Author: admin

ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಮೊಳಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾಜಾಡಿಮನೆ, ಪತ್ರಕರ್ತ, ವರದಿಗಾರರಾದ, ಕೆ. ಸಂತೋಷ್ ಶೆಟ್ಟಿ ಮೊಳಹಳ್ಳಿ ಇವರಿಗೆ ವಿಶ್ವದರ್ಶನ ಕನ್ನಡ ದಿನಪತ್ರಿಕೆ, ಹುಬ್ಬಳ್ಳಿ ಮತ್ತು ಪ್ರಜಾ ದರ್ಶನ ಕನ್ನಡ ಮಾಧ್ಯಮ ಸಂಸ್ಥೆಯ ಕೊಡ ಮಾಡುತ್ತಿರುವ ಬೆಂಗಳೂರು ಬ್ಯೂರೋ ಚೀಫ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರಿಗೆ  ರಾಷ್ಟ್ರೀಯ ಪ್ರಶಸ್ತಿಗಳಲ್ಲಿ  ಪತ್ರಕರ್ತರಿಗೆ ನೀಡುವ 2022-2023 ಸಾಲಿನ “ರಾಷ್ಟ್ರೀಯ ಮಾಧ್ಯಮ ಭೂಷಣ ಪ್ರಶಸ್ತಿ- 2022” ಘೋಷಣೆಯಾಗಿದೆ. ವಿಶ್ವದರ್ಶನ ಮಾಧ್ಯಮ ಸಂಸ್ಥೆಯ ಸಂಪಾದಕರಾದ ಎಸ್ ಎಸ್ ಪಾಟೀಲ್ ಅವರು ಅಧಿಕೃತ ಘೋಷಣೆ ಮಾಡಿದ್ದಾರೆ. ವಿವಿಧ ರಂಗಗಳಲ್ಲಿ ಸಾಧನೆ ಮಾಡಿದ ಒಟ್ಟು  165 ಹೆಚ್ಚು ಸಾಧಕರನ್ನು ಗುರುತಿಸುವ ವಿನೂತನ ಕಾರ್ಯಕ್ರಮವು ಇದಾಗಿದೆ. ಹೀಗೆ ವಿವಿಧ ಕ್ಷೇತ್ರದ ಸಾಧಕರನ್ನು ಗುರುತಿಸಿ ಕೊಡಮಾಡುವ ಪ್ರಶಸ್ತಿಗೆ ಈ ಬಾರಿ ಸಂತೋಷ್ ಶೆಟ್ಟಿ ಮೊಳಹಳ್ಳಿ ಅವರು ಆಯ್ಕೆಯಾಗಿರುವುದು ಸಂಸ್ಥೆ ಹೆಮ್ಮೆಯಿಂದ ದೃಢಪಡಿಸಿದೆ. ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು  ಧಾರವಾಡದ  ರಂಗಾಯಣ ಸಭಾ ಭವನದಲ್ಲಿ ದಿನಾಂಕ   22-09-2022 ರಂದು ಗುರುವಾರ ಬೆಳಿಗ್ಗೆ…

