Author: admin
ಮೂಡುಬಿದಿರೆ: ಸಂಶೋಧನಾ ಕ್ಷೇತ್ರದಲ್ಲಿ ಮತ್ತೊಂದು ಕ್ರಾಂತಿಕಾರಿ ಹೆಜ್ಜೆ ಇರಿಸಿದ ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜು, ‘ಸ್ಮಾರ್ಟ್ ಶಾಕ್ವೇವ್ ವೆಲಾಸಿಟಿ ಮೆಷರ್ಮೆಂಟ್ ಸಿಸ್ಟಮ್’ (ಸ್ಮಾರ್ಟ್ ಆಘಾತ ತರಂಗಗಳ ವೇಗ ಮಾಪನ ವ್ಯವಸ್ಥೆ) ಪೇಟೆಂಟ್ ಪಡೆದುಕೊಂಡಿದೆ. ಈ ಆವಿಷ್ಕಾರವು ಕೇವಲ ಆಘಾತ ತರಂಗಗಳ ವೇಗ ಮಾಪನ ಮಾತ್ರವಲ್ಲ, ವಿವಿಧ ಅನುಷ್ಠಾನಗಳು ಹಾಗೂ ಅಗ್ನಿ ಸಂಬಂಧಿತ ಹಾಗೂ ಬೆಳಕಿನ ತಂತ್ರಜ್ಞಾನದಲ್ಲಿ ವಿಶೇಷವಾಗಿ ಕ್ರಾಂತಿಕಾರಿ ಕೊಡುಗೆ ನೀಡಲಿದೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮೂಲಕ ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜು, ಸಂಶೋಧನಾ ಡೀನ್ ಡಾ. ರಿಚರ್ಡ್ ಪಿಂಟೊ ಅವರ ನಾಯಕತ್ವದಲ್ಲಿ ಈ ಸಾಧನೆ ನೆರವೇರಿದೆ. ಕಾಲೇಜಿನ ಪ್ರಾಧ್ಯಾಪಕರು ಹಾಗೂ ಆವಿಷ್ಕಾರ ಮಾಡಿದ ವಿದ್ಯಾರ್ಥಿಗಳ ಬದ್ಧತೆಯ ಪರಿಶ್ರಮದಿಂದ ಪೇಟೆಂಟ್ ಅರ್ಜಿ ಸಂಖ್ಯೆ 201941024087 ಸಾಧ್ಯವಾಗಿದೆ. ಡಾ.ರಿಚರ್ಡ್ ಪಿಂಟೊ ನೇತೃತ್ವದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ ಪೀಟರ್ ಫೆರ್ನಾಂಡಿಸ್, ಪ್ರಾಧ್ಯಾಪಕರಾದ ಡಾ. ರಾಮಪ್ರಸಾದ್ ಅರಂತಾಡಿ ತಿಮ್ಮಪ್ಪ, ಡಾ. ಜಯರಾಮ ಅರಸಲಿಕೆ ಮತ್ತು ಡಾ. ಅರ್ಜುನ್ ಸುನಿಲ್ ರಾವ್ ಅವರ ತಜ್ಞ…
