Author: admin

ಪ್ರಕೃತಿಯ ಮಡಿಲಲ್ಲಿ ಬೆಳೆಯುವ ಮಾನವನ ಜಗತ್ತು ಜೀವ ಸಂಕುಲ ಎಲ್ಲ ಒಂದು ಮಹತ್ವವಾಗಿದೆ . ಇಂತಹ ಪರಿಸರವನ್ನು ಉಳಿಸಿ-ಬೆಳೆಸುವ ಹೊಣೆ ನಮ್ಮೆಲ್ಲರ ಜವಾಬ್ದಾರಿಯಾಗಬೇಕು. ನಮ್ಮ ಒಂದು ಸ್ವಾರ್ಥಕ್ಕಾಗಿ ಪರಿಸರ ಹಾಳು ಮಾಡಿದರೆ ನಾಳೆಯ ದಿನ ಪರಿಸರ ನಮ್ಮನ್ನು ಉಳಿಸುವುದಿಲ್ಲ. ಹಸುರು ನಮ್ಮೆಲ್ಲರ ಉಸಿರು ಎಂಬ ನುಡಿ ಮಾತು ನಿಜಕ್ಕೂ ಅದ್ಭುತವಾದ ಅರ್ಥ ಕಲ್ಪಿಸುತ್ತದೆ. ಗಿಡ ಮರ, ಹೂ, ಪ್ರಾಣಿ, ಪಕ್ಷಿಗಳು ಎಲ್ಲ ಜೀವಿಗಳ ಸಂಕುಲವನ್ನು ಪರಿಸರದಲ್ಲಿ ನೋಡುವ ಸೊಬಗು ಕಣ್ಣಿಗೆ ಆಕರ್ಷಣಿಯವಾದದು. ಪ್ರತಿಯೊಬ್ಬರು ಒಂದೊಂದು ಮರ ನೆಡುತ್ತಾ ಪರಿಸರ ಬೆಳೆಸುವಲ್ಲಿ ಕೈ ಜೋಡಿಸಬೇಕು. ಪ್ಲಾಸ್ಟಿಕ್‌ ಬಳಕೆ ಕಡಿಮೆ ಮಾಡಿ ಪರಿಸರ ಜಾಗೃತಿ ಮೂಡಿಸುವ ಕರ್ತವ್ಯ ನಮ್ಮದಾಗಬೇಕು. ನಿಸರ್ಗ ಒಂದು ಕೊಡುಗೆ ಅದನ್ನು ವರ್ಣಿಸಲು ಪದಗಳೇ ಸಾಲದು ನಿಸರ್ಗದ ಒಡಲು ತಾಯಿಯ ಮಡಿಲು ಯಾವುದಕ್ಕೂ ಸರಿಸಾಟಿಯಾಗದು. ಜೀವ ಸಂಕುಲಕ್ಕೆ ಮಗುವಾಗಿ ಪಾಲನೆ ಮಾಡುವ ತಾಯಿ, ಪ್ರಕೃತಿಯನ್ನು ತನ್ನ ಮಡಿಲಲ್ಲಿ ಜೋಗುಳವಾಡುವ ಭೂ ತಾಯಿ ಇವಳನ್ನು ನಾವು ಕಾಪಾಡುವ ಒಂದು ಮನೋಭಾವ ಇರ ಬೇಕು. ಪ್ರಕೃತಿಯ…

Read More

ಪ್ರಕೃತಿಯ ನೈಜ ಸೌಂದರ್ಯಕ್ಕೆ ಅಗ್ರತಾಣವಾದ ಪಶ್ಚಿಮ ಘಟ್ಟಗಳ ಸಾಲುಗಳ ನಡುವೆ ನಿಸರ್ಗದ ಮಡಿಲಲ್ಲಿ ಬೆಟ್ಟಗಳ ಸಾಲು ಮಾರ್ಗದುದ್ದಕ್ಕೂ ಮುಗಿಲುಚುಂಬಿಸುವ ದಟ್ಟ ಹಸಿರು ಕಾನನದ ಪ್ರಶಾಂತ ವಾತಾವರಣ ಹಾಗೂ ಹಕ್ಕಿಗಳ‌ ಚಿಲಿಪಿಲಿ ಕಲರವ, ಪ್ರಕ್ರತಿ ಸೌಂದರ್ಯದ ಖನಿ ತೀರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥದಲ್ಲಿ ಜನ್ಮ ತಾಳುವ ಶರಾವತಿ ನದಿ ರಭಸದಿಂದ‌ ಹರಿದು ಜೋಗದಲ್ಲಿ ಧುಮ್ಮಿಕ್ಕುತ್ತಾಳೆ. ಅದೇ ವಿಶ್ವವಿಖ್ಯಾತ‌ ಜೋಗ ಜಲಪಾತ. ಭೋರ್ಗರೆಯತ್ತಾ ಹಾಲ್ನೋರೆಯುಕ್ಕಿಸುತ್ತಾ ವೈಯ್ಯಾರದೊಂದಿಗೆ ರೌದ್ರತೆಯನ್ನು ತೋರುವ ಸೌಂದರ್ಯ ವರ್ಣನಾತೀತ. ಧರೆಗಿಳಿವ ದೇವ ವಧುವಿನಂತೆ ಕಂಗೊಳಿಸುವ ದೃಶ್ಯ ವೈಭವ, ಜಲಪಾತದ ಬೆಳ್ನೊರೆಗಳ ಚೆಲುವಿನ ಚಿತ್ತಾರವನ್ನು ಕಣ್ತುಂಬಿಕೊಳ್ಳುವ ಕಾತರದಲ್ಲಿ ಜೋಗಜಲಪಾತಕ್ಕೆ ಬಂದಾಗ ಇಲ್ಲಿನ ಜಲಧಾರಗಳ ನೃತ್ಯ ವೈಭವ, ಜಲಪಟಗಳ ಝೇಂಕಾರ, ಪ್ರಾಕೃತಿಕ ಸೌಂದರ್ಯ ಮನಸ್ಸಿಗೆ ಆಹ್ಲಾದ ನೀಡಿತು. ಆಳವಾದ‌ ಕಣಿವೆ, ಸುಂದರವಾಗಿ‌ ಧುಮ್ಮಿಕ್ಕುವ ಜಲಪಾತ ತುಂತುರು ಹನಿಗಳ ಸಿಂಚನದೊಂದಿಗೆ‌ ಜಲಪಾತದ ಹರ್ಷೊದ್ದಾರಗಳ‌ ವೀಕ್ಷಣೆಗೆ‌ ಪ್ರವಾಸಿಗರ ದಂಡೇ‌ ಜಲಪಾತದತ್ತ‌ ಹರಿದು‌ ಬರುತ್ತದೆ. ಜೋಗ ಜಲಪಾತದ‌ ಜಲರಾಶಿಯ ಹಾಲ್ನೋರೆಯ ಚಿತ್ತಾರ, ನಿಬ್ಬೆರಗು ಗೊಳಿಸುವ ಮೋಹಕ ನೋಟ ಅನುಪಮ. ಹಸಿರು…