Read More

ಮೂಡುಬಿದಿರೆ: ‘ಹಾನಿ ಮಾಡದ, ವೈಜ್ಞಾನಿಕವಾದ ವೈಯಕ್ತಿಕ ನಂಬಿಕೆಗಳು ತಪ್ಪಲ್ಲ. ಆದರೆ, ಮೂಢನಂಬಿಕೆ ದೇಶಕ್ಕೆ ಅಪಾಯಕಾರಿ’ ಎಂದು ಭಾರತೀಯ ವಿಚಾರವಾದಿ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನರೇಂದ್ರ ನಾಯಕ್ ಹೇಳಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ರೋಸ್ಟ್ರಮ್ಸ್ ಕ್ಲಬ್ ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆಯ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡ ‘ವೈಜ್ಞಾನಿಕ ಮನೋಧರ್ಮದ ಅಭಿವೃದ್ಧಿ ಹಾಗೂ ಸಂವಿಧಾನದ 51(ಎಎಚ್‍ವಿಧಿ) ವಿಚಾರ ಸಂಕಿರಣದಲ್ಲಿ ಅವರು ಪ್ರಾತ್ಯಕ್ಷಿಕೆ ನೀಡಿ ಮಾತನಾಡಿದರು. ಜಗತ್ತಿನಲ್ಲಿ ಎಲ್ಲವೂ ಪ್ರಕೃತಿ ನಿಯಮ ಅನುಸಾರ ನಡೆಯುತ್ತವೆ. ಆದರೆ, ಅದನ್ನು ಮೀರಿದ ‘ಪವಾಡ’ ಮಾಡುವವರ ಕುರಿತು ಸಾಕಷ್ಟು ಪ್ರಶ್ನೆಗಳಿವೆ’ ಎಂದರು. ‘ಪ್ರತಿ ವ್ಯಕ್ತಿಯ ನಂಬಿಕೆ ಪ್ರಕಾರ ಅವರ ದೇವರ ವ್ಯಾಖ್ಯಾನವೂ ವಿಭಿನ್ನ. ಹೀಗಾಗಿ, ದೇವರನ್ನು ವಿವಿಧ ಧರ್ಮ, ಪ್ರದೇಶ, ನಂಬಿಕೆಯ ಜನರು ವಿಭಿನ್ನವಾಗಿ ಚಿತ್ರಿಸುತ್ತಾರೆ. ಅದೇ ರೀತಿಯಲ್ಲಿ ಸಂಸ್ಕೃತಿಯೂ ಕಾಲ, ಪ್ರದೇಶಕ್ಕೆ ಅನುಗುಣವಾಗಿ ಬದಲಾಗುತ್ತದೆ’ ಎಂದ ಅವರು, ‘ನೀವು ಯಾವುದನ್ನು ಒಪ್ಪಿಕೊಳ್ಳಬೇಕಾದರೂ, ಪೂರಕ ಸಾಕ್ಷ್ಯವನ್ನು ಪರಿಶೀಲಿಸಿಕೊಳ್ಳಿ’ ಎಂದರು. ‘ನಮ್ಮ ದೇಶದಲ್ಲಿ ಅತ್ಯಂತ ಬುದ್ಧಿವಂತರು ಇದ್ದಾರೆ. ಆದರೆ, ವೈಜ್ಞಾನಿಕ…

Read More

ಹಸಿರು ಸಿರಿಯ ನಿಸರ್ಗ ಸೌಂದರ್ಯಕ್ಕೆ ಹೆಸರು ಪಡೆದ ಪ್ರಾಕೃತಿಕ ಆಕರ್ಷಣೆಗಳಿಂದ ಜನಮನ ಸೂರೆಗೊಳ್ಳುವ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಪುಟ್ಟ ಹಳ್ಳಿಯಲ್ಲಿ ದಿನಾಂಕ 6..2..1975 ರಂದು ಹಳ್ನಾಡು ಕೆಳಮನೆ ನಾರಾಯಣ್ ಶೆಟ್ಟಿ ಹಾಗೂ ಕನಕ ನಾರಾಯಣ ಶೆಟ್ಟಿ ದಂಪತಿಗಳಿಗೆ ಮುದ್ದು ಮಗನಾಗಿ ಜನಿಸಿದ ಮಂಜುನಾಥ್ ಶೆಟ್ಟರು ತಮ್ಮ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ತನ್ನ ಹುಟ್ಟೂರಲ್ಲೇ ಪೂರೈಸಿ, ಭವಿಷ್ಯ ಜೀವನಕ್ಕೊಂದು ಭದ್ರ ನೆಲೆಯ ಹುಡುಕಾಟದಲ್ಲಿ 1994 ರಲ್ಲಿ ಮಾಯಾನಗರಿ ಮುಂಬಯಿಗೆ ಬಂದು ಅಂಧೇರಿಯ ಟಿ.ಸಿ.ಎಸ್ ಕ್ಯಾಂಟೀನ್ ನಲ್ಲಿ ದುಡಿಯುತ್ತಲೇ ತಮ್ಮ ಶಿಕ್ಷಣವನ್ನೂ ಮುಂದುವರಿಸಿದರು. ಮುಂಬಯಿ ನಗರದ ಪ್ರತಿಷ್ಠಿತ ಸಿದ್ಧಾರ್ಥ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮುಗಿಸಿದ ಶ್ರೀಯುತರು ಫಾಸ್ಟ್ ಟ್ರ್ಯಾಕ್ ವರ್ಲ್ಡ್ ವೈಡ್ ಪ್ರೈವೇಟ್ ಲಿಮಿಟೆಡ್ ಎಂಬ ತನ್ನದೇ ಆದ ಉದ್ಯಮ ಸಂಸ್ಥೆಯನ್ನು ಸ್ಥಾಪಿಸಿದರು. ಪ್ರತಿಷ್ಠಿತ ಡಿ.ಟಿ.ಡಿ.ಸಿ ಕೊರಿಯರ್ ಸಂಸ್ಥೆಯ ಮೂಲಕ ಮುಂಬಯಿಯ ಹಲವಾರು ಕಡೆ ತಮ್ಮ ಸಂಸ್ಥೆಯ ಶಾಖೆಗಳನ್ನು ತೆರೆಯುವ ಮೂಲಕ ತನ್ನ ವ್ಯವಹಾರ ಕ್ಷೇತ್ರವನ್ನು ವಿಸ್ತರಿಸಿದರು. ಉದ್ಯಮದಲ್ಲಿ ಯಶಸ್ಸು ಸಂಪಾದಿಸಿ…

