Author: admin
ವಿದ್ಯಾಗಿರಿ: ‘ಸರ್ಟಿಫಿಕೆಟ್ಗಿಂತ ಸಂಸ್ಕಾರ ಮುಖ್ಯ. ಶಿಕ್ಷಣವು ಸಂಸ್ಕಾರಭರಿತ ಮನಸ್ಸನ್ನು ಕಟ್ಟುವ ಪ್ರಕ್ರಿಯೆ ಎಂದು ಮಂಗಳೂರು ವಿಶ್ವವಿದ್ಯಾಲಯದ ಎಸ್ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕ ಡಾ.ಧನಂಜಯ ಕುಂಬ್ಳೆ ಹೇಳಿದರು.ಆಳ್ವಾಸ್ ಮುಂಡ್ರೆದೆಗುತ್ತು ಕೆ ಅಮರನಾಥ ಶೆಟ್ಟಿ ಕೃಷಿಸಿರಿ ವೇದಿಕೆಯಲ್ಲಿ ಗುರುವಾರ ನಡೆದ ಆಳ್ವಾಸ್ ಇಂಗ್ಲಿಷ್ ಮಾಧ್ಯಮ ಮತ್ತು ಕನ್ನಡ ಮಾಧ್ಯಮ ಶಾಲೆಗಳ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು. ವಿದ್ಯಾವಂತರಾದವರೇ ಸಮಾಜಘಾತುಕ ಕಾರ್ಯಗಳಲ್ಲಿ ತೊಡಗಿಕೊಂಡರೆ ಅಂತಹ ವಿದ್ಯೆಗೆ ಏನು ಬೆಲೆ? ಮಾನವೀಯ ಸಂವೇದನೆಯನ್ನುAಟು ಮಾಡುವ ಶಿಕ್ಷಣ ನಮಗೆ ಬೇಕಾಗಿದೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಂತಹ ಶಿಕ್ಷಣವನ್ನು ನೀಡುತ್ತಿರುವುದು ಶ್ಲಾಘನೀಯ ಎಂದರು.ಆಳ್ವಾಸ್ (ಸ್ವಾಯತ್ತ) ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ ಮಾತನಾಡಿ, ನಾವು ಅಕ್ಷರಸ್ಥರಾದರೆ ಸಾಲದು. ನಾವು ವಿದ್ಯಾಂತರಾಗಬೇಕು. ಅಕ್ಷರಸ್ಥರೆಲ್ಲರೂ ವಿದ್ಯಾವಂತರಾಗಲು ಸಾಧ್ಯವಿಲ್ಲ. ಸಂಸ್ಕಾರ ಭರಿತ ಅಕ್ಷರಸ್ಥ ಮಾತ್ರ ವಿದ್ಯಾವಂತ. ಅಕ್ಷರ ಕಲಿತ ವ್ಯಕ್ತಿ ದುಷ್ಟನೂ, ಭ್ರಷ್ಟನೂ ಆಗಬಹುದು. ಆದರೆ ಸಂಸ್ಕಾರ ಕಲಿತ ವ್ಯಕ್ತಿ ಎಂದಿಗೂ ದುಷ್ಟ, ಭ್ರಷ್ಟ ಆಗಲಾರ. ಅಕ್ಷರಸ್ಥರಿಗೂ ವಿದ್ಯಾವಂತರಿಗೂ ಇರುವ ವ್ಯತ್ಯಾಸವನ್ನು ನಾವು ತಿಳಿದುಕೊಳ್ಳಬೇಕು…
ಕಾರ್ಕಳ : ಐ.ಸಿ.ಎ.ಐ ನಡೆಸಿದ 2024ರ ನವೆಂಬರ್ – ಸಿ.ಎ ಅಂತಿಮ ಪರೀಕ್ಷೆಯಲ್ಲಿ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಹಳೆವಿದ್ಯಾರ್ಥಿಗಳಾದ, ಕಾರ್ಕಳ ಕಾಬೆಟ್ಟು ನಿವಾಸಿ ವಿಶ್ವನಾಥ ಶೆಟ್ಟಿ ಮತ್ತು ಗೀತಾ ಶೆಟ್ಟಿ ದಂಪತಿಗಳ ಸುಪುತ್ರನಾದ ಸೋಮನಾಥ್ ವಿ. ಶೆಟ್ಟಿ, ಜಾರ್ಕಳದ ಮೋಹನ್ ಕಿಣಿ ಮತ್ತು ಶುಭಾ ಕಿಣಿ ದಂಪತಿಗಳ ಸುಪುತ್ರಿಯಾದ ಸ್ವಾತಿ ಕಿಣಿ ಮತ್ತು ಬೈಲೂರು ರಮೇಶ್ ಶೆಟ್ಟಿ ಮತ್ತು ಶಾಲಿನಿ ಶೆಟ್ಟಿ ದಂಪತಿಗಳ ಸುಪುತ್ರಿಯಾದ ರಕ್ಷಾ ಶೆಟ್ಟಿ ಅತ್ಯುತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದಿರುತ್ತಾರೆ. ಇವರ ಸಾಧನೆಯನ್ನು ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷರಾದ ಡಾ.ಸುಧಾಕರ್ ಶೆಟ್ಟಿಯವರು ಹಾಗೂ ಜ್ಞಾನಸುಧಾ ಪರಿವಾರವು ಅಭಿನಂದಿಸಿ ಹರ್ಷ ವ್ಯಕ್ತಪಡಿಸಿರುತ್ತಾರೆ.
