Author: admin

ಒಂದು ಮಾತಿದೆ – ರಾತ್ರಿ ಕಂಡ ಬಾವಿಯಲ್ಲಿ ಹಗಲು ಬೀಳುವುದು ಎಂದು. ಈಗೀಗ ನಮ್ಮ ಸುಶಿಕ್ಷಿತ, ಬುದ್ಧಿವಂತ ಯುವಜನತೆ ಟ್ರೋಲ್‌ ಪ್ರಿಯರಾಗುತ್ತಿರುವುದನ್ನು ಕಂಡಾಗ ಈ ಮಾತು ನೆನಪಾಗುತ್ತದೆ. ಟ್ರೋಲ್‌ ಮಾಡುವುದು ಈಗೊಂದು ಒಂದು ಫ್ಯಾಷನ್‌ನಂತಾಗಿದೆ. ತಮ್ಮ ವಿರೋಧಿಗಳು (ಅದು ವೈಯಕ್ತಿಕ ಇರಬಹುದು, ರಾಜಕೀಯ, ವೃತ್ತಿ ಇಂಥ ಯಾವುದೇ ಕ್ಷೇತ್ರದ ವಿರೋಧಿಗಳೂ ಆಗಿರಬಹುದು) ಏನು ಹೇಳಿದರೂ ಅದಕ್ಕೆ ರೆಕ್ಕೆಪುಕ್ಕ ಸೇರಿಸಿ, ಯಾವ್ಯಾವುದೋ ಹಾಸ್ಯ ಕಲಾವಿದರ ಚಿತ್ರವನ್ನೂ ಸೇರಿಸಿ ಕೊಂಡು ತಮಗೆ ತೋಚಿದಂತೆ ಬರೆದು ಅವಮಾನಪಡಿಸುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಮಾತಾಡುವಾಗ ಒಂದಿಷ್ಟು ಎಡವಿದರೂ ಅದನ್ನೂ ತುಂಬಾ ಕೀಳು ಮಟ್ಟದಲ್ಲಿ ಚಿತ್ರಿಸಿ ಟ್ರೋಲ್‌ ಮಾಡಲಾಗುತ್ತದೆ. ಇದು ಈಗ ಎಲ್ಲ ಇತಿಮಿತಿಯನ್ನೂ ದಾಟಿ ಸಾಗುತ್ತಿದ್ದು, ಸಮಾಜದ ಆರೋಗ್ಯಕ್ಕೆ ದೊಡ್ಡ ಸವಾಲಾಗುವ ಲಕ್ಷಣ ಕಂಡು ಬರುತ್ತಿದೆ. ಕೆಲವು ಸಂದರ್ಭಗಳಲ್ಲಿ ತಮ್ಮ ಆಪ್ತ ಬಳಗದವರನ್ನೂ ಟ್ರೋಲ್‌ಗೆ ಬಳಸುವುದೂ ಇದೆ. ನಾವು ಬುದ್ಧಿವಂತರಾದರೂ ವಿವೇಕದಿಂದ ವರ್ತಿಸುವ ಬಗ್ಗೆ ಅಜ್ಞಾನಿಗಳೇ ಆಗಿದ್ದೇವೆ. ಎಲ್ಲವೂ ಅವಸರದ ನಿರ್ಧಾರ. ನಾವು ಮಾಡುವ ಕೆಲಸದಿಂದ ಆಗಬಹುದಾದ ಪರಿಣಾಮ,…

