Author: admin

ಒಲವೇ ಜೀವನ ಲೆಕ್ಕಾಚಾರ ಅಲ್ಲ ಬದುಕೇ ಜೀವನದ ಲೆಕ್ಕಾಚಾರ ಆಗ್ಬಿಟ್ಟಿದೆ ನಮಗೆಲ್ಲ. ನಮ್ಮೆಲ್ಲರ ಜೀವನ ಲೆಕ್ಕಾಚಾರದ ಮೇಲೆನೆ ನಿಂತಿದೆ. ನಾನು ನನ್ನದು ಅನ್ನೊ ಕ್ಯಾಲ್ಕ್ಯುಲೇಷನ್ ನಲ್ಲಿ ಬದುಕು ನಮ್ಮೊಳಗಿನ ಪ್ರತಿಭೆಯನ್ನು ಹುಡುಕುವ ಕಲೆ, ಹೊಸತನ್ನು ಅನ್ವೇಶಿಸಿ, ಅನುಕರಿಸುವ ವಿಜ್ಞಾನವಾಗಿದೆ. ಆದ್ರೆ ನಾವೆಲ್ಲರೂ ಬದುಕನ್ನ ವಾಣಿಜ್ಯ ಮಾಡ್ಕೊಂಡಿದಿವಿ. ಕೊಟ್ಟು ತಗೊಳೊ ವ್ಯವಹಾರವಾಗಿದೆ. 2+2 = 4 ಅಂತ ಅಷ್ಟೇ ಯೋಚನೆ ಮಾಡ್ತಿವೇ ಹೊರತು 3+1= 4 ಹಿಂಗೂ ಆಗುತ್ತೆ ಅನ್ನೊದನ್ನ ಒಪ್ಕೊಳೊಕೆ ರೆಡಿ ಇರಲ್ಲ. ನಮ್ಮೆಲ್ಲರ ಆಯ್ಕೆ, ನಿರ್ಧಾರಗಳು ನಮ್ಮ ಮೂಗಿನ ನೇರಕ್ಕೆ ಇರತ್ತೆ. ಎಲ್ಲರಿಗೂ ಅವರು ಮಾಡಿದ್ದೆ ಸರಿ, ಅವರ ನಿರ್ಧಾರವೇ ನ್ಯಾಯಯುತವಾಗಿರತ್ತೆ. ಇಟ್ಟಿಗೆಯಿಂದ ಗೋಡೆನೂ ಕಟ್ಟಬಹುದು, ಸೇತುವೆನೂ ಕಟ್ಟಬಹುದು, ಆದ್ರೆ ನಾವೆಲ್ಲಾ ಆಗಿರೊ ಸಣ್ಣ ಮನಸ್ಥಾಪಕ್ಕೆ ಆಡಿರೊ ಒಂದು ಮಾತನ್ನೆ ಇಟ್ಕೊಂಡು ಸಂಬಂಧಗಳ ನಡುವೆ ಗೋಡೆ ಕಟ್ತಿವಿ. ಅದೇ ಒಂದು ಸಾರೀ, ಕ್ಷಮಿಸಿ ಅನ್ನೊ ಒಂದು ಪದ ಹೇಳೊದಿಂದ್ರ ಆಗಿರೊ ಎಷ್ಟೊ ಮನಸ್ಥಾಪಗಳ ನಡುವೆ ಮನಸುಗಳ ಮದ್ಯೆ ಸೇತುವೆ ನಿರ್ಮಾಣವಾಗತ್ತೆ.…

Read More

ಮೂಡುಬಿದಿರೆ: ‘ಬರಹ ಅಥವಾ ಕಾವ್ಯವನ್ನು ರಂಗರೂಪಕ್ಕೆ ತರುವುದು ಒಂದು ಸಾಹಸ. ‘ಚಾರುವಸಂತ’ದ ಮೂಲಕ ಹಂಪನಾ ಅವರ ಕನಸು ಈಡೇರಿದೆ’ ಎಂದು ವಿಶ್ರಾಂತ ಕುಲಪತಿ ಪ್ರೊ.ಬಿ.ಎ. ವಿವೇಕ ರೈ ಹೇಳಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ನಗರದ ಸ್ಕೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ಗುರುವಾರ ಸಂಜೆ ಹಮ್ಮಿಕೊಂಡ ರಂಗ ಮಾಂತ್ರಿಕ ಜೀವನ್‌ರಾಂ ಸುಳ್ಯ ನಿರ್ದೇಶನದಲ್ಲಿ ಆಳ್ವಾಸ್ ರಂಗ ಅಧ್ಯಯನ ಕೇಂದ್ರ ವಿದ್ಯಾರ್ಥಿಗಳು ಅಭಿನಯಿಸಿದ, ಹಂಪನಾ ವಿರಚಿತ ದೇಸೀ ಮಹಾ ಕಾವ್ಯದ ರಂಗರೂಪ ‘ಚಾರು ವಸಂತ’ ನಾಟಕದ ಪ್ರದರ್ಶನ, ರಂಗಪಯಣ ಉದ್ಘಾಟನೆ ಮತ್ತು ನಾಟಕ ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು. ಬರಹದಿಂದ ರಂಗರೂಪಕ್ಕೆ ಕತೆಯನ್ನು ತರುವ ಅನುಭವಗಳನ್ನು ಹಂಚಿಕೊಂಡ ವಿವೇಕ ರೈ, ‘ಕಾವ್ಯ ಭಾಷೆಯನ್ನು ಹೆಚ್ಚಾಗಿ ರಂಗರೂಪಕ್ಕೆ ಬಳಸಲಾಗಿದೆ’ ಎಂದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ ಆಳ್ವ ಮಾತನಾಡಿ, ‘ಚಾರುವಸಂತ’ ನಾಟಕಕ್ಕೆ ಜೈನ ಸಿದ್ಧಾಂತ ಮೂಲವಾಗಿದ್ದು, ಜೈನ ಕಾಶಿಯಲ್ಲಿ ಪ್ರದರ್ಶನ ಏರ್ಪಡಿಸಲಾಗಿದೆ ಎಂದರು. ಮೂಡುಬಿದಿರೆಯಲ್ಲಿ ನಡೆದಿದ್ದ ೭೧ನೇ ಅಖಿಲ ಭಾರತ…

Read More

ಯುಎಇ ಬಂಟ್ಸ್ ಆಶ್ರಯದಲ್ಲಿ ಇದೇ ಬರುವ 24 ರಂದು ಭಾನುವಾರ 47 ನೇ ವರ್ಷದ ಬಂಟರ ಸ್ನೇಹ ಸಮ್ಮಿಲನ “ಗಲ್ಫ್ ಬಂಟೋತ್ಸವ” ಆಯೋಜಿಸಲ್ಪಟ್ಟಿದ್ದು, ಅಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 7 ರ ತನಕ ನಡೆಯಲಿರುವ ಕಾರ್ಯಕ್ರಮ ವೈವಿಧ್ಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಗಣ್ಯರಿಂದ ಭಾಷಣ, ಸಭಾ ಕಾರ್ಯಕ್ರಮ, ಪ್ರಶಸ್ತಿ ಪ್ರದಾನ, ಮನರಂಜನಾ ಕಾರ್ಯಕ್ರಮ, ನಂತರ ಪ್ರೀತಿ ಭೋಜನ ವ್ಯವಸ್ಥೆ ಮಾಡಲಾಗಿದ್ದು ಅಂದು ಗಲ್ಫ್ ರಾಷ್ಟ್ರಗಳಲ್ಲಿ ನೆಲೆ ನಿಂತ ಬಂಟ ಬಾಂಧವರು ಒಂದು ಕಡೆ ಸಮಾವೇಶಗೊಳ್ಳುವ ಸಂಭ್ರಮಕ್ಕೆ ಸ್ನೇಹ ಸಮ್ಮಿಲನ ಸಾಕ್ಷಿಯಾಗಲಿದೆ. ಅಲ್ ನಝೀರ್ ಲೀಝರ್ ಲ್ಯಾಂಡ್ ಐಸ್ ಪಾರ್ಕ್ ಇಲ್ಲಿ ನಡೆಯಲಿರುವ ಅದ್ದೂರಿ ಸ್ನೇಹ ಕೂಟದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಮಧ್ಯಂತರ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಎಂ ಆರ್ ಜಿ ಗ್ರೂಪ್ ಬೆಂಗಳೂರು ಇದರ ಫೌಂಡರ್ ಛೇರ್ಮನ್ ಡಾ| ಕೆ ಪ್ರಕಾಶ್ ಶೆಟ್ಟಿ ಅವರಿಗೆ ಗಣ್ಯಾತಿ ಗಣ್ಯ ಆಹ್ವಾನಿತರ ಸಮ್ಮುಖದಲ್ಲಿ ಬಂಟ ವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಗಲ್ಫ್ ಬಂಟ ಬಾಂಧವರಿಂದ ವಿವಿಧ…