Read More

ಕೆಲವು ದಶಕಗಳ ಹಿಂದೆ ಖಿನ್ನತೆ ಎನ್ನುವ ಮಾನಸಿಕ ಅನಾರೋಗ್ಯ ಬಹಳ ಕಡಿಮೆ ಪ್ರಮಾಣದಲ್ಲಿತ್ತು. ಜೀವನ ಪ್ರಶಾಂತ ನದಿಯಂತೆ ಹರಿಯುತ್ತಿದ್ದ ಆ ಕಾಲದಲ್ಲಿ ಎಲ್ಲರ ಬಳಿಯೂ ಸಮಯ ಇತ್ತು, ಯೋಚಿಸುವುದಕ್ಕೆ, ಎಲ್ಲರ ಜತೆಗೆ ಒಡಗೂಡಿ ಕಾಲ ಕಳೆಯುವುದಕ್ಕೆ, ಕಷ್ಟ ಸುಖಗಳನ್ನು ಹಂಚಿಕೊಳ್ಳುವುದಕ್ಕೆ ವ್ಯವಧಾನ ಇತ್ತು. ಬಹುತೇಕ ಎಲ್ಲರೂ ದೈಹಿಕ ಶ್ರಮದ ದುಡಿಮೆ ನಡೆಸಿ ಉಣ್ಣುವವರು. ಹಾಗಾಗಿ ದೈಹಿಕ – ಮಾನಸಿಕ ಆರೋಗ್ಯ ಚೆನ್ನಾಗಿತ್ತು. ಮನುಷ್ಯನಲ್ಲಿ ದೈಹಿಕ ಮತ್ತು ಮಾನಸಿಕ ಆರೋಗ್ಯಗಳು ಒಂದು ಬಿಟ್ಟು ಇನ್ನೊಂದಿಲ್ಲ. ಅವು ಒಂದರೊಳಗೆ ಇನ್ನೊಂದು ಹಾಸು-ಹೊಕ್ಕು ನಾವು ಆಧುನಿಕರಾದಂತೆ, ಕುಳಿತು ಮಾಡುವ ಕೆಲಸ ಹೆಚ್ಚಿದಂತೆ, ಬಾಹ್ಯ ಜಗತ್ತಿನ ಮೇಲೆ ಅವಲಂಬನೆ ವೃದ್ಧಿಸಿದಂತೆ ಖಿನ್ನತೆಗೆ ಒಳಗಾಗುವುದು ಕೂಡ ಅಧಿಕವಾಗಿದೆ ಎನ್ನಿಸುವುದಿಲ್ಲವೆ? ಎಲ್ಲರಿಗೂ ಖಿನ್ನತೆಯು ಒಂದು ಅನಾರೋಗ್ಯದ ಸ್ವರೂಪದಲ್ಲಿ ಕಾಡದೆ ಇದ್ದರೂ ಬಹುತೇಕ ಮಂದಿ ಒಂದಲ್ಲ ಒಂದು ಕಾರಣದಿಂದ ಆಗಾಗ ಖಿನ್ನರಾಗುತ್ತಾರೆ. ಪುಟ್ಟ ಮಕ್ಕಳನ್ನು ನೋಡಿ, ಅವರು ಸದಾ ಆನಂದ ತುಂದಿಲರಾಗಿಯೇ ಇರುತ್ತಾರೆ. ನೀವು ಬೈದರೆ ಅವರು ಸ್ವಲ್ಪ ಹೊತ್ತು ದುಃಖಿಸಬಹುದು.…

