Author: admin
ಕರಾವಳಿ ಭಾಗದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಮತ್ತು ಗ್ರಾಮೀಣ ವಿದ್ಯಾರ್ಥಿಗಳಿಗೆ ಉದ್ಯೋಗ ಕೌಶಲ್ಯತೆಗಳ ತರಬೇತಿಗಳ ಮೂಲಕ ಸಾವಿರಾರು ವಿದ್ಯಾರ್ಥಿಗಳ ಬಾಳಿಗೆ ಬೆಳಕಾದ ಪ್ರತಿಷ್ಠಿತ ತರಬೇತಿ ಸಂಸ್ಥೆಯಾದ ವಿದ್ಯಾಮಾತಾ ಅಕಾಡೆಮಿಗೆ 2024 ರ ಸಾಲಿನ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ವತಿಯಿಂದ ಕೊಡಲ್ಪಡುವ “ರಾಜ್ಯ ಯುವ ಸಾಂಘಿಕ” ಪ್ರಶಸ್ತಿಯು ಲಭಿಸಿದೆ. ಸವಣೂರಿನಲ್ಲಿ ನಡೆದ ಯುವಜನ ಮೇಳದಲ್ಲಿ ಸಂಸದರಾದ ನಳಿನ್ ಕುಮಾರ್ ಕಟೀಲ್ ಮತ್ತು ಸುಳ್ಯ ಶಾಸಕಿ ಕುಮಾರಿ ಭಾಗೀರತಿ ಮುರುಳ್ಯ ರವರು ಪ್ರಶಸ್ತಿಯನ್ನು ವಿದ್ಯಾಮಾತಾ ಅಕಾಡೆಮಿಯ ಆಡಳಿತ ನಿರ್ದೇಶಕರಾದ ಭಾಗ್ಯೇಶ್ ರೈರವರಿಗೆ ಪ್ರಧಾನ ಮಾಡಿದರು. ಹತ್ತು ಹಲವಾರು ಪ್ರಶಸ್ತಿಗಳೊಂದಿಗೆ ಕಳೆದ 2023 ರ ಸಾಲಿನ “ರಾಜ್ಯ ಶಿಕ್ಷಣ ಸೇವಾ ರತ್ನ”, “ಮಂದಾರ”, ಪ್ರಶಸ್ತಿಗಳೊಂದಿಗೆ ರಾಜ್ಯಮಟ್ಟದ “ರಾಜ್ಯ ಯುವ ಸಾಂಘಿಕ” ಪ್ರಶಸ್ತಿಯನ್ನು ವಿದ್ಯಾಮಾತಾ ಅಕಾಡೆಮಿಯು ಮುಡಿಗೇರಿಸಿಕೊಂಡಿದೆ. ಕರಾವಳಿ ಭಾಗದಲ್ಲಿ 5 ವರ್ಷದಿಂದ 40 ವರ್ಷದ ವರೆಗಿನವರಿಗೆ ಉದ್ಯೋಗ ಕೌಶಲ್ಯತೆ, ಶಿಕ್ಷಣ ಮೌಲ್ಯ, ವಿವಿಧ ನೇಮಕಾತಿಗಳಿಗೆ ತರಬೇತಿ, ಖಾಸಗಿ ಉದ್ಯೋಗಗಳ ನೇರ ಸಂದರ್ಶನಗಳನ್ನು ಒಂದೇ…
ಈ ಆದುನಿಕ ಯುಗದಲ್ಲಿ ಬದಲಾಗುತ್ತಿರುವ ದಿನಮಾನಗಳಲ್ಲಿ ನಮ್ಮ ಸಂಪ್ರದಾಯಗಳು ಮೂಲೆ ಸೇರಿ ನವ ನಾಗರೀಕತೆ ತ್ವರಿತ ಗತಿಯಲ್ಲಿ ಬೆಳೆಯುತ್ತಿರುವ ಮಧ್ಯೆಯೂ ನಮ್ಮ ಕೌಟುಂಬಿಕ ಸಮಾರಂಭಗಳು ದಿಕ್ಕು ತಪ್ಪದಂತೆ ಎಚ್ಚರಿಕೆ ವಹಿಸುತ್ತಲೇ ತಮ್ಮ ಮಕ್ಕಳ ನಿಶ್ಚಿತಾರ್ಥ, ಮೆಹೆಂದಿ, ವಿವಾಹ, ಅತಿಥಿ ಭೋಜನ ಸಮ್ಮಿಲನಗಳ ಪಾವಿತ್ರ್ಯ ಮಹತ್ವ ಕೆಡದಂತೆ ಆಚರಿಸಿಕೊಳ್ಳುತ್ತಾರೆ ಎಂಬುವುದಕ್ಕೆ ಮಹಾನಗರಿ ಮುಂಬಯಿಯಲ್ಲಿ ನಡೆದ ಮೆಹೆಂದಿ ಕಾರ್ಯಕ್ರಮ ಸಾಕ್ಷಿಯಾಗಿದೆ. ಮಹಾನಗರಿಯ ಬಂಟ ಕುಟುಂಬವೊಂದು ತಮ್ಮ ಮಗನ ಮೆಹೆಂದಿ ಕಾರ್ಯಕ್ರಮದಲ್ಲಿ ಮುಂಬಯಿಯ ಜನಪ್ರಿಯ ಗಾಯಕ ಶ್ರೀ ವಿಜಯ್ ಶೆಟ್ಟಿ ಮೂಡುಬೆಳ್ಳೆ ತಂಡದವರಿಂದ ಭಜನಾ ಕಾರ್ಯಕ್ರಮ ಆಯೋಜಿಸಿದ್ದು, ಜಾತಿ ಬಾಂಧವರ ಮುಕ್ತ ಕಂಠದ ಶ್ಲಾಘನೆಗೆ ಪಾತ್ರವಾಯಿತು. ವಿಜಯ್ ಶೆಟ್ಟಿ ಅವರ ಭಕ್ತಿ ಪ್ರಧಾನ ಹಾಡುಗಳು ಆಗಮಿಸಿದ್ದ ಬಂಧುಮಿತ್ರರ ಹರ್ಷೋದ್ಗಾರಗಳ ಮೂಲಕ ಪ್ರಸ್ತುತಗೊಂಡು ಅಲ್ಲಿ ಸೇರಿದ್ದ ಗಣ್ಯರು ಈ ಕಾರ್ಯಕ್ರಮ ಆಯೋಜಿಸಿದ ಕುಟುಂಬದ ಕುರಿತು ಮೆಚ್ಚುಗೆ ನುಡಿಗಳನ್ನಾಡಿದರು. ಇಂಥಹ ಆರೋಗ್ಯಕರ ಬೆಳವಣಿಗೆ ಮುಂದಿನ ದಿನಗಳಲ್ಲಿ ಇತರರಿಗೂ ಪ್ರೇರಣೆಯಾಗಲಿ ಎಂದು ಹಾರೈಸಿದರು. ಒಟ್ಟಿನಲ್ಲಿ ಇದೊಂದು ಮಾದರಿ ಮೆಹೆಂದಿ ಕಾರ್ಯಕ್ರಮ…
ಬಂಟರ ಭವನದಲ್ಲಿ ನೆರವೇರಿದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವಾರ್ಷಿಕ ವಿಶ್ವ ಸಮ್ಮಿಲನ ಸ್ನೇಹತ್ವ ಬಂಟರ ಗುಣಧರ್ಮವಾಗಿದೆ : ಮುಖ್ಯಮಂತ್ರಿ ಬೊಮ್ಮಾಯಿ (ಚಿತ್ರ / ವರದಿ: ರೋನ್ಸ್ ಬಂಟ್ವಾಳ್)
ಮುಂಬಯಿ, ಸೆ.18: ನಾನೂ ಕೂಡಾ ಮುಂಬಯಿನಲ್ಲಿ ಕೈಗಾರಿಕೋದ್ಯಮಿ ಆಗಿದ್ದವನು. ಹಾಗಾಗಿ ನನಗೆ ಬಂಟರ ಮಿತ್ರರೇ ಜಾಸ್ತಿ ಆಗಿದ್ದಾರೆ. ಜಗತ್ತಿನ ಯಾವ ಮೂಲೆಗೂ ಹೋದಾಗಲೂ ಬಂಟರ ಪರಿಚಯಸ್ಥನಾಗುತ್ತೇನೆ. ಸ್ವೇಹತ್ವ ಬಂಟರ ಗುಣಧರ್ಮವಾಗಿದೆ ಆದುದರಿಂದ ಕನ್ನಡನಾಡು ಕಟ್ಟಲು ಮುಂಬಯಿವಾಸಿ ಬಂಟರ ಶಕ್ತಿ ಪಡೆಯಲು ಬಯಸುತ್ತಿದ್ದೇನೆ. ಜಗತ್ತಿನಲ್ಲಿ ಅತೀ ಹೆಚ್ಚು ಗೌರವವುಳ್ಳ ಬಂಟರು ಬಾಂಧವ್ಯಕ್ಕೆ ಬಲಿಷ್ಠರು. ಸದಾ ಭೃಹತ್ವತ್ವವನ್ನು ಯೋಚಿಸುವ ಬಂಟರು ಸಹೃದಯಿಗಳಾಗಿದ್ದಾರೆ ಎಂದು ಕರ್ನಾಟಕ ಸರ್ಕಾರದ ಮುಖ್ಯಮಂತ್ರಿ ಬಸವರಾಜ ಎಸ್.