ಮಹಾರಾಷ್ಟ್ರದ ಥಾಣೆ ನಗರಿಯ ಪ್ರತಿಷ್ಠಿತ ಬಂಟ ಸಮುದಾಯದ ಸಂಘಟನೆ ಥಾಣೆ ಬಂಟ್ಸ್ ಇದರ ಹತ್ತೊಂಬತ್ತನೇಯ ವಾರ್ಷಿಕ ಮಹೋತ್ಸವವು ನಗರದ ಡಾ.ಕಾಶೀನಾಥ್ ಘಾಣೇಕರ್ ನಾಟ್ಯ ಸಭಾಗೃಹದಲ್ಲಿ ಇದೇ ಬರುವ ದಿನಾಂಕ 13 ಬುಧವಾರ ವಿಜೃಂಭಣೆಯಿಂದ ಜರುಗಲಿದೆ. ಅಂದು ಅಪರಾಹ್ನ ಘಂಟೆ 1.30 ರಿಂದ ಸಂಸ್ಥೆಯ ಅಧ್ಯಕ್ಷರಾದ ಸುನಿಲ್ ಜೆ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ಜರಗಲಿರುವ ಸಾಂಸ್ಕೃತಿಕ ಕಾರ್ಯಕ್ರಮ, ಸಭಾ ಕಾರ್ಯಕ್ರಮ ಹಾಗೂ ಕಾರ್ಯಕ್ರಮ ವೈವಿಧ್ಯಗಳು ಜರುಗಲಿದ್ದು ಆಹ್ವಾನಿತ ಅತಿಥಿಗಳಾಗಿ ಪ್ರವೀಣ್ ಭೋಜ ಶೆಟ್ಟಿ ಅಧ್ಯಕ್ಷರು ಬಂಟರ ಸಂಘ ಮುಂಬಯಿ, ಸುಗ್ಗಿ ಸುಧಾಕರ್ ಶೆಟ್ಟಿ ಅಧ್ಯಕ್ಷರು ಬಂಟರ ಸಂಘ ಹುಬ್ಬಳ್ಳಿ ಧಾರವಾಡ, ಡಾ ರವಿ ಶೆಟ್ಟಿ ಮೂಡಂಬೈಲು ಉದ್ಯಮಿ ಕತಾರ್, ಕುಶಲ್ ಭಂಡಾರಿ ಮಾಜಿ ಅಧ್ಯಕ್ಷರು ಥಾಣೆ ಬಂಟ್ಸ್ ಅಸೋಸಿಯೇಷನ್, ಜಯ ಕೆ ಶೆಟ್ಟಿ ಮಾಜಿ ಅಧ್ಯಕ್ಷರು ನವೋದಯ ಕನ್ನಡ ಸಂಘ ಥಾಣೆ ಭಾಗವಹಿಸಲಿರುವರು. ಅಂದು ವಿವಿಧ ಮನೋರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ವಿಜಯಕುಮಾರ್ ಕೊಡಿಯಲ್ ಬೈಲ್ ರಚನೆಯ ಬಾಬಾ ಪ್ರಸಾದ್ ಅರಸ ನಿರ್ದೇಶನದ ಅಜ್ಜೆರ್…
ಹೌದು ಕಿನ್ನಿಗೋಳಿ ಸಮೀಪದ ಕೆಮ್ರಾಲ್ ಗ್ರಾಮದ ಪಲ್ಲೆಕುದ್ರು ಎಂಬ ಗ್ರಾಮಾಂತರ ಪ್ರದೇಶದ ಮಹಿಳೆಯೊಬ್ಬರು ಅತ್ಯಂತ ಅಪರೂಪದ ಕಲಾಪ್ರಕಾರದಲ್ಲಿ ಅಭಿರುಚಿ ತೋರಿಸುತ್ತಾ ಕಸದಿಂದ ರಸ ತೆಗೆವ ವಿಚಕ್ಷಣ ಪ್ರತಿಭೆ ಹೊಂದಿದ್ದು ಬಾಲ್ಯದ ದಿನಗಳಿಂದಲೇ ತನ್ನ ಸುತ್ತ ಮುತ್ತಲ ಕಸ ಗುಡಿಸಿ ವಠಾರವನ್ನು ಶುದ್ಧವಾಗಿರಿಸುತ್ತಾ ತನ್ನ ಮನೆ ಪರಿಸರದಲ್ಲೇ ಕಾಣ ಸಿಗುವ ಕೆಲವು ಕಸಗಳನ್ನು ಹೆಕ್ಕಿ ಆಯ್ದು ಅವುಗಳಿಗೆ ತನ್ನ ಕಲ್ಪನೆಯ ಆಕಾರ ನೀಡಿ ವರ್ಣರಂಜಿತ ಆಕರ್ಷಕ ವಸ್ತು ವೈವಿಧ್ಯಗಳನ್ನು ಸೃಜಿಸಿ ಕಂಡ ಜನರು ಮೆಚ್ಚಿ ಈಕೆಯ ಪ್ರತಿಭೆಯನ್ನು ಕೊಂಡಾಡುವಾಗ ಆಗುವ ಅಪರಿಮಿತ ಆನಂದವೇ ಮುಂದೆ ಇದೇ ಕ್ಷೇತ್ರದಲ್ಲಿ ಸಾಧನೆ ಮಾಡಿ ಇಂದು ಸುಮತಿ ಶೆಟ್ಟಿ ಅವರ ಕಲಾ ಪ್ರತಿಭೆಗೆ ವ್ಯಾಪಕ ಪ್ರಶಂಸೆ ದೊರೆಯುತ್ತಿದೆ. ಕಲೆಯೇ ಜೀವಾಳವಾಗಿರುವ ಶ್ರೀಮತಿ ಸುಮತಿ ಶೆಟ್ಟಿ ಅವರ ಕಲಾತ್ಮಕ ವಸ್ತುಗಳ ರಚನೆ ಅವರ ಮನೆ ಸುತ್ತ ಹೂದೋಟಗಳಲ್ಲಿ ಸಾರ್ವಜನಿಕರನ್ನು ಆಕರ್ಷಿಸುತ್ತದೆ. ಮದುವೆಯದ ಕೆಲವೇ ವರ್ಷಗಳಲ್ಲಿ ಪತಿಯನ್ನು ಕಳೆದುಕೊಂಡ ಎರಡು ಹೆಣ್ಣು ಮಕ್ಕಳು ಒಂದು ಗಂಡು ಮಗನೊಂದಿಗೆ ವೃದ್ಧಾಪ್ಯದ ಜೀವನ…
ಸಾಧಕರನ್ನು ಗುರುತಿಸಿ ಗೌರವಿಸುವುದರಿಂದ ಸಮಾಜಕ್ಕೆ ಪ್ರೇರಣೆ ನೀಡಿದಂತಾಗುತ್ತದೆ ಎಂದು ಶಾಸಕ ಡಾ.ವೈ.ಭರತ್ ಶೆಟ್ಟಿ ಹೇಳಿದರು. ಮರವೂರಿನ ದಿ ಗ್ರ್ಯಾಂಡ್ ಬೇಯಲ್ಲಿ ಭಾನುವಾರ ನಡೆದ ಮಂಗಳೂರು ಪ್ರೆಸ್ ಕ್ಲಬ್ ದಿನಾಚರಣೆಯಲ್ಲಿ ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿ ವಿತರಿಸಿ ಮಾತನಾಡಿದ ಅವರು ಹೈನುಗಾರಿಕೆಯ ಮೂಲಕ ಅತ್ಯಪೂರ್ವ ಸಾಧನೆ ಮಾಡಿರುವ ಮೈಮೂನಾ ಮತ್ತು ಮರ್ಝಿನಾ ಅವರು ಮಹಿಳಾ ಸಬಲೀಕರಣಕ್ಕೆ ಮಾದರಿಯಾಗಿದ್ದಾರೆ. ಅವರನ್ನು ಗುರುತಿಸಿ ಪ್ರೆಸ್ ಕ್ಲಬ್ ಪ್ರಶಸ್ತಿ ನೀಡಿರುವುದು ಶ್ಲಾಘನೀಯ ಎಂದರು. ಕಾರ್ಯಕ್ರಮ ಉದ್ಘಾಟಿಸಿದ ನಟ ನಿರ್ದೇಶಕ ದೇವದಾಸ್ ಕಾಪಿಕಾಡ್ ಮಾತನಾಡಿ “ಸಮಾಜದಲ್ಲಿ ಮಾಧ್ಯಮ ರಂಗ ಮಹತ್ವದ ಸ್ಥಾನವನ್ನು ಪಡೆದಿದೆ. ಗುರು, ಹಿರಿಯರನ್ನು ಗೌರವಿಸಿದರೆ ಮಾತ್ರ ಸಾಧನೆಯ ಹಾದಿಯಲ್ಲಿ ಯಶಸ್ಸು ಕಾಣಲು ಸಾಧ್ಯ” ಎಂದರು. ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಪತ್ರಕರ್ತರಾದ ಅನ್ನು ಮಂಗಳೂರು, ರವಿ ಪೊಸವಣಿಕೆ, ರಾಘವೇಂದ್ರ ಭಟ್, ಪ್ರಕಾಶ್ ಮಂಜೇಶ್ವರ, ಕೃಷ್ಣ ಕೋಲ್ಚಾರ್, ರಾಜೇಶ್ ಕಿಣಿ, ಅಶೋಕ್ ಶೆಟ್ಟಿ ಬಿ.ಎನ್., ರವೀಂದ್ರ ಶೆಟ್ಟಿ ಕುತ್ತೆತ್ತೂರು, ಶರತ್…
ಬಾಂಬೆ ಬಂಟ್ಸ್ ಅಸೋಷಿಯೇಶನ್ನಿನ ಮಹಿಳಾ ವಿಭಾಗದ ವತಿಯಿಂದ “ನಾರಿ ಉತ್ಸವ” ಕಾರ್ಯಕ್ರಮವು ಪ್ರತಿಭಾವಂತ ಮಹಿಳೆಯರಿಂದ ಡ್ಯಾನ್ಸ್, ಕಿರು ರೂಪಕ ಹಾಗೂ ಅನೇಕ ವೈವಿದ್ಯಮಯ ಕಾರ್ಯಕ್ರಮಗಳು ಮಾರ್ಚ್ 9 ರಂದು ಶನಿವಾರ ಜುಯಿ ನಗರದ ಬಂಟ್ಸ್ ಸೆಂಟರ್ ನ ಶಶಿಕಲಾ ಮನಮೋಹನ್ ಶೆಟ್ಟಿ ಕಾಂಪ್ಲೆಕ್ಸ್ ನ ಸೌಮ್ಯಲತಾ ಸದಾನಂದ ಶೆಟ್ಟಿ ಸಭಾಗೃಹದಲ್ಲಿ ಬಾಂಬೆ ಬಂಟ್ಸ್ ಅಸೋಸಿಯೇಷನ್ ಅಧ್ಯಕ್ಷರಾದ ಸಿಎ ಸುರೇಂದ್ರ ಕೆ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ತೇಜಾಕ್ಷಿ ಎಸ್ ಶೆಟ್ಟಿ ಅವರ ನೇತೃತ್ವದಲ್ಲಿ ನಡೆಯಿತು. ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಸಿಎ ಸುರೇಂದ್ರ ಕೆ ಶೆಟ್ಟಿ ಅವರು ಮಾತನಾಡುತ್ತಾ ನಮಗೆ ಜನ್ಮ ನೀಡಿದ ತಾಯಿ, ಜನ್ಮ ತೆತ್ತ ಭೂಮಿ ಸ್ವರ್ಗಕ್ಕಿಂತಲೂ ಮಿಗಿಲಾದದ್ದು ಎನ್ನಲಾಗುತ್ತಿದೆ. ಮಹಿಳೆಯನ್ನು ಗೌರವ, ಪ್ರೀತಿ, ವಾತ್ಸಲ್ಯದಿಂದ ಕಾಣುವ ಅಂತಹ ಸಂಸ್ಥೆ ಮತ್ತು ಮನೆ ಅಭಿವೃದ್ಧಿಯ ಪಥದತ್ತ ಸಾಗುತ್ತದೆ. ಇಂದಿನ ಸಮಾರಂಭಕ್ಕೆ ಅತಿಥಿಗಳಾಗಿ ಆಗಮಿಸಿದ ಎಲ್ಲಾ ಮೂವರು ಮಹಿಳಾ ಶಕ್ತಿಗಳು ನಮ್ಮ ಸಂಸ್ಥೆಗೆ ವಿಶೇಷ ಶೋಭೆಯನ್ನು ತಂದಿದ್ದಾರೆ.…
ಅಖಿಲ ಭಾರತ ಅಂತರ್ ವಿವಿ ಮಹಿಳಾ ಹಾಗೂ ಪುರುಷರ ಕ್ರಾಸ್ ಕಂಟ್ರಿ ಚಾಂಪಿಯನ್ಶಿಪ್ 2024 ಮಂಗಳೂರು ವಿವಿ ಮಹಿಳಾ ಮತ್ತು ಪುರುಷರ ವಿಭಾಗದಲ್ಲಿ ಸಮಗ್ರ ಚಾಂಪಿಯನ್ಸ್ ಗೆಲುವಿನಲ್ಲಿ ಆಳ್ವಾಸ್ ವಿದ್ಯಾರ್ಥಿಗಳ ನಿರ್ಣಾಯಕ ಪಾತ್ರ