Read More

ಕಾಪು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಅವರು ಸೋಮವಾರ ಸಾವಿರಾರು ಮಂದಿ ಕಾರ್ಯಕರ್ತರು, ಅಭಿಮಾನಿಗಳು ಮತ್ತು ಹಿತೈಷಿಗಳನ್ನೊಳಗೊಂಡು ಪಾದಯಾತ್ರೆ ನಡೆಸಿ, ಚುನಾವಣಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದಲ್ಲಿ ಪತ್ನಿ ವಿಜಯಾ ಶೆಟ್ಟಿ ಅವರ ಸಮೇತರಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಅದಕ್ಕೆ ಪೂರ್ವಭಾವಿಯಾಗಿ ಕಾಪು ಶ್ರೀ ಹಳೇ ಮಾರಿಗುಡಿ ದೇವಸ್ಥಾನ, ಶ್ರೀ ಹೊಸ ಮಾರಿಗುಡಿ ದೇವಸ್ಥಾನ, ಎಲ್ಲೂರು ಶ್ರೀ ವಿಶ್ವೇಶ್ವರ ದೇವಸ್ಥಾನ, ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸಹಿತವಾಗಿ ವಿವಿಧ ದೇವಸ್ಥಾನಕ್ಕೆ ಭೇಟಿ ನೀಡಿ, ಪ್ರಾರ್ಥನೆ ಸಲ್ಲಿಸಿದರು‌. ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ, ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಸುನೀಲ್ ಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಶಾಸಕರಾದ ಲಾಲಾಜಿ‌ ಆರ್. ಮೆಂಡನ್, ಉಡುಪಿ ಶಾಸಕ ರಘುಪತಿ ಭಟ್, ಉಡುಪಿ ಬಿಜೆಪಿ ಅಭ್ಯರ್ಥಿ ಯಶಪಾಲ್ ಸುವರ್ಣ, ಕಾಪು ಕ್ಷೇತ್ರ ಬಿಜೆಪಿ ಅಧ್ಯಕ್ಷ ಶ್ರೀಕಾಂತ್ ನಾಯಕ್, ಮಂಗಳೂರು ಪ್ರಭಾರಿ ಉದಯ ಕುಮಾರ್…

Read More

ತೋನ್ಸೆ ವಿಜಯಕುಮಾರ್ ಶೆಟ್ಟಿ ಯವರು, ಅವರ ಬಾಲ್ಯದಿಂದಲೇ ರಂಗಭೂಮಿಯ ಹೆಚ್ಚಿನ ಪ್ರಾಕಾರ ಗಳಲ್ಲಿ ಓರ್ವ ಬಹು ಪ್ರಸಿದ್ಧಿಯ ಕಲಾವಿದರಾಗಿ ಬೆಳೆದು ಬಂದವರು. ಅವರ ಹುಟ್ಟು ಉಡುಪಿ ಬಳಿಯ ತೋನ್ಸೆಯ ಕೋಡ್ದಬ್ಬು ದೈವ ಹುಟ್ಟಿ ಬೆಳೆದ ಕೋಡಿ ಕಂಡಾಳ ಕ್ಷೇತ್ರ. ಇವರದ್ದು ತುಳು ನಾಡಿನ ನಾಮಾಂಕಿತ ಕೊಡಂಗೆ ಬನ್ನಾರ್ರವರ ವಂಶ. ಸುಮಾರು ಹತ್ತು ಹನ್ನೆರಡು ವರ್ಷ ಪ್ರಾಯದಲ್ಲಿಯೇ ರಾಷ್ಟ್ರಪ್ರಶಸ್ತಿ ವಿಜೇತ ಗುರು ಕಾಂತಪ್ಪ ಮಾಸ್ತರ್ (ನಮ್ಮ ಪುಷ್ಕಳ ಕುಮಾರ್ ತೋನ್ಸೆಯವರ ತಂದೆ). ಮತ್ತು ಗುರು ಜಯಂತ್ ಕುಮಾರ್ ವರಿಂದ ಯಕ್ಷಗಾನ, ರಾಷ್ಟ್ರಪ್ರಶಸ್ತಿ ವಿಜೇತ ಗುರು ಗೋಪಾಲಕೃಷ್ಣ ರಾವ್ ಇವರಿಂದ ನಾಟಕ ರಂಗದ ಎಲ್ಲಾ ವಿಭಾಗಗಳಲ್ಲೂ ಪರಿಣಿತರಾದ ವಿಜಯಕುಮಾರ್ ಶೆಟ್ಟಿಯವರು ಶಾಲಾ ಮತ್ತು ಕಾಲೇಜ್ ವಿದ್ಯಾರ್ಥಿ ಯಾಗಿದ್ದಾಗಲೆ ನಾಡಿನ ಅತ್ಯಂತ ನಾಮಾಂಕಿತ ನಿರ್ದೇಶಕರಿಂದ ತರಬೇತಿ ಪಡೆದು ಬಹಳ ಪ್ರಸಿದ್ಧಿಯ ನಾಟಕಕಾರರಾಗಿ ಜನಪ್ರಿಯತೆಯನ್ನು ಪಡೆದಿದ್ದರು. 1975 ರಲ್ಲಿ ಅವರು ಬರೆದು ನಿರ್ದೇಶಿಸಿದ್ದ ವಸುಂದರಾ ನಾಟಕ ನೂರಾರು ಪ್ರಯೋಗಗಳನ್ನು ಕಂಡಿತ್ತು. ಅವರ ಎಚ್ಚಮ್ಮ ನಾಯಕ, ನೀರ್ ಕಡ್ತುಂಡ,…