Read More

ಅರಬ್ ಸಂಯುಕ್ತ ಸಂಸ್ಥಾನದ ರಾಸ್ ಅಲ್ ಖೈಮಾ ಎಮಿರೇಟ್ಸ್ ನಲ್ಲಿ ಕಳೆದ ಹಲವು ವರ್ಷಗಳಿಂದ ಕಾರ್ಯೋನ್ಮುಖವಾಗಿರುವ ರಾಕ್ ಕರ್ನಾಟಕ ಸಂಘ ರಾಸ್ ಅಲ್ ಖೈಮಾದ ಆಶ್ರಯದಲ್ಲಿ 2024 ನವೆಂಬರ್ 16ನೇ ತಾರೀಕಿನಂದು ರಾಸ್ ಅಲ್ ಖೈಮಾ ಇಂಡಿಯನ್ ಅಸೊಸಿಯೇಶನ್ ಸಭಾಂಗಣದಲ್ಲಿ 69ನೇ ಕರ್ನಾಟಕ ರಾಜ್ಯೋತ್ಸವ ಮತ್ತು ಗಲ್ಫ್ ಕರ್ನಾಟಕ ಸೇವಾ ಸಾಧಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಅದ್ಧೂರಿಯಾಗಿ ನಡೆಯಿತು. ಮಂಗಳೂರಿನ ಬ್ಯಾಂಡ್, ಟೀಂ ಪಿಲಿ ನಲಿಕೆ ಯು.ಎ.ಇ.ಯ ಪ್ರಥಮ ಅಂತರಾಷ್ಟ್ರೀಯ ಹುಲಿವೇಶ ತಂಡದ ಹುಲಿ ವೇಷಧಾರಿಗಳ ಕುಣಿತದೊಂದಿಗೆ, ಸುಮಂಗಲೆಯರು ಪೂರ್ಣ ಕುಂಭ ಕಳಶದೊಂದಿಗೆ ಅತಿಥಿಗಳನ್ನು ಮೆರವಣಿಗೆಯ ಮೂಲಕ ಕರೆ ತರಲಾಯಿತು. ರಾಸ್ ಅಲ್ ಖೈಮಾ ಇಂಡಿಯನ್ ಅಸೋಸಿಯೇಶನ್ ಅಧ್ಯಕ್ಷರು ಹಾಗೂ ಇಂಡಿಯನ್ ಸ್ಕೂಲ್ ರಾಸ್ ಅಲ್ ಖೈಮಾದ ಛೇರ್ಮನ್ ಸೈನುದ್ದಿನ್ ಸಲೀಂ, ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ, ಕರ್ನಾಟಕ ಸಂಘ ದುಬಾಯಿಯ ಅಧ್ಯಕ್ಷ ಶಶಿಧರ ನಾಗರಾಜಪ್ಪ, ಮಸಲಾ ಮತ್ತು ಸೋಶಿಯಲ್ ರೆಸ್ಟೋರೆಂಟ್ ಮಾಲಿಕರಾದ ಜುಲಿಯನ್ ಮತ್ತು ಶರತ್…

Read More

‘ಕಲಾವಿದ ತನ್ನ ನೈಪುಣ್ಯವನ್ನು ವ್ಯಾವಹಾರಿಕ ದೃಷ್ಟಿಯಿಂದ ನೋಡದೆ ಕಲೆಯ ಶ್ರೀಮಂತಿಕೆ ಹೆಚ್ಚಿಸಲು ಪ್ರಯತ್ನಿಸಬೇಕು. ಕಲೆ ತನ್ನ ಬದುಕಿಗೆ ಮೌಲ್ಯ ತಂದು ಕೊಟ್ಟಿದೆ ಎಂಬ ವಿನಯದಿಂದ ಅದನ್ನು ಆರಾಧಿಸಿದರೆ ಹೆಸರು, ಖ್ಯಾತಿ ತಾನಾಗಿ ಬರುತ್ತದೆ’ ಎಂದು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ, ಸಹಕಾರ ರತ್ನ ಚಿತ್ತರಂಜನ್ ಬೋಳಾರ ಹೇಳಿದರು. ಯಕ್ಷಾಂಗಣ ಮಂಗಳೂರು, ಯಕ್ಷಗಾನ ಚಿಂತನ ಮಂಥನ ಮತ್ತು ಪ್ರದರ್ಶನ ವೇದಿಕೆ ಹಾಗೂ ಕರ್ನಾಟಕ ಯಕ್ಷ ಭಾರತಿ ಪುತ್ತೂರು ಆಶ್ರಯದಲ್ಲಿ ಕರ್ನಾಟಕ ರಾಜ್ಯೋತ್ಸವ ಕಲಾ ಸಂಭ್ರಮವಾಗಿ ಕದ್ರಿ ಶ್ರೀ ಮಂಜುನಾಥ ದೇವಾಲಯದ ರಾಜಾಂಗಣದಲ್ಲಿ ನಡೆಯುತ್ತಿದ್ದ 12ನೇ ವರ್ಷದ ನುಡಿಹಬ್ಬ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ’ದ ಸಮಾರೋಪ ಸಮಾರಂಭದಲ್ಲಿ ನವೆಂಬರ್ 17ರಂದು ದೀಪ ಪ್ರಜ್ವಲನೆ ಮಾಡಿ ಅವರು ಮಾತನಾಡಿದರು. ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಕರ್ನಾಟಕ ಬ್ಯಾಂಕ್ ಮಹಾಪ್ರಬಂಧಕಿ ಸುಮನಾ ಘಾಟೆ ‘ಗಾನ, ನೃತ್ಯ, ಮಾತು, ಬಣ್ಣಗಾರಿಕೆ ಹಾಗೂ ವೇಷಭೂಷಣಗಳಿಂದ ರಂಜಿಸುವ ಯಕ್ಷಗಾನ ಕಲೆ ಕರಾವಳಿಯ ಹೆಮ್ಮೆ. ಅದರಲ್ಲೂ ತಾಳಮದ್ದಳೆಗೆ ಮಾತೇ ಬಂಡವಾಳ. ಶಾಸ್ತ್ರಾರ್ಥ ಮತ್ತು…

