Author: admin

ವಿಶ್ವ ಬಂಟರ ಸಮ್ಮೇಳನದ ಕಾರ್ಯಕ್ರಮಗಳ ಕುರಿತ ಐದನೇ ಪೂರ್ವಭಾವಿ ಸಭೆಯು ದಿನಾಂಕ 24/09/2023 ರಂದು ಬಂಟವಾಳದ ಬಂಟರ ಭವನದ ಸಭಾಂಗಣದಲ್ಲಿ ಸಂಜೆ 4 ಗಂಟೆಗೆ ನಡೆಯಿತು. ಸಭೆಯಲ್ಲಿ ಹಾಜರಿದ್ದ ಎಲ್ಲಾ ಸದಸ್ಯರ ಸಮ್ಮುಖದಲ್ಲಿ ಕಾರ್ಯಕ್ರಮದ ಕರಪತ್ರವನ್ನು ಅನಾವರಣಗೊಳಿಸಲಾಯಿತು. ಸಭೆಯಲ್ಲಿ ತುಳುನಾಡಿನ ಪ್ರತಿಷ್ಠಿತ ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾದ ಐಕಳಬಾವ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು ಇವರನ್ನು ಹಾಗೂ ಜಾಗತಿಕ ಬಂಟರ ಸಂಘಗಳ ಒಕ್ಕೂಟಕ್ಕೆ ನೂತನ ಪೋಷಕರಾಗಿ ಸೇರ್ಪಡೆಯಾದ ಶ್ರೀ ಸುಧಾಕರ್ ಪೂಂಜ, ಶ್ರೀ ಜಗನ್ನಾಥ್ ಚೌಟ, ಶ್ರೀ ಲೋಕೇಶ್ ಶೆಟ್ಟಿ ಮತ್ತು ಶ್ರೀ ಸುರೇಶ್ ರೈ ಮಕರಜ್ಯೋತಿ ಇವರುಗಳನ್ನು ಗೌರವಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಅಧ್ಯಕ್ಷ ಶ್ರೀ ಐಕಳ ಹರೀಶ್ ಶೆಟ್ಟಿ ಹಾಗೂ ಉಪಾಧ್ಯಕ್ಷ ಶ್ರೀ ಕರ್ನಿರೆ ವಿಶ್ವನಾಥ್ ಶೆಟ್ಟಿಯವರನ್ನು ಬಂಟರ ಸಂಘ ಬಂಟ್ವಾಳ ತಾಲೂಕಿನ ಅಧ್ಯಕ್ಷ ಹಾಗೂ ಸಾಂಸ್ಕೃತಿಕ ಸಮಿತಿಯ ಸಂಚಾಲಕರಾದ ಶ್ರೀ ಚಂದ್ರಹಾಸ್ ಡಿ. ಶೆಟ್ಟಿ ರಂಗೋಲಿ ಹಾಗೂ ಕಾರ್ಯದರ್ಶಿ ಶ್ರೀ ಜಗನ್ನಾಥ್ ಚೌಟರು ಪ್ರಿತಿಪೂರ್ವಕವಾಗಿ ಸನ್ಮಾನಿಸಿದರು.…

Read More

ಕೆಲ ತಿಂಗಳುಗಳ ಜಾಗತಿಕ ಬಂಟರ ಸಂಘಗಳ ಒಕ್ಕೂಟ (ರಿ)ದ ಸಭಾ ಕಾರ‍್ಯಕ್ರಮದ ವೇದಿಕೆಯಲ್ಲಿದ್ದ ದೇಶದ ಪ್ರತಿಷ್ಠಿತ ಬಂಟ ಉದ್ಯಮಿಯೊಬ್ಬರು ಅಧ್ಯಕ್ಷ ಐಕಳ ಹರೀಶ್ ಶೆಟ್ಟಿಯವರ ನಿಸ್ವಾರ್ಥ ಸಮಾಜ ಸೇವೆಯನ್ನು ಶ್ಲಾಘಿಸಿ ಒಕ್ಕೂಟದ ಸಮಾಜಸೇವೆಗೆ 50 ಲಕ್ಷ ರೂ. ದೇಣಿಗೆ ನೀಡುವುದಾಗಿ ನೆರೆದ ಜನಸ್ತೋಮದ ಮುಂದೆ ಘೋಷಿಸಿ ನುಡಿದಂತೆ ನಡೆದಿದ್ದಾರೆ. ಅಷ್ಟೇ ಅಲ್ಲದೆ, ಪ್ರತಿ ವರ್ಷವೂ ಒಕ್ಕೂಟಕ್ಕೆ 50 ಲಕ್ಷ ರೂಪಾಯಿಯನ್ನು ನೀಡುವುದಾಗಿ ಹೃದಯ ತುಂಬಿ ಹೇಳಿದರು. ಮುಂದೆ, ಒಕ್ಕೂಟವು ಸ್ವಂತ ಜಾಗ ಖರೀದಿಸಿ ಬಹುಮಹಡಿ ಕಾಂಪ್ಲೆಕ್ಸ್ ಕಟ್ಟಿಸಿ ಲಾಭ ಗಳಿಕೆ ಮಾಡಿ ಬಂದ ಹಣದಲ್ಲಿ ಸಮಾಜಸೇವೆ ಮಾಡಬೇಕೆಂದು ಹೇಳಿದರು. ಅದಕ್ಕೆ ಕೂಡಾ ತಾನು ಗರಿಷ್ಠ ಮಟ್ಟದಲ್ಲಿ ಆರ್ಥಿಕ ಸಹಕಾರ ನೀಡುವುದಾಗಿ ಹೇಳಿದ್ದಾರೆ. ಅವರೇ ಪ್ರಸಿದ್ಧ ಉದ್ಯಮಿ ದೇಶದ ಪ್ರತಿಷ್ಠಿತ ಹೇರಂಬಾ ಇಂಡಸ್ಟ್ರೀಸ್ ಲಿಮಿಟೆಡ್‌ನ ಚೇರ್‌ಮೆನ್ ಮಂಜೇಶ್ವರ ಮೂಲದ ಸದಾಶಿವ ಕೆ. ಶೆಟ್ಟಿ. ನಿಸ್ವಾರ್ಥ ಸಮಾಜಸೇವಕರಾಗಿರುವ ಸದಾಶಿವ ಕೆ. ಶೆಟ್ಟಿ ಅವರು ಕಾಸರಗೋಡು ಜಿಲ್ಲೆಯ ಮಂಜೇಶ್ವರ ಬಳಿಯ ಕನ್ಯಾನದ ಕೂಳೂರಿನ ಫಕೀರ ಶೆಟ್ಟಿ…

Read More

2023 ರ ಸಾಲಿನ ಪ್ರತಿಷ್ಠಿತ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಉದ್ಯಮಿ, ಸಾಮಾಜಿಕ ಚಿಂತಕ ಶ್ರೀ ಶಶಿಕಿರಣ್ ಶೆಟ್ಟರ ಸಾಧನೆಯ ಪಥದ ಹೆಜ್ಜೆ ಗುರುತುಗಳು ಉದ್ಯಮ ಕ್ಷೇತ್ರದಲ್ಲಿ ಅಚ್ಚಳಿಯದ ಪಡಿಮೂಡಿಸಿ ಭವಿಷ್ಯದ ಉದ್ಯಮ ಕ್ಷೇತ್ರದ ಸಾಧನಾಶೀಲ ಯುವಕರಿಗೆ ದಾರಿದೀಪವಾಗಬಲ್ಲುದು. ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ ಬಂಟ್ವಾಳದ ಪುಟ್ಟ ಹಳ್ಳಿಯಲ್ಲಿ ಹುಟ್ಟಿದ ಶಶಿಕಿರಣ್ ಶೆಟ್ಟಿ ಅವರು ಇಂದು ಅಂತಾರಾಷ್ಟ್ರೀಯ ಪ್ರಸಿದ್ಧಿ ಪಡೆದ ಕಾರ್ಗೋ ಸಂಬಂಧಿ ಜಾಗತಿಕ ವಿಸ್ತೃತ ವ್ಯವಹಾರಗಳನ್ನು ಹೊಂದಿದ ಸಂಸ್ಥೆಯನ್ನು ಹುಟ್ಟು ಹಾಕಿ ಫೌಂಡರ್ ಚೆಯರ್ ಮೆನ್ ಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಶ್ವ ಪ್ರಸಿದ್ಧ ಉದ್ಯಮಿಯಾಗಿದ್ದಾರೆ. 1978 ರ ಸುಮಾರಿಗೆ ಇಂಟರ್ ಮೋಡಲ್ ಟ್ರಾನ್ಸ್ ಪೋರ್ಟ್ ಎಂಡ್ ಟ್ರೇಡಿಂಗ್ ಸಿಸ್ಟಮ್ಸ್ ಫ್ರೈ.ಲಿ. ಜೊತೆಗೆ ಸೇರಿಕೊಂಡು ಉದ್ಯಮದ ಅನುಭವಗಳನ್ನು ಪಡೆದು ಈ ಉದ್ಯಮ ವ್ಯವಹಾರದ ಯಶಸ್ಸಿನ ಸಾಧ್ಯಾ ಸಾಧ್ಯತೆಗಳನ್ನು ಅಧ್ಯಯನ ಮಾಡಿ ಇದಕ್ಕೆ ಪೂರಕವಾಗಬಲ್ಲ ತನ್ನದೇ ಉದ್ಯಮ ಸ್ಥಾಪನೆ ಕುರಿತು ಯೋಚಿಸತೊಡಗಿದರು. ನಂತರ ಫೋರ್ಬಸ್ ಗೋಕಾಕ್ ಜೊತೆ ಸೇರಿ ಇನ್ನಷ್ಟು ಅನುಭವ ಸಂಪಾದಿಸಿದ ಬಳಿಕ…

