Author: admin
ಕರ್ನಾಟಕ ಸರಕಾರವು 2022-23 ನೇ ಸಾಲಿನ ಜಾನಪದ ಶ್ರೀ ಪ್ರಶಸ್ತಿಗೆ ತೆಂಕುತಿಟ್ಟು ಯಕ್ಷಗಾನದ ಹಿರಿಯ ಕಲಾವಿದರೂ, ರಾಜ್ಯ ಪ್ರಶಸ್ತಿ ವಿಜೇತರೂ ಆಗಿರುವ ಅರುವ ಕೊರಗಪ್ಪ ಶೆಟ್ಟಿ (83) ಅವರನ್ನು ಆಯ್ಕೆ ಮಾಡಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಅವರು ಪತ್ರಿಕಾ ಗೋಷ್ಠಿಯಲ್ಲಿ ಈ ವಿಚಾರ ತಿಳಿಸಿದರು. ‘ಅರುವದವರು’ ಎಂದೇ ಪ್ರಸಿದ್ಧಿ ಅಳದಂಗಡಿಯ ಸುಬ್ಬಯ್ಯ ಶೆಟ್ಟಿ -ಕಾಂತಕ್ಕೆ ದಂಪತಿಯ ಹಿರಿಯ ಮಗನಾಗಿ 28 ನವೆಂಬರ್ 1940 ರಲ್ಲಿ ಜನಿಸಿದ ‘ಅರುವದವರು’ ತಮ್ಮ 15ನೇ ವರ್ಷದಲ್ಲಿ ಕಟೀಲು ಮೇಳವನ್ನು ಸೇರಿಕೊಂಡು 6 ದಶಕಗಳಿಂದ ವಿವಿಧ ಮೇಳಗಳಲ್ಲಿ ಕಲಾಸೇವೆ ಮಾಡುತ್ತಿದ್ದಾರೆ. ‘ಗದಾ ಯುದ್ಧ’ದ ಕೌರವ, ‘ಕೋಟಿ ಚೆನ್ನಯ’ದ ಕೋಟಿ ಮುಂತಾದ ಪಾತ್ರಗಳ ನಿರ್ವಹಣೆಯಲ್ಲೂ ಪ್ರಸಿದ್ಧಿ ಪಡೆದಿದ್ದಾರೆ. 3 ವರ್ಷ ಕಾಲ ಕಟೀಲು ಮೇಳ, ಕೂಡ್ಲು ಮೇಳದಲ್ಲಿ 2 ವರ್ಷ, ಕುಂಡಾವು ಮೇಳದಲ್ಲಿ 7 ವರ್ಷ, ಕದ್ರಿ ಮಂಗಳಾದೇವಿ, ಎಡನೀರು ಮೇಳಗಳಲ್ಲಿ ಸೇವೆ ಸಲ್ಲಿಸಿ, 3 ದಶಕಗಳ ಕಾಲ ಕರ್ನಾಟಕ ಮೇಳದಲ್ಲಿ ತಾರಾ…
ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ನಡೆಸಿಕೊಂಡು ಬರುತ್ತಿರುವ ಪ್ರತಿಷ್ಠಿತ ಆಳ್ವಾಸ್ ವಿರಾಸತ್ – 2023 ಇದೇ ಡಿ. 14ರಿಂದ 17ರ ವರೆಗೆ ನಡೆಯಲಿದೆ. ಈ ಸಾಂಸ್ಕøತಿಕ ಕಾರ್ಯಕ್ರಮದ ಭಾಗವಾಗಿ ಅಂತಾರಾಷ್ಟ್ರೀಯ ವನ್ಯಜೀವಿ ಛಾಯಾಗ್ರಹಣ ಸ್ಪರ್ಧೆ ಹಾಗೂ ಛಾಯಾಚಿತ್ರ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಈ ಸ್ಪರ್ಧೆಯಲ್ಲಿ ದೇಶ ವಿದೇಶದ ಛಾಯಾಗ್ರಾಹಕರು ಉಚಿತ ಹಾಗೂ ಮುಕ್ತವಾಗಿ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದಾಗಿದೆ ಎಂದು ಕಾರ್ಯಕ್ರಮದ ಮುಖ್ಯ ಆಯೋಜಕರು ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ ಆಳ್ವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಒಟ್ಟು 1 ಲಕ್ಷ 25 ಸಾವಿರ ಮೊತ್ತದ ನಗದು ಪ್ರಶಸ್ತಿ ವನ್ಯಜೀವಿ ಛಾಯಾಗ್ರಹಣದಲ್ಲಿ ಪ್ರಥಮ ಸ್ಥಾನ ಪಡೆದ ಛಾಯಾಗ್ರಹಣಕ್ಕೆ 25,000ರೂ, ಚಿನ್ನದ ಪದಕ ಹಾಗೂ ಪ್ರಮಾಣ ಪತ್ರ, ದ್ವಿತೀಯ 15,000ರೂ, ಬೆಳ್ಳಿಯ ಪದಕ ಹಾಗೂ ಪ್ರಮಾಣ ಪತ್ರ, ತೃತೀಯ ಸ್ಥಾನ ಪಡೆದ ಛಾಯಾಗ್ರಹಣಕ್ಕೆ 10,000ರೂ. ಕಂಚಿನ ಪದಕ ಹಾಗೂ ಪ್ರಮಾಣ ಪತ್ರದ ಪುರಸ್ಕಾರ ನೀಡಲಾಗುವುದು. ಇದಲ್ಲದೇ ತೀರ್ಪುಗಾರರ ಆಯ್ಕೆಗೆ ಪಾತ್ರವಾಗುವ ಮೂರು ಛಾಯಚಿತ್ರಕ್ಕೆ ತಲಾ…
ಅವಿಭಜಿತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಕಾರ್ಯ ವ್ಯಾಪ್ತಿಯಲ್ಲಿ ತನ್ನ ಸದಸ್ಯರ ಸೇವೆಯಲ್ಲಿ ಯಶಸ್ವಿ 29 ವರ್ಷಗಳನ್ನು ಪೂರೈಸಿ ಪ್ರಗತಿ ಪಥದಲ್ಲಿ ಮುನ್ನಡೆಯುತ್ತಿರುವ ರಾಜ್ಯದ ಅಗ್ರ ಗಣ್ಯ ಕ್ರೆಡಿಟ್ ಸಹಕಾರ ಸಂಸ್ಥೆಗಳಲ್ಲಿ ಒಂದಾದ ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ- ಓಪರೇಟಿವ್ ಸೊಸೈಟಿ 31.3.2023 ಕ್ಕೆ ರೂ.145 ಕೋಟಿ ವ್ಯವಹಾರದಲ್ಲಿ ವೃದ್ಧಿ ರೂ. 9.84 ಕೋಟಿ ನಿವ್ವಳ ಲಾಭ ಹಾಗೂ 0% ನೆಟ್ ಎನ್ ಪಿಎ ಮತ್ತು ರೂ. 3089 ಕೋಟಿ ಒಟ್ಟು ವಹಿವಾಟನ್ನು ಸಾಧಿಸಿರುವುದಕ್ಕೆ ಎಸ್ ಸಿಡಿಸಿಸಿ ಬ್ಯಾಂಕ್ ನವರು ಈ ಸಾಧನೆಯನ್ನು ಗುರುತಿಸಿ, 2022-23 ನೇ ಸಾಲಿನಲ್ಲಿ ಸರ್ವತೋಮುಖ ವ್ಯವಹಾರಾಭಿವೃದ್ದಿ ಹೊಂದಿದ ಅತ್ಯುತ್ತಮ ಕ್ರೆಡಿಟ್ ಸಹಕಾರಿ ಸಂಘ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಎಸ್ ಸಿಡಿಸಿಸಿ ಬ್ಯಾಂಕಿನ ಮಹಾಸಭೆಯಲ್ಲಿ ಬ್ಯಾಂಕಿನ ಅಧ್ಯಕ್ಷ ಡಾ. ಎಂ. ಎನ್. ರಾಜೇಂದ್ರ ಕುಮಾರ್ ರವರು, ಎಸ್ ಸಿಡಿಸಿಸಿ ಬ್ಯಾಂಕಿನ ಸರ್ವ ನಿರ್ದೇಶಕರು, ದಕ್ಷಿಣ ಕನ್ನಡ ಜಿಲ್ಲಾ ಸಹಕಾರ ಸಂಘಗಳ ಉಪಬಂಧಕರು ಹಾಗೂ ದ.ಕ. ಮತ್ತು…
