Author: admin
ಪ್ರತಿಷ್ಠಿತ ಸಮಾಜ ಸೇವಾ ಸಂಸ್ಥೆ ಬಂಟರ ಸಂಘ ಮುಂಬಯಿ ಇದರ 2023-26 ರ ಸಾಲಿನ ಮಹಿಳಾ ವಿಭಾಗದ ಪದಾಧಿಕಾರಿಗಳ ಆಯ್ಕೆಯು ಕುರ್ಲಾ ಬಂಟರ ಭವನದಲ್ಲಿ ಡಿ.11 ರಂದು ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ನೇತೃತ್ವದಲ್ಲಿ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ನಡೆಯಿತು. ಸಂಘದ ಮಹಿಳಾ ವಿಭಾಗದ ನೂತನ ಕಾರ್ಯಾಧ್ಯಕ್ಷೆಯಾಗಿ ಚಿತ್ರಾ ರವಿರಾಜ್ ಶೆಟ್ಟಿ, ಉಪ ಕಾರ್ಯಧ್ಯಕ್ಷೆಯಾಗಿ ಕವಿತಾ ಐ. ಆರ್. ಶೆಟ್ಟಿ, ಕಾರ್ಯದರ್ಶಿಯಾಗಿ ಆಶಾ ಸುಧೀರ್ ಶೆಟ್ಟಿ, ಕೋಶಾಧಿಕಾರಿಯಾಗಿ ಸುಚಿತಾ ಕುಸುಮಾಕರ್ ಶೆಟ್ಟಿ, ಜೊತೆ ಕಾರ್ಯದರ್ಶಿಯಾಗಿ ವನಿತಾ ಯೋಗೇಶ್ ನೋಂಡ, ಜೊತೆ ಕೋಶಾಧಿಕಾರಿಯಾಗಿ ಸರೋಜ ಬಾಲಕೃಷ್ಣ ಶೆಟ್ಟಿ ಮುಂಡ್ಕೂರು ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ಅವರಲ್ಲದೆ ಉಪಾಧ್ಯಕ್ಷ ಮಹೇಶ್ ಎಸ್. ಶೆಟ್ಟಿ, ಗೌ. ಪ್ರ. ಕಾರ್ಯದರ್ಶಿ ಡಾ. ಆರ್. ಕೆ. ಶೆಟ್ಟಿ, ಕೋಶಾಧಿಕಾರಿ ಸಿಎ ರಮೇಶ್ ಬಿ. ಶೆಟ್ಟಿ ಇನ್ನ, ಜೊತೆ ಕಾರ್ಯದರ್ಶಿ ಗಿರೀಶ್ ಶೆಟ್ಟಿ ತೆಳ್ಳಾರ್, ಜೊತೆ ಕೋಶಾಧಿಕಾರಿ ಶಶಿಧರ ಶೆಟ್ಟಿ ಇನ್ನಂಜೆ…
ಯಕ್ಷಗಾನವು ಒಂದು ಜನಪದ ಕಲೆಯಾಗಿದೆ. ಇದರಲ್ಲಿ ಹಿಮ್ಮೇಳ ಮುಮ್ಮೇಳ ಕಲಾವಿದರೆಂಬ ೨ ವಿಧಗಳಿವೆ. ಹಿಮ್ಮೇಳದಲ್ಲಿ ಭಾಗವತರು, ಮದ್ದಳೆಗಾರ, ಚೆಂಡೆವಾದಕ, ಚಕ್ರತಾಳ ಮತ್ತು ಶೃತಿ ನುಡಿಸುವವ (ಹಾರ್ಮೋನಿಯಂ) ಕಲಾವಿದರಿದ್ದರೆ, ಮುಮ್ಮೇಳದಲ್ಲಿ ಪಕಡಿ ವೇಷ, ಬಣ್ಣದ ವೇಷ, ಸ್ತ್ರೀ ವೇಷಗಳ ಪಾತ್ರಧಾರಿಗಳಿದ್ದಾರೆ. ಹೀಗೆ ಸಾಹಿತ್ಯ, ಸಂಗೀತ, ನೃತ್ಯ, ವಾದ್ಯ, ಅಭಿನಯ ಚಿತ್ರ ಮತ್ತಿತರ ಹಲವು ಬಗೆಯ ಉಪಾಂಗಗಳಿಂದ ಕೂಡಿದ ಯಕ್ಷಗಾನ ಒಂದು ಸಂಕೀರ್ಣ ಕಲೆ. ಈ ಶ್ರೀಮಂತ ಕಲೆಯಲ್ಲಿ ತಮ್ಮ ಗಾನ ಸುಧೆಯನ್ನು ಹರಿಸುತ್ತಿರುವ ಭಾಗವತರಾದ ದೇವಿಪ್ರಸಾದ್ ಆಳ್ವ ತಲಪಾಡಿಯವರು 20.07.1982 ರಂದು ಶ್ರೀಮತಿ ದೇವಕಿ ಆಳ್ವ ಹಾಗೂ ಆನಂದ ಆಳ್ವ ದಂಪತಿಯರ ಮಗನಾಗಿ ಜನನರಾದರು. ಎಸ್.ಎಸ್.ಎಲ್.ಸಿ ವರೆಗೆ ವಿದ್ಯಾಭ್ಯಾಸ. ಮನೆಯಲ್ಲಿ ಯಕ್ಷಗಾನದ ಬಗ್ಗೆ ಇದ್ದ ಒಲುಮೆ ಆಳ್ವರು ಯಕ್ಷಗಾನಕ್ಕೆ ಬರಲು ಪ್ರೇರಣೆಯಾಯಿತು. ಯಕ್ಷಗಾನದ ಗುರುಗಳು:- ಮಾಂಬಾಡಿ ಸುಬ್ರಹ್ಮಣ್ಯ ಭಟ್, ಅಭಿನವ ವಾಲ್ಮೀಕಿ ಬೊಟ್ಟಿಕೆರೆ ಪುರುಷೋತ್ತಮ ಪೂಂಜ. ನಾಟ್ಯ ಗುರುಗಳು:- ದಯಾನಂದ ಗಟ್ಟಿ ಪಿಲಿಕೂರು, ಹರಿಶ್ಚಂದ್ರ ನಾಯ್ಗ ಮಾಡೂರು. ನೆಚ್ಚಿನ ಭಾಗವತರು:- ಪುರುಷೋತ್ತಮ ಪೂಂಜ,…
ತುಳುಕೂಟ ಫೌಂಡೇಶನ್ (ರಿ) ನಾಲಾಸೋಪಾರ ಹಾಗೂ ಶ್ರೀದೇವಿ ಯಕ್ಷ ಕಲಾ ನಿಲಯ ಇದರ ಜಂಟಿ ಆಶ್ರಯದಲ್ಲಿ ಕಲಾ ಕುಸುಮಗಳ ಕಲಾ ವೈಭವ
ಪ್ರಾಚೀನ ಮತ್ತು ಆದುನಿಕತೆಯ ಸಂಗಮ ಕಾಲದಲ್ಲಿರುವ ನಾವು ಭವ್ಯ ಇತಿಹಾಸ ಪರಂಪರೆ ಮತ್ತು ವೈವಿದ್ಯಮಯ ಹಿನ್ನೆಲೆ ಹೊಂದಿರುವ ತುಳು ಭಾಷೆ ಮತ್ತು ಸಂಸ್ಕೃತಿ ಬಗ್ಗೆ ಕೀಳರಿಮೆ ಹೊಂದದೆ ಅಭಿಮಾನ ಗೌರವದೊಂದಿಗೆ ಉಳಿಸಿಕೊಳ್ಳುವವರು ತುಳು ನಾಡಿನ ನಂಬಿಕೆ – ನಡುವಳಿಕೆಗಳು ಆಚಾರ, ವಿಚಾರಗಳು ಸಂದಿ, ಪಡ್ಡಾನಗಳು, ತಾಳಮದ್ದಳೆ, ಯಕ್ಷಗಾನ, ಜಾನಪದ ಕಲೆಗಳು, ಬಲಿಂದ್ರ ಪೂಜೆ, ಭೂತಾರಾಧನೆ, ನಾಗಾರಾಧನೆ, ಕೃಷಿ ಸಂಸ್ಕೃತಿ ನಮ್ಮ ಸಾರ್ಥಕ ಬದುಕಿಗೆ ಸಾಮರಸ್ಯದ ಮಾರ್ಗದರ್ಶಕವಾಗಿ ಭಾರತೀಯ ಸಂಸ್ಕೃತಿ ನಮ್ಮ ನಾಡಿನ ಜನ ಜೀವನ ದಿನ ನಿತ್ಯದ ನಡೆ ನುಡಿಗಳಲ್ಲಿ ಜಾಗ್ರತವಾಗಿದೆ. ದಕ್ಷಿಣ ಪತದ ಅಂಗವಾದ ಕರ್ನಾಟಕ ಅದರಲ್ಲಿಯೂ ತುಳುನಾಡು ಘನವಾದ ಐತಿಹಾಸಿಕ ಪರಂಪರೆಯನ್ನು ಪಡೆದಿದೆ. ಭಾರತೀಯ ಸಂಸ್ಕೃತಿಯ ಜೀವ ಸತ್ವವಾದ ಭಕ್ತಿ ಹುಟ್ಟಿ ಬೆಳೆದದ್ದೇ ಕನ್ನಡ ನಾಡಿನಲ್ಲಿ ಎಂದು ಪದ್ಮ ಪುರಾಣ ತಿಳಿಸುತ್ತದೆ. ನಮಗೆ ಜನ್ಮ ನೀಡಿದ ತಂದೆ ತಾಯಿಯಂತೆ ನಮ್ಮ ಮಾತೃ ಭಾಷೆ ನಮ್ಮ ಸಂಸ್ಕೃತಿ ರಕ್ಷಿಸುವ ನಮ್ಮ ಕರ್ತವ್ಯ ನಮ್ಮದಾಗಿದೆ. ಇನ್ನೊಬ್ಬರ ಯಶಸ್ಸಿನ ಬಗ್ಗೆ ಚಿಂತಿಸುತ್ತಾ ಅವರಿಗೆ…
ಉಡುಪಿಯ ಕನ್ನರ್ಪಾಡಿಯ ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆಯ ಮಾಣಿಕ್ಯ ಮಹೋತ್ಸವದ ಪ್ರಯುಕ್ತ ಆಯೋಜಿಸಲಾದ “ಸೇಂಟ್ ಮೇರಿಸ್ ರೂಬಿ ರನ್ 2023” ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಂದ ಅಪಾರ ಭಾಗವಹಿಸುವಿಕೆಗೆ ಪಾತ್ರವಾಯಿತು. ಕಿರಿಯರಿಂದ ಹಿಡಿದು ಹಿರಿಯ ನಾಗರೀಕರವರೆಗೂ ಬಹಳಷ್ಟು ಮಂದಿ ಕ್ರೀಡಾ ಸ್ಪೂರ್ತಿಯೊಂದಿಗೆ ಮ್ಯಾರಥಾನ್ನಲ್ಲಿ ಪಾಲ್ಗೊಂಡರು. ಮ್ಯಾರಥಾನ್ ಮುಗಿದ ಮೇಲೆ ಬಹುಮಾನ ವಿತರಣಾ ಸಮಾರಂಭವೂ ನಡೆಯಿತು. ವಿಜೇತರಿಗೆ ಗಣ್ಯರು ನಗದು ಬಹುಮಾನ, ಸ್ಮರಣಿಕೆ, ಪ್ರಮಾಣ ಪತ್ರ ಹಾಗೂ ಟ್ರೋಫಿ ನೀಡಿ ಗೌರವಿಸಿದರು. ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಟೆನಿಸ್ ಬಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರಾದ ಗೌತಮ್ ಶೆಟ್ಟಿ ಕುಂದಾಪುರ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ವಿಜೇತರಿಗೆ ಟ್ರೋಫಿಗಳನ್ನು ಗೌತಮ್ ಶೆಟ್ಟಿ ಅವರಿಂದ ಪ್ರಾಯೋಜಿಸಲಾಯಿತು. ಗೌತಮ್ ಶೆಟ್ಟಿಯವರು ತನ್ನ ವೃತ್ತಿಪರ ಕ್ಯಾರಿಯರ್ ಅನ್ನು ಸೇಂಟ್ ಮೇರಿಸ್ ಉಡುಪಿಯಿಂದ ಪ್ರಾರಂಭಿಸಿದ್ದರು. ಮೊದಲ ಕೆಲಸವನ್ನು ಸೇಂಟ್ ಮೇರಿಸ್ ನಲ್ಲಿ 1997 ಜೂನ್ ನಿಂದ ಆಗಸ್ಟ್ 1998 ರವರೆಗೆ ಮಾಡಿದ್ದರು. 1 ವರ್ಷ 2 ತಿಂಗಳ ಕಾಲ ಕೆಲಸ…
ಯುವ ಬಂಟರ ಸಂಘ ಮೂಡಬಿದರೆ ಇದರ ಯುವ ಬಂಟರ ಸಂಘ ಗ್ರಾಮ ಸಮಿತಿ ದರೆಗುಡ್ಡೆ ರಚನೆಯಾಗಿ ಒಂದು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಧರೆಗುಡ್ಡೆ ನರನ್ಗೊಟ್ಟು ಗುತ್ತು ಗೋಪಾಲ್ ಶೆಟ್ಟಿಯವರ ಮನೆಯಲ್ಲಿ ಗ್ರಾಮ ಸಮಿತಿಯ ವಾರ್ಷಿಕೋತ್ಸವ, ಸಾಧಕರಿಗೆ ಸನ್ಮಾನ ಹಾಗೂ ಪುಸ್ತಕ ವಿತರಣಾ ಕಾರ್ಯಕ್ರಮವನ್ನು ನಡೆಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ.ಎಮ್. ಮೋಹನ್ ಆಳ್ವ, ಯುವ ಮುಖಂಡರಾದ ಮಿಥುನ್ ರೈ, ಕೆಪಿ ಸುಚರಿತ ಶೆಟ್ಟಿ, ಯುವ ಬಂಟರ ಸಂಘ ಮೂಡಬಿದ್ರೆ ಇದರ ಅಧ್ಯಕ್ಷರಾದ ಜಯಕುಮಾರ್ ಶೆಟ್ಟಿ, ಗ್ರಾಮ ಸಮಿತಿ ಅಧ್ಯಕ್ಷರಾದ ಶ್ರೀಮತಿ ಸೌಮ್ಯ ಶೆಟ್ಟಿ, ಅಶೋಕ್ ಶೆಟ್ಟಿ ಬೇಲೋಟ್ಟು, ಆನಂದ ಶೆಟ್ಟಿ, ಗೋಪಾಲ ಶೆಟ್ಟಿ, ರವೀಂದ್ರ ಶೆಟ್ಟಿ ಹಾಗೂ ಯುವ ಬಂಟರ ಸಂಘ ಮೂಡಬಿದ್ರೆ ಇದರ ಪದಾಧಿಕಾರಿಗಳಾದ ಮನೋಜ್ ಕುಮಾರ್ ಶೆಟ್ಟಿ, ಅರುಣ್ ಕುಮಾರ್ ಶೆಟ್ಟಿ, ಸಂದೀಪ್ ಶೆಟ್ಟಿ ಬೆಳುವಾಯಿ, ಶ್ರೀನಿತ್ ಶೆಟ್ಟಿ, ಭರತ್ ಶೆಟ್ಟಿ ಬೆಳುವಾಯಿ, ಆದರ್ಶ ಶೆಟ್ಟಿ, ದೀಪಕ್ ಶೆಟ್ಟಿ, ಸುಕುಮಾರ್ ಶೆಟ್ಟಿ, ಶೃತಿ…