Read More

ಬ್ಲೈಂಡ್ ವಿಂಕ್ ಸಂಸ್ಥೆ ಕೊಡಮಾಡುವ ಇಂಡಿಯಾ ಎಕ್ಸೆಲೆನ್ಸ್ ಅವಾರ್ಡ್ 2024 ಶಾರದಾ ಅಸೋಸಿಯೇಟ್ಸ್ ನ ಮ್ಯಾನೇಜಿಂಗ್ ಡೈರೆಕ್ಟರ್, ಇಂಜಿನಿಯರ್ ಜೀವನ್ ಕೆ ಶೆಟ್ಟಿ ಇವರಿಗೆ ಇಂಡಿಯಾ ಬೆಸ್ಟ್ ಎಕ್ಸಲೆನ್ಸ್ ಅವಾರ್ಡ್ (ಬೆಸ್ಟ್ ಇಂಟೆಗ್ರೇಟೆಡ್ ಡಿಸೈನ್ ಆಂಡ್ ಬಿಲ್ಡ್ ಫರ್ಮ್ ಫಾರ್ ಎಕ್ಸ್ಟ್ರಾವಾಗೆಂಟ್ ಆಂಡ್ ಐಕಾನಿಕ್ ಕನ್ಸ್ಟ್ರಕ್ಷನ್ ಇನ್ ಕರ್ನಾಟಕ) ಪ್ರಶಸ್ತಿಯನ್ನು ನವೆಂಬರ್ 17 ರಂದು ತಾಜ್ ಬೆಂಗಳೂರು ಪಂಚತಾರ ಹೋಟೆಲಿನಲ್ಲಿ ಇಂಟರ್ನ್ಯಾಶನಲ್ ಇವೆಂಟ್ ನಲ್ಲಿ ಖ್ಯಾತ ಬಾಲಿವುಡ್ ಚಲನಚಿತ್ರ ತಾರೆ ಅಮೃತ ರಾವ್ ಅವರು ಪ್ರದಾನಿಸಿದರು. ಜೀವನ್ ಕೆ ಶೆಟ್ಟಿ ಅವರು ನಿಟ್ಟೆ ಮಹಾಲಿಂಗ ಅಡ್ಯಂತಾಯ ಮೆಮೋರಿಯಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಎಂಜಿನಿಯರಿಂಗ್ ಮತ್ತು ಮಾಸ್ಟರ್ ಡಿಗ್ರಿ ಪಡೆದು, 1996 ರಲ್ಲಿ ಸ್ಥಾಪನೆಗೊಂಡ ಶಾರದಾ ಅಸೋಸಿಯೇಟ್ಸ್ ಸಂಸ್ಥೆಯ ಮುಖ್ಯಸ್ಥರಾಗಿ ಅನೇಕ ಆಡಿಟೋರಿಯಂ, ಬಹುಮಹಡಿ ಕಟ್ಟಡ, ಮನೆ, ದೇವಸ್ಥಾನ, ಕಚೇರಿಗಳ ವಿನ್ಯಾಸ ಹಾಗೂ ಕಟ್ಟಡ ನಿರ್ಮಾಣ ಮಾಡಿದ ಅನುಭವ ಮತ್ತು ಸಾಧನೆಗೆ ಈ ಪ್ರಶಸ್ತಿ ದೊರಕಿದೆ.

