Author: admin
ಮುತ್ತು ಗೋಪಾಲ್ ಫಿಲಂಸ್ ಲಾಂಛನದಲ್ಲಿ ಸತೀಶ್ ಪೂಜಾರಿ ನಿರ್ಮಾಣದಲ್ಲಿ ತಯಾರಾದ ಗಬ್ಬರ್ ಸಿಂಗ್ ತುಳು ಸಿನಿಮಾದ ಪೋಸ್ಟರ್ ಬಿಡುಗಡೆ ಅಡ್ಯಾರ್ ನಲ್ಲಿ ನಡೆದ ಶಿವದೂತೆ ಗುಳಿಗೆ ನಾಟಕದ 555 ನೇ ಪ್ರದರ್ಶನ ಸಮಾರಂಭದಲ್ಲಿ ಜರಗಿತು. ಸಿನಿಮಾ ನಿರ್ದೇಶಕ ಎಸ್ ವಿ ರಾಜೇಂದ್ರ ಸಿಂಗ್ ಬಾಬು, ಸಂಗೀತ ನಿರ್ದೇಶಕ ಗುರುಕಿರಣ್ ಶೆಟ್ಟಿ ಪೋಸ್ಟರ್ ಬಿಡುಗಡೆಗೊಳಿಸಿದರು. ಎಸ್ ಸಿಡಿಸಿಸಿ ಬ್ಯಾಂಕ್ ನ ಅಧ್ಯಕ್ಷ ಎಂಎನ್ ರಾಜೇಂದ್ರ ಕುಮಾರ್, ಕನ್ಯಾನ ಸದಾಶಿವ ಶೆಟ್ಟಿ, ವಿಜಯಕುಮಾರ್ ಕೊಡಿಯಾಲ್ ಬೈಲ್, ನಿರೂಪಕಿ ಅನುಶ್ರೀ, ಗಣ್ಯರಾದ ಶಶಿಧರ ಶೆಟ್ಟಿ ಬರೋಡ, ಪದ್ಮರಾಜ್ ಆರ್. ಬಿ. ನಾಗರಾಜ ಶೆಟ್ಟಿ, ಕುಮಾರ ಎನ್. ಬಂಗೇರ, ಹರೀಶ್ ಬಂಗೇರ, ಪ್ರಕಾಶ್ ಪಾಂಡೇಶ್ವರ, ಆರ್.ಕೆ. ನಾಯರ್, ಮನೋಹರ ಪ್ರಸಾದ್, ಕಾಸರಗೋಡು ಚಿನ್ನಾ, ಮತ್ತಿತರರು ಉಪಸ್ಥಿತರಿದ್ದರು. ಗಬ್ಬರ್ ಸಿಂಗ್ ಸಿನಿಮಾದಲ್ಲಿ ಅಭಿನಯಿಸಿರುವ ಶರಣ್ ಶೆಟ್ಟಿ, ಭೋಜರಾಜ ವಾಂಮಜೂರು, ಗಿರೀಶ್ ಎಂ ಶೆಟ್ಟಿ ಕಟೀಲು, ಉದಯ ಆಳ್ವ, ಸಂಭಾಷಣೆಕಾರ ಮಧು ಶೆಟ್ಟಿ ಸುರತ್ಕಲ್, ಶಿಲ್ಪಾ ಆರ್ ಶೆಟ್ಟಿ ಮೊದಲಾದವರು…
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ವಾರ್ಷಿಕ ಕ್ರೀಡಾಕೂಟ 2ನೇ ದಿನವೂ ಆಳ್ವಾಸ್ ಪಾರಮ್ಯ ಮೂಡುಬಿದಿರೆ
ಇಲ್ಲಿನ ಸ್ವರಾಜ್ ಮೈದಾನದಲ್ಲಿ ಆಳ್ವಾಸ್ ಆಯುರ್ವೇದ ವೈದ್ಯಕೀಯ ಕಾಲೇಜಿನ ಆತಿಥ್ಯದಲ್ಲಿ ನಡೆಯುತ್ತಿರುವ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ‘21ನೇ ಅಂತರ ಕಾಲೇಜುವಾರ್ಷಿಕ ಅಥ್ಲೆಟಿಕ್ ಚಾಂಪಿಯನ್ಶಿಪ್ 2023-24’ನ ಎರಡನೇ ದಿನವಾದ ಬುಧವಾರವೂ ಆಳ್ವಾಸ್ ಆಲೈಡ್ ಹೆಲ್ತ್ ಸೈನ್ಸ್ಸ್ನ ಕ್ರೀಡಾಪಟುಗಳು ಪಾರಮ್ಯ ಮೆರೆದಿದ್ದಾರೆ. ಎರಡನೇ ದಿನದ ಅಂತ್ಯಕ್ಕೆ ಪುರುಷರ ವಿಭಾಗದಲ್ಲಿ ಆಳ್ವಾಸ್ ಆಲೈಡ್ ಹೆಲ್ತ್ ಸೈನ್ಸ್ಸ್ 70 ಅಂಕಗಳೊಂದಿಗೆ ಪ್ರಥಮ ಸ್ಥಾನ ಪಡೆದರೆ, ಮೂಲ್ಕಿಯ ಸೈಂಟ್ ಅನ್ಸ್ ಕಾಲೇಜು 13 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಪಡೆಯಿತು. ಮಹಿಳಾ ವಿಭಾಗದಲ್ಲಿ ಆಳ್ವಾಸ್ ಆಲೈಡ್ ಹೆಲ್ತ್ ಸೈನ್ಸ್ಸ್ 38 ಅಂಕಗಳೊಂದಿಗೆ ಪ್ರಥಮ ಸ್ಥಾನ ಮುಂದುವರೆಸಿದರೆ, ಆಳ್ವಾಸ್ ಕಾಲೇಜ್ ಆಫ್ ನ್ಯಾಚುರೋಪತಿ ಆ್ಯಂಡ್ ಯೋಗಿಕ್ ಸೈನ್ಸ್ಸ್ 19 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಪಡೆಯಿತು. ಆಳ್ವಾಸ್ ಆಲೈಡ್ ಹೆಲ್ತ್ ಸೈನ್ಸ್ಸ್ ಕಾಲೇಜು ಪುರುಷರ ವಿಭಾಗದಲ್ಲಿ 9 ಚಿನ್ನ, 4 ಬೆಳ್ಳಿ ಹಾಗೂ 3 ಕಂಚಿನ ಪದಕಗಳನ್ನು ಪಡೆದರೆ, ಮಹಿಳಾ ವಿಭಾಗದಲ್ಲಿ ಆಳ್ವಾಸ್ ಆಲೈಡ್ ಹೆಲ್ತ್ ಸೈನ್ಸ್ಸ್ ಕಾಲೇಜು 5…
ಬ್ರಹ್ಮಾವರದ ಜಿ ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್ ನಲ್ಲಿ ಸಿಬಿಎಸ್ಸಿ ಬೋರ್ಡ್ ಪ್ರಾಯೋಜಕತ್ವದಲ್ಲಿ ಅ.10 ರಂದು ಶಿಕ್ಷಕರಿಗೆ ಸೈಬರ್ ಸುರಕ್ಷತೆ ಮತ್ತು ಭದ್ರತೆಯ ಕುರಿತು ‘ಸಾಮರ್ಥ್ಯ ಅಭಿವೃದ್ಧಿ’ ತರಬೇತಿ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಮಂಗಳೂರಿನ ಪೆÇೀದಾರ್ ಇಂಟರ್ನ್ಯಾಷನಲ್ ಸ್ಕೂಲ್ನ ಪ್ರಾಂಶುಪಾಲರಾದ ಗಿರೀಶ್ ಕುಮಾರ್ ಹಾಗೂ ಗಂಜಿಮಠದ ರಾಜ್ ಅಕಾಡೆಮಿ ಹೈಸ್ಕೂಲಿನ ಪ್ರಾಂಶುಪಾಲೆ ಶ್ರೀಮತಿ ಪ್ರವೀಣಾ ಶೆಟ್ಟಿ ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದರು. ಅವರು ಸೈಬರ್ ಭದ್ರತೆ , ಬ್ಯಾಂಕ್ ವಂಚನೆ, ಸೈಬರ್ ಕ್ರೈಮ್, ಕಂಪ್ಯೂಟರ್ಫೋರೆನಿಕ್ಸ್, ಸೈಬರ್ ಜಾಗೃತಿ, ಸೈಬರ್ ಕಾನೂನು ಮತ್ತು ಕಾಯ್ದೆ ಮುಂತಾದ ವಿಷಯಗಳ ಕುರಿತು ಪರಿಪೂರ್ಣ ಮಾಹಿತಿ ನೀಡಿದರು. ಶಾಲಾ ಪ್ರಾಂಶುಪಾಲರಾದ ಜಾರ್ಜ್ ಕುರಿಯನ್ ಮಾತನಾಡಿ ನಾವೆಲ್ಲರೂ ಇಂದು ಕೇವಲ ಒಂದು ದೇಶದ ಪ್ರಜೆಗಳಲ್ಲ, ಜೊತೆಗೆ ಸೈಬರ್ ಪ್ರಪಂಚದ ಸದಸ್ಯರಾಗಿದ್ದೇವೆ ಹಾಗಾಗಿ ಅದರ ಅನುಕೂಲ ಹಾಗೂ ಅನಾನುಕೂಲಗಳ ಅರಿವು ಇರಬೇಕು ಎಂದರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿ ಮಾತನಾಡಿ ಅಂತರ್ಜಾಲದ ಯುಗದಲ್ಲಿ ಬದುಕುತ್ತಿರುವ ನಮಗೆ ಸಾಮಾಜಿಕ ಮಾಧ್ಯಮಗಳ…
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ: ಸಂಶೋಧನೆ, ಪೇಟೆಂಟ್, ಉತ್ಪಾದನೆಯಲ್ಲಿ ವಿನೂತನ ಹೆಜ್ಜೆ ಆಳ್ವಾಸ್ ಸಂಶೋಧನಾ ನೀತಿ ಕರಡು ಬಿಡುಗಡೆ
ಮೂಡುಬಿದಿರೆ: ಶೈಕ್ಷಣಿಕ, ಸಾಂಸ್ಕೃತಿಕ, ಕ್ರೀಡೆಯಲ್ಲಿ ಅನನ್ಯ ಛಾಪು ಮೂಡಿಸಿರುವ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಹಲವಾರು ಆವಿಷ್ಕಾರಿಕ ಕೊಡುಗೆಗಳನ್ನು ನೀಡುತ್ತಿದ್ದು, ಗುರುವಾರ ‘ಆಳ್ವಾಸ್ ಸಂಶೋಧನಾ ನೀತಿ’ ಕರಡನ್ನು ಬಿಡುಗಡೆ ಮಾಡಿತು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನ ಎಂಬಿಎ ವಿಚಾರಸಂಕಿರಣ ಸಭಾಂಗಣದಲ್ಲಿ ‘ಶೈಕ್ಷಣಿಕ ಸಂಸ್ಥೆಗಳಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯ ಪ್ರಸ್ತುತತೆ ಕುರಿತು ಶನಿವಾರ ಹಮ್ಮಿಕೊಂಡ ಸಿಬ್ಬಂದಿ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಮಣಿಪಾಲ ಸ್ಕೂಲ್ ಆಫ್ ಲೈಫ್ಸೈನ್ಸ್ ನಿರ್ದೇಶಕ ಡಾ.ಬಿ.