Author: admin
ಯಕ್ಷಧ್ರುವ ಪಟ್ಲ ಫೌಂಡೇಶನ್ ಮಂಗಳೂರು ಇದರ ಬಂಟ್ವಾಳ ತಾಲೂಕು ಘಟಕದ ಸಭೆ ಬಿ.ಸಿ.ರೋಡಿನ ರಂಗೋಲಿ ಸಭಾಂಗಣದಲ್ಲಿ ಶನಿವಾರ ಸಂಜೆ ಘಟಕದ ಅಧ್ಯಕ್ಷ ಚಂದ್ರಹಾಸ ಡಿ. ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಮೇ 7 ಮಂಗಳವಾರದಂದು ಬಿ.ಸಿ.ರೋಡಿನ ಅನ್ನಪೂರ್ಣೇಶ್ವರಿ ದೇವಸ್ಥಾನದ ವಠಾರದಲ್ಲಿ ನಡೆಯಲಿರುವ ಬಂಟ್ವಾಳ ಘಟಕದ ಪ್ರಥಮ ವಾರ್ಷಿಕೋತ್ಸವದ ಆಮಂತ್ರಣ ಪತ್ರವನ್ನು ಬಿಡುಗಡೆಗೊಳಿಸಲಾಯಿತು. ಬಳಿಕ ಕಾರ್ಯಕ್ರಮದ ಬಗ್ಗೆ ಚರ್ಚೆ ನಡೆಸಲಾಯಿತು. ನ್ಯಾಯವಾದಿ ಪ್ರಸಾದ್ ಕುಮಾರ್ ರೈ, ಯಕ್ಷಗಾನ ಕಲಾವಿದ ಅಶೋಕ್ ಶೆಟ್ಟಿ ಸರಪಾಡಿ, ಪತ್ರಕರ್ತ ರತ್ನದೇವ್ ಪೂಂಜಲಕಟ್ಟೆ, ಕಲಾವಿದ ನಾರಾಯಣ ಸಿ. ಪೆರ್ನೆ ಅನಿಸಿಕೆ ವ್ಯಕ್ತಪಡಿಸಿದರು. ವೇದಿಕೆಯಲ್ಲಿ ಉಪಾಧ್ಯಕ್ಷರಾದ ಭುಜಂಗ ಸಾಲಿಯಾನ್ ಬಿ.ಸಿ.ರೋಡು, ಜಯಪ್ರಕಾಶ್ ಜಕ್ರಿಬೆಟ್ಟು, ಕೋಶಾಧಿಕಾರಿ ಶಂಕರ ಶೆಟ್ಟಿ ಪರಾರಿಗುತ್ತು ಉಪಸ್ಥಿತರಿದ್ದರು. ಗೌರವಾಧ್ಯಕ್ಷ ಜಗನ್ನಾಥ ಚೌಟ ಬದಿಗುಡ್ಡೆ ಸ್ವಾಗತಿಸಿ, ಪ್ರಾಸ್ತವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ಚಿತ್ತರಂಜನ್ ಶೆಟ್ಟಿ ಬೊಂಡಾಲ ವಂದಿಸಿದರು. ಪ್ರಧಾನ ಕಾರ್ಯದರ್ಶಿ ದೇವದಾಸ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಪೌರಾಣಿಕ ಹಿನ್ನಲೆ ತುರುವರಸು ಮತ್ತು ನಾಗರಾಜನ ಸಹೋದರಿಯರ ಸಂತಾನ ಎಂದು ಕರೆಸಿಕೊಂಡು ನಾಗ ಬಳಿಯವರಾಗಿದ್ದಾರೆ. ಬಂಟರಿಗೆ ಧರ್ಮದಲ್ಲಿ ಕ್ಷಾತ್ರ ತೇಜಸ್ಸು ಇತ್ತು. ಆಕರ್ಷಕ ಮೈಕಟ್ಟು, ನೇರ ನುಡಿ, ದಿಟ್ಟ ಹೆಜ್ಜೆ, ಕಠಿಣ ಪರಿಶ್ರಮ, ಅಚಲ ನಿಷ್ಠೆ, ಸತ್ಯಪರತೆ, ಪರೋಪಕಾರ, ಆದರ್ಶ ಧ್ಯೇಯ, ಕಾರ್ಯ ಪರಾಕ್ರಮ, ಮೇಧಾವಿತನ, ನ್ಯಾಯಪರತೆ, ಧರ್ಮಪಾಲನೆ, ತ್ಯಾಗ ಬುದ್ಧಿ ಹಾಗೂ ನಾಯಕತ್ವ ಗುಣಗಳಿದ್ದುದರಿಂದ ರಾಜರಾಗಿ, ಸಾಮಂತರಸರಾಗಿ, ಸೇನಾಧಿಪತಿಗಳಾಗಿ, ಊರ ಮುಖಂಡರಾಗಿ, ದೈವ ದೇವಾಲಯಗಳ ಮೇಲ್ವಿಚಾರಕರಾಗಿ, ವಿಶ್ವಾಸ ಪಾತ್ರ ಬಲಗೈ ಬಂಟರಾಗಿ ಮೆರೆದರು. ಆದ್ದರಿಂದ ಮಿಕ್ಕ ಭಾರತದ ಎಲ್ಲಾ ಜನಾಂಗದವರನ್ನು ಬ್ರಿಟಿಷರು ಗುಲಾಮರಾಗಿ ಕಂಡರೂ ಬಂಟ ಶ್ರೇಷ್ಠರಿಗೆ ವಿಶೇಷ ಸ್ಥಾನಮಾನ ಮನ್ನಣೆ ನೀಡಿ ಗೌರವದಿಂದ ಕಾಣುತ್ತಿದ್ದರು. Bunts as this name itself implies (Bunt means powerful man a soldier) were originally a military class Bunts are a fine statement race with study independence of manner and comparitivity fair…
ಆಳ್ವಾಸ್ನಲ್ಲಿ ಮಹಾವೀರ ಸ್ವಾಮಿ ಜನ್ಮ ಕಲ್ಯಾಣ ಮಹೋತ್ಸವ ಉತ್ತಮ ಆಚಾರಗಳಿಂದ ಭಿನ್ನವಾಗಿ ಗುರುತಿಸಿಕೊಳ್ಳಿ: ಡಾ. ಡಿ. ವೀರೇಂದ್ರ ಹೆಗ್ಗಡೆ
ಮೂಡುಬಿದಿರೆ : ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಮಸ್ತ ಜೈನ ಬಾಂಧವರ ಸಹಯೋಗದೊಂದಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಭಗವಾನ್ ಶ್ರೀ ಮಹಾವೀರ ಸ್ವಾಮಿ ಜನ್ಮ ಕಲ್ಯಾಣ ಮಹೋತ್ಸವವನ್ನು ವಿದ್ಯಾಗಿರಿಯ ಕೃಷಿಸಿರಿ ವೇದಿಕೆಯಲ್ಲಿ ಶನಿವಾರ ಹಮ್ಮಿಕೊಳ್ಳಲಾಯಿತು. ಸಂಜೆ 4:30ಕ್ಕೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಹೊರನಾಡಿನ ಜಯಶ್ರೀ ಧರಣೇಂದ್ರ ಜೈನ್ ಮತ್ತು ಬಳಗದವರಿಂದ ಜಿನಭಕ್ತಿ ಗಾಯನ ನಡೆಯಿತು. ಉತ್ತರ ಭಾರತದಿಂದ ವಿಶೇಷವಾಗಿ ತರಿಸಿದ ನಾಲ್ಕೂವರೆ ಅಡಿ ಎತ್ತರದ ಮಹಾವೀರ ಸ್ವಾಮಿ ಜಿನಬಿಂಬದ ಮೆರವಣಿಗೆ, ತೋರಣ ಮುಹೂರ್ತ, ದ್ರವ್ಯಾಭಿಷೇಕ, ಅಷ್ಟವಿಧಾರ್ಚನೆ ಪೂಜೆ, ಮಹಾಮಂಗಳಾರತಿ ಹಮ್ಮಿಕೊಳ್ಳಲಾಯಿತು. ನಂತರ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ಗೈದ ಮೂಡುಬಿದಿರೆ ಜೈನ ಮಠದ ಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಸಾತ್ವಿಕ ಆಹಾರ, ಸ್ವಚ್ಚ ಚಿಂತನೆಯಿಂದ ಮಾನವ ಧರ್ಮವು ಸುಂದರಗೊಳ್ಳುತ್ತದೆ. ಸರಳವಾದ ಜೀವನ ಕ್ರಮ, ಕರ್ಮಗಳ ಬಂಧನಗಳಿಂದ ಮುಕ್ತಿ ಪಡೆದ ಮಹಾವೀರ ಸ್ವಾಮಿಯ ಜೀವನದ ಆದರ್ಶಗಳನ್ನು ಎಲ್ಲರೂ ಅಳವಡಿಸಿಕೊಂಡು ಬದುಕಿದಾಗ ವೀತರಾಗಿಗಳು ಆಗಲು ಸಾಧ್ಯ ಎಂದರು. ಹಿಂಸೆಯನ್ನು ನಿಗ್ರಹಿಸುವ ನಡತೆ ಇದ್ದಾಗ…
ಮೂಡುಬಿದಿರೆ: ಏಪ್ರಿಲ್ನಲ್ಲಿ ನಡೆದ ಜೆಇಇ ಎರಡನೇ ಚರಣದ ಫಲಿತಾಂಶ ಪ್ರಕಟಗೊಂಡಿದ್ದು, ಆಳ್ವಾಸ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮೆರೆದಿದ್ದಾರೆ. ಕಾಲೇಜಿನ ಹೆಚ್ ಆರ್ ರಜತ್ 99.6655363 ಪರ್ಸಂಟೈಲ್ ಪಡೆದರೆ, ಪ್ರಶಾಂತ 99.1289068 ಪರ್ಸಂಟೈಲ್, ಹಾಗೂ ಪ್ರಜ್ವಲ್ ಚೌಧರಿ ನಂದೇಲಾ 99.0154909 ಪರ್ಸಂಟೈಲ್ ಪಡೆದಿರುತ್ತಾರೆ. ಕೆಟಗರಿ ವಿಭಾಗದಲ್ಲಿ ಆಕಾಶ್ ಬಸವರಾಜ್ ಬುಲ್ಲಮ್ಮನ್ನವರ್ ರಾಷ್ಟ್ರ ಮಟ್ಟದಲ್ಲಿ 290ನೇ ರ್ಯಾಂಕ್ ಪಡೆದರೆ, ಪ್ರಥಮ್ ಎಸ್ 425ನೇ ರ್ಯಾಂಕ್, ಆರ್ ರಕ್ಷಿತಾ 865ನೇ ರ್ಯಾಂಕ್ ಗಳಿಸಿರುತ್ತಾರೆ. 98 ಪರ್ಸಂಟೈಲ್ಗಿಂತ ಅಧಿಕ 14 ವಿದ್ಯಾರ್ಥಿಗಳು, 97 ಪರ್ಸಂಟೈಲ್ಗಿಂತ ಅಧಿಕ 34 ವಿದ್ಯಾರ್ಥಿಗಳು, 96 ಪರ್ಸಂಟೈಲ್ಗಿಂತ ಅಧಿಕ 68, 95 ಪರ್ಸಂಟೈಲ್ಗಿಂತ 120, ಹಾಗೂ 234 ವಿದ್ಯಾರ್ಥಿಗಳು 90 ಪರ್ಸಂಟೈಲ್ಗಿಂತ ಅಧಿಕ ಅಂಕ ಪಡೆದ ಶ್ರೇಯಕ್ಕೆ ಪಾತ್ರರಾಗಿದ್ದಾರೆ. ಭೌತಶಾಸ್ತ್ರ ವಿಷಯದಲ್ಲಿ 2 ವಿದ್ಯಾರ್ಥಿಗಳು 100 ಪರ್ಸಂಟೈಲ್ ಪಡೆದರೆ, 24 ವಿದ್ಯಾರ್ಥಿಗಳು 99 ಪರ್ಸಂಟೈಲ್ಗಿಂತ ಅಧಿಕ ಅಂಕ ಪಡೆದು ಸಾಧನೆ ಮೆರೆದಿದ್ದಾರೆ. ರಸಾಯನಶಾಸ್ತ್ರ ವಿಷಯದಲ್ಲಿ 99 ಪರ್ಸಂಟೈಲ್ಗಿಂತ ಅಧಿಕ 48…
