Author: admin
ಕಲಾವಿದರು ಅಕಾಲವಾಗಿ ಕಾಲನ ಹೊಡೆತಕ್ಕೆ ಸಿಲುಕಿ ಅಪಮೃತ್ಯುವಿಗೆ ಈಡಾಗುತ್ತಿರುವುದನ್ನು ಕಾಣುತ್ತಿದ್ದೇವೆ, ಕೇಳುತ್ತಿದ್ದೇವೆ, ಅನುಭವಿಸುತ್ತಿದ್ದೇವೆ. ಪುತ್ರಶೋಕಂ ನಿರಂತರಂ ಎಂಬಂತೆ ಕಲಾವಿದರು ರಂಗದಿಂದ ಅಗಲಿದಾಗ ಕಲಾಮಾತೆಗೆ ಮಕ್ಕಳನ್ನು ಕಳಕೊಂಡ ಅನುಭವವಾಗುತ್ತದೆ. ಕಲಾಭಿಮಾನಿಗಳಿಗೂ, ಕಲಾಪೋಷಕರಿಗೂ ಇದೇ ಸೂತಕ ಭಾವ. ಹಾಗಂತ ಕಲಾವಿದರ ಮರಣಕ್ಕೆಲ್ಲಾ ಮೇಳದ ಯಜಮಾನರೇ ಕಾರಣ, ಕಾಲಮಿತಿಯೇ ಕಾರಣ ಎನ್ನುವುದು ಮೂರ್ಖತನದ ಹೇಳಿಕೆಯಾದೀತು. ಸ್ವಲ್ಪ ಕಟುವಾದರೂ ಕೆಲವು ವಾಸ್ತವಗಳನ್ನು ಅರಿಯಬೇಕು. ಎಲ್ಲೇ ಯಕ್ಷಗಾನ ಇರಲಿ ಅಲ್ಲಿ ಕಲಾವಿದರ ವಿಶ್ರಾಂತಿಗೆ ಬಿಡಾರದ, ವಸತಿ, ಊಟೋಪಹಾರದ ವ್ಯವಸ್ಥೆ ಮೊದಲಿನಿಂದಲೂ ನಡೆದುಬಂದಿದೆ. ಈಗ ಅದೇ ಮಾದರಿಯಲ್ಲಿ ವ್ಯವಸ್ಥೆ ಮಾಡಿದರೆ ಬೆಳಗಿನ ಉಪಾಹಾರಕ್ಕೆ, ಮಧ್ಯಾಹ್ನದ ಊಟಕ್ಕೆ, ರಾತ್ರಿ ಮಲಗಲು ಇರುವವರು ಎಷ್ಟು ಮಂದಿ ಎಂಬ ಲೆಕ್ಕ ಮಾಡಲು ಕೈ ಬೆರಳುಗಳೂ ಬೇಡ. ಕಲಾವಿದರ ಓಡಾಟಕ್ಕೆ ಬಹುತೇಕ ಎಲ್ಲ ಮೇಳಗಳಲ್ಲೂ ಬಸ್, ವಾಹನ ಇದೆ. ಹೋಗುವವರು ಎಷ್ಟು ಮಂದಿ? ಹಾಗಾದರೆ ಅಂತಹ ಕಲಾವಿದರ ಪೂರಕ ವ್ಯವಸ್ಥೆ ಕ್ರಮೇಣ ಮರೆಯಾಗಲು ಕಾರಣ ಯಾರು? ರಾತ್ರಿಯಿಂದ ಬೆಳಗಿನವರೆಗೆ ಚೌಕಿಯಲ್ಲಿದ್ದು, ಅಗತ್ಯ ಇದ್ದ ವೇಷಗಳನ್ನು ಮಾಡಿ…
ರಾಜ್ಯದಲ್ಲೇ ಪ್ರಥಮ ಹೈಟೆಕ್ ಬಸ್ ನಿಲ್ದಾಣವನ್ನು ಇಲ್ಲಿನ ಗೋವಿಂದ ದಾಸ್ ಕಾಲೇಜ್ ಮುಂಭಾಗ ಸೋಮವಾರ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ.ವೈ. ಭರತ್ ಶೆಟ್ಟಿ ಉದ್ಘಾಟಿಸಿದರು. ಈ ವೇಳೆ ಮಾತಾಡಿದ ಶಾಸಕರು, “ಸ್ಮಾರ್ಟ್ ಆಂಡ್ ಡಿಜಿಟಲ್ ಸುರತ್ಕಲ್” ಯೋಜನೆಯಡಿಯಲ್ಲಿ ಸುರತ್ಕಲ್ ಗೋವಿಂದ ದಾಸ್ ಕಾಲೇಜ್ ಮುಂಭಾಗ ರಾಜ್ಯದಲ್ಲೇ ಪ್ರಥಮವಾಗಿ ಸರ್ವ ರೀತಿಯಲ್ಲೂ ಸುಸಜ್ಜಿತವಾದ ಹೈಟೆಕ್ ಬಸ್ ನಿಲ್ದಾಣವನ್ನು ಲೋಕಾರ್ಪಣೆಗೊಳಿಸಲಾಗಿದೆ. ಶುದ್ಧ ಕುಡಿಯುವ ನೀರು, ಸಿಸಿ ಕೆಮರಾ ವ್ಯವಸ್ಥೆ ಸೇರಿದಂತೆ, ಮಹಿಳೆಯರು ಮತ್ತು ಹೆಣ್ಣುಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ತುರ್ತು ಸಂದರ್ಭದಲ್ಲಿ ನೇರವಾಗಿ ಸ್ಥಳೀಯ ಪೊಲೀಸ್ ಅಧಿಕಾರಿಗಳ ಮೊಬೈಲ್ ಗೆ ಸಂಪರ್ಕ ಕಲ್ಪಿಸುವಂತೆ ಎಮರ್ಜನ್ಸಿ ಕರೆ ವ್ಯವಸ್ಥೆಯನ್ನೂ ಮಾಡಲಾಗಿದೆ” ಎಂದು ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ವೈ. ಭರತ್ ಶೆಟ್ಟಿ ಹೇಳಿದರು. “ಯೋಜನೆಯ ಮುಂದುವರಿದ ಭಾಗವಾಗಿ ಸುರತ್ಕಲ್ ಬೀಚ್ ನಲ್ಲಿ ಪ್ರವಾಸಿಗರ ವಿಹಾರಕ್ಕೆ ಪಾರ್ಕ್, ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ. ಜನರು ಇವುಗಳನ್ನು ಯೋಗ್ಯ ರೀತಿಯಲ್ಲಿ ಬಳಸುವ ಮೂಲಕ ಸ್ವಚ್ಛತೆಯ ಕಡೆಗೆ ಗಮನ ನೀಡುವಂತಾಗಬೇಕು”…
ತುಳುಸಂಘ ಪಿಂಪ್ರಿ ಚಿಂಚ್ವಾಡ್ ಇದರ 10 ನೇ ವಾರ್ಷಿಕೋತ್ಸವ ಸಮಾರಂಭವು ಡಿ . 4 ರಂದು ರಾಮಕೃಷ್ಣ ಮೋರೆ ಸಭಾಗೃಹ ,ಚಿಂಚ್ವಾಡ್ ಇಲ್ಲಿ ಸಂಜೆ ಗಂಟೆ 3 ರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ . ಸಂಘದ ಅಧ್ಯಕ್ಷ ಹರೀಶ್ ಶೆಟ್ಟಿ ಕುರ್ಕಾಲ್ ಇವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು ಮುಖ್ಯ ಅತಿಥಿಗಳಾಗಿ ಖ್ಯಾತ ವಾಗ್ಮಿ ,ಚಿಂತಕ ,ಪತ್ರಕರ್ತರಾದ ಶ್ರೀಕಾಂತ್ ಶೆಟ್ಟಿ ,ಗೌರವ ಅತಿಥಿಗಳಾಗಿ ಕರ್ನಾಟಕ ಸರಕಾರದ ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್ ಆಗಮಿಸಲಿದ್ದಾರೆ . ಈ ಸಂದರ್ಭ ಖ್ಯಾತ ಸಮಾಜಸೇವಕ, ಮೂಲಕ ಜನಾನುರಾಗಿಯಾಗಿರುವ ರವಿ ಕಟಪಾಡಿ ಇವರನ್ನು ವರ್ಷದ ವಿಶೇಷ ಸಾಧಕರನ್ನಾಗಿ ಸಮ್ಮಾನಿಸಲಾಗುವುದು . ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಸಮಿತಿ ಸದಸ್ಯರಿಂದ ನೃತ್ಯ ವೈವಿಧ್ಯಗಳು , ಹಾಗೂ ಮನೋರಂಜನೆಯಂಗವಾಗಿ ಶಿಮಂತೂರು ಚಂದ್ರಹಾಸ ಸುವರ್ಣ ನಿರ್ದೇಶನದಲ್ಲಿ ತುಳು ನಾಟಕ “ಆಲಡೆದ ಅಪ್ಪೆನ ಓಲಗ” ಪ್ರದರ್ಶನಗೊಳ್ಳಲಿದೆ . ಕಾರ್ಯಕ್ರಮದ ಕೊನೆಗೆ ಪ್ರೀತಿಭೋಜನದ ವ್ಯವಸ್ಥೆಯನ್ನು ಮಾಡಲಾಗಿದೆ . ಸಂಸ್ಥೆಯ ಕಾರ್ಯವೈಖರಿ ಕಳೆದ 10 ವರ್ಷಗಳ ಹಿಂದೆ…
ಮೂಡುಬಿದಿರೆ: ಶತಾಯುಷಿ ಮಿಜಾರುಗುತ್ತು ಆನಂದ ಆಳ್ವರ ಅಂತ್ಯಕ್ರಿಯೆಯು ಮಿಜಾರಿನ ಸ್ವಗೃಹದ ವಠಾರದಲ್ಲಿ ಬುಧವಾರ ನಡೆಯಿತು. ಬೆಳಿಗ್ಗೆ 9.30ರಿಂದ 11.45 ತನಕ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಬಂಟ ಸಮುದಾಯದ ಸಕಲ ವಿಧಿವಿಧಾನಗಳನ್ನು ಪೂರೈಸಿದ ನಂತರ ಸ್ವಗೃಹದ ತೋಟದಲ್ಲಿ ಪುತ್ರರು ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಧರ್ಮಸ್ಥಳದ ಧರ್ಮಾಧಿಕಾರಿ ಡಾ ಡಿ ವೀರೇಂದ್ರ ಹೆಗ್ಗಡೆ, ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ, ಕೇಮಾರು ಈಶ ವಿಠ್ಠಲ್ದಾಸ ಸ್ವಾಮೀಜಿ ಸಂತಾಪ ವ್ಯಕ್ತ ಪಡಿಸಿದರು. ಮಾಣಿಲ ಶ್ರೀಧಾಮದ ಮೋಹನದಾಸ ಸ್ವಾಮೀಜಿ, ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ, ಧರ್ಮಗುರುಗಳಾದ ರೆ. ಫಾದರ್ ಗೋಮ್ಸ್, ವಿಧಾನಸಭಾಧ್ಯಕ್ಷ ಯು ಟಿ ಖಾದರ್, ಸಂಸದ ನಳಿನಿ ಕುಮಾರ್ ಕಟೀಲ್, ಮೂಡುಬಿದಿರೆ ಶಾಸಕ ಉಮಾನಾಥ್ ಎ ಕೋಟ್ಯಾನ್, ಮಾಜಿ ಸಚಿವರುಗಳಾದ ಕೆ ಅಭಯಚಂದ್ರ ಜೈನ್, ಬಿ. ರಮಾನಾಥ್ ರೈ, ವಿನಯ್ ಕುಮಾರ್ ಸೊರಕೆ, ಬಿ ನಾಗರಾಜ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ಮಾಜಿ ವಿಧಾನ ಪರಿಷತ್ ಸದಸ್ಯರಾದ ಕ್ಯಾಪ್ಟನ್…
ನಮ್ಮ ತುಳುನಾಡ ಪದ್ಧತಿ, ಸಂಸ್ಕ್ರತಿ ಅಚಾರ ವಿಚಾರಗಳ ಬಗ್ಗೆ ಅರಿತು ಜೀವನದಲ್ಲಿ ಮುನ್ನಡೆಯುವ ನಾವು ಇನ್ನೊಮ್ಮೆ ತುಳುನಾಡಲ್ಲೆ ಹುಟ್ಟಿ ಬರಬೇಕು ಎಂದು ಆಶಿಸುತ್ತೇವೆ, ಆದರೆ ನಮ್ಮ ಜೀವನ ಧರ್ಮ ಅಧರ್ಮದ ನಡುವೆ ನಾವು ಮಾಡಿದ ಕರ್ಮ ಪಲ ಎನಿದೆಯೋ ಅದರ ಲೆಕ್ಕಾಚಾರದಂತೆ ನಡೆಯುತ್ತದೆ ಹುಟ್ಟು ಮತ್ತು ಬದುಕು. ಸಮಾಗಾರಿಕೆಯಲ್ಲಿ ಜವಾಬ್ದಾರಿಯನ್ನು ಅರಿತು ಮಾಡುವ ಕೆಲಸದಿಂದ ನಮ್ಮ ಯೋಗ್ಯತೆ ತಿಳಿಯುತ್ತದೆ .ಸತ್ಯಯುಗ, ತ್ರೇತಾಯುಗ, ದ್ವಾಪರಯುಗ, ಕಲಿಯುಗ ಈ ಯುಗಗಳಲ್ಲಿ ನಡೆದ ಸಂಘರ್ಷವನ್ನು ಅರಿತಾಗ ನಾವಿರುವ ಈ ಕಲಿಯುಗದಲ್ಲಿ ನಮಗೆ ನಾವೇ ಮಿತ್ರರೂ ಹೌದು ಶತ್ರುಗಳು ಹೌದು. ಅಂದರೆ ಜನ್ಮ ಜನ್ಮಾಂತರಗಳಿಂದ ನಾವು ಮಾಡಿದ ಕರ್ಮ ಪಲಗಳ ಪ್ರಾರಬ್ದ ಏನಿದೆಯೋ ಅನುಭವಿಸಲೇ ಬೇಕು, ತಲೆಗೆ ಹೊಯ್ದ ನೀರು ಕಾಲಿಗೆ ಇಳಿದ ಹಾಗೆ. ನಮ್ಮ ತುಳುನಾಡ ಜಾನಪದ ಸಂಸ್ಕ್ರತಿ ದೈವಾರಾಧನೆ, ನಾಗಾರಾಧನೆ ಅಚಾರ ವಿಚಾರ ಸಂಸ್ಕಾರ ಇವೆಲ್ಲವನ್ನು ಅರಿತವರು ನಮ್ಮ ಮಕ್ಕಳಿಗೆ ತಿಳಿಸಿಕೊಡುವ ಕಾರ್ಯ ಮಾಡಬೇಕು ಹಾಗು ಮಕ್ಕಳಲ್ಲಿ ತಿಳಿದುಕೊಳ್ಳುವ ಮನಸ್ಸು ಮೂಡಿ ಬರಬೇಕು. ಬಂಗಾರದಂತ…