ಎಸ್. ಸತೀಶ್ ರಾವ್ ಕರಡು ಬಿಡುಗಡೆ ಮಾಡಿದರು. ಬಳಿಕ ಮಾತನಾಡಿದ ಅವರು, ‘ಸಂಶೋಧನೆ ಇಲ್ಲದೆ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಉಳಿವಿಲ್ಲ. ಅಧ್ಯಯನಕ್ಕೆ ಭವಿಷ್ಯವಿಲ್ಲ’ ಎಂದರು. ‘ಜ್ಞಾನ- ವಿಜ್ಞಾನಗಳ ಸೌಂದರ್ಯವು ಸಂಶೋಧನೆಯಲ್ಲಿ ಇದೆ. ದೃಷ್ಟಿಕೋನ, ಕಾರ್ಯಕ್ರಮ, ಮೌಲ್ಯಗಳ ಮೂಲಕ ಈಗಾಗಲೇ ಜಗತ್ತಿನ ಜನರ ಹೃದಯಕ್ಕೆ ಪರಿಚಿತವಾಗಿರುವ ಆಳ್ವಾಸ್, ಸಂಶೋಧನಾ ಕ್ಷೇತ್ರದಲ್ಲಿ ದಿಟ್ಟ ಹೆಜ್ಜೆ ಇಟ್ಟಿರುವುದು ಶ್ಲಾಘನೀಯ’ ಎಂದರು. ‘ಸಂಶೋಧನೆಯು ವೃತ್ತಿಯಲ್ಲ. ಅದು ಮನೋತ್ಸಾಹ. ಜೀವನ ಪ್ರೀತಿ. ವೃತ್ತಿಯ ರೀತಿ-ನೀತಿ. ಆದರೆ, ಪರಿಣಾಮಕಾರಿ ಜಾರಿಗೆ…
ಮುಂಬಯಿ (ಆರ್ಬಿಐ), ನ.29: ಮಂಗಳೂರು ಅಡ್ಯಾರ್ ಇಲ್ಲಿನ ಸಹ್ಯಾದ್ರಿ ಇಂಜಿನೀಯರಿಂಗ್ ಕಾಲೇಜ್ನ ಮಾಹಿತಿ ವಿಜ್ಞಾನ ಮತ್ತು ಇಂಜಿನಿಯರಿಂಗ್ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕ್ರಯಗಿ ಕಾರ್ಯ ನಿರ್ವಹಿಸುತ್ತಿರುವ ಪೆರ್ಮಂಕಿಗುತ್ತು ರಿತೇಶ್ ಪಕ್ಕಳ ಇವರು ಬೆಳ್ಳಿಪಯಡಿ ಡಾ| ಶಮಂತ್ ರೈ ಅವರ ಮಾರ್ಗದರ್ಶನದಲ್ಲಿ ಕಂಪ್ಯೂಟರ್ ವಿಜ್ಞಾನ ಮತ್ತು ಇಂಜಿನಿಯರಿಂಗ್ ವಿಷಯದಲ್ಲಿ ಮಂಡಿಸಿದ “ಎ ಫಾರ್ಮಲ್ ಸ್ಟಾಟಿಸ್ಟಿಕಲ್ ಡೇಟಾ ಮಾಡೆಲಿಂಗ್ ಆಂಡ್ ಪೆÇ್ರೀಗ್ಲೋಸ್ಟಿಕ್ ರೀಸನಿಂಗ್ಯೂ ಸಿಂಗ್ ಡೇಟಾ ಅನಲಿಟಿಕ್ಸ್” ಎಂಬ ಸಂಶೋಧನಾ ಪ್ರಬಂಧಕ್ಕೆ ದೇಶದ ಪ್ರತಿಷ್ಠಿತ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯವು ಡಾಕ್ಟರೇಟ್ ಪದವಿ ಪ್ರಾಪ್ತಿಸಿದೆ. ರಿತೇಶ್ ಪಕ್ಕಳ ಇವರು ಕಂಪ್ಯೂಟರ್ ವಿಜ್ಞಾನ ಮತ್ತು ಇಂಜಿನಿಯರಿಂಗ್ ವಿಷಯದಲ್ಲಿ ತನ್ನ ಇಂಜಿನಿಯರಿಂಗ್, ಸ್ನಾತಕೋತ್ತರ ಹಾಗೂ ಪಿಹೆಚ್.ಡಿ ಪದವಿಯನ್ನು ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜ್ನಿಂದ ಪಡೆದ ಪ್ರಪ್ರಥಮ ವಿದ್ಯಾರ್ಥಿ ಆಗಿದ್ದಾರೆ. ರಿತೇಶ್ ಇವರು ಪೆರ್ಮಂಕಿ ಗುತ್ತು ಮೋಹನ್ ಪಕ್ಕಳ ದಂಪತಿ ಸುಪುತ್ರರಾಗಿದ್ದಾರೆ.