Read More

ಬಂಟರ ಸಂಘ (ರಿ) ಸುರತ್ಕಲ್ ಇದರ ಆಶ್ರಯದಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘ ಮತ್ತು ಜಾಗತಿಕ ಬಂಟರ ಸಂಘಗಳ ಒಕ್ಕೂಟ ಇವರ ಸಹಯೋಗದೊಂದಿಗೆ ವಾರ್ಷಿಕ ಕ್ರೀಡಾಕೂಟವು ರವಿವಾರ ಬೆಳಗ್ಗೆ ಸುರತ್ಕಲ್ ಗೋವಿಂದ ದಾಸ ಕಾಲೇಜ್ ಮೈದಾನದಲ್ಲಿ ಜರುಗಿತು. ಕ್ರೀಡಾಜ್ಯೋತಿ ಬೆಳಗುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು. ಉದ್ಘಾಟನೆ ನೆರವೇರಿಸಿ ಮಾತಾಡಿದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರು, “ಬಂಟ ಸಮುದಾಯದ ವಿದ್ಯಾರ್ಥಿಗಳು ಇಂದು ಕ್ರೀಡೆ ಮಾತ್ರವಲ್ಲದೇ ಅನೇಕ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಅವರಿಗೆ ಸಿಗುವ ಪ್ರೋತ್ಸಾಹ ಕಡಿಮೆಯಿದೆ. ಸರಕಾರ ಮತ್ತು ಸಾಮಾಜಿಕ ಸಂಘಟನೆಗಳು ಎಷ್ಟು ಸಹಾಯ ಕೊಟ್ಟರೂ ಸಾಲದು. ಯಾಕೆಂದರೆ ಇಂದು ಖರ್ಚು ವೆಚ್ಚಗಳು ಜಾಸ್ತಿಯಾಗಿವೆ. ಆದ್ದರಿಂದ ಎಲ್ಲರೂ ಪ್ರತಿಭೆಗಳನ್ನು ಪ್ರೋತ್ಸಾಹಿಸೋಣ. ಈ ಮೂಲಕ ಸಾಮಾಜಿಕ ಜವಾಬ್ದಾರಿ ಮೆರೆಯೋಣ” ಎಂದರು. ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಅವರು ಮಾತನಾಡಿ, “ಸುರತ್ಕಲ್ ಭಾಗದಲ್ಲಿ ಬಂಟ ಸಮುದಾಯದ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹತ್ತಾರು…

Read More

ಡಾಕ್ಟ್ರೆ ಮಗುವಿಗೆ ಜ್ವರ.. ತುಂಬಾ ಸುಡ್ತಾ ಇದಾನೆ… ಇದು ನಾವು ದಿನನಿತ್ಯ ಹಲವಾರು ಬಾರಿ ಕೇಳುವಂತಹ ವಾಕ್ಯ. ಮಕ್ಕಳಿಂದ ಹಿಡಿದು ವಯೋವೃದ್ಧರ ವರೆಗೆ ಎಲ್ಲರೂ ಜ್ವರದಿಂದ ಬಳಲಿದವರೇ. ಆದರೆ ಕಾರಣ ಒಬ್ಬೊಬ್ಬರಲ್ಲೂ ಬೇರೆಯೇ. ಜ್ವರ ಎಂಬುದೊಂದು ರೋಗವಲ್ಲ. ಅದೊಂದು ರೋಗ ಲಕ್ಷಣ. ದೇಹದಲ್ಲಿ ಎಲ್ಲವೂ ಸರಿಯಿಲ್ಲ ಎಂದು ನಮಗೆ ತಿಳಿಸುವ ರಕ್ಷಣ ವಿಧಾನ. ಮನುಷ್ಯನ ದೇಹ ಸೋಂಕಿನಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ನಡೆಸುವ ಹೋರಾಟದ ಸಂಕೇತ. ಸಾಧಾರಣವಾದ ವೈರಲ್‌ ಜ್ವರದಿಂದ ಹಿಡಿದು, ಯಾವ ಪರೀಕ್ಷೆಗಳಲ್ಲೂ ಸುಳಿವು ಕೊಡದ, ಯಾವ ಚಿಕಿತ್ಸೆಗೂ ಬಗ್ಗದ ಜ್ವರಗಳು ಕೂಡ ಇವೆ. ಮಕ್ಕಳಲ್ಲಿ ಜ್ವರ ಸರ್ವೇ ಸಾಮಾನ್ಯ. ಕಾರಣಗಳು ಹಲವಾರು. ಕೆಲವು ಮುಖ್ಯ ಕಾರಣಗಳೆಂದರೆ, 1. ವೈರಸ್‌ ಜ್ವರ 2. ಡೆಂಗ್ಯೂ 3. ಟೈಫಾಯ್ಡ 4. ಮಲೇರಿಯಾ 5. ಮೂತ್ರದ ಸೋಂಕು 6. ನ್ಯುಮೋನಿಯ ಶಾಲೆಗೆ ಹೋಗುವ ಮಕ್ಕಳಲ್ಲಿ ತುಂಬಾ ಸಾಮಾನ್ಯವಾಗಿ ಬರುವಂಥದ್ದು ವೈರಲ್‌ ಫೀವರ್‌. ಶೀತ, ಕೆಮ್ಮು, ವಾಂತಿ, ಭೇದಿಗಳಿಂದ ಪ್ರಾರಂಭ­ವಾಗಿ, ಜ್ವರವಾಗಿ 3-4 ದಿನ…

