Author: admin
ಬಂಟರ ಯಾನೆ ನಾಡವರ ಮಾತೃ ಸಂಘದ ಪುತ್ತೂರು ತಾಲೂಕು ಘಟಕದ ನೂತನ ಸಂಚಾಲಕರಾಗಿ ಕುಂಬ್ರ ದುರ್ಗಾಪ್ರಸಾದ್ ರೈ ಮತ್ತು ಸಹ ಸಂಚಾಲಕರಾಗಿ ಸಾಜ ರಾಧಾಕೃಷ್ಣ ಆಳ್ವ
ಬಂಟರ ಯಾನೆ ನಾಡವರ ಮಾತೃ ಸಂಘದ ಪುತ್ತೂರು ತಾಲೂಕು ಘಟಕದ ನೂತನ ಸಂಚಾಲಕರಾಗಿ ಕುಂಬ್ರ ದುರ್ಗಾಪ್ರಸಾದ್ ರೈ ಮತ್ತು ಸಹ ಸಂಚಾಲಕರಾಗಿ ಮಾಜಿ ತಾ. ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವರವರು ಜುಲೈ 16 ರಂದು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬಂಟರ ಯಾನೆ ನಾಡವರ ಮಾತೃ ಸಂಘದ ಕೇಂದ್ರ ಸಮಿತಿಯ ಉಪಾಧ್ಯಕ್ಷರಾದ ತಾಲೂಕು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಜರಗಿದ ಬಂಟರ ಯಾನೆ ನಾಡವರ ಮಾತೃ ಸಂಘದ ಪುತ್ತೂರು ತಾಲೂಕು ಘಟಕದ ಕಾರ್ಯಕಾರಿ ಸಮಿತಿಯಲ್ಲಿ ನೂತನ ಆಯ್ಕೆ ನಡೆಯಿತು. ನೂತನ ಸಂಚಾಲಕ ಕುಂಬ್ರ ದುರ್ಗಾಪ್ರಸಾದ್ ರೈಯವರ ಹೆಸರನ್ನು ಮಾತೃ ಸಂಘದ ಪುತ್ತೂರು ಘಟಕದ ನಿಕಟಪೂರ್ವ ಸಂಚಾಲಕ ದಯಾನಂದ ರೈ ಮನವಳಿಕೆ ಗುತ್ತು ಮತ್ತು ನೂತನ ಸಹ ಸಂಚಾಲಕ ಸಾಜ ರಾಧಾಕೃಷ್ಣ ಆಳ್ವರವರ ಹೆಸರನ್ನು ಮಾತೃ ಸಂಘದ ಪುತ್ತೂರು ಘಟಕದ ನಿಕಟಪೂರ್ವ ಸಹ ಸಂಚಾಲಕ ಜಯಪ್ರಕಾಶ್ ರೈ ನೂಜಿಬೈಲುರವರು ಸೂಚಿಸಿದರು. ಬಂಟರ ಯಾನೆ ನಾಡವರ ಮಾತೃ ಸಂಘದ…
ಸವಾಲುಗಳು ಜೀವನದ ಅವಿಭಾಜ್ಯ ಅಂಗ. ಸವಾಲುಗಳನ್ನು ಸ್ವೀಕರಿಸುವ ಕಲೆಯನ್ನು ಕಲಿಯುವುದು ಕಷ್ಟ. ಆದರೆ ಅವುಗಳನ್ನು ಸ್ವೀಕರಿಸುತ್ತ ಹಲವು ಸಲ ನಾವು ಯಶಸ್ಸನ್ನು ಕಾಣುವೆವು ಎಂಬ ಭರವಸೆಯಲ್ಲಿ ಮತ್ತು ಕೆಲವು ಸಲ ನಿರೀಕ್ಷಿತ ಯಶಸ್ಸು ದೊರಕದಿದ್ದರೂ ಜೀವನವನ್ನು ಧನಾತ್ಮಕ ಚಿಂತನೆಯಲ್ಲಿ ಸಾಗಿಸಿದರೆ ನಾವು ಉತ್ತಮ ಮಾನವರಾಗುವ ಜೊತೆಗೆ ಜೀವನದಲ್ಲಿ ಯಶಸ್ಸನ್ನು ಕಾಣುವುದರಲ್ಲಿ ಸಂದೇಹವಿಲ್ಲ. ಸವಾಲುಗಳನ್ನು ಎದುರಿಸುವಾಗ ಜೀವನದಲ್ಲಿ ಹಲವಾರು ಕಷ್ಟ ನಷ್ಟಗಳು, ಆತಂಕಗಳು ಅನಿರೀಕ್ಷಿತವಾಗಿ ಕಾಣಿಸಿದರೂ ಅವುಗಳು ಸಹಜ. ಆದರೆ ಎಲ್ಲೋ ಓದಿದಂತೆ ‘ಹೊಸ ಸಾಗರಗಳನ್ನು ಅನ್ವೇಷಣೆ ಮಾಡಬೇಕಾದರೆ ದೃಷ್ಟಿಯಲ್ಲಿ ತೀರವನ್ನು, ಕಾಣದೆ ದೂರಕ್ಕೆ ಹೋಗಬೇಕಾದ ಧೈರ್ಯ ನಮ್ಮಲಿರಬೇಕು’ ಇಂಥ ಧೈರ್ಯದಿಂದಲೇ ಮಹಾತ್ಮಾ ಗಾಂಧಿ, ನೆಲ್ಸನ್ ಮಂಡೇಲಾ, ಮಾರ್ಟಿನ್ ಲೂಥರ್ ಕಿಂಗ್ ಇವರ ಜೀವನ ದಂತಕಥೆಗಳಾದವು. ಕ್ರಿಕೆಟಿನ ದಂತಕಥೆ ಸುನಿಲ್ ಗಾವಸ್ಕರ್ ರವರ ಸಾಧನೆಯನ್ನು ಮೆಲುಕು ಹಾಕುವಾಗ ಹಿಂದಿನ ಪ್ರಸಿದ್ಧ ವಾಕ್ಯದ ನೆನಪಾಗುತ್ತದೆ. ‘ಎಲ್ಲಾ ಅಮೋಘ ಸಾಧನೆಗಳು ಒಂದೊಮ್ಮೆ ಅಸಾಧ್ಯವೆಂದು ಪರಿಗಣಿಸಲ್ಪಡುತ್ತಿತ್ತು. ಡಾನ್ ಬ್ರಾಡ್ಮನ್ ನ ವಿಶ್ವದಾಖಲೆಯನ್ನು ಒಂದು ದಿನ ಯಾರಾದರೂ ಮುರಿಯುವರೆಂದು…
ದೈವ ಎಂದರೇನು? ಅದರ ಆರಾಧನೆ ಹೇಗೆ? ಅದರ ಕಟ್ಟು ಪಾಡು ಯಾವುದು? ದೈವದ ಚಾಕಿರಿ ಹೇಗೆ? ಆ ದೈವದ ವಿಚಾರ ಹೇಗೆ?ಇದ್ಯಾವುದು ತಿಳಿಯದೇ ಮ್ಯಾಚಿಂಗ್ ಶಾಲು-ಮುಂಡು ಹಾಕಿ, ಯಾರೋ ಹೇಳಿದ ಮದಿಪು ರೆಕಾರ್ಡ್ ಮಾಡಿ, ಪುಸ್ತಕ ಓದಿ, ಯೂಟ್ಯೂಬ್ ನಿಂದ ಹುಡುಕಿ ಬಾಯಿ ಪಾಠ ಮಾಡಿ ದೈವದ ಎದುರು ಸರಾಗವಾಗಿ ಹೇಳುವ ನೀವುಗಳು ನಿಮ್ಮನ್ನು ನೀವೇ ಪ್ರಶ್ನಿಸಿಕೊಳ್ಳಿ? ನೀವು ಇಂದು ದೈವರಾಧನೆಗೆ ಮಾಡುವ ಅವಹೇಳನ ಅಲ್ಲವೇ? ಈ ರೀತಿ ಮಾಡುವ ನಿಮಗೆ ಸ್ವಂತಿಕೆ ಅನ್ನುವುದು ಇಲ್ಲವೇ? ಒಂದು ಅಕ್ಷರ ಸ್ವಂತ ಬಳಸದೇ ಅನ್ಯರ ಮದಿಪು ಅನುಕರಣೆ ಮಾಡುವ ನೀವು ದೈವರಾಧನೆಗೆ ಮಾಡುವ ಅಪಚಾರ ಅಲ್ಲವೇ? ಇನ್ನೊಬ್ಬರು