ಪುಣೆಯ ಪ್ರತಿಷ್ಠಿತ ರೋಯಲ್ ಕಾನೊಟ್ ಬೋಟ್ ಕ್ಲಬ್ “ನ ಅಧ್ಯಕ್ಷ , ಪುಣೆ ಬಂಟರ ಸಂಘದ ಮಾಜಿ ಅಧ್ಯಕ್ಷ, ಯಶಸ್ವಿ ಉದ್ಯಮಿ, ಸಮಾಜ ಸೇವಕ ಮೊಳಹಳ್ಳಿ ಬಾಲಕೃಷ್ಣ ಹೆಗ್ಡೆಯವರು ನಿಧನರಾಗಿದ್ದಾರೆ. ಮೂಲತಃ ಉಡುಪಿ ಜಿಲ್ಲೆಯ ಕುಕ್ಕೆಹಳ್ಳಿ ದೊಡ್ಡಬೀಡು ಗಣಪಯ್ಯ ಹೆಗ್ಡೆ ಹಾಗೂ ಮೊಳಹಳ್ಳಿ ಶ್ರೀಮತಿ ಮುತ್ತಕ್ಕ ಹೆಗ್ಡೆ ದಂಪತಿಗಳ ಸುಪುತ್ರನಾಗಿ ಜನಿಸಿ ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಶಿಕ್ಷಣವನ್ನು ಪಡೆದು ನಂತರ ಮಹಾರಾಷ್ಟ್ರದ ಪುಣೆಗೆ ಆಗಮಿಸಿ ಪುಣೆಯ ಐ ಎಲ್ ಎಸ್ ಲಾ ಕಾಲೇಜಿನಲ್ಲಿ ಉನ್ನತ ಶಿಕ್ಷಣವನ್ನು ಪಡೆದಿದ್ದರು. ಜೀವನದಲ್ಲಿ ಮಹತ್ವಾಕಾಂಕ್ಷೆ ಹೊಂದಿದ್ದ ಇವರ ದೂರದರ್ಶಿತ್ವದ ಗುಣದಿಂದ ಕೆಮಿಕಲ್ ಉದ್ಯಮದಲ್ಲಿ ತನ್ನನ್ನು ತೊಡಗಿಸಿಕೊಂಡು ಕಾರ್ಯಪ್ರವೃತ್ತರಾಗಿ ಸತತ ಪರಿಶ್ರಮ ಹಾಗೂ ಸಕಾರಾತ್ಮಕ ಚಿಂತನೆಯೊಂದಿಗೆ ಮುನ್ನಡೆದು ಬಿ ಕೆ ಬೆಂಝಿಲ್ ಪ್ರೈವೆಟ್ ಲಿಮಿಟೆಡ್ ಹಾಗೂ ಅಕ್ಷಯ್ ಆರ್ಗಾನಿಕ್ ಪ್ರ . ಲಿ ಎನ್ನುವ ಕಂಪೆನಿಗಳ ಮೂಲಕ ಉದ್ಯಮ ಕ್ಷೇತ್ರದಲ್ಲಿ ಯಶಸ್ಸಿನ್ನು ಪಡೆದುಕೊಂಡು ಪ್ರಸಿದ್ಧಿಯನ್ನು ಗಳಿಸಿದ್ದರು. ಉದ್ಯಮದ ಪ್ರಗತಿಯೊಂದಿಗೆ ಸಾಮಾಜಿಕ ಕಾರ್ಯಗಳಲ್ಲಿಯೂ ಆಸಕ್ತಿ ಬೆಳೆಸಿಕೊಂಡು ಯಾವುದೇ ಪ್ರಸಿದ್ಧಿಯನ್ನು…
ಮೂಡುಬಿದಿರೆ: ವಿಜ್ಞಾನವನ್ನು ಕೇವಲ ಪುಸ್ತಕದ ಮೂಲಕ ಅರಿತರೆ ಸಾಲದು ನಮ್ಮ ಸುತ್ತಮುತ್ತಲಿನ ಪರಿಸರದಿಂದಲೂ ಸಾಕಷ್ಟು ವಿಷಯಗಳನ್ನು ತಿಳಿದುಕೊಳ್ಳಬಹುದು ಎಂದು ಆತ್ಮಾ ಸಂಶೋಧನ ಕೇಂದ್ರದ ಮುಖ್ಯ ವೈಜ್ಞಾನಿಕ ಅಧಿಕಾರಿ ಹಾಗೂ ಆಳ್ವಾಸ್ ದ್ರವ್ಯಗುಣ ವಿಭಾಗದ ಪ್ರಾಧ್ಯಪಕ ಡಾ. ಫರ್ಹಾನ್ ಜಮೀರ್ ಹೇಳಿದರು. ಆಳ್ವಾಸ್ ಪದವಿಪೂರ್ವ ಕಾಲೇಜಿನ ಇಕೋ ಕ್ಲಬ್ವತಿಯಿಂದ ಡಾ ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ಹಮ್ಮಿಕೊಂಡ ‘’ಶೈಕ್ಷಣಿಕ ಪರಿಧಿಯಾಚೆಗಿನ ಬದುಕಿನ ಅನ್ವೇಷಣೆ’’ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು . ಶಿಕ್ಷಣದ ಮೂಲ ಉದ್ದೇಶ ಅಂಕಗಳಿಸುದಷ್ಟೆ ಅಲ್ಲ. ತನ್ನಲ್ಲಿ ಹುದುಗಿರುವ ಕೌಶಲಗಳ ವೃದ್ಧಿ ಮುಖ್ಯವಾಗಿರುತ್ತದೆ. ಯಾವುದೇ ವಿಷಯವನ್ನು ಗ್ರಹಿಸಿ ಅರ್ಥಮಾಡಿಕೊಳ್ಳಬೇಕೆ ವಿನಃ ಕಂಠಪಾಠ ಮಾಡುವುದು ಒಳಿತಲ್ಲ. ವಿಜ್ಞಾನದ ವಿಷಯಗಳನ್ನು ನಿಜ ಜೀವನದಲ್ಲಿ ಸಹಸಂಬಂಧಿಸಿ ಗ್ರಹಿಸುವುದು ಮುಖ್ಯ. ಹೆಣ್ಣು ಮಕ್ಕಳು ವಿಷಯವನ್ನು ಇದ್ದ ಹಾಗೆ ಬರೆದರೆ ಗಂಡು ಮಕ್ಕಳು ಅದೇ ವಿಷಯನ್ನು ವಿಭಿನ್ನ ರೀತಿಯಲ್ಲಿ ಬರೆಯುತ್ತಾರೆ. ಇದಕ್ಕೆ ಕಾರಣ ಹುಡುಗರ ಮೆದುಳು ತಾರ್ಕಿಕ ಸ್ಮರಣೆಗೆ ಹೆಚ್ಚಿನ ಒತ್ತು ನೀಡಿದರೆ (ಲಾಜಿಕಲ್ ಮೆಮೊರಿ) ಹಾಗೂ ಹುಡುಗಿಯರ ಮೆದುಳು…
ಮೂಡುಬಿದಿರೆ: ತುಮಕೂರಿನ ಕ್ರಿಯೇಟಿವ್ ಈವೆಂಟ್ಸ್ ಸಂಸ್ಥೆಯ ಆಶ್ರಯದಲ್ಲಿ ಜರುಗಿದ ರಾಜ್ಯ ಮಟ್ಟದ ಆಹ್ವಾನಿತ ಪುರುಷರ ಬಾಲ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಆಳ್ವಾಸ್ ಕಾಲೇಜು ಚಾಂಪಿಯನ್ ಆಗಿದೆ. ಫೈನಲ್ ಮುಖಾಮುಖಿಯಲ್ಲಿ ಆಳ್ವಾಸ್ ಕಾಲೇಜು ತಂಡವು ಸಹ್ಯಾದ್ರಿ ತಂಡವನ್ನು 35-19 ಹಾಗೂ 35- 24ರ ನೇರ ಸೆಟ್ಗಳಿಂದ ಸೋಲಿಸಿತು. ಇದಕ್ಕೂ ಮೊದಲು ಸೆಮಿಫೈನಲ್ನಲ್ಲಿ ಬೆಂಗಳೂರಿನ ಚಿನ್ಮಯಿ ತಂಡವನ್ನು 35-17 ಮತ್ತು 35-19 ಅಂಕಗಳಿಂದ ಸೋಲಿಸಿತ್ತು. ಲೀಗ್ ಹಂತದ ಎಲ್ಲ ಪಂದ್ಯಗಳನ್ನು ಗೆಲ್ಲುವ ಮೂಲಕ ಆಳ್ವಾಸ್ ನಾಕೌಟ್ ಹಂತದ ಸೆಮಿಫೈನಲ್ ಪ್ರವೇಶಿಸಿತ್ತು.