Read More

ಕಲಾ ಕ್ಷೇತ್ರದಲ್ಲಿ ನಿರಂತರವಾಗಿ ತನ್ನದೇ ಛಾಪನ್ನು ಮೂಡಿಸುತ್ತಿರುವ ಬಂಟ ಸಮಾಜದ ಹೆಮ್ಮೆಯ ಗರಿ ಶರತ್ ಆಳ್ವ ಕೂರೇಲು. ಕಲೆಯೆನ್ನುವುದು ಮುಗಿಯದ ಅಧ್ಯಾಯ. ತನ್ನಲ್ಲಿರುವ ಕಲಾ ಪ್ರತಿಭೆಯನ್ನು ಸಿಗುವ ಅವಕಾಶಗಳ ಮೂಲಕ ಹೊರಹೊಮ್ಮಿಸಿದರೆ ಉತ್ತಮ ಕಲಾವಿದನೆನಿಸಿಕೊಳ್ಳುವುದರಲ್ಲಿ ಸಂಶಯವೇ ಇಲ್ಲ. ಮನದೊಳಗೆ ಅದೆಷ್ಟೇ ನೋವುಗಳಿದ್ದರೂ ತನ್ನೆದುರಿಗಿರುವ ಪ್ರೇಕ್ಷಕರ ನೋವನ್ನು ಮರೆಸುವಂತಹ ಅದ್ಭುತ ಶಕ್ತಿಯಿರುವುದು ಓರ್ವ ಕಲಾವಿದನಿಗೆ ಮಾತ್ರ. ಕಲಾ ಕ್ಷೇತ್ರದಲ್ಲಿ ತನ್ನದೇ ಛಾಪನ್ನು ಮೂಡಿಸುತ್ತಾ, ಕಲಾವಿದರಿಗಾಗಿ ತಂಡವನ್ನೂ ರಚಿಸಿ ಅನೇಕ ಪ್ರತಿಭಾವಂತರಿಗೆ ಕಲಾವಿದನ ಸ್ಪರ್ಶ ಕೊಟ್ಟು ಬೆಳೆಸುತ್ತಿರುವವರು ಶರತ್ ಆಳ್ವ ಕೂರೇಲು. 27-05-1989 ರಲ್ಲಿ ಸಂಕಪ್ಪ ಆಳ್ವ ಮತ್ತು ಯಮುನಾ ಆಳ್ವ ದಂಪತಿಗಳ ಪುತ್ರನಾಗಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕೂರೇಲಿನಲ್ಲಿ ಜನಿಸಿದ ಶರತ್ ತಮ್ಮ ಒಂದರಿಂದ ನಾಲ್ಕನೇ ತರಗತಿ ಶಿಕ್ಷಣವನ್ನು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಸಂಟ್ಯಾರು, ಐದನೇ ತರಗತಿಯಿಂದ ಏಳನೇ ತರಗತಿ ಶಿಕ್ಷಣವನ್ನು ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆ ದರ್ಬೆ ಪುತ್ತೂರಿನಲ್ಲಿ ಪಡೆದು ತಮ್ಮ ಪ್ರೌಢ, ಕಾಲೇಜು ಹಾಗೂ…