Read More

ಮೂಡುಬಿದಿರೆ: ಕೆಲವು ದೇಶಗಳು ಆರ್ಥಿಕವಾಗಿ ಹಿಂದುಳಿಯಲು ಮಹಿಳಾ ಉದ್ಯೋಗಿಗಳ ಪ್ರಮಾಣ ಕಡಿಮೆ ಪ್ರಮುಖ ಕಾರಣವಾಗಿದೆ. ಯಾವುದೇ ದೇಶ ಅಥವಾ ಸಂಸ್ಥೆ ಉನ್ನತಿಯನ್ನು ಕಾಣಲು ಮಹಿಳೆಯರ ಪಾತ್ರ ಮುಖ್ಯ. ಮಹಿಳೆಯರು ವಿವಿಧ ವೃತ್ತಿರಂಗಗಳಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ದೇಶದ ಪ್ರಗತಿಗೆ ಕಾಣಿಕೆ ನೀಡಬೇಕು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನಾದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಅಭಿಪ್ರಾಯಪಟ್ಟರು. ಆಳ್ವಾಸ್ (ಸ್ವಾಯತ್ತ) ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಗುರುವಾರ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮಹಿಳಾ ಘಟಕ ‘ಸಕ್ಷಮಾ’ದ ವತಿಯಿಂದ ಮಹಿಳಾ ಮಾನಸಿಕ ಆರೋಗ್ಯದ ಜಾಗೃತಿ ಕಾರ್ಯಕ್ರಮ ‘ಎಂಪವರ್‍ಹರ್’ ಉದ್ಘಾಟಿಸಿ ಮಾತನಾಡಿದ ಅವರು ಮಹಿಳೆಯರು ವಿವಿಧ ಸ್ತರದ ಉದ್ಯೋಗಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದನ್ನು ಪ್ರೋತ್ಸಾಹಿಸಿಸುವ ಸಮಾಜ ನಮ್ಮದಾಗಬೇಕು ಎಂದರು. ಆಳ್ವಾಸ್ ಸಂಸ್ಥೆಯ ಯಶಸ್ಸಿನಲ್ಲಿ ಮಹಿಳೆಯರ ಪಾತ್ರ ಅನನ್ಯ. ಮಹಿಳೆಯರು ತಮ್ಮ ಜವಾಬ್ದಾರಿಗಳನ್ನು ಶ್ರೇಷ್ಠತೆಯಿಂದ ನಿಭಾಯಿಸುವುದರಿಂದ ಸಂಸ್ಥೆಯ ಜೇಷ್ಠತೆ ಹೆಚ್ಚಿದೆ ಎಂದರು. ಮಹಿಳೆಯರು ವೃತ್ತಿ ಜೀವನ ಹಾಗೂ ಕೌಟುಂಬಿಕ ಜೀವನದಲ್ಲಿ ಸಮತೋಲನ ಕಾಪಾಡಿಕೊಳ್ಳುವುದು ಬಹಳ ಅವಶ್ಯ. ಇತ್ತೀಚಿನ ದಿನಗಳಲ್ಲಿ ವಿಭಕ್ತ ಕುಟುಂಬಗಳು ಕೂಡ…

Read More

ಮೂಡುಬಿದಿರೆ: ಐಸಿಎಸ್‌ಐ(IಅSI)2024 ನವೆಂಬರ್‌ನಲ್ಲಿ ನಡೆಸಿದ ಸಿ.ಎಸ್.ಇ.ಇ.ಟಿ ಪರೀಕ್ಷೆಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾರ್ಥಿಗಳಾದ ಕೀರ್ತನ್ ಎಸ್. ಶೆಟ್ಟಿ(126), ಪವಿತ್ರ ಪ್ರಭು(121), ಗಗನ್ ಟಿ.ವೈ (119), ಅದಿತಿ(119), ಗ್ಲೆನಿಶಾ ಎಸ್(115), ಯಶಸ್ ಆರ್(114), ಸೃಷ್ಟಿ ಎನ್ ಪೂಜಾರಿ(112), ಸೃಷ್ಟಿ ಅಶೋಕ್(108), ನಿಹಾರಿಕಾ ಎಸ್.ಎಂ(106), ಚಿನ್ಮಯಿ ಹೊಳ್ಳ(104), ಪ್ರಥ್ವಿಕ್ ಶೆಟ್ಟಿ(104), ಚಂದನಾ ವೈ(100), ನಿಶಿತಾ(100), ರಾಹುಲ್ ಹೆಚ್.ಎಸ್(100), ಶಿವಾತ್ಮಜ(100), ದೀಶ್ಮಾ(100), ಕಾವ್ಯ(100), ಸಂಜನಾ ವಿ(100), ವೀರವರ್ಧನ್ ರೆಡ್ಡಿ(100) ಮೊದಲ ಪ್ರಯತ್ನದಲ್ಲಿ ಉತ್ತಮ ಅಂಕದೊAದಿಗೆ ಉತ್ತೀರ್ಣರಾಗಿದ್ದಾರೆ. ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳಿಗೂ ಸಂಸ್ಥೆಯ ಅಧ್ಯಕ್ಷರಾದ ಡಾ. ಎಂ. ಮೋಹನ್ ಆಳ್ವ, ಪ್ರಾಂಶುಪಾಲರು ಡಾ. ಕುರಿಯನ್, ಪದವಿಪೂರ್ವ ಕಾಲೇಜು ಪ್ರಾಂಶುಪಾಲರು ಮಹಮ್ಮದ್ ಸದಾಕತ್, ವಾಣಿಜ್ಯ ವಿಭಾಗದ ಡೀನ್ ಪ್ರಶಾಂತ್ ಎಂ.ಡಿ, ವಾಣಿಜ್ಯ ವಿಭಾಗದ ಮುಖ್ಯಸ್ಥ ಅಶೋಕ್ ಹಾಗೂ ಸಿ.ಎಸ್ ಸಂಯೋಜಕರು ಅಭಿನಂದಿಸಿದ್ದಾರೆ.

