Author: admin

ರಿಷಬ್ ಶೆಟ್ಟಿ ಮಾತ್ರವಲ್ಲದೆ ತುಳುನಾಡಿನ ಸಮಸ್ತ ಚಿತ್ರ ನಿರ್ದೇಶಕ ನಿರ್ಮಾಪಕರಿಗೆ ನನ್ನದೊಂದು ವಿನಂತಿ. ಕಾಂತಾರ ಸಿನಿಮಾದಂತಹ ಚಿತ್ರ ಮೇಲ್ನೋಟಕ್ಕೆ ಉತ್ತಮವಾಗಿ ಕಂಡು ಬಂದರೂ. ಇಂದು ಬೀದಿ ಬೀದಿಗಳಲ್ಲಿ ಕಾಂತಾರ ಸಿನಿಮಾದ ದೃಶ್ಯಗಳು ಮನರಂಜನೆಗೆ ಒಳಗಾಗಿರುವುದು ಕಂಡಾಗ ನನ್ನಂತಹ ದೈವ ಭಕ್ತರಿಗೆ ತುಂಬಾ ಬೇಸರವಾಗುವುದು ಸಹಜ. ಮೇಲಿಂದ ಮೇಲೆ ದೈವಗಳಿಗೆ ಅವಮಾನ ಆಗುತ್ತಿದ್ದರೂ ತುಳುವರು ಸಹಿಸಿಕೊಂಡಿರುವುದು ನಮ್ಮ ದುರಾದೃಷ್ಟ. ಬೆರ್ಮರೆ ಸೃಷ್ಠಿ ! ತುಳುನಾಡಿನ ದೈವಾರಾಧನೆ ನೇಮ ಕೋಲಗಳಂತಹ ಆಚರಣೆಗಳಿಗೆ ಇರುವ ಮಹತ್ವ ಪ್ರಪಂಚದ ಬೇರೆ ಯಾವುದೇ ಆಚರಣೆಗೆ ಇಷ್ಟೊಂದು ಮಹತ್ವ ಇಲ್ಲಾ ಎಂದರೆ ತಪ್ಪಾಗಲಾರದು. ಹೇಗೆಂದರೆ ಸಿನಿಮಾದಲ್ಲಿ ಬಂದ ದೈವಗಳ ದೃಶ್ಯ ಇಂದು ದೇಶದಾದ್ಯಂತ ವೇದಿಕೆಗಳಲ್ಲಿ ಆಕರ್ಷಣೆ ಮತ್ತು ಮನರಂಜನೆಗಾಗಿ ಮೊದಲ ಆಯ್ಕೆ ಪಡೆದುಕೊಂಡಿರುವುದೇ ಇದಕ್ಕೆ ಸಾಕ್ಷಿ. ಕಾಂತಾರ ಸಿನಿಮಾ ಒಂದು ದೈವಗಳನ್ನು ದೇಶದಾದ್ಯಂತ ಪರಿಚಯಿಸುವ ಸಿನಿಮಾ ಆದರೂ ಅದರಿಂದ ಸಾಧಕಕ್ಕಿಂತಲೂ ಬಾಧಕ ಫಲಿತಾಂಶ ದೈವಾರಾಧಕರ ಮುಂದೆ ಇರುವುದು ಸತ್ಯ ಸಂಗತಿ. ನಮ್ಮ ತುಳುನಾಡಿನ ದೈವ ಸಂಸ್ಕ್ರತಿಯನ್ನು ಹೊರಗಿನವರಿಗೆ ಪರಿಚಯಿಸುವ ಕಾರ್ಯ…

Read More

ಒಂದೇ ದಿನದ ಎರಡು ಪ್ರದರ್ಶನದಲ್ಲಿ ಯುಎಇಯ ಐದು ಸಾವಿರ ತುಳುವರು ನೋಡಿದ ನಾಟಕ “ಶಿವದೂತೆ ಗುಳಿಗೆ” ವೀಕ್ಷಕರನ್ನು ವಿಸ್ಮಿತರನ್ನಾಗಿಸಿತು. ಉದ್ ಮೇತದ ಅಲ್ ನಸರ್ ಲ್ಯಾಂಡ್ ನ ಆಡಿಟೋರಿಯಂನ ಸಭಾಂಗಣದಲ್ಲಿ ಮಾರ್ಚ್ 19 ರಂದು ಕಲಾ ಸಂಗಮ ಕಲಾವಿದರು ಕುಡ್ಲ ಅಭಿನಯಿಸಿದ “ಶಿವದೂತೆ ಗುಳಿಗೆ” ನಾಟಕದ 423 ಮತ್ತು 424 ನೇ ಪ್ರದರ್ಶನಕ್ಕೆ ಜನ ಜಾತ್ರೆಯಾಗಿತ್ತು. ಮಧ್ಯಾಹ್ನ 2.30 ಮತ್ತು ಸಂಜೆ 6.30 ಕ್ಕೆ ಪ್ರದರ್ಶನವಾದ ನಾಟಕದ ಎರಡು ಪ್ರದರ್ಶನಕ್ಕೆ ಯುಎಇಯಲ್ಲಿ ಎಲ್ಲಾ ರಾಜ್ಯದಲ್ಲಿರುವ ತುಳುವರು ಆಗಮಿಸಿ ನಾಟಕದ ಯಶಸ್ವಿ ಪ್ರದರ್ಶನಕ್ಕೆ ಸಾಕ್ಷಿಯಾದರು. ಆರಂಭದಿಂದ ಅಂತ್ಯದವರೆಗೂ ಕೂತುಹಲ ಸೃಷ್ಟಿಸಿ, ಅಬ್ಬರದ ವೇದಿಕೆ, ಕಣ್ಮನ ಸೆಳೆಯುವ ಬೆಳಕು, ಮೈ ರೋಮಾಂಚನಗೊಳ್ಳುವ ಧ್ವನಿ, ತೆಂಬೆರೆಯ ಸದ್ದು, ಪಾಡ್ದನದ ಕಂಪನ, ಇಂಪಿನ‌ ಜೊತೆಗೆ ಹುರುಪು ತಂಬುವ ಸಂಗೀತ ದೊಂದಿಗೆ “ಶಿವದೂತೆ ಗುಳಿಗೆ” ನಾಟಕ ಮೂಡಿಬಂತು. ತುಳುನಾಡಿನ ಕಾರಣಿಕದ ಶಕ್ತಿ ಗುಳಿಗೆ ದೈವದ ಹುಟ್ಟು ಬದುಕು ಶಕ್ತಿಯ ಕಥೆಯೊಂದಿಗೆ ನಾಟಕ ಸಾಗುತ್ತವೆ. ಅಲ್ಲದೆ ತುಳುವ ಮಣ್ಣಿನ ನಂಬಿಕೆಗಳ…

