Author: admin

ಸೈತಿನಕಲೆನ ಪುನೊಕು ಕುಟುಂಬದಕುಲು, ಪೊದ್ದರೆ ಇಷ್ಟೆರ್ ಕುಂಟು ಪಾಡುನ ಒಂಜಿ ಸಂಪ್ರದಾಯ. ದುಂಬು ಪುನೊಕು ಪಾಡುನ ಪನ್ದ್ ತೆಲ್ಪುದ ಕುಂಟು ತಿಕೊಂದು ಇತ್ತಿಂಡ್. ಮಲ್ಲಕುಲು ಬೊಕ್ಕ ಪಾಪದಕುಲು ಪನ್ಪಿನ ಭೇಧ ದಾಂತೆ ಮಾತೆರ್ಲಾ ಅಂಚಿನ ಕುಂಟುನೇ ಪುನೊಕು ಪಾಡೊಂದಿತ್ತಿನಿ. ಕಾಲ ಪೋಯಿಲೆಕ ಪುನೊಕು ಕುಂಟು ಪಾಡುನ ಪದ್ಧತಿ ಮಲ್ಲಾ ಮಟ್ಟ್ ಆಂಡ್. ವೇಷ್ಟಿ, ಎಡ್ಡೆ ಕಿರಾಯಿದ ಮುಂಡು. ಪೊಂಜೋವುನ ಪುನೊಕು 3-4 ಸಾವಿರ ರೂಪಾಯಿದ ಸೀರೆ ಪಾಡ್ದ್ ಮಲ್ಲಾದಿಗೆ ತೊಜಾಪುನ ಸುರು ಆಂಡ್. ಬೊಜ್ಜೊಗು ಹೊರೆ ಕಾಣಿಕೆ ಸ್ವೀಕರಿಸುವುದಿಲ್ಲ ಪನ್ಪಿನ ಹೇಳಿಕೆ ದಾಯೆಗ್ ಪಂಡ್ಡಾ ಇತ್ತೆ ಇಲ್ಲಡೇ ಬೊಜ್ಜದ ಅಟಿಲ್ ಮಲ್ಪಂದೆ ಕ್ಯಾಟರಿಂಗಿದಕಲೆಗ್ ಕೊರ್ಪಿನೆಟ್ಟಾತ್ರ. ಬೊಜ್ಜದಾನಿ ಕಿಲೆಸಿ (ಕ್ಷೌರಿಕ) ಬರ್ರೇ ಇತ್ತಿಂಡ್, ಪುನೊಕು ಪಾಡ್ದಿನ ಎಡ್ಡೆಂತಿನ ವೇಷ್ಟಿ, ಮುಂಡು ಆಯೆ ಕೊನೊಂದಿತ್ತೆ. ನಮ ಕುಚ್ಚಿ ದೆಪ್ಪರೆ ಪೋಯಡಾ ನಂಕ್ ಪೊದುಪುನು ಆಯೆ ಕೊನೊತಿನ ಪುನೊಕು ಪಾಡ್ದಿನ ಕುಂಟುನೇ 😃 ಕಿಲೆಸಿ ದೆತ್ತಿನೆರ್ದ್ ಬೊಕ್ಕ ಒರಿನ ಕುಂಟುಲೆನ್ ಡೋಲು ಬೊಟ್ಟುನ ಕೊರಗೆರ್ ಕೊನೊಂದಿತ್ತೆರ್.…