Read More

ಜ್ಞಾನಾರ್ಜನೆಗೆ ಮುಕ್ತಾಯ ಎಂಬುದುವುದಿಲ್ಲ. ತಾನು ಮಹಾಜ್ಞಾನಿ ಎಂದು ಬೀಗುವುದು ಮೂರ್ಖತನ. ಎಲ್ಲವನ್ನು ತಿಳಿದವರು ಏನೂ ತಿಳಿಯದವರಂತೆ ಇರುತ್ತಾರೆ. ಅರೆಬರೆ ತಿಳಿದವನು ಮಹಾಜ್ಞಾನಿಯಂತೆ ವರ್ತಿಸುತ್ತಾನೆ. ಇದನ್ನು ತೊಡೆದು ಹಾಕುವ ಚಿಂತನೆ ಎಳೆಯ ಮಕ್ಕಳಲ್ಲಿ ಬೆಳೆಸಬೇಕು. ಅವರಲ್ಲಿ ಜ್ಞಾನಾರ್ಜನೆಯ ಹಸಿವು ಹುಟ್ಟಿಸುವ ಶಿಕ್ಷಣ ನೀಡಬೇಕು ಎಂದು ಶೃಂಗೇರಿ ಶಾರದಾ ಪೀಠದ ಜಗದ್ಗುರು ಶ್ರೀ ಭಾರತಿ ತೀರ್ಥ ಮಹಾಸ್ವಾಮೀಜಿ ಅವರ ತತ್ಕರ ಕಮಲ ಸಂಜಾತ ಪರಮಪೂಜ್ಯ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ನುಡಿದರು. ಅವರು ಯಡ್ಯಾಡಿ – ಮತ್ಯಾಡಿ ಲಿಟ್ಲ್ ಸ್ಟಾರ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ನ ನೂತನ ಕಟ್ಟಡದ ಭೂಮಿ ಪೂಜೆ ಮತ್ತು ಶಿಲಾನ್ಯಾಸ ನೆರವೇರಿಸಿ ಆಶೀರ್ವಚನ ನೀಡಿದರು. ದುಶ್ಚಟಗಳ ಪಟ್ಟಿಗೆ ಹೊಸ ಸೇರ್ಪಡೆ : ಮನುಷ್ಯನ ಜೀವನದಲ್ಲಿ ಹಲವು ಬಗೆಯ ದುಶ್ಚಟಗಳಿವೆ. ಅದಕ್ಕೆ ಹೊಸದಾಗಿ ಈಗ ಸೇರ್ಪಡೆಗೊಂಡಿರುವುದು ಮೊಬೈಲ್ ಬಳಕೆ. ಆಗಾಧ ಜ್ಞಾನ ಸಂಗ್ರಹಿಸಬಹುದಾದ ಸಾಧನವಿಂದು ಕೆಟ್ಟ ಉದ್ದೇಶಕ್ಕೆ ಹೆಚ್ಚು ಬಳಕೆಯಾಗುತ್ತಿದೆ. ಅದರಲ್ಲೂ ಮಕ್ಕಳು ಇದರ ಬೆನ್ನಹಿಂದೆ ಬಿದ್ದಿದ್ದಾರೆ. ಶಿಕ್ಷಣ ಸಂಸ್ಥೆಗಳು, ಪೋಷಕರು…