Read More

ಸೃಜನಶೀಲ ಮನಸ್ಸಿನ ಪ್ರಬುದ್ಧವಾದ ಪ್ರಯೋಗವೇ ಕವನಗಳು ಅಥವಾ ಕಾವ್ಯಗಳು. ಕವಿಯ ಪರಿಕಲ್ಪನೆಗಳಿಗೆ ನಿಲುಕದ್ದು ಯಾವುದೂ ಇಲ್ಲ. ಕವಿಗಳು ಹೃದಯ ಶ್ರೀಮಂತಿಕೆಯನ್ನು ಹೊಂದಿರುತ್ತಾರೆ. ಭಾವನೆಗಳ ಬೆನ್ನುಹತ್ತಿ ಶಬ್ದ, ಲಯ, ಗತ್ತು, ಪದಗಳ ಚೌಕಟ್ಟಿನೊಂದಿಗೆ ಕವನಗಳು ಸೃಷ್ಟಿಯಾಗಿ ಕವಿಯ ಆಶಯಗಳು ಜನರಿಗೆ ಮುಟ್ಟುವಂತಹ ಕಾರ್ಯ ಆಗಬೇಕಾಗಿದೆ. ತನ್ನನ್ನು ತಾನು ಅರಿತುಕೊಂಡು ಜನರ ಭಾವನೆಗಳಿಗೆ ಸ್ಪಂದಿಸುವ ಸಾಮಾಜಿಕ ಹೊಣೆಗಾರಿಕೆ ಕವಿಗಳಿಗೆ ಇರಬೇಕಾಗಿದೆ ಎಂದು ಖ್ಯಾತ ಸಾಹಿತಿಗಳು ಹಾಗೂ ಬಸವ ಅಧ್ಯಯನ ವೇದಿಕೆ ಪುಣೆ ಇದರ ಅಧ್ಯಕ್ಷರಾದ ಡಾ. ಶಶಿಕಾಂತ ಪಟ್ಟಣ ಅವರು ಅಭಿಪ್ರಾಯಪಟ್ಟರು. ದಿ. ಗುಂಡೂರಾಜ್ ಶೆಟ್ಟಿ ಸಭಾಭವನದಲ್ಲಿ ನಡೆದ ಪುಣೆ ಕನ್ನಡ ಸಂಘದ ವಾರ್ಷಿಕ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಾ ಜಗತ್ತಿನ ಅತೀ ಪುರಾತನ ಇತಿಹಾಸ ಹೊಂದಿದ ನಮ್ಮ ಕನ್ನಡ ಭಾಷೆಗೆ ೮ ಜ್ಞಾನಪೀಠ ಪ್ರಶಸ್ತಿಗಳು ಲಭಿಸಿದ್ದು ಕನ್ನಡದ ಮೇರು ಕವಿಗಳು, ಸಾಹಿತಿಗಳು ಭಾಷೆಯನ್ನು ಶ್ರೀಮಂತಗೊಳಿಸಿದ್ದಾರೆ. ಸುಖ, ದುಃಖ, ನೋವು ನಲಿವುಗಳಿಗೆ ಸ್ಪಂದಿಸುವ ಗುಣ ಕೇವಲ ತಾಯಿಗೆ…

Read More

ವಿದ್ಯಾಗಿರಿ: ‘ದೇಶದಲ್ಲಿ ಉತ್ತಮ ವಿದ್ಯಾರ್ಥಿಗಳನ್ನು ಬೆಳೆಸುವಲ್ಲಿ ಅನುದಾನ ರಹಿತ ವಿದ್ಯಾಸಂಸ್ಥೆಗಳ ಕೊಡುಗೆ ಅಪಾರ’ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದರು. ಕರ್ನಾಟಕ ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳ ಆಡಳಿತ ಮಂಡಳಿ ಸಂಘಟನೆ (ಕುಪ್ಮಾ) ಆಳ್ವಾಸ್ ಕಾಲೇಜಿನ ಮುಂಡ್ರುದೆಗುತ್ತು ಕೆ. ಅಮರನಾಥ ಶೆಟ್ಟಿ ಸ್ಮಾರಕ ಸಭಾಂಗಣದಲ್ಲಿ ಹಮ್ಮಿಕೊಂಡ ‘ಪದವಿ ಪೂರ್ವ ಶಿಕ್ಷಣ- ಮುಕ್ತ ಸಮ್ಮೇಳನ 2024’ವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು. ‘ಪದವಿಪೂರ್ವ ಶಿಕ್ಷಣವು ವಿದ್ಯಾರ್ಥಿಯ ಮೂಲಭೂತ ಹಕ್ಕು. ಅದನ್ನು ಜಾರಿಗೆ ತರಲು ಸರ್ಕಾರದ ಜೊತೆ ಖಾಸಗಿ ಸಂಸ್ಥೆಗಳು ಕೈ ಜೋಡಿಸಿವೆ. ವಿದ್ಯಾರ್ಥಿಗಳು ಬಲಿಷ್ಠವಾದರೆ, ದೇಶ ಬಲಿಷ್ಠವಾಗಲು ಸಾಧ್ಯ. ವ್ಯಕ್ತಿತ್ವ ರೂಪಿಸುವ ಕೆಲಸವನ್ನು ಶಿಕ್ಷಣ ಸಂಸ್ಥೆಗಳು ಮಾಡುತ್ತಿವೆ’ ಎಂದರು. ‘ಶಿಕ್ಷಣ ನೀಡುವುದು ನಿಜವಾದ ದೇಶಪ್ರೇಮ. ಈ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆಗಳ ಕಾರ್ಯ ಶ್ಲಾಘನೀಯ. ‘ಕುಪ್ಮಾ’ ಶಿಕ್ಷಣ ಸಂಸ್ಥೆಗಳ ಕಷ್ಟ-ಸುಖ ಹಂಚಿಕೊಳ್ಳುವ ಸಂಘಟನೆಯಾಗಬೇಕು’ ಎಂದರು. ‘ಕೇವಲ ವೈದ್ಯರು ಅಥವಾ ಎಂಜಿನಿಯರ್‍ಗಳನ್ನು ಮಾತ್ರವಲ್ಲ, ಉತ್ತಮ ರಾಜಕಾರಣಿಗಳನ್ನೂ ರೂಪಿಸಿ’ ಎಂದು ಅವರು ಮನವಿ ಮಾಡಿದರು. ಆಳ್ವಾಸ್ ಶಿಕ್ಷಣ…

Read More

ಪ್ರಗತಿ ಗ್ರಾಫಿಕ್ಸ್‌ ಮತ್ತು ಶ್ರೀನಿವಾಸ ಪುಸ್ತಕ ಪ್ರಕಾಶನ ಅರ್ಪಿಸುವ ಪರಂಪರಾ ಕಲ್ಚರಲ್‌ ಫೌಂಡೇಷನ್ ಅವರ ಸಹಯೋಗದಲ್ಲಿ ಸಾಹಿತಿ ರಾಜೇಂದ್ರ ಬಿ. ಶೆಟ್ಟಿಯವರ ಅಮ್ಮ ಹಚ್ಚಿದ ದೀಪ, ಕಥೆಯೊಂದಿಗೆ ಗಣಿತ, ದೆವ್ವಗಳ ನಾಡಿನಲ್ಲಿ ಎಂಬ ಮೂರು ಪುಸ್ತಕಗಳು ಲೋಕಾರ್ಪಣೆಗೊಂಡಿತು. ಪ್ರಾಸ್ತಾವಿಕ ಮಾತುಗಳನ್ನಾಡಿದ ಡಾ. ಎಂ. ಭೈರೇಗೌಡ ಅವರು, ಸೂಜಿಗಲ್ಲಿನ ವ್ಯಕ್ತಿತ್ವ ಇರುವವರು ರಾಜೇಂದ್ರ ಬಿ. ಶೆಟ್ಟಿ. ಅಧ್ಯಯನ ಮತ್ತು ಆಸಕ್ತಿಗಳಿಗೆ ಸಂಬಂಧ ಇಲ್ಲ ಎನ್ನುವುದನ್ನು ಸಾಬೀತುಪಡಿಸುವ ಕೆಲಸ ಇವರು ಮಾಡಿದ್ದಾರೆ ಎಂದರು. ಹಾಗೆಯೇ ಸದ್ಯದ ಪತ್ರಿಕೋದ್ಯಮದ ಸ್ಥಿತಿಗತಿ ಬಗೆಗೂ ಸಂತಾಪ ವ್ಯಕ್ತಪಡಿಸಿದರು. ಅಮ್ಮ ಹಚ್ಚಿದ ದೀಪ ಪುಸ್ತಕ ಪರಿಚಯವನ್ನು ಮಾಡುತ್ತಾ ಡಾ. ನಾ. ದಾಮೋದರ ಶೆಟ್ಟಿ, ಕಥೆಗಾರರು ಸಾಮಾನ್ಯವಾಗಿ ತಮ್ಮ ಕಥೆಗಳಿಗೆ ಒಂದೊಳ್ಳೆ ಆದಿ, ಮಧ್ಯ, ಹಾಗೂ ಒಂದೊಳ್ಳೆ ಮುಕ್ತಾಯ ಇರುವಂತಹ ಕಥಗಳನ್ನು ಬರೆಯುತ್ತಾರೆ ಆದರೆ ಇವೆಲ್ಲಕ್ಕಿಂತ ಭಿನ್ನವಾಗಿ ಬರೆಯುವವರು ರಾಜೇಂದ್ರ ಅವರು, ಹಾಗೆ ಈ ಕೃತಿಯಲ್ಲೂ ಇವರು ಯಾವುದೇ ಅತಿಶಯೋಕ್ತಿ ಇಲ್ಲದೆ ಅತ್ಯಂತ ಸೂಕ್ಷ್ಮವಾಗಿ ಚಿತ್ರಿಸಿದ್ದಾರೆ. ಈ ಸಂಕಲನದಲ್ಲಿ ಬರುವಂತಹ ಒಂದು…

