Author: admin
ಬಂಟ ಸಮಾಜ ಬಲಿಷ್ಠ ಸಮಾಜವಾಗಿದ್ದು ಜಗತ್ತಿನ ಹಲವು ಭಾಗಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಬಂಟರು ಗುರುತಿಸಿಕೊಂಡಿದ್ದಾರೆ ಎಂದು ಮಾಜಿ ಸಚಿವ ಬಿ ರಮಾನಾಥ ರೈ ಅವರು ಇಂಟರ್ ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ (ರಿ.) ಇದರ 8ನೇ ವಾರ್ಷಿಕೋತ್ಸವ ಸಮಾರಂಭದಂದು ಮಾತನಾಡಿದರು. ಟ್ರಸ್ಟಿನ ಸ್ಥಾಪಕಾಧ್ಯಕ್ಷ ಎ ಸದಾನಂದ ಶೆಟ್ಟಿಯವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ, ಸಮಾಜಸೇವಕ ಸುರೇಶ್ ಶೆಟ್ಟಿ ಗುರ್ಮೆ ಅವರನ್ನು ಟ್ರಸ್ಟಿನ ನೂತನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ನಿತೇಶ್ ಶೆಟ್ಟಿ ಎಕ್ಕಾರ್ ಅವರನ್ನು ಯುವ ವಿಭಾಗದ ಅಧ್ಯಕ್ಷ, ದೇವಿಚರಣ್ ಶೆಟ್ಟಿ ಕಾರ್ಯಧ್ಯಕ್ಷ, ವಿಜಯಲಕ್ಷ್ಮಿ ಬಿ ಶೆಟ್ಟಿ ಮಹಿಳಾ ವಿಭಾಗದ ಅಧ್ಯಕ್ಷೆಯಾಗಿ ಅವಿರೋಧವಾಗಿ ಆಯ್ಕೆಯಾದರು. ಈ ಸಂಧರ್ಭದಲ್ಲಿ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ಜಾಗತಿಕ ಬಂಟರ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಎ.ಜೆ ಸಮೂಹ ಶಿಕ್ಷಣ ಸಂಸ್ಥೆಯ ಆಡಳಿತ ನಿರ್ದೇಶಕ ಡಾ. ಎ.ಜೆ ಶೆಟ್ಟಿ, ಮೂಲ್ಕಿ ಬಂಟರ ಸಂಘದ ಅಧ್ಯಕ್ಷ ಪುರುಷೋತ್ತಮ ಶೆಟ್ಟಿ, ಸಂಗೀತ ನಿರ್ದೇಶಕ ಗುರುಕಿರಣ್, ಸೀತಾರಾಮ ರೈ ಸವನೂರು,…
ವಿದ್ಯಾಗಿರಿ: ಜೈಪುರದ ಸುರೇಶ್ ಗ್ಯಾನ್ ವಿಹಾರ್ ವಿಶ್ವವಿದ್ಯಾಲಯದಲ್ಲಿ ನಡೆದ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಮಲ್ಲಕಂಬ ಪಂದ್ಯಾವಳಿಯಲ್ಲಿ ಮಂಗಳೂರು ವಿವಿಯ ಮಹಿಳಾ ತಂಡ 5ನೇ ಸ್ಥಾನ ಹಾಗೂ ಪುರುಷರ ತಂಡವು 6ನೇ ಸ್ಥಾನ ಪಡೆದಿದ್ದು, ಖೇಲೊ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡಾಕೂಟಕ್ಕೆ ಆಯ್ಕೆಯಾಗಿದೆ. ಮಂಗಳೂರು ವಿವಿಯನ್ನು ಪ್ರತಿನಿಧಿಸಿದ್ದ 12 ಜನರ ಪುರುಷರ ಹಾಗೂ ಮಹಿಳೆಯರ ತಂಡದ ಎಲ್ಲಾ ಸದಸ್ಯರು ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾರೆ. ಗೌವಾಹಟಿಯಲ್ಲಿ ನಡೆಯಲಿರುವ ಖೇಲೊ ಇಂಡಿಯಾ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಕರ್ನಾಟಕದಿಂದ ಆಯ್ಕೆಯಾದ ಎರಡು ವಿವಿಗಳಲ್ಲಿ ಮಂಗಳೂರು ವಿವಿಯು ಒಂದು. ವೈಯಕ್ತಿಕ ನೇತಾಡುವ ಮಲ್ಲಕಂಬ ಸ್ಪರ್ಧೆಯಲ್ಲಿ ಆಳ್ವಾಸ್ ಕಾಲೇಜಿನ ದೀಪಕ್ ಗೌಳಿ ಕಂಚಿನ ಪದಕ ಪಡೆದಿದ್ದಾರೆ. ವಿಜೇತ ತಂಡವನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ ಆಳ್ವ ಅಭಿನಂದಿಸಿದ್ದಾರೆ.
