Author: admin
ಆಳ್ವಾಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ‘ಸೈಸೆಕ್- ಸೈಬರ್ ಸೆಕ್ಯುರಿಟಿ ಫಿನಿಶಿಂಗ್ ಸ್ಕೂಲ್’ ಸಮಾರೋಪ ಸಮಾರಂಭ ‘ಗುಣಮಟ್ಟದ ಕಲಿಕೆಗೆ ಪರಿಶ್ರಮ ಪ್ರಾಮುಖ್ಯ’
ಮೂಡುಬಿದಿರೆ: ಕಲಿಕೆಯುವ ಮಾಹಿತಿ ಯಾವುದೇ ಇರಲಿ, ಗುಣಮಟ್ಟದ ಕಲಿಕೆಗೆ ಪರಿಶ್ರಮ ಪ್ರಾಮುಖ್ಯವಾಗುತ್ತದೆ ಎಂದು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಿಐಎಸ್ಒ ಜಾಕ್ಸಿನ್ ಫೆನಾರ್ಂಡಿಸ್ ಹೇಳಿದರು. ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನ ಎಂಬಿಎ ಸೆಮಿನಾರ್ ಸಭಾಂಗಣದಲ್ಲಿ ತ್ರಿಶಾಕ ಫೌಂಡೇಶನ್, ಸೈಸೆಕ್ ಸಹಯೋಗದಲ್ಲಿ ಆಯೋಜಿಸಿದ್ದ ‘ಸೈಸೆಕ್- ಸೈಬರ್ ಸೆಕ್ಯುರಿಟಿ ಫಿನಿಶಿಂಗ್ ಸ್ಕೂಲ್’ ಸಮಾರೋಪ ಸಮಾರಂಭದಲ್ಲಿ ಶನಿವಾರ ಅವರು ಮಾತನಾಡಿದರು. ಬದುಕಿನಲ್ಲಿ ಚಿಂತನೆಯ ಪ್ರಕ್ರಿಯೆಯನ್ನು ಅಳವಡಿಸಿಕೊಳ್ಳಿ, ಕಲಿಕೆಯುವ ವಿಷಯವು ಸಣ್ಣ ಅಥವಾ ದೊಡ್ಡದಾಗಿರಲಿ. ನಿಮ್ಮ ಪರಿಶ್ರಮ ಇರಲೇ ಬೇಕು ಎಂದ ಅವರು, ಪ್ರತಿಯೊಬ್ಬರಿಗೂ ಜ್ಞಾನವಿದೆ, ಆದರೆ, ಕಲಿಯುವ ಹಂಬಲ ಇರಬೇಕು. ಈ ದಿನಗಳ ಕಲಿಕೆಯೇ ಮುಂದಿನ ದಿನಗಳ ಮಾರ್ಗದರ್ಶಿ ಎಂದು ಅವರು ವಿಶ್ಲೇಷಿಸಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಟಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಸಮಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿ. ಸಮಯ ಹಣಕ್ಕಿಂತ ಮುಖ್ಯ. ಸಕಾರಾತ್ಮಕ ಪರಿಸರ ಇದ್ದರೆ, ಪ್ರತಿಯೊಬ್ಬ ವ್ಯಕ್ತಿಯು ಉತ್ತಮವಾಗಿ ಬೆಳೆಯಲು ಸಾಧ್ಯ ಎಂದರು. ಯಾವುದೇ ವ್ಯಕ್ತಿಯನ್ನು ನಿರ್ದಿಷ್ಟತೆಗೆ ಬ್ರ್ಯಾಂಡ್…