Read More

ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ ಇವರ ಪ್ರಾಯೋಜಕತ್ವದಲ್ಲಿ ದುಬಾಯಿ ಮತ್ತು ತಾಯ್ನಾಡಿನ ಯಕ್ಷಗಾನ ರಂಗದ ಸಾಧಕರೊಬ್ಬರನ್ನು ಗುರುತಿಸಿ, ವಿಶೇಷವಾಗಿ ವಾರ್ಷಿಕ ಯಕ್ಷಶ್ರೀ ರಕ್ಷಾ ಗೌರವ ಪ್ರಶಸ್ತಿ ನೀಡಲು ಉದ್ದೇಶಿಸಿದಂತೆ, 2022-2023 ರ ಸಾಲಿನ ಪ್ರಶಸ್ತಿಗೆ ಯಕ್ಷಗಾನ ಕಲಾವಿದರೂ, ಸಂಘಟಕರಾಗಿಯೂ ಗುರುತಿಸಿಕೊಂಡ, ಪಟ್ಲ ಗುತ್ತು ಶ್ರೀಯುತ ಮಹಾಬಲ ಶೆಟ್ಟಿಯವರನ್ನು ಸರ್ವಾನುಮತದಿಂದ ಆಯ್ಕೆಮಾಡಲಾಗಿದೆ. ಶ್ರೀಯುತ ಮಹಾಬಲ ಶೆಟ್ಟರದ್ದು ಬಹುಮುಖ-ಬಹುಶ್ರುತ ಬದುಕು. ಕಲಾವಿದರಾಗಿ, ಸಂಘಟಕರಾಗಿ, ಸಾಂಸ್ಕೃತಿಕ ನೇತಾರರಾಗಿ ಮತ್ತು ವಗೆನಾಡು ದೇವಸ್ಥಾನವನ್ನು ಮುನ್ನಡೆಸಿದ ಭಗವದ್ಭಕ್ತರಾಗಿ ಸಾರ್ಥಕ ಬದುಕು ಸಾಗಿಸಿದವರು. ಮಾಂಬಾಡಿ ನಾರಾಯಣ ಭಾಗವತರ ಶಿಷ್ಯರಾಗಿ, ಭಾಗವತಿಗೆ, ಚೆಂಡೆ-ಮದ್ದಳೆ ಅಭ್ಯಾಸ ಮಾಡಿ ಕುಂಡಾವು, ಸುಂಕದಕಟ್ಟೆ ಮೇಳಗಳಲ್ಲಿ ಕಲಾ ವ್ಯವಸಾಯ ಮಾಡಿದ ಅನುಭವಿ ಕಲಾವಿದ. ಮಲ್ಲ ಶ್ರೀ ದುರ್ಗಾಪರಮೇಶ್ವರೀ ಮೇಳವನ್ನು 4 ವರ್ಷ ಕಾಲ ಸಂಚಾಲಕರಾಗಿ ಮುನ್ನಡೆಸಿದ ಸಮರ್ಥ ಸಂಘಟಕ. ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದ ಪಟ್ಲಗುತ್ತು ಮಹಾಬಲ ಶೆಟ್ಟರ ಜನ್ಮಭೂಮಿ. ವಗೆನಾಡಿನ ಶ್ರೀ ಸುಬ್ರಹ್ಮಣ್ಯೇಶ್ವರ ಯಕ್ಷಗಾನ ಕಲಾ ಸಂಘದ ಸ್ಥಾಪಕರಾಗಿ ಹಲವು ವರ್ಷಗಳಿಂದ ಶ್ರಾವಣ ಮಾಸ ಪೂರ್ತಿಯ…

