Author: admin

ಹಣಕಾಸು ಕ್ಷೇತ್ರದಲ್ಲಿ ಇಡೀ ವಿಶ್ವ ಕುತೂಹಲದಿಂದ ಗಮನಿಸುತ್ತಿರುವ ವ್ಯಕ್ತಿ ಇಸ್ಸಾರ್ ಫೈನಾನ್ಸಿಯಲ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ನ ಆಡಳಿತ ನಿರ್ದೇಶಕ ಡಾ. ಆರ್ ಕೆ ಶೆಟ್ಟಿಯವರು ಜೀವವಿಮಾ ಕ್ಷೇತ್ರದ ಸಲಹೆಗಾರರಾಗಿ ಮುಂಬಯಿ ನಗರ ಮಾತ್ರವಲ್ಲದೇ ವಿಶ್ವದ ನಲವತ್ತೆರಡು ರಾಷ್ಟ್ರಗಳಲ್ಲಿ ಪರಿಚಿತರಿರುವ ಪ್ರಪ್ರಥಮ ಭಾರತೀಯ. ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಪ್ರಶಸ್ತಿಗಳಿಗೆ ಭಾಜನರಾದ ಬಂಟ ಜನಾಂಗದ ಹೆಮ್ಮೆಯ ಪುತ್ರ. ಘನ ಮಹಾರಾಷ್ಟ್ರ ಸರಕಾರದ ಮಾನ್ಯ ರಾಜ್ಯಪಾಲರಾದ ಶ್ರೀ ಭಗತ್ ಸಿಂಗ್ ಕಿಶ್ಯಾರಿ ಅವರು ರಾಜಭವನದಲ್ಲಿ ಆರ್ ಕೆ ಶೆಟ್ಟಿಯವರನ್ನು ಗೌರವಿಸಿದ್ದಾರೆ ಎಂದಾದರೆ ಅವರ ಘನತೆ ಪ್ರಸಿದ್ಧಿಗೆ ಬೇರೆ ಸಾಕ್ಷಿ ಬೇಕೆ?!. ಮಾನ್ಯ ಆರ್ ಕೆ ಶೆಟ್ಟರು ವಿಶ್ವ ಮಟ್ಟದ ಪ್ರತಿಷ್ಠಿತ ಎಂ.ಡಿ.ಆರ್.ಟಿ. ಇದರ ಸದಸ್ಯತನ ಪಡೆದುದನ್ನು ಗಮನಿಸಿದರೆ ಜೀವವಿಮಾ ಕ್ಷೇತ್ರದ ಅವರ ಅಪ್ರತಿಮ ಸಾಧನೆ ಕುರಿತು ಯೋಚಿಸಬಹುದು. ವಿಶ್ವ ಪ್ರಸಿದ್ಧ ಎಂ.ಡಿ.ಆರ್.ಟಿ ಸಂಸ್ಥೆಯ ರೀಜನಲ್ ಛೇರ್ಮನ್ ಹುದ್ದೆಗೇರಿರುವ ಪ್ರಥಮ ಭಾರತೀಯ ಹಾಗೂ ಎಂಬತ್ತೆರಡು ವರ್ಷಗಳ ಇತಿಹಾಸದಲ್ಲೇ ಮೊದಲಿಗ. ಈ ಅಧಿಕಾರ ವಿಶ್ವದ ನಲವತ್ತೆರಡು…