Read More

ವಿದ್ಯಾಗಿರಿ (ಮೂಡುಬಿದಿರೆ): ಮೂಲವ್ಯಾಧಿ ರೋಗದ ಬಗ್ಗೆ ಅರಿವು ಅತ್ಯಗತ್ಯ. ಈ ಬಗ್ಗೆ ಎಚ್ಚರ ವಹಿಸಿದರೆ, ಆರಂಭಿಕ ಹಂತದಲ್ಲೇ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು ಎಂದು ಆಳ್ವಾಸ್ ಆರ್ಯವೇದ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ. ಸಜಿತ್ ಎಂ. ಹೇಳಿದರು. ವಿಶ್ವ ಮೂಲವ್ಯಾಧಿಯ ದಿನದ ಅಂಗವಾಗಿ ಆಳ್ವಾಸ್ ಆಯುರ್ವೇದ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಶಲ್ಯತಂತ್ರ ವಿಭಾಗ ಹಾಗೂ ಹಿಮಾಲಯ ವೆಲ್‍ನೆಸ್ ಕಂಪನಿ ಸಹಯೋಗದಲ್ಲಿ ನಡೆದ ಉಚಿತ ಮೂಲವ್ಯಾಧಿ ಚಿಕಿತ್ಸಾ ಶಿಬಿರದಲ್ಲಿ ಅವರು ಮಾತನಾಡಿದರು. ಮೂಲವ್ಯಾಧಿ ರೋಗದ ಉಗಮಕ್ಕೆ ಕಾರಣಗಳನ್ನು ತಿಳಿಸಿದ ಅವರು, ಲಕ್ಷಣಗಳನ್ನು ವಿವರಿಸಿದರು. ಹಿಮಾಲಯ ವೆಲ್‍ನೆಸ್ ಕಂಪೆನಿಯ ವ್ಯವಸ್ಥಾಪಕ ಅಲೋಕ್ ಕುಮಾರ್ ಹಾಗೂ ಕಾಲೇಜಿನ ವೈದ್ಯಕೀಯ ಅಧೀಕ್ಷಕ ಡಾ.ಮಂಜುನಾಥ ಭಟ್ ಉದ್ಘಾಟಿಸಿದರು. ಡಾ ಶಂಕರ್ ಪ್ರಸಾದ್ ವಂದಿಸಿದರು.

Read More

ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪದವಿ ಪುರಸ್ಕೃತರಾದ ಶ್ರೀದೇವಿ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಎ. ಸದಾನಂದ ಶೆಟ್ಟಿ ಅವರನ್ನು ಮಂಗಳೂರಿನ ಡಾ. ಎ. ಸದಾನಂದ ಶೆಟ್ಟಿ ಅಭಿನಂದನಾ ಸಮಿತಿ ವತಿಯಿಂದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಮಾಜಿ ಮುಖ್ಯಮಂತ್ರಿ ಡಾ. ಎಂ. ವೀರಪ್ಪ ಮೊಯ್ಲಿಯವರು ಅಭಿನಂದನೆಯ ನುಡಿಗಳನ್ನಾಡಿ, ಸದಾನಂದ ಶೆಟ್ಟಿ ಅವರ ಯಶಸ್ಸಿನ ಹಿಂದೆ ಕಠಿನ ಪರಿಶ್ರಮ ಪ್ರಾಮಾಣಿಕತೆ ಇದೆ. ಆ ಮೂಲಕ ಅರ್ಹವಾಗಿಯೇ ಕುವೆಂಪು ವಿ.ವಿ. ಗೌರವ ಡಾಕ್ಟರೆಟ್ ನೀಡಿ ಗೌರವಿದೆ. ಶ್ರೀದೇವಿ ಶಿಕ್ಷಣ ಟ್ರಸ್ಟ್‌ನ ಮೂಲಕ ಸಾವಿರಾರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ, ಎಲ್ಲಾ ವಿಧದ ಕ್ರೀಡೆಗಳಿಗೆ ಪ್ರೋತ್ಸಾಹಕರಾಗಿ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಂಘಟನಾ ಶಕ್ತಿಯಾಗಿ ಕೆಲಸ ಮಾಡುತ್ತಿದ್ದಾರೆ. ಜಾತಿ, ಮತಗಳ ಭೇದವಿಲ್ಲದೆ ಎಲ್ಲರಿಗೂ ಸ್ಪಂದಿಸುವ ಮೂಲಕ ಆದರ್ಶಪ್ರಾಯರಾಗಿದ್ದು, ತುಳುನಾಡಿನ ನಾಯಕನ ಸ್ಥಾನದಲ್ಲಿ ಸದಾನಂದ ಶೆಟ್ಟಿಯವರನ್ನು ಗುರುತಿಸಬಹುದಾಗಿದೆ ಎಂದರು. ಡಾ. ಎ. ಸದಾನಂದ ಶೆಟ್ಟಿ ಅವರು ಅಭಿನಂದನೆ ಸ್ವೀಕರಿಸಿ ಮಾತನಾಡಿ, ಈ ಅಭಿನಂದನೆಯಿಂದ ಮನಸ್ಸು ಹೆಚ್ಚಿದ…