Read More

ಯಂಗ್ ಇಂಡಿಯನ್ಸ್ ಸಂಘಟನೆಯ ಮಂಗಳೂರು ಚಾಪ್ಟರ್ ವತಿಯಿಂದ ದೀಪಾವಳಿ ಹಬ್ಬದ ಮಹತ್ವವನ್ನು ಸಾರುವ ಕಾರ್ಯಕ್ರಮ ಮಂಗಳೂರಿನ ಕಾರ್ ಸ್ಟ್ರೀಟ್ ನಲ್ಲಿರುವ ಬಿ.ಇ.ಎಂ. ಶಾಲೆಯಲ್ಲಿ ನಡೆಯಿತು. ಈ ವಿಶಿಷ್ಟ ಕಾರ್ಯಕ್ರಮದಲ್ಲಿ ಮಂಗಳೂರಿನ ಅಶೋಕ ನಗರದಲ್ಲಿರುವ ಎಸ್.ಡಿ.ಎಂ. ಶಾಲೆಯ ವಿದ್ಯಾರ್ಥಿಗಳು ತಾವು ತಯಾರಿಸಿದ ಅಲಂಕರಿಸಲ್ಫಟ್ಟ ಹಣತೆ ದೀಪಗಳೊಂದಿಗೆ ಬಿ.ಎ.ಎಂ.ಶಾಲೆಗೆ ಆಗಮಿಸಿ ಅಲ್ಲಿಯ ವಿದ್ಯಾರ್ಥಿಗಳಿಗೆ ಅವುಗಳನ್ನು ಹಂಚಿದರು ಜೊತೆಗೆ ಸಂಘಟನೆಯ ವತಿಯಿಂದ ಸಿಹಿತಿಂಡಿಯನ್ನು ವಿತರಿಸಲಾಯಿತು. ದೀಪಾವಳಿ ಹಬ್ಬದ ಮಹತ್ವದ ಬಗ್ಗೆ ಯಂಗ್ ಇಂಡಿಯನ್ಸ್ ಸಂಘಟನೆಯ ಗ್ರಾಮೀಣ ಉಪಕ್ರಮದ ಸಂಚಾಲಕ ಈಶ್ವರ ಶೆಟ್ಟಿ ಮಾತನಾಡಿ, ದೀಪಾವಳಿ ಎಂದರೆ ಬೆಳಕಿನ ಹಬ್ಬ. ಮೂರು ದಿನಗಳ ಕಾಲ ಆಚರಿಸುವ ಈ ಹಬ್ಬ ಭಾರತೀಯ ಸಂಸ್ಕೃತಿಯಲ್ಲಿ ಬಹಳ ದೊಡ್ಡ ಹಬ್ಬ ಎಂದು ಪರಿಗಣಿತವಾಗಿದೆ. ದೇಶಾದ್ಯಂತ ಇದನ್ನು ಆಚರಿಸಲಾಗುತ್ತದೆ. ಕತ್ತಲೆಯನ್ನು ದೂರ ಮಾಡಲು ಹಣತೆ ಹಚ್ಚುವ ಆಚರಣೆಯ ಈ ಹಬ್ಬ ಬಹಳ ದೊಡ್ದ ಸಂದೇಶವನ್ನು ಸಾರುತ್ತದೆ ಎಂದರು. ಯಂಗ್ ಇಂಡಿಯನ್ಸ್ ಸಂಘಟನೆಯ ಕಾರ್ಯ ಚಟುವಟಿಕೆಗಳ ಬಗ್ಗೆಯೂ ಈ ಸಂದರ್ಭದಲ್ಲಿ ಅವರು ವಿವರಗಳನ್ನು ನೀಡಿದರು.…

