Author: admin

ಚಂದನವನದಲ್ಲಿ ಉತ್ತಮ ಪಾತ್ರಗಳ ನಿರೀಕ್ಷೆಯಲ್ಲಿರುವ ಸುಂದರ ಮುದ್ದು ಮುಖದ ಚೆಲುವೆ ನಟಿ ಶಿಲ್ಪಾ ಆರ್ ಶೆಟ್ಟಿ. ಒಳ್ಳೆ ನಿರ್ಮಾಣ ಸಂಸ್ಥೆ ಅಥವಾ ಪಾತ್ರವು ಶಕ್ತಿಶಾಲಿಯಾಗಿದ್ದರೆ ಎಲ್ಲದಕ್ಕೂ ಸೈ ಎಂದು ಪ್ರಸಕ್ತ ಚಿತ್ರರಂಗಕ್ಕೆ ಬರುವ ಕಲಾವಿದೆಯರು ಹೇಳುವುದುಂಟು. ಅಪರೂಪ ಎನ್ನುವಂತೆ ನಮ್ಮ ಕರ್ನಾಟಕ ಸಂಸ್ಕ್ರತಿ ಬಿಂಬಿಸುವಂತ ಪಾತ್ರಗಳು ಬಂದರೆ ಮಾಡುತ್ತೇನೆ. ಯಾವುದೇ ದೊಡ್ಡ ಬ್ಯಾನರ್ ಸಿಗುತ್ತದೆ ಅಂಥ ಬೇರೆ ತರಹದ ರೋಲ್ ಮಾಡಲಾರೆ. ಇದು ಹೊಸ ಪ್ರತಿಭೆ ಮಂಗಳೂರು ಮೂಲದ ನಿರಾಡಂಬರ ಚೆಲುವೆ ಶಿಲ್ಪಾ ಆರ್ ಶೆಟ್ಟಿ ಅವರ ಖಡಕ್ ನುಡಿಗಳು. ವೃತ್ತಿಯಲ್ಲಿ ಬ್ಯೂಟಿಷಿಯನ್ ಆಗಿ, ಆದರ್ಶ ಗೃಹಿಣಿಯಾಗಿದ್ದುಕೊಂಡು ಹಲವಾರು ತುಳು ನಾಟಕಗಳಲ್ಲಿ ನಟಿಸಿ, ಜಗ್ಗೇಶ್ ಅಭಿನಯದ ರಾಘವೇಂದ್ರ ಸ್ಟೋರ್ಸ್, ಶ್ರೀನಗರ ಕಿಟ್ಟಿ ಅಭಿನಯದ ಗೌಳಿ, ಕಿಶೋರ್ ಡಿ ಶೆಟ್ಟಿ ನಿರ್ಮಾಣದ ಅಕ್ಷಮ್ಯ ಕನ್ನಡ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಸಿಂಪಲ್ ಸುನಿ ನಿರ್ದೇಶನದ ಗತ ವೈಭವ ಸಿನಿಮಾದಲ್ಲಿ ವಿಶಿಷ್ಟ ಪಾತ್ರದಲ್ಲಿ ಅಭಿನಯಿಸಿದ್ದು ಚಿತ್ರೀಕರಣ ಭರದಿಂದ ಸಾಗುತ್ತಿದೆ. ಶಿಲ್ಪಾ ಅವರು ಹಲವಾರು ತುಳು ಚಿತ್ರಗಳಲ್ಲೂ ಅಭಿನಯಿಸಿದ್ದು…

