಿದೆ. ಇದು ದುಡಿಮೆಯ ಮಹತ್ವವನ್ನು ತಿಳಿಸುವ ಹಿಂದಿನ ಮಾತಾಗಿದೆ. ಯಾವುದೇ ಕಾರ್ಯಗಳು ತಮ್ಮ ಉದ್ಯೋಗದಿಂದ ಸಿದ್ಧಿಸುತ್ತವೇ ಹೊರತು ಕುಳಿತು ಸಂಕಲ್ಪ ಮಾಡುವುದರಿಂದಲ್ಲ. ಇದನ್ನೇ ಜಗಜ್ಯೋತಿ ಬಸವಣ್ಣನವರು ‘ಕಾಯಕವೇ ಕೈಲಾಸ’ ಎಂದರು. ಕಾಯಕವೆಂದರೆ ದುಡಿಮೆ. ದುಡಿಯದವನಿಗೆ ಉಣ್ಣುವ ಅಧಿಕಾರವಿಲ್ಲ. ಮೈ ಬಗ್ಗಿಸಿ ದುಡಿಯದೇ ದೇಹವನ್ನು ಯಾವುದಾದರೊಂದು ಉದ್ಯೋಗದಲ್ಲಿ ತೊಡಗಿಸದೆ ಇದ್ದಲ್ಲಿ ಜೀವನ ಸಾರ್ಥಕ್ಯ ಹೊಂದಲು ಸಾಧ್ಯವಿಲ್ಲ. ಉದ್ಯೋಗದಲ್ಲಿ ಮೇಲು ಕೀಳು ಎಂಬುವುದಿಲ್ಲ. ಯಾವುದೇ ಉದ್ಯೋಗವಾಗಲಿ ಅದನ್ನು ಅತ್ಯಂತ ಶ್ರದ್ಧೆಯಿಂದ ನಿರ್ವಹಿಸಿದರೆ ಬದುಕಿನಲ್ಲಿ ಯಶಸ್ಸು ಸಾಧ್ಯ. ಅಲ್ಲದೇ ಆ ಉದ್ಯೋಗದಿಂದಲೇ ಮನುಷ್ಯನ ಜೀವನ ಉಜ್ಜೀವನಗೊಳ್ಳಬಹುದು. “ಉದ್ಯೋಗಂ ಪುರುಷ ಲಕ್ಷಣಂ” ಎಂಬ ಮಾತಿನಂತೆ ಮನುಷ್ಯನು ಯಾವುದಾದರೊಂದು ಉದ್ಯೋಗದಲ್ಲಿ ತನ್ನನು ತೊಡಗಿಸಿಕೊಳ್ಳಬೇಕು. ಉದ್ಯೋಗ ಇರುವ ಮನುಷ್ಯ ತನ್ನ ದೈನಂದಿನ ಜೀವನವನ್ನು ಅತ್ಯಂತ ಶಿಸ್ತಿನಿಂದ ನಿರ್ವಹಿಸುತ್ತಾನೆ. ಅಲ್ಲದೇ ಆತನ ಜೀವನದ ಸಮಯವು ವ್ಯರ್ಥವಾಗದೆ ಸದ್ವಿನಿಯೋಗವಾಗುತ್ತದೆ. ಆತನ ಮನಸ್ಸಿಗೆ…