Read More

ದೇಸಿ ಹಾಗೂ ಇತಿಹಾಸಿಕವಾದ ಕಂಬಳ ಕ್ರೀಡೆಗೆ ಹೆಚ್ಚಿನ ಸಹಕಾರ ಕೊಡಲಾಗುವುದು. ಈ ನಿಟ್ಟಿನಲ್ಲಿ 20 ಕಂಬಳಗಳಿಗೆ ತಲಾ 5ಲಕ್ಷ ರೂ. ಗಳಂತೆ 1 ಕೋಟಿ ರೂ. ಸಹಾಯ ಧನವನ್ನು ಈ ಹಿಂದಿನಂತೆ ನೀಡಲಾಗುವುದು ಎಂದು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಭರವಸೆ ನೀಡಿದ್ದಾರೆ. ಅರಮನೆ ಮೈದಾನದಲ್ಲಿ ‘ಬೆಂಗಳೂರು ಕಂಬಳ -ನಮ್ಮ ಕಂಬಳ’ದ ಕರೆಪೂಜೆ (ಗುದ್ದಲಿ ಪೂಜೆ) ನೆರವೇರಿಸಿ ಅವರು ಮಾತನಾಡಿ, ಕಂಬಳಕ್ಕೆ ಸಹಾಯಧನ ಬಿಡುಗಡೆ ವಿಚಾರವಾಗಿ ಮುಖ್ಯಮಂತ್ರಿಗಳು ಹಾಗೂ ಕನ್ನಡ ಸಂಸ್ಕೃತಿ ಇಲಾಖೆಯ ಜತೆ ಚರ್ಚೆ ನಡೆಸುತ್ತೇವೆ. ದ.ಕ. ಮತ್ತು ಉಡುಪಿ ಜಿಲ್ಲೆಯ ಸಮಾಜಗಳ ಸಂಘಟನೆಗೆ ಒಂದು ನೆಲೆ ಬೇಕು ಎಂದು ಶಾಸಕ ಅಶೋಕ್ ರೈ ಮನವಿ ಮಾಡಿದ್ದಾರೆ. ಎಲ್ಲರೂ ಒಟ್ಟಾಗಿ ಸರಕಾರಕ್ಕೆ ಮನವಿ ಸಲ್ಲಿಸಿ ಎಂದರು. ದ. ಕ. ದ ಆಚರಣೆ ಬೆಂಗಳೂರಿನಲ್ಲೂ ನಡೆಯಲಿ : ದಕ್ಷಿಣ ಕನ್ನಡ ಶ್ರೀಮಂತ ಜನಪದ ಆಚರಣೆಗಳನ್ನು ಹೊಂದಿದ್ದು, ಅಲ್ಲಿನ ಆಚರಣೆ ಬೆಂಗಳೂರಿನಲ್ಲೂ ನಡೆಯಲಿ. ಕರಾವಳಿಯ ಯುವಕರು ಹೆಚ್ಚು ಕ್ರಿಯಾಶೀಲರಾಗಿ ಕೆಲಸ ಮಾಡುತ್ತಿದ್ದು, ಸಾವಿರಾರು…

Read More

ವಿದ್ಯಾಗಿರಿ (ಮೂಡುಬಿದಿರೆ): ವಿಜಯನಗರದ ಕೊಟ್ಟೂರಿನಲ್ಲಿ ಜನವರಿ 19 ರಿಂದ 21ರ ವರೆಗೆ ನಡೆದ ರಾಜ್ಯ ಮಟ್ಟದ ಪುರುಷರ ಹಾಗೂ 18 ವರ್ಷ ವಯೋಮಿತಿ ಒಳಗಿನ ಬಾಲಕಿಯರ ಖೋ-ಖೋ ಪಂದ್ಯಾವಳಿಯಲ್ಲಿ ಆಳ್ವಾಸ್ ತಂಡವು ಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ ಸ್ಥಾನವನ್ನು ಪಡೆದಿದೆ. ಪುರುಷರ ವಿಭಾಗದಲ್ಲಿ ಆಳ್ವಾಸ್ ತಂಡವು ಪ್ರಥಮ ಸ್ಥಾನ ಪಡೆದಿದ್ದರೆ, ದಾವಣಗೆರೆಯ ಡಿವೈಇಎಸ್ ಕಾಲೇಜು ದ್ವಿತೀಯ, ಬೆಂಗಳೂರಿನ ವೈಪಿಎಸ್‍ಸಿ ಕಾಲೇಜು ತೃತೀಯ ಹಾಗೂ ಭದ್ರಾವತಿಯ ಸರ್ ಎಂ. ವಿ. ಕಾಲೇಜು ಚತುರ್ಥ ಸ್ಥಾನವನ್ನು ಪಡೆದಿದ್ದಾರೆ ಬಾಲಕಿಯರ ವಿಭಾಗದಲ್ಲಿ ಮೈಸೂರಿನ ಕಾವೇರಿ ಕಪಿಲ ತಂಡವು ಪ್ರಥಮ ಸ್ಥಾನ ಪಡೆದಿದ್ದು, ಆಳ್ವಾಸ್ ತಂಡವು ದ್ವಿತೀಯ ಸ್ಥಾನ ಪಡೆಯಿತು. ಈ ವಿಭಾಗದಲ್ಲಿ ಬೆಂಗಳೂರಿನ ಬಿಸಿವೈಎ ತೃತೀಯ ಹಾಗೂ ಖ್ಯಾತನಹಳ್ಳಿಯ ಕೆಕೆಓ ತಂಡ ನಾಲ್ಕನೇ ಸ್ಥಾನ ಪಡೆಯಿತು. ಆಳ್ವಾಸ್ ತಂಡದ ಆಟಗಾರರನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅಭಿನಂದಿಸಿದ್ದಾರೆ.