Read More

ಡಾ| ನಿರಂಜನ ಶೆಟ್ಟಿ ಅವರು ಬಹು ಮುಖ ಪ್ರತಿಭೆಯ ಓರ್ವ ಸಂಪನ್ಮೂಲ ವ್ಯಕ್ತಿ. ಒಂದು ಸ್ವಸ್ಥ ಆರೋಗ್ಯವಂತ ಸಮಾಜ ನಿರ್ಮಾಣ ಕಾರ್ಯದಲ್ಲಿ ಶ್ರೀಯುತರ ಕೊಡುಗೆ ಅಪಾರ. ಜೀವನದಲ್ಲಿ ಹತಾಶೆಗೊಂಡವರನ್ನು ಪುನಃ ಜೀವನದ ಮುಖ್ಯವಾಹಿನಿಯಲ್ಲಿ ತಂದು ಕೌನ್ಸೆಲಿಂಗ್ ಮೂಲಕ ಅವರಲ್ಲಿ ಆತ್ಮವಿಶ್ವಾಸ ತುಂಬಿ ಜೀವನದಲ್ಲಿ ನವಚೇತನ ಮೂಡಿಸುವ ಮಾನವೀಯ ಕಾರ್ಯನಿರತರೋರ್ವರ ಕಿರುಪರಿಚಯ ಇಲ್ಲಿದೆ. ಡಾ| ನಿರಂಜನ್ ಶೆಟ್ಟಿಯವರು ತನ್ನ ಪ್ರಥಮ ಹಂತದ ವಿದ್ಯಾಭ್ಯಾಸವನ್ನು ಕಾಪು ಮಹಾದೇವಿ ಹೈಸ್ಕೂಲ್ ನಲ್ಲಿ ಮುಗಿಸಿ ಮುಂದೆ ಮುಂಬಯಿ ಮತ್ತು ಗುಜರಾತ್ ನಲ್ಲಿ ಉನ್ನತ ಅಧ್ಯಯನ ನಡೆಸಿ ನಂತರ IIPR (ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈಕಾಲಜಿ ಆಂಡ್ ರಿಸರ್ಚ್ ಬೆಂಗಳೂರು) ಇಲ್ಲಿ ಮನೋಶಾಸ್ತ್ರದಲ್ಲಿ ಗೌರವ ಡಾಕ್ಟರೇಟ್ ಪಡೆದರು. ಪ್ರಸ್ತುತ ಸುನಂದಾ ವೆಲ್ನೆಸ್ ಸೆಂಟರ್ ಕಾಪು ನ ಮುಖಾಂತರ ಇವರು ಮಾನಸಿಕ ರೋಗಿಗಳಿಗೆ, ಖಿನ್ನತೆಗೊಳಗಾದವರಿಗೆ ನೀಡುವ ಥೆರಪಿ ಜೊತೆಗೆ ಆತ್ಮ ವಿಶ್ವಾಸ ತುಂಬುವ ಮಾತುಗಳು ಅದೆಷ್ಟೊ ರೋಗಿಗಳಿಗೆ ಆಶಾಕಿರಣವಾಗಿ ಪರಿಣಮಿಸಿದ್ದು ಅವರೆಲ್ಲಾ ಡಾ. ಶೆಟ್ಟರನ್ನು ಕೃತಜ್ಞತಾಪೂರ್ವಕವಾಗಿ ಸ್ಮರಿಸಿಕೊಳ್ಳುತ್ತಾರೆ. ಆಳ್ವಾಸ್, ಎಸ್…

