Author: admin
ಸೇವಾ ಚೇತನ ಟ್ರಸ್ಟ್ (ರಿ) ಮೂಡುಬಗೆ ಅಂಪಾರು ಇದರ ನಾಲ್ಕನೇ ವಾರ್ಷಿಕೋತ್ಸವದ ಪ್ರಯುಕ್ತ ಜನವರಿ 11ರಂದು ಅಂಪಾರು ಮೂಡುಬಗೆ ಶಾನ್ಕಟ್ಟು ಮೈದಾನದಲ್ಲಿ ನಡೆದ ನಮ್ಮೂರ ಸಂಭ್ರಮ ಕಾರ್ಯಕ್ರಮದಲ್ಲಿ ಸಂಘಟಕ, ಪ್ರಾಧ್ಯಾಪಕ, ಕುಂದಾಪುರ ಯುವ ಬಂಟರ ಸಂಘದ ಸ್ಥಾಪಕ ಅಧ್ಯಕ್ಷ ಡಾ| ಅಂಪಾರು ನಿತ್ಯಾನಂದ ಶೆಟ್ಟಿ ಅವರಿಗೆ 2024ರ ನಮ್ಮೂರ ಕೀರ್ತಿ ಕಳಶ ಪ್ರಶಸ್ತಿ ಪ್ರಧಾನವನ್ನು ಬೆಂಗಳೂರು ಗ್ರಾಮಾಂತರ ಲೋಕಸಭಾ ಸದಸ್ಯ, ಜಯದೇವ ಹೃದ್ರೋಗ ಆಸ್ಪತ್ರೆಯ ಆಡಳಿತ ನಿರ್ದೇಶಕರೂ ಅದ ಡಾ. ಸಿ.ಎನ್. ಮಂಜುನಾಥ್ ಪ್ರಶಸ್ತಿ ಪ್ರದಾನ ಮಾಡಿದರು. ಸೌತ್ ಫೀಲ್ಡ್ ಪೇಂಟ್ಸ್ ನ ಆಡಳಿತ ನಿರ್ದೇಶಕ ಶ್ರೀ ಎಸ್ ಎಸ್ ಹೆಗ್ಡೆ ನಮ್ಮೂರ ಸಂಭ್ರಮವನ್ನು ಉದ್ಘಾಟಿಸಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾಪು ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀ ಗುರ್ಮೆ ಸುರೇಶ್ ಶೆಟ್ಟಿ, ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಗುರುರಾಜ ಶೆಟ್ಟಿ ಗಂಟಿಹೊಳೆ, ಬೆಂಗಳೂರು ಬಂಟರ ಸಂಘದ ಅಧ್ಯಕ್ಷರಾದ ಸಿ.ಎ ಅಶೋಕ ಶೆಟ್ಟಿ, ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಶ್ರೀ…
ಮೂಡುಬಿದಿರೆ: ಮೈಸೂರಿನ ಕುಂಬಾರಕೊಪ್ಪಲ್ನಲ್ಲಿ ನಡೆದ ಕರ್ನಾಟಕ ರಾಜ್ಯ ಸೀನಿಯರ್ ಬಾಲ್ಬ್ಯಾಡ್ಮಿಂಟನ್ ಲೀಗ್ ಚಾಂಪಿಯನ್ಶಿಪ್ನಲ್ಲಿ ಮೂಡುಬಿದಿರೆಯ ಆಳ್ವಾಸ್ ತಂಡ ಚಾಂಪಿಯನ್ಶಿಫ್ ಪಟ್ಟವನ್ನು ಮುಡಿಗೇರಿಸಿಕೊಂಡಿತು. ಸೆಮಿಫೈನಲ್ನಲ್ಲಿ ಆಳ್ವಾಸ್ ತಂಡ ಅಂಬಾರಿ ಮೈಸೂರು ತಂಡವನ್ನು 35-30, 35-23 ನೇರ ಸೆಟ್ಗಳಿಂದ ಸೋಲಿಸಿದರೆ, ಬನಶಂಕರಿ ತಂಡವು ಸೆಮಿಫೈನಲ್ನಲ್ಲಿ ವಿಜಯನಗರ ಸ್ಪೋರ್ಟ್ಸ್ ಕ್ಲಬ್ ತಂಡವನ್ನು 35-31, 22-35 ಹಾಗೂ 36-34 ಸೆಟ್ ಗಳಿಂದ ಸೋಲಿಸಿ, ಫೈನಲ್ ಹಂತಕ್ಕೆ ಅರ್ಹತೆ ಪಡೆದಿತ್ತು. ಅಂತಿಮ ಸುತ್ತಿನಲ್ಲಿ ಆಳ್ವಾಸ್ ತಂಡ ಬೆಂಗಳೂರಿನ ಬನಶಂಕರಿ ತಂಡವನ್ನು 36- 34 ಹಾಗೂ 35-21 ನೇರ ಸೆಟ್ ಗಳಿಂದ ಸೋಲಿಸಿ ಜಯ ಗಳಿಸಿತು. ಟೂರ್ನಿಯ ಉದ್ದಕ್ಕೂ ಉತ್ತಮ ಪ್ರದರ್ಶನ ನೀಡಿದ ಆಳ್ವಾಸ್ನ ಆಕಾಶ್ ‘ಟೂರ್ನಿಯ ಅತ್ಯುತ್ತಮ ಆಟಗಾರ ಪ್ರಶಸ್ತಿ’ಯನ್ನು ಪಡೆದುಕೊಂಡರು. ಜೊತೆಯಲ್ಲಿ ಆಳ್ವಾಸ್ನ ವಿನಯ್ ‘ಬೆಸ್ಟ್ ಸೆಂಟರ್ ಪ್ಲೇಯರ್ ಪ್ರಶಸ್ತಿ’ ಗಳಿಸಿದರು. ವಿಜೇತ ತಂಡವನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ ಆಳ್ವ ಅಭಿನಂದಿಸಿದ್ದಾರೆ.
ಬಂಟರ ಸಂಘ ಮುಂಬಯಿ ಅಂಧೇರಿ ಬಾಂದ್ರಾ ಪ್ರಾದೇಶಿಕ ಸಮಿತಿಯ ವತಿಯಿಂದ ಜನವರಿ 8 ರಿಂದ 10 ರವರೆಗೆ ಇತಿಹಾಸ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಮಹಾರಾಷ್ಟ್ರದ ಸೋಲಾಪುರದಲ್ಲಿರುವ ಪಂಢರಾಪುರ ಹಾಗೂ ಬಾಲಾಜಿ ದೇವಾಲಯ ಯಾತ್ರೆಯನ್ನು ಕೈಗೊಂಡಿತ್ತು. ಪಂಢರಾಪುರದ ವಿಠಲನನ್ನು ಭಕ್ತಿ ಶ್ರದ್ಧೆಯಿಂದ ಪೂಜಿಸುವ, ಅತೀ ಹೆಚ್ಚು ಭಕ್ತರು ಭೇಟಿ ನೀಡುವ ಪ್ರಮುಖ ದೇವಸ್ಥಾನವಾಗಿದೆ. ಪುಣೆಯ ಬಾಲಾಜಿ ದೇವಸ್ಥಾನಕ್ಕೆ ಅದರದ್ದೇ ಆದ ಖ್ಯಾತಿ ಇದೆ. ಈ ಎರಡೂ ಧಾರ್ಮಿಕ ಕ್ಷೇತ್ರದ ಯಾತ್ರೆಯಲ್ಲಿ ಸುಮಾರು 43 ಜನರು ಪಾಲ್ಗೊಂಡು ದರ್ಶನ ಪಡೆದರು. ಅಂಧೇರಿ ಬಾಂದ್ರಾ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ ಸೂರಜ್ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶೋಭಾ ಅಮರನಾಥ ಶೆಟ್ಟಿ ಇವರ ನೇತೃತ್ವದಲ್ಲಿ ಈ ಪ್ರವಾಸವನ್ನು ಏರ್ಪಡಿಸಲಾಗಿತ್ತು. ಮುಂಬಯಿ ಬಂಟರ ಸಂಘದ ಉಪಾಧ್ಯಕ್ಷ ಮಹೇಶ್ ಶೆಟ್ಟಿ, ಅಂಧೇರಿ ಬಾಂದ್ರಾದ ಕನ್ವೀನರ್ ರವೀಂದ್ರ ಶೆಟ್ಟಿ, ಉಪಾಧ್ಯಕ್ಷ ಯಶವಂತ ಶೆಟ್ಟಿ, ಜೊತೆ ಕಾರ್ಯದರ್ಶಿ ಅಮರನಾಥ ಶೆಟ್ಟಿ, ಸಮಾಜಸೇವಾ ಸಮಿತಿಯ ಲಕ್ಷ್ಮಣ್ ಶೆಟ್ಟಿ, ವಿವಾಹ ನೋಂದಣಿ ಸಮಿತಿಯ ಕಾರ್ಯಾಧ್ಯಕ್ಷರಾದ ಕೃಷ್ಣ…
ಎಷ್ಟೋ ದಶಕಗಳಿಂದ ಅನೂರ್ಚಿತವಾಗಿದ್ದ ಪಾತ್ರಾಡಿಗುತ್ತಿನ ಸಾಮಾನಿ ಪಟ್ಟಕ್ಕೆ ಯೋಗ್ಯ ವ್ಯಕ್ತಿಯನ್ನೇ ದೈಯ್ಯಂಗಳು ಆಯ್ಕೆ ಮಾಡಿವೆ. ತುಳುನಾಡಿನ ದೈವಗಳಲ್ಲಿ ಕುರಿಯಾಡಿದಾರ್ ಎನ್ನುವುದು ಅತ್ಯಂತ ವಿಶಿಷ್ಟವಾದ ದೈವ. ಅರಸು ಕುಂಜಿರಾಯರ ಹಾಗೆ ಈ ದೈವವೂ ಕೂಡ ಸಾರ್ವತ್ರಿಕವಾಗಿ ಪ್ರಸಾರಗೊಳ್ಳದೆ ಕೆಲವೇ ಕ್ಷೆತ್ರಗಳಲ್ಲಿ ಆರಾಧನೆ ಪಡೆಯುವ ರಾಜಸಿಕ ಶಕ್ತಿ. ಅಂಬಡಾಡಿ ಬೀಡಿನ ಮಂಜಣ್ಣ ಮಡಯೆರ್, ಬೀರಣ್ಣ ಮಡಯರ್ ಎಂಬ ಇಬ್ಬರು ಬಲ್ಲಾಳರಿಗೆ ಸಹಸ್ರಲಿಂಗೇಶ್ವರ ದೇವರ ಸ್ಥಳದಲ್ಲಿ ನಡೆಯುವ ಮಕೆಜಾತ್ರೆಯಲ್ಲಿ ಈ ದೈವ ಸಿಕ್ಕಿತ್ತಂತೆ. ಅದು ಸತ್ಯದ ಕಾಲ ದೈವಗಳು ಕಣ್ಣಾರೆ ಕಾಣ ಸಿಗುತ್ತಿದ್ದವು. ಕಿವಿಯಾರೆ ಮಾತನಾಡುತ್ತಿದ್ದವು. ಈ ಬಳ್ಳಾಲರು ದೈವ ತಂದು ನಂಬಿದ ಒಂದುವರೆ ವರ್ಷಕ್ಕೆ ಅಳಿದು ಹೋದರು. ಅಂಬಡಾಡಿ ಬಳ್ಳಾಲರು ತಪ್ಪಿದಾಗ ದೈವ ಬೆನ್ನು ಹಿಡಿದಿದ್ದು ಕುದಿಗ್ರಾಮ ಮಾಗಣೆಯ ಬಟ್ಟೆಡುಲ್ಲಾಯರದ್ದು. ಬಟ್ಟೆಡುಲ್ಲಯರೂ ದೈವ ನಂಬಿ ಒಂದುವರೆ ವರ್ಷಕ್ಕೆ ಕಾಲವಾದರು. ಇದು ಬಹಳ ಕಟ್ಟುನಿಟ್ಟಿನ ಕಠೋರ ದೈವವಾಗಿತ್ತು ಎಂದು ಕಾಣುತ್ತದೆ.ಆಗ ಈ ದೈವವನ್ನು ಆರಾಧನೆ ಮಾಡುವ ಧೈರ್ಯ ತೋರಿಸಿದವರು ಕುರಿಯ ಕಡಂಬರು. ಬಾರಿಮಲೆ ಉಕ್ಕುಡದಲ್ಲಿ ದೈವಕ್ಕೊಂದು…