Read More

ನನ್ನ ಕನಸು ನನಸಾದ ದಿನ: ಹಂಪನಾ ಭಾವುಕ ಮೂಡುಬಿದಿರೆ: ಸರ್ವ ಜನಾಂಗದ ಶಾಂತಿಯ ತೋಟವಾದ ಭಾರತದ ಕುಟುಂಬದ ಬಿಂಬ ‘ಚಾರು ವಸಂತ’ ಎಂದು ಹಿರಿಯ ಸಂಶೋಧಕ ಹಾಗೂ ಕೃತಿಕಾರ ಡಾ. ಹಂ.ಪ.ನಾಗರಾಜಯ್ಯ (ಹಂಪನಾ )ಹೇಳಿದರು. ಇಲ್ಲಿನ ಸ್ಕೌಟ್ ಗೈಡ್ ಕನ್ನಡ ಭವನದಲ್ಲಿ ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ಕಲಾವಿದರು ನಿರ್ದೇಶಕ ಜೀವನ್ ರಾಂ ಸುಳ್ಯ ಅವರ ನಿರ್ದೇಶನದಲ್ಲಿ ಭಾನುವಾರ ಪ್ರಸ್ತುತ ಪಡಿಸಿದ ತಮ್ಮ (ಡಾ.ಹಂ.ಪ.ನಾಗರಾಜಯ್ಯ) ‘ಚಾರುವಸಂತ’ ನಾಟಕವನ್ನು ನಗಾರಿ ಬಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಇದು ನನ್ನ ಕನಸು ನನಸಾದ ದಿನ. ನಾನು ಯುವಕ ಅಲ್ಲ. ಆದರೆ, ಬಯಸುತ್ತೇನೆ ನಿಮ್ಮ ಆಮ್ಲಜನಕ ಎಂದು ಭಾವುಕರಾದರು. ಭಾರತೀಯ ಮಾತ್ರವಲ್ಲ ಎಲ್ಲ ಕುಟುಂಬಗಳಲ್ಲೂ ಏಳುಗಾಲ ಹಾಗೂ ಬೀಳುಗಾಲ ಇರುತ್ತದೆ. ಏಳುಬೀಳುಗಳ ಜೀವನದ ಕಥನವೇ ‘ಚಾರುವಸಂತ’ಎಂದರು. ಎಲ್ಲ ಧರ್ಮ, ಮತವನ್ನು ಗೌರವಿಸಬೇಕು. ದ್ವೇಷ, ಅಸೂಯೆ, ಈμರ್É ಬಿಟ್ಟು ಬಿಡಬೇಕು. ಪರಿಸರ ಸಂರಕ್ಷಿಸಬೇಕು ಎಂಬ ಸಂದೇಶವಿದೆ ಎಂದರು. ಮೋಹನ ಆಳ್ವರ ಅಂತರಂಗಕ್ಕೆ ಬಿದ್ದ ಯಾವುದೇ ಕಲೆಯು…

Read More

ಸುರತ್ಕಲ್ ಮಹಾನಗರ ಪಾಲಿಕೆ ಕಚೇರಿಗೆ ಭೇಟಿ ನೀಡಿದ ಮೇಯರ್ ಸುಧೀರ್ ಶೆಟ್ಟಿ ಅವರನ್ನು ಸುಭಾಷಿತ ನಗರ ರೆಸಿಡೆನ್ಸಿ ವೆಲ್ಫೇರ್ ಎಸೋಸಿಯೇಶನ್ (ರಿ) ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಎಸೋಸಿಯೇಶನ್ ನ ಅಧ್ಯಕ್ಷ ರಮೇಶ್ ಶೆಟ್ಟಿ ಅವರು ಸುಭಾಷಿತನಗರದ ಅಭಿವೃದ್ದಿಯ ಕುರಿತು ಚರ್ಚಿಸಿದರು. ಎಸೋಸಿಯೇಶನ್ ಪದಾಧಿಕಾರಿಗಳಾದ ಪುಷ್ಪರಾಜ ಶೆಟ್ಟಿ ಕುಡುಂಬೂರು, ಚಂದ್ರಶೇಖರ ಶೆಟ್ಟಿ, ನರಸಿಂಹ ಸುವರ್ಣ, ಚರಣ್ ಜೆ ಶೆಟ್ಟಿ ಕುಳಾಯಿಗುತ್ತು, ಲಕ್ಷ್ಮೀ ಚಂದ್ರಶೇಖರ್ ಆಚಾರ್ಯ, ತನುಜಾ, ಪ್ರೇಮನಾಥ ಹೆಗ್ಡೆ, ತಾರಾನಾಥ ಸಾಲ್ಯಾನ್, ಶಂಕರ ಶೆಟ್ಟಿ, ರಾಘವೇಂದ್ರ ರಾವ್ ಹಾಗೂ ಸುರತ್ಕಲ್ ಬಂಟರ ಸಂಘದ ನಿಕಟಪೂರ್ವ ಅಧ್ಯಕ್ಷ ಸುಧಾಕರ ಎಸ್ ಪೂಂಜ, ಕಾರ್ಯದರ್ಶಿ ಲೀಲಾಧರ ಶೆಟ್ಟಿ, ರತ್ನಾಕರ ಶೆಟ್ಟಿ, ಚಂದ್ರಕಲಾ ಶೆಟ್ಟಿ, ಕಾರ್ಪೋರೇಟರ್ ನಯನ ಕೋಟ್ಯಾನ್, ಮತ್ತಿತರರು ಉಪಸ್ಥಿತರಿದ್ದರು. ಸುರತ್ಕಲ್ ಪ್ರದೇಶದ ಸಮಗ್ರ ಅಭಿವೃದ್ದಿಗೆ ಶ್ರಮಿಸುವುದಾಗಿ ಮೇಯರ್ ತಿಳಿಸಿದರು. ಮೂಲ ಸೌಕರ್ಯ ಅಭಿವೃದ್ದಿ, ಕುಂಠಿತಗೊಂಡ ಕಾಮಗಾರಿಗಳನ್ನು ಪೂರ್ಣಗೊಳಿಸಲು ಪ್ರಯತ್ನಿಸಲಾಗುವುದು. ಒಳಚರಂಡಿ, ದಾರಿದೀಪ, ರಸ್ತೆ, ಪ್ರತಿಯೊಂದು ಸಮಸ್ಯೆಗಳ ಬಗ್ಗೆಯೂ ಗಮನಹರಿಸಿ, ಸೇವಕನಾಗಿ ಕೆಲಸ ಮಾಡುವುದಾಗಿ ಮೇಯರ್…

