Author: admin

ಮನೆಯಿಂದ ವಧು – ವರರು ಹೊರಡುವ ಮುನ್ನ ಮನೆ ದೇವರಿಗೆ, ದೈವಗಳಿಗೆ ಮತ್ತು ನಾಗದೇವರ ಚಾವಡಿಗಳಲ್ಲಿ ಪ್ರಾರ್ಥನೆ ಸಲ್ಲಿಸಿ ಹೊರಡಬೇಕು. ಎಲ್ಲಾ ಹಿರಿಯರು ಮುಂಡಾಸು ಕಟ್ಟಿಕೊಳ್ಳುವುದು ಸಂಸ್ಕೃತಿ. ಮದುವೆ ಸಭಾಭವನದ ಮುಖ್ಯ ದ್ವಾರದಲ್ಲಿ ಸ್ವಾಗತಿಸುವ ಸಂದರ್ಭ ಕಾಲಿಗೆ ನೀರು ಹಾಕುವುದು ಚಿಕ್ಕಮ್ಮ ಅಥವಾ ಸೋದರ ಅತ್ತೆ. ಕೈ ಹಿಡಿಯುವುದು ಗಂಡಿನ ಸಹೋದರಿ ಮತ್ತು ಭಾವ. ಆರತಿ ಬೆಳಗುವುದು ಹೆಣ್ಣಿಗೆ ಮುತೈದೆ ಹೆಂಗಸರಿಂದ. ವೇದಿಕೆಯಲ್ಲಿ ಕಾಲುದೀಪವನ್ನು ವಧು – ವರರ ಮಾತಾ ಪಿತೃಗಳು ಬಂಟ ಗುರಿಕಾರನ ನೇತ್ರತ್ವದಲ್ಲಿ ಎಲ್ಲಾ ದೈವ – ದೇವರುಗಳನ್ನು ಪ್ರಾರ್ಥಿಸಿ ಬೆಳಗಿಸಬೇಕು. ಅಲ್ಲಿಯೇ ಗಣಪತಿಗೆ ಸುತ್ಯೆ ಇಟ್ಟು ಪ್ರಾರ್ಥಸುವುದು. ಹಿರಿಯರು ಮುಂಡಾಸು ಧರಿಸರಬೇಕು. ವಧು – ವರರನ್ನು ಒಟ್ಟಾಗಿಯೂ ಅಥವಾ ಬೇರೆ ಬೇರೆಯಾಗಿಯೂ ವೇದಿಕೆಗೆ ಕರೆದುಕೊಂಡು ಹೋಗಬಹುದು. ಮುಖ್ಯ ದ್ವಾರದಲ್ಲಿ ಆರತಿ ಮಾತ್ರ ಪ್ರತ್ಯೇಕ ಆಗತಕ್ಕದು. ವರನು ವೇದಿಕೆಯ ಬಲಭಾಗದಲ್ಲಿಯೂ, ವಧುವು ಎಡಭಾಗದಲ್ಲಿಯೂ ಕುಳಿತುಕೊಳ್ಳತಕ್ಕದ್ದು. ಅಲ್ಲಿ ವಧುವಿಗೆ ವರನ ಕಡೆಯಿಂದ ಉಡುಗೊರೆ ಕೊಟ್ಟು ಸತ್ಕರಿಸಬಹುದು. ಆಮೇಲೆ ಎರಡು ಕಡೆಯ…