Read More

ನಮ್ಮ ಸಂಘದ ಮೂಲಕ ಪ್ರತೀ ವರ್ಷ ವಾರ್ಷಿಕ ಕ್ರೀಡಾಕೂಟವನ್ನು ಆಯೋಜಿಸುತ್ತಿದ್ದು ನಮ್ಮ ಸಂಘದ ಕ್ರೀಡಾ ಸಮಿತಿ ಈ ಕಾರ್ಯಕ್ರಮವನ್ನು ಬಹಳ ಶಸ್ತುಬದ್ಧವಾಗಿ ಆಯೋಜಿಸುತ್ತಿದ್ದು ಅಭಿನಂದನೀಯವಾಗಿದೆ . ಇಂದಿನ ಬದಲಾದ ಕಾಲಘಟ್ಟದಲ್ಲಿ ಕ್ರೀಡಾಕೂಟದಂತಹ ಕಾರ್ಯಕ್ರಮಗಳು ಅರ್ಥಪೂರ್ಣವಾಗಿದ್ದು ಮುಖ್ಯವಾಗಿ ಯುವ ಪೀಳಿಗೆಗೆ ಉತ್ಸಾಹ ತುಂಬುವಲ್ಲಿ ಪೂರಕವಾಗಿದೆ . ನಮ್ಮ ದಿನನಿತ್ಯದ ಜೀವನದಲ್ಲಿ ನಡಿಗೆ ,ಯೋಗ ,ವ್ಯಾಯಾಮ ,ಪ್ರಾಣಾಯಾಮಗಳನ್ನೂ ಅಳವಡಿಸಿಕೊಳ್ಳುವುದರಿಂದ ನಮ್ಮ ಜೀವನ ಶೈಲಿ ಬದಲಾಗುವುದರೊಂದಿಗೆ ನಮ್ಮ ದೈಹಿಕ ,ಮಾನಸಿಕ ಆರೋಗ್ಯದೊಂದಿಗೆ ಧನಾತ್ಮಕ ಶಕ್ತಿ ವೃದ್ಧಿಯಾಗುತ್ತದೆ. ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ಇಂತಹ ಕಾರ್ಯಕ್ರಮಗಳು ಉತ್ತಮ ಕೊಡುಗೆ ನೀಡುವಂತಾಗುತ್ತದೆ ಎಂದು ಪುಣೆ ಬಂಟರ ಸಂಘದ ಅಧ್ಯಕ್ಷರಾದ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆ ಅಭಿಪ್ರಾಯಪಟ್ಟರು . ಅವರು ಜ . ೧೫ ರಂದು ನಗರದ ಎಸ್ . ಪಿ . ಕಾಲೇಜು ಮೈದಾನದಲ್ಲಿ ನಡೆದ ಪುಣೆ ಬಂಟರ ಸಂಘದ ವಾರ್ಷಿಕ ಕ್ರೀಡೋತ್ಸವದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಇಂದಿನ ಕ್ರೀಡಾಕೂಟದಲ್ಲಿ ಮಕ್ಕಳು ಉತ್ಸಾಹಪೂರ್ಣವಾಗಿ ಕ್ರೀಡಾಸ್ಪರ್ಧೆಗಳಲ್ಲಿ…

Read More

ಒಮ್ಮೆ ನೋಡ ಬನ್ನಿ ,ರಾಷ್ಟ್ರಕವಿಯ ತವರೂರು….! ಹಚ್ಚ ಹಸಿರಿನ ಮಧ್ಯೆ ನಿಸರ್ಗ ರಮಣೀಯ ತಾಣ – ಕುಪ್ಪಳ್ಳಿ….! ಮಲೆನಾಡಿನ ಸೌಂದರ್ಯದ ಸೊಬಗು ಕುವೆಂಪು ಹುಟ್ಟೂರು ಕುಪ್ಪಳ್ಳಿಯ ರಮಣೀಯ ಸೊಬಗು….! ಸಾಹಿತಿಗಳ ಕಣ್ಣಂಚಿನಲ್ಲಿ ಮನಮೋಹಕವಾದ ಪ್ರವಾಸೋದ್ಯಮದ ಬೆರಗು….! ಭವ್ಯ ಮಲೆನಾಡು -ಕುಪ್ಪಳ್ಳಿ…! ✍ಕೆ .ಸಂತೋಷ್ ಶೆಟ್ಟಿ ಮೊಳಹಳ್ಳಿ ಕುಂದಾಪುರ. ಉಡುಪಿ ಜಿಲ್ಲೆ (ಪತ್ರಕರ್ತರು &ಅಂಕಣಕಾರರು)  Mob:9632581508 ಸುದ್ದಿ@ ಶಿವಮೊಗ್ಗ :- ಸುಂದರ ಹಚ್ಚ ಹಸಿರಿನ ವಾತಾವರಣ ಅದುವೇ ಮಲೆನಾಡು ,ಮಲೆನಾಡಿಗೆ ಹೊಂದಿಕೊಂಡಂತೆ ಇರುವ ತೀರ್ಥಹಳ್ಳಿ ಸಮೀಪದ ಹೊಸಳ್ಳಿ ಇಡೀ ಜಗತ್ತಿಗೆ ಪ್ರಸಿದ್ಧಿ .ರಾಷ್ಟ್ರಕವಿ ಕುವೆಂಪು ಅವರ ನೀಡಿದ ಧೀಮಂತ ಕ್ಷೇತ್ರವೇ ಈ ಕುಪ್ಪಳ್ಳಿ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿ ನೂರಾರು ಜನರು ದಿನಲೂ ಭೇಟಿಕೊಡುತ್ತಿರುವ ಶೈಕ್ಷಣಿಕ ಪ್ರವಾಸೋದ್ಯಮ ಕ್ಷೇತ್ರವಾಗಿ ಮಾರ್ಪಟ್ಟಿದೆ.ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಎನ್ನುವ ಶಿರೋನಾಮೆಯೊಂದಿಗೆ ಕುಪ್ಪಳ್ಳಿ ಜಗದಗಲ ಪ್ರಸಿದ್ಧಿ ಆಗುವುದರೊಂದಿಗೆ ಐತಿಹಾಸಿಕ ತಾಣವಾಗಿ ಮಾರ್ಪಟ್ಟಿರುವುದು ನಮ್ಮ ಹೆಮ್ಮೆಯ ಸಂಗತಿ. ಕುಪ್ಪಳಿ – ಕರ್ನಾಟಕ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿರುವ ಒಂದು…

Read More

ಮುಂಬಯಿ ಬಂಟರ ಸಂಘದ ಮಾಜಿ ಕಾರ್ಯದರ್ಶಿ, ಸದಾಶಿವ ಶೆಟ್ಟಿ & ಕೊ. ಚಾರ್ಟರ್ಡ್ ಅಕೌಂಟೆಂಟ್ಸ್ ಹಾಗೂ ಶೆಟ್ಟಿ & ಬಾಳ ಚಾರ್ಟರ್ಡ್ ಅಕೌಂಟೆಂಟ್ಸ್ ಮಾಲಕರು ಆದಂತಹ ಸಮಾಜ ಸೇವಕ ಸಿ.ಎ. ಸದಾಶಿವ ಶೆಟ್ಟಿ ಅವರು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ನಿರ್ದೇಶಕರಾಗಿ ಸೇರ್ಪಡೆಗೊಂಡಿದ್ದಾರೆ. ಪ್ರಸ್ತುತ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಉನ್ನತ ಶಿಕ್ಷಣದ ಮಹತ್ತರ ಯೋಜನೆಯ ಸಂಚಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಈ ಹಿಂದೆ ಒಕ್ಕೂಟದ ಪೋಷಕ ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದರು.