ಪುತ್ತೂರು ತಾಲೂಕು ಮಹಿಳಾ ಬಂಟರ ಸಂಘದ ವತಿಯಿಂದ ಆಟಿದ ಕೂಟ ಕಾರ್ಯಕ್ರಮ ಪುತ್ತೂರು ಎಂ.ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಆ. ೫ ರಂದು ಜರಗಿತು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಉದ್ಯಮಿ ಸುಮ ಅಶೋಕ್ ಕುಮಾರ್ ರೈ “ರೈ ಎಸ್ಟೇಟ್ ಕೋಡಿಂಬಾಡಿ”ರವರು ಮಾತನಾಡಿ ತಾಲೂಕು ಮಹಿಳಾ ಬಂಟರ ಸಂಘದವರು ಎಲ್ಲರೂ ಒಂದುಗೂಡಿ ಅತ್ಯುತ್ತಮವಾದ ರೀತಿಯಲ್ಲಿ ಆಟಿ ಆಚರಣೆಯನ್ನು ಹಮ್ಮಿಕೊಂಡಿರುವುದು ತುಂಬಾ ಸಂತೋಷ ತಂದಿದೆ. ಮಹಿಳಾ ಬಂಟರು ಸಂಘಟನೆಯ ಮೂಲಕ ಸಮಾಜದಲ್ಲಿ ಸಂಘಟಿತರಾಗುವ ಮೂಲಕ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಳ್ಳುವಂತೆ ವಿನಂತಿಸಿದರು. ತಾಲೂಕು ಬಂಟರ ಸಂಘದ ಮಾಜಿ ಅಧ್ಯಕ್ಷ ಸವಣೂರು ಕೆ.ಸೀತಾರಾಮ ರೈಯವರು ಮಾತನಾಡಿ ಮಹಿಳಾ ಬಂಟರ ಸಂಘದವರು ಅತ್ಯುತ್ತಮವಾದ ಕಾರ್ಯಕ್ರಮವನ್ನು ಸಂಘಟಿಸಿ, ಹೆಸರನ್ನು ಪಡೆದಿದ್ದಾರೆ. ಸಂಘದ ಅಧ್ಯಕ್ಷೆ ಸಬಿತಾ ಭಂಡಾರಿ ಮತ್ತು ತಂಡಕ್ಕೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು. ಬಂಟರ ಯಾನೆ ನಾಡವರ ಮಾತೃ ಸಂಘದ ಉಪಾಧ್ಯಕ್ಷ ಕಾವು ಹೇಮನಾಥ ಶೆಟ್ಟಿಯವರು ಮಾತನಾಡಿ ಮಹಿಳಾ ಬಂಟರ ಸಂಘದಲ್ಲಿ ತುಂಬಾ ಪ್ರತಿಭಾವಂತರು, ಸಂಘಟಕರು ಇದ್ದಾರೆ, ಮುಂದಿನ…