ಬೊಮ್ಮಾಯಿ ತಿಳಿಸಿದರು. ಇಂದಿಲ್ಲಿ ಭಾನುವಾರ ಕುರ್ಲಾ ಇಲ್ಲಿನ ಬಂಟರ ಭವನದ ಶ್ರೀಮತಿ ರಾಧಾಬಾಯಿ ತಿಮ್ಮಪ್ಪ ಭಂಡಾರಿ ಸಭಾಗೃಹದಲ್ಲಿನ ಕುಳೂರು ಕನ್ಯಾನ ಸದಾಶಿವ ಕೆ.ಶೆಟ್ಟಿ ವೇದಿಕೆಯಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ (ಫೆಡರೇಶನ್ ಆಫ್ ವರ್ಲ್ಡ್ ಬಂಟ್’ಸ್ ಅಸೋಸಿಯೇಶನ್’ಸ್) ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅಧ್ಯಕ್ಷತೆಯಲ್ಲಿ ನೆರವೇರಿಸಲ್ಪಟ್ಟ ವಿಶ್ವ ಬಂಟರ ಸಮ್ಮಿಲನ-2022ರ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದು ಮುಖ್ಯಮಂತ್ರಿ ಬೊಮ್ಮಾಯಿ ಮಾತನಾಡಿದರು. ನಳೀನ್ಕುಮಾರ್ ಕಟೀಲ್ ಮಾತನಾಡಿ ಉದ್ಯಮಶೀಲರಾಗಿ ಸಾಧಕರಾದ ಬಂಟರು ವಿಶ್ವ ಸುಂದರಿಯಿಂದ ವಿಶ್ವನಾಯಕರಾಗಿ ಬೆಳೆದವರಾಗಿದ್ದಾರೆ.…
ತುಳು ರಂಗಭೂಮಿಯಲ್ಲಿ ಇದೀಗ ಹೊಸತನದ ಗಾಳಿ ತುಸು ಬಿರುಸಾಗಿಯೇ ಬೀಸುತ್ತಿದೆ!. ಹಾಸ್ಯಮಯ ನಾಟಕಗಳನ್ನೇ ನೆಚ್ಚಿಕೊಂಡಿದ್ದ ಹಲವು ನಾಟಕ ತಂಡಗಳು ಪ್ರಸ್ತುತ ಪೌರಾಣಿಕ, ಜಾನಪದ, ಐತಿಹಾಸಿಕ ನಾಟಕಗಳನ್ನೂ ಪ್ರದರ್ಶಿಸುವ ಮೂಲಕ ತುಳು ರಂಗಭೂಮಿಯಲ್ಲಿ ಹೊಸ ಸಂಚಲನವನ್ನುಂಟು ಮಾಡುತ್ತಿವೆ. ಅದೇ ಸಿದ್ಧಸೂತ್ರದ, ಒಂದೇ ಶೈಲಿಯ ನಾಟಕಗಳಿಗೆ ಒಗ್ಗಿಹೋಗಿದ್ದ ಇಲ್ಲಿನ ಪ್ರೇಕ್ಷಕರು ಹೊಸ ಅಲೆಯ ನಾಟಕಗಳನ್ನು ಸಕಾರಾತ್ಮಕವಾಗಿಯೇ ಸ್ವೀಕರಿಸುತ್ತಿರುವುದು ತುಳು ರಂಗಭೂಮಿಯ ಹೊಸ ಬೆಳವಣಿಗೆಯಾಗಿದೆ. ತುಳುನಾಡಿನ ವಿವಿಧ ಧಾರ್ಮಿಕ ಕ್ಷೇತ್ರಗಳಲ್ಲಿ ನಿರಂತರವಾಗಿ ನಡೆಯುತ್ತಿರುವ ಉತ್ಸವ, ಜಾತ್ರೆ, ಬ್ರಹ್ಮಕಲಶ, ನೇಮೋತ್ಸವದಂತಹ ವಿಶೇಷ ಸಂದರ್ಭಗಳಲ್ಲಿ ಇಂತಹ ನಾಟಕಗಳು ಅಪಾರ ಬೇಡಿಕೆ ಪಡೆಯುತ್ತಿವೆ. ತುಳು ನಾಟಕ ರಂಗದ ಅತ್ಯಂತ ಯಶಸ್ವಿ ಸಂಘಟಕ ಎಂಬ ಹೆಗ್ಗಳಿಕೆ ಹೊಂದಿರುವ ಕಿಶೋರ್ ಡಿ.