ನಮ್ಮ ಕರಾವಳಿಗಳಲ್ಲಿ ಎಲ್ಲಿಯೂ ಎಳ್ಳು ಬೆಳೆಯುವುದನ್ನು ಕಾಣುವುದಿಲ್ಲ. ಅದರ ಎಣ್ಣೆ ತೆಗೆಯುವ ಮಿಲ್ಲುಗಳೂ ಇಲ್ಲ. ಕೇವಲ ನಮ್ಮ ದೇಶದಲ್ಲಿ ನಿತ್ಯ ದೀಪಗಳಿಗೆ ಬಳಸಬೇಕಾದ ಎಳ್ಳನ್ನು ಶೇಕಡ ಹತ್ತರಷ್ಟು ಬೆಳೆಯುವುದಿಲ್ಲ. ಬೆಳೆದ ಎಳ್ಳಿನ ಹೆಚ್ಚಿನ ಅಂಶ ತಿಂಡಿ ತಿನಿಸುಗಳಿಗೆ ಉಪಯೋಗವಾಗುತ್ತದೆ. ಆದರೆ ವಿವಿಧ ಆಕರ್ಷಕ ಪ್ಯಾಕೆಟ್ಟು ಬಾಟಲಿಗಳಲ್ಲಿ ಸಿಗುವ ಎಳ್ಳೆಣ್ಣೆಯ ಮೂಲ ಎಲ್ಲಿ? ಕೇವಲ ಒಂದು ಲೀಟರ್ ನ ಎಳ್ಳೆಣ್ಣೆ ಇದ್ದರೆ 10 ಲೀಟರ್ ಶುದ್ಧ ಎಳ್ಳೆಣ್ಣೆ ನಿರ್ಮಾಣ ಸಾಧ್ಯವೆಂದು ಕಂಡು ಹಿಡಿದಿದ್ದಾರೆ. ಅಂದರೆ ಪೆಟ್ರೋಲಿಯಂ ಶುದ್ದೀಕರಣ ಘಟಕಗಳಲ್ಲಿ ಶುದ್ದೀಕರಿಸಿ ಅಂತಿಮವಾಗಿ ಉಳಿಯುವ ಒಂದು ಬಿಳಿ ದ್ರವವನ್ನು ವಿವಿಧ ಖಾದ್ಯ ತೈಲ ಮಿಲ್ಲಿನವರು ಪಡೆದು ಅದಕ್ಕೆ ಬೇಕಾದ ಕೇವಲ ಶೇಕಡಾ 10 ರಷ್ಟು ಎಣ್ಣೆ ಬೆರೆಸಿದರೆ ನಮಗೆ ಬೇಕಾದ ಶುದ್ಧ ಎಳ್ಳೆಣ್ಣೆ ಕೊಬ್ಬರಿ ಎಣ್ಣೆ ಇತರ ವಿವಿಧ ಎಣ್ಣೆಗಳನ್ನು ಪಡೆಯಬಹುದಾಗಿದೆ. ಹೆಚ್ಚೇಕೆ ಇದೇ ರೀತಿಯಲ್ಲಿ ದನದ ತುಪ್ಪವನ್ನು ಪಡೆಯಬಹುದಾಗಿದೆ. ಮೇಲೆ ಸೂಚಿಸಿದ ಪೆಟ್ರೋಲಿಯಂ ನಿರುಪಯುಕ್ತ ದ್ರವವನ್ನು ಹಿಂದೆ ಸಮುದ್ರದ ಆಳಕ್ಕೆ ಡಂಪು ಮಾಡುತ್ತಿದ್ದರು.…
ಬಂಟರ ಸಂಘ ಮುಂಬಯಿ ಮೀರಾ ಭಾಯಂದರ್ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ವತಿಯಿಂದ ಮೀರಾರೋಡ್ ಪೂರ್ವದ ಕಾಶಿ ಗಾಂವ್ ನಲ್ಲಿರುವ ಶ್ರೀ ರಾಧಾಕೃಷ್ಣ ಚಾರಿಟೇಬಲ್ ಫೌಂಡೇಶನ್ ಸಂಚಾಲಕತ್ವದ ಶ್ರೀ ರಾಧಾಕೃಷ್ಣ ವೃದ್ಧಾಶ್ರಮಕ್ಕೆ ಭೇಟಿ ನೀಡಿ ದಿನೋಪಯೋಗಿ ವಸ್ತುಗಳು ಸಹಿತ ಆಹಾರ ಸಾಮಾಗ್ರಿಗಳನ್ನು ನೀಡಿ ಸಹಕರಿಸಲಾಯಿತು. ಬಂಟರ ಸಂಘ ಮೀರಾ ಭಾಯಂದರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಗುತ್ತಿನಾರ್ ರವೀಂದ್ರ ಶೆಟ್ಟಿ ಹಾಗೂ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವಸಂತಿ ಎಸ್. ಶೆಟ್ಟಿಯವರ ಮುಂದಾಳತ್ವದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಈ ಸಂದರ್ಭ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಸುಗುಣಾ ಶೆಟ್ಟಿ, ಅಮಿತಾ ಕೆ. ಶೆಟ್ಟಿ, ಉಪ ಕಾರ್ಯಾಧ್ಯಕ್ಷೆ ಸುಜಾತಾ ಶೆಟ್ಟಿ, ಜತೆ ಕೋಶಾಧಿಕಾರಿ ಶಿಲ್ಪಾ ಶೆಟ್ಟಿ, ರಂಜನಿ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಕುಂದಾಪುರ ತಾಲೂಕು ಯುವ ಬಂಟರ ಸಂಘದ ವತಿಯಿಂದ ಅನಾರೋಗ್ಯ ಪೀಡಿತರಿಗೆ ಸಹಾಯಧನ ವಿತರಣಾ ಕಾರ್ಯಕ್ರಮವು ಸಂಘದ ಆಡಳಿತ ಕಚೇರಿಯಲ್ಲಿ ಏಪ್ರಿಲ್ 10 ರಂದು ನಡೆಯಿತು. ಫಲಾನುಭವಿಗಳಿಗೆ ಸಹಾಯಧನವನ್ನು ವಿತರಿಸಿ ಮಾತನಾಡಿದ ಸಂಘದ ಮಹಾಪೋಷಕರಾದ ಆನಗಳ್ಳಿ ಕರುಣಾಕರ ಹೆಗ್ಡೆ, ಸಂಘದ ವತಿಯಿಂದ ನೀಡುವ ಸಹಾಯಧನವನ್ನು ಸಮರ್ಪಕವಾಗಿ, ಸರಿಯಾದ ರೀತಿಯಲ್ಲಿ ತಾವು ಬಳಸಿಕೊಳ್ಳಬೇಕು ಎಂದು ಹೇಳಿದರು. ಕುಂದಾಪುರ ಯುವ ಬಂಟರ ಸಂಘದ ಅಧ್ಯಕ್ಷರಾದ ಡಾ. ಅಂಪಾರು ನಿತ್ಯಾನಂದ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ನಿತೀಶ್ ಶೆಟ್ಟಿ ಬಸ್ರೂರು, ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಉದಯ್ ಕುಮಾರ್ ಶೆಟ್ಟಿ ಮಚ್ಚಟ್ಟು, ಹಿರಿಯ ಉಪಾಧ್ಯಕ್ಷರಾದ ರವಿಶಂಕರ್ ಹೆಗ್ಡೆ ದಬ್ಬಾಡಿ, ಕ್ರೀಡಾ ಸಂಚಾಲಕ ಅರುಣ್ ಕುಮಾರ್ ಶೆಟ್ಟಿ ಕುಂದಾಪುರ, ಉದಯ್ ಶೆಟ್ಟಿ ಹೊಸಂಗಡಿ ಮತ್ತು ಬೇರೆ ಬೇರೆ ಊರುಗಳಿಂದ ಬಂದ ಫಲಾನುಭವಿಗಳು ಉಪಸ್ಥಿತರಿದ್ದರು.