Read More

ಉಡುಪಿ: ನಿವೃತ್ತ ಪ್ರಾಂಶುಪಾಲ ಜಾನಪದ ವಿದ್ವಾಂಸ ಡಾ. ಗಣನಾಥ ಎಕ್ಕಾರು ಅವರಿಗೆ ಕರ್ನಾಟಕ ರಾಜ್ಯ ಯುವ ಸಂಘಟನೆಗಳ ಒಕ್ಕೂಟ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವಿಜಯಪುರ ಇವರ ವತಿಯಿಂದ ರಾಜ್ಯ ಮಟ್ಟದ ಸ್ವಾಮಿ ವಿವೇಕಾನಂದ ಸದ್ಭಾವನಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವಿಜಯಪುರದ ಮುದ್ದೇಬಿಹಾಳದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾಜಿ ಸಚಿವ ಸಿ.ಎಸ್. ನಾಡಗೌಡ ಅಪ್ಪಾಜಿಯವರು ಪ್ರಶಸ್ತಿ ಪ್ರದಾನ ಮಾಡಿದರು. ಕಾಲಜ್ಞಾನ ಮಠದ ಶ್ರೀ ಅಪ್ಪಯ್ಯ ಮಹಾಸ್ವಾಮಿಗಳು, ಆಹಾರ ಮತ್ತು ನಾಗರೀಕ ಸರಬರಾಜು ನಿಗಮದ ಅಧ್ಯಕ್ಷರಾದ ಎ.ಎಸ್. ಪಾಟೀಲ್, ರಾಜ್ಯ ಒಕ್ಕೂಟದ ಅಧ್ಯಕ್ಷ ಡಾ. ಎಸ್. ಬಾಲಾಜಿ ಉಪಸ್ಥಿತರಿದ್ದರು. ರಾಜ್ಯದ 31 ಜಿಲ್ಲೆಯ 31 ಸಾಧಕರನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ. ಡಾ. ಎಕ್ಕಾರು ಅವರು ಕಳೆದ ಮೂರು ದಶಕಗಳಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಕಾರಣರಾಗಿದ್ದಾರೆ ಎಂದು ಪ್ರಶಂಸಿಸಿ ಪ್ರಶಸ್ತಿ ನೀಡಲಾಯಿತು. ಅವರ ಸಾಧನೆಗೆ ಈ ಹಿಂದೆ ಎರಡು ಬಾರಿ ರಾಜ್ಯ…