ಶೆಟ್ಟಿ ಅವರು ಇಂತಹ ವಿಶಿಷ್ಟ ಹಾಗೂ ಮೌಲ್ಯಯುತವಾದ ನಾಟಕಗಳನ್ನು ಸಾದರ ಪಡಿಸುವ ಮಹತ್ವಾಕಾಂಕ್ಷೆಯಿಂದ ಹುಟ್ಟು ಹಾಕಿರುವ ಸಂಸ್ಥೆ “ಶ್ರೀ ಲಲಿತೆ” ತಂಡ. ಈ ನಾಟಕ ತಂಡ ಪ್ರದರ್ಶಿಸಿದ ʻಕಟೀಲ್ದಪ್ಪೆ ಉಳ್ಳಾಲ್ದಿʼ ಪೌರಾಣಿಕ ನಾಟಕ ದೇಶ- ವಿದೇಶಗಳಲ್ಲಿ ಪ್ರದರ್ಶನಗೊಂಡು ಕಲಾಭಿಮಾನಿಗಳ ಅಪಾರ ಮೆಚ್ಚುಗೆಗೆ…
“ಹೋಮಕ್ಕೆ ಹಾಕಲು ಕಡಿಮೆ ದರದ ತುಪ್ಪ ಕೊಡಿ ” ಯಾವುದೇ ಅಂಗಡಿಯಲ್ಲೂ ಕೇಳಿ ಬರುವ ಮಾತಿದು. ದೇವರ ದೀಪಕ್ಕೂ ಇದೇ ತುಪ್ಪ. ದೇವರಿಗೆ ಈ ತುಪ್ಪ ನಡೆಯುತ್ತಾ? ಹೌದು, ದೇವರಿಗೆ ಭಕ್ತಿಯಿಂದ ಏನೇ ಸಮರ್ಪಿಸಿದರೂ ಆತ ಸ್ವೀಕರಿಸುತ್ತಾನೆ. ಕಣ್ಣಪ್ಪನ ಮಾಂಸ ಸ್ವೀಕರಿಸಿದ್ದ ಆತ. ಹಲವಾರು ಕಡೆ ಮದ್ಯ ಮಾಂಸ ಸಿಗರೇಟಿನ ನೈವೇದ್ಯ ಪದ್ಧತಿ ಕೂಡ ಇವೆ. ಆದರೆ ಹಾಗಂತ ತೀರಾ ದನದ ಮಾಂಸದ ತುಪ್ಪ ಕೊಟ್ಟರೆ? ಗೊತ್ತಿಲ್ಲದೇ ಕೊಟ್ಟರೆ ಏನೂ ತೊಂದರೆ ಇಲ್ಲ ಅಂದುಕೊಂಡು ನಮ್ಮ ಮನಸ್ಸಿಗೆ ನಾವೇ ಸಮಾಧಾನ ಮಾಡಿಕೊಳ್ಳುತ್ತೇವೆ. ಆದರೆ ಒಳಗಿಂದೊಳಗೆ ನಮಗೆ ಗೊತ್ತಿಲ್ಲದೇ ಇಲ್ಲ. ತುಪ್ಪದ ದರ ಹೊರಗೆ ಐನೂರು ರೂಪಾಯಿ ತನಕ ಇದೆ. ಆದರೆ ದೇವರಿಗೆ ಅರ್ಪಿಸುವ ತುಪ್ಪ 125 ರಿಂದ 200 ರೂಪಾಯಿ ಕೇಜಿ. ಸ್ವಾಮಿ ಅಯ್ಯಪ್ಪ ಇರುಮುಡಿ ಸಲುವಾಗಿ ಲಕ್ಷಾಂತರ ಕೇಜಿ ತುಪ್ಪ ನವೆಂಬರ್ ನಿಂದ ಜನವರಿ ತನಕ ಬರುತ್ತದೆ. ಇದರಲ್ಲಿ ಇರುವುದು ದನದ ಕೊಬ್ಬು. ಎಲುಬು ಮತ್ತು ವನಸ್ಪತಿ. ಸುವಾಸನೆ ಬರಲು…