Read More

ಮಾನವ ಸಂಘ ಜೀವಿಯಾಗಿದ್ದು, ಒಂದಲ್ಲ ಒಂದು ಬಗೆಯ ಸಂಘಟನೆ ಮೂಲಕ ಸಮಾಜಕ್ಕೆ ಸೇವಾ ಕಾರ್ಯ ಮಾಡುವ ಸಂಕಲ್ಪದೊಂದಿಗೆ ಪ್ರಸಿದ್ದಿಗೆ ಬರುತ್ತಾನೆ. ಸಂಘಟನೆ ಮೂಲಕ ಸಮಾಜಕ್ಕೆ ಮತ್ತು ದೇಶಕ್ಕಾಗಿ ಸೇವಾ ಕಾರ್ಯ ಮಾಡುವ ಅರ್ಪಣಾ ಭಾವನೆ ನಮ್ಮಲ್ಲಿರಬೇಕು. ರಚನಾತ್ಮಕ ಸಂಬಂಧಗಳನ್ನು ಕೂಡಿಕೊಂಡು ಪರಸ್ಪರ ವ್ಯಕ್ತಿಗತ ಪರಿಚಯ ಮತ್ತು ಸಂಬಂಧಗಳನ್ನು ಗಟ್ಟಿಗೊಳಿಸುವಲ್ಲಿ ಸಂಘ ಸಂಸ್ಥೆಗಳ ಮಹತ್ವ ಬಹಳಷ್ಟಿದೆ. ಇದಕ್ಕೆ ಮಾದರಿ ಎಂಬಂತೆ ಪುಣೆ ಬಂಟ್ಸ್ ಅಸೋಸಿಯೇಷನ್ ನ ಸಂಘಟನಾ ಸಾಮರ್ಥ್ಯ ತೋರಿ ಬರುತ್ತದೆ. ಸಮಾಜ ಬಾಂಧವರನ್ನು ಮತ್ತು ಯುವ ಶಕ್ತಿಯನ್ನು ಕೂಡಿಕೊಂಡು ಬಂಟ ಸಮಾಜ ಮಾಡುವ ಯಾವುದೇ ಕಾರ್ಯ ಕ್ಷೇತ್ರದ ಸಾಧನೆ ಮತ್ತು ಉದ್ಯಮ ಕ್ಷೇತ್ರದ ಸಾಧನೆ ಮೆಚ್ಚುವಂತಹದು. ಮಕ್ಕಳಿಗೆ ವಿದ್ಯೆಯ ಜೊತೆಯಲ್ಲಿ ಕ್ರೀಡೆ, ಕಲೆ ಮತ್ತು ಇತರೆ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಮಾಡುವ ಕರ್ತವ್ಯ ಪಾಲಕರದ್ದು. ಇದರಿಂದ ವ್ಯಕ್ತಿತ್ವ ವಿಕಸನಗೊಂಡು, ತಮ್ಮ ಕ್ಷೇತ್ರದಲ್ಲಿ ಸಾಧನೆ ಮಾಡಿ ಸಮಾಜಕ್ಕೆ ಮತ್ತು ದೇಶ ಸೇವೆಯಲ್ಲಿ ಭಾಗಿಗಳಾಗುವಂತೆ ಮಾಡಬೇಕಾಗಿದೆ. ಬಂಟ್ಸ್ ಅಸೋಸಿಯೇಷನ್ ತಮ್ಮ ಸಮಾಜದ ಸೇವಾ ಕಾರ್ಯಗಳಿಗೆ ಮತ್ತು…