ಬಂಟರ ಸಂಘ ಮುಂಬಯಿಯ ಶಿಕ್ಷಣ ಮತ್ತು ಸಮಾಜ ಕಲ್ಯಾಣ ವತಿಯಿಂದ ಆರ್ಥಿಕ ಸಹಾಯ; ಮಾರ್ಚ್ 23ರಂದು ಮೀರಾ-ಭಾಯಂದರ್ ಪ್ರಾದೇಶಿಕ ಸಮಿತಿಯ ವತಿಯಿಂದ ಅರ್ಜಿ ವಿತರಣೆ
ಬಂಟರ ಸಂಘ ಮುಂಬಯಿಯ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿಯವರ ಮಾರ್ಗದರ್ಶನದಲ್ಲಿ ಹಾಗೂ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಇಂದ್ರಾಳಿ ದಿವಾಕರ್ ಶೆಟ್ಟಿಯವರ ನೇತೃತ್ವದಲ್ಲಿ ಪ್ರತೀ ವರ್ಷ ಸಮಾಜ ಕಲ್ಯಾಣ ಸಮಿತಿಯ ಆಶ್ರಯದಲ್ಲಿ ಕೊಡಲ್ಪಡುವ ಧನ ಸಹಾಯ, ಆರ್ಥಿಕವಾಗಿ ಸಂಕಷ್ಟದಲ್ಲಿರುವ ಸಮಾಜದ ಬಂಟ ಬಂಧುಗಳ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು, ವಾರ್ಷಿಕ ವಿಧವಾ ವೇತನ, ಮತ್ತು ಮಾನಸಿಕ ಅಸ್ವಸ್ಥೆಯಲ್ಲಿರುವ ಯಾ ವಿಕಲಾಂಗ ಚೇತನರಿಗೆ ಆರ್ಥಿಕ ಧನ ಸಹಾಯ ವಿತರಣೆಯು ಜೂನ್ ತಿಂಗಳಲ್ಲಿ ನಡೆಯಲಿದೆ. ಆ ಪ್ರಯುಕ್ತ ಅರ್ಜಿ ವಿತರಣೆಯು ಬಂಟರ ಸಂಘ ಮುಂಬಯಿ ಇದರ ಮೀರಾ-ಭಾಯಂದರ್ ಪ್ರಾದೇಶಿಕ ಸಮಿತಿಯ ಆಶ್ರಯದಲ್ಲಿ ಕಾರ್ಯಾಧ್ಯಕ್ಷ ಗುತ್ತಿನಾರ್ ರವೀಂದ್ರ ಶೆಟ್ಟಿಯವರ ಸಮಕ್ಷಮದಲ್ಲಿ ಹಾಗೂ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಸಂಪತ್ ಶೆಟ್ಟಿ ಪಂಜದಗುತ್ತು ಇವರ ಮುಂದಾಳಾತ್ವದಲ್ಲಿ ಮಾರ್ಚ್ 23ರ ಶನಿವಾರದಂದು ಹೋಟೆಲ್ ಕ್ರೌನ್ ಬಿಸಿನೆಸ್, ಗೋಲ್ಡನ್ ನೆಸ್ಟ್ ಸರ್ಕಲ್ ಬಳಿ, ಮೀರಾ -ಭಾಯಂದರ್ ರೋಡ್ ಇಲ್ಲಿ ಸಂಜೆ 6:00 ರಿಂದ 7ರ ತನಕ…
ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇತೃತ್ವದ ಉನ್ನತ ಮಟ್ಟದ ಸಮಿತಿ “ಒಂದು ದೇಶ-ಒಂದು ಚುನಾವಣೆ’ ನೀತಿಯ ಜಾರಿಗೆ ಶಿಫಾರಸು ಮಾಡಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ತನ್ನ ವರದಿಯನ್ನು ಸಲ್ಲಿಸಿದೆ. ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸಿ, ಮುಂದಿನ 100 ದಿನಗಳಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಚುನಾವಣೆ ನಡೆಸುವಂತೆ ಸಮಿತಿ ತನ್ನ ವರದಿಯಲ್ಲಿ ಸಲಹೆ ನೀಡಿದೆ. ಸುದೀರ್ಘ ಅಧ್ಯಯನ, ವಿಚಾರ-ವಿಮರ್ಶೆ ನಡೆಸಿ ಸಮಿತಿಯು “ಒಂದು ದೇಶ-ಒಂದು ಚುನಾವಣೆ’ಗೆ ಸಂಬಂಧಿಸಿದಂತೆ ಸಮಗ್ರ ವರದಿಯನ್ನು ಸಲ್ಲಿಸಿದೆ. ಕಳೆದ ಕೆಲವು ವರ್ಷಗಳಿಂದ ಕೇಂದ್ರದಲ್ಲಿನ ಹಾಲಿ ಆಡಳಿತಾರೂಢ ಬಿಜೆಪಿ ನೇತೃತ್ವದ ಎನ್ಡಿಎ ಸರಕಾರ ಈ ಬಗ್ಗೆ ಒಲವು ವ್ಯಕ್ತಪಡಿಸುತ್ತಲೇ ಬಂದಿತ್ತು. ಈ ವಿಷಯದ ಕುರಿತಂತೆ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಕಳೆದ ವರ್ಷದ ಸೆಪ್ಟಂಬರ್ನಲ್ಲಿ ಕೇಂದ್ರ ಸರಕಾರ ಈ ಸಂಬಂಧ ಅಧ್ಯಯನ ನಡೆಸಲು ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಿತ್ತು. ಈಗ ಈ ಸಮಿತಿಯೂ “ಒಂದು ದೇಶ-ಒಂದು ಚುನಾವಣೆ’ಗೆ ಶಿಫಾರಸು ಮಾಡಿದ್ದು, 2029ರಿಂದಲೇ ದೇಶದಲ್ಲಿ ಈ ನೀತಿಯನ್ನು…
ಮೈಸೂರಿನ ಹೋಟೆಲ್ ಮಾಲೀಕರ ಪತ್ತಿನ ಸಹಕಾರ ಸಂಘ (ನಿ.) ವತಿಯಿಂದ ರಜತ ಮಹೋತ್ಸವ ವರ್ಷದ ಪ್ರಯುಕ್ತ ಹಮ್ಮಿಕೊಂಡಿದ್ದ ಬೆಳ್ಳಿಚಪ್ಪರ, ಸಾಧಕರಿಗೆ ಸನ್ಮಾನ, ಆರೋಗ್ಯ ತಪಾಸಣೆ, ಕಣ್ಣಿನ ತಪಾಸಣೆ, ಸ್ಮರಣ ಸಂಚಿಕೆಗೆ ಜಾಹೀರಾತು ಮತ್ತು ಲೇಖನಗಳು ಹಾಗೂ ಸಮಾರೋಪ ಸಮಾರಂಭದ ಕಾರ್ಯಕ್ರಮವನ್ನು ಪ್ರೋತ್ಸಾಹಿಸಿ ಯಶಸ್ವಿಗೊಳಿಸಿದ್ದಕ್ಕಾಗಿ ಮೈಸೂರಿನ ಜ್ಞಾನ ಸರೋವರ ಅಂತರಾಷ್ಟ್ರೀಯ ವಸತಿ ಶಾಲೆಯ ಸಂಸ್ಥಾಪಕ ಅಧ್ಯಕ್ಷರಾದ ಸುಧಾಕರ್ ಎಸ್ ಶೆಟ್ಟಿ ಅವರನ್ನು ಹೋಟೆಲ್ ಮಾಲೀಕರ ಪತ್ತಿನ ಸಹಕಾರ ಸಂಘದ ಪರವಾಗಿ ಅಧ್ಯಕ್ಷರಾದ ನಾರಾಯಣ ವಿ ಹೆಗ್ಡೆ ಅವರು ಅಭಿನಂದಿಸಿದರು.