Read More

ಗೆಳೆಯರ ಸ್ವಾವಲಂಬನ ವೆಲ್ಫೇರ್ ಅಸೋಸಿಯೇಷನ್ ನಿಂದ ಶ್ರಾವಣ ಸಂಭ್ರಮದ ಕವಿಗೋಷ್ಠಿಯು ದಿನಾಂಕ 19/08/23 ಶನಿವಾರ ಇಳಿ ಹೊತ್ತು 04 ರಿಂದ ವಿನಾಯಕ ಸಭಾಗೃಹ ಗಣೇಶ ಮಂದಿರ ಪಡ್ಕೆ ಮಾರ್ಗ ಡೊಂಬಿವಲಿ ಪೂರ್ವ ಇಲ್ಲಿ “ಶ್ರಾವಣ ಸಂಭ್ರಮದ ಕವಿ‌ಗೋಷ್ಠಿ” ‌ನೇರವೇರಿತು. ಕಾರ್ಯಕ್ರಮದ ಅಧ್ಯಕ್ಷತೆಯ ಸ್ಥಾನದಿಂದ ಮಾತನಾಡಿದ ಖ್ಯಾತ ಅಂಕಣಗಾರ್ತಿ, ಸಾಹಿತಿ ಲತಾ ಸಂತೋಷ್ ಶೆಟ್ಟಿ ಮುದ್ದುಮನೆ ಕವಿಗೋಷ್ಠಿಯ ಬಗ್ಗೆ ಹರ್ಷ ವಕ್ಯಪಡಿಸುತ್ತಾ, 7 ಜನ ‌ಕವಿಗಳು ಓದಿದ ಬೇರೆ ಬೇರೆ ಕವನಗಳು ಬಗೆ ಬಗೆಯ ಅನುಭವವನ್ನು ನೀಡಿತು. ಯಾರ ಕವನವು ಜಳಾಗಿಲ್ಲ. ಶ್ರಾವಣವೇ ಹಾಗೆ ತಾನೆ ಸಂಭ್ರಮದ ಸಂಕೇತ. ದೇವತೆಗಳು ಸಮುದ್ರ ಮಂಥನ ‌ ಮುಗಿಸಿ ಭೂವಿಯಲ್ಲಿ ‌ನೆಲೆ ನಿಂತ ಸಮಯ. ವರ್ಷದ ಹನ್ನೆರಡು ಮಾಸಕ್ಕೆ ತನ್ನದೆ ಆದ ಪ್ರಾಮುಖ್ಯತೆ ಇದೆಯಾದರೂ ಶ್ರಾವಣಕ್ಕೆ ಅದರದ್ದೆ ಆದ ಮಹತ್ವ ಇದೆ. ಇಂದಿಲ್ಲಿ ಶ್ರಾವಣ ತಿಂಗಳಲ್ಲಿ, ಶ್ರಾವಣದ ಬಗ್ಗೆ ಕವನ ‌ವಾಚಿಸಿದ ಕವಿಗಳಿಗೆ ಅಭಿನಂದನೆಯೊಂದಿಗೆ ಶುಭ ಕೋರಿದರು ಹಾಗೂ ಆಯೋಜಕರಿಗೆ ವಂದನೆಗಳನ್ನು ಸಲ್ಲಿಸಿದರು. ಕವಿಗೋಷ್ಠಿಯ ಅಧ್ಯಕ್ಷರಾದ…