Read More

ಅಪ್ರತಿಮ ಪ್ರತಿಭೆಯನ್ನು ಮೈಗೂಡಿಸಿಕೊಂಡು ಎಲ್ಲಾ ಕ್ಷೇತ್ರದಲ್ಲೂ ತನ್ನದೇ ಆದ ಛಾಪು ಮೂಡಿಸಿದ ಛಲಗಾರ, ಸರ್ವಧರ್ಮ ಕಲಾಭಿಮಾನಿಗಳ ಆಂತರ್ಯವನ್ನು ಮುಟ್ಟಿ ತನ್ನದೇ ಅಭಿಮಾನಿ ಬಳಗವನ್ನು ಸೃಷ್ಟಿಸಿ ಕೊಂಡು ಕಲಾಮಾತೆಯ ಸೇವೆಗೈಯುತ್ತಿರುವ ನಿಷ್ಠಾವಂತ ಕಲಾವಿದ ಪ್ರೊ| ಭಾಸ್ಕರ ರೈ ಕುಕ್ಕುವಳ್ಳಿ. ತನ್ನ ತಂದೆಯಿಂದಲೇ ಬಳುವಳಿಯಾಗಿ ಬಂದ ಕಲೆಗೆ ನಿಷ್ಠಾವಂತನಾಗಿ ನಿಂತು ಸಾಧನೆಯ ಶಿಖರವೇರಿ ಸಾಧಕರಿಗೆ ಸ್ಪೂರ್ತಿ ನಮ್ಮ ಇವತ್ತಿನ ಸಾಧಕರ ಹಾದಿಯ ಅತಿಥಿ. ಇವರ ಜೀವನವು ಬಾಲ್ಯದಿಂದಲೇ ಸುಖೀ ಕುಟುಂಬವಾಗಿದೆ. ಯಾವುದೇ ಕಷ್ಟಗಳಿಂದ ಸೋತವರಲ್ಲ ಇನ್ನೊಬ್ಬರನ್ನು ಸೋಲೋಕು ಬಿಟ್ಟವರಲ್ಲ ಆತ್ಮೀಯ ಮನಸ್ಸಿನ ಅದ್ಭುತ ಸಾಧಕ. ಯಕ್ಷಗಾನ,ಸಾಹಿತ್ಯ, ಶಿಕ್ಷಣ ಹಾಗೂ ಮಾಧ್ಯಮ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಪ್ರೊ| ಭಾಸ್ಕರ ರೈ ಕುಕ್ಕುವಳ್ಳಿ ಯವರು ವಿರಳ ಪಂಕ್ತಿಗೆ ಸೇರಿದ ಓರ್ವ ಬಹುಶ್ರುತ ವಿದ್ವಾಂಸರು. ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಪ್ರತಿಷ್ಠಿತ ಬಾಲ್ಯೊಟ್ಟು ಗುತ್ತು ಇರ್ದೆ ಬೆಟ್ಟಂಪಾಡಿಯಲ್ಲಿ ದಿ| ಕಲ್ಲಡ್ಕ ಕರಿಯಪ್ಪ ರೈ ಮತ್ತು ಗಿರಿಜಾ ರೈ ದಂಪತಿಯ ಎಂಟು ಮಂದಿ ಮಕ್ಕಳಲ್ಲಿ ಮೂರನೆಯವರಾಗಿ…