ಕಟ್ಟಡ ಪ್ರಧಾನವಾಗದೆ ’ಕಟ್ಟಳೆಗಳೇ’ ಮುಖ್ಯವಾಗಿರುವ ಆದಿಮ ಆಚರಣೆಯ ಸತ್ವಗಳನ್ನು ಉಳಿಸಿಕೊಂಡು, ಬದಲಾವಣೆಯ ಯಾವುದೇ ಸುಳಿಗೆ ಸಿಗದೆ ತನ್ನ ಮೂಲ ಸ್ವರೂಪದಲ್ಲಿ ಸಂಪ್ರದಾಯಬದ್ಧವಾಗಿ ಆಚರಣೆಗಳ ವೈವಿಧ್ಯಗಳೊಂದಿಗೆ ಪಡುಬಿದ್ರಿಯ ’ಬ್ರಹ್ಮಸ್ಥಾನ’ವು (ಬೆರ್ಮಸ್ಥಾನ) ರಾಜ್ಯದಾದ್ಯಂತ ಆಸ್ತಿಕರ, ಚಿಂತಕರ, ವಾಸ್ತವವಾದಿಗಳ, ಸಂಶೋಧಕರ ಗಮನಸೆಳೆದ ಶ್ರದ್ಧಾಕೇಂದ್ರ.ಇಲ್ಲಿ ನಡೆಯುವ ರೋಚಕ ವಿಧಿಗಳ ವಿಲಕ್ಷಣ ಆರಾಧನಾ ವಿಧಾನವನ್ನು ಸ್ಥೂಲವಾಗಿ ಗಮನಿಸಿದರೆ ಏನೂ ತಿಳಿಯದು. ಆದರೆ ಸೂಕ್ಷ್ಮ ಅವಲೋಕನದಿಂದ ಎಲ್ಲವೂ ಒಗಟಾಗುತ್ತಾ ವಿವರಗಳು ನಿಗೂಢವಾಗುತ್ತವೆ. ಆದುದರಿಂದಲೇ ಆ ಆರಾಧನಾ ಸನ್ನಿಧಾನವು ವಿಭಿನ್ನ ಸ್ತರಗಳ ಜನರ ಆಸಕ್ತಿಯನ್ನು ಕೆರಳಿಸುತ್ತದೆ. ಇಲ್ಲಿ ನೆರವೇರುವ ಕೇವಲ ಒಂದು ಢಕ್ಕೆ ಬಲಿ, ಹಗಲು ತಂಬಿಲ, ರಾತ್ರಿ ತಂಬಿಲಗಳನ್ನು ಗಮನಿಸುವುದರಿಂದ ಆಸಕ್ತನ ಪ್ರಶ್ನೆಗಳಿಗೆ ಉತ್ತರ ದೊರಕಲಾಗದು. ಆದರೆ ಆಚರಣೆಯ ಕ್ರಮ, ಕಟ್ಟುಕಟ್ಟಳೆ, ವಿಧಿಗಳನ್ನು ನಿರ್ವಹಿಸುವ ವೇಳೆ ಬಳಸಲಾಗುವ ಶಬ್ದಗಳು, ಹಿಂದಿನಿಂದ ನಡೆದುಕೊಂಡು ಬಂದ ಸಂಪ್ರದಾಯಗಳು ವಿಧಿಸಲ್ಪಟ್ಟಿರುವ ನಿಯಮ ನಿಬಂಧನೆಗಳನ್ನು ಜಿಲ್ಲೆಯಲ್ಲಿ ಹರಡಿರುವ ಪ್ರಾಕ್ತನ ಉಪಾಸನಾ ಸ್ಥಾನಗಳಲ್ಲಿ ನಡೆಯುವ ಆಚರಣೆಗಳೊಂದಿಗೆ ಹೋಲಿಸಿ ತೌಲನಿಕವಾಗಿ ಅಧ್ಯಯನ ನಡೆಸಿದರೆ ಮೇಲ್ನೋಟಕ್ಕೆ ಒಂದು ಸ್ಥೂಲ ಚಿತ್ರಣ…
ಎಲ್ಲೂರು ಗ್ರಾಮದ ಉಳ್ಳೂರಿನಲ್ಲಿ ಗೋಶಾಲೆಗೆ ಮೀಸಲಿಟ್ಟಿರುವ 3.96 ಎಕ್ರೆ ಸರಕಾರಿ ಜಮೀನಿನಲ್ಲಿ ಶುಕ್ರವಾರ ಅದಮಾರು ಮಠಾಧೀಶರಾದ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಅವರು ಗೋಪೂಜೆ ನೆರವೇರಿಸಿ, ಗೋಶಾಲೆ ಮತ್ತು ಗೋರುದ್ರ ಭೂಮಿ ನಿರ್ಮಾಣ ಯೋಜನೆಗೆ ಮುಹೂರ್ತ ನೆರವೇರಿಸಿದರು. ಗೋಪೂಜೆ ನೆರವೇರಿಸಿದ ಅದಮಾರು ಶ್ರೀ ಆಶೀರ್ವಚನ ನೀಡಿ, ಭಾರತೀಯ ಪರಂಪರೆಯಲ್ಲಿ ಗೋವುಗಳಿಗೆ ವಿಶೇಷ ಮಹತ್ವವಿದೆ. ಗೋಪಾಲನೆ, ಸಂರಕ್ಷಣೆಗೆ ಒತ್ತು ನೀಡುವ ಮೂಲಕ ಸನಾತನ ಧರ್ಮದ ಪರಿಪಾಲನೆ ಸಾಧ್ಯವಿದೆ. ಗೋವುಗಳು ನಮಗೆ ಉತ್ತಮ ಜ್ಞಾನವನ್ನು ನೀಡುತ್ತವೆ. ಗೋಶಾಲೆಗಳು ವೃದ್ಧಾಶ್ರಮದಂತೆ ಆಗಿರದೇ ಗೋವುಗಳ ಬಗ್ಗೆ ಸಂಶೋಧನಾತ್ಮಕ ಮಾಹಿತಿಗಳನ್ನು ನೀಡುವ ಮಾದರಿ ಕೇಂದ್ರವಾಗಿ ಬೆಳೆಯಬೇಕಿವೆ ಎಂದರು. ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ನನ್ನ ಹಲವು ವರ್ಷಗಳ ಸಂಕಲ್ಪವಾಗಿರುವ ಗೋ ರುದ್ರ ಭೂಮಿ ಸ್ಥಾಪನೆಯ ಬಗ್ಗೆ ಚುನಾವಣಾ ಪೂರ್ವದಲ್ಲಿ ಭರವಸೆ ನೀಡಿದ್ದೆವು. ಅದರಂತೆ ಕಾಪು ತಾಲೂಕಿನಲ್ಲಿ ಪ್ರಪ್ರಥಮ ಸರಕಾರಿ ಗೋಶಾಲೆ ನಿರ್ಮಿಸಿ, ಅದರಲ್ಲೇ ಗೋ ರುದ್ರ ಭೂಮಿ ಸ್ಥಾಪಿಸಲಾಗುವುದು. ಸರಕಾರ, ಶಾಸಕರ ನಿಧಿಯ ಜತೆಗೆ ಸ್ನೇಹಿತರ…
“ನಂಬಿಕೆ ವಿಶ್ವಾಸ ಬಲ ನಮ್ಮಲ್ಲಿದ್ದರೆ ಬದುಕು ಚೆನ್ನಾಗಿ ಸಾಗುತ್ತದೆ. ನಂಬಿಕೆ ಬೇಕು ಆದರೆ ಮೂಢನಂಬಿಕೆ ಬೇಡ. ತುಳುನಾಡಿನ ಮಣ್ಣಿನಲ್ಲಿ ನಾಗದೇವರ ಇರುವಿಕೆ ಬಗ್ಗೆ ನಂಬಿಕೆ ಮಣ್ಣಲ್ಲಿ ಬೆರೆತುಹೋಗಿದ್ದು ಬಾಳ ತೊತ್ತಾಡಿಯಂತಹ ಧಾರ್ಮಿಕ ಕೇಂದ್ರಗಳು ಪುನರುಜ್ಜೀವನಗೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆ” ಎಂದು ಒಡಿಯೂರು ಶ್ರೀ ದೇವದತ್ತ ಸಂಸ್ಥಾನದ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ಬಾಳ ತೊತ್ತಾಡಿ ನಾಗಬ್ರಹ್ಮ ಸ್ಥಾನದಲ್ಲಿ ಜರುಗಿದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡುತ್ತಿದ್ದರು. “ಕಡಲಿಗೆ ಕಸ ತ್ಯಾಜ್ಯ ಎಸೆದರೆ ವಾಪಾಸ್ ಬರುತ್ತದೆ, ಅದೇ ಚಿನ್ನ ಎಸೆದರೆ ಬರುವುದಿಲ್ಲ ಯಾಕೆಂದರೆ ಒಳ್ಳೆಯದನ್ನು ಕಡಲು ಸ್ವೀಕರಿಸುತ್ತದೆ. ನಮ್ಮ ಜೀವನ ಕೂಡ ಹಾಗೆ ನಮಗೆ ಬೇಕಾದ್ದನ್ನು ಮಾತ್ರ ಸ್ವೀಕರಿಸಿ ಬೇಡವಾದ್ದನ್ನು ತಿರಸ್ಕರಿಸಬೇಕು” ಎಂದರು. ವೇದಿಕೆಯಲ್ಲಿ ಮುಂಬೈ ಸಮಿತಿ ಅಧ್ಯಕ್ಷರು ಕುಶಾಲ್ ಭಂಡಾರಿ ಐಕಳ ಬಾವ, ಬ್ರಹ್ಮಶ್ರೀ ಪಾಂಗಾಳ ಅನಂತ ಪದ್ಮನಾಭ ತಂತ್ರಿಗಳು, ಉದ್ಯಮಿ ಜೆ.ಡಿ ವೀರಪ್ಪ, ಡಾ| ರೋಹಿತ್, ರವೀಂದ್ರನಾಥ ಜಿ. ಶೆಟ್ಟಿ, ಕಳತ್ತೂರು, ಮುಂಬೈ ಸಮಿತಿ ಗೌರವಾಧ್ಯಕ್ಷ ಸುಬ್ರಹ್ಮಣ್ಯ ರಾವ್…
ಇಂದಿನ ಯಾಂತ್ರೀಕೃತ ಜೀವನ ಶೈಲಿಯಲ್ಲಿ ಆರೋಗ್ಯವಂತರಾಗಿ ಉತ್ಸಾಹದಿಂದಿರಲು ದೇಹಕ್ಕೆ ವ್ಯಾಯಾಮ ಅತೀ ಅಗತ್ಯವಾಗಿದೆ. ಕ್ರೀಡೆ ಜೀವನದ ಅವಿಭಾಜ್ಯ ಅಂಗವಾಗಿದ್ದು ದಿನನಿತ್ಯ ನಾವು ಸ್ವಲ್ಪ ಸಮಯವನ್ನು ವ್ಯಾಯಾಮಕ್ಕೆ ನೀಡಬೇಕು . ಹಿಂದೆ ಒಂದು ಕಾಲವಿತ್ತು ಕೇವಲ ಅಂಕ ಗಳಿಕೆಯೇ ನೌಕರಿಯ ಮಾನದಂಡವಾಗಿತ್ತು. ಆದರೆ ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಉತ್ತಮ ಕ್ರೀಡಾಪಟುಗಳಾದರೆ ಬ್ಯಾಂಕಿಂಗ್, ರೈಲ್ವೇ, ಪೊಲೀಸ್ ಇಲಾಖೆಗಳು ನೌಕರಿ ನೀಡಲು ಕೈಬೀಸಿ ಕರೆಯುತ್ತವೆ. ಆದುದರಿಂದ ಮಕ್ಕಳು ಕಲಿಕೆಯೊಂದಿಗೆ ಕ್ರೀಡೆಗೂ ಆದ್ಯತೆ ನೀಡಿ ಆಸಕ್ತಿಯನ್ನು ಬೆಳೆಸಿಕೊಂಡು ಶ್ರಮ ಪಟ್ಟರೆ ವಿಪುಲ ಅವಕಾಶಗಳನ್ನು ಬಳಸಿಕೊಂಡು ಜೀವನವನ್ನು ಸಮೃದ್ಧಗೊಳಿಸಬಹುದಾಗಿದೆ ಎಂದು ಪಿಂಪ್ರಿ- ಚಿಂಚ್ವಾಡ್ ಬಂಟರ ಸಂಘದ ಅಧ್ಯಕ್ಷರಾದ ರಾಕೇಶ್ ಶೆಟ್ಟಿ ಬೆಳ್ಳಾರೆ ಅಭಿಪ್ರಾಯಪಟ್ಟರು. ಅವರು ನಗರದ ಮೋರ್ಯಾ ಗೋಸಾವಿ ಮೈದಾನದಲ್ಲಿ ನಡೆದ ಬಂಟರ ಸಂಘ ಪಿಂಪ್ರಿ – ಚಿಂಚ್ವಾಡ್ ಇದರ ವಾರ್ಷಿಕ ಕ್ರೀಡಾಕೂಟ ಹಾಗೂ ರಾಷ್ಟ್ರಮಟ್ಟದ ಕಬಡ್ಡಿ ಮತ್ತು ತ್ರೋ ಬಾಲ್ ಪಂದ್ಯಾಟ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಕಬಡ್ಡಿಯಂತಹ ಗ್ರಾಮೀಣ ಕ್ರೀಡೆ ಇಂದು ದೇಶ ,ಅಂತಾರಾಷ್ಟ್ರೀಯ…
ವಿದ್ಯಾಗಿರಿ ಯಲ್ಲಿ ಅಭೂತಪೂರ್ವ ಯಶಸ್ಸಿನೊಂದಿಗೆ ಮುಗಿದ 25ನೇ ಅಂತಾರಾಷ್ಟ್ರೀಯ ಸ್ಕೌಟ್ಸ್ ಗೈಡ್ಸ್ ಸಾಂಸ್ಕೃತಿಕ ಜಾಂಬೂರಿ ತ್ಯಾಜ್ಯ ವಿಲೇವಾರಿಯಲ್ಲೂ ಯಶಸ್ಸು ಕಂಡಿದೆ.ನೂರು ಎಕ್ರೆ ಜಾಗದಲ್ಲಿ ವಿವಿಧ ಮೇಳಗಳು, ವೇದಿಕೆಗಳು, ಸ್ಟಾಲುಗಳು, ಪ್ರದರ್ಶನಾಂಗಣಗಳು, ಕಾರ್ಯಾಗಾರದ ತಾಣಗಳು, ಅರಣ್ಯಲೋಕ ಎಂದು ಮುಂತಾದ ಹಲವು ಆಕರ್ಷಣೆಗಳನ್ನು ಹೊಂದಿ ಒಂದೂವರೆ ಲಕ್ಷ ಮಂದಿಯ ಓಡಾಟ, ಊಟೋಪಚಾರ ಜನಮನ ಸೆಳೆದಿದೆ. ಸಂಘಟಕರಿಗೆ ಸುಸ್ತಾದರೂ ಸಂತಸವಿದೆ, ಸಂತೃಪ್ತಿ ಇದೆ. ಈ ಎಲ್ಲ ಸಾರ್ಥಕತೆಯ ಒಳಗೊಳಗೇ ಎಂಟು ದಿನಗಳಲ್ಲಿ ಸಹಜವಾಗಿ ತಲೆಶೂಲೆಯಾಗಲಿದ್ದ ತ್ಯಾಜ್ಯ ವಿಲೇವಾರಿ ಅತ್ಯಂತ ಸಮರ್ಪಕವಾಗಿ ನಡೆದಿರುವುದನ್ನು ಗಮನಿಸಬೇಕಾಗಿದೆ. ಸುಮಾರು 60,000 ಪ್ರಶಿಕ್ಷಣಾರ್ಥಿಗಳು, ಶಿಕ್ಷಕರಿದ್ದ 21 ಹಾಸ್ಟೆಲ್ಗಳ ಎಂದಿನ ಸಿಬಂದಿಗಳ ಸಹಿತ ಒಟ್ಟು 900 ಮಂದಿ ಸ್ವಚ್ಛತ ಕಾರ್ಮಿಕರು ಕೆಲಸ ಮಾಡಿದ್ದಾರೆ. 6 ಟ್ರಾಕ್ಟರ್ಗಳು ನಿರಂತರವಾಗಿ ಓಡಾಟ ನಡೆಸಿವೆ. ಹಸಿಕಸ, ಒಣಕಸ, ನಿರುಪಯುಕ್ತ ಕಸ ಎಂದು ಅಲ್ಲಲ್ಲಿಯೇ ತ್ಯಾಜ್ಯ ವಿಂಗಡಿಸುವ ಒಟ್ಟು 60 ಘಟಕಗಳನ್ನು, 50 ಡ್ರಮ್ಗಳನ್ನು ಸ್ಥಾಪಿಸಲಾಗಿತ್ತು. ಹಸಿಕಸದ ಚೀಲಕ್ಕೆ ಹಸುರು, ಒಣಕಸಕ್ಕೆ ನೀಲಿ ಮತ್ತು ನಿರುಪಯುಕ್ತ ತ್ಯಾಜ್ಯವಸ್ತುಗಳಿಗೆ ಕೆಂಪು…