ಕಡಿಮೆ ಅವಧಿಯಲ್ಲಿ ಹೆಚ್ಚು ಪ್ರದರ್ಶನ ಮತ್ತು ಅತೀ ಹೆಚ್ಚು ಪ್ರೇಕ್ಷಕರು ವೀಕ್ಷಿಸುವ ಮೂಲಕ ದಾಖಲೆ ಬರೆದ ಕಲಾಮಾಣಿಕ್ಯ, ಅಕ್ಷರಬ್ರಹ್ಮ ವಿಜಯಕುಮಾರ್ ಕೋಡಿಯಾಲ್ಬೈಲ್ ನಿರ್ದೇಶನದ ’ಶಿವಧೂತೆ ಗುಳಿಗೆ’ ನಾಟಕ ಗಿನ್ನೆಸ್ ರೆಕಾರ್ಡ್ನತ್ತ ದಾಪುಗಾಲು ಇಟ್ಟಿದೆ. ಈಗಾಗಲೇ ತುಳು ಮತ್ತು ಕನ್ನಡದಲ್ಲಿ ದೇಶ ವಿದೇಶದಲ್ಲಿ ಇಲ್ಲಿವರೆಗೆ 484 ಪ್ರದರ್ಶನ ಮೂಲಕ ದಾಖಲೆಯ ಶೋ ಕಂಡ ಈ ನಾಟಕ ಮಲಯಾಳಂ, ಮರಾಠಿ, ಇಂಗ್ಲಿಷ್ ಭಾಷೆಯಲ್ಲೂ ಪ್ರದರ್ಶನ ಕಾಣಲಿದೆ. ಇಲ್ಲಿಯವರೆಗೆ ಯಾವುದೇ ನಾಟಕ ಒಬ್ಬನ ನಿರ್ದೇಶನದಲ್ಲಿ ಐದು ಭಾಷೆಯಲ್ಲಿ ಪ್ರದರ್ಶನ ಕಂಡಿಲ್ಲ. ಸದ್ಯದಲ್ಲೇ ಐದು ಭಾಷೆಯಲ್ಲಿ ಶೋ ಕಾಣುವ ಮೂಲಕ ವಿಜಯಣ್ಣ ಗಿನ್ನೆಸ್ ರೆಕಾರ್ಡ್ನತ್ತ ಹೆಜ್ಜೆ ಇಟ್ಟಿದ್ದಾರೆ. ಸದಾ ಒಂದಿಲ್ಲೊಂದು ಪ್ರಯೋಗಗಳ ಮೂಲಕ ತುಳು ರಂಗಭೂಮಿಯನ್ನು ಜೀವಂತವಾಗಿರಿಸುವಲ್ಲಿ ವಿಶೇಷ ಕೊಡುಗೆ ನೀಡುತ್ತಿರುವವರು ಕೋಡಿಯಾಲ್ಬೈಲ್ರವರ ಈ ನಾಟಕ ಈಗಾಗಲೇ ರಾಜ್ಯಾದ್ಯಂತ ಚರಿತ್ರೆ ಸೃಷ್ಟಿಸಿ ವಿದೇಶದಲ್ಲೂ ಮೋಡಿ ಮಾಡಿದ್ದು, ತುಳುರಂಗಭೂಮಿ ನಿರ್ದೇಶಕರು ಮತ್ತೊಂದು ಐತಿಹಾಸಿಕ ದಾಖಲೆ ಮಾಡಲು ಹೊರಟಿದೆ. ಈಗಾಗಲೇ ಮಲಯಾಲಂ ಸ್ಕ್ರಿಪ್ಟ್ ಕೂಡ ಸಿದ್ಧಗೊಂಡಿದ್ದು, ಇಂಗ್ಲಿಷ್ಗೂ ಭಾಷಾಂತರ ಕಾರ್ಯ…
ದಕ್ಷಿಣ ಕನ್ನಡ ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಪುಣೆಯ ಖ್ಯಾತ ಮಕ್ಕಳ ತಜ್ಞ ಡಾ. ಸುಧಾಕರ್ ಶೆಟ್ಟಿ ಅವರ ಬೇಬಿ ಫ್ರೆಂಡ್ ಕ್ಲಿನಿಕ್ ಮತ್ತು ಬಂಟ್ಸ್ ಅಸೋಸಿಯೇಷನ್ ಪುಣೆ ಸಂಯುಕ್ತ ಆಯೋಜನೆಯಲ್ಲಿ ಉಚಿತ ಕಟೀಲ್ ಬೇಬಿ ಫ್ರೆಂಡ್ ಚೈಲ್ಡ್ ಹೆಲ್ತ್ ಕಾರ್ಡ್ ಬಿಡುಗಡೆ ಮತ್ತು ಉಚಿತ ಆರೋಗ್ಯ ತಪಾಸಣೆ ಶಿಬಿರವು ಏಪ್ರಿಲ್ 2 ರಂದು ಪುಣೆಯ ಕ್ಯಾಂಪ್ ಎಂ. ಜಿ. ರೋಡ್ ನಲ್ಲಿರುವ ಡಾ. ಸುಧಾಕರ್ ಶೆಟ್ಟಿಯವರ ಬೇಬಿ ಫ್ರೆಂಡ್ ಕ್ಲಿನಿಕ್ ನ ಆವರಣದಲ್ಲಿ ಯಶಸ್ವಿಯಾಗಿ ನಡೆಯಿತು. ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನ ಬಾಳಿಕೆ ಕುರ್ಕಿಲ್ ಬೆಟ್ಟು ಅವರು ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ಬಂಟ್ಸ್ ಅಸೋಸಿಯೇಷನ್ ಪುಣೆ ಅಧ್ಯಕ್ಷ ಗಣೇಶ್ ಹೆಗ್ಡೆ ಪುಂಚೂರು, ಪುಣೆ ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಅಜಿತ್ ಹೆಗ್ಡೆ, ಪಿಂಪ್ರಿ-ಚಿಂಚ್ವಾಡ್ ಬಂಟರ ಸಂಘದ ಅಧ್ಯಕ್ಷ ರಾಕೇಶ್ ಶೆಟ್ಟಿ ಬೆಳ್ಳಾರೆ, ಪಿಂಪ್ರಿ-ಚಿಂಚ್ವಾಡ್ ತುಳು ಕೂಟದ ಅಧ್ಯಕ್ಷ ಹರೀಶ್ ಶೆಟ್ಟಿ ಕುರ್ಕಾಲು, ಪುಣೆ ಬಂಟ್ಸ್…
ಅದೊಂದು ಹಳೆಕಾಲದ ನಾಗ ಬನ. ಬನದ ಸುತ್ತಮುತ್ತ ಹಸಿರಿನ ಛತ್ರವನ್ನೇ ಬಿಡಿಸಿಟ್ಟ ಹಾಗೆ ಹಬ್ಬಿರುವ ಮರಗಿಡಗಳು. ಸೂರ್ಯನ ಕಿರಣವನ್ನು ಬನದೊಳಗೆ ಇಣುಕಲು ಬಿಡಲಾರೆವು ಎನ್ನುವಂತೆ ದಟ್ಟೈಸಿರುವ ಬ್ರಹ್ಮ ಗಾತ್ರದ ಮರಗಳು.ಆ ಬೃಹತ್ ವೃಕ್ಷಗಳು ಮಾನವ ತೋಳು ಬೆಸೆದಂತೆ ಪ್ರಾಕೃತಿವಾಗಿ ಬೆಸೆದಿಟ್ಟ ಬೇರು ಬಿಳಲುಗಳ ನಡುವೆ ಒಂದಷ್ಟು ಜಾಗದಲ್ಲಿ ನಿಲ್ಲಿಸಿರುವ ನಾಗನ ಬಿಂಬವಿರುವ ಕಲ್ಲುಗಳು. ಹಚ್ಚ ಹಸುರಿನ ಪ್ರಕೃತಿಯ ನಡುವೆ ಮೇಳೈಸಿರುವ ನಾನಾ ಹಕ್ಕಿಗಳ ಇಂಚರ, ಬನದೊಳಗೆ ಮನಸ್ಸಿಗೆ ಆಹ್ಲಾದತೆ ನೀಡುವ ಬಗೆ ಬಗೆಯ ಹೂಗಳ ಗಂಧ, ದೂರದಲ್ಲಿ ನೀಲಿ ನೀಲಿಯಾಗಿ ಗೋಚರಿಸುವ ಪಶ್ಚಿಮ ಘಟ್ಟಗಳು. ಒಟ್ಟಿನಲ್ಲಿ ಹೃನ್ಮನ ಮುದಗೊಳಿಸುವ ಪ್ರಕೃತಿಯ ಸುಂದರ ವರ್ಣ ಚಿತ್ತಾರದ ನಡುವೆ ನಿಗೂಢವಾಗಿ ಕಾಣುವ ಆ ನಾಗ ಬನದಲ್ಲಿ, ಅದೆಷ್ಟು ತಲೆಮಾರುಗಳು ಹಾಲೆರೆದು ನಾಗನನ್ನು ಪೂಜಿಸಿ ಪಾವನರಾಗಿ ಹೋಗಿದ್ದರೋ ಯಾರಿಗೂ ಗೊತ್ತಿಲ್ಲ. ದೊಡ್ಡ ಕೂಡುಕಟ್ಟಿನ ಕುಟುಂಬದವರ ನಾಗ ಬನವಾದುದರಿಂದ ವರ್ಷಾಂಪ್ರತಿ ಪೂಜೆ ಸಲ್ಲಿಸಲು ಸೇರುವ ಕುಟುಂಬಿಕರ ಸಂಖ್ಯೆ ಅಪಾರ. ಪೂಜೆ ಮಾಡಲು ಬಂದವರ ಕಾಲಿಗೆ ಮೆತ್ತಿಕೊಳ್ಳುವ ಬನದ…
ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ ಸೇವೆಗಳೊಂದಿಗೆ ಸಾಂಸ್ಕøತಿಕ ಕಾರ್ಯಕ್ರಮಗಳಿಂದ ಮನೆ ಮಾತಾಗಿರುವ, ಪರಿಸರದ ಸ್ವಜಾತೀಯ ಬಾಂಧÀವರನ್ನು ಒಟ್ಟು ಸೇರಿಸುವ, ಅವರ ಕಷ್ಟ ಕಾರ್ಪಣ್ಯಗಳಲ್ಲಿ ಸ್ಪಂದಿಸುವ ಹಾಗೂ ಇನ್ನಿತರ ಹಲವಾರು ಧ್ಯೇಯ ಉದ್ದೇಶಗಳನ್ನು ಮುಂದಿಟ್ಟುಕೊಂಡು ಆರಂಭಗೊಂಡ ಬಂಟ್ಸ್ ಫೋರಮ್ ಮೀರಾ-ಭಾಯಂದರ್ ಪ್ರಸ್ತುತ ವರ್ಷದಲ್ಲಿ ಸ್ನೇಹ ಸಮ್ಮಿಲನ ಕಾರ್ಯಕ್ರಮವೊಂದನ್ನು ಆಯೋಜಿಸುವ ಸಲುವಾಗಿ ಪೂರ್ವಭಾವಿ ಸಭೆಯು ಸಂಘದ ಕಾರ್ಯಾಲಯದಲ್ಲಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಇನ್ನಾರವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಸ್ನೇಹ ಸಮ್ಮಿಲನ ಕಾರ್ಯಕ್ರಮವು ಫೆಬ್ರವರಿ 25 ರಂದು ಸಾಯಂಕಾಲ 3.00 ಗಂಟೆಯಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಮೀರಾರೋಡ್ ಮೇಕ್ಡೊನಾಲ್ಡ್ ಎದುರಿನ ಕನಕಿಯಾ ರಸ್ತೆಯಲ್ಲಿರುವ ಮೆಹರ್ವಾಟಿಕಾ ಸಭಾಗೃಹದಲ್ಲಿ ಆಚರಿಸಲು ನಿರ್ಧರಿಸಲಾಯಿತು. ಈ ಕಾರ್ಯಕ್ರಮದ ಸಂಪೂರ್ಣ ಮುತುವರ್ಜಿಯನ್ನು ಸಂಘದ ಗೌರವಾಧ್ಯಕ್ಷ ಬೆಳ್ಳಿಪಾಡಿ ಸಂತೋಷ್ ರೈಯವರಿಗೆ ವಹಿಸಿಕೊಡಲಾಯಿತು. ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಬಂಟ್ಸ್ ಫೆÉೂೀರಮ್ ಸದಸ್ಯರಿಂದ ಮತ್ತು ಸದಸ್ಯರ ಮಕ್ಕಳಿಂದ ವೈವಿಧ್ಯಮಯ ಕಾರ್ಯಕ್ರಮ, ಕಲರ್ಸ್ ಕನ್ನಡ ವಾಹಿನಿಯ ಎದೆ ತುಂಬಿ ಹಾಡುವೆನು ಖ್ಯಾತಿಯ ಸಂದೇಶ್ ನೀರುಮಾರ್ಗ ಇವರ ಸಂಗೀತ ರಸಮಂಜರಿ, ಚೈತನ್ಯ ಕಲಾವಿದರು…
” ದೇಹದಲ್ಲಿನ ಕೊಬ್ಬಿನಂಶ ಮತ್ತು ಯಕೃತ್ತು ಸಮಸ್ಯೆಯನ್ನು ದೂರ ಮಾಡುವ ಏಕೈಕ ಮನೆಮದ್ದು -“ಬೆಳ್ಳುಳ್ಳಿ ಸೇವನೆ…!”