Read More

ಮನದಲ್ಲಿ ಮಹತ್ವಾಕಾಂಕ್ಷೆ ಇದ್ದರೆ ಸಾಲದು. ಆ ದಿಶೆಯಲ್ಲಿ ಮುನ್ನುಗ್ಗಿ ಅದನ್ನು ತನ್ನದಾಗಿಸುವ ಎಂಟೆದೆಯ ಛಲ ಬೇಕಾಗುತ್ತದೆ. ಅಂಥಹ ಸಾಧನೆಯ ಮೂರ್ತಿ ಎಂಟೆದೆಯ ಬಂಟ ನಮ್ಮ ಸರ್ವೋತ್ತಮ ಶೆಟ್ಟಿ ಅವರು. ಮಟ್ಟಾರು ಪರಾರಿ ಸೂರಪ್ಪ ಹೆಗ್ಡೆ ಹಾಗೂ ಪರೀಕ ಸರಸ್ವತಿ ಹೆಗ್ಡೆ ದಂಪತಿಯರ ಸುಪುತ್ರ ಸರ್ವೋತ್ತಮ ಶೆಟ್ಟರು ಬದುಕು ಕಟ್ಟಿಕೊಂಡ ರೀತಿ ಇತರ ಉದ್ಯಮಶೀಲರಿಗೆ ಮಾದರಿಯಾಗಬಲ್ಲುದು. ಉಡುಪಿ ಜಿಲ್ಲೆಯ ಪರೀಕ ಎಂಬಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿ ಬೆಳೆದು ತನ್ನ ಸಾಧನೆ ಪರಿಶ್ರಮದಿಂದ ಇಂದು ಹುಟ್ಟಿದ ಕುಟುಂಬ ಮಾತ್ರವಲ್ಲ ಬಂಟ ಸಮುದಾಯವನ್ನೇ ಎತ್ತರದ ಬಿತ್ತರಕ್ಕೆ ಮುಟ್ಟಿಸಿದ ಮಹನೀಯರಿವರು. ಪೆರ್ಡೂರು ಮತ್ತು ಹಿರಿಯಡ್ಕಗಳಲ್ಲಿ ತನ್ನ ಪದವಿಪೂರ್ವ ಶಿಕ್ಷಣ ಮುಗಿಸಿ ಮುಂಬಯಿ ನಗರ ಸೇರಿ ಹೊಟೇಲುಗಳಲ್ಲಿ ದುಡಿದು ನಂತರ ಹೊಟೇಲು ನಡೆಸಿಕೊಂಡು ತನ್ನ ಜೀವನ ಯಾಪನೆ ಮಾಡತೊಡಗಿದರು. ನಂತರ ಓರ್ವ ಸೋಲಿಸಿಟರ್ ಕಛೇರಿಯಲ್ಲಿ ದುಡಿಯತೊಡಗಿದರು. ಆದರೆ ವಿದ್ಯಾಭ್ಯಾಸ ಮುಂದುವರಿಸಬೇಕೆಂಬ ಮನದ ಇಚ್ಛೆಯನ್ನು ಪೂರ್ಣಗೊಳಿಸಲು ದುಡಿಯುತ್ತಿದ್ದಂತೆಯೇ ಕಾಲೇಜು ಸೇರಿ ಪದವಿ ಶಿಕ್ಷಣ ಮುಂದುವರಿಸಿದರು. ಮುಂಬಯಿ ವಿಶ್ವವಿದ್ಯಾಲಯದಿಂದ ವಾಣಿಜ್ಯ…