Read More

ಪುತ್ತೂರು ತಾಲೂಕು ಅರಿಯಡ್ಕ ಗ್ರಾಮದ ಹೊಸಗದ್ದೆ ನಿವಾಸಿ ಸುಶೀಲಾ ರೈ ಅವರ ಮನೆಯ ಛಾವಣಿ ಬಿದಿರುಗಳು ಹಳೆಯದಾಗಿ ಮನೆ ಮಹಡಿ ಬೀಳುವ ಹಂತದಲ್ಲಿ ಇದ್ದು ಟರ್ಫಾಲ್ ಹೊದಿಕೆ ಹಾಕಿ ದಿನದೂಡುತ್ತಿದ್ದರು. ಸುಶೀಲಾ ರೈ ಅವರು ಪುತ್ತೂರು ತಾಲೂಕು ಯುವ ಬಂಟರ ಸಂಘದಲ್ಲಿ ತಮ್ಮ ಅಳಲನ್ನು ತೋಡಿಕೊಂಡಿದ್ದರು. ಯುವ ಬಂಟರ ಸಂಘವು ಇದಕ್ಕಾಗಿ ಸಹಾಯ ಯಾಚಿಸಿ ಸರಿಪಡಿಸಿಕೊಡುವ ಪ್ರಯತ್ನಕ್ಕೆ ಮುಂದಾಗಿರುವ ಸಂದರ್ಭದಲ್ಲಿ ಯುವ ಬಂಟರ ಸಂಘದ ಉಪಾಧ್ಯಕ್ಷರಾದ ನೆಲ್ಲಿಕಟ್ಟೆ ಗಣೇಶ್ ಶೆಟ್ಟಿ ಅವರು ಈ ವಿಷಯವನ್ನು ಅಭಿಮತ ಟಿವಿ ಚಾನೆಲ್ ನ ಮುಖ್ಯಸ್ಥೆ ಮಮತಾ ಪಿ ಶೆಟ್ಟಿ ಅವರಲ್ಲಿ ಹೇಳಿಕೊಂಡ ಮೇರೆಗೆ ತಕ್ಷಣವೇ ಮನವಿಗೆ ಸ್ಪಂದಿಸಿದ ಮಮತಾ ಶೆಟ್ಟಿ ಅವರು ಸುಶೀಲಾ ರೈ ಅವರ ಮನೆಗೆ ನೇರ ಭೇಟಿ ಇತ್ತು ಪರಿಶೀಲಿಸಿ ಕೂಡಲೇ ಈ ವಿಷಯವನ್ನು ಜಾಗತಿಕ ಬಂಟರ ಸಂಘದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಅವರ ಗಮನಕ್ಕೆ ತಂದರು. ಮಮತಾ ಶೆಟ್ಟಿ ಅವರ ಶಿಫಾರಸ್ಸಿಗೆ ಸ್ಪಂದಿಸಿದ ಐಕಳ ಹರೀಶ್ ಶೆಟ್ಟಿ ಅವರು…

Read More

ಸಮಾಜ ಮುಖೀ ಚಿಂತನೆ ಹಾಗೂ ಸೇವೆಗೆ ಸಹಕಾರ ಕ್ಷೇತ್ರ ಹೆಸರಾಗಿದ್ದು ರಾಷ್ಟ್ರೀಯ ಬ್ಯಾಂಕ್‌ಗಳ ವಿಲೀನದಿಂದ ಗ್ರಾಹಕರಿಗೆ ತೊಂದರೆಯಾದಾಗ ಸಹಕಾರಿ ಬ್ಯಾಂಕ್‌ಗಳು ಮನೆ ಮನೆಗೆ ತಲುಪಿ ಉನ್ನತ ಸೇವೆ ನೀಡಿವೆ ಎಂದು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಲದ ಅಧ್ಯಕ್ಷ, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ಹೇಳಿದರು. ಅವರು ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನದಲ್ಲಿ ಮುಂಡ್ಕೂರು ವ್ಯವಸಾಯ ಸೇವಾ ಸಹಕಾರಿ ಸಂಘದ ನವೀಕೃತ “ಸಮೃದ್ಧಿ ಸಹಕಾರಿ ಸೌಧ’ದ ಉದ್ಘಾಟನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಂಡ್ಕೂರು ಶ್ರೀ ದುರ್ಗಾಪರ ಮೇಶ್ವರೀ ದೇವಸ್ಥಾನದ ಪ್ರಧಾನ ಅರ್ಚಕ ವೇ|ಮೂ| ರಾಮದಾಸ ಆಚಾರ್ಯ ಶುಭಾಶಂಸನೆಗೈದರು. ಸಹಕಾರಿ ಸೌಧವನ್ನು ಸಚಿವ ವಿ. ಸುನಿಲ್‌ ಕುಮಾರ್‌, ನವೋದಯ ಸಹಕಾರಿ ಭವನವನ್ನು ಮುಂಡ್ಕೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಂ. ವಾದಿರಾಜ ಶೆಟ್ಟಿ, ಭದ್ರತಾ ಕೊಠಡಿಯನ್ನು ರಾಜ್ಯ ಸಹಕಾರ ಮಾರಾಟ ಮಹಾ ಮಂಡಲದ ನಿರ್ದೇಶಕ ಐಕಳಬಾವ ಡಾ| ದೇವಿಪ್ರಸಾದ್‌ ಶೆಟ್ಟಿ…