” ದೇಹದಲ್ಲಿನ ಬ್ಯಾಕ್ಟೀರಿಯ ಮತ್ತು ವಿಟಮಿನ್, ನಾರಿನಂಶ ಉತ್ಪನ್ನಗಳನ್ನು ದೇಹಕ್ಕೆ ಸಾಗಿಸುವ ಮತ್ತು ಆರೋಗ್ಯ ನಿಯಂತ್ರಕ ಬೆಳ್ಳುಳ್ಳಿ ಸೇವನೆ – ಸದೃಢ ಆರೋಗ್ಯದ ದ್ಯೋತಕ…!” ಕೆ. ಸಂತೋಷ್ ಶೆಟ್ಟಿ ಮೊಳಹಳ್ಳಿ ,ಕುಂದಾಪುರ ಉಡುಪಿ ಜಿಲ್ಲೆ (ಪತ್ರಕರ್ತರು & ಮಾಧ್ಯಮ ವಿಶ್ಲೇಷಕರು) m: 9632581508 ಭಾರತೀಯ ಸಾಂಸ್ಕೃತಿಕ ವಿಚಾರಕ್ಕೆ ಸಂಬಂಧಪಟ್ಟಂತೆ ಭಾರತದ ಅಡುಗೆ ಪದಾರ್ಥಗಳಲ್ಲಿ ಬೆಳ್ಳುಳ್ಳಿಯನ್ನು ಜಾಸ್ತಿ ಬಳಸುವುದರಿಂದ ಆರೋಗ್ಯಕರ ಲಕ್ಷಣವು ಪದಾರ್ಥಗಳಲ್ಲಿ ಸೇವನೆ ಮಾಡಬೇಕು. ಬೆಳ್ಳುಳ್ಳಿ ನಮ್ಮ ಅಡುಗೆಯಲ್ಲಿ ಹೆಚ್ಚು ಬಳಸುವುದರಿಂದ ದೇಹದಲ್ಲಿನ ಕೊಬ್ಬಿನಂಶ ಮತ್ತು ನಾರಿನಾಂಶ ಹೆಚ್ಚುಗೊಳಿಸುವುದರೊಂದಿಗೆ ಅದರಲ್ಲಿನ ಪ್ರಾಮುಖ್ಯತೆಯನ್ನು ಕೂಡ ಹಿಂದಿನ ಪಾರಂಪರಿಕ ಅಡುಗೆ ಮನೆಯಲ್ಲಿ ಬಳಸಲಾಗುತ್ತದೆ. ವಿವಿಧ ಹೋಟೆಲ್ಗಳಲ್ಲಿ ಮತ್ತು ಅಡುಗೆ ಸಿದ್ಧಪಡಿಸುವ ಅಡುಗೆ ಮನೆಯಲ್ಲಿ ಬೆಳ್ಳುಳ್ಳಿ ಉತ್ತಮ ಒಗ್ಗರಣೆಯ ಉತ್ಪನ್ನವಾಗಿ ಬಳಕೆ ಮಾಡುತ್ತೇವೆ. ಅದಲ್ಲದೆ ಸಾಂಬಾರು ಪದಾರ್ಥ ಮತ್ತು ರಸಂ ಮಾಡುವಾಗ ಬೆಳ್ಳುಳ್ಳಿಯನ್ನು ಹೆಚ್ಚು ಬಳಸುತ್ತಾರೆ. ಪಾರಂಪರಿಕ ಅಡುಗೆ ಪದಾರ್ಥಗಳಲ್ಲಿ ಬೆಳ್ಳುಳ್ಳಿ ,ಕರಿಬೇವು, ಹಸಿಮೆಣಸಿನಕಾಯಿ ಹಾಗೂ ಬ್ಯಾಡಗಿ ಮೆಣಸುಗಳನ್ನು ಬಳಸಿ ಅಡುಗೆಯನ್ನು ಸಿದ್ಧಪಡಿಸುತ್ತಾರೆ. ಆ ಕಾರಣಕ್ಕಾಗಿ…