Read More

ಬಾಲಿವುಡ್ ನಟಿ ಆಥಿಯಾ ಶೆಟ್ಟಿ ಮತ್ತು ಕ್ರಿಕೆಟಿಗ ಕೆಎಲ್ ರಾಹುಲ್ ಕೊನೆಗೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಖಂಡಾಲದಲ್ಲಿರುವ ಸುನೀಲ್ ಶೆಟ್ಟಿ ಅವರ ಫಾರ್ಮ್‌ಹೌಸ್‌ನಲ್ಲಿ ವಿವಾಹವಾದರು. ಅಥಿಯಾ ಮತ್ತು ಕೆಎಲ್ ರಾಹುಲ್ ಅವರು ಕೇವಲ 100 ಅತಿಥಿಗಳ ಸಮ್ಮುಖದಲ್ಲಿ ವಿವಾಹವಾದರು. ಇವರಲ್ಲಿ ಬಾಲಿವುಡ್ ಮತ್ತು ಕ್ರಿಕೆಟ್ ಪ್ರಪಂಚದ ಅನೇಕ ಸೆಲೆಬ್ರಿಟಿಗಳನ್ನು ಒಳಗೊಂಡಿದ್ದರು. ಮದುವೆಯ ನಂತರ, ಕೆಎಲ್ ಮತ್ತು ಅಥಿಯಾ ಅವರು ಬಾಲಿವುಡ್ ಮತ್ತು ಕ್ರಿಕೆಟ್ ಸೆಲೆಬ್ರಿಟಿ ಗಳಿಗಾಗಿ ವಿಶೇಷ ಭವ್ಯವಾದ ಆರತಕ್ಷತೆಯನ್ನು ಆಯೋಜಿಸಿದ್ದಾರೆ. ಅಲ್ಲದೆ ಅನೇಕ ಕೈಗಾರಿಕೋದ್ಯಮಿಗಳು ಮತ್ತು ರಾಜಕಾರಣಿಗಳು ಸಹ ಆರತಕ್ಷತೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಮದುವೆ ಸಮಾರಂಭದಲ್ಲಿ ಸುನೀಲ್ ಶೆಟ್ಟಿ, ”ಕೆಎಲ್ ರಾಹುಲ್ ನನ್ನ ಅಳಿಯನಲ್ಲ, ಅವರ ಮಗ. ಸಂಬಂಧದಿಂದ ನಾನು ಅವರ ಮಾವ ಆಗಿದ್ದರೂ, ಸಹ ಅವರು ನನ್ನ ಮಗನೇ. ಅಥಿಯಾ ಮತ್ತು ಕೆಎಲ್ ರಾಹುಲ್ ಅವರ ಆರತಕ್ಷತೆ ಐಪಿಎಲ್ ನಂತರ ನಡೆಯಲಿದೆ. ಮದುವೆಯ ನಂತರ, ಸುನೀಲ್ ಶೆಟ್ಟಿ ಹಾಗೂ ಅವರ ಮಗ ಅಹಾನ್ ಶೆಟ್ಟಿಯೊಂದಿಗೆ ಪೋಸ್ ನೀಡಿದರು. ಅಲ್ಲದೆ ಸಿಹಿ…

Read More

ಪುಣೆಯ ಮಕ್ಕಳ ತಜ್ಞ ಬೇಬಿ ಫ್ರೆಂಡ್ ಪೀಡಿಯಾಟ್ರಿಕ್‍ನ ಮೂಲಕ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಅಪಾರ ಸಾಧನೆಗೈದ ಪುಣೆಯ ತುಳು-ಕನ್ನಡಿಗ, ಮೂಲತಃ ಮೂಡಬಿದ್ರೆಯ ಡಾ| ಸುಧಾಕರ ಶೆಟ್ಟಿ ಅವರು 2022 ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯಿಂದ ಪುರಸ್ಕೃತರಾಗಿದ್ದಾರೆ. ಸುಮಾರು 34 ವರ್ಷಗಳ ದೀರ್ಘಕಾಲದಿಂದ ಪುಣೆಯಲ್ಲಿ ವೈದ್ಯಕೀಯ ರಂಗದಲ್ಲಿ ಸೇವೆ ಸಲ್ಲಿಸುತ್ತಿರುವ ಇವರು ಮಕ್ಕಳ ಡಾಕ್ಟರ್ ಎಂದೇ ಪ್ರಸಿದ್ದರು. ನ. 1 ರಂದು ಮಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಇಂಧನ ಮತ್ತು ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮತ್ತು ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಕೊರೊನಾ ಸಂದರ್ಭ ಡಾ| ಸುಧಾಕರ ಶೆಟ್ಟಿ ಮತ್ತು ಅವರ ವೈದ್ಯಕೀಯ ತಂಡ ಪುಣೆ ಕಂಟೋನ್ಮೆಂಟ್ ಪರಿಸರದಲ್ಲಿ ಪಿಸಿಆರ್ ಪರೀಕ್ಷೆ, ಕೋವಿಡ್ ಐಸೋಲೇಶನ್ ವಾರ್ಡ್, ಕೋವಿಡ್ ಐಸಿಯು ಸಹಿತ ಸಾವಿರಾರು ಮಂದಿ ಕೊರೊನಾ ಪೀಡಿತರಿಗೆ ಬೆಡ್ ವ್ಯವಸ್ಥೆ, ಆಕ್ಸಿಜನ್, ತುರ್ತು ಚಿಕಿತ್ಸೆ, ಪ್ಲಾಸ್ಮಾ ವ್ಯವಸ್ಥೆ…