ಪೆರ್ಡೂರು ಬಂಟರ ಸಂಘದ ವ್ಯಾಪ್ತಿಯ ಸಮಾಜ ಬಾಂಧವರ ಸಹಕಾರ, ದಾನಿಗಳ ನೆರವಿನೊಂದಿಗೆ ಗ್ರಾಮೀಣ ಪ್ರದೇಶ ಪೆರ್ಡೂರಿನಲ್ಲಿ ನಗರ ಪ್ರದೇಶದ ಸೌಲಭ್ಯ ಹೊಂದಿರುವ ಅತ್ಯಾಕರ್ಷಕ ವಿನ್ಯಾಸದ ಅತ್ಯಾಧುನಿಕ ಸೌಲಭ್ಯದ ಬಂಟರ ಸಮುದಾಯ ಭವನ ಫೆ. 11ರಂದು ಲೋಕಾರ್ಪಣೆಗೊಳ್ಳಲಿದ್ದು ಎಲ್ಲರೂ ಪಾಲ್ಗೊಳ್ಳಿ ಎಂದು ಪೆರ್ಡೂರು ಬಂಟರ ಸಂಘದ ಅಧ್ಯಕ್ಷ ಶಾಂತಾರಾಮ ಸೂಡ ಕೆ. ಹೇಳಿದರು. ಅವರು ಪೆರ್ಡೂರು ಬಂಟರ ಸಂಘದ ಸಭಾಂಗಣದಲ್ಲಿ ಶ್ರೀಮತಿ ಸರ್ವಾಣಿ ಪಳ್ಳಿ ಶ್ರೀನಿವಾಸ ಹೆಗ್ಡೆ ಬಂಟರ ಸಮುದಾಯ ಭವನದ ಉದ್ಘಾಟನೆಯ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಫೆ. 11ರಂದು ಗಣ್ಯರ ಉಪಸ್ಥಿತಿಯಲ್ಲಿ ದಿನವಿಡೀ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಮುದಾಯ ಭವನ ಲೋಕಾರ್ಪಣೆಗೊಳ್ಳಲಿದೆ. ಸಭಾಂಗಣವು ಸಹಸ್ರಾರು ಸಂಖ್ಯೆಯ ಜನರನ್ನು ಸೇರಿಸಿ ಸಮಾರಂಭ ಆಚರಿಸಲು ಯೋಗ್ಯವಾಗಿದೆ. ಜತೆಗೆ ವಾಹನ ನಿಲುಗಡೆಗೆ ವಿಶಾಲ ವ್ಯವಸ್ಥೆ ಇದೆ ಎಂದರು. ಸಂಘದ ಕೋಶಾಧಿಕಾರಿ ಪ್ರಮೋದ್ ರೈ ಪಳಜೆ, ಉಪಾಧ್ಯಕ್ಷ ಮಹೇಶ್ ಶೆಟ್ಟಿ ಪೈಬೆಟ್ಟು, ಸುಧಾಕರ ಶೆಟ್ಟಿ ಸಾಯಿಷಾ, ಸುರೇಶ್ ಹೆಗ್ಡೆ ಪಳಜೆ ಕಟ್ಟ,…
ಹೌದು, ಬಂಟರ ಹುಡುಗಿಯರು ನಮ್ಮ ಬಂಟ ಜಾತಿ ಬಿಟ್ಟು ಬೇರೆ ಜಾತಿಯೊಟ್ಟಿಗೆ ಮದುವೆ ಆದರೇ…? ಆ ಹೆಣ್ಣು ಶಾಶ್ವತವಾಗಿ ಕೊನೆ ತನಕ ಸಂಸಾರ ಮಾಡುವ ಸುಖ ಜೀವನ ಬಹಳ ವಿರಳ…! ಕಡೆಗೆ ಅದು ವಿವಾಹ ವಿಚ್ಚೇದನದಲ್ಲಿ ಅಂತ್ಯ ಕಾಣುವುದೇ ಹೆಚ್ಚು…!! ಕಾರಣ ಯಾವತ್ತೂ ಬಂಟ ಹುಡುಗಿಯರಲ್ಲಿ ಮತ್ತೊಬ್ಬ ಸಂಸಾರ ಮಾಡಲಾರ…! ಇದು