ರಾಕ್ ಸ್ಟಾರ್ ರೂಪೇಶ್ ಶೆಟ್ಟಿ ಅಭಿನಯ ಮತ್ತು ನಿರ್ದೇಶನದಲ್ಲಿ ಅಭಿನಯಿಸಲು ಬಾಲಿವುಡ್ ನಟ ಸುನೀಲ್ ಶೆಟ್ಟಿ ಜನವರಿ 14 ರಂದು ಮಂಗಳೂರಿಗೆ ಆಗಮಿಸುತ್ತಿದ್ದಾರೆ. ಅನೆಕ ವರ್ಷಗಳಿಂದ ತುಳು ಸಿನಿಮಾದಲ್ಲಿ ಅಭಿನಯಿಸಬೇಕೆಂಬ ಇಚ್ಛೆ ಅವರಲ್ಲಿತ್ತು. ಆದರೆ ಅದಕ್ಕೆ ಕಾಲ ಕೂಡಿ ಬರಲಿಲ್ಲ. ಈಗ ರೂಪೇಶ್ ಶೆಟ್ಟಿ ನಿರ್ದೇಶನದ “ಜೈ” ತುಳು ಸಿನಿಮಾದಲ್ಲಿ ಸುನೀಲ್ ಶೆಟ್ಟಿ ಪ್ರಮುಖ ಪಾತ್ರವೊಂದರಲ್ಲಿ ಅಭಿನಯಿಸಲಿದ್ದಾರೆ.ಜನವರಿ 15 ರಿಂದ ಸುನೀಲ್ ಶೆಟ್ಟಿ ಅವರ ಚಿತ್ರೀಕರಣ ನಡೆಯಲಿದೆ. ಇದು ಜೈ ಸಿನಿಮಾಕ್ಕೆ ಕೊನೆಯ ಹಂತದ ಚಿತ್ರೀಕರಣ ಆಗಿದೆ. “ಜೈ” ಸಿನಿಮಾ ತುಳುವಿನಲ್ಲಿ ಬಿಗ್ ಬಜೆಟ್ ನ ಸಿನಿಮಾ ಆಗಿದ್ದು, ಸಿನಿಮಾಕ್ಕೆ ಕರಾವಳಿಯನ್ನು ಕೇಂದ್ರೀಕರಿಸಿ ವಿವಿಧ ಪ್ರದೇಶಗಳಲ್ಲಿ ಚಿತ್ರೀಕರಣ ನಡೆದಿದೆ. ಮುಖ್ಯವಾಗಿ ಕುತ್ತಾರ್, ದಂಬೇಲ್, ಮರಕಡ, ಶೂಲಿನ್ ಪ್ಯಾಲೇಸ್ ಮರವೂರು, ಬೊಂದೇಲ್, ಪಣಂಬೂರು, ಬೈಕಂಪಾಡಿಯಲ್ಲಿ ಚಿತ್ರೀಕರಣ ನಡೆದಿದೆ. ಜಿಲ್ಲೆಯ ಖ್ಯಾತನಾಮ ಕಲಾವಿದರು ಸಿನಿಮಾದಲ್ಲಿದ್ದಾರೆ. ಗಿರಿಗಿಟ್, ಗಮ್ಜಾಲ್, ಸರ್ಕಸ್ ಚಿತ್ರಗಳ ಯಶಸ್ಸಿನ ಬಳಿಕ ರೂಪೇಶ್ ಶೆಟ್ಟಿ ಅವರು ಮತ್ತೊಂದು ಬಿಗ್ ಬಜೆಟ್ ನ ಸಿನಿಮಾಕ್ಕೆ…
ಕ್ರೀಡೆ ಮಾತ್ರವಲ್ಲದೇ, ಸಮಾಜಮುಖಿ ಕೆಲಸಗಳಲ್ಲಿ ಸಂಘಟನೆ ತೊಡಗಿಸಿಕೊಂಡಿರುವುದು ಶ್ಲಾಘನೀಯ : ಕರುಣಾಕರ ಎಂ. ಶೆಟ್ಟಿ ಮಧ್ಯಗುತ್ತು