Read More

ಮುಂಬಾಯಿ, ಆ.05: ನಟನೆ ಪ್ರಾಕೃತಿಕ ಸಹಜವಾಗಿದೆ . ಆದರೆ ಅಭಿನಯ ಅನ್ನೋದು ಪ್ರತಿಭೆ ಅಲ್ಲ ಕೌಶಲ್ಯವಾಗಿದೆ. ಬದುಕು ಅನ್ನುವುದೇ ರಂಗಭೂಮಿ ಆಗಿದ್ದು ಇಲ್ಲಿ ಎಲ್ಲರೊಂದಿಗೆ  ಸಹನೆಯಿಂದ ಮಾತನಾಡುವುದೇ ಅಭಿನಯವಾಗಿದೆ. ನಟನೆಯಲ್ಲಿ ಧ್ವನಿ, ಉಚ್ಚಾರ ಸ್ಪಷ್ಟವಾಗಿರಬೇಕು . ಇಲ್ಲಿನ ಸಂವಹನೆಗೆ ತರಬೇತಿಯ ಅಗತ್ಯವಿದ್ದು ನಾಟಕದಲ್ಲಿ ಕೊಡುಕೊಳ್ಳುವಿಕೆ ಮುಖ್ಯವಾಗಿದೆ . ನಟನೆಯು ಜವಾಬ್ದಾರಿಯುತವಾಗಿದ್ದು , ಇದಕ್ಕೆ ಓದಿನ ಅವಶ್ಯಕತೆಯಿದ್ದು ನಾಟಕ ಬದುಕು ಕಟ್ಟಿಕೊಳ್ಳುವ ಪಾಠವಾಗಿದೆ ಎಂದು ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ರಂಗ ಕಲಾವಿದ ಮೋಹನ್ ಮಾರ್ನಾಡ್ ತಿಳಿಸಿದರು. ಮುಂಬಾಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗ ಮತ್ತು ಐಲೇಸ ದಿ ವಾಯ್ಸ್ ಆಫ್ ಓಷನ್ (ರಿ.) ಮುಂಬಾಯಿ ಇಂದಿಲ್ಲಿ ಶುಕ್ರವಾರ ಅಪರಾಹ್ನ ಸಾಂತಾಕ್ರೂಜ್ ಪೂರ್ವದ ಕಲೀನಾ ಇಲ್ಲಿನ ವಿದ್ಯಾನಗರಿಯ ತಿಲಕ್ ಭವನದ ಭೂಗೋಳ ವಿಭಾಗದ ಸಭಾ ಗೃಹದಲ್ಲಿ ಆಯೋಜಿಸಿದ್ದ  ವಾಚನ ಅಭಿನಯ ಮತ್ತು  ಕಮ್ಮಟ ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಅಭಿನಯ ಕಲೆ ಕುರಿತು ಮೋಹನ್ ಮಾರ್ನಾಡ್  ಮಾತನಾಡಿ ತಾನು ಅಭಿನಯಿಸಿದ ನಾಟಕಗಳ…