ಮುಂಬಯಿ ಧುನಿಯಾದಲ್ಲಿ ತುಳುಕನ್ನಡಿಗರಲ್ಲಿ `ಬಂಟ ಕುಲಭೂಷಣ’ ಮುಂಬಯಿ ತುಳುಕನ್ನಡಿಗರ ನೆಚ್ಚಿನ `ಯಜಮಾನ ಎಂ.ಡಿ ಶೆಟ್ಟಿ’ ಎಂದೇ ಜನಜನಿತ ಮೂಳೂರು ದೇಜು ಶೆಟ್ಟಿ (95) ಅವರು ಸೋಮವಾರ (ಜು.10) ಬಾಂದ್ರಾ ಪಶ್ಚಿಮದ ಎಸ್.ವಿ ರೋಡ್ನಲ್ಲಿನ ವಿಜಯ್ ರಾಜ್ ಅಪಾರ್ಟ್ಮೆಂಟ್ ನಿವಾಸದಲ್ಲಿ ನಿಧನರಾದರು. ದಕ್ಷಿಣ ಕನ್ನಡ ಜಿಲ್ಲೆಯ ಕಾಪು ಮೂಳೂರು ಮನೆತನದವರಾಗಿದ್ದ ಮೃತರು 1973ರಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಉಪಸ್ಥಿತಿಯಲ್ಲಿ ಇಂದಿರಾ ಬ್ರಿಗೇಡ್ ಇದರ ಮಹಾರಾಷ್ಟ್ರ ರಾಜ್ಯಾಧ್ಯಕ್ಷರಾಗಿ ನಿಯುಕ್ತಿಗೊಂಡರು. 1977ರಲ್ಲಿ ವಿಶ್ವದ ಹೆಸರಾಂತ ಬಂಟ ಸಮಾಜದ ಸಂಸ್ಥೆಯಾದ ಬಂಟ್ಸ್ ಸಂಘ ಮುಂಬಯಿ ಇದರ ಅಧ್ಯಕ್ಷರಾಗಿ ಚುನಾಯಿತರಾಗಿ ಸಂಸ್ಥೆಯನ್ನು ಪ್ರತಿಷ್ಠಿತ ಮಟ್ಟಕ್ಕೆ ಬೆಳಿಸಿದ್ದು ಇಂದಿಗೂ ಬಂಟ ಸಮಾಜದ ಹಿರಿಯ ಮುತ್ಸದ್ಧಿ ಆಗಿಯೇ ಉಳಿದಿರುವರು. ವರ್ಲಿಯಲ್ಲಿನ ನಿತ್ಯಾನಂದ ರಾತ್ರಿ ಹೈಸ್ಕೂಲು ಇದನ್ನು ಬಂಟ್ಸ್ ಸಂಘಕ್ಕೆ ಸೇರ್ಪಡೆ, ಬಂಟರ ಭವನದಲ್ಲಿ ಸ್ವಾಮಿ ಮುಕ್ತಾನಂದ ಸಭಾಗೃಹ ಮತ್ತು ಮಹಿಳಾ ವಿಭಾಗದ ರಚನೆ, ಬಂಟರ ಸಂಘದ ಮುಖವಾಣಿ ಬಂಟರವಾಣಿ ಪ್ರಕಾಶನ, 2006ರಲ್ಲಿ ಸ್ಥಾಪಿತ ಬಂಟ್ಸ್ ಉನ್ನತ ಶಿಕ್ಷಣ ಯೋಜನೆ,…
ರಾಜ್ಯದ ಎಲ್ಲಾ ಬಿ.ಇ. ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ತರಬೇತಿ ಆಳ್ವಾಸ್ ಎಂಜಿನಿಯರಿಂಗ್ ಕಾಲೇಜು- ಸೈಸೆಕ್ ಒಡಂಬಡಿಕೆ