ಹೀಗೆ ವಾಟ್ಸಾಪ್ ನೋಡುತ್ತಿದ್ದಾಗ ದಿಢೀರನೆ ಒಂದು ವಿಡಿಯೋ ನನ್ನ ಗಮನ ಸೆಳೆದಿತ್ತು. ಅದು ನೀರಿನ ಕುರಿತಾಗಿತ್ತು. ಮೊದಲು ನಮ್ಮ ಅಜ್ಜಂದಿರು ನೀರನ್ನು ನದಿಯಲ್ಲಿ ಕಾಣುತ್ತಿದ್ದರಂತೆ, ನಮ್ಮಪ್ಪಂದಿರು ಬಾವಿಯಲ್ಲಿ ಕಂಡರಂತೆ, ಮುಂದುವರಿಯುತ್ತಾ ನಮ್ಮ ಜನಾಂಗದವರು ನಳ್ಳಿಯಲ್ಲಿ ಕಂಡರಂತೆ, ಪ್ರಸ್ತುತ ಈಗಿನ ಮಕ್ಕಳು ಬಾಟಲಿಯಲ್ಲಿ ಕಂಡರೆ ಮುಂದಿನ ಜನಾಂಗದ ಮಕ್ಕಳು ಬಾಟಲಿಯಲ್ಲಿ ಕಾಣುವರೇ ಎಂಬ ಪ್ರಶ್ನಾರ್ಥಕ ಚಿಹ್ನೆ. ನಾವು ಇನ್ನೂ ಎಚ್ಚೆತ್ತು ಕೊಳ್ಳದಿದ್ದರೆ ಮನುಷ್ಯನ ಕಣ್ಣೀರಿನಲ್ಲಿ ಮಾತ್ರ ನೀರು ಕಾಣಲು ಸಾಧ್ಯ ಎಂಬುವುದು ಭಯಾನಕ ಸತ್ಯ. ಈಗಿನ ಪರಿಸ್ಥಿತಿ ನೋಡಿದರೆ ಇವೆಲ್ಲಾ ಮಾತುಗಳು ನಿಜ ಅನ್ಸುತ್ತೆ ಅಲ್ವಾ? ನೀರು ಪ್ರತಿಯೊಬ್ಬನಿಗೂ ಬೇಕಾದ ಅತ್ಯಮೂಲ್ಯ ದ್ರವ್ಯ. ಭೂಮಿಯ ಮೇಲಿನ ಪ್ರತಿಯೊಂದು ಜೀವಿಗಳು ಸರಿಯಾಗಿ ಕಾರ್ಯ ನಿರ್ವಹಿಸಲು ನೀರು ಅತ್ಯಗತ್ಯ ಎಂಬುದು ತಿಳಿದ ಸಂಗತಿ. ಸಂಕ್ಷಿಪ್ತವಾಗಿ ಹೇಳುವುದಾದರೆ ನಮ್ಮ ಅಸ್ತಿತ್ವದ ಅಡಿಪಾಯವೇ ನೀರಾಗಿದೆ. ಹೀಗೆ ನಾನಾ ಉಪಯೋಗಗಳನ್ನು ಒಳಗೊಂಡ ನೀರು ಇತ್ತೀಚಿನ ದಿನಗಳಲ್ಲಿ ಮನುಷ್ಯನಿಗೆ ಸರಿಯಾಗಿ ದೊರೆಯುತ್ತಿಲ್ಲ. ನೀರಿನ ತಾಣವೇ ಆಗಿರುವ ಕರ್ನಾಟಕದಲ್ಲಿ ಇಂದು ನೀರಿನ ಅಭಾವ…
ಮೂಡುಬಿದಿರೆ: ಜೀವನದಲ್ಲಿ ಸಿಗುವ ಪ್ರತಿ ಅವಕಾಶವನ್ನು ಉತ್ತಮವಾಗಿ ಬಳಸಿಕೊಳ್ಳುವುದು ನಮ್ಮ ಮೊದಲ ಆಯ್ಕೆ ಆಗಬೇಕು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಹೇಳಿದರು. ಆಳ್ವಾಸ್ ಇಂಗ್ಲಿಷ್ ಮಾಧ್ಯಮ ಪ್ರಾಥಮಿಕ ಶಾಲೆಯು ಶುಕ್ರವಾರ ಕನ್ನಡ ಮಾಧ್ಯಮ ಸಭಾಂಗಣದಲ್ಲಿ ಹಮ್ಮಿಕೊಂಡ ‘ಪ್ರಶಸ್ತಿ ದಿನ 2023 ‘ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪೆನ್ಸಿಲ್ ನಿಂದ ಗೀಚಲುಬಹುದು ಅಂತೆಯೇ ಅತ್ಯುತ್ತಮವಾಗಿ ಬರೆಯಬಹುದು. ಅದನ್ನು ಗೀಚುವ ಬದಲು ಬರವಣಿಗೆಯಲ್ಲಿ ಬಳಸಬೇಕಾದುದ್ದು ಮಾತ್ರ ನಮ್ಮ ಆಯ್ಕೆ ಎಂದರು. ಹುಟ್ಟುಹಬ್ಬದ ಸಂಭ್ರಮಕ್ಕೆ ಕೇಕ್ ಕತ್ತರಿಸುವ ಬದಲು, ಗಿಡಗಳನ್ನು ತರಿಸುವ ಮತ್ತು ಅದನ್ನು ಬೆಳೆಸಲು, ಗುರುತಿಸಲು ಕಲಿಯುವ ಎಂದು ಹೇಳಿದ ಅವರು ಮಕ್ಕಳನ್ನು ಪ್ರೋತ್ಸಾಹಿಸಿದರು. ಆಳ್ವಾಸ್ ಶಾಲೆಗಳ ಆಡಳಿತಾಧಿಕಾರಿ ಪ್ರೀತಮ್ ಕುಂದರ್, ಸಹಾಯಕ ಆಡಳಿತಾಧಿಕಾರಿ ರಾಜೇಶ್ ಕುಮಾರ್ ಶೆಟ್ಟಿ, ಆಳ್ವಾಸ್ ಕಿಂಡರ್ ಗಾರ್ಡನ್ ಆಡಳಿತಾಧಿಕಾರಿ ನಿತೇಶ್ ಮಾರ್ನಾಡ್, ಶಾಲೆಯ ಮುಖ್ಯಶಿಕ್ಷಕಿ ರಂಜಿಕಾ ರೈ, ಶಿಕ್ಷಕರು, ಪೋಷಕರು ಮತ್ತು ವಿದ್ಯಾರ್ಥಿಗಳು ಇದ್ದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ…
ಆಳ್ವಾಸ್ ಕಾಲೇಜಿನಲ್ಲಿ ‘ಅನ್ನನಾಳ ರೋಗಕ್ಕೆ ಪೌಷ್ಟಿಕಾಂಶದ ನಿರ್ವಹಣಾ ಕಾರ್ಯಾಗಾರ’ ‘ಪೌಷ್ಟಿಕ ಆಹಾರದ ಮೂಲಕ ರೋಗ ನಿವಾರಣೆ ಸಾಧ್ಯ’
ಮೂಡುಬಿದಿರೆ: ‘ಪೌಷ್ಟಿಕ ಆಹಾರ ಸೇವನೆಯ ಮೂಲಕ ಅನ್ನನಾಳದ ರೋಗಗಳು (ಡಿಸ್ಪೇಜಿಯ) ನಿವಾರಿಸಲು ಸಾಧ್ಯ ಎಂದು ಆಹಾರ ಚಿಕಿತ್ಸಕಿ, ಬೆಂಗಳೂರಿನ ಟ್ರಸ್ಟ್ವೆಲ್ ಆಸ್ಪತ್ರೆಯ ಶ್ರೀಮತಿ ವೆಂಕಟರಮಣ ಹೇಳಿದರು. ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಆಹಾರ ವಿಜ್ಞಾನ ಮತ್ತು ಪೌಷ್ಟಿಕಾಂಶ ವಿಭಾಗ ಹಾಗೂ ಐಎಪಿಇಎನ್ ಇಂಡಿಯಾ ಮಂಗಳೂರು ಅಧ್ಯಾಯದ ಜಂಟಿ ಆಶ್ರಯದಲ್ಲಿ ನಡೆದ ಶುಕ್ರವಾರ ಕಾಲೇಜಿನಲ್ಲಿ ನಡೆದ ‘ಅನ್ನನಾಳದ ರೋಗಗಳಿಗೆ ಪೌಷ್ಟಿಕಾಂಶದ ನಿರ್ವಹಣಾ ಕಾರ್ಯಾಗಾರ’ ದಲ್ಲಿ ಅವರು ಮಾತನಾಡಿದರು. ಅನ್ನನಾಳದ ರೋಗ ಲಕ್ಷಣ ಕಂಡುಬಂದಾಗ ಎಚ್ಚೆತ್ತುಕೊಳ್ಳುವುದು ಬಹುಮುಖ್ಯ. ಒಂದು ರೋಗವು ನಾನಾ ರೋಗಕ್ಕೆ ಕಾರಣವಾಗಬಹುದು, ಪೌಷ್ಟಿಕ ಆಹಾರ ಸೇವನೆಯೂ ಒಂದು ನಿವಾರಕ ಅಂಶ ಎಂದು ಅವರು ಮಾಹಿತಿ ನೀಡಿದರು. ಪೌಷ್ಟಿಕಾಂಶ ಆಹಾರ ಎಲ್ಲವನ್ನೂ ಗುಣಪಡಿಸುವ ಶಕ್ತಿ ಹೊಂದಿದೆ. ಕೋವಿಡ್ ನಂತರ ಜನರು ತಮ್ಮ ರೋಗ ನಿವಾರಿಸಲು ಮಾತ್ರೆಗಳನ್ನು ಸೇವಿಸುವುದಕ್ಕಿಂತ ಪೌಷ್ಟಿಕ ಆಹಾರ ಸೇವಿಸುವಲ್ಲಿ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ಅದನ್ನು ಮುಂದುವರೆಸುವುದು ಅವಶ್ಯಕವಾಗಿದೆ ಎಂದರು. ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ ಮಾತನಾಡಿ, ಆಹಾರವು ಎಲ್ಲಾ ಜೀವರಾಶಿಗೂ ಮುಖ್ಯವಾದುದು.…
ಸೃಷ್ಟಿಕರ್ತ ಎಲ್ಲಾ ಜೀವಿಗಳಿಗೆ ಐದು ಅರಿವುಗಳನ್ನು ನೀಡಿದರೆ ಮನುಷ್ಯನಿಗೆ ಮಾತ್ರ ಆರು ಅರಿವುಗಳನ್ನು ನೀಡಿದ್ದಾರೆ. ಅದರಿಂದಾಗಿ ಮಾನವನು ವಿಚಾರದ ಬಗೆಗೆ ವಿವೇಚನೆ ವಿವೇಕಗಳನ್ನು ಉಪಯೋಗಿಸಿ ಸರಿಯಾದ ನಿರ್ಣಯಗಳನ್ನು ತೆಗೆದುಕೊಳ್ಳುತ್ತಾನೆ. ಎಲ್ಲಾ ಮತ ಧರ್ಮಗಳು ಲೋಕ ಕಲ್ಯಾಣಕ್ಕಾಗಿ ಕೆಲವೊಂದು ಮಾರ್ಗಸೂಚಿಗಳನ್ನು ತಿಳಿಸಿಕೊಟ್ಟರೂ ಸ್ವಾರ್ಥವನ್ನು ಹಾಸಿಗೆ ಹೊದ್ದುಕೊಂಡು ಮಲಗಿರುವ ಮಾನವ ಸಂತತಿ ಶೇಕಡವಾರು ಲೆಕ್ಕ ಹಾಕಿದರೆ ಮುಕ್ಕಾಲು ಭಾಗದಷ್ಟು ಜನರು ಸ್ವಾರ್ಥಕ್ಕಾಗಿಯೇ ಬದುಕುತ್ತಿದ್ದಾರೆ. ಉಳಿದಿರುವ ಕಾಲು ಭಾಗದಷ್ಟು ಜನರ ಸಜ್ಜನಿಕೆ, ನಿಸ್ವಾರ್ಥತೆ, ಸಹೃದಯತೆ, ಮಾನವಕಳಕಳಿ, ಜೀವಕಾರುಣ್ಯವೇ ಮೊದಲಾದ ಉನ್ನತ ಜೀವನಾರ್ಥಕ ನಡೆಯಿಂದಾಗಿ ಅಶಾಂತಿಯೂ ಉದ್ವೇಗ ಪೂರಿತ ಜೀವನ ಯಾತ್ರೆಯಲ್ಲಿ ಸ್ವಲ್ಪವಾದರೂ ಸಮಾಧಾನ, ನೆಮ್ಮದಿ ದೊರಕುತ್ತದೆ. ಸದಾ ತನಗೂ ಸಮಾಜಕ್ಕೂ ಇರುವ ಅವಿನಾಭಾವ ಸಂಬಂಧವನ್ನು ಅರಿತು ಸಮಾಜಕ್ಕೆ ತನ್ನಿಂದಾದಷ್ಟು ಕೊಡುಗೆಯನ್ನು ನೀಡಿ ಸಮಾಜದ ಋಣವನ್ನು ತೀರಿಸಬೇಕೆಂಬ ತುಡಿತವನ್ನು ಹಲವರಲ್ಲಿ ಕಾಣಬಹುದಾಗಿದೆ. ಇಂತಹ ಸಮಾಜಮುಖೀ ದ್ಯೇಯಾದರ್ಶಗಳೊಡನೆ ಮಿಂಚುತ್ತಿದ್ದಾರೆ ಉಮೇಶ್ ಶೆಟ್ಟಿ ಮಂದಾರ್ತಿಯವರು. ನೊಂದವರ ಬಾಳಿಗೆ ಆಸರೆಯಾಗಿ, ಸಾಂತ್ವನಕಾರರಾಗಿ, ಸಹಾಯಕರಾಗಿ, ಅಸಹಾಯಕರಿಗೆ ಊರುಗೋಲಾಗಿ, ಸಾಧಕರಿಗೆ, ಪ್ರೇರಕ ಶಕ್ತಿಯಾಗಿ ತಾನೇ…
ಕರ್ನಾಟಕ ಜಾನಪದ ಪರಿಷತ್ ಬೆಂಗಳೂರು ಮಹಾರಾಷ್ಟ ಘಟಕದ ದ್ವಿತೀಯ ವಾರ್ಷಿಕ ಸಾಂಸ್ಕೃತಿಕ ಜಾನಪದ ಸಿರಿ ಸಿಂಚನ ಸಂಭ್ರಮವು ಮಾ.24 ರಂದು ಅಪರಾಹ್ನ 2ರಿಂದ ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ಅದ್ದೂರಿಯಾಗಿ ನಡೆಯಲಿದೆ. ಅಪರಾಹ್ನ 2ರಿಂದ ಕರ್ನಾಟಕ ಜಾನಪದ ಪರಿಷತ್ ಬೆಂಗಳೂರು ಮಹಾರಾಷ್ಟ್ರ ಘಟಕದ ಅಧ್ಯಕ್ಷ ಡಾ. ಆರ್. ಕೆ. ಶೆಟ್ಟಿ ಅಧ್ಯಕ್ಷತೆಯಲ್ಲಿ ಸುವರ್ಣ ಕರುನಾಡ ಸನಾತನ ಸಂಸ್ಕೃತಿಯ ಮೇರು ಕಲಾಪ್ರಕಾರಗಳಾದ ಜಾನಪದ ಸಿರಿಸಿಂಚನ, ಗಾಯನ,ನರ್ತನ, ಚಿಂತನ – ಮಂಥನ, ಸಮಗ್ರ ಸಂಗಮ ಕಾರ್ಯಕ್ರಮಗಳ ‘ಸಾಂಸ್ಕೃತಿಕ ಜಾನಪದ ಸಿರಿ ಸಿಂಚನ’ ಸಂಭ್ರಮವು ನಡೆಯಲಿದ್ದು ಬಂಟರ ಸಂಘ ಮುಂಬಯಿ ಅಧ್ಯಕ್ಷ ಪ್ರವೀಣ್ ಬಿ. ಶೆಟ್ಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಸಂಜೆ 6 ರಿಂದ ಸಂಸ್ಥೆಯ ಪ್ರಶಸ್ತಿ ಪ್ರಧಾನ, ಸಮಾರೋಪ ಸಮಾರಂಭವು ಮಹಾರಾಷ್ಟ ಘಟಕ ಅಧ್ಯಕ್ಷ ಡಾ.