Read More

‘ಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆ’- ಸದ್ಯ ಕನ್ನಡ ಚಿತ್ರರಂಗದಲ್ಲಿ ನಿರೀಕ್ಷೆ ಹುಟ್ಟಿಸಿರುವ ಸಿನಿಮಾಗಳ ಸಾಲಿನಲ್ಲಿ ಕೇಳಿ ಬರುವ ಹೆಸರು. ಆರಂಭದಿಂದಲೂ ವಿಭಿನ್ನ ಪ್ರಚಾರ ತಂತ್ರದ ಮೂಲಕ ಗಮನ ಸೆಳೆದಿರುವ ಈ ತಂಡ ಈಗ ಟ್ರೇಲರ್‌ ಬಿಡುಗಡೆ ಮಾಡಿದೆ. ಬೆಂಗಳೂರಿನ ನಂದಿ ಲಿಂಕ್ಸ್‌ ಗ್ರೌಂಡ್‌ನ‌ಲ್ಲಿ ಅದ್ಧೂರಿಯಾಗಿ ನಡೆದ ಕಾರ್ಯಕ್ರಮದಲ್ಲಿ ಅಶ್ವಿ‌ನಿ ಪುನೀತ್‌ ರಾಜ್‌ಕುಮಾರ್‌, ರಿಷಭ್‌ ಶೆಟ್ಟಿ, ರಕ್ಷಿತ್‌ ಶೆಟ್ಟಿ, ಧ್ರುವ ಸರ್ಜಾ ಸೇರಿದಂತೆ ಸ್ಯಾಂಡಲ್‌ವುಡ್‌ ತಾರೆಯರು ಕಾರ್ಯಕ್ರಮಕ್ಕೆ ಆಗಮಿಸಿ ತಂಡಕ್ಕೆ ಶುಭ ಹಾರೈಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ರಿಷಭ್‌ ಶೆಟ್ಟಿ, “ನನ್ನ ಶಿಷ್ಯಂದಿರೇ ಸೇರಿ ಮಾಡಿರುವ ಸಿನಿಮಾ. ಅರವಿಂದ್‌, ಪ್ರಜ್ವಲ್‌ ಇವರೆಲ್ಲರನ್ನೂ ಲೂಸಿಯಾ ಸಮಯದಿಂದಲೂ ನೋಡಿಕೊಂಡು ಬರುತ್ತಿದ್ದೇನೆ. ತುಂಬಾ ಅದ್ಭುತ ಟೆಕ್ನಿಷಿಯನ್ಸ್‌. ಒಂದು ಸಿನಿಮಾದ ಕಥೆ ಇದೆ ಗೆಸ್ಟ್‌ ಅಪಿಯರೆನ್ಸ್‌ ಮಾಡ್ತೀರಾ ಅಂತಾ ಕೇಳಿದರು. ಕಥೆ ಏನೂ ಕೇಳಿಲ್ಲ. ಒಂದು ರಾತ್ರಿಯಷ್ಟೇ ಪಾತ್ರವನ್ನು ಚಿತ್ರೀಕರಿಸಲಾಯಿತು. ಪವನ್‌ ಇದ್ದರು. ಶೈನ್‌ ಶೆಟ್ಟಿ ಇದ್ದರು. ಬಹಳ ಅದ್ಭುತವಾಗಿ ಶೂಟಿಂಗ್‌ ಅನುಭವ. ಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆ ಒಂದು ಅದ್ಭುತ…