Read More

‘ಒಂದು ಮೊಟ್ಟೆಯ ಕಥೆ’ ಮೂಲಕ ಸೈಲೆಂಟ್‌ ಆಗಿ ಬಂದ ರಾಜ್‌ ಬಿ ಶೆಟ್ಟಿ ಈಗ ಸಖತ್‌ ವೈಲೆಂಟ್‌ ಆಗಿದ್ದಾರೆ. ಈಗಾಗಲೇ ‘ಗರುಡ ಗಮನ ವೃಷಭ ವಾಹನ’ ಮೂಲಕ ಕೈಗೆ ರಕ್ತಮೆತ್ತಿಕೊಂಡಿದ್ದ ರಾಜ್‌ ಶೆಟ್ಟಿ ಈ ಬಾರಿ ಇಡೀ ಪೂರ್ತಿ ದೇಹಕ್ಕೆ ರಕ್ತಾಭಿಷೇಕ ಮಾಡಿಕೊಂಡಂತಿದೆ. ಅವರ ಈ ರಕ್ತತರ್ಪಣಕ್ಕೆ ಕಾರಣವಾಗಿರೋದು ‘ಟೋಬಿ’. ನಿಮಗೆ ಗೊತ್ತಿರುವಂತೆ ರಾಜ್‌ ಬಿ ಶೆಟ್ಟಿ ‘ಟೋಬಿ’ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದು, ಆ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಚಿತ್ರ ಆಗಸ್ಟ್‌ 25ರಂದು ತೆರೆಕಾಣುತ್ತಿದೆ. ಈಗಾಗಲೇ ಚಿತ್ರದ ಫ‌ಸ್ಟ್‌ಲುಕ್‌ ಬಿಡುಗಡೆಯಾಗಿದ್ದು, ಸಿನಿಮಾದೊಳಗಿನ ಮಾಸ್‌ ಎಲಿಮೆಂಟ್ಸ್‌ ಅನ್ನು ಎತ್ತಿಹಿಡಿದಿದೆ. ರೆಡ್‌ ಥೀಮ್‌ನೊಂದಿಗೆ ಮೂಡಿಬಂದಿರುವ ಈ ಫ‌ಸ್ಟ್‌ಲುಕ್‌ನಲ್ಲಿ ರಾಜ್‌ ಬಿ ಶೆಟ್ಟಿ ರಗಡ್‌ ಆಗಿ ಕಾಣಿಸಿಕೊಂಡಿದ್ದಾರೆ. ಮುಖದ ತುಂಬಾ ಕುರುಚಲು ಗಡ್ಡ, ಮೂಗಿನಲ್ಲೊಂದು ದೊಡ್ಡ ಮೂಗುತಿ, ತಲೆ, ಮೂಗಿನ ಮೇಲೆ ರಕ್ತಸೋರುತ್ತಿರುವ ಗಾಯ… ಹೀಗೆ ಔಟ್‌ ಅಂಡ್‌ ಔಟ್‌ ಮಾಸ್‌ ಫೀಲ್‌ ಕೊಡುವ ‘ಟೋಬಿ’ ಚಿತ್ರದ ಫ‌ಸ್ಟ್‌ಲುಕ್‌ ವೈರಲ್‌ ಆಗಿದೆ. ಈಗ ಚಿತ್ರದ…