ಶಾಸಕ ಅಶೋಕ್ ಕುಮಾರ್ ರೈ ಅವರು ಟ್ರಸ್ಟ್ ಮೂಲಕ ತನ್ನ ದುಡಿಮೆಯ ಒಂದು ಪಾಲನ್ನು ದಾನ, ಧರ್ಮಕ್ಕೆ ವಿನಿಯೋಗಿಸುತ್ತಿರುವುದು ಅತ್ಯಂತ ಪುಣ್ಯದ ಕೆಲಸ. ವಸ್ತ್ರ ವಿತರಣೆಯ ಮೂಲಕ ಇಲ್ಲಿ ಸಂಪತ್ತಿನ ಮೌಲ್ಯವರ್ಧನೆ ಹಾಗೂ ಮಾನವೀಯತೆ ಅಭಿವ್ಯಕ್ತಗೊಂಡಿದೆ ಎಂದು ಒಡಿಯೂರು ಕ್ಷೇತ್ರದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು. ರೈ ಎಸ್ಟೇಟ್ಸ್ ಎಜುಕೇಶನಲ್ ಆ್ಯಂಡ್ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ಸೋಮವಾರ ನಡೆದ ವಸ್ತ್ರ ವಿತರಣೆ, ಸಹಭೋಜನ “ಸೇವಾ ಸೌರಭ” ಕಾರ್ಯಕ್ರಮ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು. ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಮಾತನಾಡಿ, ದಾನ ಧರ್ಮದ ಜತೆಗೆ ಸ್ವಾಭಿಮಾನದ ಬದುಕು ಕಟ್ಟಿಕೊಂಡಿರುವ ಬಡ ಕುಟುಂಬದ ಸಾಧಕರನ್ನು ಸಮ್ಮಾನಿಸಿರುವುದು ಶ್ಲಾಘನೀಯ ಸಂಗತಿ. ಕರಾವಳಿಯ ಕಂಬಳವನ್ನು ರಾಜಧಾನಿಯ ಅಂಗಳಕ್ಕೆ ತಲುಪಿಸುವ ಮಹತ್ವದ ಕಾರ್ಯ ಮಾಡಿರುವ ಅಶೋಕ್ ರೈ ಅವರ ಪ್ರಯತ್ನ ಪುತ್ತೂರಿಗೆ ಹೆಮ್ಮೆ ತರುವಂತಹದು ಎಂದರು. 1 ಲಕ್ಷ ಜನರಿಗೆ ವಸ್ತ್ರದಾನದ ಗುರಿ ಅಧ್ಯಕ್ಷತೆ ವಹಿಸಿದ್ದ ರೈ ಎಸ್ಟೇಟ್ಸ್ ಎಜುಕೇಶನಲ್ ಆ್ಯಂಡ್ ಚಾರಿಟೆಬಲ್…
ಶಿರ್ವ ಸಹಕಾರಿ ವ್ಯವಸಾಯಿಕ ಸಂಘ ನಿ. ಇದರ ನೂತನ ಹವಾನಿಯಂತ್ರಿತ ಪ್ರಧಾನ ಕಚೇರಿ ಮತ್ತು ಎಂ.ಎಸ್.ಸಿ ಗೋದಾಮು ಉದ್ಘಾಟನಾ ಕಾರ್ಯಕ್ರಮ