Read More

ಮುಂಬೈ ಬಂಟ್ಸ್ ಚಾರ್ಟರ್ಡ್ ಅಕೌಂಟೆಂಟ್‌ಗಳ ವೇದಿಕೆಯು ಫೆಬ್ರವರಿ 4 ರಂದು ಸಂಜೆ ಬಂಟ್ಸ್ ಸಂಘ ಮುಂಬೈ, ಇಂಡಿಯನ್ ಬಂಟ್ಸ್ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್ ಸಹಯೋಗದಲ್ಲಿ ಕುರ್ಲಾ ಪೂರ್ವದ ಬಂಟರ ಭವನದಲ್ಲಿ ಕೇಂದ್ರ ಬಜೆಟ್ – 2023 ರ ವಿಶ್ಲೇಷಣೆಯನ್ನು ನಡೆಸಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಫ್‌ಎಂಬಿಸಿಎ ಕಾರ್ಯಾಧ್ಯಕ್ಷ ಸಿಎ ಹರೀಶ್ ಹೆಗ್ಡೆ ವಹಿಸಿದ್ದರು. ವೇದಿಕೆಯಲ್ಲಿ ಇಂಡಿಯನ್ ಬಂಟ್ಸ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಲಿಮಿಟೆಡ್ ಅಧ್ಯಕ್ಷ ಕೆ.ಸಿ.ಶೆಟ್ಟಿ, ಇಂಡಿಯನ್ ಹೋಟೆಲ್ ಮತ್ತು ರೆಸ್ಟೋರೆಂಟ್ ಅಸೋಸಿಯೇಶನ್ ಅಧ್ಯಕ್ಷ ಸುಕೇಶ್ ಶೆಟ್ಟಿ, ಎಫ್‌ಎಂಬಿಸಿಎ ಉಪಾಧ್ಯಕ್ಷ ಸಿಎ ವಿಶ್ವನಾಥ ಶೆಟ್ಟಿ, ಗೌರವ ಕಾರ್ಯದರ್ಶಿ ಸಿಎ ಜಗದೀಶ್ ಬಿ ಶೆಟ್ಟಿ, ಗೌರವ ಕೋಶಾಧಿಕಾರಿ ಸಿಎ ಸುದೇಶ್ ಶೆಟ್ಟಿ ಉಪಸ್ಥಿತರಿದ್ದರು. ಸಿಎ ರಾಜೇಶ್ ಸಾಗ್ವಿ ಮತ್ತು ವಕೀಲ ಪ್ರಭಾಕರ ಶೆಟ್ಟಿ ಕ್ರಮವಾಗಿ ನೇರ ತೆರಿಗೆ ಮತ್ತು ಪರೋಕ್ಷ ತೆರಿಗೆಗಳನ್ನು ವಿಶ್ಲೇಷಿಸಿದರು. ಈ ಸಂದರ್ಭದಲ್ಲಿ ಹಿರಿಯ ಚಾರ್ಟರ್ಡ್ ಅಕೌಂಟೆಂಟ್ ಸಿಎ ಎನ್‌ಬಿ ಶೆಟ್ಟಿ, ಸಿಎ ಪ್ರಭಾಕರ್ ಬಿ…

Read More

ಕಣ್ಣು ಹಾಯಿಸಿದಷ್ಟು ದೂರಕ್ಕೂ ಆವೃತಗೊಂಡ ದಟ್ಟ ಹಸಿರು, ಬೆಟ್ಟಗುಡ್ಡ ಅಪರೂಪದ ಮರಗಳು ಹೇರಳವಾಗಿ ಬೆಳೆದು ನಿಂತು ತಂಪನ್ನೆರೆವ ಕಾಡು, ಪಕ್ಷಿಗಳ ಇಂಚರ, ಸರೀಸೃಪಗಳ ಸರಪರ ಸದ್ದು, ವಿಶಿಷ್ಟವಾದ ಪಕ್ಷಿಗಳು ಕಾಣಸಿಗುವ ಸಸ್ಯಸಂಪತ್ತು ಹಾಗೂ ವನ್ಯಜೀವಿಗಳನ್ನು ಕಣ್ತುಂಬಿಕೊಳ್ಳಬಹುದಾದ ಅರಣ್ಯ ಸುತ್ತಾಡಿ ಪ್ರಾಣಿ, ಪಕ್ಷಿ, ಅರಣ್ಯ ಸಂಪತ್ತನ್ನು ನೋಡಲು ಯಾರ ‌ಮನ‌ಬಯಸುವುದಿಲ್ಲ. ಆದರೆ ಕೆಲ ದಿನಗಳ ಹಿಂದೆ ಹಾಸನ ಜಿಲ್ಲೆಯ ಸಕಲೇಶ್ವರಪುರ ತಾಲೂಕಿನಲ್ಲಿ ಪಶ್ಚಿಮ ಘಟ್ಟ ರಕ್ಷಿತಾರಣ್ಯದಲ್ಲಿ ಸಂಭವಿಸಿದ ಅಗ್ನಿ ದುರಂತ, ಕಾಡ್ಗಿಚ್ಚು ನಂದಿಸಲು ಹೋಗಿ ಗಾಯಗೊಂಡಿದ್ದ ಅರಣ್ಯ ಇಲಾಖೆಯ ಗಾರ್ಡ ಮೃತ ಪಟ್ಟು ಕೆಲವರು ಗಾಯಗೊಂಡಿರುವ ಸುದ್ದಿ ನಿಜಕ್ಕೂ ಆಘಾತಕಾರಿ. ಸಮೃದ್ದ ಅರಣ್ಯ ಸಂಪತ್ತಿನ ಕಾರಣ ತಂಪಾದ ವಾತಾವರಣ ಹೊಂದಿದ ದಟ್ಟಾರಣ್ಯ ಕಾಡ್ಗಿಚ್ಚಿಗೆ ಆಹುತಿಯಾಗಿ ಬೆಂಕಿಯ ಕೆನ್ನಾಲಿಗೆ ಹೊತ್ತಿ ಉರಿದು ಅಪಾರ ಸಂಖ್ಯೆಯಲ್ಲಿ ಪ್ರಾಣಿ ಪಕ್ಷಿಗಳ ಜೀವಹಾನಿಗೆ ಕಾರಣವಾಗಿರುವುದು ದಾಖಲಾಗಿದೆ. ಕಾಡ್ಗಿಚ್ಚು ಕೆಲವೊಮ್ಮೆ ಉದ್ದೇಶ ಪೂರ್ವಕವಾಗಿ ಹಚ್ಚಿದ್ದು ಎಂಬ ಆರೋಪ ಪಡೆದಿದ್ದು ಮಾನವ ನಿರ್ಮಿತ ಕಾಡ್ಗಿಚ್ಚು ಅಕ್ಷಮ್ಯ ಅಪರಾಧ. ಅರಣ್ಯಕ್ಕೆ ಬೆಂಕಿ ಬೀಳುವ…

