Author: admin
ಮಂಗಳೂರು ವಿ.ವಿ. ವ್ಯಾಪ್ತಿಯ ಖಾಸಗಿ ಕಾಲೇಜುಗಳ ಆಡಳಿತ ಮಂಡಳಿ ಆದಷ್ಟೂ ಬೇಗ ಸಂಘಟಿತ ರಾಗಿ ಎಲ್ಲ ಪ್ರಾಂಶುಪಾಲರು, ಪದಾಧಿ ಕಾರಿಗಳೊಂದಿಗೆ ವಿ.ವಿ.ಯ ಆಡಳಿತವನ್ನು ಭೇಟಿಯಾಗಿ ಎದು ರಿಸುತ್ತಿರುವ ಗಂಭೀರ ಸಮಸ್ಯೆಗಳ ಬಗ್ಗೆ ಗಮನ ಸೆಳೆಯಲೇಬೇಕಾದ ಅನಿವಾರ್ಯತೆ ಉಂಟಾಗಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಹೇಳಿದ್ದಾರೆ. ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗಳ ಸಂಘದ 16ನೇ ಮಹಾಸಭೆ ಹಾಗೂ ಉನ್ನತ ಶಿಕ್ಷಣದ ಗುಣಮಟ್ಟ ಸುಧಾರಣೆ ವಿಚಾರಗೋಷ್ಠಿಯನ್ನು ಅವರು ಉದ್ಘಾಟಿಸಿ ಮಾತನಾಡಿ, ಸರಕಾರ ಮತ್ತು ಮಂಗಳೂರು ವಿ.ವಿ. ನಮ್ಮನ್ನು ವಿಶ್ವಾಸಕ್ಕೇ ತೆಗೆದುಕೊಳ್ಳುತ್ತಿಲ್ಲ, ನಮ್ಮ ಸಭೆ ನಡೆಸುವುದಾಗಿ ಒಂದು ವರ್ಷದಿಂದ ಹೇಳಿದರೂ ಇದುವರೆಗೆ ಸಾಧ್ಯವಾಗಿಲ್ಲ ಎಂದರು. ಮಾನ್ಯತೆಗೆ ಹೆಚ್ಚು ಮೊತ್ತವನ್ನು ಖಾಸಗಿ ಕಾಲೇಜುಗಳು ವಿ.ವಿ.ಗೆ ಪಾವತಿಸಬೇಕಾಗುತ್ತದೆ. ಆದರೆ ಕಳೆದ ಐದು ವರ್ಷಗಳಿಂದ ವಿ.ವಿ.ಯ ವೇಳಾಪಟ್ಟಿಯೇ ಗೊಂದಲದಿಂದ ಕೂಡಿದೆ, ಪರೀಕ್ಷಾ ವ್ಯವಸ್ಥೆ, ಮೌಲ್ಯ ಮಾಪನ ಹದಗೆಟ್ಟು ಹೋಗಿದೆ. ಹೊಸ ಕೋರ್ಸ್ ಆವಿಷ್ಕಾರಗಳು ಆಗುತ್ತಿಲ್ಲ, ಪಿಜಿ ಕೋರ್ಸ್ ಪರಿಚಯಿಸುವಲ್ಲೂ ಹಿಂದಿದ್ದೇವೆ, ಪಿಜಿ ಕೋರ್ಸ್ಗಳಲ್ಲಿ ನಮ್ಮಲ್ಲಿ ಎಷ್ಟೇ ಕಷ್ಟಪಟ್ಟರೂ ಶೇ.…
ಜಗತ್ತಿನ ಒಟ್ಟು ಅಡಿಕೆ ಉತ್ಪನ್ನದಲ್ಲಿ ಭಾರತದ ಪಾಲು ಸುಮಾರು ಐವತ್ತು ಶೇಕಡಾದಷ್ಟು. ಅದರಲ್ಲೂ ಭಾರತದ ಒಟ್ಟು ಅಡಿಕೆ ಉತ್ಪನ್ನದಲ್ಲಿ ಕರ್ನಾಟಕವೊಂದೇ ಶೇಕಡಾ ಅರವತ್ತಕ್ಕಿಂತಲೂ ಹೆಚ್ಚು ಪಾಲು ಹೊಂದಿದೆ. ಕರ್ನಾಟಕದ ಒಟ್ಟು ಅಡಿಕೆ ಉತ್ಪನ್ನದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯದ್ದು ಬಹುದೊಡ್ಡ ಪಾಲು. ಭಾರತದಲ್ಲಿ ಈ ಅಡಿಕೆ ಕೃಷಿಯ ಪರಂಪರೆ ಅದೆಷ್ಟು ಪುರಾತನವೆಂದರೆ “ತಾಂಬೂಲ’ ಅನ್ನುವುದರ ಪರಿಕಲ್ಪನೆ ಹಿಂದೂ ಧರ್ಮದಷ್ಟೇ ಹಳೆಯದು. ಹಾಗಾಗಿ ಅಡಿಕೆ ಎನ್ನುವುದು ನಮ್ಮ ಧರ್ಮದ ಅವಿಭಾಜ್ಯ ಅಂಗ. ಅದ್ಯಾವ ದೇವತಾ ಕಾರ್ಯಗಳೇ ಇರಲಿ, ಅದ್ಯಾವುದೇ ಶುಭಸಮಾರಂಭಗಳಿರಲಿ ವೀಳ್ಯದ ಎಲೆ ಮತ್ತು ಅಡಿಕೆ ಎಂಬುದು ಎಲ್ಲ ಆಚರಣೆಗಳ ಅವಿಭಾಜ್ಯ ಅಂಗ. ಅಡಿಕೆಯನ್ನು ನಮ್ಮ ಆಯುರ್ವೇದದಂಥಾ ಔಷಧಶಾಸ್ತ್ರಗಳೂ ಕೂಡಾ ಔಷಧವಾಗಿ ಬಳಕೆ ಮಾಡುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಅಡಿಕೆಯ ಬಗ್ಗೆ ವಿಶ್ವಮಟ್ಟದಲ್ಲಿ ಅಪಪ್ರಚಾರ ನಡೆಯುತ್ತಿದೆ. ಅಡಿಕೆಯ ಅನೇಕ ಔಷಧೀಯ ಗುಣಗಳನ್ನರಿತು ಉಪಯೋಗಿಸುತ್ತಿದ್ದ ಭಾರತೀಯರ ನಂಬಿಕೆಗೆ ವಿರುದ್ಧವಾಗಿ ಅಡಿಕೆಯಲ್ಲಿ ಕ್ಯಾನ್ಸರ್ ಕಾರಕ ಅಂಶಗಳಿವೆ ಎನ್ನುವ ಸುದ್ದಿಗೆ ಹೆಚ್ಚು ಮನ್ನಣೆ ಕೊಡಲಾಯಿತು. ಹೆಚ್ಚಿನ ಸಂಶೋಧನೆಗಳೆಲ್ಲಾ ವೀಳ್ಯದೆಲೆ,…
ರಾಜ್ಯದಲ್ಲಿ ಕೈಗಾರಿಕೆಗಳ ಅಭಿವೃದ್ಧಿಗೆ ಅರ್ಹವಾದ ಸೇವೆ ಸಲ್ಲಿಸುತ್ತಿರುವುದನ್ನು ಗುರುತಿಸಿ ಅದಾನಿ ಸಮೂಹ ಸಂಸ್ಥೆಯ ಅಧ್ಯಕ್ಷ ಹಾಗೂ ಕಾರ್ಯ ನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ ಅವರಿಗೆ ಮಾಧ್ಯಮ ಕ್ಷೇತ್ರದ ಸಂಸ್ಥೆ ಸ್ಪೇಸ್ ಮೀಡಿಯಾ ಬೆಂಗಳೂರಿನ ಗಾಂಧಿ ಭವನದಲ್ಲಿ ಮಹಾತ್ಮ ಗಾಂಧಿ ಅಂತಾರಾಷ್ಟ್ರೀಯ ಪ್ರಶಸ್ತಿ -2023 ಯನ್ನು ನೀಡಿ ಗೌರವಿಸಿದೆ. ಪ್ರಶಸ್ತಿಯನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಪ್ರದಾನಿಸಿದರು. ಸ್ಪೀಕರ್ ಯು.