Read More

ನಮ್ಮ ದೇಶದಲ್ಲಿರುವ ವಿಪುಲ ಜನಶಕ್ತಿಯನ್ನು ಸದುಪಯೋಗಪಡಿಸಿಕೊಳ್ಳುವ ನಿಟ್ಟಿನಲ್ಲಿ ದೇಶದಲ್ಲಿ ಕೌಶಲ್ಯ ಅಭಿವೃದ್ಧಿಯನ್ನು ಉತ್ತೇಜಿಸುವ, ಪ್ರೋತ್ಸಾಹಿಸುವ ಅನೇಕ ಅವಕಾಶಗಳು ಲಭ್ಯವಿದೆ. ಭಾರತದಂತಹ ಆಗಾಧ ಜನಸಂಖ್ಯೆ ಮತ್ತು ವಿಸ್ತಾರವನ್ನು ಹೊಂದಿರುವ ದೇಶದಲ್ಲಿ ಅದನ್ನು ಜನರಿಗೆ ಮುಟ್ಟಿಸುವಲ್ಲಿ ತೊಡಕುಗಳಿದ್ದು, ಗ್ರಾಮೀಣ ಬಂಟರ ಸಂಘದಂತಹ ಸಂಸ್ಥೆಗಳು ಈ ಬಗ್ಗೆ ಆಸಕ್ತಿ ವಹಿಸಿ ಮುಂದೆ ಬರಬೇಕಾಗಿದೆ ಎಂದು ಮಣಿಪಾಲ್ ಸೆಂಟರ್ ಫಾರ್ ಯುರೋಪಿಯನ್ ಸ್ಟಡೀಸ್ ನ ಮುಖ್ಯಸ್ಥೆ ಡಾ. ನೀತಾ ಇನಾಂದರ್ ಹೇಳಿದರು. ಕುಂತಳನಗರ ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಸಂಘದ ಸಿಲ್ಕ್ ಡೆವಲಪ್ ಮೆಂಟ್ ಸೆಂಟರ್ ನಲ್ಲಿ ನಡೆದ ಕಂಪ್ಯೂಟರ್ ಸಾಕ್ಷರತಾ ತರಬೇತಿ ಕಾರ್ಯಕ್ರಮದ 7 ಮತ್ತು 8 ನೇ ಬ್ಯಾಚ್ ನ ವಿದ್ಯಾರ್ಥಿ ಗಳಿಗೆ ಪ್ರಮಾಣ ಪತ್ರ ವಿತರಣೆ ಹಾಗೂ 9 ನೇ ಬ್ಯಾಚ್ ನ ವಿದ್ಯಾರ್ಥಿಗಳ ಒರಿಯಂಟೇಶನ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿದ ತರಬೇತಿಯ ಪ್ರಯೋಜಕ ಸಂಸ್ಥೆ ಆಲ್ ಕಾರ್ಗೋ ಲಾಜಿಸ್ಟಿಕ್ ಸಿಎಸ್ಆರ್ ಎಕ್ಸಿಕ್ಯೂಟಿವ್ ಸವಿಸ್ತಾರ್…

Read More

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಜೇನು ತುಪ್ಪವೆಂದರೆ ಜೇನು ನೊಣಗಳಿಂದ ಉತ್ಪಾದನೆಯಾಗಿರುವ ನೈಸರ್ಗಿಕ ಸಿಹಿ ಪದಾರ್ಥ. ಇದು ಜೇನು ನೊಣಗಳ ಶ್ರಮದ ಫಲ. ಆದರೆ ಅದೇ ಜೇನು ಬಿಡಿಸಲು ಅಂದರೆ ಜೇನು ತಟ್ಟಿಯಿಂದ ಜೇನು ತುಪ್ಪ ಸಂಗ್ರಹಿಸಲು ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ಮಾನವ ಜೇನುಗಳಿಗೆ ವಿಷ ಸಿಂಪಡಿಸಿ ಅವುಗಳನ್ನು ನಿರ್ನಾಮ ಮಾಡುವ ವಿಕೃತ ಮನಸ್ಥಿತಿಯ ಸಂಪೂರ್ಣ ‌ನೋಟ ಬೆಳಕಿಗೆ ಬಂದಿದೆ. ಕಾಡು ಹೆಜ್ಜೇನುಗಳು ದಾರಾಳವಾಗಿ ಜೇನುತುಪ್ಪ ಸಂಗ್ರಹಿಸುತ್ತದೆ. ಜೇನಿನ ಆಸೆಗೆ ವಿಷ ಸಿಂಪಡಿಸಿ ಅವುಗಳ ಕೊಲ್ಲುವುದು ಅಕ್ಷಮ್ಯ ಅಪರಾಧ. ವಿದ್ಯಾವಂತ ಬುದ್ದಿವಂತ ಮಾನವನ ಬುದ್ದಿ ಎತ್ತ ಕ್ಷೀಣಿಸುತ್ತಿದೆ. ವನ್ಯಜೀವಿ ಕಾನೂನಿನ ಪ್ರಕಾರವು ಅಪರಾಧ ವಿದು. ಆದರೂ ಪರಿಸರ ಸಂರಕ್ಷಣೆ ಇನ್ನಷ್ಟು ಕಠಿಣ ಕಾನೂನು ಬಾರಿಗೆ ತರುವ ಅಗತ್ಯವಿದೆ. ಪ್ರತಿ ವರ್ಷ ಕರ್ನಾಟಕ ವಿದ್ಯುತ್ ನಿಗಮದಿಂದ ಕಾಳಿ ಹುಲಿ ಸಂರಕ್ಷಿತ ಪ್ರದೇಶ, ಜೊಯಿಡಾ, ಕಾರವಾರ, ಹಾರ್ನ್ ಬಿಲ್ ಸಂರಕ್ಷಿತ ಪ್ರದೇಶ, ಕಾಳಿ ಜಲ ವಿದ್ಯುತ್ ಯೋಜನೆಯ ಅಧಿಕಾರಿಗಳು ಸುಪಾ ಜಲಾಶಯ, ಪವರ್ ಹೌಸ್,…