Read More

ನಮ್ಮ ಹಿಂದೂ ಧರ್ಮದಲ್ಲಿ ಹಬ್ಬಗಳಿಗೆ ಮತ್ತು ದೇವಿ ದೇವತೆಗಳಿಗೆ ಹೆಚ್ಚಿನ ಮಹತ್ವವಿದ್ದು ಹಬ್ಬದ ಸಂಭ್ರಮದಲ್ಲಿ ದೇವತಾ ಆರಾಧನೆ ಮುಖ್ಯವಾಗಿರುತ್ತದೆ. ಆಗಸ್ಟ್ ತಿಂಗಳಲ್ಲಿ ಬರುವ ಪ್ರಮುಖ ಹಬ್ಬವೆಂದರೆ ವರಮಹಾಲಕ್ಷ್ಮೀ ಹಬ್ಬವಾಗಿದ್ದು ಧನ ಪ್ರಾಪ್ತಿಗೆ ಸಂಪತ್ತಿನ ಅದಿಧೇವತೆಯಾದ ಲಕ್ಷ್ಮೀಯನ್ನು ಪೂಜಿಸುತ್ತಾರೆ. ಆ ಮನೆಯಲ್ಲಿ ಲಕ್ಷ್ಮೀ ನೆಲೆ ನಿಲ್ಲಲಿ ಮತ್ತು ಅವರ ಆಶೀರ್ವಾದ ಮನೆಯವರ ಮೇಲಿರಲಿ ಎಂಬುದೇ ಈ ಹಬ್ಬದ ಪ್ರಮುಖ ಉದ್ದೇಶವಾಗಿದೆ.ಇಂದಿನ ಜೀವನದಲ್ಲಿ ಹಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದ್ದೇ ಇದೆ. ಜೀವನದಲ್ಲಿ ಹಣವೊಂದೇ ಮುಖ್ಯವಲ್ಲದೇ ಇದ್ದರೂ ನಮ್ಮ ಮೂಲಭೂತ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ನಾವು ಹಣವನ್ನು ಅವಲಂಬಿಸಿದ್ದೇವೆ. ಆದ್ದರಿಂದ ಧನ ಕನಕಕ್ಕೆ ಪ್ರಮುಖ ದೇವತೆಯಾಗಿರುವ ಲಕ್ಷ್ಮೀಯ ಆರಾಧನೆಯನ್ನು ಮಾಡುವುದರಿಂದ ಲಕ್ಷ್ಮೀ ಕೃಪಾಕಟಾಕ್ಷಕ್ಕೆ ನಾವು ಪಾತ್ರರಾಗಬಹುದು ಮತ್ತು ಧಾರ್ಮಿಕ ವಿಧಿ ವಿಧಾನಗಳನ್ನು ಕೂಡ ಮನೆಯಲ್ಲಿ ಅನುಷ್ಠಾನಗೊಳಿಸಬಹುದು ಎಂಬುದು ಹಬ್ಬದ ಹಿಂದಿರುವ ಮುಖ್ಯ ಉದ್ದೇಶವಾಗಿದೆ.ಲಕ್ಷ್ಮೀ ಹಬ್ಬವನ್ನು ಮಾಡುವಾಗ ಮನೆಯಲ್ಲಿ ಸ್ವಚ್ಛತೆಗೆ ಪ್ರಮುಖ ಆದ್ಯತೆಯನ್ನು ನೀಡಬೇಕು. ಮನೆಯಲ್ಲಿ ಕಸ ತುಂಬಿದ್ದು ನೀವು ಲಕ್ಷ್ಮೀಯನ್ನು ಸ್ವಾಗತಿಸಿದರೆ ಆಕೆ ಖಂಡಿತ ನಿಮ್ಮ ಮನೆಯನ್ನು…

Read More

ಬದುಕಿಗೆ ಅರ್ಥವನ್ನು ಹುಡುಕುತ್ತಾ ಹೋದಾಗ ಪರವೂರಿನಲ್ಲಿ ನೆಲೆಸಿ ಊರಿಗೂ ಉಪಕಾರಿಯಾಗಿ ಸಾರ್ಥಕತೆ ಪಡೆದ ವ್ಯಕ್ತಿಗೆ ಹುಟ್ಟೂರಿನಲ್ಲಿಯೇ ಅಭಿನಂದಿಸುವ ಈ‌ ಕಾರ್ಯಕ್ರಮ ಶ್ಲಾಘನೀಯ. ಉಸಿರಾಡುವಿಕೆಯೇ, ಸುಖಾನುಭವ ಬದುಕಲ್ಲ. ತನ್ನ ಸಾಮಾಜಿಕ, ಆದ್ಯಾತ್ಮಿಕತೆಯೇ ಬದುಕು. ಜೀವನದಲ್ಲಿ ಅತ್ಯಂತ ಎತ್ತರದಲ್ಲಿರುವುದು ಭಗವಂತ.‌ ತನ್ನ ಜೊತೆ ಇತರರು ಉತ್ತಮವಾಗಿರಬೇಕೆಂದು ಬಯಸುವುದು ಸಾರ್ಥಕತೆ. ಜೀವನದ ನೆಮ್ಮದಿಯ ತಾಣ ಹುಟ್ಟೂರು. ಜೀವನದ ಎಲ್ಲಾ ಸೌಲಭ್ಯ ಊರಿಗೂ ವಿಸ್ತರಿಸಿದ ಸಾಮಾಜಿಕ ಚಿಂತನೆಯುಳ್ಳವರು. ಅಸಾಧಾರಣ ಸಾಧನೆ ಮಾಡಿದವರಿಗೆ ಸನ್ಮಾನ ನೀಡಲೇಬೇಕಾಗಿರುವುದು ಅಗತ್ಯ. ಸಾವಿರಾರು ಮಂದಿ ಬದುಕನ್ನು ಏಳಿಗೆಯತ್ತ ಕೊಂಡೊಯ್ದ ಪ್ರವೀಣ ಶೆಟ್ಟಿಯವರ ಕೀರ್ತಿ ಜಗದುದ್ದಗಲಕ್ಕೂ ಹೊರಹೊಮ್ಮಿದೆ ಎಂದು ಶ್ರೀ ಸುಬ್ರಮಣ್ಯ ಮಠಾಧೀಶರಾದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಗಳು ಹೇಳಿದರು.ವಕ್ವಾಡಿ ಪ್ರವೀಣ್ ಶೆಟ್ಟಿ ಹುಟ್ಟೂರ ಸನ್ಮಾನ ಸಮಿತಿ ವತಿಯಿಂದ ವಕ್ವಾಡಿ ಫಾರ್ಚೂನ್ ವಿಲೇಜ್ ಹೊಟೇಲ್ ಬಳಿ ಅದ್ಧೂರಿ ವೇದಿಕೆಯಲ್ಲಿ ಭಾನುವಾರ ಸಂಜೆ ಹಮ್ಮಿಕೊಳ್ಳಲಾದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಉದ್ಯಮಿ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿಯವರ ಹುಟ್ಟೂರಿನ ಅಭಿನಂದನಾ ಸಮಾರಂಭದಲ್ಲಿ ಉಪಸ್ಥಿತರಿದ್ದು ಆಶೀರ್ವಚನ ನೀಡಿದರು.…