ವೀರಕೇಸರಿ (ರಿ) ತಡಂಬೈಲ್ ಸುರತ್ಕಲ್ ಇದರ ಆಶ್ರಯದಲ್ಲಿ ಡಾ. ಮಂಜಯ್ಯ ಶೆಟ್ಟಿ ಗುಂಡಿಲಗುತ್ತು ಹಾಗೂ ಮಾಜಿ ಮೇಯರ್ ರಜನಿ ದುಗ್ಗಣ್ಣ ಇವರ ಸ್ಮರಣಾರ್ಥ ಪುರುಷರ ಮುಕ್ತ ರಾಷ್ಟ್ರೀಯ ಮಟ್ಟದ ಆಹ್ವಾನಿತ ಆರು ತಂಡಗಳ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ ವೀರಕೇಸರಿ ಟ್ರೋಫಿ-2025 ಇದರ ಉದ್ಘಾಟನಾ ಸಮಾರಂಭ ಶನಿವಾರ ಸಂಜೆ ಸುರತ್ಕಲ್ ಬಂಟರ ಭವನದ ಬಳಿ ನಡೆಯಿತು. ಕಾರ್ಯಕ್ರಮವನ್ನು ಉದ್ಯಮಿ ಕರುಣಾಕರ ಎಂ ಶೆಟ್ಟಿ ಮಧ್ಯಗುತ್ತು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತಾಡಿದ ಅವರು, “ನನಗೆ ಕ್ರೀಡೆಯಲ್ಲಿ ಬಾಲ್ಯದಿಂದಲೂ ಹೆಚ್ಚಿನ ಆಸಕ್ತಿ. ಹೀಗಾಗಿ ಕ್ರೀಡಾ ಚಟುವಟಿಕೆಗಳಿಗೆ ನನ್ನಿಂದಾದ ಸಹಕಾರ ನೀಡುತ್ತಾ ಬಂದಿದ್ದೇನೆ. ಬರೀ ಕ್ರೀಡೆ ಮಾತ್ರವಲ್ಲದೇ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ವೀರಕೇಸರಿ ಸಂಘಟನೆ ಮುಂದಿನ ದಿನಗಳಲ್ಲಿ ಇನ್ನಷ್ಟು ಸಮಾಜಪರ ಕಾಳಜಿಯೊಂದಿಗೆ ಕೆಲಸ ಮಾಡಲಿ“ ಎಂದರು.ಜಿಲ್ಲಾ ವಾಲಿಬಾಲ್ ಅಸೋಸಿಯೇಷನ್ ಅಧ್ಯಕ್ಷ ಸತೀಶ್ ಮಾತನಾಡಿ, “ರಾಜ್ಯದಲ್ಲಿ ಬೇರೆಲ್ಲೂ ನಮ್ಮ ಜಿಲ್ಲೆಯಲ್ಲಿ ನಡೆಯುವಂತೆ ಶಿಸ್ತುಬದ್ಧವಾಗಿ ವಾಲಿಬಾಲ್ ಪಂದ್ಯಾಟ ನಡೆಯುವುದಿಲ್ಲ. ಕೇರಳದಲ್ಲಿ ಕ್ರೀಡಾಕೂಟಗಳು ಸಾಮಾನ್ಯವಾಗಿ…
ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು ವತಿಯಿಂದ ಯಕ್ಷಧ್ರುವ ಯುವ ಯಕ್ಷಗಾನ ಸ್ಫರ್ಧೆಯು 2025 ರ ಏಪ್ರಿಲ್ ತಿಂಗಳಾಂತ್ಯದಲ್ಲಿ ನಡೆಯಲಿದೆ. ಇದು ತೆಂಕು- ಬಡಗುತಿಟ್ಟುವಿನ ಯುವ ಯಕ್ಷಗಾನ ಕಲಾವಿದರ ಬಯಲಾಟ ಸ್ಪರ್ಧೆಯಾಗಿದ್ದು ಪ್ರಸಕ್ತ ಸ್ಪರ್ಧೆಯಲ್ಲಿ ಮೇಳದಲ್ಲಿ ತಿರುಗಾಟ ಮಾಡಿದ, ತಿರುಗಾಟ ಮಾಡುತ್ತಿರುವ ಕಲಾವಿದರು ಭಾಗವಹಿಸಬಹುದಾಗಿದೆ. ಯಕ್ಷಧ್ರುವ ಪಟ್ಲ ಪ್ರಕಾಶನ ಪ್ರಕಟಿಸಿದ ಶಿಮಂತೂರು, ಬಲಿಪ, ಬೊಟ್ಟಿಕೆರೆ, ಕೊಲೆಕಾಡಿ ಪ್ರಸಂಗ ಸಂಪುಟದ ಪ್ರಸಂಗಗಳನ್ನು ಮಾತ್ರ ಸ್ಪರ್ಧೆಗೆ ಬಳಸಬೇಕಾಗಿದ್ದು ಸ್ಫರ್ಧಾಳುಗಳ ವಯೋಮಿತಿಯು 15ರಿಂದ 25 ವರ್ಷದೊಳಗಿನ ಕಲಾವಿದರಿಗೆ ಮಾತ್ರ ಸೀಮಿತವಾಗಿದೆ. ಹಿಮ್ಮೇಳದ ಕಲಾವಿದರಿಗೆ ವಯೋಮಿತಿಯ ನಿರ್ಬಂಧವಿರದಿದ್ದರೂ ಒಂದು ತಂಡದಲ್ಲಿ ಭಾಗವಹಿಸಿದ ಹಿಮ್ಮೇಳ ಕಲಾವಿದರು ಇನ್ನೊಂದು ತಂಡದಲ್ಲಿ ಭಾಗವಹಿಸಲು ಅವಕಾಶವಿರುವುದಿಲ್ಲ. ಶಾಲೆ, ಕಾಲೇಜು, ಸಂಘ, ಬಳಗದ ತಂಡಗಳಿಗೆ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದ್ದು, ಕನಿಷ್ಠ 10, ಗರಿಷ್ಠ 15 ಕಲಾವಿದರನ್ನು ಒಳಗೊಂಡು ಒಂದು ಗಂಟೆ ಕಾಲಾವಧಿಯಾಗಿದೆ. ಅರ್ಹತಾ ಸುತ್ತು ಮತ್ತು ಅಂತಿಮ ಸುತ್ತು ಎನ್ನುವ ಎರಡು ಸುತ್ತುಗಳಿದ್ದು ಅರ್ಹತಾ ಸುತ್ತಿನಲ್ಲಿ ಆಯ್ಕೆಯಾದ ಎರಡು ತಿಟ್ಟುಗಳ ತಲಾ 4…
ತುಳುಕೂಟ ಉಡುಪಿ(ರಿ). ಮತ್ತು ಕರ್ನಾಟಕ ತುಳುಸಾಹಿತ್ಯ ಅಕಾಡೆಮಿ ಸಹಭಾಗಿತ್ವದಲ್ಲಿ ನಡೆದ 23 ನೇ ವರ್ಷದ ಕೆಮ್ತೂರು ತುಳುನಾಟಕ ಸ್ಪರ್ಧೆ -2025 ಇದರಲ್ಲಿ ನಮ್ಮ ಮುಂಬೈಯ ರಂಗಮಿಲನ ತಂಡ ಸುಮಾರು 8 ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ ಮುಂಬೈ ರಂಗಮಿಲನ ತಂಡ ಸೋಕ್ರೆಟಿಸ್ ನಾಟಕ ಸ್ಪರ್ಧೆಯಲ್ಲಿ ಭಾಗವಹಿಸಿತ್ತು. ಮೂಲ ಆರ್ ಡಿ ಕಾಮತ್, ತುಲುವಿಗೆ ನಾರಾಯಣ ಶೆಟ್ಟಿ ನಂದಲಿಕೆ ಭಾಷಾoತರಿಸಿದ್ದಾರು. ಮನೋಹರ್ ಶೆಟ್ಟಿ ನಂದಲಿಕೆ ಅವರ ನಿರ್ದೇಶನ ಜೊತೆಗೆ ಸಾದಯ, ನವೀನ್ ಇನ್ನ ಬಾಳಿಕೆ,ರಹೀಮ್ ಸಚ್ಚಿರಿಪೇಟೆ ಇವರ ಸಹಕಾರದಿಂದ ನಾಟಕ ಪ್ರದರ್ಶನಗೊಂಡಿತ್ತು.