Read More

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿಯವರು ಮೂಲ್ಕಿ ಬಂಟರ ಸಂಘ ವ್ಯಾಪ್ತಿಯ ಕೆಮ್ರಾಲ್ ಪಂಚಾಯತ್ ನ ಕೊಯಿಕುಡೆ ಗ್ರಾಮದ ಸುಂದರ ಅಮೀನ್ ಮತ್ತು ಲಲಿತ ಅಮೀನ್ ಅವರ ಮನೆಗೆ ಭೇಟಿ ನೀಡಿದ್ದು, ಲಲಿತಾ ಅಮೀನ್ ಅವರಿಗೆ ಕೆಲ ವರ್ಷಗಳ ಹಿಂದೆ ಬೆಂಕಿ ಅಘಾತದಿಂದ ಕಾಲು ಸುಟ್ಟುಹೊಗಿದ್ದು ಈಗಲೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಸುಂದರ ಅಮೀನ್ ಅವರೂ ಕೂಡ ಅನಾರೋಗ್ಯದಿಂದ ಬಳಲುತ್ತಿದ್ದು ಇವರಿಗೆ ಮಕ್ಕಳು ಇಲ್ಲದ ಕಾರಣ ಜೀವನ ಸಾಗಿಸುವುದು ಕಷ್ಟಕರವಾಗಿದೆ. ಈ ಎಲ್ಲಾ ಸಮಸ್ಯೆಗಳನ್ನು ಕಣ್ಣಾರೆ ಕಂಡ ಐಕಳ ಹರೀಶ್ ಶೆಟ್ಟಿಯವರು ಒಕ್ಕೂಟದ ವತಿಯಿಂದ ಪ್ರತೀ ತಿಂಗಳು ಅರ್ಥಿಕ ಸಹಕಾರ ನೀಡುವುದೆಂದು ತಿಳಿಸಿದರು. ಈ ಸಂದರ್ಭ ಮೂಲ್ಕಿ ಬಂಟರ ಸಂಘದ ಅಧ್ಯಕ್ಷ ಪುರುಷೋತ್ತಮ ಶೆಟ್ಟಿ, ಮಹಿಳಾ ವಿಭಾಗದ ಸಂಚಾಲಕಿ ಚಂದ್ರಕಲಾ ಶೆಟ್ಟಿ, ಪತ್ರಿಕಾ ಮತ್ತು ಪ್ರಚಾರ ವಿಭಾಗದ ನಿಶಾಂತ್ ಶೆಟ್ಟಿ ಕಿಲೆಂಜೂರು ಸಂತೋಷ್ ಶೆಟ್ಟಿ, ಗೀತಾ ಶೆಟ್ಟಿ, ರಾಮದಾಸ್ ಶೆಟ್ಟಿ ಮತ್ತಿತರರು ಇದ್ದರು.

Read More

ವಿದ್ಯಾಗಿರಿ: ಸಂದರ್ಶನದ ಸಂದರ್ಭದಲ್ಲಿ ಸಂವಹನ ಮಾತ್ರವಲ್ಲ, ಜ್ಞಾನದ ಜೊತೆ ಹಾವಭಾವ, ನಡವಳಿಕೆ, ಕೌಶಲಗಳೂ ನಮ್ಮನ್ನು ನಿರೂಪಿಸುತ್ತವೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಹೇಳಿದರು. ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಬುಧವಾರ ರಾಜ್ಯ ಕೌಶಲ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಉದ್ಯಮಶೀಲತಾ ಅಭಿವೃದ್ಧಿ ಘಟಕ ಹಾಗೂ ರೂಬಿಕಾನ್ ಸ್ಕಿಲ್ ಡೆವೆಲಪ್‍ಮೆಂಟ್ ಪ್ರೈ.ಲಿ. ಸಹಯೋಗದಲ್ಲಿ ಆಳ್ವಾಸ್ ಕಾಲೇಜು ಉದ್ಯಮಶೀಲತಾ ಅಭಿವೃದ್ಧಿ ಘಟಕ, ದ್ವಿತೀಯ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ನಾಲ್ಕು ದಿನಗಳ ‘ಜೀವನ ಕೌಶಲ ತರಬೇತಿ ಕಾರ್ಯಕ್ರಮ’ದಲ್ಲಿ ಅವರು ಮಾತನಾಡಿದರು. ನಿಮ್ಮ ಅರ್ಹತೆಯ ಜೊತೆಗೆ ನೀವು ಉದ್ಯೋಗ ನಿರ್ವಹಿಸಲು ಇಚ್ಛಿಸುವ ಉದ್ದೇಶ, ಉತ್ಸಾಹವೂ ಬಹುಮುಖ್ಯ. ನಿಮ್ಮ ಬಯೋಡೆಟಾ (ರೆಸ್ಯೂಮ್) ಕೇವಲ ಪದವಿಗಳನ್ನು ಮಾತ್ರ ಹೊಂದಿರಬಾರದು. ಅದರೊಂದಿಗೆ ನಿಮ್ಮ ಸಾಮಥ್ರ್ಯ, ಸಂವಹನ, ಕೌಶಲಗಳು ಇರಬೇಕು. ಆಗ ನಿಮ್ಮ ಮೌಲ್ಯ ಹೆಚ್ಚುತ್ತದೆ ಎಂದರು. ನಮ್ಮೊಳಗಿನ ಶಕ್ತಿಯನ್ನು ನಾವು ಮೊದಲು ಅರಿಯಬೇಕು. ಸ್ವಯಂ ಸಾಮಥ್ರ್ಯ ಆಧಾರದಲ್ಲಿ ಮುನ್ನಡೆಯಬೇಕು. ಆಗ ಯಶಸ್ಸು ಸಾಧ್ಯ…