ಟಿ. ಖಾದರ್, ಎಸ್ ಡಿ ಎಂ ಶೈಕ್ಷಣಿಕ ಸಮೂಹ ಸಂಸ್ಥೆಗಳ ಡಾ. ಡಿ ಸುರೇಂದ್ರ ಕುಮಾರ್ ಉಪಸ್ಥಿತರಿದ್ದರು. ಈ ಹಿಂದೆ ಕಿಶೋರ್ ಆಳ್ವ ಅವರು ಪ್ರತಿಷ್ಠಿತ ಬೆಂಗಳೂರು ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರಿಸ್ ನ( ಬಿಸಿಐಸಿ) ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ರಾಜ್ಯದ ವಾಣಿಜ್ಯ ಮತ್ತು ಕೈಗಾರಿಕಾಭಿವೃದ್ಧಿಗೆ ಶ್ರಮಿಸಿದ್ದರು. ಪ್ರತಿಷ್ಟಿತ ಕೊಜೆಂಟ್ರಿಕ್ಸ್ ಚೈನಾ ಲೈಟ್ ಆಂಡ್ ಪವರ್, ಯುನೋಕಾಲ್ ಎಂಬ ಪ್ರತಿಷ್ಠಿತ ಸಂಸ್ಥೆಗಳಿಗೆ ಹಿರಿಯ ಸಲಹೆಗಾರರಾಗಿ ಕೈಗಾರಿಕಾಭಿವೃದ್ಧಿಗೆ ಕಿಶೋರ್ ಆಳ್ವ ಅವರು ಕೈಜೋಡಿಸಿದ್ದಾರೆ. ತಮ್ಮ ವಿದ್ಯಾರ್ಥಿ ದೆಸೆಯಲ್ಲೂ ಸಹ ಕಿಶೋರ್ ಆಳ್ವ…
ಚಿಣ್ಣರ ಬಿಂಬದ ಕನ್ನಡ ತರಗತಿಗಳು ಮಕ್ಕಳಿಗೆ ಭಾಷೆಯ ಬಗ್ಗೆ ಅಭಿಮಾನ ಮೂಡಿಸುವಲ್ಲಿ ಯಶಸ್ಸಾಗಿದೆ- ಪ್ರಕಾಶ್ ಭಂಡಾರಿ ಮುಂಬಯಿ ವಿಶ್ವವಿದ್ಯಾಲಯ, ಕನ್ನಡ ವಿಭಾಗ ಚಿಣ್ಣರ ಬಿಂಬ ಸಂಸ್ಥೆಗೆ ಸದಾ ಪ್ರೋತ್ಸಹವನ್ನು ನೀಡುತ್ತಿದೆ. ಚಿಣ್ಣರ ಬಿಂಬದ ಕನ್ನಡ ಕಲಿಕಾ ತರಗತಿಗಳನ್ನು ನಾವು ಪ್ರೋ. ಸೀತಾರಾಮ ಶೆಟ್ಟಿ ಅವರ ನೇತೃತ್ವದಲ್ಲಿ ಆರಂಭಿಸಿದ್ದೆವು. ಈಗ ಆದಕ್ಕೊಂದು ಸ್ವರೂಪವನ್ನು ನೀಡಿ ಶಿಸ್ತುಬದ್ಧವಾಗಿ ನಡೆಸಿಕೊಂಡು ಹೋಗುವಲ್ಲಿ ಕನ್ನಡ ವಿಭಾಗದ ಸಹಕಾರವೂ ಇದೆ. ಡಾ.ಜಿ.ಎನ್.ಉಪಾಧ್ಯ ಅವರು ಚಿಣ್ಣರ ಬಿಂಬದ ಆರಂಭದಿಂದಲೂ ನಮಗೆ ಮಾರ್ಗದರ್ಶನವನ್ನು ನೀಡುತ್ತಾ ಬಂದಿದ್ದಾರೆ. ನಮ್ಮಎಲ್ಲ ಶಿಕ್ಷಕರು ಬಹಳ ಮುತುವರ್ಜಿಯಿಂದ ಈ ಕನ್ನಡ ಕಲಿಕಾ ತರಗತಿಗಳ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ ಎಂದು ಹೇಳಲು ನನಗೆ ಅಭಿಮಾನವಾಗುತ್ತದೆ. ಈ ಕನ್ನಡ ತರಗತಿಗಳು ಭಾಷೆಯಲ್ಲಿ ಮಕ್ಕಳು ಪಳಗುವಂತೆ, ಪ್ರೌಢರಾಗುವಂತೆ ಮಾಡುತ್ತಿದೆ. ಅದೇ ರೀತಿ ನಮ್ಮ ಚಿಣ್ಣರ ಬಿಂಬದಲ್ಲಿ ಭಜನೆಯನ್ನು ಸಾವಿರಾರು ಮಕ್ಕಳು ಕಲಿಯುತ್ತಿದ್ದಾರೆ. ಭಜನೆಗಳನ್ನು ಕೂಡಾ ಬಹಳ ಉತ್ತಮವಾಗಿ ಚಿಣ್ಣರ ಬಿಂಬದಲ್ಲಿ ಕಲಿಸಲಾಗುತ್ತದೆ. ಇವರೆಲ್ಲರನ್ನು ಮುಂಬಯಿ ವಿಶ್ವವಿದ್ಯಾಲಯ, ಕನ್ನಡ ವಿಭಾಗದ ಮೂಲಕ ಗೌರವಿಸುತ್ತಿರುವುದು ಅರ್ಥಪೂರ್ಣವಾಗಿದೆ.…