Read More

ಒಂದು ಕಾಲದಲ್ಲಿ ಆರ್ಥಿಕವಾಗಿ ಬಡತನದ ಬೇಗೆಯಲ್ಲಿ ಬಳಲುತ್ತಿದ್ದ ಯಕ್ಷಗಾನ‌ ಕಲಾವಿದರಿಗೆ ಆಸರೆಯ ದ್ಯೋತಕವಾಗಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಮೂಲಭೂತ ಸಹಕಾರಗಳನ್ನು ನೀಡುತ್ತಾ ಜನ ಮಾನಸದಲ್ಲಿ ನೆಲೆಗೊಳ್ಳುತ್ತಿರುವ ನಡುವೆ ಈ ಪ್ರೋತ್ಸಾಹಕ ಸಂಘಟನೆಗೆ ಪೋಷಕವಾಗಿ ಹಲವಾರು ದಾನಿಗಳು ತಮ್ಮ ಕೈಲಾದ ಕೊಡುಗೆ ನೀಡುತ್ತಾ ಯಕ್ಷ ಕಲೆಯನ್ನು ಶ್ರೀಮಂತಗೊಳಿಸುತ್ತಿರುವುದು ವರ್ತಮಾನದಲ್ಲಿ ಕಾಣಬಹುದಾಗಿದೆ. ಇದಕ್ಕೊಂದು ಸ್ಪಷ್ಟ ನಿದರ್ಶನ ಎಂಬಂತೆ ಪ್ರಪ್ರಥಮ ಬಾರಿಗೆ ಗಲ್ಫ್ ರಾಷ್ಟ್ರದಲ್ಲಿ ನಡೆದ ವಿಶ್ವ ಪಟ್ಲ ಸಂಭ್ರಮವು ಸಾವಿರಾರು ಯಕ್ಷಾಭಿಮಾನಿಗಳ ಸಮ್ಮುಖದಲ್ಲಿ ಯಶಸ್ವಿಯಾಗಿ ಜರುಗಿರುವುದಲ್ಲದೆ ವಿವಿದೆಡೆಯ ಗಣ್ಯರನ್ನು ವಿಶ್ವ ಮಟ್ಟದಲ್ಲಿ ಗುರುತಿಸಿ ಸಂಭ್ರಮಿಸಿರುವುದು ಈ ಬಾರಿ ದುಬೈಯಲ್ಲಿ ನಡೆದ ವಿಶ್ವ ಪಟ್ಲ ಸಂಭ್ರಮದ ಸವಿಶೇಷತೆಯಾಗಿದೆ. ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ ಮತ್ತು ಪಟ್ಲ ಘಟಕ ದುಬೈಯ ಸಹಯೋಗದೊಂದಿಗೆ ಜೂನ್ 11ರಂದು ದುಬೈಯ ಇಂಡಿಯನ್ ಹೈಸ್ಕೂಲ್ ನ ಶೇಖ್ ರಷೀದ್ ಸಭಾಂಗಣದಲ್ಲಿ ಜರಗಿದ ದುಬೈ ಯಕ್ಷೋತ್ಸವ 2023 ಮತ್ತು ವಿಶ್ವ ಪಟ್ಲ ಸಂಭ್ರಮಕ್ಕೆ ಸಾವಿರಾರು ಮಂದಿ ಸಾಕ್ಷಿಯಾಗಿರುವುದಲ್ಲದೆ ವಿವಿಧ ಕೊಡುಗೆ ನೀಡುವ ಜತೆಗೆ ಅವಿಸ್ಮೆಣೀಯವಾಗಿ…