ಶಿರ್ವ ಸಹಕಾರಿ ವ್ಯವಸಾಯಿಕ ಸಂಘ, (ನಿ.) ಶಿರ್ವ ಇದರ ನೂತನ ಹವಾನಿಯಂತ್ರಿತ ಪ್ರಧಾನ ಕಚೇರಿ ಮತ್ತು ಎಂ.ಎಸ್.ಸಿ ಗೋದಾಮು ಉದ್ಘಾಟನಾ ಕಾರ್ಯಕ್ರಮದಲ್ಲಿ ದಿನಾಂಕ 30-09-2023 ರಂದು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಭಾಗವಹಿಸಿದರು. ಭದ್ರತಾ ಕೊಠಡಿಯ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಶಾಸಕರು ಸಾರ್ವಜನಿಕ ವಲಯದಲ್ಲಿ ಅತ್ಯಂತ ಯಶಸ್ವಿ ಕ್ಷೇತ್ರವೆಂದರೆ ಸಹಾಕಾರಿ ರಂಗ ಎಂಬುದು ನಿರ್ವಿವಾದ. ದಶಕಗಳ ಹಿಂದೆ ನಮ್ಮ ಅವಿಭಜಿತ ಜಿಲ್ಲೆಯ ಸಹಕಾರಿ ಕ್ಷೇತ್ರದ ಉನ್ನತಿಗಾಗಿ ಶ್ರಮಿಸಿದ ಮೊಳಹಳ್ಳಿ ಸುಬ್ರಹ್ಮಣ್ಯ ಭಟ್, ಟಿ.ಎಂ.ಎ ಪೈ, ಕರಂಬಳ್ಳಿ ಸಂಜೀವ ಶೆಟ್ಟಿ, ಜಿ.ಎಸ್ ಆಚಾರ್ಯ ಮುಂತಾದವರ ಕೊಡುಗೆ ಅಪಾರ. ಅವರು ಹಾಕಿಕೊಟ್ಟ ದಾರಿ ನೀಡಿದ ಮಾರ್ಗದರ್ಶನ ಅನುಸರಿಸಿದ ನೀತಿ ಇಂದಿನ ಸಮಾಜಕ್ಕೆ ದಾರಿದೀಪ ಎಂದರೆ ತಪ್ಪಾಗಲಾರದು ಎಂದು ಹೇಳಿದರು ಅವರು ಪಕ್ಷ, ಜಾತಿ, ಧರ್ಮವನ್ನು ಮೀರಿ ಮಾನವೀಯ ಸಹೃದಯಿ ಸ್ಪಂದನಾ ಗುಣದೊಂದಿಗೆ ರಾಜಕೀಯ ರಹಿತ ಪ್ರಮಾಣಿಕ ಸಮಾಜಮುಖಿ ಸೇವೆ ನೀಡುವಲ್ಲಿ ನಾವೆಲ್ಲರೂ ಜೊತೆಯಾಗಿ ಶ್ರಮಿಸೋಣ ಎಂದರು. ಈ ಸಂದರ್ಭದಲ್ಲಿ ಶಿರ್ವ ಸಹಕಾರಿ ವ್ಯವಸಾಯಿಕ…
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮೊಳಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಸೇವೆ ಸಲ್ಲಿಸಿ ಗ್ರಾಮಸ್ಥರ ಹಾಗೂ ವಿದ್ಯಾಭಿಮಾನಿಗಳ ಮನದಲ್ಲಿ ತನ್ನ ಹೆಸರನ್ನು ಪ್ರತಿಷ್ಠಾಪಿಸಿಕೊಂಡು ಕಳೆದ ವರ್ಷ ನಮ್ಮನ್ನೆಲ್ಲಾ ಬಿಟ್ಟು ಹೋದರು. ಆದರೆ ಅವರ ನೆನಪು ಈ ಶಾಲೆಯಲ್ಲಿ ಅಜರಾಮರ. ಅವರು ಶಿಕ್ಷಕರಾಗಿರದೆ ನಮ್ಮೊಳಗಿನ ಅದ್ಭುತ ಶಕ್ತಿಯಾಗಿ ಹೊರಹೊಮ್ಮಿದ ಹಿರಿಯ ಚೇತನ. ಯಕ್ಷರಂಗ, ಕ್ರೀಡಾರಂಗ, ನಿರೂಪಣೆಯ ಶಕ್ತಿಯಾಗಿ ವಿವಿಧ ಮಜಲುಗಳಲ್ಲಿ ತನ್ನನ್ನು