Author: admin
ಮುತ್ತು ಗೋಪಾಲ್ ಫಿಲ್ಮ್ಸ್ ಬಾರ್ಕೂರು ಲಾಂಛನದಲ್ಲಿ ತಯಾರಾದ ಗಬ್ಬರ್ ಸಿಂಗ್ ತುಳು ಚಲನಚಿತ್ರ ಮೇ 3 ರಂದು ಕರಾವಳಿ ಜಿಲ್ಲೆಯಾದ್ಯಂತ ತೆರೆ ಕಾಣಲಿದೆ. ಗಬ್ಬರ್ ಸಿಂಗ್ ತುಳು ಸಿನಿಮಾ ವಿಭಿನ್ನ ಕತೆಯನ್ನೊಳಗೊಂಡಿದ್ದು, ಉತ್ತರ ಪ್ರದೇಶದಲ್ಲಿ ನಡೆದ ಘಟನೆಯೊಂದನ್ನು ಆಧರಿಸಿ ಪ್ರೇಕ್ಷಕರಿಗೆ ಇಷ್ಟವಾಗುವ ರೀತಿಯಲ್ಲಿ ಕತೆಯನ್ನು ಹೆಣೆಯಲಾಗಿದೆ. ಉತ್ತಮ ಕತೆ, ನವಿರಾದ ಹಾಸ್ಯದೊಂದಿಗೆ ಸಿನಿಮಾ ಚೆನ್ನಾಗಿ ಮೂಡಿ ಬಂದಿದೆ. ಸಿನಿಮಾದಲ್ಲಿ ಆರು ಹಾಡು, ನಾಲ್ಕು ಫೈಟ್ಸ್ ಇದೆ. ಸಿನಿಮಾಕ್ಕೆ ಸುರತ್ಕಲ್, ಚಿತ್ರಾಪುರ, ಬೈಕಂಪಾಡಿ ಮೊದಲಾದ ಪ್ರದೇಶಗಳಲ್ಲಿ ಸಿನಿಮಾಕ್ಕೆ ಮೂರು ಹಂತಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ನಾಯಕ ನಟನಾಗಿ ಶರಣ್ ಶೆಟ್ಟಿ, ನಾಯಕಿಯಾಗಿ ವೆನ್ಸಿಟಾ ಅಭಿನಯಿಸಿದ್ದಾರೆ. ಸಮಾಜದಲ್ಲಿ ಅಶಾಂತಿ ಸೃಷ್ಟಿಯಾದಾಗ ಮತ್ತೆ ಶಾಂತಿ ನೆಲೆಸುವಂತೆ ಮಾಡುವ ಖಡಕ್ ಅಧಿಕಾರಿ ಪಾತ್ರದಲ್ಲಿ ಶರಣ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ. “ಗಬ್ಬರ್ ಸಿಂಗ್” ಆ್ಯಕ್ಷನ್ ಥ್ರಿಲ್ಲರ್ ಫ್ಯಾಮಿಲಿ ಓರಿಯೆಂಟೆಡ್ ಫಿಲ್ಮ್ ಆಗಿದೆ. ಸಿನಿಮಾ ಕತೆ ಚಿತ್ರಕತೆ ಸತೀಶ್ ಪೂಜಾರಿ ಬಾರ್ಕೂರ್, ನಿರ್ದೇಶನದ ಜವಾಬ್ದಾರಿಯನ್ನು ಪ್ರದೀಪ್ ವಹಿಸಿದ್ದಾರೆ. ಮಧು ಸುರತ್ಕಲ್ ಸಂಭಾಷಣೆ ರಚಿಸಿದ್ದಾರೆ.…
ಪುಣ್ಯಭೂಮಿ ತುಳುನಾಡಿನಿಂದ ಕರ್ಮಭೂಮಿ ಮಹಾರಾಷ್ಟ್ರ ಸೇರಿದ ಬಂಟರು ಥಾಣೆ ಪರಿಸರದಲ್ಲಿ 19 ವರ್ಷಗಳ ಹಿಂದೆ ಒಟ್ಟು ಸೇರಿ ಸಮಾಜದ ಉನ್ನತಿಗಾಗಿ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದಾರೆ. ಪ್ರಸ್ತುತ ಸಾಮಾಜಿಕ ಸೇವೆಯಲ್ಲಿ ಥಾಣೆ ಬಂಟ್ಸ್ ಬಲಿಷ್ಠ ಹಾಗೂ ಪರಿಪೂರ್ಣವಾದ ಸಂಸ್ಥೆಯಾಗಿದೆ. ಇದರ ಶ್ರೇಯಸ್ಸು ಅಸೋಸಿಯೇಷನನ್ನು ಕಟ್ಟಿ ಬೆಳೆಸಿದ ನಮ್ಮ ಹಿರಿಯರಿಗೆ ಸಲ್ಲುತ್ತದೆ. ವರ್ಷ ಕಳೆದಂತೆ ಸಂಘ-ಸಂಸ್ಥೆಗಳು ಗಟ್ಟಿಯಾಗುತ್ತದೆ. ಅಂತೆಯೇ ಥಾಣೆ ಬಂಟ್ಸ್ ಕೂಡಾ ತುಂಬಾ ಗಟ್ಟಿಯಾಗಿದ್ದು ಬೆಳೆಯುತ್ತಿದೆ. ಸಾವಿರಾರು ಮಂದಿ ಸಮಾಜ ಬಾಂಧವರು ಪಾಲ್ಗೊಂಡ ಈ ವಾರ್ಷಿಕೋತ್ಸವದಲ್ಲಿ ಥಾಣೆ ಬಂಟ್ಸ್ ನ ಶಕ್ತಿ ಸಾಮರ್ಥ್ಯ ಕೂಡಾ ತೋರಿ ಬಂದಿದೆ. ಎಲ್ಲಾ ಮಾಜಿ ಅಧ್ಯಕ್ಷರುಗಳೆಲ್ಲಾ ಈಗಲೂ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡು ಸೇವೆಯನ್ನು ಸಲ್ಲಿಸಿ ಮಾರ್ಗದರ್ಶನ ನೀಡುತ್ತಿರುವುದು ಅಸೋಸಿಯೇಷನ್ ನ ಉತ್ತಮ ಬೆಳವಣಿಗೆ ಪೂರಕವಾಗಿದೆ. ಸದಸ್ಯತ್ವ ಸಂಘ ಸಂಸ್ಥೆಗಳ ಬುನಾದಿ. ಹಾಗಿರುವಾಗ ಥಾಣೆ ಪರಿಸರದವರೆಲ್ಲರೂ ಥಾಣೆ ಬಂಟ್ಸ್ ನಲ್ಲಿ ಸದಸ್ಯರಾಗಬೇಕು. ಸದಸ್ಯತ್ವ ಹೆಚ್ಚಾದಂತೆ ಸಂಸ್ಥೆ ಮತ್ತಷ್ಟು ಬಲಿಷ್ಠಗೊಳ್ಳುತ್ತದೆ. ನಾವು ಮಾಡಿರುವ ಆಸ್ತಿ, ದುಡ್ಡು, ಸಂಪತ್ತು ಯಾವತ್ತೂ ನಮ್ಮ…
ಬಂಟರ ಸಂಘ ಮುಂಬಯಿ ಕ್ರೀಡಾ ಸಮಿತಿಯ ಆಶ್ರಯದಲ್ಲಿ ಪ್ರತೀ ವರ್ಷ ಆಚರಿಸಿಕೊಂಡು ಬರುತ್ತಿರುವ ಕ್ರೀಡಾಕೂಟವು ಸಂಘದ ಮಹತ್ವದ ಕಾರ್ಯಕ್ರಮಗಳಲ್ಲಿ ಅತೀ ಹೆಚ್ಚಿನ ಪ್ರಾಧಾನ್ಯತೆ ಪಡೆದಿರುವುದು ಹೆಮ್ಮೆಯ ವಿಷಯವಾಗಿದೆ. ಆರಂಭದಿಂದ ಇಂದಿನವರೆಗೂ ಕ್ರೀಡಾಕೂಟ ಬಂತೆಂದರೆ ಬಂಟರಲ್ಲಿ ನವೋಲ್ಲಾಸ ಸಂತಸ ತುಂಬಿ ತುಳುಕುವುದನ್ನು