Read More

ಬೆಂಗಳೂರಿನ ಅರಮನೆ ಮೈದಾನದಲ್ಲಿ ನವೆಂಬರ್ 24, 25 ಹಾಗೂ 26ರಂದು ನಡೆಯಲಿರುವ ದಕ್ಷಿಣ ಕನ್ನಡ ಜಿಲ್ಲೆಯ ಸುಪ್ರಸಿದ್ಧ ಹಾಗೂ ಇತಿಹಾಸ ಪ್ರಸಿದ್ಧ ನಮ್ಮ ಕಂಬಳ ಕಾರ್ಯಕ್ರಮದ ಪೂರ್ವಭಾವಿ ಸಭೆ ಪುತ್ತೂರಿನ ಶಾಸಕ ಶ್ರೀ ಅಶೋಕ್ ರೈ ರವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ನಡೆಯಿತು. ಅಶೋಕ್ ರೈ ಅವರು ಮಾತನಾಡಿ, ಕರಾವಳಿ ಭಾಗದಲ್ಲಿ ಮಾತ್ರ ನಡೆಯುತ್ತಿದ್ದ ನಮ್ಮ ಕಂಬಳವನ್ನು ಪ್ರಪ್ರಥಮ ಬಾರಿಗೆ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಆಯೋಜನೆ ಮಾಡಿದ್ದೇವೆ. ಕಂಬಳವನ್ನು ಯಶಸ್ವಿಗೊಳಿಸೋಣ. ಸರ್ವರ ಸಹಕಾರ ಅತ್ಯಗತ್ಯ ಎಂದರು. ಈ ಸಂಧರ್ಭದಲ್ಲಿ ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ಶ್ರೀ ಎಂ ಮುರಳೀಧರ್ ಹೆಗ್ಡೆ, ಜಯಕರ್ನಾಟಕ ಸಂಘಟನೆಯ ಶ್ರೀ ಗುಣರಂಜನ್ ಶೆಟ್ಟಿ, ಬೆಂಗಳೂರು ತುಳುಕೂಟದ ಅಧ್ಯಕ್ಷ ಸುಂದರ್ ರಾಜ್ ರೈ, ಬಿಜೆಪಿ ಮುಖಂಡ ಉಮೇಶ್ ಶೆಟ್ಟಿ ಹಾಗೂ ಖ್ಯಾತ ಸಂಗೀತ ನಿರ್ದೇಶಕರಾದ ಶ್ರೀ ಗುರುಕಿರಣ್ ಶೆಟ್ಟಿಯವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಹಿರಿಯರು ಹಾಗೂ ಕಂಬಳದ ಅಭಿಮಾನಿಗಳು ಉಪಸ್ಥಿತರಿದ್ದರು.

Read More