Read More

ಭಾರತೀಯ ಸೇನೆ ಎಂದಾಕ್ಷಣ ಏನೋ ರೋಮಾಂಚನ. ಗಡಿ ನುಸುಳುವ ವೈರಿಗಳ ಗುಂಡಿಗೆ ಎದೆಯೊಡ್ಡಿ ಪ್ರತಿದಾಳಿ ನಡೆಸುತ್ತ ಭಾರತಾಂಬೆಯ ರಕ್ಷಣೆಯೊಂದೇ ತನ್ನ ಧ್ಯೇಯವಾಗಿರಿಸಿಕೊಂಡು ತಮ್ಮ ಬದುಕನ್ನು ಮುಡಿಪಿಟ್ಟು ಹೋರಾಟ ಮಾಡುವ ಮೂಲಕ ದೇಶದ ಜೊತೆಗೆ ನಮ್ಮೆಲ್ಲರನ್ನು ಕಾಯುವ ಸೈನಿಕರ ಸೇವೆ ಅನನ್ಯ. ಹತ್ತೊಂಬತ್ತು ವರ್ಷಗಳ ಕಾಲ ಭೂ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿ ತಾಯ್ನಾಡಿಗೆ ಸೇವೆ ಸಲ್ಲಿಸಿರುವ ದಿಟ್ಟತನದ ವೀರ ಜಗನ್ನಾಥ ಶೆಟ್ಟಿ ಮಾಣಿ. 12-07-1980 ರಂದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಾಣಿಯಲ್ಲಿ ರಘುರಾಮ ಶೆಟ್ಟಿ ಹಾಗೂ ಗುಲಾಬಿ ಶೆಟ್ಟಿ ದಂಪತಿಗಳ ಪುತ್ರನಾಗಿ ಜನಿಸಿದ ಜಗನ್ನಾಥ ಶೆಟ್ಟಿ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಾಣಿಯಲ್ಲಿ ಪೂರ್ಣಗೊಳಿಸಿ ತಮ್ಮ ಪ್ರೌಢಶಾಲಾ ಶಿಕ್ಷಣವನ್ನು ಸರಕಾರಿ ಪ್ರೌಢಶಾಲೆ ಮಾಣಿ ಹಾಗೂ ತಮ್ಮ ಪದವಿಪೂರ್ವ ಶಿಕ್ಷಣವನ್ನು ಜೂನಿಯರ್ ಕಾಲೇಜು ಕೊಂಬೆಟ್ಟಿನಲ್ಲಿ ಪಡೆದು ಮೈಸೂರು ಮುಕ್ತ ವಿಶ್ವವಿದ್ಯಾನಿಲಯದಿಂದ_ಪದವಿ ಪಡೆದರು. ಹೈಸ್ಕೂಲ್ ಶಿಕ್ಷಣದ ಸಂದರ್ಭದಲ್ಲೇ ಕ್ರೀಡೆಯತ್ತ ಒಲವನ್ನಿಟ್ಟುಕೊಂಡಿದ್ದ ಜಗನ್ನಾಥ ಶೆಟ್ಟಿ ಕಬಡ್ಡಿ ವಾಲಿಬಾಲ್ ಹಾಗೂ ಫುಟ್ಬಾಲ್…

Read More

ಸುರತ್ಕಲ್: ಬಂಟರ ಸಂಘ(ರಿ.) ಸುರತ್ಕಲ್ ಇದರ ಸಹಯೋಗದಲ್ಲಿ “ಯಕ್ಷಸಿರಿ” ಯಕ್ಷಗಾನ ತರಬೇತಿ ಕೇಂದ್ರದ ಉದ್ಘಾಟನಾ ಸಮಾರಂಭವು ಸುರತ್ಕಲ್ ಬಂಟರ ಭವನದದಲ್ಲಿ ಜರುಗಿತು. ಪಂಚ ಯಕ್ಷಗಾನ ಮೇಳಗಳ ಸಂಚಾಲಕ ಪಳ್ಳಿ ಕಿಶನ್ ಹೆಗ್ಡೆ ಅವರು ಉದ್ಘಾಟನೆ ನೆರವೇರಿಸಿದರು. ಬಳಿಕ ಮಾತಾಡಿದ ಅವರು, “ಯಕ್ಷಗಾನ ತರಬೇತಿ ಕೇಂದ್ರಗಳು ಅನೇಕ ಕಡೆಗಳಲ್ಲಿ ಪ್ರಾರಂಭಗೊಳ್ಳುತ್ತವೆ. ಆದರೆ ದಿನಕಳೆದಂತೆ ತರಬೇತಿ ಪಡೆಯುವವರ ಸಂಖ್ಯೆ ಕಡಿಮೆಯಾಗುತ್ತದೆ. ಆದರೆ ಸುರತ್ಕಲ್ ಬಂಟರ ಸಂಘ ಇತರರಿಗೆ ಸ್ಫೂರ್ತಿಯಾಗಿ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ಯಕ್ಷಗಾನ ಸೇವೆ ಅನ್ನೋದು ದೇವರ ಸೇವೆಯಿದ್ದಂತೆ. ಹಿಂದೆ ಯಕ್ಷಗಾನ ಕಲಾವಿದರ ಬಗ್ಗೆ ತಾತ್ಸಾರವಿತ್ತು ಆದರೆ ಈಗ ವಿದ್ಯಾವಂತ ಯುವಜನತೆ ಯಕ್ಷಗಾನ ಕಲೆಯತ್ತ ಆಕರ್ಷಿತರಾಗುತ್ತಿದ್ದಾರೆ. ಸಮಾಜದ ಎಲ್ಲ ವರ್ಗದ ಜನರನ್ನು ಒಗ್ಗೂಡಿಸಿ ಯಕ್ಷ ಸೇವೆಗೆ ಮುಂದಾಗಿರುವ ಸುರತ್ಕಲ್ ಬಂಟರ ಸಂಘದ ಶ್ರಮ ಸಾರ್ಥಕವಾಗಲಿ. ಯಕ್ಷ ಕಲೆಯನ್ನು ಕ್ಷಯವಾಗಿಸೋದು ಬೇಡ ಅಕ್ಷಯವಾಗಿಸೋಣ” ಎಂದು ಅವರು ಕರೆ ನೀಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಸುಧಾಕರ ಎಸ್ ಪೂಂಜ ವಹಿಸಿದ್ದರು. ಬೆಳ್ಳಿ…