Read More

ಇಂಡಿಯನ್ ಕ್ಲಬ್ ಬಹರೈನ್ ನ ಹೊರಾಂಗಣದಲ್ಲಿ ಕನ್ನಡ ವೈಭವ ಕಾರ್ಯಕ್ರಮವು ನವೆಂಬರ್ 8 ರಂದು ಅದ್ದೂರಿಯಾಗಿ ನೆರವೇರಿತು. ಮುಖ್ಯ ಅತಿಥಿಗಳಾಗಿ ಭಾರತೀಯ ದೂತವಾಸದ ಭಾರತದ ರಾಯಭಾರಿ ಘನವೆತ್ತ ವಿನೋದ್ ಕೆ.ಜಾಕೋಬ್, ಗೌರವಾನ್ವಿತ ಅತಿಥಿಗಳಾಗಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಆದರಣೀಯ ಅತಿಥಿಗಳಾಗಿ ಮಿಥುನ್ ರೈ, ಡಾ. ಯು.ಟಿ. ಇಫ್ತೀಕರ್ ಫರೀದ್, ಹೈದರಾಬಾದ್ ನ ಮಲ್ಲ ರೆಡ್ಡಿ ಹೆಲ್ತ್ ಸಿಟಿಯ ಉಪಕುಲಪತಿ ಡಾ. ಬಾಲಕೃಷ್ಣ ಶೆಟ್ಟಿ, ನಮ್ಮ ಟಿವಿಯ ಆಡಳಿತ ನಿರ್ದೇಶಕ ಡಾ. ಶಿವಶರಣ್ ಶೆಟ್ಟಿ, ಪುತ್ತೂರು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ್ ಶೆಟ್ಟಿ, ಚಿತ್ರನಟ ನೆನಪಿರಲಿ ಪ್ರೇಮ್, ನಾಯಕಿ ನಟಿ ಅಮೃತಾ ಪ್ರೇಮ್, ಅಭ್ಯಾಗತರಾಗಿ ಉದ್ಯಮಿ ಪ್ರವೀಣ್ ಶೆಟ್ಟಿ ವಕ್ವಾಡಿ, ಸೌರಭ್ ಶೆಟ್ಟಿ ಗುರ್ಮೆ ಮೊದಲಾದವರು ಪಾಲ್ಗೊಂಡು ಸಮಾರಂಭಕ್ಕೆ ಮೆರುಗನ್ನು ನೀಡಿದರು. ಕನ್ನಡ ಸಂಘದ ಅಧ್ಯಕ್ಷ ಅಮರನಾಥ್ ರೈ, ಉಪಾಧ್ಯಕ್ಷ ಮಹೇಶ್ ‌ಕುಮಾರ್, ಪ್ರಧಾನ ‌ಕಾರ್ಯದರ್ಶಿ ರಾಮಪ್ರಸಾದ್ ಅಮ್ಮೆನಡ್ಕ ಹಾಗೂ ಸಂಘದ ಪದಾಧಿಕಾರಿಗಳು ಬಹರೈನ್…

Read More