ಮೂಡುಬಿದಿರೆ: ರಾಜ್ಯದ ಎಲ್ಲ ಎಂಜಿನಿಯರಿಂಗ್ ಕಾಲೇಜುಗಳ ಅಂತಿಮ ವರ್ಷದ ಬಿ.ಇ. ವಿದ್ಯಾರ್ಥಿಗಳಿಗೆ ಸಿಎಸ್ಎಫ್ಎಸ್ (ಸೈಬರ್ ಸೆಕ್ಯುರಿಟಿ ಫಿನಿಶಿಂಗ್ ಸ್ಕೂಲ್) ತರಬೇತಿ ನೀಡುವ ಮಹತ್ವದ ಒಡಂಬಡಿಕೆಗೆ ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜು ಮತ್ತು ಕರ್ನಾಟಕ ಸರ್ಕಾರದ ಸೈಸೆಕ್(ಸೈಬರ್ ಸೆಕ್ಯುರಿಟಿ ಕರ್ನಾಟಕ) ಜನವರಿ 20ರಂದು ಬೆಂಗಳೂರಿನ ಸೈಸೆಕ್ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ)ಯಲ್ಲಿ ಸಹಿ ಮಾಡಿದವು. ಈ ಮಹತ್ವದ ಒಡಂಬಡಿಕೆಗೆ ಸಹಿ ಮಾಡಿದ ಕರ್ನಾಟಕ ಸರ್ಕಾರದ ಐಟಿ, ಬಿಟಿ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ಒಡಂಬಡಿಕೆಯನ್ನು ಮಾಡಿಕೊಂಡಿರುವ ಸೈಸೆಕ್ ಮತ್ತು ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜನ್ನು ಅಭಿನಂದಿಸಿದರು. ಈ ಕಾರ್ಯಕ್ರಮವನ್ನು ಇನ್ನಷ್ಟು ವಿಸ್ತಾರವಾಗಿ ರೂಪಿಸಿ. ಸರ್ಕಾರ ಸದಾ ಬೆಂಬಲ ನೀಡಲಿದೆ. ಈ ತರಬೇತಿ ಪಡೆದ ವಿದ್ಯಾರ್ಥಿಗಳು ಸೈಬರ್ ಸೆಕ್ಯುರಿಟಿಯಲ್ಲಿ ಉದ್ಯೋಗ ಪಡೆಯಬೇಕು ನಮ್ಮ ಪ್ರಮುಖ ಧ್ಯೇಯವಾಗಿದೆ ಎಂದರು. ಸಿಎಸ್ಎಫ್ಎಸ್ ಕಾರ್ಯಕ್ರಮವು ಫೆಬ್ರುವರಿ 19ರಿಂದ ಮಾರ್ಚ್ 22ರ ವೆರೆಗೆ ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನ ಆವರಣದಲ್ಲಿ…
ವಿದ್ಯಾಗಿರಿ (ಮೂಡುಬಿದಿರೆ): ಜ್ಞಾನದ ವೃದ್ಧಿಯಲ್ಲಿ ಗ್ರಂಥಾಲಯದ ಪಾತ್ರ ಬಹಳ ಮಹತ್ತರ ಎಂದು ಮಂಗಳೂರು ವಿಶ್ವವಿದ್ಯಾಲಯದ ಗ್ರಂಥಾಲಯಮತ್ತು ಮಾಹಿತಿ ವಿಜ್ಞಾನ ವಿಭಾಗದ ಸಹ ಪ್ರಾಧ್ಯಾಪಕ ಡಾ ಉಮೇಶ್ ನಾಯ್ಕ್ ಹೇಳಿದರು. ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಸ್ನಾತಕೋತ್ತರ ವಿದ್ಯಾರ್ಥಿ ಮತ್ತು ಉಪನ್ಯಾಸಕರಿಕರಿಗೆ ‘ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ’ ವಿಭಾಗ ಆಯೋಜಿಸಿರುವ ‘ಓಪನ್ ಅಕ್ಸೆಸ್ಸ್ ಇ – ರಿಸೋರ್ಸ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು . ‘ಹಲವಾರು ಮಾಹಿತಿಗಳನ್ನು ನಾವು ಗ್ರಂಥಾಲಯದ ಮುಖಾಂತರ ಪಡೆದುಕೊಳ್ಳುತ್ತೇವೆ. ಕೆಲವು ಸಂದರ್ಭದಲ್ಲಿ ಮಾಹಿತಿ ಪಡೆಯಲು ಹಲವಾರು ಗ್ರಂಥಾಲಯಗಳಿದ್ದರೂ, ಎಲ್ಲಾ ಮಾಹಿತಿಗಳು ಲಭ್ಯವಾಗದೆ ಇರಬಹುದು. ಅಂತಹ ಸಮಯದಲ್ಲಿ ಇ-ಗ್ರಂಥಾಲಯ ಸಹಾಯಕ’ ಎಂದರು. ‘ಸಂಶೋಧನೆ ಮತ್ತು ಪ್ರಾಜೆಕ್ಟ್ ಮಾಹಿತಿಗಳಿಗಾಗಿ ವಿದ್ಯಾರ್ಥಿಗಳು ಗ್ರಂಥಾಲಯಕ್ಕೆ ಹೆಚ್ಚು ಅವಲಂಬಿತರಾಗಿದ್ದಾರೆ. ಪ್ರಸ್ತುತ ಕಾಲಘಟ್ಟದಲ್ಲಿ ಎಲ್ಲ ಮಾಹಿತಿ ಗ್ರಂಥಾಲಯದಿಂದ ಸಿಗದೇ ಇರಬಹುದು. ಅಂತಹ ಸಂದರ್ಭದಲ್ಲಿ ಓಪನ್ಆ್ಯಕ್ಸಸ್ ಇ ಲೈಬ್ರೆರಿ (ಮುಕ್ತ ಇ – ಗ್ರಂಥಾಲಯ) ಸಹಕಾರಿಎಂದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ ‘ನಿಮ್ಮ ಗುರಿಯ…
ಅಗಣಿತ ಶ್ರಮ,ಅದಕ್ಕೆ ತಕ್ಕುದಾದ ತಯಾರಿ ಮತ್ತು ದೊರೆತ ಸಣ್ಣ ಕಾಯಕವನ್ನು ತನ್ನ ಕಾರ್ಯದಂತೆ ವಿಜೃಂಭಿಸಿ ನಡೆಯುವವನು ಬದುಕಲ್ಲಿ ಎಂದೂ ವಿರಮಿಸಲಾರ.ಅವನ ಹಿಂದಿನ ಶ್ರಮವೇ ಇಂದಿನ ಉತ್ತಮ ವ್ಯಕ್ತಿಯಾಗಿ,ಹಲವರಿಗೆ ಮಾದರಿಯಾಗಿ ಹಲವರಲ್ಲಿ ಒಬ್ಬನನ್ನಾಗಿಸುತ್ತದೆ. ಇನ್ಯಾರೋ ಬಿಟ್ಟ ಕಾರ್ಯ ನನಗೆ ದೊರೆತಿದೆ ಎಂದು ಅಸಹ್ಯ ಪಡದೆ,ಅದನ್ನೇ ನನ್ನ ಕಾರ್ಯವೆಂದು ಭಾವಿಸಿ ತಲ್ಲೀನನಾದಾಗ ಭದ್ರ ಗೆಲುವನ್ನು ಸಾಧಿಸಲು ಸಾಧ್ಯ..! ಯಾವತ್ತು ಒಬ್ಬನ ಗೆಲುವು ಅವನು ಮಾತ್ರ ಸಂಭ್ರಮಿಸುವಂತಿರಬಾರದು, ಅದು ಅವನ ಸುತ್ತಲಿನ ಜಗತ್ತು ಸಂಭ್ರಮಿಸುವಂತಿರಬೇಕು.