Read More

ಮೀರಾ ದಹಾಣು ಬಂಟರ ಸಂಘದ ಮಾಜಿ ಅಧ್ಯಕ್ಷ, ಹೋಟೆಲ್ ಉದ್ಯಮಿ, ವಸಾಯಿ ಕರ್ನಾಟಕ ಸಂಘದ ಸಂಸ್ಥಾಪಕರಲ್ಲಿ ಒಬ್ಬರಾಗಿದ್ದ ಸಮಾಜಸೇವಕ ಪುನರೂರು ಭಾಸ್ಕರ್ ಶೆಟ್ಟಿಯವರು ನಿಧನರಾಗಿದ್ದಾರೆ. ಜನಪರ ಕೆಲಸಗಳಲ್ಲಿ ಮುಂಚೂಣಿಯಲ್ಲಿದ್ದ ಭಾಸ್ಕರ್ ಶೆಟ್ಟಿಯವರ ನಿಧನಕ್ಕೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಮೀರಾ ದಹಾಣು ಬಂಟರ ಸಂಘದ ಸ್ಥಾಪಕಾಧ್ಯಕ್ಷ ವಿರಾರ್ ಶಂಕರ್ ಶೆಟ್ಟಿ, ಮುಂಬಯಿ ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ್ ಶೆಟ್ಟಿ, ಶಶಿಧರ್ ಶೆಟ್ಟಿ ವಸಾಯಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Read More