Read More

ಈ ಪ್ರಕೃತಿಯಲ್ಲಿರುವ ಪ್ರತಿಯೊಂದು ಜೀವಿಗೂ ಅದು ಮಾನವನಾಗಲೀ ಮೃಗ ಪಕ್ಷಿಗಳಾಗಲೀ, ಸರೀಸೃಪವಾಗಲೀ ಇಲ್ಲವೇ ಮತ್ಸ್ಯವಾಗಲೀ ಪ್ರತಿಯೊಂದಕ್ಕೂ ಹಸಿವು ಇದ್ದೇ ಇದೆ. ಹಸಿವು ಇಲ್ಲದ ಜೀವಿಯೇ ಇಲ್ಲ. ಹಸಿವು ಇಲ್ಲದೇ ಇರುತ್ತಿದ್ದರೆ ಈ ಪ್ರಪಂಚವೇ ಇರುತ್ತಿರಲಿಲ್ಲ. ಕಾರಣ ಶರೀರ ಬದುಕಿರಲು ಶಕ್ತಿ ಬೇಕು. ಶಕ್ತಿಯನ್ನು ಪೂರೈಸಲು ಆಹಾರ ಬೇಕು. ಆಹಾರ ಬೇಕಾದರೆ ಹಸಿವು ಆಗಬೇಕು. ಆದ್ದರಿಂದಲೇ ಪ್ರತಿಯೊಂದು ಜೀವಿಗೂ ಪರಮಾತ್ಮನು ಹಸಿವನ್ನು ಕರುಣಿಸಿದ್ದಾನೆ. ಹಸಿವು ಪುಟ್ಟ ಮಗುವಿನಿಂದ ಹಿಡಿದು ಮುದಿತನದ ತನಕ ಇದ್ದೇ ಇರುತ್ತದೆ. ಹಸಿವನ್ನು ನೀಗಿಸುವ ಆಹಾರಕ್ಕಾಗಿ ಹೋರಾಟ ಮಾಡಲೇ ಬೇಕಾಗುತ್ತದೆ. ಹಸಿವಿನ ಬೇಗೆಯನ್ನು ಅನುಭವಿಸಿದವರೇ ಬಲ್ಲರು. ಫೋಟೋದಲ್ಲಿ ಹಸಿವಿನಿಂದ ಬಳಲುವ ಪುಟ್ಟ ಮಗುವು ನನ್ನ ಕೈಯಿಂದ ಯಾರಾದರೂ ಆಹಾರವನ್ನು ಕಿತ್ತುಕೊಳ್ಳುವರೋ ಎಂಬ ಗಾಬರಿಯಿಂದ ಆಹಾರದ ಬಟ್ಟಲನ್ನು ಹಿಡಿದುಕೊಂಡು ಓಡುತ್ತಿದೆ. ಆ ದೃಶ್ಯವನ್ನು ನೋಡುವಾಗ ನಮ್ಮ ಮನ ಕರಗುತ್ತದೆ. ಆ ಪುಟ್ಟ ಮಗುವಿನ ಕೈಯಿಂದ ಆಹಾರದ ಬಟ್ಟಲನ್ನು ಕಿತ್ತುಕೊಳ್ಳಲು ಕರಿಯ ಟೊಣಪನೊಬ್ಬನು ಬೆನ್ನಟ್ಟುತ್ತಿದ್ದಾನೆ. ಆ ಟೊಣಪನ ಮೇಲೆ ನನ್ನ ಹೊರತು!!! ಹೆಚ್ಚಿನವರಿಗೆ…

Read More

ಮಂಗಳೂರು ಮಹಾನಗರಪಾಲಿಕೆಯ ಗುತ್ತಿಗೆದಾರರ ಕುಂದು ಕೊರತೆ ಮತ್ತು ಸಮಸ್ಯೆಯನ್ನು ಪರಿಶೀಲಿಸಲು ಮಹಾನಗರಪಾಲಿಕೆಯ ಅಧಿಕಾರಿಗಳನ್ನೊಳಗೊಂಡ ಸಭೆ ನಡೆಯಿತು. ಸಭೆಯಲ್ಲಿ ಗುತ್ತಿಗೆದಾರರಿಗಾಗುವ ಸಮಸ್ಯೆಯನ್ನು ಕೇಳಿ ಇದಕ್ಕೆ ಸಮಜಾಯಿಷಿಕೆಯನ್ನು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿ, ಅದರಂತೆ ಗುತ್ತಿಗೆದಾರರು ಮತ್ತು ಅಧಿಕಾರಿಗಳ ನಡುವೆ ಹಲವು ವಿಷಯಗಳ ಚರ್ಚೆ ನಡೆದಿದ್ದು ಹಲವಾರು ನ್ಯೂನತೆಗಳನ್ನು ಸರಿಪಡಿಸಲು ಸೂಕ್ತ ಕ್ರಮ ಜರುಗಿಸಲು ಆದೇಶಿಸಲಾಯಿತು. ಸಭೆಯಲ್ಲಿ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರ್, ಮುಖ್ಯ ಸಚೇತಕರಾದ ಪ್ರೇಮಾನಂದ ಶೆಟ್ಟಿ, ಪಟ್ಟಣ ಯೋಜನೆ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಲೋಹಿತ್ ಅಮೀನ್, ತೆರಿಗೆ ನಿರ್ಧರಣೆ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ವರುಣ್ ಚೌಟ, ವಿಪಕ್ಷ ನಾಯಕರಾದ ಪ್ರವೀಣ್ ಚಂದ್ರ ಆಳ್ವ ಮತ್ತು ಪಾಲಿಕೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Read More