ಕಾಣಬಹುದಾಗಿದೆ. ಬಂಟರ ಕ್ರೀಡಾಕೂಟವೆನ್ನುವುದು ಬಂಟರಿಗೆ ಸ್ನೇಹ ಸಮ್ಮಿಲನವೂ ಹೌದು. ಪ್ರೀತಿ, ಸೌಹಾರ್ದತೆ ಮತ್ತು ಬಾಂಧವ್ಯದ ಸಂಕೇತವೂ ಹೌದು ಎಂದು ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ನುಡಿದರು. ಮಾ.17ರಂದು ರವಿವಾರ ಕಾಂದಿವಲಿ ಪಶ್ಚಿಮದ ಪೊಯಿಸರ್ ಜಿಮ್ಖಾನದಲ್ಲಿ ಜರಗಿದ ಸಂಘದ 36ನೇ ವಾರ್ಷಿಕ ಬಂಟರ ಕ್ರೀಡಾಕೂಟ -2024ನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಬಳಿಕ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಂಘದ ಕ್ರೀಡಾಕೂಟದಲ್ಲಿ ಮೈದಾನವಿಡೀ ತುಂಬಿ ತುಳುಕುತ್ತಿರುವ ಕ್ರೀಡಾ ಸ್ಪರ್ಧಿಗಳು, ಮಕ್ಕಳಿಂದ ಹಿಡಿದು ಯುವಕ, ಯುವತಿಯರು, ಮಹಿಳೆಯರು ಹಾಗೂ ವಯಸ್ಕರ ಕ್ರೀಡಾಸಕ್ತಿಯನ್ನು ಕಂಡು ಅಚ್ಚರಿಯಾಗುತ್ತಿದೆ. ಕ್ರೀಡೆಯು ದೈಹಿಕ, ಮಾನಸಿಕ ಬೆಳವಣಿಗೆಗೆ ಚೇತೋಹಾರಿ. ಅದನ್ನು ಸದಾ ಮುಂದುವರೆಸಿಕೊಂಡು ಬರುವ ಅಗತ್ಯವಿದೆ. ಹಬ್ಬದ ವಾತಾವರಣವನ್ನು…
ಉದ್ಯಮಿ ಜಗನ್ನಾಥ ಚೌಟ ಬದಿಗುಡ್ಡೆ ಅವರು ಜಿಲ್ಲಾ ಧಾರ್ಮಿಕ ಪರಿಷತ್ ಸಮಿತಿಯ ಸದಸ್ಯರಾಗಿ ಮುಂದಿನ 4 ವರ್ಷಗಳವರೆಗೆ ಕರ್ನಾಟಕ ಸರಕಾರದಿಂದ ನೇಮಕಗೊಂಡಿದ್ದಾರೆ. ಇವರು ಶ್ರೀ ಶರಭೇಶ್ವರ ದೇವಸ್ಥಾನ ಸರಪಾಡಿಯ ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷರಾಗಿದ್ದಾರೆ. ಮಾತ್ರವಲ್ಲದೇ ಬಿ.ಸಿ.