ಸಿರಿ ಶಾಪವೇ ಅಥವಾ ಬಂಟರ ರಕ್ತ ಗುಣವೇ ಎಂಬುದು ಸೋಜಿಗ…! ಬಂಟ ಹೆಣ್ಣಿನ ಮನಸ್ಸಿನ ಆಗುಹೋಗುಗಳನ್ನು ಅರ್ಥ ಮಾಡಿ, ಅವಳಿಗೆ ಬೇಕಾದಲ್ಲಿ ಗುದ್ದು ಕೊಟ್ಟು ಮತ್ತೆ ಮುದ್ದು ಮಾಡಿ ಕೊನೆಗೆ ಮೋಹದ ಮದ್ದು ಕೊಡಲು ಗೊತ್ತಿದ್ದವರೇ ಬಂಟ ಪುರುಷರು. ಮದ ತುಂಬಿದ ಸಲಗವನ್ನು ಮಾವುತ ಹೇಗೆ ಹತೋಟಿಗೆ ತರುತ್ತಾನೋ ಹಾಗೆಯೇ ಅಹಂ ಇದ್ದ ಬಂಟ ಹೆಣ್ಣನ್ನು ಪಳಗಿಸಲು ಬಂಟ ಪುರುಷರಿಗೆ ಮಾತ್ರ ಗೊತ್ತಿರುವುದು ! ಉದಾಹರಣೆಗೆ ಸಕಲ ಐಶ್ವರ್ಯ ಸುಖ ಶಾಂತಿ ಇದ್ದರೂ ಐಶ್ವರ್ಯ ರೈ ಬಚ್ಚನ್ ಕುಟುಂಬಕ್ಕೆ ಬೇಡವಾದ ಸೊಸೆಯಾದಳು… ! ಸಕಲ ಗುಣವಂತೆಯಾಗಿಯೂ ಐಶ್ವರ್ಯ ಹೀಗಾಗಲೂ…
ಮೆದುಳು ಒಂದು ಕಡೆ ಎಳೆಯುತ್ತದೆ, ಹೃದಯ ಇನ್ನೊಂದು ಕಡೆಗೆ ಸೆಳೆಯುತ್ತದೆ, ಗೊಂದಲವೋ ಗೊಂದಲ ಎಂದು ಯಾರಾದರೂ ಹೇಳುವುದನ್ನು ನೀವು ಕೇಳಿರಬಹುದು. ತಲೆಯ “ಆಲೋಚನೆ”ಗಳು ಬೇರೆ, ಹೃದಯದ “ಭಾವನೆ”ಗಳು ಬೇರೆ ಎನ್ನುವುದು ಅವರ ಮಾತಿನ ಅರ್ಥ. ನಾವೂ ಇಂತಹ ಸನ್ನಿವೇಶಗಳನ್ನು ಅನುಭವಿಸಿದವರೇ. ಆದರೆ ನಿಜ ಹಾಗಿಲ್ಲ. ಒಬ್ಬ ವ್ಯಕ್ತಿ ಸಂಪೂರ್ಣವಾಗಿ ಒಂದು, ಒಬ್ಬ. ಹೃದಯ ಮತ್ತು ಮೆದುಳು ಪ್ರತ್ಯೇಕವಲ್ಲ, ನಾವು ನೀವು ಇಡಿಯಾಗಿ ಒಂದು ಅಸ್ತಿತ್ವ. ಇದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕಾದರೆ ನಾವು “ಮೆದುಳು” ಮತ್ತು “ಹೃದಯ” ಎಂದು ಕರೆಯುವುದು ಯಾವುದನ್ನು ಎಂಬುದನ್ನು ತಿಳಿದುಕೊಳ್ಳಬೇಕು. ನಾವು ಸಾಮಾನ್ಯವಾಗಿ ಆಲೋ ಚನೆಗಳನ್ನು ಮೆದುಳಿಗೆ ಲಗಾವುಗೊಳಿಸುತ್ತೇವೆ, ಭಾವನೆಗಳನ್ನು ಹೃದಯಕ್ಕೆ ಲಗತ್ತಿಸುತ್ತೇವೆ. ಆದರೆ ಸರಿಯಾಗಿ ಆಳವಾಗಿ ಗಮನಿಸಿ ನೋಡಿ, ನಾವು ಆಲೋಚಿಸಿದಂತೆ ನಮ್ಮ ಭಾವನೆಗಳು ಇರುತ್ತವೆ. ಕೆಲವೊಮ್ಮೆ ನಮ್ಮ ಭಾವನೆಗಳಿಗೆ ತಕ್ಕುದಾಗಿ ಆಲೋಚನೆಗಳೂ ಇರುತ್ತವೆ. ಹೀಗಾಗಿಯೇ ಆಲೋಚನೆ ಮತ್ತು ಭಾವನೆ ಎರಡೂ ಮನೋಮಯ ಕೋಶದ ಭಾಗ ಎಂದು ಯೋಗಶಾಸ್ತ್ರವು ಪರಿಗಣಿಸುವುದು. “ಮನಸ್ಸು” ಎಂದು ನಾವು ಹೇಳುವುದು ಆಲೋಚನೆಯ…
ಮೂಡುಬಿದಿರೆ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಸಂಸ್ಥೆ, ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆ ಹಾಗೂ ಮೂಡಬಿದಿರೆ ಸ್ಥಳೀಯ ಸಂಸ್ಥೆಯ ಸಹಭಾಗಿತ್ವದಲ್ಲಿ ಮೂಡಬಿದಿರೆಯ ಸ್ಕೌಟ್ಸ್ ಮತ್ತು ಗೈಡ್ಸ್ ಕನ್ನಡ ಭವನದಲ್ಲಿ ಗುರುವಾರ 43 ನೇ ರಾಜ್ಯ ಮಟ್ಟದ ಕಬ್ಸ್ – ಬುಲ್ಬುಲ್ಸ್ ಉತ್ಸವ ಸಮಾರೋಪ ಸಮಾರಂಭ ನಡೆಯಿತು. ಸ್ಕೌಟ್ಸ್ ಮತ್ತು ಗೈಡ್ಸ್ ಭಾರತದ ಕರ್ನಾಟಕ ಮುಖ್ಯ ಆಯುಕ್ತ ಪಿ.ಜಿ.ಆರ್ ಸಿಂಧ್ಯಾ ಮಾತನಾಡಿ, ಡಾ.ಎಂ. ಮೋಹನ ಆಳ್ವ ಅವರು ಜಾತಿ ಮತದ ಭೇದ ಭಾವಗಳನ್ನು ದೂರವಿರಿಸಿ ತಾನು ಬೆಳೆಯುವ ಜೊತೆಗೆ ಸರ್ವರನ್ನು ಬೆಳೆಸಿದವರು. ‘ಜಾಂಬೂರಿ’ಯಂತಹ ಅಂತರ ರಾಷ್ಟ್ರೀಯ ಕಾರ್ಯಕ್ರಮವನ್ನು ಅದ್ವಿತೀಯ ಎಂಬಂತೆ ನಡೆಸಿದ್ದಾರೆ ಎಂದು ಶ್ಲಾಘಿಸಿದರು. ಮೂಡುಬಿದಿರೆಯನ್ನು ವಿದ್ಯಾಕಾಶಿ, ಸ್ಕೌಟ್ಸ್ ಗೈಡ್ಸ್ ಕಾಶಿಯನ್ನಾಗಿ ಬೆಳೆಸಿದ್ದಾರೆ. ವಿದ್ಯಾರ್ಥಿಗಳು ಈ ತರಬೇತಿಯಿಂದ ಶಿಸ್ತು ಸಂಯಮಗಳನ್ನು ಕಲಿತುಕೊಳ್ಳಬೇಕು ಎಂದರು. ಸಮಾಜದಲ್ಲಿರುವ ಅತಿದೊಡ್ಡ ಸಮಸ್ಯೆ ಧಾರ್ಮಿಕ ಒಡಕು. ಯುವಜನತೆ ಧರ್ಮಾಂದತೆ ಮುಕ್ತರಾಗಬೇಕು ಎಂದರು. ವಿದ್ಯಾರ್ಥಿಗಳು ಕೇವಲ ಪುಸ್ತಕದ ಹುಳುವಾಗಿರದೇ, ಸಂಸ್ಕøತಿ, ಕಲೆ, ನಾಯಕತ್ವದ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.…