ಪಿರಾಕ್ ದ ಕಾಲೋಡು ಪ್ರಾಯ ದಂಗ್ ದ್ ಸೈಪಿನ ಜನಕುಲೆ ಜಾಸ್ತಿ. ಅಂಚತ್ತಂದೆ ಸೀಕ್ ಸಂಕಡೊಡುಲ ಇಲ್ಲಡೆ ಜೀವ ಬುಡೊಂದಿತ್ತೆರ್. ನರಮಾನಿನ ಉಸುಲ್ ಪೋಯಿ ಗಳಿಗೆಗ್ ಜೀವ ಕಡಿಂಡ್ ಪನ್ಪಿನ ಹಿರಿಯೆರ್ನ ಪಾತೆರೊನು ಅರ್ಥ ಮಲ್ತೊಂದು, ಸುರುಕ್ಕು ಪುಣೊನು ಮಣ್ಣ್ ಡ್ ಪಾಡುನ ಕ್ರಮ ಮಲ್ಪುವೆರ್. ಅಂಚೆನೆ ಸೈತಿನ ಸುದ್ದಿ ಊರ್ದ ಜನಕ್ಲೆಗ್ ತೆರಿಯೆರೆ ಆದಿವಾಸಿ ಜನಾಂಗದಕುಲು ಬತ್ತ್ ದುಃಖದ ತಾಳೊಡು ಡೋಲು ಬೊಟ್ಟುವೆರ್. ಮಣ್ಣ್ ಡ್ ಪಾಡುನ ಪಂಡ, ಪಜೆಟ್ಟಿತ್ತಿನ ಪುನೊನು ತೆನ್ಕಾಯಿ ತರೆ ಮಲ್ತ್ ಬಡಕಾಯಿ ಕಾರ್ ಪಾರ್ದ್ ಜೆಪುಡಾರ್ವೆ. ಅಲ್ತ್ ಬೊಕ್ಕ ತರೆಮಿತ್ತ್ ಅರಿ ಪಾರ್ದ್, ಕಾರ ತಿರ್ತ್ ಬಾರ್ ಪಾರ್ದ್, ಇಲ್ಲದ ತಡ್ಯಗೊಂಜಿ ಇಡಿ ತಾರಾಯಿ ದರ್ತ್ ರಡ್ಡ್ ಗಡಿ ಮಲ್ತ್, ಒಂಜಿ ಗಡಿ ತರೆತ್ತ ಮಿತ್ತ್, ಒಂಜಿ ಗಡಿ ಕಾರ ತಿರ್ತ್ ದೀದ್ ಐಟ್ ತುಡರ್ ಪೊತ್ತಾವೆರ್. ಅಲ್ತ್ ಬೊಕ್ಕ ಕುಟುಂಬ ಸಂಸಾರದಕುಲು ಊರ್ದಕುಲು ಸೇರ್ದ್ ಕಾಟಗೂರ್ರೆ ತಯಾರಾಪೆರ್. ಕುಕ್ಕುದ ಮರಕ್ಕ್ ಮಗೆ ಗಡಿ…
ಆರ್ಥಿಕವಾಗಿ ಹಿಂದುಳಿದ ಬಂಟ ಯುವತಿಯ ವಿವಾಹಕ್ಕಾಗಿ ಬೆಂಗಳೂರು ಬಂಟರ ಸಂಘದಿಂದ ನೀಡುವ ಕರಿಮಣಿ ಕಾರ್ಯಕ್ರಮ ಅಡಿಯಲ್ಲಿ ಹೊಸೂರು ಗ್ರಾಮಕ್ಕೆ ತೆರಳಿ ಸಾಗರ ಬಂಟರ ಸಂಘದ ಮುಖಾಂತರ ಸುಮಾರು 50000 ಮೌಲ್ಯದ ಕರಿಮಣಿಯನ್ನು ವಿತರಿಸಲಾಯಿತು. ಸಾಗರ ಬಂಟರ ಸಂಘದ ಪದಾಧಿಕಾರಿಗಳು ಮನೆಯ ಆರ್ಥಿಕ ಪರಿಸ್ಥಿತಿಯನ್ನು ಗಮನಿಸಿ ಕೇವಲ ಒಂದು ಗಂಟೆಯಲ್ಲಿ 16000 ರೂಪಾಯಿಗಳ ಸಹಾಯ ಧನವನ್ನು ಯುವತಿಯ ಮದುವೆಗಾಗಿ ಸಹಾಯ ಮಾಡಿದರು. ಈ ಸಂಧರ್ಭದಲ್ಲಿ ದಾನಿಗಳಾದ ಸಾಗರ ಬಂಟರ ಸಂಘದ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ಸದಾನಂದ ಶೆಟ್ಟಿ, ಶ್ರೀನಿವಾಸ್ ಶೆಟ್ಟಿ, ಸುರೇಶ್ ಶೆಟ್ಟಿ ನಿಸ್ರಾಣಿ, ಪ್ರಭಾಕರ್ ಶೆಟ್ಟಿ ಕಾಂಟ್ರಾಕ್ಟರ್, ಸತೀಶ್ ಶೆಟ್ಟಿ, ರಮೇಶ್ ಹೆಗ್ಡೆ, ಅಣ್ಣಪ್ಪ ಶೆಟ್ಟಿ, ಶ್ರೀಧರ್ ಶೆಟ್ಟಿ, ರಘುಪತಿ ಶೆಟ್ಟಿ, ಪ್ರಕಾಶ್ ಶೆಟ್ಟಿ, ನಾಗರಾಜ್ ಶೆಟ್ಟಿ, ಪ್ರತಾಪ್ ಶೆಟ್ಟಿ ಎಲ್ಲರೂ ತಮ್ಮ ಸ್ವಂತ ದುಡಿಮೆಯ ಪಾಲನ್ನು ಮದುವೆಗಾಗಿ ನೀಡಿ ಮಾನವೀಯತೆ ಮೆರೆದರು.
ಇದೇನು ಐತಿಹಾಸಿಕ ಸಂಗತಿಯೋ ಜನಪದ ಕಥನವೊ ಹೇಳುವುದಕ್ಕೆ ಹೊರಟಿಲ್ಲ ನಾನು. ಗುತ್ತಿನ ಮನೆಗಳಲ್ಲಿ ವಾರ್ಷಿಕ ನೇಮ, ತಂಬಿಲಗಳು ನಡೆಯುವಾಗ ಆಚರಣೆಯ ಕೌತುಕ ಒಂದು ಕಡೆಯಾದರೆ, ಇನ್ನೊಂದು ಕಡೆ ಕೆಲವು ತಮಾಷೆಯ ಮತ್ತು ಯೋಚಿಸುವ ಸಂಗತಿಗಳು ನಮ್ಮ ಗಮನಕ್ಕೆ ಬರುತ್ತವೆ. ಬಂಟ ಮನೆತನದ ವಾರ್ಷಿಕ ಆಚರಣೆಯ ಸಂದರ್ಭದಲ್ಲಿ ಇತ್ತೀಚೆಗೆ ಒಂದು ವಿಚಾರವನ್ನು ಸೂಕ್ಷ್ಮವಾಗಿ ನಾನು ಗಮನಿಸಿದ್ದೇನೆ. ಯುವ ತಲೆಮಾರಿನಲ್ಲಿ ಗಂಡನ ತರವಾಡಿನ ಕಾರ್ಯಕ್ರಮಕ್ಕೆ ಹೆಂಡತಿ ಮಕ್ಕಳು ಬರುವಷ್ಟು ಹೆಂಡತಿಯ ತರವಾಡಿನ ಮನೆಯ ಕಾರ್ಯಕ್ರಮಕ್ಕೆ ಗಂಡನ ಪೂರ್ಣ ಹಾಜರಾತಿ ಇರುವುದಿಲ್ಲ. ಹೊತ್ತಿಗೆ ಬಂದು ಹಿಂದಿರುಗುವ ಅವರಲ್ಲಿ ಸಣ್ಣ ಪರಕೀಯ ಭಾವ. ಗಂಡನ ಜೊತೆ ಹೆಂಡತಿಯೂ ವಾಪಸ್. ಮನೆ ಅಳಿಯಂದಿರಿಗೆ ಇದು ಅನ್ವಯ ಆಗದು. ವಯಸ್ಸಾದ ಹಾಗೆ ಹೆಂಗಳೆಯರ ಆಸಕ್ತಿ ಬದಲಾಗುತ್ತದೆ. ಅವರು ಖಡ್ಡಾಯವಾಗಿ ತಮ್ಮ ತರವಾಡಿನ ಕಾರ್ಯಕ್ರಮದಲ್ಲಿ ಸಕ್ರೀಯರು. ಮಕ್ಕಳನ್ನು ನಾಲ್ಕು ದಿನ ಮೊದಲೇ ಹೊರಡಿಸಲು ಶುರು ಮಾಡುತ್ತಾರೆ. ಅದುವರೆಗೆ ಅಮ್ಮ ಹೋಗ್ತಾರೆ ಅಜ್ಜಿ ಹೋಗುತ್ತಾರೆ, ನಾವು ಹೋದ ಹಾಗೆ ಅಲ್ವಾ ಎನ್ನುವ ನೆಪ.…