ಅನ್ನ ಇಲ್ಲದೆ ಸತ್ತ ತಾಯಿಗೆ ವೈಕುಂಠ ಸಮಾರಾಧನೆ ಮಾಡುವ ಮಕ್ಕಳು ಇಲ್ಲಿ ಬಹು ಸಂಖ್ಯೆಯಲ್ಲಿದ್ದಾರೆ. ‘ಇರುವಾಗ ಸಾರಿ, ಸತ್ತ ಮೇಲೆ ಗೋರಿ’. ಇದು ಕೈಲಾಸಂ ಇಲ್ಲಿಯ ಜನರ ನಡವಳಿಕೆ ಕಂಡು ಆಡಿದ ವ್ಯಂಗ್ಯ ಮಾತು. ನಮ್ಮ ಸಂಸ್ಕೃತಿಯ ಸ್ವಚ್ಚಂದ ಮುಖ ಮತ್ತು ಸೊಗಸಾದ ಮುಖವನ್ನು ಸಾಹಿತ್ಯ ಬಿಂಬಿಸುತ್ತದೆ. ಕೈಲಾಸಂ ಸಾಹಿತ್ಯ ಮತ್ತು ಸಾಮಾಜಿಕ ಅಸಂಬದ್ಧ ಜೀವನ ವಿಧಾನವನ್ನು ಬಹಳ ಸ್ವಷ್ಟವಾಗಿ ತೆರೆದು ತೋರಿಸಿದೆ. ಒಳಗೊಂದು ಹೊರಗೊಂದು ಆಗಿರುವ ಮನುಷ್ಯನ ದ್ವಂದ ಮುಖವನ್ನು ಅವರಷ್ಟು ಸ್ವಷ್ಟವಾಗಿ ಮತ್ತು ನಿರ್ಭಿತವಾಗಿ ಎತ್ತಿ ತೋರಿಸಿದವರು ಬಹು ಅಪರೂಪ. ಸತ್ತ ಮೇಲಿನ ಗೋರಿ ಇದು ಈಗಲೂ ಪ್ರಸ್ತುತ. ನಾವು ಕಣ್ಮುಂದೆ ಕಾಣುವ ಸತ್ಯ. ಉಳ್ಳವರು ಆಡಂಬರಕ್ಕಾಗಿ ಉಳಿಸಿಕೊಂಡ ಆದರ್ಶಗಳೂ ಹೌದು. “ಕಲ್ಲ ನಾಗರ ಕಂಡು ಹಾಲೆರೆವರಯ್ಯ ದಿಟದ ನಾಗರ ಕಂಡು ಹೊಡೆ ಎಂಬರು”. ತಮ್ಮ ಮನೆ ಮಂದಿ ಸಂಕಟಕ್ಕೆ ತಮ್ಮ ಬದುಕಿನ ಬೇರಿಗೆ ನೀರಾಗಬೇಕಾದ ಬಂಧು ಅದೇ ಬಳಗದ ಅನಿವಾರ್ಯಕ್ಕೆ ಬಿಡಿಕಾಸು ನೆರವಾಗದವರು ದೇವರಿಗೆ ಕಿರೀಟ ತೊಡಿಸಿ…

Read More

ಬಂಟರ ಸಂಘ (ರಿ) ಸುರತ್ಕಲ್ ಇದರ ಆಶ್ರಯದಲ್ಲಿ “ಯಕ್ಷಸಿರಿ” ಯಕ್ಷಗಾನ ತರಬೇತಿ ಕೇಂದ್ರದ ಪ್ರಥಮ ವಾರ್ಷಿಕೋತ್ಸವ ನವಂಬರ್ 11 ಶನಿವಾರ ಸಂಜೆ 5 ಗಂಟೆಗೆ ಸುರತ್ಕಲ್ ಬಂಟರ ಭವನದಲ್ಲಿ ನಡೆಯಲಿದೆ. ಸಮಾರಂಭದ ಅಧ್ಯಕ್ಷತೆಯನ್ನು ಬಂಟರ ಸಂಘದ ಅಧ್ಯಕ್ಷ ಲೋಕಯ್ಯ ಶೆಟ್ಟಿ ಮುಂಚೂರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶ್ರೀ ಮಾತಾ ಡೆವಲಪರ್ಸ್ ಸಂಸ್ಥೆಯ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಬಿ.ಇ, ಯಕ್ಷಮಿತ್ರರು ಸಂಸ್ಥೆಯ ಅಧ್ಯಕ್ಷ ಜಗದೀಪ್ ಶೆಟ್ಟಿ, ಪೆರ್ಮುದೆ ದಿವ್ಯರೂಪ ಕನ್ ಸ್ಟ್ರಕ್ಷನ್ ನ ಆಡಳಿತ ನಿರ್ದೇಶಕ ಯಾದವ ಕೋಟ್ಯಾನ್, ಇಡ್ಯಾ ಮಹಾಲಿಂಗೇಶ್ವರ ದೇವಸ್ಥಾನದ ಶಕುಂತಳಾ ರಮಾನಂದ ಭಟ್, ಉದ್ಯಮಿ ಹರೀಶ್ ಶೆಟ್ಟಿ ಪೆರ್ಮುದೆ, ಪುಂಡಲೀಕ ಹೊಸಬೆಟ್ಟು, ಸಹನಾ ರಾಜೇಶ್ ರೈ ಮೊದಲಾದವರು ಭಾಗವಹಿಸಲಿದ್ದಾರೆ. ಸಮಾರಂಭದಲ್ಲಿ ಯಕ್ಷಗುರು ರಾಕೇಶ್ ರೈ ಅಡ್ಕ, ಸುರತ್ಕಲ್ ಬಂಟರ ಸಂಘದ ನಿಕಟಪೂರ್ವ ಅಧ್ಯಕ್ಷ ಸುಧಾಕರ ಪೂಂಜ, ಮಾಜಿ ಸಾಂಸ್ಕೃತಿಕ ಕಾರ್ಯದರ್ಶಿಗಳಾದ ಬಾಳ ಜಗನ್ನಾಥ ಶೆಟ್ಟಿ, ಕೇಸರಿ ಪೂಂಜ, ಯಕ್ಷಸಿರಿ ಸಂಘಟಕಿ ಕವಿತಾ ಪುಷ್ಪರಾಜ್ ಶೆಟ್ಟಿ ಅವರನ್ನು ಗೌರವಿಸಲಾಗುವುದು.…