Read More

ಮಾನವೀಯ ಮೌಲ್ಯಗಳಿಲ್ಲದ ಮನುಷ್ಯ ಚಿಗುರೊಡೆಯದ ಕೊರಡಿನಂತೆ, ಬರಡಾದ ಬಂಜರು ಭೂಮಿಯಂತೆ, ಘಮವಿಲ್ಲದ ಹೂವಿನಂತೆ, ಎಲೆಗಳಿಲ್ಲದ ಬೋಳು ವೃಕ್ಷದಂತೆ..! ಹೌದು, ಘಮವಿಲ್ಲದ ಹೂವಿನಲ್ಲಿ ಪರಿಮಳವನ್ನು ಆಘ್ರಾಣಿಸಲು ಸಾಧ್ಯವೇ? ಬೋಳು ವೃಕ್ಷದಲ್ಲಿ ನಿಸರ್ಗದ ಸೊಬಗನ್ನು ಆಸ್ವಾದಿಸಬಹುದೇ? ಬಂಜರು ಭೂಮಿಯಲ್ಲಿ ಸೃಷ್ಟಿಯ ಚೆಲುವನ್ನು ಸವಿಯಲು ಸಾಧ್ಯವೇ ? ಖಂಡಿತಾ ಸಾಧ್ಯವಿಲ್ಲ…! ಹಾಗೆಯೇ ಒಬ್ಬ ವಿದ್ಯಾವಂತನಾಗಿದ್ದು ಹಣವಂತನಾಗಿದ್ದು ಉನ್ನತ ಸ್ಥಾನಮಾನಗಳನ್ನು ಅಲಂಕರಿಸಿದ್ದರೂ ಕೂಡಾ ಆತನಲ್ಲಿ ಉತ್ತಮ ನಡವಳಿಕೆಗಳು, ಸಂಸ್ಕಾರವು ಇಲ್ಲದಿದ್ದರೆ ಆತನು ಮೃಗಗಳಿಗೆ ಸಮಾನ. ಮಾನವೀಯ ಮತ್ತು ನೈತಿಕ ಮೌಲ್ಯಗಳು ಒಬ್ಬ ವ್ಯಕ್ತಿಯ ಬದುಕನ್ನು ಸುಂದರವಾಗಿಸುವುದಲ್ಲದೆ ಸಮಾಜದಲ್ಲಿ ಗೌರವ, ಘನತೆ ವೃದ್ಧಿಸಿ ಆತನನ್ನು ಉಚ್ಚ ಮಟ್ಟಕ್ಕೇರಿಸುತ್ತದೆ. ಶಿಕ್ಷಣದೊಂದಿಗೆ ಮಾನವೀಯ ಮೌಲ್ಯಗಳು ಮಿಳಿತವಾದರೆ ಮಾತ್ರ ಅವರು ಸದ್ಗುಣ ಸಂಪನ್ನರಾಗಬಹುದು. ಇವನ್ನೆಲ್ಲಾ ಮನಗಂಡು ಮಕ್ಕಳಿಗಾಗಿ ಸಂಸ್ಕೃತಿ ಸಂಸ್ಕಾರವನ್ನು ತಿಳಿಸಿ ಅವರನ್ನು ಉತ್ತಮ ಮನುಷ್ಯರನ್ನಾಗಿ ಮಾಡಬೇಕೆಂಬ ಹಿತಾಸಕ್ತಿಯಿಂದ ಸ್ಥಾಪಿಸಲ್ಪಟ್ಟ ಸಂಸ್ಥೆಯೇ ಚಿಣ್ಣರ ಬಿಂಬ. ಅಂತಹ ಒಂದು ವಿಶೇಷವಾದ ಶಿಕ್ಷಣವನ್ನು ನೀಡುವ ಗುರುಕುಲದಂತೆ ಕೆಲಸ ಮಾಡಿ ಇದು ಮಾನ್ಯತೆ ಪಡೆಯುತ್ತದೆ. ಚಿಣ್ಣರ ಬಿಂಬವು…