Read More

ಯಾವುದೇ ಸಮಾಜ ಪರ ಸೇವಾ ಕಾರ್ಯಗಳಿಗೆ ನಾನು ನಿರಂತರ ಸಹಾಯ, ಸಹಕಾರವನ್ನು ನೀಡುತ್ತಾ ಬಂದಿದ್ದೇನೆ. ಮುಂದೆಯೂ ನನ್ನ ಸಹಕಾರ ಸದಾ ಇರುತ್ತದೆ. ಘಾಟ್ಕೋಪರ್ ಕನ್ನಡ ವೆಲ್ಫೇರ್ ಸೊಸೈಟಿಯೊಂದಿಗೆ ನನ್ನ ಆತ್ಮೀಯ ಒಡನಾಟವಿದೆ. ಹಾಗೆಯೇ ಈ ಸಂಸ್ಥೆಯ ಎಲ್ಲಾ ಸದಸ್ಯರು ನನ್ನ ಆತ್ಮೀಯರಾಗಿದ್ದಾರೆ. ಇಂದು ವಿಶೇಷವಾಗಿ ಈ ಸಂಸ್ಥೆಯ ಸದಸ್ಯರು ಸೇರಿದಂತೆ ನನ್ನೆಲ್ಲಾ ಹಿತೈಷಿ ಸಮಾಜ ಬಾಂಧವರ ಆಶೀರ್ವಾದದಿಂದಾಗಿ ನಾನು ಬಂಟರ ಸಂಘ ಮುಂಬಯಿಯ ಉಪಾಧ್ಯಕ್ಷನಾಗಿ ಆಯ್ಕೆಗೊಂಡಿದ್ದೇನೆ ಎನ್ನಲು ಹೆಮ್ಮೆ ಪಡುತ್ತೇನೆ. ಇನ್ನು ಮುಂದೆಯೂ ಬಂಟರ ಸಂಘದಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳಿಗೆ ತಮ್ಮೆಲ್ಲರ ತುಂಬು ಹೃದಯದ ಸಹಕಾರ ಬೇಕಾಗಿದೆ. ಕನ್ನಡ ವೆಲ್ಫೇರ್ ಸೊಸೈಟಿ ಅಧ್ಯಕ್ಷ ನವೀನ್ ಶೆಟ್ಟಿ ಇನ್ನ ಬಾಳಿಕೆ ಅವರಂತಹ ಸಂಘಟಕರು ನಮ್ಮೊಂದಿಗಿದ್ದರೆ ಯಾವುದೇ ಕಾರ್ಯವನ್ನು ಮಾಡಲು ಅಸಾಧ್ಯವಾಗದು ಎನ್ನುವ ಭರವಸೆಯೂ ನನ್ನಲ್ಲಿದೆ ಎಂದು ಮುಂಬಯಿ ಬಂಟರ ಸಂಘದ ನೂತನ ಉಪಾಧ್ಯಕ್ಷರಾಗಿ ನೇಮಕಗೊಂಡ ಮಹೇಶ್ ಎಸ್. ಶೆಟ್ಟಿ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಅವರು ಡಿ.3 ರ ಆದಿತ್ಯವಾರದಂದು ಘಾಟ್ಕೋಪರ್ ಪೂರ್ವದ ಕನ್ನಡ…

Read More

ನಮ್ಮ ಜೀವನದಲ್ಲಿ ಗುರುಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಜೀವನದಲ್ಲಿ ಅಜ್ಞಾನದ ಕತ್ತಲೆಯನ್ನು ದೂರ ಮಾಡಿ ಸುಜ್ಞಾನದ ಬೆಳಕನ್ನು ನೀಡುವ ಗುರುಗಳನ್ನು ನಾವು ಸ್ಮರಿಸಿಕೊಂಡು ಸತ್ಕಾರ್ಯಗಳಲ್ಲಿ ತೊಡಗಿಸಿಕೊಂಡು ನಮ್ಮ ಜೀವನವನ್ನು ಸಾರ್ಥಕಗೊಳಿಸಿಕೊಳ್ಳೋಣ. ನಮ್ಮ ಬಂಟರ ಭವನದ ಚಾವಡಿಯಲ್ಲಿ ಗುರು ನಿತ್ಯಾನಂದ ಸ್ವಾಮಿ ಹಾಗೂ ಸಾಯಿಬಾಬಾರಿಗೆ ನಿತ್ಯ ಪೂಜೆಗಳನ್ನು ಸಲ್ಲಿಸುತ್ತಿದ್ದೇವೆ. ಜೀವನದಲ್ಲಿ ಸನ್ಮಾರ್ಗದ ದಾರಿ ತೋರಿಸುವವರೇ ಗುರುಗಳು. ಪೂಜ್ಯ ಗುರುಗಳ ಆಶೀರ್ವಾದ ನಮ್ಮೆಲ್ಲರ ಮೇಲಿರಲಿ ಎಂದು ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆ ಅಭಿಪ್ರಾಯಪಟ್ಟರು. ಪುಣೆ ಬಂಟರ ಸಂಘದ ದಕ್ಷಿಣ – ಪೂರ್ವ ಪ್ರಾದೇಶಿಕ ಸಮಿತಿ ವತಿಯಿಂದ ಜುಲೈ 3 ರಂದು ಓಣಿಮಜಲು ಜಗನ್ನಾಥ ಶೆಟ್ಟಿ ಬಂಟರ ಭವನದ ಆರತಿ ಶಶಿಕಿರಣ್ ಶೆಟ್ಟಿ ಚಾವಡಿಯಲ್ಲಿ ನಡೆದ ಗುರು ಪೂರ್ಣಿಮೆ ಆಚರಣೆಯನ್ನುದ್ದೇಶಿಸಿ ಮಾತನಾಡಿದರು. ಸಂಘದ ದಕ್ಷಿಣ ಪೂರ್ವ ಪ್ರಾದೇಶಿಕ ಕಾರ್ಯಾಧ್ಯಕ್ಷ ಶೇಖರ್ ಸಿ ಶೆಟ್ಟಿಯವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಿತು . ನಂತರ ಪೂಜೆ…