ಪುತ್ತೂರು ತಾಲೂಕು ಬಂಟರ ಸಂಘದ ಆಶ್ರಯದಲ್ಲಿ ಆ. ೧೩ ರಂದು ಪುತ್ತೂರು ಕೊಂಬೆಟ್ಟು ಎಂ.ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಜರಗಲಿರುವ ಆಟಿಡೊಂಜಿ ದಿನ, ಸಾಧಕರಿಗೆ ಚಿನ್ನದ ಪದಕ ಪ್ರದಾನ ಸಮಾರಂಭದ ಆಮಂತ್ರಣ ಪತ್ರ ಬಿಡುಗಡೆಯು ಜು. ೨೭ರಂದು ಪುತ್ತೂರು ಬಂಟರ ಭವನದಲ್ಲಿ ಜರಗಿತು. ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟುರವರು ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಬಂಟರ ಸಂಘದ ಮಾಜಿ ಅಧ್ಯಕ್ಷರಾದ ಸಹಕಾರ ರತ್ನ ಸವಣೂರು ಕೆ.ಸೀತಾರಾಮ ರೈ ಮತ್ತು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಅಬುಧಾಬಿಯ ಉದ್ಯಮಿ ಜಯರಾಮ ರೈ ಮಿತ್ರಂಪಾಡಿರವರುಗಳು ಅಮಂತ್ರಣ ಪತ್ರ ಬಿಡುಗಡೆಗೊಳಿಸಿದರು. ಬಂಟರ ಸಂಘದ ನಿಕಟಪೂರ್ವಾಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಪ್ರಧಾನ ಕಾರ್ಯದರ್ಶಿ ರಮೇಶ್ ರೈ ಡಿಂಬ್ರಿ, ಕೋಶಾಧಿಕಾರಿ ಕೃಷ್ಣಪ್ರಸಾದ್ ಆಳ್ವ ಉಪ್ಪಳಿಗೆ, ಉಪಾಧ್ಯಕ್ಷರುಗಳಾದ ಚಿಲ್ಮೆತ್ತಾರು ಜಗಜೀವನ್ದಾಸ್ ರೈ, ರೋಶನ್ ರೈ ಬನ್ನೂರು, ಬಂಟರ ಯಾನೆ ನಾಡವರ ಮಾತೃ ಸಂಘದ ಪುತ್ತೂರು ತಾಲೂಕು ಸಮಿತಿ ಸಂಚಾಲಕ ದಯಾನಂದ ರೈ ಮನವಳಿಕೆಗುತ್ತು, ಸಹ…
ವೆಂಕೀಸ್ ಹಾಸ್ಪಿಟಾಲಿಟಿ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ಸಿಲ್ವಾಸ ಇದರ ಆಡಳಿತ ನಿರ್ದೇಶಕ ಅಮಿತ್ ಶೆಟ್ಟಿ ರೆಂಜಾಳ ಹಾಗೂ ಮಾತಾಶ್ರೀ ಹಾಸ್ಪಿಟಾಲಿಟಿ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ಅಂಕ್ಲೇಶ್ವರ ಇದರ ಆಡಳಿತ ನಿರ್ದೇಶಕ ಅಜಿತ್ ಶೆಟ್ಟಿ ಇವರು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರ ವಿಶೇಷ ಮನವಿಗೆ ಸ್ಪಂದಿಸಿ ಮತ್ತು ಒಕ್ಕೂಟದಲ್ಲಿ ನಡೆಯುವ ಜನಪರ ಕಾಳಜಿಯ ಸಾಮಾಜಿಕ ಕಾರ್ಯಗಳಿಗೆ ಒತ್ತು ನೀಡುವ ಸಲುವಾಗಿ ಒಕ್ಕೂಟಕ್ಕೆ ಪೋಷಕ ಸದಸ್ಯರಾಗಿ ಸೇರ್ಪಡೆಗೊಂಡಿದ್ದಾರೆ. ಇವರನ್ನು ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರು ಹೂಗುಚ್ಚ ನೀಡಿ ಅಭಿನಂದಿಸಿದರು. ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ್ ಶೆಟ್ಟಿ ಮತ್ತು ಕೋಶಾಧಿಕಾರಿ ಮೋಹನದಾಸ್ ಶೆಟ್ಟಿ, ಶಿವಪ್ರಸಾದ್ ಶೆಟ್ಟಿ, ಗಿರೀಶ್ ಶೆಟ್ಟಿ ಜೊತೆಗಿದ್ದರು.
ಕೊರೊನಾ ಸಂಕಷ್ಟದಲ್ಲಿ ದೇಶವನ್ನು ಉಳಿಸಿದ ನಾಯಕ ನರೇಂದ್ರ ಮೋದಿ ಎಂಬ ಖುಷಿ ನಮಗಿದೆ. ಅಂತಹ ಮಹಾನ್ ವ್ಯಕ್ತಿ ಪ್ರಧಾನಿಯಾಗಿರುವ ಸಂದರ್ಭದಲ್ಲಿ ಶಾಸಕನಾಗಿ ಕ್ಷೇತ್ರದ ಜನತೆಯ ಸೇವೆ ಮಾಡುವ ಭಾಗ್ಯ ಸಿಕ್ಕಿರುವುದು ನನ್ನ ಭಾಗ್ಯ ಎಂದು ಬಂಟ್ವಾಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು ಅವರು ಹೇಳಿದರು. ಅವರು ಅರಳ ಬಿಜೆಪಿ ಮಹಾಶಕ್ತಿ ಕೇಂದ್ರದಲ್ಲಿ ನಡೆದ ಬಿಜೆಪಿ ಪ್ರಮುಖ ಕಾರ್ಯಕರ್ತರ ಚುನಾವಣ ಸಭೆಯಲ್ಲಿ ಮಾತನಾಡಿದರು. ಮೋದಿ ನೇತೃತ್ವದಲ್ಲಿ ಜಗತ್ತಿನ ಅತ್ಯಂತ ಕಡಿಮೆ ಹಣದುಬ್ಬರ ಇರುವ ದೇಶ ಭಾರತವಾಗಿದ್ದು, ಕೊರೊನಾ ಬಳಿಕದ ದಿನಗಳಲ್ಲಿ ಅರ್ಥಿಕ ವ್ಯವಸ್ಥೆಯಲ್ಲಿ ಸುಧಾರಣೆ ತಂದಿರುವ ಕೀರ್ತಿ ಬಿಜೆಪಿ ಡಬ್ಬಲ್ ಇಂಜಿನ್ ಸರಕಾರಕ್ಕೆ ಸಲ್ಲುತ್ತದೆ ಎಂದು ಅವರು ಹೇಳಿದರು. ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್, ಬುಡಾ ಅಧ್ಯಕ್ಷ ದೇವದಾಸ್ ಶೆಟ್ಟಿ, ಕ್ಷೇತ್ರ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಡೊಂಬಯ ಅರಳ, ಕ್ಷೇತ್ರದ ಯುವಮೋರ್ಚಾದ ಪ್ರಧಾನ ಕಾರ್ಯದರ್ಶಿ ದಿನೇಶ್ ಶೆಟ್ಟಿ ದಂಬೆದಾರ್, ಗ್ರಾಮ ಪಂಚಾಯತ್ ಅಧ್ಯಕ್ಷ…
ಬೈಲೂರು ಶ್ರೀ ಮಹಿಷಮರ್ದಿನಿ ದೇಗುಲಕ್ಕೆ ಸಂಬಂಧಪಟ್ಟ ಶ್ರೀ ಧೂಮಾವತಿ ದೈವಸ್ಥಾನದ ಜೀರ್ಣೋದ್ಧಾರ ಪ್ರಯುಕ್ತ ಆಲಯ ಪರಿಗ್ರಹ, ಶಿಲ್ಪಿ ಮಾರ್ಯದೆ, ಸಾಮೂಹಿಕ ಪ್ರಾರ್ಥನೆ, ತೋರಣ ಮುಹೂರ್ತ, ಸಪ್ತ ಶುದ್ಧಿ, ವಾಸ್ತು ಪೂಜೆ ನಡೆಯಿತು. ಬೆಳ್ಳಿಯಿಂದ ತಯಾರಿಸಲಾದ ಮೂಲ ಮಹಿಷಂತಾಯ, ಧೂಮಾವತಿ, ಬಂಟ, ಪಂಜುರ್ಲಿ ದೈವಗಳ ಮೂರ್ತಿ ಮತ್ತು ಆಯುಧಗಳನ್ನು ಮೆರವಣಿಗೆಯಲ್ಲಿ ತಂದು ದೈವಸ್ಥಾನಕ್ಕೆ ಸಮರ್ಪಿಸಲಾಯಿತು. ತಂತ್ರಿಗಳಾದ ವೇ| ಮೂ| ವಿ| ಕೆ.ಎ. ರಮಣ ತಂತ್ರಿ ಕೊರಂಗ್ರಪಾಡಿ, ವೇ| ಮೂ| ವಿ| ಕೆ.ಎಸ್. ಕೃಷ್ಣಮೂರ್ತಿ ತಂತ್ರಿ ಕೊರಂಗ್ರಪಾಡಿ ಅವರ ನೇತೃತ್ವದಲ್ಲಿ ಮಾ. 17ರಂದು ನೂತನ ಶಿಲಾಮಯ ಆಲಯದಲ್ಲಿ ಪುನಃಪ್ರತಿಷ್ಠೆ, ಬ್ರಹ್ಮಕಲಶೋತ್ಸವ ನಡೆಯಿತು. ಅನಂತರ ಅನ್ನಸಂತರ್ಪಣೆ, ನೇಮ ಜರಗಿತು. ಮೆರವಣಿಗೆಯಲ್ಲಿ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಮಟ್ಟಾರು ರತ್ನಾಕರ್ ಹೆಗ್ಡೆ, ತಂತ್ರಿಗಳಾದ ರಮಣ ತಂತ್ರಿ, ಪ್ರಧಾನ ಅರ್ಚಕ ವಾಸುದೇವ ಭಟ್, ರಮೇಶ ಶೆಟ್ಟಿ, ನವೀನ ಭಂಡಾರಿ, ಬೈಲೂರು ದೇವಳದ ಮೊಕ್ತೇಶ್ವರ ಮೋಹನ್ ಮುದ್ದಣ ಶೆಟ್ಟಿ, ಕಿರಣ ಕುಮಾರ್ ಬೈಲೂರು, ಅರುಣ ಶೆಟ್ಟಿಗಾರ್, ಸುದರ್ಶನ ಶೇರಿಗಾರ್, ಜಯಕರ ಶೆಟ್ಟಿ…
ಕರ್ನಾಟಕ ಕುಸ್ತಿ ಸಂಘದ ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಶ್ರೀ ಪ್ರಸಾದ್ ಶೆಟ್ಟಿಯವರನ್ನು ಮಾಜಿ ಮುಖ್ಯಮಂತ್ರಿಗಳು ಹಾಗೂ ಹಾಲಿ ಶಾಸಕರಾದಂತಹ ಸನ್ಮಾನ್ಯ ಶ್ರೀ ಜಗದೀಶ್ ಶೆಟ್ಟರ್ ಮತ್ತು ಅವರ ಶ್ರೀಮತಿಯಾದ ಶಿಲ್ಪ ಜಗದೀಶ್ ಶೆಟ್ಟರ್ ರವರು ಸನ್ಮಾನಿಸಿದರು. ಪ್ರಸಾದ್ ಶೆಟ್ಟಿಯವರು ಯುವ ಉದ್ಯಮಿಯಾಗಿ ಹುಬ್ಬಳ್ಳಿಯಲ್ಲಿ ನೆಲೆಸಿದ್ದಾರೆ. ನೆಟ್ಟಾಳ ಮುತ್ತಪ್ಪ ರೈ ಅವರ ಆಪ್ತರಲ್ಲಿ ಒಬ್ಬರಾಗಿದ್ದ ಶೆಟ್ಟರು ಪ್ರಸ್ತುತ ಗುಣರಂಜನ್ ಶೆಟ್ಟಿಯವರ ಜಯಕರ್ನಾಟಕ ಸಂಘಟನೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು, ತನ್ನ ಬಳಿ ಕಷ್ಟ ಹೇಳಿಕೊಂಡು ಸಹಾಯ ಕೇಳಲು ಬಂದವರಿಗೆ ಯಾವುದೇ ಪ್ರಚಾರ ಬಯಸದೆ ಸಮಾಜಸೇವೆ ಮಾಡುತ್ತಾ ಬರುತ್ತಿದ್ದಾರೆ.
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮೊಳಹಳ್ಳಿ ಗ್ರಾಮದ ಕೈಲ್ ಕೆರೆ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಕ್ಕೆ ಉಡುಪಿ ಜಿಲ್ಲಾಧಿಕಾರಿ ಕುಮಾರ್ ರಾವ್ ಎಂ .ಭೇಟಿ ನೀಡಿದರು. ಇತ್ತೀಚಿಗೆ ಜಿಲ್ಲಾಧಿಕಾರಿಯವರು ಜಿಲ್ಲಾಧಿಕಾರಿಗಳ ನಡೆಯ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಕುಂದಾಪುರ ತಾಲೂಕಿನ ಹಾರ್ದಳ್ಳಿ -ಮಂಡಳಿ ಗ್ರಾಮ ವಾಸ್ತವ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ಕೈಲ್ ಕೆರೆ- ಮಾವಿನಕಟ್ಟೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷೆ ಶ್ರೀಮತಿ ಚೈತ್ರ ವಿ. ಅಡಪ ಅವರ ಕ್ಷೇತ್ರಗಳಿಗೆ ಭೇಟಿ ನೀಡಿ ಹೈನು ಉದ್ಯಮ ಮತ್ತು ತೋಟಗಾರಿಕೆ ಹಾಗೂ ಕೃಷಿ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ಸಾಧನೆಯನ್ನು ಪರಿಚಯಿಸಿಕೊಂಡರು. ಶ್ರೀಮತಿ ಚೈತ್ರ ವಿ.ಅಡಪ ಹೈನು ಉದ್ಯಮದ ಬಗ್ಗೆ ಹಾಗೂ ಹೈನು ಉದ್ಯಮದಲ್ಲಿ ಮಹಿಳೆಯಾಗಿ ಸಮಾಜ ಸೇವೆಯನ್ನ ಗುರುತಿಸಿಕೊಂಡು ತನ್ನದೇ ಆದಂತಹ ಕಾರ್ಯ ವ್ಯಾಪ್ತಿ ಗುರುತಿಸಿಕೊಂಡು, ಗ್ರಾಮದ ಮಹಿಳೆಯರಿಗೆ ಮಾದರಿಯಾದ ಬಗ್ಗೆ ಹಾಗೂ ಮಹಿಳೆಯಾಗಿ ಸಮಾಜದಲ್ಲಿ ವಿಶೇಷ ಸಾಧನೆ ಮಾಡಿ ಇತರರಿಗೂ ಮಾದರಿಯಾಗಿದ್ದ ಬಗ್ಗೆ, ಜಿಲ್ಲಾಧಿಕಾರಿ ಕುಮಾರ್ ರಾವ್.ಎಂ ಅಭಿನಂದಿಸಿದರು. ತೋಟಗಾರಿಕೆ…