Read More

ದೇಶದಲ್ಲಿ ಉಳಿತಾಯಕ್ಕೆ ಬದಲಾಗಿ ವೈಯಕ್ತಿಕ ಸಾಲ ಪಡೆಯುತ್ತಿರುವ ಪ್ರಮಾಣ ಗಣನೀಯವಾಗಿ ಏರುತ್ತಿದೆ. ಇದು ಸುಸ್ಥಿರ ಆರ್ಥಿಕ ಬೆಳವಣಿಗೆಯ ನಿಟ್ಟಿನಲ್ಲಿ ಉತ್ತಮ ಬೆಳವಣಿಗೆಯಲ್ಲ. ಇದಕ್ಕೆ ನಿಯಂತ್ರಣ ಹೇರಬೇಕು ಎಂದು ರಿಸರ್ವ್‌ ಬ್ಯಾಂಕ್‌ ಆಫ್ ಇಂಡಿಯಾ (ಆರ್‌ಬಿಐ) ಮತ್ತು ಕೆಲವು ಆರ್ಥಿಕ ತಜ್ಞರು ಹೇಳಿದರೂ ಅದನ್ನು ಯಾರೂ ಗಂಭೀರವಾಗಿ ಪರಿಗಣಿಸಿರಲಿಲ್ಲ. ಇದೀಗ ಆರ್‌ಬಿಐಯೇ ಅಂಗಳಕ್ಕೆ ಇಳಿದಿದೆ. ಅತಿಯಾದ ಸಾಲ ನೀಡುವಿಕೆಗೆ ಅಂಕುಶ ಹಾಕಿದೆ. ಇದರಿಂದ ಸಾಮಾನ್ಯ ಸಾಲಗಾರರಿಗೆ ಏನಾಗಲಿದೆ. ಇದುವರೆಗೆ ಸುಲಭದಲ್ಲಿ ಸಿಗುತ್ತಿದ್ದ ವೈಯಕ್ತಿಕ ಸಾಲ ಇನ್ನು ಆ ರೀತಿ ಸಿಗುವುದಿಲ್ಲವೇ ಎಂಬ ಪ್ರಶ್ನೆ ಜನಸಾಮಾನ್ಯರದ್ದು. ಮೊದಲನೆಯದಾಗಿ ಆರ್‌ಬಿಐ ಇಂತಹ ಒಂದು ಕ್ರಮಕ್ಕೆ ಮುಂದಾಗಿದ್ದಾದರೂ ಏಕೆ ಎಂಬುದಾಗಿ ವಿಶ್ಲೇಷಿಸುವು ದಾದರೆ, ದೇಶದಲ್ಲಿ ಬ್ಯಾಂಕ್‌ಗಳು ಮತ್ತು ಬ್ಯಾಂಕೇತರ ಸಂಸ್ಥೆಗಳು (ಎನ್‌ಬಿಎಫ್ಸಿ) ಬೇಕಾಬಿಟ್ಟಿಯಾಗಿ ಸಾಲ ನೀಡಿರುವುದು. ಇದು ಅತಿಯಾದರೆ ಒಂದಲ್ಲ ಒಂದು ರೀತಿಯಲ್ಲಿ ಅಪಾಯಕ್ಕೆ ದಾರಿಯಾಗುತ್ತದೆ. ಸಾಲ ನೀಡುವ ಇಂತಹ ಸಂಸ್ಥೆಗಳು ಉಳಿಯುವುದು ಮತ್ತು ಒಟ್ಟಾರೆ ದೇಶದ ಹಣಕಾಸು ಸಂಸ್ಥೆಗಳು ಸುಸ್ಥಿರವಾಗಿರಬೇಕಾದರೆ ಇಂತಹ ನಿಯಮ ಅನಿವಾರ್ಯ ಎಂಬುದು ಆರ್‌ಬಿಐ…