Read More

ಭಾರತವಲ್ಲದೇ ಜಗತ್ತಿನ ಇನ್ಯಾವುದೇ ದೇಶದ ಸಾಂಸ್ಕೃತಿಕ ಇತಿಹಾಸದಲ್ಲಿ ರಾಜ ಪ್ರಭುತ್ವವನ್ನು ವಿರೋಧಿಸಿದ ಪ್ರಜೆಗಳು ಬದುಕುಳಿದ ಕುರುಹುಗಳು ಕಾಣ ಸಿಗುವುದೇ ಇಲ್ಲ. ರಾಜನೇ ಪ್ರತ್ಯಕ್ಷ ದೇವರು. ಆತನಲ್ಲಿ ದೋಷ ಕಾಣುವುದೇ ಮಹಾಪರಾಧ ಎನ್ನುವಂತಹ ಅಲಿಖಿತ ಶಾಸನಗಳ ಅಡಿಯಲ್ಲಿಯೇ ಜಗತ್ತಿನ ಇನ್ನಿತರ ನಾಗರೀಕತೆಗಳು ಬೆಳೆದವು. ಅಲ್ಲಿ ಜನಸಾಮಾನ್ಯರ ಪ್ರತಿರೋಧದ ಸ್ವರಗಳನ್ನಾಗಲಿ, ರಾಜ ಶಾಸನದ ವಿಮರ್ಶೆ ಎಂಬ ಅಭಿವ್ಯಕ್ತಿ ಸ್ವಾತಂತ್ರ್ಯದ ಹುಚ್ಚು ಕಲ್ಪನೆಯನ್ನಾಗಲಿ ಊಹಿಸುವುದೇ ಬಾಲಿಶತನ. ಆದರೆ ಭಾರತದ ಮಹಾಕಾವ್ಯಗಳಲ್ಲಿ ದೈವತ್ವವನ್ನು ಪಡೆದ ಮಹಾಪುರುಷರೂ ಪ್ರಶ್ನಾತೀತರಲ್ಲ. ಆ ಮಹಾಪುರುಷರೆಲ್ಲ ತಮ್ಮನ್ನು ಪ್ರಶ್ನಿಸಿದ ಜನ ಸಾಮಾನ್ಯನನ್ನೂ ತಮ್ಮ ಜೊತೆ ಉಳಿಸಿ ಬೆಳೆಸಿದರು. ಇಲ್ಲದಿದ್ದರೆ ಶ್ರೀ ರಾಮಚಂದ್ರನೆಂಬ ಅಖಂಡ ಆರ್ಯಾವರ್ತದ ಅನಭಿಷಿಕ್ತ ಸಾರ್ವಭೌಮನನ್ನು, ಒಬ್ಬ ಸಾಮಾನ್ಯ ಅಗಸ ಪ್ರಶ್ನಿಸಿದ ಜಗತ್ತಿನ ಬೇರೆ ಯಾವುದೇ ದೇಶಗಳಲ್ಲಾಗಿದ್ದರೆ, ಅಂತಹ ಅಪವಾದ ಹೊರಿಸಿದ ಅಗಸನ ರುಂಡವನ್ನೇ ಚೆಂಡಾಡಿ ಬಿಡುತ್ತಿದ್ದರು. ಆದರೆ ಶ್ರೀರಾಮಚಂದ್ರನ ಜೊತೆ ಒಬ್ಬ ಜುಜುಬಿ ಅಗಸ, ತ್ರೇತಾಯುಗದಿಂದ ಕಲಿಯುಗದವರೆಗೂ ಉಳಿದುಕೊಂಡು ಬಂದ..ಆ ಮೂಲಕ ಕೊಟ್ಯಾಂತರ ಜನರ ವಿಮರ್ಶೆಗೆ ವಸ್ತುವಾದ. ಜೊತೆಗೆ ಭಾರತದಂತ…