ರೂಪಿಸಿಕೊಂಡು ಶಿಕ್ಷಕ ವೃತ್ತಿಯನ್ನು ತೊಡಗಿಸಿಕೊಂಡಂತಹ ಅದ್ಭುತ ಮೇದಾವಿ. ಕ್ರೀಡಾ ಜಗತ್ತಿನ ಭೀಷ್ಮನಾಗಿ, ಅದ್ಭುತ ಶಕ್ತಿಯ ನೇತಾರರಾಗಿದ್ದುಕೊಂಡಂತಹ ಆತ್ಮೀಯ ಶಿಕ್ಷಕರಿಗೆ ನುಡಿ ನಮನ. ಮೊಳಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶೈಕ್ಷಣಿಕ ಸೇವೆಯನ್ನ ನಿರ್ವಹಿಸಿ, ಕಳೆದ ವರ್ಷ 12/09/2022 ರಂದು ದಿವಂಗತರಾಗಿರುತ್ತಾರೆ. ಅವರ ಒಂದು ವರ್ಷದ ಪುಣ್ಯ ಸ್ಮರಣೆಯ ಅಂಗವಾಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮೊಳಹಳ್ಳಿಯಲ್ಲಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ದಿ ಪ್ರಕಾಶ್ ಶೆಟ್ಟಿ ಬೆಳಗೋಡು ದೈಹಿಕ ಶಿಕ್ಷಣ ಶಿಕ್ಷಕರು. ಇವರ ಪ್ರಥಮ ಪುಣ್ಯಸ್ಮರಣೆಯ…
ಬೆಂಗಳೂರಿನ ಕೇಂಬ್ರಿಡ್ಜ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಪ್ರಾಧ್ಯಾಪಕರಾದ ಸಂದೀಪ್ ಕುಮಾರ್ ರೈರವರು ಸಲ್ಲಿಸಿದ ಮಹಾಪ್ರಬಂಧಕ್ಕೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಆ. 1 ರಂದು ನಡೆದ 23ನೇ ಘಟಿಕೋತ್ಸವದಲ್ಲಿ ಪಿ.ಹೆಚ್.ಡಿ ಪದವಿ ನೀಡಿದೆ. ಸಂದೀಪ್ಕುಮಾರ್ ರೈರವರು ಆರ್.ಎನ್.ಎಸ್. ತಾಂತ್ರಿಕ ಮಹಾವಿದ್ಯಾಲಯದಲ್ಲಿ ಇನ್ಫರ್ಮೇಷನ್ ಸೈನ್ಸ್ ವಿಭಾಗದ ಮುಖ್ಯಸ್ಥರಾದ ಡಾ. ಸುರೇಶ್. ಎಲ್ರವರ ಮಾರ್ಗದರ್ಶನದಲ್ಲಿ ‘ಸ್ಯಾಟಲೈಟ್ ಇಮೇಜ್ ಕ್ಲಾಸಿಫ಼ಿಕೇಷನ್ ಯೂಸಿಂಗ್ ಎನ್ಹ್ಯಾನ್ಸ್ಡ್ ಮೆಶಿನ್ ಲರ್ನಿಂಗ್ ಟೆಕ್ನಿಕ್ಸ್’ ಎಂಬ ಮಹಾ ಪ್ರಬಂಧವನ್ನು ಮಂಡಿಸಿದ್ದರು. ಇವರು ಕಡಬ ತಾಲ್ಲೂಕಿನ ಪುಣ್ಚಪ್ಪಾಡಿ ಗ್ರಾಮದ ನಡುಮನೆಯ ದಿ.ಸುಬ್ಬಣ್ಣರೈ ಮತ್ತು ಜಲಜಾಕ್ಷಿ ರೈರವರ ಪುತ್ರ.
ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಮಂಗಳೂರು ಇದರ ಆಶ್ರಯದಲ್ಲಿ ಮೇ 27 ಶನಿವಾರ ಹೈಸ್ಕೂಲ್ ಮತ್ತು ಕಾಲೇಜು ವಿದ್ಯಾರ್ಥಿಗಳ ಯಕ್ಷಗಾನ ಸ್ಪರ್ಧೆ, ಮೇ 28 ಭಾನುವಾರ ಯಕ್ಷಧ್ರುವ ಪಟ್ಲ ಸಂಭ್ರಮ 2023 ಅಡ್ಯಾರ್ ನ ಅಡ್ಯಾರ್ ಗಾರ್ಡನ್ ನಲ್ಲಿ ನಡೆಯಲಿದೆ ಎಂದು ಪಟ್ಲ ಫೌಂಡೇಶನ್ ಟ್ರಸ್ಟ್ ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ತಿಳಿಸಿದರು. ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕನ್ಯಾನ ಸದಾಶಿವ ಶೆಟ್ಟಿಯವರ ಸಂಭ್ರಮಾಧ್ಯಕ್ಷತೆಯಲ್ಲಿ ಯಕ್ಷಧ್ರುವ ಪಟ್ಲ ಸಂಭ್ರಮ ನಡೆಯಲಿದೆ. ಬಲಿಪ ನಾರಾಯಣ ಭಾಗವತ ವೇದಿಕೆಯಲ್ಲಿ ಬೆಳಿಗ್ಗೆ 8 ರಿಂದ ಚೌಕಿ ಪೂಜೆ, ಬಳಿಕ ಅಡ್ಯಾರ್ ಕಟ್ಟೆಯಿಂದ ಸಂಭ್ರಮಾಧ್ಯಕ್ಷರೊಂದಿಗೆ ಮೆರವಣಿಗೆ ನಡೆಯಲಿದೆ. 9.30 ಕ್ಕೆ ಪಟ್ಲ ಸಂಭ್ರಮ ಉದ್ಘಾಟನೆ ನೆರವೇರಲಿದೆ ಎಂದರು. ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು, ಎಡನೀರು ಮಠದ ಸಚ್ಚಿದಾನಂದ ಭಾರತೀ ಸ್ವಾಮೀಜಿ, ಶ್ರೀ ಕ್ಷೇತ್ರ ಮಾಣಿಲದ ಮೋಹನದಾಸ ಸ್ವಾಮೀಜಿ, ಬಾರ್ಕೂರು ಸಂಸ್ಥಾನಂ ನ ಶ್ರೀ ವಿಶ್ವಸಂತೋಷ ಭಾರತಿ…
ತಾಲೂಕಿನಲ್ಲಿ ಅತಿವೃಷ್ಟಿಯಿಂದ ನೆರೆ ಬಂದಾಗ, ಕೊರೊನಾ ಸಂದರ್ಭದಲ್ಲಿ ನೊಂದವರಿಗೆ ಹೃದಯಪೂರ್ವಕವಾಗಿ ನೆರವಾಗಿದ್ದನ್ನು ಇಂದಿಗೂ ಅವರು ಸ್ಮರಿಸುತ್ತಿರುವುದು ನನಗೆ ಸಾರ್ಥಕತೆ ತಂದಿದೆ. ರಸ್ತೆ, ಕಿಂಡಿ ಅಣೆಕಟ್ಟು, ಶಾಲಾ ಕಾಲೇಜು ಕಟ್ಟಡ, ಗ್ರಂಥಾಲಯ ನಿರ್ಮಾಣ, ಧಾರ್ಮಿಕ ಶ್ರದ್ಧಾ ಕೇಂದ್ರಗಳ ನಿರ್ಮಾಣ ಸೇರಿದಂತೆ ದಾಖಲೆಯಾಗಿ 3500 ಕೋಟಿ ರೂ. ಅನುದಾನ ತಂದಿದ್ದು ಮುಂದೆ ಎರಡನೇ ಬಾರಿ 50 ಸಾವಿರಕ್ಕೂ ಅಧಿಕ ಮತಗಳ ಅಂತರದಲ್ಲಿ ಗೆಲ್ಲಿಸಿದರೆ ತಾಲೂಕನ್ನು ದೇಶಕ್ಕೆ ಮಾದರಿ ತಾಲೂಕಾಗಿ ಅಭಿವೃದ್ಧಿ ಪಡಿಸುತ್ತೇನೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು. ಮಡಂತ್ಯಾರ್, ನಡ, ಕಲ್ಲೇರಿಯಲ್ಲಿ ಗುರುವಾರ ಚುನಾವಣ ಬಹಿರಂಗ ಪ್ರಚಾರ ಸಭೆ ನಡೆಸಿ ತಾಲೂಕಿನಲ್ಲಿ ತನ್ನ ಅವಧಿಯಲ್ಲಿ ಆದ ಅಭಿವೃದ್ಧಿ ವಿಚಾರ ಮುಂದಿಟ್ಟು ಜನರಲ್ಲಿ ಮತ ಯಾಚಿಸಿದರು. ಮುಂದಿನ ಎರಡು ವರ್ಷದಲ್ಲಿ ತಾಲೂಕಿನಲ್ಲಿ ಯಾವುದೇ ಮಣ್ಣಿನ ರಸ್ತೆ ಇಲ್ಲದ ರೀತಿಯಲ್ಲಿ ರಸ್ತೆಗಳ ಅಭಿವೃದ್ಧಿ ಮಾಡುವೆ. ತಾಲೂಕಿನ ವಿದ್ಯಾವಂತ ಯುವಕರು ದೂರದ ಊರಿಗೆ ಉದ್ಯೋಗಕ್ಕೆ ವಲಸೆ ಹೋಗದೆ ಸ್ಥಳೀಯವಾಗಿ ಉದ್ಯೋಗ ಸಿಗುವ ನಿಟ್ಟಿನಲ್ಲಿ ಉಜಿರೆಯಲ್ಲಿ 108 ಎಕರೆ…
ಈ ಬಾರಿ ಕಾಪು ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣದಲ್ಲಿರುವ ಸುರೇಶ್ ಶೆಟ್ಟಿ ಗುರ್ಮೆ ಅವರು ಓರ್ವ ಮಾದರಿ ರಾಜಕಾರಣಿ ಹಾಗೂ ನಿಜಾರ್ಥದ ಸಮಾಜ ಸೇವಕರಾಗಿದ್ದು, ಅವರು ಈ ಹಿಂದೆ ಮಾಡಿರುವ ಜನಸೇವೆಯು ಅವರ ಗೆಲುವನ್ನು ಈಗಾಗಲೇ ಖಚಿತಪಡಿಸಿದೆ ಎಂಬ ಮಾತು ಕ್ಷೇತ್ರದಲ್ಲಿ ಕೇಳಿ ಬರುತ್ತಿದೆ. ಸುರೇಶ್ ಶೆಟ್ಟಿ ಗುರ್ಮೆ ಅವರು ಓರ್ವ ಅಪರೂಪದ ರಾಜಕಾರಣಿ. ಅವರು ರಾಜಕೀಯ ಹೊರತುಪಡಿಸಿ ಚಿಂತಿಸುವ, ಮಾತನಾಡುವ ಪ್ರಬುದ್ಧತೆ ಹೊಂದಿರುವ ಉತ್ತಮ ವಾಗ್ಮಿ. ಬಿ.ಕಾಂ. ಪದವೀಧರರಾಗಿ ಬಳಿಕ ಬಳ್ಳಾರಿಗೆ ಹೋಗಿ ಔದ್ಯೋಗಿಕ ಹಾಗೂ ಉದ್ಯಮ ರಂಗದಲ್ಲಿ ತೊಡಗಿಸಿಕೊಂಡಿದ್ದರೂ ಹುಟ್ಟೂರಿನ ಜನರೊಂದಿಗೆ ನಿರಂತರ ಸಂಪರ್ಕ ಇರಿಸಿಕೊಂಡು, ಅಶಕ್ತರಿಗೆ ತನ್ನ ಕೈಲಾದ ಸಹಾಯವನ್ನು ಮಾಡುತ್ತಾ ಬಂದವರು. ಆ ಕಾರಣದಿಂದಲೇ ಅವರ ಊರಿನ ಮುಸ್ಲಿಂ, ಕ್ರಿಶ್ಚಿಯನ್ನರು ಕೂಡ ಇವರನ್ನು ಬೆಂಬಲಿಸುತ್ತಾರೆ. ಅಲ್ಪಸಂಖ್ಯಾತ ವರ್ಗದ ದೊಡ್ಡ ಪ್ರಮಾಣದ ಮತಗಳು ಈ ಬಾರಿ ಗುರ್ಮೆ ಸುರೇಶ್ ಶೆಟ್ಟಿ ಕಾರಣದಿಂದ ಕಾಪು ಕ್ಷೇತ್ರದಲ್ಲಿ ಬಿಜೆಪಿಗೆ ಬೀಳುವುದು ಖಚಿತ. ಸುರೇಶ್ ಶೆಟ್ಟಿ ಅವರು ವಿದ್ವತ್ಪೂರ್ಣ ಭಾಷಣದ…
ದ.ಕನ್ನಡ, ಉಡುಪಿ, ಮಲೆನಾಡು ಗಳನ್ನು ಕಾಡುತ್ತಿರುವ ಅಡಿಕೆ ಎಲೆಚುಕ್ಕಿ ರೋಗ…..! ಮೌನಕ್ಕೆ ಶರಣಾದ ತೋಟಗಾರಿಕೆ ಇಲಾಖೆ…!
ಅಡಿಕೆ ಬೆಳೆಗಾರರ ಸಂಕಟಕ್ಕೆ ಬೆಂಬಲ ನೀಡದ ತೋಟಗಾರಿಕಾ ಇಲಾಖೆ; ಎಲೆಚುಕ್ಕಿ ರೋಗದಿಂದ ಬಂಡವಾಳ ನೆಲಸಮ…! ತೋಟದಲ್ಲೇ ಕಮರಿ ಹೋದ ಅಡಿಕೆ ಬೆಳೆಗಾರರ ಕನಸು…..! – ಕೆ. ಸಂತೋಷ್ ಶೆಟ್ಟಿ ಮೊಳಹಳ್ಳಿ, ಕುಂದಾಪುರ ಉಡುಪಿ ಜಿಲ್ಲೆ. (ಪತ್ರಕರ್ತರು & ಮಾಧ್ಯಮ ವಿಶ್ಲೇಷಕರು) ದಕ್ಷಿಣ ಕನ್ನಡ ,ಉಡುಪಿ, ಕುಂದಾಪುರ, ಬೈಂದೂರು ಹಾಗೂ ಮಲೆನಾಡು ಪ್ರದೇಶಗಳಲ್ಲಿ ಹೆಚ್ಚು ಕಾಡುತ್ತಿರುವ ಎಲೆ ಚುಕ್ಕಿ ರೋಗದಿಂದ ರೈತ ಕಂಗಾಲಾಗಿದ್ದಾನೆ. ಅದಲ್ಲದೆ ಅಡಿಕೆ ಬೆಳೆಗಾರರು ಎಲೆ ಚುಕ್ಕಿ ರೋಗದಿಂದಾಗಿ ಹಾಕಿದ ಬಂಡವಾಳ ನೆಲಸಮವಾಗುತ್ತಿದೆ .ಇದರ ಬಗ್ಗೆ ತೋಟಗಾರಿಕೆ ಇಲಾಖೆ ಮೌನಕ್ಕೆ ಶರಣಾಗಿದ್ದು ,ವಿಪರ್ಯಾಸ ಕರ್ನಾಟಕ ರಾಜ್ಯದಾದ್ಯಂತ ತೋಟಗಾರಿಕೆ ಇಲಾಖೆಯು ಎಲೆಚುಕ್ಕಿ ರೋಗವನ್ನು ಸಮೀಕ್ಷೆ ಮಾಡುತ್ತೇವೆ ಎಂದು ಮಾಧ್ಯಮಗಳಿಗೆ ಹೇಳಿಕೆಯನ್ನು ನೀಡಿದ್ದು ನೆಪ ಮಾತ್ರಕ್ಕೆ, ದಕ್ಷಿಣ ಕನ್ನಡಗೂ ಬಾಹು ಚಾಚಿದ ಎಲೆಚುಕ್ಕಿ ರೋಗ – ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರ, ಮುಂಡಾಜೆಯ ಕೆಲವು ಅಡಿಕೆ ತೋಟಗಳಲ್ಲಿ ಎಲೆಚುಕ್ಕಿ ರೋಗ ಜಿಲ್ಲೆಗೆ ವ್ಯಾಪಿಸುವ ಆತಂಕ.ಬೆಳ್ತಂಗಡಿ ಸಂಸೆಯಿಂದ ಸುತ್ತುವರಿದು ಎಳನೀರು ಭಾಗಕ್ಕೆ ಹಬ್ಬಿದ್ದ ಎಲೆಚುಕ್ಕಿರೋಗ ಇದೀಗ…