Read More

ಗೋವಿನ ಪ್ರತಿಯೊಂದು ಉತ್ಪನ್ನವೂ ಪವಿತ್ರವಾದುದು. ಕೃಷಿ, ಗೋವು ಮತ್ತು ಮನುಷ್ಯನ ನಡುವೆ ಅವಿನಾಭಾವ ಸಂಬಂಧವಿದೆ ಎಂದು ಉಡುಪಿ ಸೋದೆ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಹೇಳಿದರು. ಅವರು ಹಾರಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಕಾಮಧೇನು, ಕಲ್ಪತರು ಸೇವಾ ಸಮಿತಿ ಅಶ್ರಯದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಜರಗಿದ ಗೋ ಸಮಾವೇಶ ಮತ್ತು ಕೃಷಿ ಮೇಳ ಉದ್ಘಾಟಿಸಿದರು. ಕೃಷಿಗೆ ಗೋವು ಪೂರಕ. ಯುವ ಪೀಳಿಗೆ ಕೃಷಿ, ಗೋವಿನ ಮಹತ್ವ ಅರಿಯುವಂತಾಗಲಿ. ಸಮ್ಮೇಳನವು ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸಲು ಪ್ರೇರಣೆಯಾಗಲಿ ಎಂದರು. ಗೋವಿನಲ್ಲಿ 33 ಕೋಟಿ ದೇವತೆಗಳ ಆಶ್ರಯವಿದೆ. ದೇವಸ್ಥಾನಕ್ಕೆ ತೆರಳಿ ಪೂಜಿಸುವುದಕ್ಕಿಂತ ಮನೆಯಲ್ಲೇ ಗೋವಿನ ಸಾಕಾಣಿಕೆ, ಆರಾಧನೆ ಅಧಿಕ ಪುಣ್ಯದಾಯಕ ಎಂದರು. 5 ರೂ. ಹೆಚ್ಚಳ : ಕೃಷಿಕ ಹಾಗೂ ಹೈನುಗಾರರ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತಿಲ್ಲ. ಪ್ರತಿಕೂಲ ವಾತಾವರಣವಿದೆ. ಹಾಲಿನ ಉತ್ಪಾದನೆ ಕುಸಿತಗೊಂಡಿದೆ. ಆದ್ದರಿಂದ ಹಾಲಿಗೆ ಕನಿಷ್ಠ 5 ರೂ. ಹೆಚ್ಚುವರಿಯಾಗಿ ದೊರೆಯಬೇಕು ಎಂದು ರವಿರಾಜ ಹೆಗ್ಡೆ ಕೊಡವೂರು…

Read More

– ಕೆ .ಸಂತೋಷ್ ಶೆಟ್ಟಿ ಮೊಳಹಳ್ಳಿ, ಕುಂದಾಪುರ .ಉಡುಪಿ ಜಿಲ್ಲೆ. ಪರಿಸರದಲ್ಲಿ ಸಿಗುವ ಸಸ್ಯಜನ್ಯ ಸಂಪತ್ತುಗಳಲ್ಲಿ ಪುದಿನ ಎಂಬ ಎಲೆ ದೇಹಕ್ಕೆ ಪರಿಣಾಮಕಾರಿ ಸಂಪತ್ತನ್ನು ನೀಡುತ್ತದೆ. ಅದಲ್ಲದೆ ಪ್ರಾಕೃತಿಕವಾಗಿ ನೀಡುವಂತಹ ಪುದಿನ ದೈನಂದಿನ ಆಹಾರ ಪದಾರ್ಥಗಳಲ್ಲಿ ಮತ್ತು ಅಡುಗೆ ಪದಾರ್ಥಗಳಲ್ಲಿ ಹೆಚ್ಚಾಗಿ ಬಳಸುತ್ತಾರೆ ಅದಲ್ಲದೆ, ಪುದಿನ ಸೊಪ್ಪಿನಿಂದ ಬೇಕಾಗುವಂತಹ ಸಸ್ಯಜನ್ಯ ಸಂಪತ್ತುಗಳಿಂದ ವಿಶಿಷ್ಟ ರೀತಿಯಲ್ಲಿ ನಾವು ವಿವಿಧ ಆಹಾರ ಪದಾರ್ಥಗಳ ತಯಾರಿಕೆಯಲ್ಲಿ ಮತ್ತು ಆಹಾರದ ವಿಶಿಷ್ಟ ಗುಣಲಕ್ಷಣಗಳನ್ನು ಹೊಂದಿರುವಂತಹ ಪ್ರಕೃತಿಗೆ ಸೀಮಿತವಾಗಿರುವಂತಹ ಆಹಾರ ಪದಾರ್ಥಗಳನ್ನು ಸಿದ್ಧಪಡಿಸುವಾಗ ಅಥವಾ ದೇಹಕ್ಕೆ ಬೇಕಾಗುವಂತಹ ಪ್ರೋಟೀನ್ ಮತ್ತು ಪೌಷ್ಟಿಕಾಂಶಗಳನ್ನು ಅಗಾಧ ಪ್ರಮಾಣದಲ್ಲಿ ಪುದಿನ ಸೊಪ್ಪು ನೀಡುತ್ತದೆ ಸೊಪ್ಪಿನ ಬಹುಮುಖ್ಯ ಗುಣಗಳಾದ ವಿಟಮಿನ್ ಸಿ ಹಾಗೂ ಕ್ಯಾಲೋರಿ ಅಂತಹ ಅಂಶಗಳನ್ನು ಎಚ್ಚೆತವಾಗಿ ನೀಡುವುದಲ್ಲದೆ ರಕ್ತ ಪರಿಚಲನೆಗೆ ಇದು ಸಹಕಾರಿಯಾಗುತ್ತದೆ ಪುದಿನ ಸೊಪ್ಪಿನಲ್ಲಿ ಇರುವಂತಹ ಕೈ ಅಂಶವು ದೇಹದಲ್ಲಿನ ಸಕ್ಕರೆ ಕಾಯಿಲೆ ಮಧುಮೇಹ ಮಲಬದ್ಧತೆಯನ್ನು ನಿವಾರಣೆಗೆ ಇದು ಫಲಪ್ರದವಾಗುತ್ತದೆ.  ಪುದೀನಾ ಅನ್ನು ಇಂದಲೂ ಬಳಕೆ ಮಾಡಲಾಗುತ್ತಿದೆ. ಪುದೀನಾ ಹಸಿರು…