Read More

ಡಾ|| ಶಿವರಾಮ ಕಾರಂತ ಪ್ರತಿಷ್ಠಾನ ಕೋಟ, ಕೋಟತಟ್ಟು ಗ್ರಾಮ ಪಂಚಾಯತ್ ಕೊಡಮಾಡುವ ದಿ.ಕೋಟ ವೈಕುಂಠ ದತ್ತಿ ಪುರಸ್ಕಾರಕ್ಕೆ ಯಕ್ಷಗಾನ ನಿರ್ದೇಶಕ ಕೊೈಕೂರು ಸೀತಾರಾಮ ಶೆಟ್ಟಿ ಆಯ್ಕೆಯಾಗಿದ್ದಾರೆ.ವೃತ್ತಿಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ, ಸ್ತ್ರೀ-ಪುರುಷ ಯಕ್ಷಗಾನ ವೇಷಗಳ ಮೂಲಕ ಪ್ರಸಿದ್ಧಿ ಪಡೆದು ಹಲವಾರು ಸಂಘ ಸಂಸ್ಥೆಗಳ ಮೂಲಕ ಯಕ್ಷಗಾನವನ್ನು ನಿರ್ದೇಶಿಸಿ ಹಲವಾರು ಶಿಷ್ಯರಿಗೆ ಯಕ್ಷಗಾನ ಕಲಿಸಿ, ಬಹುಮುಖ ಕಲಾವಿದರಾಗಿರುವ ಕೊೈಕೂರು ಸೀತಾರಾಮ ಶೆಟ್ಟಿ ಅವರನ್ನು ದಿ.ಕೋಟ ವೈಕುಂಠ ದತ್ತಿ ಪುರಸ್ಕಾರ ಆಯ್ಕೆ ಮಾಡಲಾಗಿದ್ದು ಫೆ. 25 ರಂದು ನಡೆಯುವ ಸಭಾ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು, ನಂತರ ನೆಗಿ ನಾಗಣ್ಣ ಖ್ಯಾತಿಯ ನಾಗರಾಜ್ ತೆಕ್ಕಟ್ಟೆ ಅವರಿಂದ ನಗೆ ಹಲವು ಬಗೆ ಹಾಸ್ಯ ಕಾರ್ಯಕ್ರಮ ನಡೆಯಲಿದೆ ಎಂದು ಡಾ|| ಕಾರಂತ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ್ ಸಿ ಕುಂದರ್, ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕೆ ಅಶ್ವಿನಿ ದಿನೇಶ್, ಉಡುಪಿ ಜಿಲ್ಲೆ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ…