ಪ್ರತಿ ವರುಷದಂತೆ ಈ ವರುಷವೂ ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ನಡೆಯುವ ಉಡುಪಿ ದೊಡ್ಡಣ್ಣ ಶೆಟ್ಟಿ ಸ್ಮರಣಾರ್ಥ ತುಳುಕೂಟ ಉಡುಪಿ (ರಿ ) ಇವರು ಸ್ಪರ್ಧೆಯನ್ನು ಏರ್ಪಡಿಸಿದ್ದರು.ಸೋಕ್ರೋಟಿಸ್ ನಾಟಕದಲ್ಲಿ ಮುಂಬೈ ಕಲಾವಿದರಾದ ಸೂರಿ ಮಾರ್ನಾಡ್, ರವಿ ಹಗ್ದೆ ಹೆರ್ಮುಂಡೆ, ದೀಕ್ಷಾ ದೇವಾಡಿಗ, ಲತೇಶ್ ಪೂಜಾರಿ, ಸಚಿನ್ ಶೇರಿಗಾರ್ , ಕಿಶೋರ್ ಪಿಲಾರ್ ಮತ್ತು ಸುಶೀಲ್ ಅವ್ರು ನಟಿಸಿದ್ದಾರೆ ಜೊತೆಗೆ ಪ್ರಸಾದನದಲ್ಲಿ ಮಂಜುನಾಥ್ ಶೆಟ್ಟಿಗಾರ್, ಬೆಳಕು ಪ್ರವೀಣ್…
ಮುಂಬಯಿ: ಮಹಾರಾಷ್ಟ್ರದ ಪೊಂಜಿ ಸ್ಕೀಮ್ ಆಪರೇಟರುಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಾಜಿ ಶಾಸಕ ಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿ ಶ್ರೀ ದೇವೇಂದ್ರ ಫಡ್ನವೀಸ್ ಜಿ ಅವರಿಗೆ ಪತ್ರ ಬರೆದಿದ್ದಾರೆ. ಬ್ಲಿಸ್ ಕನ್ಸಲ್ಟೆಂಟ್ಗಳು, ಗುಡ್ವಿನ್ ಜ್ಯುವೆಲರ್ಸ್, ಅಂಬರ್ ದಲಾಲ್ ಮತ್ತು ಟೊರೆಸ್ ಜ್ಯುವೆಲರ್ಗಳು ಹೆಚ್ಚಿನ ಆದಾಯದ ಭರವಸೆ ನೀಡುವ ಮೂಲಕ ಅಥವಾ ಸಂಪೂರ್ಣ ಮೋಸದ ಯೋಜನೆಗಳನ್ನು ನಡೆಸುವ ಮೂಲಕ ಸಾವಿರಾರು ಹೂಡಿಕೆದಾರರನ್ನು ಹತ್ತಾರು ಸಾವಿರ ಕೋಟಿಗಳಷ್ಟು ವಂಚಿಸಿದ್ದಾರೆ. ಕೆಲವರ ವಿರುದ್ಧ ಕ್ರಮ ಕೈಗೊಳ್ಳಲಾಗಿದ್ದು, ಕೆಲವರು ಜಾಮೀನಿನ ಮೇಲೆ ಹಾಗೂ ಇನ್ನು ಕೆಲವರು ತಲೆಮರೆಸಿಕೊಂಡಿದ್ದಾರೆ. ಹಲವಾರು ಪೊಂಜಿ ಸ್ಕೀಮ್ ಆಪರೇಟರುಗಳು ಹೂಡಿಕೆದಾರರನ್ನು ವಂಚಿಸುತ್ತಿದ್ದಾರೆ ಅಲ್ಲದೆ ಅವರು ಇನ್ನೂ ಸಕ್ರಿಯರಾಗಿದ್ದಾರೆ ಮತ್ತು ಪೋಲಿಸರು ಕ್ರಮ ತೆಗೆದು ಕೊಳ್ಳಬೇಕಾಗಿದೆ. ಅಸ್ತಿತ್ವದಲ್ಲಿರುವ ಪೊಂಜಿ ಸ್ಕೀಮ್ ಆಪರೇಟರ್ಗಳು ಹೆಚ್ಚು ಅನುಮಾನಾಸ್ಪದ ಹೂಡಿಕೆದಾರರನ್ನು ವಂಚಿಸುವ ಮೊದಲು ತಕ್ಷಣವೇ ಶಿಸ್ತುಕ್ರಮಕ್ಕೆ ನಿರ್ದೇಶನ ನೀಡುವಂತೆ ಹೆಗ್ಡೆ ಅವರು ಮಾನ್ಯ ಸಿಎಂಗೆ ಮನವಿ ಮಾಡಿದ್ದಾರೆ. ಹೆಗ್ಡೆ ಅವರು ಸರ್ಕಾರದ ಸಹಾಯದಿಂದ ಬ್ಯಾಂಕ್ನಲ್ಲಿ ಫ್ರೀಜ್ ಮಾಡಿರುವ ಆಸ್ತಿ…
ವಿಕ್ರೋಲಿ ಪರಿಸರದಲ್ಲಿ ತಮ್ಮ ಪೂರ್ವಜರು, ತುಳು ಕನ್ನಡಿಗರು ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕವಾಗಿ ನಾವೆಲ್ಲರೂ ಒಗ್ಗಟ್ಟಿನಲ್ಲಿದ್ದು ಯಾವುದೇ ಸಮಸ್ಯೆಗಳನ್ನು ಸಂಘಟಿತರಾಗಿ ಎದುರಿಸಲು ದೂರದರ್ಶಿತ್ವದ ಮುಂದಾಲೋಚನೆಯೊಂದಿಗೆ ಕನ್ನಡ ಸಂಘದ ಸ್ಥಾಪನೆಗೆ ನಾಂದಿಯಾಡಿದರು. ಅವರ ಸಾಧನೆ ಸ್ಮರಣೀಯವಾದದು. ಇದೀಗ ನಾವೆಲ್ಲರೂ 37ನೇ ವಾರ್ಷಿಕ ಮಹಾಸಭೆಯಲ್ಲಿ ಇದ್ದೇವೆ. ಯಾವುದೇ ಸಂಘಟನೆ ಪ್ರಗತಿ ಕಾಣಬೇಕಾದರೆ ಆರ್ಥಿಕವಾಗಿ ಸದೃಢರಾಗಿರಬೇಕು. ನಮ್ಮ ಪೂರ್ವಜರು ಸ್ಥಾಪನೆ ಮಾಡಿದ ವೀಕೇಸ್ ಇಂಗ್ಲಿಷ್ ಹೈಸ್ಕೂಲ್ ನಲ್ಲಿ ಇದೀಗ 1,100 ವಿದ್ಯಾರ್ಥಿಗಳು ವಿದ್ಯಾರ್ಜನೆಗೈಯುತ್ತಿದ್ದು ನಮ್ಮ ಸಂಘಕ್ಕೆ ಭೀಮ ಬಲ ಬಂದಂತಾಗಿದೆ. ನಮ್ಮ ಸಂಘದಲ್ಲಿ 425 ಸದಸ್ಯರಿದ್ದರೂ ಮಹಾಸಭೆಗೆ ಹೆಚ್ಚಿನವರು ಗೈರು ಹಾಜರಾಗಿರುವುದು ಶೋಚನೀಯ. ಇಂದು ನನ್ನನ್ನು ಮುಂದಿನ ಅವಧಿಗೆ ಅಧ್ಯಕ್ಷರನ್ನಾಗಿ ಮರು ಆಯ್ಕೆ ಮಾಡಿದ್ದೀರಿ. ತಮ್ಮೆಲ್ಲರಿಗೂ ಕೃತಜ್ಞತೆಗಳು. ವೀಕೇಸ್ ಹೈಸ್ಕೂಲ್ ಹಾಗೂ ಕನ್ನಡ ಸಂಘಕ್ಕೆ ಎಲ್ಲರ ಒಮ್ಮತದ ಸಹಕಾರವಿರಲಿ ಎಂದು ವಿಕ್ರೋಲಿ ಕನ್ನಡ ಸಂಘದ ಅಧ್ಯಕ್ಷ ಉದಯ ಎಲ್. ಶೆಟ್ಟಿ ಪೇಜಾವರ ನುಡಿದರು. ಅವರು ಜನವರಿ 5ರಂದು ವಿಕ್ರೋಲಿ ಪೂರ್ವ ಠಾಗೋರ್ ನಗರದ ವೀಕೇಸ್ ಹೈಸ್ಕೂಲ್ ನ…