2019 ರಿಂದ ಆಯೋಜಿಸಿಕೊಂಡು ಬಂದಿರುವ ಆಶಾ ಪ್ರಕಾಶ್ ಶೆಟ್ಟಿ ಸಹಾಯ ಹಸ್ತ ಯೋಜನೆಯ “ನೆರವು” ಸಹಾಯಹಸ್ತ ಪ್ರದಾನ ಕಾರ್ಯಕ್ರಮ ಬುಧವಾರ ಸಂಜೆ ಗೋಲ್ಡ್ ಫಿಂಚ್ ಸಿಟಿಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು. ಬಳಿಕ ಮಾತನಾಡಿದ ಎಂ.ಆರ್.ಜಿ ಗ್ರೂಪ್ ಛೇರ್ಮನ್ ಡಾ| ಕೆ.ಪ್ರಕಾಶ್ ಶೆಟ್ಟಿ ಅವರು, “ನನ್ನ 60ನೇ ವರ್ಷದ ಹುಟ್ಟುಹಬ್ಬದ ಸಂದರ್ಭದಲ್ಲಿ ಸಮಾಜಕ್ಕೆ ನನ್ನಿಂದ ಕಿಂಚಿತ್ತು ನೆರವು ನೀಡುವ ಉದ್ದೇಶದಿಂದ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಅಂದಿನಿಂದ ಸತತವಾಗಿ ಈ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದೆ. ಇಂದು ನನ್ನ ಬಾಳಿನಲ್ಲಿ ಅತ್ಯಂತ ಖುಷಿಯ ದಿನ. ನನ್ನ ಈ ಕಾರ್ಯಕ್ಕೆ ನನ್ನ ಪತ್ನಿ, ಮಗ, ಸೊಸೆ ಸಹಿತ ಕುಟುಂಬದ ಸದಸ್ಯರು ಸಹಕಾರ ನೀಡುತ್ತಿದ್ದಾರೆ. ಮೊದಲ ವರ್ಷದಲ್ಲಿ 1 ಕೋಟಿ 25 ಲಕ್ಷ ರೂ. ನೆರವು ನೀಡಿದ್ದು, ಅದು ಇಂದು 6 ಕೋಟಿ ರೂ. ಗಡಿಯನ್ನು ದಾಟಿದೆ. ಇಂದು ಇಲ್ಲಿ ಸಮಾರಂಭ ನಡೆಸಿ ನೆರವು ನೀಡುವ ಉದ್ದೇಶ ಇಷ್ಟೇ. ಇಂತಹ ಕಾರ್ಯಕ್ರಮ ಇಂದು…
ಡ್ರಗ್ಸ್ ಜಾಲ ಚಕ್ರವ್ಯೂಹ ಇದ್ದಂತೆ. ಇದರಿಂದ ಹೊರಬರುವುದು ಕಷ್ಟ ಈ ಬಗ್ಗೆ ಯೋಚಿಸಲೂ ಬೇಡಿ. ಮಾದಕ ವಸ್ತುಗಳು ನಿಮ್ಮ ಗುರಿ ಸಂತೋಷವನ್ನೇ ಕೊಲ್ಲುತ್ತವೆ. ಹೀಗೆ ಯುವ ಸಮುದಾಯಕ್ಕೆ ಎಚ್ಚರಿಕೆ ನೀಡಿದವರು ವೈದ್ಯರು, ಶಿಕ್ಷಣ ತಜ್ಞರು, ನೌಕರರ ವಲಯದ ಪರಿಣಿತರು, ಉದ್ಯಮಿಗಳು. ವಿಜಯ ಕರ್ನಾಟಕ ದಿನಪತ್ರಿಕೆ, ಧಾರವಾಡ ಜಿಲ್ಲಾ ನೌಕರರ ಸಂಘದ ಸಹಯೋಗದೊಂದಿಗೆ ನೌಕರ ಭವನದಲ್ಲಿ ಆಯೋಜಿಸಿದ್ದ ಮಾದಕ ವಸ್ತು ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ವೈದ್ಯರು, ಶಿಕ್ಷಣ ತಜ್ಞರು ತಾವು ಕಂಡ ಕೆಲ ಅನುಭವಗಳ ಚಿತ್ರಣ ತೆರೆದಿಡುವ ಜತೆಗೆ ಹೇಗೆ ಮಾರಕವಾಗಿದೆ ಎಂಬುದನ್ನು ಔಚಿತ್ಯಪೂರ್ಣವಾಗಿ ತೆರೆದಿಟ್ಟರು. ನೂರಾರು ಸಂಖ್ಯೆಯಲ್ಲಿ ಸೇರಿದ ವಿದ್ಯಾರ್ಥಿಗಳು ಆಸಕ್ತಿಯಿಂದ, ತದೇಕ ಚಿತ್ತದಿಂದ ಎಲ್ಲರ ಭಾಷಣಗಳನ್ನೂ ಕೇಳಿದರು. ಡ್ರಗ್ಸ್ ವ್ಯಸನಿಗಳ ಬದುಕು ಹಾಳಾಗಿರುವ ವಾಸ್ತವತೆಯನ್ನು ಬಿಚ್ಚಿಟ್ಟ ಪಂಜುರ್ಲಿ ಹೋಟೆಲ್ಸ್ ಸಮೂಹದ ಸಂಸ್ಥಾಪಕ ರಾಜೇಂದ್ರ ಶೆಟ್ಟಿ ನಾನು ಮುಂಬಯಿಯಲ್ಲಿ ಚಾ ಮಾರುತ್ತಿದ್ದಾಗ ಅದೆಷ್ಟೋ ಜನ ಡ್ರಗ್ಸ್ ನಿಂದಲೇ ವೈಯಕ್ತಿಕ ನೆಮ್ಮದಿ, ಕೆಲವರು ಕುಟುಂಬ, ಕೆಲವರು ಜೀವ ಕಳೆದುಕೊಂಡಿದ್ದಾರೆ. ಮಾದಕ ವಸ್ತು, ದೇಶಕ್ಕೆ…
ಉತ್ತರದ ಹಂಪಿ, ಪಟ್ಟದಕಲ್ಲು, ಬೇಲೂರು ಹಳೇಬೀಡು, ಅಜಂತ ಎಲ್ಲೋರ ಹರಪ್ಪ ಮೊಹಂಜದಾರೊ ಮುಂತಾದ ಸ್ಥಳಗಳು ಗತಕಾಲದ ಕಲೆಯ ಶಿಲಾಲಯಗಳು ನಿತ್ಯ ಪ್ರೇಕ್ಷಕರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತಿದೆ. ಹಾಗೆಯೇ ತುಳುನಾಡಿನ ಉಡುಪಿ ಜಿಲ್ಲೆಯ ತೌಳವ ರಾಜಧಾನಿ ಬಾರ್ಕೂರು, ನೀಲಾವರ, ಬಸ್ರೂರು, ಚೌಳಿಕೇರಿ, ಕತ್ತಲೆ ಬಸದಿ, ಸೂರಾಲು ಮಣ್ಣಿನ ಅರಮನೆ ಇತ್ಯಾದಿ ನೂರಾರು ಸ್ಥಳಗಳಲ್ಲಿ ಪುರಾತನ ಶಿಲಾಶಾಸನ ಕಲ್ಲುಗಳಿವೆ. ಇಲ್ಲಿ ಪ್ರಸ್ತಾಪಿಸುತ್ತಿರುವ ದುಃಖದ ಸಂಗತಿ ಎಂದರೆ, ಕೆಲವು ದೇವಾಲಯದ ಸಮೀಪ ಇರಿಸಲಾದ ಶಾಸನ ಕಲ್ಲುಗಳನ್ನು ಸ್ವಲ್ಪ ಮಟ್ಟಿನಲ್ಲಿ ಅಚ್ಚುಕಟ್ಟುತನದಲ್ಲಿ ಇರಿಸಲಾಗಿದೆ. ಆದರೆ ಉಳಿದ ಹೆಚ್ಚಿನ ಪೌರಾಣಿಕ ಸ್ಥಳಗಳಲ್ಲಿ ಶಾಸನ ಕಲ್ಲುಗಳು ಅನಾಥವಾಗಿ ಬಿದ್ದುಕೊಂಡಿರುವುದನ್ನು