Read More

ನಮ್ಮ ಜೀವನದ ತೇರನ್ನು ಎಳೆಯಲು ಈ ಮಾಯ ನಗರಿಗೆ ಬಂದಿದ್ದು, ಇಲ್ಲಿ ನಾವು ನಮ್ಮ ಎಲ್ಲಾ ಕಾರ್ಯಗಳಲ್ಲಿ ಯಶಸ್ಸನ್ನು ಗಳಿಸುತ್ತಿದ್ದು ನಮ್ಮ ಜನ್ಮ ಭೂಮಿಯನ್ನು ನೆನಪಿಸುತ್ತ ಹಳೆ ಬೇರು ಜೊತೆ ಹೊಸ ಬೇರನ್ನು ಸೇರಿಸಿ ಜಾತಿ ಮತ, ಬಡವ ಶ್ರೀಮಂತ ನೆಂಬ ಬೇದವಿಲ್ಲದೆ, 6,000 ಮಕ್ಕಳಿಗೆ ನಮ್ಮ ನಾಡಿನ ಸಂಸ್ಕೃತಿ, ಸಂಸ್ಕಾರವನ್ನು ತಿಳಿಯಪಡಿಸುವುದಕ್ಕೆ ಚಿಣ್ಣರ ಬಿಂಬ ಮಕ್ಕಳ ಸಂಸ್ಥೆಯನ್ನು ಕಟ್ಟಿದ ಪೊಲೀಸ ಅಧಿಕಾರಿ ಪ್ರಕಾಶ್ ಬಂಡಾರಿ ಅವರು ಈ ಸಂಸ್ಥೆಯನ್ನು ಹೆಮ್ಮರವಾಗಿ ಬೆಳೆಸಿದ್ದಾರೆ ಅವರಿಗೆ ಮತ್ತು ಅವರ ತಂಡಕ್ಕೆ ಅಭಿನಂದನೀಯ. ಚಿನ್ನರ ಬಿಂಬದ ಕಲಾವಿದರು ಭವಿಷ್ಯವಿದೆ ಮುಂದೆ ಖ್ಯಾತ ಕಲಾವಿದರಾಗುತ್ತಾರೆ ಎಂಬುದು ಇಂದು ನಡೆದ ಕಲಾಪ್ರಕಾರಗಳೇ ಸಾಕ್ಷಿಯಾಗಿದೆ . ಚಿನ್ನರಲ್ಲಿ ಕನ್ನಡವನ್ನು ಬೆಳಿಸಿ ಉಳಿಸುವ ಈ ಸಂಸ್ಥೆಗೆ ಕರ್ನಾಟಕ ಸರಕಾರ ಅನುದಾನ ನೀಡದೇ ಇರುವುದು ತುಂಬಾ ಖೇದಕರ ಸಂಗತಿ, ಸರಕಾರ ಮುಂದಿನ ದಿನಗಳಲ್ಲಿ ಚಿಣ್ಣರ ಬಿಂಬ ವನ್ನು ಗುರುತಿಸಿ ಅನುದಾನ ದೊಂದಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಬೇಕು, ಈ ಸಂಸ್ಥೆಯು 25ನೇ ವರ್ಷವನ್ನು…