Read More

ಜಗತ್ತಿನಾದ್ಯಂತ ಇರುವ ಬಂಟ ಸಮಾಜವು ಇಂದು ಪ್ರತಿಯೊಂದು ವಿಭಾಗದಲ್ಲೂ ಮುಂದುವರಿಯುತ್ತಿದ್ದಾರೆ. ಇದಕ್ಕೆ ಮೂಲ ಕಾರಣ ಬಂಟರಲ್ಲಿ ಅಡಗಿರುವ ರಕ್ತ ಶಕ್ತಿಯ ಗುಣ. ನಮ್ಮವರು ಸಾಹಸಿಗರು ಮಾತ್ರವಲ್ಲದೆ ಧೀರರು. ವಿಶ್ವದಲ್ಲಿರುವ ನಾವೆಲ್ಲಾ ಒಂದೇ ಮನೆತನದವರು. ನಮ್ಮಲ್ಲಿ ಭಿನ್ನಾಭ್ರಿಪ್ರಾಯ ಸಲ್ಲದು. ದೇಶ ವಿದೇಶದಲ್ಲೂ ಇಂದು ಅದೆಷ್ಟೋ ಮಂದಿ ಕ್ರೀಡಾ ಕೌಶಲ್ಯತೆಯಲ್ಲಿ ಮೆರೆಯುತ್ತಿದ್ದಾರೆ ಎಂದು ನುಡಿದರು. ಅವರು ಮೀರಾಡಹಣೂ ಬಂಟ್ಸ್ ವತಿಯಿಂದ ವಿರಾರ್ ಹಳೇ ವಿವಾ ಕಾಲೇಜಿನ ಮೈದಾನದಲ್ಲಿ ನಡೆದ ಸಂಸ್ಥೆಯ ಪ್ರಥಮ ವರ್ಷದ ಕ್ರೀಡೋತ್ಸವದ ಮುಖ್ಯ ಅತಿಥಿಯಾಗಿ ಮಾತನಾಡುತ್ತಾ ಇಂದು ಆಯೋಜಿಸುತ್ತಿರುವ ಮೀರಾಡಹಣೂ ಬಂಟ್ಸ್ ನ ಕ್ರೀಡೋತ್ಸವ ಅತ್ಯಂತ ವಿಶೇಷ ಮೆರಗನ್ನು ನೀಡುತ್ತಿದೆ. ಆಕರ್ಷಕ ಶೈಲಿಯ ಉಡುಪುಗಳು ಕಾರಣವಾಗಿದೆ. ನಾವು ಬಂಟರು, ಉತ್ತಮ ಜನಾಂಗದವರು. ನಮ್ಮಲ್ಲಿ ಎಲ್ಲಾ ರೀತಿಯ ಕ್ರೀಯಾ ಶಕ್ತಿಗಳು ಅಡಕವಾಗಿದೆ ಅದನ್ನು ನಾವು ಸದುಪಯೋಗಿಸಬೇಕಾಗಿದೆ ಎಂದರು. ಇಂದಿನ ಕ್ರೀಡಾ ಆಯೋಜನೆಯನ್ನು ಪ್ರಶಂಸಿಸುತ್ತಾ ಕ್ರೀಡಾಳುಗಳಿಗೆ ಶುಭ ಹಾರೈಸಿದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಮೀರಾಡಹಣೂ ಬಂಟ್ಸ್ ನ ಅಧ್ಯಕ್ಷ ಪ್ರಕಾಶ್ ಹೆಗ್ಡೆಯವರು ಮಾತನಾಡುತ್ತಾ ಇದು…

Read More

ಬಂಟ ಸಮಾಜದ ಸಂಘಟನೆಯ ಮೂಲಕ ಇತರ ಸಮಾಜದ ವರ್ಗಕ್ಕೂ ಮುಕ್ತ ನೆರವು ನೀಡುವ ಮೂಲಕ ಸಮಾಜದಲ್ಲಿ ಮೇಲ್ಪಂಕ್ತಿಗೆ ಕಾರಣವಾಗಿರುವ ಒಕ್ಕೂಟಕ್ಕೆ ಸಮಾಜ ಬಾಂಧವರಿಂದ ನೀಡುತ್ತಿರುವ ಸ್ಪಂದನೆಯೇ ಮೂಲ ಕಾರಣವಾಗಿದೆ. ಸಮಾಜದಲ್ಲಿ ಎಲ್ಲಾ ಸಮಾಜದ ಸಂಘಟನೆಯೂ ಇದೇ ರೀತಿಯ ಯೋಚನೆಯಲ್ಲಿ ಯೋಜನೆ ರೂಪಿಸಬೇಕು ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಹೇಳಿದರು. ಅವರು ಮೂಲ್ಕಿಯ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಪಡುಬೈಲ್ ನಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ನೂತನ ಜಮೀನಿಗೆ ಕನ್ಯಾನ ಸದಾಶಿವ ಶೆಟ್ಟಿ ಸಂಕೀರ್ಣದ ನಾಮಕರಣ ಮಾಡುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಕಾರ್ಯ ಯೋಜನೆಗಳಿಗೆ ದಾನಿ ಕೂಳೂರು ಕನ್ಯಾನ ಸದಾಶಿವ ಶೆಟ್ಟಿ ಅವರು ಮೂರುವರೆ ಕೋಟಿ ರೂ.ಗೂ ಮಿಕ್ಕಿದ ಮೊತ್ತವನ್ನು ಒಕ್ಕೂಟದ ಯೋಜನೆಗಳಿಗೆ ಒದಗಿಸಿ ಸೂಕ್ತ ನಿವೇಶನ ಪಡೆಯುವಲ್ಲಿ ಹಾಗೂ ನೆರವು ನೀಡುವ ಯೋಜನೆಗಳಿಗೆ ಸಹಕರಿದ್ದಾರೆ ಎಂದರು. ಕನ್ಯಾನ ಸದಾಶಿವ ಶೆಟ್ಟಿ ಸಂಕೀರ್ಣ ನಿರ್ಮಾಣಗೊಂಡ ಬಳಿಕ ಬಿಪಿಲ್ ಕಾರ್ಡುದಾರರಿಗೆ ಮದುವೆಗೆ ಹಾಲ್…