ಶ್ರೀ ಬ್ರಹ್ಮಲಿಂಗೇಶ್ವರ ಕ್ಷೇತ್ರ ಕಣಾಂಜಾರು ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಸಭೆಯು ಮುಂಬಯಿಯ ತುಂಗಾ ಇಂಟರ್ ನ್ಯಾಷನಲ್ ಹೊಟೇಲಿನ ಸಭಾಂಗಣದಲ್ಲಿ ಜರುಗಿತು. ಅಧ್ಯಕ್ಷ ಸ್ಥಾನವನ್ನು ಡಾ. ವೈ. ಎಸ್. ಹೆಗ್ಡೆಯವರು ವಹಿಸಿದ್ದರು. ವೇದಿಕೆಯಲ್ಲಿ ದೇವಸ್ಥಾನದ ಮೊಕ್ತೇಸರರಾದ ಶ್ರೀ ಸುಧೀರ್ ಹೆಗ್ಡೆ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಶ್ರೀ ವಿಕ್ರಂ ಹೆಗ್ಡೆ, ತುಂಗಾ ಇಂಟರ್ ನ್ಯಾಶನಲ್ ಹೊಟೇಲಿನ ಆಡಳಿತ ನಿರ್ದೇಶಕರಾದ ಶ್ರೀಮತಿ ರಂಜನಿ ಸುಧಾಕರ್ ಹೆಗ್ಡೆ ದಂಪತಿಯವರು, ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರಾದ ಶ್ರೀ. ಬಿ. ಎನ್. ಪೂಜಾರಿಯವರು, ಬಹುಭಾಷಾ ನಟಿ ಪೂಜಾ ಹೆಗ್ಡೆಯವರ ತಂದೆ ಶ್ರೀ ಮಂಜುನಾಥ ಹೆಗ್ಡೆ ಕಣಾಂಜಾರು, ಮಹಿಷಮರ್ದಿನಿ ದೇವಸ್ಥಾನದ ಶ್ರೀ ಪ್ರದೀಪ್ ಶೆಟ್ಟಿ, ಡಾ.ಅಂಬರೀಷ್ ಹೆಗ್ಡೆ ಇವರು ಆಸೀನರಾಗಿದ್ದರು. ಕಾರ್ಯಕ್ರಮವನ್ನು ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ ಶ್ರೀ ಶಿವಪ್ರಸಾದ್ ಹೆಗ್ಡೆ ಇವರು ನಡೆಸಿಕೊಟ್ಟರು. ಸಭೆಯಲ್ಲಿ ದಾನಿಗಳಾದ ತ್ರಿವೇಣಿ ಕನ್ಸಲ್ಟೆಂಟ್ ಇದರ ಮೇನೇಜಿಂಗ್ ಡೈರೆಕ್ಟರ್ ಶ್ರೀ ಎನ್.ಬಿ.ಶೆಟ್ಟಿ, ದಯಾನಂದ ಹೆಗ್ಡೆ ಪಣಿಯೂರು, ಜಿತೇಂದ್ರ ಶೆಟ್ಟಿ ಎರ್ಮಾಳು, ಭರತ್ ಶೆಟ್ಟಿ ಶಾಂತಿ ಬೆಟ್ಟು, ಉದಯ್ ಶೆಟ್ಟಿ…