Read More

ರಾಷ್ಟ್ರದ ಆರ್ಥಿಕ ರಾಜಧಾನಿ ಬೃಹನ್ಮುಂಬಯಿಯಲ್ಲಿನ ಬಹುಮುಖ ಪ್ರತಿಭಾನ್ವಿತ ಕಲಾವಿದ ಕಂಠದಾನ ಸ್ಟಾರ್ ಸುರೇಂದ್ರ ಕುಮಾರ್ ಮಾರ್ನಾಡ್ (ಸ್ವೀಟ್ ಸೂರಿ) ಇವರ ಭಕ್ತಿಪ್ರಧಾನ ಸಾಹಿತ್ಯದೊಂದಿಗೆ ಮೂಡಿ ಬಂದ ಕಲಿಯುಗ ವರದ ಶ್ರೀ ಅಯ್ಯಪ್ಪ ಸ್ವಾಮಿಯ ಭಕ್ತಿಯಾಧಾರಿತ `ಹಸಿರು ಬೆಟ್ಟದ ಒಡೆಯ’ ಭಕ್ತಿಗೀತೆಯು ಇದೇ ಫೆ.18ರ ಶನಿವಾರ ರಾತ್ರಿ 8.00 ಗಂಟೆಗೆ ಶಿವರಾತ್ರಿಯ ಶುಭ ಸಂಧರ್ಭದಲ್ಲಿ ಶ್ರೀ ಸಿದ್ಧೇಶ್ವರ ದೇವಸ್ಥಾನ, ಅಪ್ಪಾಜಿ ಬೀಡು, ಮಧುಸೂಧನ ಮಿಲ್ಸ್ ಆವರಣ, ಪಿ.ಬಿ ಮಾರ್ಗ, ವರ್ಲಿ, ಮುಂಬಯಿ ಇಲ್ಲಿ ನಗರದ ಹಿರಿಯ ಮೂವರು ಗುರುಸ್ವಾಮಿಗಳ ದಿವ್ಯೋಪಸ್ಥಿತಿ ಹಾಗೂ ಗಣ್ಯರ ಸಮ್ಮುಖದಲ್ಲಿ ಲೋಕಾರ್ಪಣೆ ಗೊಳ್ಳಲಿದೆ. ಭಕ್ತಿ ಕುಸುಮದ ಲೋಕಾರ್ಪಣಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಅಪ್ಪಾಜಿ ಬೀಡು ಇದರ ಸಂಸ್ಥಾಪಕ ರಮೇಶ್ ಗುರುಸ್ವಾಮಿ ವಹಿಸಲಿದ್ದು ಮುಖ್ಯ ಅತಿಥಿಯಾಗಿ ತುಳು-ಕನ್ನಡ ಕವಿ ಹಾಗೂ ಸಾಹಿತಿ ಶಾಂತಾರಾಮ್ ವಿ.ಶೆಟ್ಟಿ, ಗೌರವ ಅತಿಥಿಯಾಗಿ ಜಿಯೋ ಸಮೂಹ ಸಂಸ್ಥೆಗಳು ಬೆಂಗಳೂರು ಇದರ ಪ್ರಬಂಧಕ ಗೋಪಾಲ್ ಪಟ್ಟೆ ಉಪಸ್ಥಿತಿ ಹಾಗೂ ಲಂಡನ್ (ಯು.ಕೆ) ಅಲ್ಲಿನ ಐಲೇಸಾದ ರೂವಾರಿ ವಿವೇಕಾನಂದ…