ಮಾನವನಾಗಿ ಹುಟ್ಟಿದ ಮೇಲೆ ಯಾವುದೇ ಕಷ್ಟಗಳು ಬಂದರೂ ಅದನ್ನು ಎದುರಿಸಿ ಬದುಕಬೇಕು. ಸಾಯುವವರೆಗೆ ಬದುಕಬೇಕಾದುದು ಧರ್ಮ. ಯಾರ ಬಳಿಯಲ್ಲಿ ದೇವರು ಕರುಣಿಸಿದ ಎರಡು ಕೈಗಳಿವೆಯೇ ಅವರೇ ಪುಣ್ಯಾತ್ಮರು. ಅಂಥವರು ಏನನ್ನೂ ಸಾಧಿಸಬಹುದು. ಕೈಗಳಿಂದ ದುಡಿದು ಬದುಕಬಹುದು. ಕೈಗಳನ್ನು ತಿನ್ನುವುದಕ್ಕಿಂತ ಹೆಚ್ಚಾಗಿ ದುಡಿಯಲು ಬಳಸಬೇಕು. ಯಾರೂ ದೀನರೂ ಅಲ್ಲ, ದುರ್ಬಲರೂ ಅಲ್ಲ. ಇಂದ್ರಿಯಗಳೇ ಎಲ್ಲ ಬಯಕೆಗಳಿಗೂ ಕರ್ಮ ಗಳಿಗೂ ಮೂಲವಾಗಿದೆ. ಆದರೆ ಮನಸನ್ನು ಹತೋಟಿಗೆ ತಂದು ಧರ್ಮದಲ್ಲಿ ನಡೆದರೆ ನಮ್ಮನ್ನು ಜುಗುಪ್ಸೆ ಕಾಡಲಾರದು. ಯಾವುದೇ ಸಮಸ್ಯೆ, ಜಂಜಾಟಗಳಿಗೆ ಎಂದಿಗೂ ಆತ್ಮಹತ್ಯೆ ಮಾಡಿಕೊಳ್ಳುವುದು ಪರಿಹಾರವಲ್ಲ. ನಮ್ಮ ಜೀವನದ ಯಾವುದಾದರೊಂದು ಕಾಲಘಟ್ಟದಲ್ಲಿ ನಿರಾಸೆ ಕಾಡಿದಾಗ ದೇವರನ್ನು ಧ್ಯಾನಿಸಿ. ಕಷ್ಟಗಳು ಮನುಷ್ಯರಿಗೆ ಬಾರದೆ ಇನ್ಯಾರಿಗೆ ಬರುತ್ತದೆ. ನಮ್ಮ ಜೀವನ ಸಂಜೀವನವಾದರೆ ಅದಕ್ಕಿಂತ ಸಂತೋಷ ಬೇರೆ ಇಲ್ಲ. ಸಂಜೀವನ ಆಗಬೇಕಾದರೆ ಜೀವನವನ್ನು ಸರಿಯಾದ ರೀತಿಯಲ್ಲಿ ನೋಡಬೇಕು. “ಕೈ ಕೆಸರಾದರೆ ಬಾಯಿ ಮೊಸರು’ ಎಂಬ ಗಾದೆ ಸುಳ್ಳಲ್ಲ. ಹೆಚ್ಚು ಸಂಪಾದನೆ ಮಾಡಿದರೆ ಸ್ವಲ್ಪ ಕೂಡಿಸಿಡಿ. ಮುಂದೆ ಕಷ್ಟ ಕಾಲಕ್ಕೆ ಅದು ನೆರವಾಗಬಹುದು.…