ಮಾಡುವ, ಬಾಯಿ ಪಾಠ ಮಾಡಿ ಹೇಳುವ ನೀವು, ಯಾವುದನ್ನು ಎಲ್ಲಿ ಹೇಳಬೇಕು, ಹೇಗೆ ಹೇಳಬೇಕು ಅನ್ನುವ ಪರಿಜ್ಞಾನ ನಿಮಗೆ ಇಲ್ಲವೇ? ಈ ರೀತಿ ಮಾಡಿ ನೀವು ಹೇಳುವ ಆ ಮದಿಪು ದೈವಗಳಿಗೆ ಅರ್ಪಣೆ ಆದೀತೇ? ದೈವಾರಾಧನೆ ಬಗ್ಗೆ ಸಂಪೂರ್ಣ ತಿಳಿದವರು ಯಾರೂ ಇಲ್ಲ. ಆದರೆ…
ಅಗ್ನಿವೀರ್ ನಂತಹ ಯೋಜನೆಗಳಲ್ಲಿ ಯುವ ಜನರು ಸೇರಿಕೊಂಡು ಸೇವೆಯಲ್ಲಿ ಸ್ವಲ್ಪ ವರ್ಷ ಸೇವೆ ಮಾಡಿ ಬಂದರೆ ಆತನ ಜೀವನ ಪೂರ್ತಿ ಶಿಸ್ತಿನಲ್ಲಿ ಬದುಕುತ್ತಾನೆ. ಎಲ್ಲಾ ಪ್ರಜೆಗಳು ಸೇನೆಯ ತರಬೇತಿ ಪಡೆದಾಗ ಶಿಸ್ತಿನ ಸ್ವಸ್ಥ ಜೀವನ ನಡೆಸುವುದು ಸಾಧ್ಯವಾಗುತ್ತದೆ. ಐಲೇಸಾ ಸಂಸ್ಥೆ ಸಂದೀಪ ನಂದಾದೀಪದಂತೆ ಕಾರ್ಯಕ್ರಮ ಮೂಲಕ ಸೈನಿಕರ ಬಗ್ಗೆ ಗೌರವ ಭಾವನೆ ಇಟ್ಟುಕೊಂಡಿರುವುದು ಅನುಕರಣೀಯ ಎಂದು ವಾಯುಸೇನೆಯ ಮಾಜಿ ವಾರಂಟ್ ಆಫೀಸರ್ ಆತ್ರಾಡಿ ಸುರೇಶ ಹೆಗ್ಡೆ ಅಭಿಪ್ರಾಯಪಟ್ಟರು. ಬೆಂಗಳೂರಿನ ಐಲೇಸಾ ದಿ ವಾಯ್ಸ್ ಆಫ್ ಒಶಿಯನ್ ಸಂಸ್ಥೆ ಜುಲೈ 14ರಂದು ಹುತಾತ್ಮ ಮೇಜರ್ ಸಂದೀಪ್ ಉನ್ನಿ ಕೃಷ್ಣನ್ ರಿಗೆ ಸಮರ್ಪಿಸಿದ ‘ನಂದಾದೀಪ ಸಂದೀಪ’ ಕಾರ್ಯಕ್ರಮದಲ್ಲಿ ಅವರು ವಿಶೇಷ ಅತಿಥಿಯಾಗಿ ಮಾತನಾಡಿ, ಐಲೇಸಾ ಹೆಸರು ಕೇಳಿದ್ದೆ ಆದರೆ ಅವರ ಬಗ್ಗೆ ಅಷ್ಟೇನೂ ತಿಳಿದಿರಲಿಲ್ಲ. ಆದರೆ ಈ ಕಾರ್ಯಕ್ರಮ ನೋಡಿ ಸದಾ ನಿಮ್ಮ ಜತೆಗೆ ಇರಬೇಕು ಎನ್ನುವ ನಿರ್ಧಾರಕ್ಕೆ ಬಂದಿದ್ದೇನೆ. ಇಂತಹ ಕಾರ್ಯಕ್ರಮಗಳು ಸೈನಿಕರ ಮತ್ತು ಅವರ ಮನೆಯವರ ಮನೋಸ್ಥೈರ್ಯವನ್ನು ಹೆಚ್ಚಿಸುತ್ತದೆ ಎಂದು ಪ್ರಶಂಸಿದರು.…
ಲಯನ್ಸ್ ಕ್ಲಬ್ ಬನ್ನಾಡಿ ವಡ್ಡರ್ಸೆ ಇದರ ವತಿಯಿಂದ ಜುಲೈ 17 ರಂದು ಬನ್ನಾಡಿ ಸುಬ್ಬಣ್ಣ ಹೆಗ್ಡೆ ಸಭಾಂಗಣದ ವಠಾರದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಲಯನ್ ಬಿ. ಪ್ರವೀಣ್ ಹೆಗ್ಡೆ ಬನ್ನಾಡಿ ಇವರ ನೇತೃತ್ವದಲ್ಲಿ “ವನಮಹೋತ್ಸವ” ಆಚರಿಸಲಾಯಿತು.ಈ ಸಂದರ್ಭ ಕ್ಲಬ್ಬಿನ ಕಾರ್ಯದರ್ಶಿ ಲಯನ್ ಬನ್ನಾಡಿ ಅಶಿತ್ ಕುಮಾರ್ ಶೆಟ್ಟಿ, ಕೋಶಾಧಿಕಾರಿ ಲಯನ್ ಬನ್ನಾಡಿ ಸೂರ್ಯಕಾಂತ್ ಶೆಟ್ಟಿ ಹಾಗೂ ನಿಕಟಪೂರ್ವ ಅಧ್ಯಕ್ಷರಾದ ಲಯನ್ ಸುರೇಂದ್ರ ಶೆಟ್ಟಿ ಅಚ್ಲಾಡಿ, ಮಾಜಿ ಅಧ್ಯಕ್ಷರಾದ ಲಯನ್ ಅಡ್ವೋಕೇಟ್ ಕೊತ್ತಾಡಿ ಉದಯ್ ಕುಮಾರ್ ಶೆಟ್ಟಿ ಹಾಗೂ ಲಯನ್ ಪ್ರೊ| ಕಲ್ಕಟ್ಟೆ ಚಂದ್ರ ಶೇಖರ್ ಶೆಟ್ಟಿ, ಲಯನ್ ಎಮ್ ಜೆ ಎಫ್ ವಸಂತ ಶೆಟ್ಟಿ ಅಚ್ಲಾಡಿ, ಲಯನ್ ಬನ್ನಾಡಿ ಪ್ರಭಾಕರ್ ಶೆಟ್ಟಿ, ಲಯನ್ ಕೆ ಸುಭಾಶ್ಚಂದ್ರ ಶೆಟ್ಟಿ, ಲಯನ್ ಸುಗುಣಾಕರ್ ಶೆಟ್ಟಿ, ಲಯನ್ ರಾಜೀವ ಶೆಟ್ಟಿ ಅಚ್ಲಾಡಿ, ಲಯನ್ ಕೂರಾಡಿ ಸಂತೋಷ್ ಶೆಟ್ಟಿ, ಲಯನ್ ಅಚ್ಲಾಡಿ ಸುಧಾಕರ್ ಶೆಟ್ಟಿ, ಲಯನ್ ಗುಂಡು ಶೆಟ್ಟಿ ಮಾನಂಬಳ್ಳಿ, ಲಯನ್ ಉಲ್ಲಾಸ್ ಶೆಟ್ಟಿ ಕಾವಡಿ, ಲಯನ್…
ರಾಜ್ಯದ ರಾಜಧಾನಿ ಬೆಂಗಳೂರು ವಲಯದ ಬಲು ಪ್ರತಿಷ್ಠಿತ ಬಂಟರ ಸಂಘದ ವಿವಿಧ ಸ್ಥಾನಗಳಿಗೆ ಘಟಾನುಘಟಿಗಳು ತೀವ್ರ ಪೈಪೋಟಿ ನಡೆಸುತ್ತಿದ್ದು, ಸಂಘದ ಖಜಾಂಚಿ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಹೆಸರಾಂತ ವಾಸ್ತು ವಿಶೇಷ ತಜ್ಞ ಅಶೋಕ್ ಕುಮಾರ್ ಶೆಟ್ಟಿ ಎಚ್ ಅವರೂ ಒಬ್ಬರು. ಸುಮಾರು ಮೂರು ದಶಕಗಳಿಂದ ಸಂಘದ ಸಕ್ರಿಯ ಸದಸ್ಯರಾಗಿ ಸೇವೆ ಸಲ್ಲಿಸಿದ ಅಶೋಕ್ ಕುಮಾರ್ ಶೆಟ್ಟಿ ಅವರು ಕೋಶಾಧಿಕಾರಿ ಪದಕ್ಕೆ ಸಮರ್ಥ ಅಭ್ಯರ್ಥಿ ಎಂದು ಬೆಂಗಳೂರು ಬಂಟ ಸಮುದಾಯದ ಜನರು ಆಡಿ ಕೊಳ್ಳುತ್ತಿದ್ದಾರೆ. ದಿವಂಗತ ಮಹಾಬಲ ಶೆಟ್ಟಿ ಮಾಲಾಡಿ ಹಾಗೂ ಹೆಗ್ಗುಂಜೆ ಶ್ರೀಮತಿ ಜಲಜಾಕ್ಷಿ ಎಂ ಶೆಟ್ಟಿ ದಂಪತಿಯ ಸುಪುತ್ರರಾದ ಶೆಟ್ಟರು ಬಂಟರ ಸಮುದಾಯಕ್ಕೆ ಮಾತ್ರವಲ್ಲದೇ ಸಾರ್ವಜನಿಕ ಚಟುವಟಿಕೆಗಳಲ್ಲಿಯೂ ಗುರುತಿಸಿ ಕೊಂಡವರು. ಸಂಘಟನೆ, ಸಮಾಜ ಸೇವೆಗೆ ಹೆಸರು ಗಳಿಸಿದ ಅಶೋಕ್ ಕುಮಾರ್ ಶೆಟ್ಟಿ ಅವರು ತನ್ನ ಪ್ರಾಥಮಿಕ, ಫ್ರೌಢ ಹಾಗೂ ಪದವಿಪೂರ್ವ ಶಿಕ್ಷಣವನ್ನು ಕ್ರಮವಾಗಿ ಮಂದಾರ್ತಿ, ತೆಕ್ಕಟ್ಟೆ ಮತ್ತು ಉಡುಪಿಯಲ್ಲಿ ಪೂರೈಸಿ ಮುಂದೆ ವಾಸ್ತು ಶಾಸ್ತ್ರ ಸಂಬಂಧಿ ಆಧುನಿಕ ವಿಧಾನ ಶಿಕ್ಷಣವನ್ನು ಪ್ರತಿಷ್ಠಿತ…
ವಿದ್ಯಾರ್ಥಿ ವೇತನ ನೀಡುವ ಉದ್ದೇಶ ಶಿಕ್ಷಣಕ್ಕೆ ಸ್ಫೂರ್ತಿ ನೀಡುವುದು, ಇದರ ಜತೆಗೆ ಸಂಸ್ಕೃತಿ, ಸಂಸ್ಕಾರವನ್ನು ಬೆಳೆಸುವ ಕಾರ್ಯವಾಗಬೇಕು. ಸಮಾಜ ಸುಧಾರಣೆ ಮಾಡುವ ಒಳ್ಳೆಯ ಕಾರ್ಯವನ್ನು ಗುರುಪುರ ಬಂಟರ ಮಾತೃ ಸಂಘ ಮಾಡುತ್ತಿದೆ. ನಕಾರಾತ್ಮಕ ಚಿಂತನೆಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಮಕ್ಕಳಿಗೆ ಮಾರ್ಗದರ್ಶನ, ಸಂಸ್ಕೃತಿಯ ತಿಳುವಳಿಕೆ ನೀಡುವ ಕಾರ್ಯವಾಗಬೇಕು ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಅವರು ಹೇಳಿದರು. ಗುರುಪುರ ಬಂಟರ ಮಾತೃ ಸಂಘ ಇದರ ಆಶ್ರಯದಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು, ಜಾಗತಿಕ ಬಂಟರ ಸಂಘಗಳ ಒಕ್ಕೂಟ, ಮಂಗಳೂರು ಹಾಗೂ ಬೆಂಗಳೂರು ಬಂಟರ ಸಂಘ ಇದರ ಸಹಯೋಗದೊಂದಿಗೆ ವಾಮಂಜೂರು ಚರ್ಚ್ ಹಾಲ್ ನಲ್ಲಿ ನಡೆದ ಗುರುಪುರ ಬಂಟರ ಮಾತೃ ಸಂಘದ ವಾರ್ಷಿಕ ಸಮಾವೇಶ, ಮಹಾಸಭೆ, ಸಾಧಕರಿಗೆ ಸಮ್ಮಾನ, ವಿದ್ಯಾರ್ಥಿವೇತನ ವಿತರಣೆ, ವಿದ್ಯಾರ್ಥಿ ಪುರಸ್ಕಾರ, ಬಂಟ ಯುವತಿಯರ ಸಮಾವೇಶ- ಯುವ ಸಂಗಮ, 2024-27 ರ ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಆಶೀರ್ವಚನ ನೀಡಿದರು. ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ,…