Read More

ದ.ಕ.ಹಾಲು ಒಕ್ಕೂಟದ ಉಪಾಧ್ಯಕ್ಷರಾಗಿ ಕೆಯ್ಯೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎಸ್.ಬಿ.ಜಯರಾಮ ರೈ ಅವರು ಆಯ್ಕೆಯಾಗಿದ್ದಾರೆ. ಒಕ್ಕೂಟದ ಅಧ್ಯಕ್ಷರಾದ ರವಿರಾಜ ಹೆಗ್ಡೆ ಅವರು ಈಗಾಗಲೇ ರಾಜೀನಾಮೆ ನೀಡಿದ್ದು, ಉಪಾಧ್ಯಕ್ಷರೂ ರಾಜಿನಾಮೆ ನೀಡಿದ ಹಿನ್ನೆಲೆಯಲ್ಲಿ ಎಸ್.ಬಿ.ಜಯರಾಮ ರೈ ಅವರನ್ನು ಆಯ್ಕೆ ಮಾಡಲಾಗಿದೆ.

Read More

ರೈ ಎಸ್ಟೇಟ್ಸ್ ಎಜ್ಯುಕೇಷನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಮುಖಾಂತರ ಸಾವಿರಾರು ಕುಟುಂಬಗಳಿಗೆ ಆಸರೆಯಾಗಿ ನಿಂತ ಉದ್ಯಮಿ ಅಶೋಕ್ ಕುಮಾರ್ ರೈ ಅವರು ಉಪ್ಪಿನಂಗಡಿ ವಿಜಯ – ವಿಕ್ರಮ ಕಂಬಳ ಸಮಿತಿಯ ಅಧ್ಯಕ್ಷರಾಗಿಯೂ, ಶ್ರೀ ಮಹಿಷಮರ್ದಿನಿ ದೇವಸ್ಥಾನ ಮಠಂತಬೆಟ್ಟು ಕೋಡಿಂಬಾಡಿ ಇಲ್ಲಿಯ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ರೈ ಬಿಲ್ಡರ್ಸ್ ಮಾಲಕ ಅಶೋಕ್ ರೈ ಅವರಿಗೆ ಭಗವಂತ ಆಯುಷ್ಯ, ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಸಮಸ್ತ ಬಂಟ ಸಮಾಜದ ಪರವಾಗಿ ಶುಭ ಹಾರೈಸುತ್ತಿದ್ದೇವೆ.

Read More

ಸಾಧಾರಣವಾಗಿ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ನಾವು ಓದುವ ಅಂಶಗಳು ಹುಡುಗ ಹುಡುಗಿಯ ಹಿರಿಯರ, ಕುಟುಂಬಿಕರ ಮನೆ ಯಾವುದು? ಯಾವ ಮನೆತನದವರು ಎಂಬಿತ್ಯಾದಿ ಅಂಶವನ್ನು. ಆದರೆ ಇತ್ತೀಚಿಗಿನ ಮದುವೆ ಆಮಂತ್ರಣದ ಪತ್ರಿಕೆಯಲ್ಲಿ ಕೇವಲ ತಂದೆ ತಾಯಿಯ ಹೆಸರು ಮಾತ್ರ ಇದ್ದಲ್ಲಿ ಆಗ ನಾವು ಊಹಿಸಬಹುದಾಗಿದೆ ಇದು ಅಂತರ್ಜಾತಿ ವಿವಾಹ ಎಂದು. ಇಂದಿನ ಈ ದಿನಗಳಲ್ಲಿ ಇದೇನು? ಅಂತರ್ಜಾತಿ ವಿವಾಹಗಳು ಏಕೆ ಹೆಚ್ಚುತ್ತಿವೆ? ಇದಕ್ಕೆ ಮೂಲ ಕಾರಣರಾರು? ಪಾಲಕರಿಗೆ ಮಕ್ಕಳ ಮೇಲೆ ಇರುವ ಅತೀ ಪ್ರೀತಿ, ಮಮತೆ, ಇದಕ್ಕೆ ದಾರಿ ಮಾಡಿಕೊಟ್ಟೀತೇ? ಅಥವಾ ಮಿತಿಮೀರಿ ಕೊಟ್ಟ ಸ್ವಾತಂತ್ರ್ಯದ ದುರುಪಯೋಗವೇ? ಹೆಚ್ಚಿನ ವಿದ್ಯಾಭ್ಯಾಸ, ಉನ್ನತ ವ್ಯಾಸಂಗದ ಪ್ರಭಾವವೋ? ವಿದೇಶಗಳ ಸಂಸ್ಕೃತಿಯನ್ನು ನಾವು ಅನುಕರಣೆ ಮಾಡುತ್ತಿದ್ದೇವೆಯೋ? ಎಂಬಿತ್ಯಾದಿ ಪ್ರಶ್ನೆಗಳ ಸರಮಾಲೆಯೇ ಉದ್ಭವವಾಗುತ್ತಿದೆ. ಆದರೆ ಇದಕ್ಕೆಲ್ಲಾ ಉತ್ತರವನ್ನು ನಾವು ಕಂಡುಕೊಂಡಲ್ಲಿ ಪರಿಹಾರವೂ ಅದರ ಜತೆಗಿದೆ. ನಮ್ಮ ಮಕ್ಕಳು ಅಂತರ್ಜಾತಿ ವಿವಾಹ ಎಂದೊಡನೆ ಮೊದ ಮೊದಲು ಸಂಬಂಧಿಕರು ಸಿಕ್ಕರೆ ಮುಜುಗರ, ಏನು ಹೇಳಿ ಬಿಡುತ್ತಾರೋ ಎಂಬ ಅಂಜಿಕೆ. ಇದೀಗ ಎಲ್ಲರ…