ಮಾತೃಭೂಮಿ ಕೋ ಆಪ್ ಕ್ರೆಡಿಟ್ ಸೊಸೈಟಿಯ ನೂತನ ಕಾರ್ಯಾಧ್ಯಕ್ಷರಾಗಿ ಮೋಹನದಾಸ್ ಶೆಟ್ಟಿ, ಉಪಾಧ್ಯಕ್ಷರಾಗಿ ಡಾ ಆರ್ ಕೆ ಶೆಟ್ಟಿ ಆಯ್ಕೆ
ಬಂಟರ ಸಂಘ ಮುಂಬಯಿ ಇದರ ಮಾತೃಭೂಮಿ ಕೋ ಆಪ್ ಕ್ರೆಡಿಟ್ ಸೊಸೈಟಿಯ ನೂತನ ಕಾರ್ಯಧ್ಯಕ್ಷರಾಗಿ ಹೋಟೆಲ್ ಉದ್ಯಮಿ, ಸಮಾಜ ಸೇವಕ ಮೋಹನದಾಸ್ ಶೆಟ್ಟಿ ಅವರು ಅವಿರೋಧವಾಗಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಡಾ ಆರ್ ಕೆ ಶೆಟ್ಟಿ, ಕಾರ್ಯದರ್ಶಿಯಾಗಿ ಪ್ರವೀಣ್ ಭೋಜ ಶೆಟ್ಟಿ, ಕೋಶಧಿಕಾರಿಯಾಗಿ ಸಿ ಎ ಹರೀಶ್ ಶೆಟ್ಟಿ ಯವರು ಆಯ್ಕೆಯಾದರು. ಸೊಸೈಟಿಯ ಆಡಳಿತ ಮಂಡಳಿಗೆ ಸಿ ಎ ರಮೇಶ್ ಶೆಟ್ಟಿ, ಮಹೇಶ್ ಶೆಟ್ಟಿ, ಶಶಿಧರ್ ಶೆಟ್ಟಿ, ಸುನಂದಾ ಶೆಟ್ಟಿ, ರಾಜಶ್ರೀ ಶೆಟ್ಟಿ ನಿರ್ದೇಶಕರುಗಳಾಗಿ ಆಯ್ಕೆಯಾದರು. ಮೋಹನದಾಸ್ ಶೆಟ್ಟಿಯವರು ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಚಿಂತಕರಾಗಿದ್ದುಕೊಂಡು ಮುಂಬಯಿ ಬಂಟರ ಸಂಘದಲ್ಲಿ ಕಳೆದ 18 ವರ್ಷಗಳಿಂದ ಸಕ್ರಿಯರಾಗಿದ್ದುಕೊಂಡು ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಪ್ರಸ್ತುತ ಮುಂಬಯಿ ಬಂಟರ ಸಂಘದ ಉಪಾಧ್ಯಕ್ಷರಾಗಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದಲ್ಲಿ ಕೋಶಾಧಿಕಾರಿಯಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.