ಮೇ ತಿಂಗಳಿನಲ್ಲಿ ನಡೆಯುವ ಬಂಟ್ವಾಳ ತಾಲೂಕಿನ ನಾವೂರು ಗ್ರಾಮದ ಅಗ್ರಹಾರ ಬೀದಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾಗಿ ರಾಕೇಶ್ ಮಲ್ಲಿ ಅವರು ಆಯ್ಕೆಯಾಗಿದ್ದಾರೆ.ದೇವಸ್ಥಾನದ ವಠಾರದಲ್ಲಿ ದೇವಳದ ಪ್ರಧಾನ ಅರ್ಚಕರಾದ ವೇದಮೂರ್ತಿ ಸುದರ್ಶನ್ ಬಲ್ಲಾಳ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು.

ಉಳಿದಂತೆ ಗೌರವಾಧ್ಯಕ್ಷರಾಗಿ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ರವಿಶಂಕರ ಶೆಟ್ಟಿ ಬಡಾಜೆ, ಉದ್ಯಮಿ ಸತೀಶ್ ಭಂಡಾರಿ ಕುಳತ್ತಬೆಟ್ಟು, ಕಾರ್ಯಾಧ್ಯಕ್ಷರಾಗಿ ಸೀತಾರಾಮ ಸಾಲ್ಯಾನ್, ಕಾರ್ಯದರ್ಶಿಯಾಗಿ ಸದಾನಂದ ಗೌಡ ನಾವೂರು, ಉಪಾಧ್ಯಕ್ಷರಾಗಿ ಭುವನೇಶ್ ಪಚ್ಚಿನಡ್ಕ, ಜಯಪ್ರಕಾಶ್ ಬಂಟ್ವಾಳ, ಲೋಕನಾಥ ಶೆಟ್ಟಿ ಬಿ.ಸಿ.ರೋಡು, ಇಂದಿರಾ ಸೂರಜ್ ನಾವೂರು ಬೀದಿ, ಶೇಖರ ಪೂಜಾರಿ, ಜೊತೆ ಕಾರ್ಯದರ್ಶಿಯಾಗಿ ತೇಜ್ ಪಾಲ್ ಜೈನ್, ಶ್ರೀಹರಿ ಕಾರಂತ್, ವೇಣುಗೋಪಾಲ ಆಚಾರ್ಯ, ಸತೀಶ್ ಕರ್ಕೇರ, ಕೋಶಾಧಿಕಾರಿಯಾಗಿ ಸುದರ್ಶನ್ ಬಲ್ಲಾಳ್, ಗೌರವ ಸಲಹೆಗಾರರಾಗಿ ಗಂಗಾಧರ ಶೆಟ್ಟಿಯವರು ಆಯ್ಕೆಯಾಗಿದ್ದಾರೆ.ದೇವಳದ ಜೀಣೋದ್ದಾರ ಸಮಿತಿಯನ್ನು ಈ ಮೊದಲೇ ರಚಿಸಲಾಗಿದ್ದು, ಮಾಜಿ ಸಚಿವ ಬಿ. ರಮಾನಾಥ ರೈ, ಉದ್ಯಮಿ ರಘುನಾಥ ಸೋಮಯಾಜಿ (ಗೌರವಾಧ್ಯಕ್ಷರು), ಪದ್ಮಶೇಖರ ಜೈನ್ (ಅಧ್ಯಕ್ಷರು), ಉಮಾಶಂಕರ್ ಬಂಟ್ವಾಳ (ಕಾರ್ಯದರ್ಶಿ), ಭರತ್ ರಾವ್, ರಾಮಕೃಷ್ಣ ಬಲ್ಲಾಳ್ (ಜತೆ ಕಾರ್ಯದರ್ಶಿಗಳು), ಲೋಕೇಶ್ ಪೂಜಾರಿ ಪಲ್ಲಿಕಂಡ, ಜಗದೀಶ್ ಪೂಜಾರಿ (ಉಪಾಧ್ಯಕ್ಚರು), ಸುದರ್ಶನ್ ಬಲ್ಲಾಳ್ (ಕೋಶಾಧಿಕಾರಿ) ಅವರು ಆಯ್ಕೆಗೊಂಡಿರುತ್ತಾರೆ ಎಂದು ಪ್ರಕಟಣೆ ತಿಳಿಸಿದೆ. 42 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಬ್ರಹ್ಮರಥವನ್ನು ಕಳೆದ ತಿಂಗಳು ದೇವಳಕ್ಕೆ ತರಲಾಗಿದ್ದು, ಬ್ರಹ್ಮಕಲಶ ಸಂದರ್ಭದಲ್ಲಿ ಸಮರ್ಪಣೆಗೊಳ್ಳಲಿದೆ. ಪ್ರಸ್ತುತ ಹನುಮಂತನ ಗುಡಿ, ಮುಂಭಾಗದ ಗೋಪುರ, ರಥದ ಕೊಟ್ಟಿಗೆ ನಿರ್ಮಾಣ ಸಹಿತ 1.27 ಕೋ.ರೂ. ವೆಚ್ಚದಲ್ಲಿ ದೇವಸ್ಥಾನದ ಜೀರ್ಣೋದ್ದಾರ ಕಾರ್ಯ ಭರದಿಂದ ನಡೆಯುತ್ತಿದೆ.