Read More

ರಸ್ತೆ ಸುರಕ್ಷತೆ ಎಂಬುದು ಜಾಗತಿಕ ಸಮಸ್ಯೆಯಾಗಿ ಪರಿಣಮಿಸಿದ್ದು, ರಸ್ತೆಗಳಲ್ಲಿ ಸಂಭವಿಸುವ ಅಪಘಾತಗಳಿಗೆ ಕಡಿವಾಣ ಹಾಕುವುದು ಜಗತ್ತಿನ ಬಹುತೇಕ ರಾಷ್ಟ್ರಗಳಿಗೆ ಬಲುದೊಡ್ಡ ಸವಾಲಾಗಿದೆ. ಈ ಸಂಬಂಧ ಜಾಗತಿಕ ರಸ್ತೆ ಸುರಕ್ಷತೆಗಾಗಿನ ವಿಶ್ವಸಂಸ್ಥೆಯ ವಿಶೇಷ ಪ್ರತಿನಿಧಿಯಾಗಿರುವ ಜೀನ್‌ ಟಾಡ್‌ ಅವರೂ ಆತಂಕ ವ್ಯಕ್ತಪಡಿಸಿದ್ದು, ಪ್ರತಿನಿತ್ಯ ವಿಶ್ವಾದ್ಯಂತ ಸಂಭವಿಸುತ್ತಿರುವ ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಸಾಗಿದ್ದು, ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಜಾಗತಿಕ ಸಮುದಾಯ ಕೈಗೊಳ್ಳುತ್ತಿರುವ ಕ್ರಮಗಳು ಪರ್ಯಾಪ್ತವಾಗಿಲ್ಲ ಎಂದು ಹೇಳಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ಅಂಕಿ ಅಂಶಗಳ ಪ್ರಕಾರ, ಪ್ರತೀ ವರ್ಷ ವಿಶ್ವಾದ್ಯಂತ 13 ಲಕ್ಷ ಮಂದಿ ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪುತ್ತಿದ್ದಾರೆ. ಮಧ್ಯಮ ಮತ್ತು ಕಡಿಮೆ ಆದಾಯದ ದೇಶಗಳಲ್ಲಿ ಸಂಭವಿಸುವ ರಸ್ತೆ ಅಪಘಾತಗಳಲ್ಲಿ ಸಾವಿಗೀಡಾಗುವ ಪ್ರತೀ ಹತ್ತು ಮಂದಿಯಲ್ಲಿ 9 ಮಂದಿಯ ಜೀವವನ್ನು ಉಳಿಸಬಹುದಾಗಿದೆ. ಅಷ್ಟು ಮಾತ್ರವಲ್ಲದೆ, ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪುತ್ತಿರುವವರ ಪೈಕಿ ಮಕ್ಕಳು ಮತ್ತು 5-29 ವರ್ಷದೊಳಗಿನವರ ಸಂಖ್ಯೆಯೇ ಅಧಿಕ ಎಂಬುದು ಅತ್ಯಂತ ದುರದೃಷ್ಟಕರ ಸಂಗತಿ. ಇದೇ ವೇಳೆ ಭಾರತದಲ್ಲಿ ಪ್ರತೀ…

Read More