ಆರ್. ಕೆ. ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಮುಖ್ಯ ಅತಿಥಿಯಾಗಿ ಕರ್ನಾಟಕ ಜಾನಪದ ಪರಿಷತ್ ಬೆಂಗಳೂರು ಕಾರ್ಯಾಧ್ಯಕ್ಷ ವಿಶ್ರಾಂತ ಕುಲಪತಿ ಪ್ರೊ.ಹಿ.ಚಿ ಬೋರಲಿಂಗಯ್ಯ,…
ವಿದ್ಯಾಗಿರಿ (ಮೂಡುಬಿದಿರೆ): ಮಂಗಳೂರು ವಿಶ್ವವಿದ್ಯಾಲಯ ಅಂತರ ಕಾಲೇಜು ವೇಟ್ ಲಿಫ್ಟಿಂಗ್ ಚಾಂಪಿಯನ್ಶಿಫ್ನಲ್ಲಿ ಆಳ್ವಾಸ್ ಕಾಲೇಜು ಸಮಗ್ರ ತಂಡ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಮಂಗಳೂರಿನ ಎಸ್ಡಿಎಂ ಬಿಬಿಎಂ ಕಾಲೇಜಿನಲ್ಲಿ ಮಾರ್ಚ್ 18 ಮತ್ತು 19 ರಂದು ನಡೆದ ಸ್ಪರ್ಧೆಯಲ್ಲಿ ಆಳ್ವಾಸ್ ಪುರುಷರ ಮತ್ತು ಮಹಿಳೆಯರ ತಂಡವು ಟ್ರೋಫಿಯನ್ನು ಮುಡಿಗೇರಿಸಿಕೊಂಡಿದ್ದು, ಕಾಲೇಜು ಸಮಗ್ರ ತಂಡ ಪ್ರಶಸ್ತಿ ಜಯಿಸಿದೆ. ಪುರುಷರ ವಿಭಾಗದಲ್ಲಿ ಆಳ್ವಾಸ್ ಕಾಲೇಜು 5 ಚಿನ್ನ, 3 ಬೆಳ್ಳಿ ಹಾಗೂ 2 ಕಂಚಿನ ಪದಕದೊಂದಿಗೆ ಒಟ್ಟು 61 ಅಂಕ ಪಡೆಯುವ ಮೂಲಕ ಅಗ್ರಸ್ಥಾನ ಪಡೆದಿದ್ದು, ಪ್ರೊ.. ರಿಚರ್ಡ್ ರೆಬೆಲ್ಲೊ ರೋಲಿಂಗ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು. 40 ಅಂಕ ಪಡೆದ ಎಸ್ಡಿಎಂ ಕಾಲೇಜು ದ್ವಿತೀಯ ಹಾಗೂ ಅಷ್ಟೇ ಅಂಕ ಪಡೆದ ಪುತ್ತೂರಿನ ಸಂತ ಫಿಲೋಮಿನಾ ಕಾಲೇಜು ತೃತೀಯ ತಂಡ ಪ್ರಶಸ್ತಿ ಪಡೆಯಿತು. ಅತಿಥೇಯ ಎಸ್ಡಿಎಂ ಕಾಲೇಜು ಚತುರ್ಥ ತಂಡ ಪ್ರಶಸ್ತಿ ಪಡೆಯಿತು. ಮಹಿಳಾ ವಿಭಾಗದಲ್ಲಿ ಸತತ 20ನೇ ಬಾರಿ ತಂಡ ಪ್ರಶಸ್ತಿ ಪಡೆದ ಆಳ್ವಾಸ್ ಕಾಲೇಜು, ಒಟ್ಟು 5…