ಕಾಣಬಹುದು. ಆದರೆ ಎಲ್ಲಿಯೂ ಆ ಶಾಸನ ಕಲ್ಲಿನ ವಿವರವನ್ನು ತಿಳಿಸುವ ಭಾಗ್ಯವಿಲ್ಲ. ಅದರಲ್ಲೂ ನೀಲಾವರ ಶ್ರೀ ಮಹಿಷಮರ್ದಿನಿ ಕ್ಷೇತ್ರದ ಹೊರಾವರಣ ಸೀತಾ ನದಿಯ ಪ್ರಶಾಂತ ತಾಣದ ದಡದಲ್ಲಿ ಸಾಲಾಗಿ 8 ಶಾಸನ ಕಲ್ಲುಗಳಿವೆ. ಕೆಲವು ಐದಾರು ಅಡಿ ಎತ್ತರ ಮೂರು ಅಡಿ ಅಗಲವಿದೆ. ಬಾರ್ಕೂರಿನ ಚೌಳಿಕೇರಿ ಶ್ರೀ ಮಹಾಗಣಪತಿ ದೇವಾಲಯ ಶಿಲೆಗಳ…
ಇಂತಹದೊಂದು ಕಾನೂನು ತಂದ ಮಹಾರಾಷ್ಟ್ರದ ನೆಚ್ಚಿನ ಮುಖ್ಯಮಂತ್ರಿಗೆ ಎಷ್ಟು ಸಲಾಮುಗಳನ್ನು ಹೇಳಬೇಕು ಅರ್ಥ ಆಗ್ತಾ ಇಲ್ಲ. ಸಾಮಾನ್ಯರಿಂದ ಸಾಮಾನ್ಯರ ಮನೆಯಲ್ಲಿ ಇವತ್ತು ಮದುವೆ ಮತ್ತು ಮೆಹಂದಿಯಲ್ಲಿ ಶರಾಬು ಇಲ್ಲದೆ ಕಾರ್ಯಕ್ರಮ ಆಗುವಂತಿಲ್ಲ. ಮಹಾರಾಷ್ಟ್ರದ ನೆಚ್ಚಿನ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಸಾರಾಯಿ ಹಂಚುವಂತಿಲ್ಲ ಎಂಬ ಕಾನೂನಿನ ಕಡತಕ್ಕೆ ಸಹಿ ಹಾಕಿದ್ದಾರೆ. ಕಾನೂನು ಉಲ್ಲಂಘಿಸಿದಿರಿ ಅಂತಾದರೆ ನಿಮ್ಮನ್ನು ಶಿಕ್ಷಿಸಲಾಗುತ್ತೆ. ಲಕ್ಷ ರೂಪಾಯಿ ದಂಡ ಹಾಕುತ್ತೆ. ಕಟ್ಟು ನಿಟ್ಟಾದ ಕಾನೂನು ಸದ್ಯದಲ್ಲಿಯೇ ಜಾರಿಗೆ ಬರುತ್ತೆ. ಸ್ನೇಹಿತರೇ ಸಪ್ತಪದಿಯ ಸಂಪ್ರದಾಯ ಸಾರಾಯಿ ಸಮಾರಂಭ ಆಗುವುದು ಎಷ್ಟು ಸರಿ? ಆದರೂ ಶ್ರೀಮಂತರಿಂದ ಹಳ್ಳಿಯ ಬಡ ಕುಟುಂಬವೂ ಸಹ ಇವತ್ತಿನ ದಿನಗಳಲ್ಲಿ ಈ ದರಿದ್ರ ಆಚರಣೆಗೆ ಮಾರು ಹೋಗಿರುವುದು ದುರದೃಷ್ಟಕರ. ಗುಂಪಿನಲ್ಲಿ ಗೋವಿಂದ ಎಂಬಂತೆ ಇವತ್ತಿನ ದಿನಗಳಲ್ಲಿ ಕಡು ಬಡ ಜನರೂ ಸಹ ಈ ಕಾರ್ಯಕ್ರಮಕ್ಕೆ ಜೈ ಅನ್ನುವುದು ವಾಡಿಕೆಯಾಗಿದೆ. ಯೋಗ್ಯತೆ ಇಲ್ಲದೆ ಇದ್ದರೂ ಸಹ ಮೆಹಂದಿ ಸಮಾರಂಭ ಮಾಡಿ ಸಾಲದ ಹೊರೆಯಲ್ಲಿ ಬೀಳುವವರನ್ನು ನಾವು ಕಂಡವರು. ಹಾಗೆಯೇ ಸಪ್ತಪದಿಯ…
ತುಳುನಾಡಿನ ಶಕ್ತಿಯಾದ ಸಾಂಪ್ರದಾಯಿಕ ಕಂಬಳ ಕ್ರೀಡೆಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಹೇಳಿದರು. ಪಡುಪಣಂಬೂರು ಅರಮನೆ ಗದ್ದೆಯಲ್ಲಿ ನಡೆದ ಮೂಲ್ಕಿ ಸೀಮೆ ಅರಸು ಕಂಬಳದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕಂಬಳ ಸಮಿತಿ ವತಿಯಿಂದ ಸನ್ಮಾನ ಸ್ವೀಕರಿಸಿ, ಅವರು ಮಾತನಾಡಿದರು. ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಐಕಳಬಾವ ಡಾ| ದೇವಿ ಪ್ರಸಾದ್ ಶೆಟ್ಟಿ ಮಾತನಾಡಿ, ಈ ಬಾರಿ ಸರಕಾರವು 24 ಕಂಬಳಗಳಿಗೆ ಐದು ಲಕ್ಷ ರೂಪಾಯಿ ಹಣ ಅನುದಾನ ಮಂಜೂರು ಮಾಡಿದೆ. ತುಳುನಾಡಿನ ಹೆಮ್ಮೆಯ ಕಂಬಳಗಳಿಗೆ ಭಾರತ ಸರಕಾರದ ಮಾನ್ಯತೆ ಪಡೆಯಲು ಸ್ಥಳೀಯ ಸಂಸದರ ಮೂಲಕ ಪ್ರಯತ್ನ ನಡೆಸಲಾಗುವುದು ಎಂದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ಎಂ. ರೈ ಮಾತನಾಡಿ, ವಿಶ್ವ ವ್ಯಾಪಿ ಕಂಬಳ ಕ್ರೀಡೆ ಸೂರ್ಯ ಚಂದ್ರರಿರುವ ತನಕ ಮುಂದುವರಿಯುವುದು ಶತಹ ಸಿದ್ಧ ಎಂದರು. ಮಾಜಿ ಸಚಿವರಾದ ಬಿ. ರಮಾನಾಥ ರೈ ಮತ್ತು ಕೆ. ಅಭಯ್…
ಕ್ರಿಸ್ಮಸ್ ಎನ್ನುವ ಪದದ ಅರ್ಥವೇ ಹಂಚಿಕೊಳ್ಳುವಿಕೆ ಎಂದು. ಮನುಷ್ಯರ ನಡುವೆ ಪ್ರೀತಿಯನ್ನು ಹಂಚಿ ಎಲ್ಲರೂ ಸಮಾನರು ಎನ್ನುವ ಸಂದೇಶವನ್ನು ಸಾರಿ ದೈವತ್ವವನ್ನು ನೀಡಲು ಏಸುವು ಭೂಮಿಯಲ್ಲಿ ಜನ್ಮ ತಾಳಿದನು. ಪ್ರತಿಯೊಂದು ಮಗುವಿನ ಬೆಳವಣಿಗೆಗೆ ಪ್ರೀತಿ ಬಹು ಮುಖ್ಯವಾದುದು. ಮಕ್ಕಳ ವ್ಯಕ್ತಿತ್ವವು ಯಾವಾಗಲೂ ಶ್ವೇತ ವರ್ಣದಂತೆ ಶುಭ್ರವಾಗಿರಬೇಕು. ನಮ್ಮ ಪ್ರತಿಯೊಂದು ಹಬ್ಬಗಳು ಎಲ್ಲರನ್ನು ಪ್ರೀತಿಯಿಂದ ಒಗ್ಗೂಡಿಸಬೇಕು ಮತ್ತು