Read More

ವಿಶ್ವದಾದ್ಯಂತ ಕೇಂದ್ರೀಯ ಬ್ಯಾಂಕ್‌ಗಳು ಬಡ್ಡಿ ದರ ಏರಿಕೆ ಮುಂತಾದ ಬಿಗಿ ವಿತ್ತೀಯ ಕ್ರಮಗಳ ಮೊರೆ ಹೋಗುತ್ತಿರುವುದರ ಹಿನ್ನೆಲೆಯಲ್ಲಿ ಮುಂದಿನ ವರ್ಷ ಆರ್ಥಿಕ ಹಿಂಜರಿತ ಕಾಡಬಹುದು ಎಂದು ವಿಶ್ವಬ್ಯಾಂಕ್‌ ಮತ್ತು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ಎಚ್ಚರಿಕೆ ನೀಡಿದೆ. 1970ರಲ್ಲಿ ಉಂಟಾದ ಆರ್ಥಿಕ ಹಿಂಜರಿತದ ಅನಂತರ ಅತೀ ಗರಿಷ್ಠ ಹಿಂಜರಿತ 2024 ರಲ್ಲಿ ಆಗಬಹುದು ಎಂದು ವಿಶ್ವಬ್ಯಾಂಕ್‌ನ ವರದಿಯೊಂದು ಅಭಿಪ್ರಾಯಪಟ್ಟಿದೆ. ಅಭಿವೃದ್ಧಿಶೀಲ ದೇಶಗಳಿಗೆ ಇದರ ಬಿಸಿ ಹೆಚ್ಚಾಗಿ ತಟ್ಟಲಿದೆ ಎಂದು ವಿಶ್ವಬ್ಯಾಂಕ್‌ ವರದಿ ಹೇಳಿದೆ. ಇದೇ ವೇಳೆ ಹಣದುಬ್ಬರಕ್ಕೆ ಕಡಿವಾಣ ಹಾಕಲು ಉತ್ಪಾದನೆ ಹೆಚ್ಚಳ ಹಾಗೂ ಪೂರೈಕೆ ಸರಪಳಿ ಅಡಚಣೆ ನಿರ್ಮೂಲನೆಯಂತಹ ಕ್ರಮಗಳನ್ನು ಕೈಗೊಳ್ಳಲು ಸಲಹೆ ನೀಡಿದೆ. ರಷ್ಯಾ-ಉಕ್ರೇನ್‌ ಕದನ, ಜಾಗತಿಕ ಆಹಾರ ಪೂರೈಕೆಯಲ್ಲಿ ಅಡಚಣೆ, ಕೃಷಿ ಉತ್ಪಾದನೆಯಲ್ಲಿ ಕುಂಠಿತ, ಕೊರೊನಾ ಹೀಗೆ ಹಲವು ಕಾರಣಗಳಿಂದಾಗಿ ಹಣದುಬ್ಬರ ಉಂಟಾಗಿ ನಿರೀಕ್ಷಿತ ಆರ್ಥಿಕ ಪ್ರಗತಿಯನ್ನು ಸಾಧಿಸಲಾಗುತ್ತಿಲ್ಲ. ಇದೇ ಪರಿಸ್ಥಿತಿ ಮುಂದುವರಿದರೆ ವಿಶ್ವದ ಬಲಾಡ್ಯ ರಾಷ್ಟ್ರಗಳು ಮುಂದಿನ ವರ್ಷ ಆರ್ಥಿಕ ಹಿಂಜರಿತ ಕಾಣಬಹುದು ಎಂಬ ಭಯದ ವಾತಾವರಣ…

Read More

ಕರಾವಳಿ ಲೇಖಕಿಯರ ವಾಚಕಿಯರ ಸಂಘ ಕೊಡಮಾಡುವ ಸಂಜೀವಿನಿ ನಾರಾಯಣ ಅಡ್ಯಂತಾಯ ಸ್ಮರಣಾರ್ಥ ‘ಸಂಜೀವಿನಿ ಪ್ರಶಸ್ತಿ’ ಗೆ ಲೀಲಾವತಿ ಆಚಾರ್ಯ ಪೈಕ ಗುತ್ತಿಗಾರು ಅವರನ್ನು ಆಯ್ಕೆ ಮಾಡಲಾಗಿದೆ. ಬದುಕಿನ ಏಳು ಬೀಳುಗಳನ್ನು ಆತ್ಮಸ್ಟೈರ್ಯದಿಂದ ಎದುರಿಸಿ ಮಕ್ಕಳಿಗೆ ಒಳ್ಳೆಯ ಸಂಸ್ಕಾರ, ನೆಲೆಯನ್ನು ಕಂಡುಕೊಳ್ಳುವಲ್ಲಿ ಶ್ರಮಿಸಿ ಕುಟುಂಬದ ಸಂಜೀವಿನಿಯಾಗುವ ಅಮ್ಮಂದಿರನ್ನು ಗುರುತಿಸಿ ನೀಡುವ ಈ ಪುರಸ್ಕಾರದ ಪ್ರಶಸ್ತಿ ಪ್ರಧಾನ ಸಮಾರಂಭವು ಎ. 27ರಂದು ಅಪರಾಹ್ನ 2.30ಕ್ಕೆ ಉರ್ವಸ್ಟೋರ್ ನ ಅಂಬೇಡ್ಕರ್ ಭವನದಲ್ಲಿ ನೇರವೇರಲಿದೆ ಎಂದು ಸಂಘದ ಪ್ರಕಟಣೆಯಲ್ಲಿ ರೂಪಕಲಾ ಆಳ್ವರವರು ತಿಳಿಸಿದ್ದಾರೆ.

Read More