Read More

ದ.ಕ ಮತ್ತು ಉಡುಪಿ ಜಿಲ್ಲೆಯ ಆಯ್ದ ಐವತ್ತು ಗ್ರಾಮಗಳಲ್ಲಿ ಶೀಘ್ರದಲ್ಲೇ ಉಚಿತ ಕಟೀಲ್ ಸಂಚಾರಿ ಬೇಬಿ ಕ್ಲಿನಿಕ್ ಪ್ರಾರಂಭಿಸಲಾಗುವುದು ಎಂದು ಮಕ್ಕಳ ತಜ್ಞ ಡಾ. ಸುಧಾಕರ ಶೆಟ್ಟಿ ಪುಣೆ ಹೇಳಿದರು. ಬಂಟರ ಮಹಿಳಾ ಘಟಕ ಮೂಡುಬಿದಿರೆ ಮತ್ತು ನಡ್ಯೋಡಿ ಮಹಿಳಾ ಮಂಡಲ ಮಾರ್ಪಾಡಿ ಕಲ್ಲಬೆಟ್ಟು ವತಿಯಿಂದ ಆಳ್ವಾಸ್ ಹೆಲ್ತ್ ಸೆಂಟರ್ ಸಹಕಾರದೊಂದಿಗೆ ನಡ್ಯೋಡಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಮಕ್ಕಳ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು. ನಡ್ಯೋಡಿ ಶಾಲೆಯಲ್ಲಿ ಒಟ್ಟು 28 ಮಕ್ಕಳ ತಪಾಸಣೆ ನಡೆಸಲಾಯಿತು. ನಡ್ಯೋಡಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಉಚಿತ ಅರೋಗ್ಯ ತಪಾಸಣಾ ಶಿಬಿರ ನಡೆಯಿತು. ಮೂಡಬಿದಿರೆ ಬಂಟರ ಮಹಿಳಾ ಘಟಕದ ಅಧ್ಯಕ್ಷೆ ಶೋಭಾ ಎಸ್. ಶೆಟ್ಟಿ, ಕಾರ್ಯದರ್ಶಿ ಸೌಮ್ಯ ಎಸ್. ಶೆಟ್ಟಿ ಹಾಗೂ ಸದಸ್ಯರು, ನಡ್ಯೋಡಿ ಮಹಿಳಾ ಮಂಡಲದ ಅಧ್ಯಕ್ಷೆ ಗೀತಾ ಪಿ. ಶೆಟ್ಟಿ, ಕಾರ್ಯದರ್ಶಿ ಹೇಮಾವತಿ ಆರ್. ಪೂಜಾರಿ ಮತ್ತಿತರರು ಭಾಗವಹಿಸಿದ್ದರು.

Read More