Read More

ತುಳು ಸಂಘ ಪಿಂಪ್ರಿ ಚಿಂಚ್ವಾಡ್ ಆಶ್ರಯದಲ್ಲಿ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯ ಪುಣೆಯ ಹಾಗೂ ತುಳುನಾಡಿನ ನಾಮಾಂಕಿತ ಕಲಾವಿದರ ಕೂಡುವಿಕೆಯಲ್ಲಿ ಜನವರಿ ೩೦ ರಂದು ಸೋಮವಾರ ಸಂಜೆ ಗಂಟೆ ೪ ರಿಂದ ಆಚಾರ್ಯ ಅತ್ರೆ ಸಭಾಗೃಹ ವಲ್ಲಭ್ ನಗರ್ ಪಿಂಪ್ರಿ ಇಲ್ಲಿ ” ನಾಗ ಚಂದನ ” ಎಂಬ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಈ ಸಂದರ್ಭ ತುಳು ಸಂಘ ಪಿಂಪ್ರಿ ಚಿಂಚ್ವಾಡ್ ಇದರ ಅಧ್ಯಕ್ಷರಾದ ಹರೀಶ್ ಶೆಟ್ಟಿ ಕುರ್ಕಾಲ್ ಇವರ ಅಧ್ಯಕ್ಷತೆಯಲ್ಲಿ ನಡೆವ ಸಭಾಕಾರ್ಯಕ್ರಮದಲ್ಲಿ ಮೀರಾ -ಡಹಾನು ಬಂಟರ ಸಂಘದ ಅಧ್ಯಕ್ಷರಾದ ವಿರಾರ್ ಶಂಕರ ಶೆಟ್ಟಿ ಹಾಗೂ ಎನ್ ಸಿಪಿ ಕಾಮಗಾರ್ ಯೂನಿಯನ್ ಅಧ್ಯಕ್ಷರಾದ ಕಳತ್ತೂರು ವಿಶ್ವನಾಥ ಶೆಟ್ಟಿ ಇವರುಗಳನ್ನು ಸನ್ಮಾನಿಸಲಾಗುವುದು . ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಲಾಭಿಮಾನಿಗಳು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಹರೀಶ್ ಶೆಟ್ಟಿ ಕುರ್ಕಾಲ್ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು ವಿನಂತಿಸಿದ್ದಾರೆ .

Read More

ಪುಣೆ ಬಂಟರ ಸಂಘದ 42 ನೇ ವಾರ್ಷಿಕ ಮಹಾಸಭೆಯು ಓಣಿಮಜಲು ಜಗನ್ನಾಥ ಶೆಟ್ಟಿ ಬಂಟರ ಸಾಂಸ್ಕೃತಿಕ ಭವನದ ಸಭಾಂಗಣದಲ್ಲಿ ನಡೆಯಿತು. ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆ ಇವರು ದೀಪ ಪ್ರಜ್ವಲಿಸಿ ಸಭೆಗೆ ಚಾಲನೆಯಿತ್ತು ಸದಸ್ಯರನ್ನು ಸ್ವಾಗತಿಸಿದರು. ಮೊದಲಿಗೆ ಅಗಲಿದ ಸಮಾಜಬಾಂಧವರ ಆತ್ಮಕ್ಕೆ ಚಿರಶಾಂತಿ ಕೋರಿ ಶ್ರದ್ಧಾಂಜಲಿ ಅರ್ಪಿಸಲಾಯಿತು. ಸಂಘದ ಪ್ರಧಾನ ಕಾರ್ಯದರ್ಶಿ ಅಜಿತ್ ಹೆಗ್ಡೆ ಸಂಘದ ಎರಡು ವರ್ಷಗಳ ಕಾರ್ಯಚಟುವಟಿಕೆಗಳ ವರದಿಯನ್ನು ಸಭೆಯ ಮುಂದಿಟ್ಟರು. ಗೌರವ ಕೋಶಾಧಿಕಾರಿ ಶ್ರೀನಿವಾಸ ಶೆಟ್ಟಿ ಸಂಘದ ವಾರ್ಷಿಕ ಲೆಕ್ಕಪತ್ರಗಳನ್ನು ಮಂಡಿಸಿದರು. ಮುಂದಿನ ಲೆಕ್ಕಪರಿಶೋಧಕರನ್ನಾಗಿ ಸಿಎ ದಯಾನಂದ ಶೆಟ್ಟಿಯವರನ್ನು ಮರು ನೇಮಕಗೊಳಿಸಲಾಯಿತು . ಈ ಸಂದರ್ಭ ಅಧ್ಯಕ್ಷ ಸಂತೋಷ್ ಶೆಟ್ಟಿಯವರು ಮಾತನಾಡಿ ಯಾವುದೇ ಸಂಘ ಸಂಸ್ಥೆ ಯಶಸ್ಸಿನ ಹಾದಿಯಲ್ಲಿ ಸುಲಲಿತವಾಗಿ ಮುಂದುವರಿಯಬೇಕಾದರೆ ಸಮರ್ಥವಾದ ನಾಯಕತ್ವ ಅತೀ ಅಗತ್ಯವಾಗಿದೆ. ನಮ್ಮ ಹಿರಿಯರು ಯಾವ ವಿಚಾರಧಾರೆಯನ್ನು ಮುಂದಿಟ್ಟುಕೊಂಡು ಸಮಾಜದ ಒಳಿತಿಗಾಗಿ ಈ ಸಂಘವನ್ನು ಕಟ್ಟಿ ಬೆಳೆಸಿದ್ದಾರೋ ಆ ಉದ್ದೇಶವನ್ನಿಟ್ಟುಕೊಂಡು ಸಮಾಜದ ಶ್ರೇಯೋಭಿವೃದ್ಧಿಯನ್ನು ಬಯಸಿ ಅದನ್ನು…