ರೋಡು ಪೊಲೀಸ್ ಲೈನ್ ಅನ್ನಪೂರ್ಣೇಶ್ವರೀ ನಾಗದೇವರ ದೇವಸ್ಥಾನದ ಆಡಳಿತ ಸೇವಾ ಟ್ರಸ್ಟ್ (ರಿ.) ನ ಗೌರವ ಅಧ್ಯಕ್ಷರಾಗಿದ್ದಾರೆ. ಬಂಟ್ವಾಳ ಬಂಟರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿರುವ ಜಗನ್ನಾಥ ಚೌಟ ಆಯ್ಕೆಗೆ ಬಂಟರ ಸಂಘ ಮುಂಬಯಿಯ ಕ್ರೀಡಾ ವಿಭಾಗದ ಕಾರ್ಯಾಧ್ಯಕ್ಷ ಮಾಣಿ ಗುತ್ತು ಶಿವಪ್ರಸಾದ್ ಆರ್ ಶೆಟ್ಟಿ, ಕಲ್ಲಾಜೆ ಗುತ್ತು ಸುಹಾಸ್ ಆರ್ ರೈ, ಬಂಟರ ಸಂಘ ಮುಂಬಯಿಯ ಮೀರಾ ಭಯಂದರ್ ಪ್ರಾದೇಶಿಕ ಸಮಿತಿಯ ಮಾಜಿ ಕಾರ್ಯಾಧ್ಯಕ್ಷ ಹರೀಶ್ ಕುಮಾರ್ ಶೆಟ್ಟಿ ಅಭಿನಂದನೆ ಸಲ್ಲಿಸಿದ್ದಾರೆ.
ಪೆರಾರ ಮುಂಡಬೆಟ್ಟು ಮೂಲದ ಅಕ್ಷಯಾ ತನ್ನ ಎಳವೆಯಿಂದಲೇ ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಅತೀವ ಆಸಕ್ತಿ ಹೊಂದಿದ್ದು ಬೆಳೆಯುತ್ತಿದ್ದಂತೆ ವಿದ್ಯಾರ್ಥಿ ದೆಸೆಯಿಂದಲೇ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡು ಸಾಹಿತ್ಯಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡವರು. ಪ್ರಸ್ತುತ ಮಂಗಳೂರಿನ ಅಡ್ಯಾರಿನಲ್ಲಿರುವ ಸಹ್ಯಾದ್ರಿ ಇಂಜಿನಿಯರಿಂಗ್ ಆಂಡ್ ಮ್ಯಾನೇಜ್ಮೆಂಟ್ ಕಾಲೇಜಿನಲ್ಲಿ ಸಹಾಯಕ ಪ್ರಧ್ಯಾಪಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಜೊತೆ ಜೊತೆಗೆ ಸಾಹಿತ್ಯ ಕೃಷಿಯಲ್ಲೂ ತನ್ನನ್ನು ತೊಡಗಿಸಿಕೊಂಡಿದ್ದಾರೆ. ಈಕೆ ಬಹುಮುಖ ಪ್ರತಿಭೆಯ ಮೇಧಾವಿಯಾಗಿದ್ದು ಸಾಹಿತ್ಯದಲ್ಲಿ ತನ್ನದೇ ಆದ ವಿಶಿಷ್ಟ ಶೈಲಿಯ ಛಾಪು ಮೂಡಿಸಿದ್ದು ಈಗಾಗಲೇ ನಾಡಿನ ಹೆಸರಾಂತ ಸಾಹಿತ್ಯ ವಿಮರ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮೈಕ್ರೋ ಬಯಾಲಜಿಯಲ್ಲಿ ವಿಜ್ಞಾನ ಪದವಿ, ಕನ್ನಡ ಸಾಹಿತ್ಯದ ಎಂ.