ಎಲ್ಲರ ಮನಸ್ಸಿನಲ್ಲಿ ನಿರ್ಮಲತೆಯನ್ನು ಉಂಟುಮಾಡಬೇಕು. ಜಗತ್ತಿನಲ್ಲಿ ತಪ್ಪನ್ನು ತಿದ್ದಿ ಪರಿವರ್ತನೆಗೆ ಅವಕಾಶ ಮಾಡಿಕೊಟ್ಟಾಗ ಒಳ್ಳೆಯ ಸಮಾಜ ಕಟ್ಟಲು ಸಾಧ್ಯವಾಗುತ್ತದೆ” ಎಂದು ಸೇಂಟ್ ಫಿಯೂಸ್ ಚರ್ಚ್ ಹಂಗಳೂರಿನ ರೆವೆರೆಂಡ್ ಫಾದರ್ ಅಲ್ಬರ್ಟ್ ಕ್ರಾಸ್ತಾ ಹೇಳಿದರು. ಅವರು ಕೋಟೇಶ್ವರ ಯಡಾಡಿ- ಮತ್ಯಾಡಿ ಸುಜ್ಞಾನ ಪದವಿಪೂರ್ವ ಕಾಲೇಜು ಹಾಗೂ ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಕ್ರಿಸ್ಮಸ್ ಸಂಭ್ರಮದಲ್ಲಿ ಮುಖ್ಯ ಅಭ್ಯಾಗತರಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಮೆಂಬರ್ ಆಗಿರುವ ರೊಟೇರಿಯನ್ ಜುಡಿತ್ ಮೆಂಡೋನ್ಸಾ ಮಾತನಾಡುತ್ತ “ಈ ನಾಡಿನಲ್ಲಿ ಸಮಾಜದಲ್ಲಿ ಬದಲಾವಣೆ ತರಲು ಬುದ್ಧ, ಬಸವ…
ಮಕ್ಕಳ ತಜ್ಞ ವೈದ್ಯರು ಕೆಲವು ವಿಚಾರದಲ್ಲಿ ಬಹಳ ಅದೃಷ್ಟವಂತರು. ಹೆಚ್ಚಿನ ಮಕ್ಕಳು ಅವರ ಪಾಡಿಗೆ ಅವರೇ ಚೇತರಿಸಿಕೊಳ್ಳುತ್ತಾರೆ. ಜೀವನ ಪರ್ಯಂತ ಬಳಲಬಹುದಾದ ಬಿಪಿ, ಶುಗರ್, ಮೂತ್ರಪಿಂಡದ ವೈಫಲ್ಯಗಳಿಂದ ಬಳಲುವ ಮಕ್ಕಳ ಸಂಖ್ಯೆ ತೀರಾ ಕಮ್ಮಿ. ಮಕ್ಕಳ ವಾರ್ಡುಗಳಿಗೆ ಮತ್ತೆ ಐಸಿಯುವಿಗೆ ಅನಾರೋಗ್ಯದಿಂದ ನರಳುತ್ತಾ ಬರುವ ಮಕ್ಕಳು ಒಂದೆರಡು ದಿನದಲ್ಲಿ ಹುಷಾರಾಗುತ್ತಾರೆ ಮತ್ತು ಆಟವಾಡುತ್ತಾ ನಲಿದಾಡಲು ಪ್ರಾರಂಭಿಸುತ್ತಾರೆ. ಆದರೆ ಜೀವನದ ಕಹಿಸತ್ಯಗಳನ್ನು ಅರಿಯಲು ನೀವು ಸಾವನ್ನು ಎದುರು ನೋಡುತ್ತಿರುವ ಹಿರಿಯರನ್ನು ಹತ್ತಿರದಿಂದ ನೋಡಬೇಕು! ಕೆಲವು ದಿನಗಳ ಹಿಂದೆ ಪರಿಚಯವಿರುವ ಹಿರಿಯ ರೋಗಿಯೊಬ್ಬರನ್ನು ನೋಡಲು ಐಸಿಯು ಕಡೆಗೆ ಹೋಗಿದ್ದೆ. ಜೀವನದ ಕೊನೆಯ ದಿನಗಳನ್ನು ಎಣಿಸುತ್ತಾ ಕುಳಿತಿರುವ ಅನೇಕ ಹಿರಿಯರ ಕಣ್ಣುಗಳನ್ನು ನೋಡಿದೆ. ಹೆಚ್ಚಿನವರ ಕಣ್ಣಿನಲ್ಲಿ ತಮ್ಮ ಜೀವನ ಹೇಗೆ ಕಳೆದು ಹೋಯಿತು ಎಂಬ ಪ್ರಶ್ನಾರ್ಥಕ ಚಿಹ್ನೆಯಿತ್ತು. ಕೆಲವರ ಕಣ್ಣುಗಳಲ್ಲಿ ಮೃತ್ಯುವಿನ ಭಯ. ಉಳಿದವರ ಕಣ್ಣುಗಳಲ್ಲಿ ತಮ್ಮ ಜೀವನವನ್ನು ತಮ್ಮ ಇಷ್ಟದ ಅನುಸಾರ ಬದುಕಲಿಲ್ಲವೆಂಬ ನಿರಾಶೆಯಿತ್ತು. ಈ ಎಪ್ಪತ್ತು ಮೀರಿದ ಹಿರಿಯರು ಮೂವತ್ತು ನಲವತ್ತು ವರ್ಷಗಳ…
ಅಂತರಾಷ್ಟ್ರೀಯ ಜೇಸಿಐ ಪುತ್ತೂರು ವಲಯ 15ರ ನೂತನ ಪದಾಧಿಕಾರಿಗಳ ಪದ ಪ್ರಧಾನ ಸಮಾರಂಭವು ಡಿಸೆಂಬರ್ 26ರಂದು ಸಂಜೆ ರೋಟರಿ ಮನೀಷಾ ಸಭಾಂಗಣದಲ್ಲಿ ಜರಗಲಿದೆ. ಕರ್ನಾಟಕದ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆಯವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು. ಗೌರವ ಅತಿಥಿಗಳಾಗಿ ಸಂತ ಫಿಲೋಮೀನಾ ಕಾಲೇಜಿನ ಪ್ರಾಂಶುಪಾಲ ವ. ಆಂಟನಿ ಪ್ರಕಾಶ್ ಮೊಂತೇರೊ, ಜೇಸಿಐ ಇಂಡಿಯಾದ ವಲಯ 15, ರೀಜನ್ ಇದರ ವಲಯ ಉಪಾಧ್ಯಕ್ಷ (ಝಡ್ ವಿಪಿ)ಸುಹಾಸ್ ಎಪಿಎಸ್ ರವರು ಭಾಗವಹಿಸಲಿದ್ದಾರೆ. ನೂತನ ತಂಡ : 2025 ನೇ ಸಾಲಿನ ಪುತ್ತೂರು ಜೇಸಿಐ ಅಧ್ಯಕ್ಷರಾಗಿ ಭಾಗ್ಯೇಶ್ ರೈ, ಉಪಾಧ್ಯಕ್ಷರುಗಳಾಗಿ ಜಿತೇಶ್ ರೈ (ನಿರ್ವಹಣೆ), ಶರತ್ ಶ್ರೀನಿವಾಸ್ (ತರಬೇತಿ), ರಾಜಶೇಖರ್ (ಕಾರ್ಯಕ್ರಮ), ವಿಘ್ನೇಶ್ (ಬೆಳವಣಿಗೆ ಮತ್ತು ಅಭಿವೃದ್ಧಿ), ಸುಹಾಸ್ ರೈ (ಉದ್ಯಮ), ನಿರೋಶ್ (ಸಾರ್ವಜನಿಕ ಸಂಪರ್ಕ ಮಾರ್ಕೆಟಿಂಗ್), ಕಾರ್ಯದರ್ಶಿ ಮನೋಹರ್ ಪಾಟಾಳಿ, ಜೊತೆ ಕಾರ್ಯದರ್ಶಿ ರಂಜಿನಿ ಶೆಟ್ಟಿ, ಕೋಶಾಧಿಕಾರಿ ರುಕ್ಮಯ, ಮಹಿಳಾ ಜೇಸಿ ಸಂಯೋಜಕರಾಗಿ ಆಶಾ ಮೋಹನ್, ಜೆಜೆಸಿ ವಿಂಗ್ ಚೇರ್ ಪರ್ಸನ್ ಸ್ವಸ್ಥಿ…