Read More

ದುಬೈನಲ್ಲಿ ಡಿ.10 ರಂದು ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ (ರಿ) ಯು.ಎ.ಇ. ದುಬೈ ಘಟಕದ ವತಿಯಿಂದ ಅದ್ದೂರಿಯಾಗಿ ನಡೆಯಲಿರುವ “ದುಬೈ ಗಡಿನಾಡ ಉತ್ಸವ-2023” ಕಾರ್ಯಕ್ರಮದ ಆಮಂತ್ರಣ ಪತ್ರ ಬಿಡುಗಡೆಯ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಬಂದು ಕಾರ್ಯಕ್ರಮದ ಘನತೆಯನ್ನು ಹೆಚ್ಚಿಸಿದ ಕೆ.ಎನ್.ಆರ್.ಐ ಫಾರಂನ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿಯವರು ಮಾತನಾಡುತ್ತಾ, ಗಡಿನಾಡಿನ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ನೋಡಿ ತುಂಬ ಸಂತೋಷವಾಯಿತು. ಯುಎಇಯಲ್ಲಿ ಇರುವ ಗಡಿನಾಡಿನ ಕನ್ನಡಿಗರ ತಾಕತ್ತು ಏನೆಂಬುದನ್ನು ಕಳೆದ ವರ್ಷದಿಂದ ಯುಎಇಯ ಕನ್ನಡಿಗರಿಗೆ ತೋರಿಸಿಕೊಟ್ಟಿದ್ದೀರಿ. ಯುಎಇಯಲ್ಲಿ ಇರುವ ಕನ್ನಡಿಗರ ಒಂದೇ ಒಂದು‌ ಆಶಯ ದುಬೈನಲ್ಲಿ ಕನ್ನಡ ಭವನ ನಿರ್ಮಾಣ ಮಾಡೋದು ಹಾಗೂ ಗಡಿನಾಡಿನ ಅನಿವಾಸಿ ಕನ್ನಡಿಗರ ಕಷ್ಟ ಕಾರ್ಪಣ್ಯ ಬಗ್ಗೆ ‌ಸರಕಾರ ಎಚ್ಚೆತ್ತುಕೊಳ್ಳುವಂತಹ ಕಾರ್ಯಕ್ರಮ ಮಾಡುತಿದ್ದೀರಿ. ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲಿ ಹಾಗೂ ಈ ವರ್ಷ ಹಾಗೂ ಮುಂದೆಯೂ ನಡೆಯುವ ಗಡಿನಾಡಿನ ಕಾರ್ಯಕ್ರಮಕ್ಕೆ ನನ್ನ ಸಂಪೂರ್ಣ ಸಹಕಾರ ಇದೆ ಮತ್ತು ನನ್ನ ಸಂಸ್ಥೆಯ ಸಭಾಂಗಣದಲ್ಲಿ ಗಡಿನಾಡಿನ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ…

Read More