Author: admin

ಸುಂದರ ಬದುಕು ಪ್ರತಿಯೊಬ್ಬರ ಕನಸಾಗಿದೆ. ಅದನ್ನು ಸಾರ್ಥಕಗೊಳಿಸುವುದು ಅವರವರ ಕೈಯಲ್ಲಿದೆ. ಆ ಕನಸು ನನಸಾಗಬೇಕಾದರೆ ನಮ್ಮನ್ನು ಚಿಂತೆ, ಖೇದ, ದುಗುಡದಂತಹ ಋಣಾತ್ಮಕ ಭಾವಗಳು ಬಾಧಿಸಬಾರದು. ಪ್ರತಿಯೊಬ್ಬರಿಗೂ ಅವರದೇ ಆದ ಭಾವನಾ ಲೋಕವಿರುವುದರಿಂದ ಆಸೆಗಳು, ಆಚಾರ- ವಿಚಾರಗಳು, ಕಾರ್ಯ ವೈಖರಿಗಳು ಒಬ್ಬರಿಂದ ಒಬ್ಬರಿಗೆ ವಿಭಿನ್ನವಾಗಿರುತ್ತವೆ. ನಮ್ಮ ಖುಷಿ, ನೆಮ್ಮದಿ, ದುಃಖಗಳೆಲ್ಲವೂ ಸುತ್ತಲಿನ ಜನರು, ಪರಿಸ್ಥಿತಿಗಳನ್ನು ಅವಲಂಬಿಸಿರುತ್ತವೆ. ಹೀಗಾಗಿ ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳಲು ಪ್ರಯತ್ನಿಸಬೇಕು. ಕುಟುಂಬದ ಸದಸ್ಯರು, ಸಹಪಾಠಿಗಳು, ಸಹೋದ್ಯೋಗಿಗಳು ಮತ್ತು ನೆರೆಕರೆಯವರ ಜತೆ ಉತ್ತಮ ಒಡನಾಟ ಹೊಂದುವುದರಿಂದ ನಾವು ಸಂತೋಷವಾಗಿ ರುತ್ತೇವೆ. ಇವರೆಲ್ಲರೊಂದಿಗೆ ಉತ್ತಮ ಸಂಬಂಧ ಹೊಂದಿಲ್ಲದಿದ್ದರೆ ಮನಸ್ಸು ನೆಮ್ಮದಿಯಿಂದ ಇರುವುದಿಲ್ಲ. ಪರಸ್ಪರರಲ್ಲಿ ಸಮಾನ ಹಿತಾಸಕ್ತಿಗಳು, ಆಲೋಚನೆಗಳು, ಭಾವನೆಗಳು ಬಾಂಧವ್ಯವನ್ನು ಗಟ್ಟಿಗೊಳಿಸುತ್ತದೆ. ಹಾಗಾಗಬೇಕಾದರೆ ಇನ್ನೊಬ್ಬರ ಭಾವನೆಗಳಿಗೆ ಬೆಲೆ ನೀಡಿ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳಬೇಕು. ಬಾಂಧವ್ಯ ಗಟ್ಟಿಯಾದಂತೆ ಅವರ ಬಗ್ಗೆ ನಮ್ಮಲ್ಲಿ ನಂಬಿಕೆ ಮೂಡಿ ವಿಶ್ವಾಸ ಹೆಚ್ಚುತ್ತದೆ. ಇದರಿಂದ ನಮ್ಮಲ್ಲಿ ಸಹಜವಾಗಿ ಧೈರ್ಯದ ಮನೋಭಾವ ಮೂಡಿ ಎಂಥ ಪರಿಸ್ಥಿತಿಯನ್ನು ಎದುರಿಸಬಲ್ಲೆವು ಎಂಬ ಛಾತಿ…