ಎ ಸ್ನಾತಕೋತ್ತರ ಶಿಕ್ಷಣ ಪಡೆದ ಧೀಮಂತೆ. ಅಷ್ಟಕ್ಕೇ ಸಾಲದೆಂಬಂತೆ ಮಾನವ ಸಂಪನ್ಮೂಲ ವಿಷಯ ಕುರಿತು ಎಂ.ಬಿ.ಎ ವ್ಯಾಸಂಗವನ್ನೂ ಪೂರ್ತಿಗೊಳಿಸಿದ್ದು ಪ್ರಾಧ್ಯಾಪಕಿಯಾಗಿ, ಸಂಪನ್ಮೂಲ ವ್ಯಕ್ತಿಯಾಗಿ, ಜನಮೆಚ್ಚಿದ ಸಾಹಿತಿಯಾಗಿ ಗಮನೀಯ ಸಾಧನೆಗೈದ ಅಕ್ಷಯಾ ಅವರ ಅರ್ಹತೆಯನ್ನು ಗುರುತಿಸಿ ಇದೀಗ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಇದರ ಗೌರವ ಸದಸ್ಯೆಯಾಗಿಯೂ ಆಯ್ಕೆ ಮಂಡಳಿ ಆರಿಸಿದ್ದು…
ಜಿಲ್ಲಾ ಧಾರ್ಮಿಕ ಪರಿಷತ್ ನ ಸದಸ್ಯರಾಗಿ ಮುಂಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಶಿವನಾಥ ರೈ ಮೇಗಿನಗುತ್ತು ಅವರನ್ನು ನೇಮಕಗೊಳಿಸಿ ಸರಕಾರದ ಅಧೀನ ಕಾರ್ಯದರ್ಶಿ ಕೆ.ಪಿ ಹೇಮಂತರಾಜು ಆದ್ದೇಶಿಸಿದ್ದಾರೆ. ಆದೂರು ಏಳ್ನಾಡುಗುತ್ತು ಕಿಟ್ಟಣ್ಣ ರೈ ಮತ್ತು ಮೇಗಿನಗುತ್ತು ಸುಂದರಿ ರೈ ದಂಪತಿಯರ ಪುತ್ರನಾಗಿರುವ ಶಿವನಾಥ ರೈ ಮೇಗಿನಗುತ್ತು ಅವರು ಕಲ್ಪಣೆ ಸರ್ವೆ ಸ.ಹಿ.ಪ್ರಾ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಸರ್ವೆ ಎಸ್ ಜಿಎಂ ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣ ಮತ್ತು ಸಂತ ಫಿಲೋಮಿನಾ ಕಾಲೇಜಿನಲ್ಲಿ ಬಿಎಸ್ಸಿ ಶಿಕ್ಷಣ ಪಡೆದಿರುತ್ತಾರೆ. ಧಾರ್ಮಿಕ ಕ್ಷೇತ್ರದಲ್ಲಿಯೂ ತೊಡಗಿಸಿಕೊಂಡಿರುವ ಇವರು ಭಕ್ತಕೂಡಿ ಶ್ರೀರಾಮ ಭಜನಾ ಮಂದಿರದಲ್ಲಿ 14 ವರ್ಷಗಳ ಕಾಲ ಅಧ್ಯಕ್ಷರಾಗಿ, ಮಂದಿರ ಪುನರ್ ನಿರ್ಮಾಣದ ರೂವಾರಿಯಾಗಿ, ಸರ್ವೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಪುನರ್ ನಿರ್ಮಾಣ ಜೀರ್ಣೋದ್ದಾರ ಸಮಿತಿ ಅಧ್ಯಕ್ಷರಾಗಿ, ಬ್ರಹ್ಮಕಲಶೋತ್ಸವ ಸಮಿತಿ ಸಂಚಾಲಕರಾಗಿ ಸೇವೆ ಸಲ್ಲಿಸಿದ್ದಾರೆ. ಸರಕಾರಿ ಪ್ರೌಢಶಾಲೆ ಕಲ್ಪಣೆ ಸರ್ವೆ ಇದರ ಕಾರ್ಯಾಧ್ಯಕ್ಷರಾಗಿ, ಬೆಳ್ಳಿ ಹಬ್ಬದ ಅಧ್ಯಕ್ಷರಾಗಿ ರಂಗಮಂದಿರ ನಿರ್ಮಾಣ ಹಾಗೂ ಶಾಲಾ ಅಭಿವೃದ್ಧಿ…
“ಕೀರ್ತಿಕಾಮನೆ ಬೆನ್ನ ಹಿಡಿದು ಹೋದರೆ ಮನುಜ ತಂತಿ ಮೇಲಿನ ಆಟ, ಅದು ದೊಂಬರಾಟ ; ಹೂ ಅರಳಿ ನಗುವಂತೆ ಇರಲಿ ಸಹಜತೆ ಮನದಿ ದೂರವಿರು ಹೊಗಳಿಕೆಗೆ” – ಮುದ್ದು ರಾಮ ಒಬ್ಬೊಬ್ಬರ ಬದುಕು ಒಂದೊಂದು ರೀತಿ. ಒಬ್ಬರದು ಗಳಿಸಬೇಕು ಗಳಿಸಿದನ್ನು ಉಳಿಸಬೇಕು ಅದೇ ಬದುಕು ಅನ್ನುವುದಾದರೆ, ಇನ್ನೊಬ್ಬರದ್ದು ದುಡಿಯಬೇಕು ದುಡಿ ದುಡಿದು ಗಂಟು ಕಟ್ಟಿ ನನ್ನ ಕುಟುಂಬದವರ ಜೀವನ ಹಸನುಗೊಳಿಸಬೇಕು. ಮತ್ತೊಬ್ಬರದ್ದು ದುಡಿಯುತ್ತಿರಬೇಕು ದುಡಿ- ದುಡಿಯುತ್ತಾ ಬದುಕು ಕೊನೆಯಾಗಲಿ ಅನ್ನುವುದಾದರೆ, ಬೆರಳೆಣಿಕೆಯ ಜನರ ವಿಚಾರ ಮಾತ್ರ ಬೇರೆಯದೇ ಆಗಿರುತ್ತದೆ. ನಾನು ಶ್ರಮಿಕನಾಗಬೇಕು ನನಗಾಗಿಯಲ್ಲ ನನ್ನವರಿಗಾಗಿಯೂ ಅಲ್ಲ, ಕೇವಲ ನನ್ನ ಸುತ್ತ-ಮುತ್ತಲ ಸಮಾಜಕ್ಕಾಗಿ ದುಡಿಯಬೇಕು ಅನ್ನುವವರ ಒಂದು ವರ್ಗ ಇರುತ್ತದೆ. ಆ ವರ್ಗಕ್ಕೆ ಸೇರಿದವರ ಚಿಂತನೆಯೂ ನಮ್ಮ ಊಹೆಗೆ ನಿಲುಕದಾಗಿರುತ್ತದೆ. ಈ ಭೂಮಿಯಲ್ಲಿನ ಋಣ ಚಿರ ನಿದ್ರೆಗೆ ಜಾರುವ ತನಕ. ಇರುವಷ್ಟು ಕಾಲ ಕಷ್ಟ – ನೊಂದವರ ಬದುಕನ್ನು ಸಾಂತ್ವನಿಸಬೇಕು. ನಮ್ಮ ಆಸು-ಪಾಸಿನ ಸಮಾಜ ಪ್ರಗತಿ ಕಾಣಬೇಕು, ಊರು ಅಭಿವೃದ್ಧಿಯಾಗಬೇಕು, ಅಲ್ಲಿನ ಮಕ್ಕಳು…
ಬಂಟ್ಸ್ ಕತಾರ್ ವರ್ಣರಂಜಿತ ಮೆಗಾ ಸಾಂಸ್ಕೃತಿಕ ಪ್ರದರ್ಶನವು ಡಿಪಿಎಸ್ ಸಭಾಂಗಣದಲ್ಲಿ ನೆರೆದವರನ್ನು ಮಂತ್ರಮುಗ್ಧಗೊಳಿಸಿತು. ಬಂಟ್ಸ್ ಕತಾರ್ ನೂತನ ಆಡಳಿತ ಸಮಿತಿಯ ಅಡಿಯಲ್ಲಿ ಆಯೋಜಿಸಲಾದ ಮೆಗಾ ಕಲ್ಚರಲ್ ಶೋ-2024 ಅದ್ದೂರಿಯಾಗಿ ವರ್ಣರಂಜಿತ ಸಾಂಸ್ಕೃತಿಕ ಮೌಲ್ಯಗಳನ್ನು ಪ್ರದರ್ಶಿಸಿತು. ಪ್ರಸಿದ್ಧ ಗಾಯಕರಾದ ಇಂಡಿಯನ್ ಐಡಲ್ ಖ್ಯಾತಿಯ ನಿಹಾಲ್ ತಾವ್ರೋ ಮತ್ತು ಸರಿಗಮಪ ಖ್ಯಾತಿಯ ಸಾನ್ವಿ ಶೆಟ್ಟಿ ಅವರ ಲೈವ್ ಸಂಗೀತ ಕಾರ್ಯಕ್ರಮವು ಸುಂದರ ಸಂಜೆಯಲ್ಲಿ ಸಂಗೀತ ಲೋಕವನ್ನು ಸೃಷ್ಟಿಸಿತು. ಬಂಟ್ಸ್ ಕತಾರ್ ಸದಸ್ಯರಿಂದ ಯಕ್ಷಗಾನ “ನಾಟ್ಯ ವೈಭವ”, ವಿಶೇಷವಾಗಿ ಬಂಟ್ಸ್ ಕತಾರ್ನ ಸಣ್ಣ ಪುಟ್ಟ ತಂಡಗಳು ಚೆಲುವು ಮತ್ತು ವೃತ್ತಿಪರ ಸೊಬಗನ್ನು ಹೊರಹಾಕಿದವು. ಮೋಹನ್ ಎಡನೀರು ಮತ್ತು ಸಚಿನ್ ಎಡನೀರ್ ಅವರು ಬಹರೈನ್ ನಿಂದ ಆಗಮಿಸಿ ಯಕ್ಷಗಾನ ತಂಡಕ್ಕೆ ವೇಷಭೂಷಣ ಮತ್ತು ಮೇಕಪ್ ನೊಂದಿಗೆ ಸಹಾಯ ಮಾಡಿದರು. ಬಂಟ್ಸ್ ಕತಾರ್ ಸದಸ್ಯರು ಮತ್ತು ದೋಹಾ ಡ್ಯಾನ್ಸಿಂಗ್ ಸ್ಕ್ವಾಡ್ ತಂಡವು ಉತ್ಸಾಹಭರಿತ ಸಿನಿ ನೃತ್ಯ ಪ್ರದರ್ಶನಗಳು ಮತ್ತು ಆಕರ್ಷಕವಾದ ಅರೆ-ಶಾಸ್ತ್ರೀಯ ನೃತ್ಯಗಳೊಂದಿಗೆ ಸಭೆಯನ್ನು ರಂಜಿಸಿತು. ಕಿಕ್ಕಿರಿದ ಡಿಪಿಎಸ್…
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಪ್ರೊಫೆಸರ್ ಅಕ್ಷಯ ಆರ್ ಶೆಟ್ಟಿ ಆಯ್ಕೆಯಾಗಿದ್ದಾರೆ. ಅಕ್ಷಯ ಆರ್ ಶೆಟ್ಟಿ ಅವರು ಸಹ್ಯಾದ್ರಿ ಇಂಜಿನಿಯರಿಂಗ್ ಮತ್ತು ಮ್ಯಾನೆಜ್ಮೆಂಟ್ ಕಾಲೇಜ್ ನ ಪ್ರಾಧ್ಯಾಪಕಿ. ಬಜಪೆ ಬಂಟರ ಸಂಘದ ಮಹಿಳಾ ಘಟಕದ ಅಧ್ಯಕ್ಷೆಯಾಗಿಯೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪೆರ್ಗ, ಹಿಡಿ ಅಕ್ಕಿಯ ಧ್ಯಾನ ಸಹಿತ ಹಲವು ಕೃತಿಗಳನ್ನು ರಚಿಸಿದ್ದಾರೆ. ಸಾಹಿತ್ಯ ಕ್ಷೇತ್ರದ ಜೊತೆಗೆ ಸಾಮಾಜಿಕ ಧಾರ್ಮಿಕ, ಶೈಕ್ಷಣಿಕ ವಿಚಾರಗಳಿಗೆ ಸಂಬಂಧಿಸಿದ ಲೇಖನಗಳನ್ನೂ ಅವರು ಬರೆದಿರುತ್ತಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಮಾ.17ರಂದು ಮುಂಬಯಿಗೆ ಆಗಮಿಸಿದ್ದು ಈ ಸಂದರ್ಭದಲ್ಲಿ ಪನ್ವೆಲ್ ಮಹಾನಗರ ಪಾಲಿಕೆಯ ನಗರಸೇವಕ ಹಾಗೂ ಬಂಟ್ವಾಳ ತಾಲೂಕಿನ ಶ್ರೀ ಕ್ಷೇತ್ರ ನಂದಾವರ ಇದರ ಬ್ರಹ್ಮಕಲಶ ಸಮಿತಿಯ ಅಧ್ಯಕ್ಷರಾದ ಸಂತೋಷ್ ಜಿ ಶೆಟ್ಟಿ ದಲಂದಿಲ ಇವರ ನೇತೃತ್ವದಲ್ಲಿ ನವಿ ಮುಂಬಯಿಯ ನ್ಯೂ ಪನ್ವೆಲ್ ಪೂರ್ವದ ಭಗತ್ ವಾಡಿಯ ಹೋಟೆಲ್ “ಸ್ಪೈಸ್ ವಾಡಿ” ಇಲ್ಲಿ ಕ್ಯಾಪ್ಟನ್ ಬ್ರಿಜೇಶ್ ಚೌಟ ತುಳು ಕನ್ನಡಿಗ ಅಭಿಮಾನಿಗಳೊಂದಿಗೆ ಸಮಾಲೋಚನೆ ಸಭೆ ನಡೆಯಿತು. ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪನ್ವೆಲ್ ಪರಿಸರದಲ್ಲಿ ಹಾಗೂ ಮುಂಬಯಿಯ ವಿವಿಧ ಸಮುದಾಯದ ಅನೇಕ ಗಣ್ಯರು ಉಪಸ್ಥಿತರಿದ್ದು ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರನ್ನು ಅಭಿನಂದನಾ ಪೂರ್ವಕವಾಗಿ ಸ್ವಾಗತಿಸಿದರು. ಸ್ವಾಗತಿಸುತ್ತಾ ಪ್ರಾಥಮಿಕ ಮಾತುಗಳನ್ನಾಡಿದ ನಗರಸೇವಕ ಸಂತೋಷ್ ಜಿ ಶೆಟ್ಟಿ ಅವರು ನಮ್ಮ ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಗಾಗಿ ಭರವಸೆಯ ವ್ಯಕ್ತಿಯೊಬ್ಬರು ಇಂದು ಪಕ್ಷದ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದು ನಮ್ಮೆಲ್ಲರ ಸೌಭಾಗ್ಯ. ಮಿಲಿಟರಿಯಲ್ಲಿ ದೇಶ ರಕ್ಷಣೆಯ ಸೇವೆಗೈದು…