ಪೌರಾಣಿಕ ಜಾನಪದ ಕಲೆ ಯಕ್ಷಗಾನವನ್ನು ಕಲಿಸುವ ಮೂಲಕ ಮಕ್ಕಳು ಸಂಸ್ಕಾರ, ಸಂಪ್ರದಾಯದೊಂದಿಗೆ ಬೆಳೆಯಲು ಸಾಧ್ಯ. ಯಕ್ಷಗಾನ ಕಲೆಗೆ ಮಕ್ಕಳು ಸ್ಪಂದಿಸಿದ್ದಲ್ಲಿ ಮುಂದೆ ರಾಷ್ಟೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಕ್ಷಗಾನ ಕಲೆ ರಾರಾಜಿಸಲಿದೆ. ದಿ. ಕರ್ನಿರೆ ಶ್ರೀಧರ ಶೆಟ್ಟಿಯವರ ಯಕ್ಷಗಾನ ಕಲೆಯ ಮೇಲಿನ ಅಭಿಮಾನವನ್ನು ಮಕ್ಕಳ ಯಕ್ಷಗಾನದ ಮೂಲಕ ಆಯೋಜಿಸುತ್ತಾ ಬಂದಿದ್ದೇವೆ. ಅಲ್ಲದೆ ಪರಿಸರದ ದಾನಿಗಳು ಸಕಾರಾತ್ಮಕವಾಗಿ ಸ್ಪಂದಿಸುವ ಮೂಲಕ ಕಾರ್ಯಕ್ರಮದ ಯಶಸ್ವಿಗೆ ಕಾರಣೀಭೂತರಾಗಿದ್ದಾರೆ ಎಂದು ಕಟೀಲು ಶ್ರೀ ಯಕ್ಷಕಲಾ ವೇದಿಕೆ ಚಾರಿಟೇಬಲ್ ಟ್ರಸ್ಟ್ ನ ಕಾರ್ಯಧ್ಯಕ್ಷ ಪಾಂಡು ಎಲ್. ಶೆಟ್ಟಿ ಅಭಿಪ್ರಾಯಪಟ್ಟರು. ವಸಾಯಿ ಪಶ್ಚಿಮದ ದತ್ತಾನಿ ಮಾಲ್ ನ ಆರ್ನಸ್ವರ್ಣ ಬ್ಯಾಂಕ್ವೆಟ್ ಹಾಲ್ ನಲ್ಲಿ ಶ್ರೀ ಕಟೀಲು ಯಕ್ಷಕಲಾ ವೇದಿಕೆ ಚಾರಿಟೇಬಲ್ ಟ್ರಸ್ಟ್ ನ.26 ರಂದು ಆಯೋಜಿಸಿದ್ದ ಐದನೇ ವಾರ್ಷಿಕೋತ್ಸವ ಯಕ್ಷ ಸಂಭ್ರಮದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳಲ್ಲಿ ಯಕ್ಷಗಾನದ ಬಗ್ಗೆ ಅಭಿರುಚಿ ಬೆಳೆಸಲು ಹುಟ್ಟಿಕೊಂಡ ಈ ಸಂಸ್ಥೆಗೆ ಮಕ್ಕಳ ಪಾಲಕರು, ಪೋಷಕರು ಸಹಕರಿಸಬೇಕು. ಆ ಮೂಲಕ ಹೊರನಾಡಿನಲ್ಲಿ ಯಕ್ಷಗಾನವನ್ನು ವಿಶ್ವಗಾನವಾನ್ನಾಗಿ…