ಮೂಡುಬಿದಿರೆ: ಮಹಾರಾಷ್ರ್ಟದ ಪರ್ಭಾನಿನಲ್ಲಿ ಮಾರ್ಚ್ 10 ರಂದು ನಡೆದ ಅಖಿಲ ಭಾರತ ಅಂತರ್ ವಿವಿ ಮಹಿಳಾ ಹಾಗೂ ಪುರುಷರ ಕ್ರಾಸ್ ಕಂಟ್ರಿ ಚಾಂಪಿಯನ್ಶಿಪ್ 2024 ರಲ್ಲಿ ಮಂಗಳೂರು ವಿವಿಯು ಮಹಿಳೆ ಮತ್ತು ಪುರುಷ ಎರಡು ವಿಭಾಗದಲ್ಲಿ ಚಾಂಪಿಯನ್ ಆಗಿ ಸಮಗ್ರ ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡಿತು. ಬಾಕ್ಸ್: ಮಂಗಳೂರು ವಿವಿಯನ್ನು ಪ್ರತಿನಿಧಿಸಿದ ಪುರುಷ ಮತ್ತು ಮಹಿಳೆಯರ 12 ಜನರ ತಂಡದಲ್ಲಿ 10 ಜನ ಕ್ರೀಡಾಪಟುಗಳು ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಾಗಿದ್ದು, ಮಂಗಳೂರು ವಿವಿಯು ಸಮಗ್ರ ಚಾಂಪಿಯನ್ ಆಗಿ ಹೊರ ಹೊಮ್ಮಲು ಈ ಹತ್ತು ಜನ ಕ್ರೀಡಾಪಟುಗಳು ನಿರ್ಣಾಯಕ ಪಾತ್ರ ವಹಿಸಿದ್ದಾರೆ. ವೈಯಕ್ತಿಕ ನೆಲೆಯಲ್ಲಿ ಪುರುಷ ಮತ್ತು ಮಹಿಳೆಯರ ವಿಭಾಗದಲ್ಲಿ ಸ್ಥಾನ ಪಡೆದ ಎಂಟು ಜನ ವಿದ್ಯಾರ್ಥಿಗಳು ಆಳ್ವಾಸ್ ನ ವಿದ್ಯಾರ್ಥಿಗಳಾಗಿದ್ದಾರೆ. ಅಖಿಲ ಭಾರತ ಅಂತರ್ ವಿವಿ ಪುರುಷರ ಕ್ರಾಸ್ ಕಂಟ್ರಿ ಚಾಂಪಿಯನ್ಶಿಪ್ ನಲ್ಲಿ ಮಂಗಳೂರು ವಿವಿಯು 51 ಅಂಕಗಳೊಂದಿಗೆ ಪ್ರಥಮ ಸ್ಥಾನ ಪಡೆದು ಚಾಂಪಿಯನ್ ಪಟ್ಟ ಪಡೆದರೆ 61 ಅಂಕಗಳೊಂದಿಗೆ ರಾಜಸ್ಥಾನ ವಿವಿಯು…
ಜಯಪ್ರಕಾಶ್ ಹೆಗ್ಡೆಯವರು ಕುಂದಾಪ್ರ ಕನ್ನಡ ಅಧ್ಯಯನ ಪೀಠಕ್ಕೆ ರಾಜ್ಯ ಸರ್ಕಾರದಿಂದ ಒಂದೂವರೆ ಕೋಟಿ ರೂಪಾಯಿ ಅನುದಾನ ಮಂಜೂರಾಗುವಂತೆ ಪತ್ರ ಬರೆದಿದ್ದು ಸಿದ್ದರಾಮಯ್ಯ ಸರ್ಕಾರ ಒಂದೂವರೆ ಕೋಟಿ ರೂಪಾಯಿ ಅನುದಾನವನ್ನು