Read More

ಪುಣೆ ಬಂಟರ ಸಂಘದ ವಿಶ್ವಸ್ಥರಾಗಿ ಮುಂಬಯಿಯ ಖ್ಯಾತ ಉದ್ಯಮಿ ಹಾಗೂ ಸಮಾಜಸೇವಕರಾದ ಕನ್ಯಾನ ಸದಾಶಿವ ಶೆಟ್ಟಿ ಹಾಗೂ ಪ್ರವೀಣ್ ಭೋಜ ಶೆಟ್ಟಿಯವರು ಗೌರವಾದರಗಳಿಂದ ನೇಮಕಗೊಂಡಿದ್ದಾರೆ . ಪುಣೆ ಬಂಟರ ಸಂಘದ ಅಧ್ಯಕ್ಷರಾದ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆ ಇತ್ತೀಚಿಗೆ ಸಂಘದ ಪದಾಧಿಕಾರಿಗಳೊಂದಿಗೆ ಮುಂಬಯಿಯ ಅವರ ನಿವಾಸಗಳಿಗೆ ತೆರಳಿ ಸಂಘದ ವತಿಯಿಂದ ಅವರನ್ನು ಗೌರವಿಸಿದರು . ಈ ಸಂದರ್ಭ ಪುಣೆ ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಅಜಿತ್ ಕೆ ಹೆಗ್ಡೆ , ಜತೆ ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ ನಿಟ್ಟೆ,ದಕ್ಷಿಣ ಪ್ರಾದೇಶಿಕ ಸಮಿತಿಯ ಪದಾಧಿಕಾರಿಗಳಾದ ಸುಧಾಕರ ಸಿ ಶೆಟ್ಟಿ ,ದಾಮೋಧರ ಶೆಟ್ಟಿ ,ವಸಂತ್ ಶೆಟ್ಟಿ ಹಾಗೂ ದಿನೇಶ್ ಶೆಟ್ಟಿಯವರು ಉಪಸ್ಥಿತರಿದ್ದರು. ಉದ್ಯಮ ಕ್ಷೇತ್ರದ ಮೇರು ಸಾಧಕ ಕನ್ಯಾನ ಸದಾಶಿವ ಶೆಟ್ಟಿ ಮೂಲತಃ ಮಂಜೇಶ್ವರ ಕನ್ಯಾನ ಕುಳೂರಿನ ಫಕೀರ ಶೆಟ್ಟಿ ಹಾಗೂ ಶೀಲಾವತಿ ದಂಪತಿಗಳ ಸುಪುತ್ರರಾದ ಸದಾಶಿವ ಶೆಟ್ಟಿಯವರು ಪ್ರಾಥಮಿಕ ಹಾಗೂ ಹೈಸ್ಕೂಲ್ ಶಿಕ್ಷಣವನ್ನು ಹುಟ್ಟೂರಿನಲ್ಲೇ ಮುಗಿಸಿ ಕಾಲೇಜು ಶಿಕ್ಷಣವನ್ನು ಮಂಗಳೂರಿನ ಸಂತ…

Read More