ಯಕ್ಷಧ್ರುವ ಪಟ್ಲ ಟ್ರಸ್ಟಿನ ಸ್ಥಾಪಕಾಧ್ಯಕ್ಷರಾದ ಪಟ್ಲ ಸತೀಶ್ ಶೆಟ್ಟಿಯವರ ಕನಸಿನ “ಪಟ್ಲ ಯಕ್ಷಾಶ್ರಯ” ಯೋಜನೆಯ 30 ನೇ ಮನೆಯನ್ನು ಫಲಾನುಭವಿ ಶ್ರೀ ಕಟೀಲು ಮೇಳದ ಒಂದನೇ ಮೇಳದ ಕಲಾವಿದ ಪ್ರಶಾಂತ್ ಕಲ್ಲಡ್ಕರವರಿಗೆ ಹಸ್ತಾಂತರಿಸಲಾಯಿತು. ಯಕ್ಷಧ್ರುವ ಪಟ್ಲ ಟ್ರಸ್ಟಿನ ಮಹಾದಾನಿ, ಪ್ರತಿಷ್ಠಿತ ಎಂ ಆರ್ ಜಿ ಸಮೂಹ ಸಂಸ್ಥೆಗಳ ಸಿಎಂಡಿ ಡಾ| ಕೊರಂಗ್ರಪಾಡಿ ಪ್ರಕಾಶ ಶೆಟ್ಟಿಯವರು ಕೊಡುಗೆಯಾಗಿ ನೀಡಿದ ಈ ಮನೆಯ ಕೀಲಿ ಕೈ ಹಸ್ತಾಂತರ ಸಂದರ್ಭದಲ್ಲಿ ಟ್ರಸ್ಟಿನ ಬಂಟ್ವಾಳ ಘಟಕದ ಅಧ್ಯಕ್ಷರಾದ ಚಂದ್ರಹಾಸ ಡಿ ಶೆಟ್ಟಿ ರಂಗೋಲಿ, ಕೇಂದ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಕೆ ಭಂಡಾರಿ ಅಡ್ಯಾರ್ ಹಾಗೂ ಶ್ರೀಕಾಂತ್ ಅರಳ ಉಪಸ್ದಿತರಿದ್ದರು.
ಬಂಟ ಜನಾಂಗದ ಯುವಕ, ಯುವತಿಯರಿಗೆ ಮಾರ್ಗದರ್ಶನ ನೀಡುವ ಆದರ್ಶ ಕಾರ್ಯಕ್ರಮ ಇದಾಗಿದೆ. ಇದು ಕೇವಲ ಗುರುಪುರ ಬಂಟರ ಮಾತೃ ಸಂಘಕ್ಕೆ ಮಾತ್ರ ಸೀಮಿತವಾಗಿರದೇ ದೇಶ ವಿದೇಶದಲ್ಲಿರುವ ಎಲ್ಲಾ ಮಾತೃ ಸಂಘದವರು ಮಕ್ಕಳಿಗೆ ಸರಿಯಾದ ಮಾಹಿತಿ ಕೊಡುವ ಇಂತಹ ಕಾರ್ಯಕ್ರಮದ ಅನಿವಾರ್ಯತೆ ಇದೆ. ಇದು ಕೇವಲ ಬಂಟ ಸಮಾಜಕ್ಕೆ ಮಾತ್ರವಲ್ಲ ದೇಶದ ಸಮಸ್ತ ಯುವಕ, ಯುವತಿಯರಿಗೆ ಕಾಲಕಾಲಕ್ಕೆ ಸರಿಯಾಗಿ ಮಾರ್ಗದರ್ಶನ ಕೊಡಬೇಕಾದ ಅಗತ್ಯ ಇದೆ. ದೇಶದ ಯುವ ಶಕ್ತಿಯ ಮೇಲೆ ನಂಬಿಕೆ ಇಡಲಾಗಿದೆ. ಯುವ ಶಕ್ತಿ ನಮ್ಮ ದೇಶದ ಸಂಪತ್ತು ಎಂದು ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಅವರು ಹೇಳಿದರು. ಅವರು ಗುರುಪುರ ಬಂಟರ ಮಾತೃ ಸಂಘ ಇದರ ಆಶ್ರಯದಲ್ಲಿ ಬಂಟ ಯಾನೆ ನಾಡವರ ಮಾತೃಸಂಘ ಮಂಗಳೂರು, ಜಾಗತಿಕ ಬಂಟರ ಸಂಘಗಳ ಒಕ್ಕೂಟ, ಮಂಗಳೂರು ಹಾಗೂ ಬೆಂಗಳೂರು ಬಂಟರ ಸಂಘ ಇದರ ಸಹಯೋಗದೊಂದಿಗೆ ಗುರುಪುರ ಬಂಟರ ಮಾತೃ ಸಂಘದ ವಾರ್ಷಿಕ ಸಮಾವೇಶ, ಮಹಾಸಭೆ, ಸಾಧಕರಿಗೆ ಸನ್ಮಾನ,…
ಪುಣೆ ತುಳುಕೂಟವು ರಜತ ಮಹೋತ್ಸವ ಸಂಭ್ರಮದಲ್ಲಿದ್ದು ನಿರಂತರ ಕಾರ್ಯಕ್ರಮಗಳು ನಡೆಯಲಿದೆ. ಈ ನಿಟ್ಟಿನಲ್ಲಿ ರಜತ ಮಹೋತ್ಸವ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು. ಜುಲೈ 11ರ ಗುರುವಾರದಂದು ಪುಣೆ ವಾರ್ಜೆಯಲ್ಲಿರುವ ಶಿವರ್ಶ್ ಹೋಟೆಲ್ ನ ಬ್ಯಾಂಕ್ವೇಟ್ ಹಾಲ್ ನಲ್ಲಿ ತುಳುಕೂಟದ ಅಧ್ಯಕ್ಷ ದಿನೇಶ್ ಶೆಟ್ಟಿ ಕಳತ್ತೂರು ಪುಣೆ ತುಳುಕೂಟದ ಮತ್ತು ಮುಂದೆ ನಡೆಯಲಿರುವ ರಜತ ಮಹೋತ್ಸವದ ಬಗ್ಗೆ ಪ್ರಾಸ್ತಾವಿಕವಾಗಿ ಸಭೆಗೆ ತಿಳಿಸಿದರು ಹಾಗೂ ರಜತ ಮಹೋತ್ಸವದ ಯಶಸ್ವಿಗೆ ಸಮಿತಿ ರಚನೆಯ ಬಗ್ಗೆ ತಿಳಿಸಿದರು. ಅದೇ ಪ್ರಕಾರವಾಗಿ ಸಮಿತಿಯನ್ನು ರಚಿಸಲಾಗಿದ್ದು, ರಜತ ಮಹೋತ್ಸವ ಸಮಿತಿಗೆ ಉಪಾಧ್ಯಕ್ಷರುಗಳಾಗಿ ಸದಾನಂದ ನಾಯಕ್ ಮಾಳ, ಸಂತೋಷ್ ಶೆಟ್ಟಿ ಮಟ್ಟಾರು, ಸದಾಶಿವ್ ಸಾಲ್ಯಾನ್ ಖುಷ್ಬೂ, ಹರೀಶ್ ಶೆಟ್ಟಿ ಕುರ್ಕಾಲ್, ವಿಶ್ವನಾಥ್ ಪೂಜಾರಿ ಅಂಬಿಕಾ, ಪ್ರಧಾನ ಕಾರ್ಯದರ್ಶಿಯಾಗಿ ರೋಹಿತ್ ಶೆಟ್ಟಿ ನಗ್ರಿ ಗುತ್ತು, ಕೋಶಾಧಿಕಾರಿಯಾಗಿ ಸಿಎ. ಮನೋಹರ್ ಶೆಟ್ಟಿ, ಜೊತೆ ಕಾರ್ಯದರ್ಶಿಗಳಾಗಿ ಶರತ್ ಭಟ್ ಅತ್ರಿವನ, ಸಚ್ಚಿದಾನಂದ ಶೆಟ್ಟಿ, ಜೊತೆ ಕೋಶಾಧಿಕಾರಿಯಾಗಿ ಹರೀಶ್ ಶೆಟ್ಟಿ ಕಸ್ಬಾ, ಸ್ಮರಣ ಸಂಚಿಕೆ ಸಂಪಾದಕ ಮಂಡಳಿಗೆ ಹರೀಶ್…