Read More

ಬೆಂಗಳೂರು ಬಂಟರ ಸಂಘ ಹಾಗೂ ಇದರ ಸಮಾಜ ಸೇವಾ ಸಮಿತಿ ಮತ್ತು ಸೇವಾದಳವು ವಿಶಿಷ್ಟ ಕಾರ್ಯಕ್ರಮಗಳಿಂದಾಗಿ ಜನಜನಿತವಾಗಿದೆ. ಮತ್ತೆ ಈ ಬಾರಿ ಸಮಾಜಕ್ಕೆ ಹಲವಾರು ಹಿತವಾದ ಆರೋಗ್ಯ ತಪಾಸಣೆ, “ನೆತ್ತರ ನೆರವು”-ರಕ್ತದಾನ ಶಿಬಿರ, ನೇತ್ರದಾನ, ಕೋವಿಡ್- 19 ಲಸಿಕೆ ಅಭಿಯಾನ – 60 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್, ಇತರೆ ಉಪಯುಕ್ತ ಕಾರ್ಡ್ ಗಳ ಮಾಹಿತಿ ಹಾಗೂ ಮಾಡುವಿಕೆ, ಮಣಿಪಾಲ, ಕಿದ್ವಾಯಿ ಮತ್ತು ಪ್ರತಿಷ್ಠಿತ ಆಸ್ಪತ್ರೆಗಳ ಸಹಯೋಗದೊಂದಿಗೆ ಹೃದಯ ಪರೀಕ್ಷೆ ಮತ್ತು ಇನ್ನಿತರ ಕಾರ್ಯಕ್ರಮಗಳ ಗುಚ್ಛ ಸೇವಾಚೇತನ-2 ಕಾರ್ಯಕ್ರಮವು ಇದೇ ಬರುವ ತಾ. 13/03/2021, ರವಿವಾರದಂದು ಬೆಂಗಳೂರು ಬಂಟರ ಸಂಘದಲ್ಲಿ ನಡೆಯಲಿದೆ. ಕಾರ್ಯಕ್ರಮಗಳ ವಿವರ: 1.ಕೇಂದ್ರ ಸರಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಅಧೀನದಲ್ಲಿರುವ ADIPS ಯೋಜನೆಯ ಅನುಸಾರ 5 ವರ್ಷದ ಒಳಗಿನ ಮಕ್ಕಳಿಗೆ ಬೆಂಗಳೂರಿನ ವಿವಿಧ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಉಚಿತವಾಗಿ ಶಸ್ತ್ರ ಚಿಕಿತ್ಸೆಯ ಮುಖಾಂತರ ಸಲಕರಣೆಯನ್ನು( Cochler Implant) ಅಳವಡಿಸಿ ಕಿವುಡುತನವನ್ನು ನಿವಾರಿಸಲಾಗುವುದು. 2. ಬೆಂಗಳೂರಿನ ಕಿದ್ವಾಯ್ ಮೆಮೋರಿಯಲ್…

Read More