ಆಗ ತನ್ನ ಪೂರ್ಣ ಪರಿಶ್ರಮದ ದಾರಿಗೆ ಒಂದು ರೀತಿಯ ಅರ್ಥ ದೊರೆದಂತಾಗುತ್ತದೆ..! ದೃಶ್ಯ ಮಾಧ್ಯಮದ ಬೃಹತ್ ವೇದಿಕೆಯಲ್ಲಿ ಹಲವಾರು ವರುಷಗಳ ಕಾಲ,ಸುದೀರ್ಘವಾಗಿ ನೆಲೆಯನ್ನು ಕಂಡುಕೊಳ್ಳುವುದು ಸಾಮಾನ್ಯ ಸಂಗತಿ ಅಲ್ಲವೇ ಅಲ್ಲ! ಅದಕ್ಕೇ ತನ್ನದೇ ಆದ ವೃತ್ತಿ ಪರತೆ,ಕೆಲಸದ ಮೇಲಿನ ಹಿಡಿತ,ತೀಕ್ಷ್ಣ ಮಾತಿನ ಪ್ರಖರ,ಧ್ವನಿಯ ಗಡಸುತನ ಮತ್ತು ಸಮಯಕ್ಕೆ ತಕ್ಕಂತೆ ಪರಿಸ್ಥಿತಿಯನ್ನು ಹದು ಬಸ್ತಿನಲ್ಲಿ ಇಡುವ ಚಾಕಚಕ್ಯತೆ ಅತೀ ಅಗತ್ಯವಾಗಿದೆ. ತನ್ನದೇ ಆದ ವಿಷಯವನ್ನು ಪ್ರಸ್ತಾಪಿಸುವ ರೀತಿ ಮತ್ತು ಎಲ್ಲರನ್ನು ಆ ವಿಷಯದ…
‘ಈ ಹಿಂದೆ ನಾನು ಬೆಂಗಳೂರಿಗೆ ಆಗಾಗ್ಗೆ ಬಸ್ನಲ್ಲಿ ಪ್ರಯಾಣಿಸುತ್ತಿದ್ದೆನು. ಮದ್ಯ, ಗುಟ್ಕಾ, ಸಿಗರೇಟು ಇತ್ಯಾದಿ ವ್ಯಸನಿಗಳು ನನ್ನ ಬಳಿ ಕುಳಿತುಕೊಳ್ಳುವುದು ಬೇಡ ಎಂಬ ಕಾರಣಕ್ಕೆ ನನ್ನ ಪಕ್ಕದ ಆಸನವನ್ನೂ ಕಾಯ್ದಿರಿಸಿಕೊಳ್ಳುತ್ತಿದೆನು. ವ್ಯಸನಿಗಳು ಕುಳಿತರೆ ನನಗೆ ನಿದ್ದೆ ಬರುತ್ತಿರಲಿಲ್ಲ’ ಎಂದು ಡಾ.ಎಂ. ಮೋಹನ ಆಳ್ವ ಹೇಳಿದರು. ‘ಆದರೆ, ಆಗ ನನಗೆ ಬಹುವಾಗಿ ಕಾಡುತ್ತಿದ್ದ ವಿಚಾರವು ವ್ಯಸನಿಗಳ ಕುಟುಂಬಸ್ಥರ ಪರಿಸ್ಥಿತಿ. ವ್ಯಸನಿಯ ಪತ್ನಿ ಹೇಗೆ ಹಾಸಿಗೆ ಹಂಚಿಕೊಳ್ಳಬೇಕು. ಮಕ್ಕಳು ಹೇಗೆ ಜೊತೆಗಿರಬೇಕು? ಎಂಬುದೇ ಮನಸ್ಸಿಗೆ ನೋವುಂಟು ಮಾಡುತ್ತಿತ್ತು’ ಎಂದು ಖೇದ ತೋಡಿಕೊಂಡರು. ವ್ಯಸನ ಮುಕ್ತರೇ ಸ್ವಸ್ಥ ಸಮಾಜದ ರಾಯಭಾರಿಗಳು: ಡಾ. ಅಶೋಕ ದಳವಾಯಿ ಬದುಕು ಗೆದ್ದವರ ‘ಪುನರ್ಜನ್ಮ ಕೌಟುಂಬಿಕ ಸಮ್ಮಿಲನ’. ವಿದ್ಯಾಗಿರಿ: ಶುಭ್ರ ಶೋಭಿತ ಮೊಗದಲ್ಲಿ ಮಂದಹಾಸ, ಬಾಚಿದ ಕೂದಲು, ಶ್ವೇತವರ್ಣದ ಪಂಚೆ- ಅಂಗಿ, ಮೇಲೊಂದು ಶಾಲು, ವರ್ಣಮಯ ಸೀರೆ, ಸಂಭ್ರಮದ ಸಿಂಗಾರ, ಹಣೆಯಲ್ಲೊಂದು ಅಧ್ಯಾತ್ಮದ ಕಳೆ, ಅಚ್ಚುಕಟ್ಟಾದ ಧಿರಿಸು, ನಡಿಗೆಯಲ್ಲಿ ಗಾಂಭಿರ್ಯ, ಮನ ತುಂಬಿದ ಪ್ರೀತಿ, ಆತ್ಮವಿಶ್ವಾಸದ ನೋಟ. ಅದು ಅಕ್ಷರಶಃ ಬದುಕಿನ…