Read More

ಪುಣೆ ; ಪುಣೆಯ ಹೆಸರಾಂತ ಸಮಾಜ ಸೇವಕ ,ಕಲಾ ಸಂಘಟಕ ಅಪತ್ಭಾಂದವ ಎಂದೇ ಹೆಸರು ಪಡೆದಿರುವ ಪುಣೆಯ – ಖ್ಯಾತ ಉದ್ಯಮಿ ಪ್ರವೀಣ್ ಶೆಟ್ಟಿ ಪುತ್ತೂರು ರವರಿಗೆ 2023 ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಒಲಿದು ಬಂದಿದೆ . .ವಿವಿದ ಕ್ಷೇತ್ರಗಳಲ್ಲಿ ಕಾರ್ಯ ಗೈದ, ಮಹಾನ್ ಸಾಧನೆ ಮಾಡಿದ ಸಾಧಕರಿಗೆ ಹೊರನಾಡ ಕನ್ನಡಿಗರ ಮಟ್ಟದಲ್ಲಿ ಕೊಡಮಾಡುವ ಈ ಉಡುಪಿ ಜಿಲ್ಲೆಗೆ ಅನ್ವಯಿಸುವಂತೆ ಈ ಬಾರಿ ಪ್ರಶಸ್ತಿ ಪುಣೆಯ ಪ್ರವೀಣ್ ಶೆಟ್ಟಿ ಪುತ್ತೂರುವರಿಗೆ ಲಭಿಸಿದೆ . ನವೆಂಬರ್ ಒಂದರಂದು ಉಡುಪಿ ಅಜ್ಜರ ಕಾಡು ಮೈದಾನದಲ್ಲಿ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಲ್ಕರ್ ರವರು ಪ್ರವೀಣ್ ಶೆಟ್ಟಿ ಯವರು ಪ್ರಶಸ್ತಿ ಪ್ರದಾನ ಮಾಡಿದರು . ಪೂನಾದಲ್ಲಿ ಅರ್ .ಬಿ ಐ ಪ್ರವೀಣಣ್ಣ ಎಂದೇ ಪ್ರಸಿದ್ದಿ ಪಡೆದ ಪ್ರವೀಣ್ ಶೆಟ್ಟಿ ಯವರು ,ಜನ್ಮ ಭೂಮಿ ತುಳುನಾಡಿನ ಪ್ರೀತಿಯಿಂದ ,ಕರ್ಮ ಭೂಮಿ ಪುಣೆಯಲ್ಲಿ ಸಾಮಾಜಿಕ ಜೀವನದಲ್ಲಿ ತನ್ನದೊಂದು ಕಾರ್ಯವೆಂದು ಸಮಾಜ…

Read More