ಮಂಜೂರು ಮಾಡಿದೆ. ಬೆಂಗಳೂರಿನ ಕುಂದಾಪ್ರ ಕನ್ನಡ ಪ್ರತಿಷ್ಠಾನ ಬೆಂಗಳೂರಿನಲ್ಲಿ ನಡೆದ ವಿಶ್ವಕುಂದಾಪ್ರ ಕನ್ನಡ ದಿನಾಚರಣೆಯ ಸಂದರ್ಭದಲ್ಲಿ ಅಧ್ಯಯನ ಪೀಠ ಸ್ಥಾಪನೆಗೆ ಹಣ ಬಿಡುಗಡೆ ಮಾಡಿಸಿಕೊಡುವಂತೆ ಕೆ.ಜಯಪ್ರಕಾಶ್ ಹೆಗ್ಡೆಯವರಲ್ಲಿ ವಿನಂತಿಸಿಕೊಳ್ಳಲಾಗಿತ್ತು. ಅದನ್ನು ತಮ್ಮ ಪತ್ರದಲ್ಲಿ ಪ್ರಸ್ಥಾಪಿಸಿ ಮುಖ್ಯಮಂತ್ರಿಗಳಿಗೆ ಹೆಗ್ಡೆಯವರು ಪತ್ರವನ್ನು ಬರೆದಿದ್ದು ಸರ್ಕಾರ ಅದಕ್ಕಾಗಿ ಹಣವನ್ನೂ ಮಂಜೂರು ಮಾಡಿದೆ. ಈ ಹಿಂದೆ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕುಂದಾಪ್ರ ಕನ್ನಡ ಅಧ್ಯಯನ ಪೀಠದ ಸ್ಥಾಪನೆಯಾಗಲೂ ಕೂಡ ಜಯಪ್ರಕಾಶ್ ಹೆಗ್ಡೆಯವರೇ ಕಾರಣರಾಗಿದ್ದರು ಎನ್ನುವುದನ್ನು ಇಲ್ಲಿ ಸ್ಮರಿಸಲೇಬೇಕಿದೆ. -ವಸಂತ್ ಗಿಳಿಯಾರ್
ಇದೇ ಬರುವ ಮಾರ್ಚ್ 10 2024 ರಂದು ಭಾನುವಾರ ಪ್ರೊ.ರಾಮಕೃಷ್ಣ ಆಡಿಟೋರಿಯಂ ಚಿಂಚ್ವಾಡ ಪುಣೆ ಇಲ್ಲಿ ಅಪರಾಹ್ನ 3 ಗಂಟೆಗೆ ಸಂಘದ ಅಧ್ಯಕ್ಷ ರಾಕೇಶ್ ಶೆಟ್ಟಿ ಬೆಳ್ಳಾರೆ ಅವರ ಅಧ್ಯಕ್ಷತೆಯಲ್ಲಿ ಬಂಟರ ಸಂಘ ಪಿಂಪ್ರಿ ಚಿಂಚ್ವಾಡ ಇದರ ವಾರ್ಷಿಕ ಸ್ನೇಹ ಸಮ್ಮಿಲನ ಕಾರ್ಯಕ್ರಮವು ಅದ್ದೂರಿಯಿಂದ ಜರಗಲಿದೆ. ಅಂದಿನ ಸಭಾ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಹೇರಂಬ ಇಂಡಸ್ಟ್ರೀಸ್ ಇದರ ಸಿಎಂಡಿ ಕೂಳೂರು ಕನ್ಯಾನ ಸದಾಶಿವ ಶೆಟ್ಟಿ, ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಗುರುರಾಜ್ ಗಂಟಿಹೊಳೆ ಹಾಗೂ ದಾದ್ರಾ ಹವೇಲಿ ಮಹಾನಗರ ಪಾಲಿಕೆಯ ಮೇಯರ್ ಶ್ರೀಮತಿ ರಜನಿ ಗೋವಿಂದ ಶೆಟ್ಟಿ ಇವರುಗಳು ಉಪಸ್ಥಿತರಿರುವರು. ಸಂಘದ ಪ್ರತಿಭಾವಂತ ಸದಸ್ಯರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳಿದ್ದು ಕಾರ್ಯಕ್ರಮದ ಕೊನೆಯಲ್ಲಿ ಪ್ರೀತಿ ಭೋಜನದ ವ್ಯವಸ್ಥೆಯನ್ನು ಮಾಡಲಾಗಿದ್ದು ಪುಣೆ ಪರಿಸರದ ನಗರಗಳ ಬಂಟ ಬಾಂಧವರು ಸಕುಟುಂಬ ಪರಿವಾರ ಸಹಿತ ಆಗಮಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಬೇಕೆಂದು ಅಧ್ಯಕ್ಷರಾದ ರಾಕೇಶ್ ಶೆಟ್ಟಿ ಬೆಳ್ಳಾರೆ, ಪದಾಧಿಕಾರಿಗಳು, ಮಹಿಳಾ ವಿಭಾಗದ ಹಾಗೂ ಯುವ ವಿಭಾಗದ ಉಪಸಮಿತಿ ಪದಾಧಿಕಾರಿಗಳು,…
ಇಲ್ಲಿ ನೆಲೆಸಿರುವ ಕರ್ನಾಟಕದ ಸದಸ್ಯರು ಹಾಗೂ ಅವರ ಪರಿವಾರದವರಿಗಾಗಿ ವಿಹಾರ ಕೂಟವನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು. ವಿಹಾರ ಕೂಟದಲ್ಲಿ ನೂರಾರು ಸದಸ್ಯರು ಆಸಕ್ತಿಯಿಂದ ತಮ್ಮ ಪರಿವಾರ ಸಮೇತ ಭಾಗಿಯಾಗಿ ಬೆಳಗ್ಗಿನಿಂದ ಸಂಜೆಯವರೆಗೂ ಸಂಭ್ರಮಿಸಿದರು. ಸರ್ವೋತ್ತಮ ಶೆಟ್ಟಿ ಅವರ ಸಾರಥ್ಯದಲ್ಲಿ ಅಬುಧಾಬಿ ಕರ್ನಾಟಕ ಸಂಘದ ಪದಾಧಿಕಾರಿಗಳೆಲ್ಲಾ ಒಂದಾಗಿ ಸುಮಾರು ಐದು ವರುಷಗಳ ಅನಂತರ ಈ ವಿಹಾರ ಕೂಟವನ್ನು ಏರ್ಪಡಿಸಿದ್ದರು. ಬಸ್ ಪ್ರಯಾಣದ ಮೂಲಕ ಅಲ್ ಐನ್ ಪರಿಸರದಲ್ಲಿರುವ ಹಿಲ್ ಪಾರ್ಕ್ ನಲ್ಲಿ ಎಲ್ಲರೂ ಒಂದಾಗಿ ಒಂದೇ ಪರಿವಾರವೆಂಬಂತೆ ನಲಿದು ಸಂಭ್ರಮಿಸಿದರು. ರುಚಿಕರವಾದ ತಿಂಡಿ- ತಿನಿಸುಗಳು, ಊಟ ಮಾತ್ರವಲ್ಲದೇ ಜಾನಪದ ನೃತ್ಯ, ರಸ ಪ್ರಶ್ನೆ, ಮನೋರಂಜನಾತ್ಮಕವಾದ ಆಟೋಟ ಸ್ವರ್ಧೆಗಳನ್ನು ಈ ಸಂದರ್ಭದಲ್ಲಿ ಆಯೋಜಿಸಿದ್ದು ಎಲ್ಲರೂ ಈ ಚಟುವಟಿಕೆಗಳಲ್ಲಿ ಭಾಗಿಯಾಗಿ ಬೆಳಗ್ಗಿನಿಂದ ಸಂಜೆಯವರೆಗೂ ಸಂತೋಷದಿಂದ ಕಾಲ ಕಳೆದರು. ಚಳಿಗಾಲದಲ್ಲಿ ತುಂತುರು ಮಳೆ ಕೂಡ ಬರುತಿದ್ದರೂ ಸದಸ್ಯರ ಉತ್ಸಾಹಕ್ಕೇನೂ ಕೊರತೆಯಿರಲಿಲ್ಲ. ತಮ್ಮ ತಾಯ್ನಾಡಿನಿಂದ ಸಾವಿರಾರು ಮೈಲು ದೂರವಿದ್ದರೂ ಒಂದೇ ಕುಟುಂಬದಂತೆ ಬೆರೆತು ಒಂದಷ್ಟು ಸಮಯ ಸಂತೋಷವಾಗಿ ಕಾಲ ಕಳೆಯಲು…
ಶ್ರೀ ದುರ್ಗಾಂಬಿಕಾ ಅಮ್ಮನವರ ದೇಗುಲದಲ್ಲಿ ನಡೆಯಲಿರುವ 63 ನೇ ವರ್ಷದ ಏಕಾಹ ಭಜನೋತ್ಸವ ಸಮಿತಿ ಅಧ್ಯಕ್ಷರಾಗಿ ಕಿಶನ್ ಕುಮಾರ್ ರೈ ಪೆರಿಯಡ್ಕ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಶ್ರೀಕೃಷ್ಣ ಎಂ.ಆರ್. ಅವರು ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ರಾಕೇಶ್ ಪೆಲತ್ತೋಡಿ ಹಾಗೂ ಕೋಶಾಧಿಕಾರಿಯಾಗಿ ಸೀತಾರಾಮ ಗೌಡ ಎ. ಆಯ್ಕೆಯಾದರು. ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ವಠಾರದಲ್ಲಿ ಜರಗಿದ ಆಯ್ಕೆ ಸಭೆಯಲ್ಲಿ ಧಾರ್ಮಿಕ ಉತ್ಸವ ಸಮಿತಿ ಅಧ್ಯಕ್ಷ ಸುಂದರ ಗೌಡ ಮಂಡೆಕರ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸೀತಾರಾಮ ಗೌಡ ಪೊಸವಳಿಕೆ, ಮಾಜಿ ಅಧ್ಯಕ್ಷ ಜನಾರ್ದನ ಗೌಡ ಪಣೆಮಜಲು, ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಕೃಷ್ಣ ಶೆಟ್ಟಿ ಕಡಬ, ಭಜನಾ ಮಂಡಳಿ ಅಧ್ಯಕ್ಷ ಸೋಮಪ್ಪ ನಾಯ್ಕ್, ಶ್ರೀ ಶ್ರೀಕಂಠ ಸ್ವಾಮಿ, ಮಹಾಗಣಪತಿ ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಸತೀಶ್ ನಾಯ್ಕ್ ಮೇಲಿನ ಮನೆ, ಉಪನ್ಯಾಸಕ ವಿಶ್ವನಾಥ ರೈ ಪೆರ್ಲ, ಪ್ರಮುಖರಾದ ಪ್ರಕಾಶ್ ಎನ್.ಕೆ., ಅಶೋಕ್ ಕುಮಾರ್ ಪಿ, ಸೀತಾರಾಮ ಗೌಡ ಎ., ಸುಂದರ ಗೌಡ ಎ., ಶ್ರೀ ಕೃಷ್ಣ…