Read More

ಬಂಟರ ಸಂಘ ಪುಣೆ ಇದರ ಯುವ ವಿಭಾಗದ ವತಿಯಿಂದ ಬಂಟ ಸಮಾಜ ಬಾಂಧವರಿಗಾಗಿ ಬಂಟ್ಸ್ ಬಾಕ್ಸ್ ಕ್ರಿಕೆಟ್ ಲೀಗ್ ಸೀಸನ್ 3 ರ ಬಾಕ್ಸ್ ಕ್ರಿಕೆಟ್ ಪಂದ್ಯಾಟವು ಜ 13 ರಂದು ಗ್ರೀನ್‌ ಬಾಕ್ಸ್ ಟರ್ಫ್, ಬಂಡಾರ್ಕರ್ ಇನ್ಸ್ಟಿಟ್ಯೂಟ್, ಲಾ ಕಾಲೇಜು ರೋಡ್ ಪುಣೆ ಇಲ್ಲಿ ಜರಗಿತು. ಪುಣೆ ಬಂಟರ ಸಂಘದ ಯುವ ವಿಬಾಗದ ಕಾರ್ಯಾಧ್ಯಕ್ಷ ಉದಯ್ ಜೆ ಶೆಟ್ಟಿ ಮತ್ತು ಯುವ ಸಮಿತಿಯ ನೇತೃತ್ವದಲ್ಲಿ ನಡೆದ ಈ ಬಾಕ್ಸ್ ಕ್ರಿಕೆಟ್ ಪಂದ್ಯಾಟಕ್ಕೆ ಮುಖ್ಯ ಅತಿಥಿಗಳಾಗಿ ಅಗಮೀಸಿದ್ದ ಪುಣೆ ಕನ್ನಡ ಸಂಘದ ಅಧ್ಯಕ್ಷ ಶ್ರೀ ಕುಶಾಲ್ ಹೆಗ್ಡೆ, ಗೌರವ ಅತಿಥಿಗಳಾದ ಪುಣೆ ಬಂಟರ ಸಂಘದ ಅಧ್ಯಕ್ಷ ಶ್ರೀ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆ ಉಪಸ್ಥಿತರಿದ್ದು ಪಂದ್ಯಾಟವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಪುಣೆ ಬಂಟರ ಸಂಘದ ಪ್ರಮುಖರಾದ ಚಂದ್ರಹಾಸ್ ಶೆಟ್ಟಿ ಎರ್ಮಾಳ್, ಪ್ರವೀಣ್ ಶೆಟ್ಟಿ ಪುತ್ತೂರು, ಅಜಿತ್ ಹೆಗ್ಡೆ, ಸುಲತಾ ಎಸ್.ಶೆಟ್ಟಿ, ಶಮ್ಮಿ ಎ ಹೆಗ್ಡೆ, ದಿನೇಶ್…

Read More

ಜೀವನದಲ್ಲಿ ಉನ್ನತ ಧ್ಯೇಯ, ಕಠಿಣ ಪರಿಶ್ರಮ, ಸಾಧನೆಯ ಛಲ, ನಡೆ ನುಡಿಯಲ್ಲಿ ಪ್ರಾಮಾಣಿಕತೆ ಇವುಗಳು ಜೀವನದ ಯಶಸ್ಸಿನ ಗುಟ್ಟು ಎನ್ನುವುದು ಸರ್ವೇಸಾಮಾನ್ಯವಾದ ಮಾತು. ಆದರೆ ಇದೆಲ್ಲವನ್ನೂ ಜೀವನದಲ್ಲಿ ಅನುಸಂಧಾನ ಮಾಡಿಕೊಂಡು, ಮುನ್ನಡೆದು ಸಾಧಕರಾಗಿ ಕಾಣ ಸಿಗುವವರು ವಿರಳ. ಇಂತವರ ಸಾಲಿನಲ್ಲಿ ವಿಶೇಷವಾಗಿ ಕಂಡುಬರುವ ಭಿವಂಡಿ ಬದ್ಲಾಪುರ ಪರಿಸರದಲ್ಲಿ ವೃತ್ತಿಯಲ್ಲಿ ನಿಪುಣರಾಗಿ, ಸಮಾಜ ಸೇವಕರಾಗಿ, ಜನಾನುರಾಗಿಯಾಗಿ ತುಳು ಕನ್ನಡಿಗರಲ್ಲಿ ಅನ್ಯೋನ್ಯತೆಯೊಂದಿಗೆ ಬೆರೆತು ಬಾಳುವ, ಯಾವುದೇ ಪ್ರಚಾರವನ್ನು ಬಯಸದೇ, ಸದ್ದಿಲ್ಲದೇ ಸಮಾಜಸೇವೆ ಮಾಡುತ್ತಿರುವ ವ್ಯಕ್ತಿತ್ವವೆಂದರೆ ಅದು ಸುಭೋದ್ ಭಂಡಾರಿಯವರು. ಎಡಗೈಯಲ್ಲಿ ನೀಡಿದ್ದು ಬಲಗೈಗೆ ತಿಳಿಯಬಾರದು ಎನ್ನುವ ಮನೋಧರ್ಮವನ್ನು ರೂಢಿಸಿಕೊಂಡು ಯಾರೇ ನೆರವಿಗೆ ಬಂದರೂ ತನ್ನಿಂದಾದ ಸಹಾಯ ಮಾಡಿ ಪರೋಪಕಾರ ಧರ್ಮದಲ್ಲಿ ಧನ್ಯತೆಯನ್ನು ಕಾಣುವ ಇವರ ಮುಖದಲ್ಲಿ ಸದಾ ಮಂದಹಾಸ, ಮೃದು ಮಾತು ಎಲ್ಲರನ್ನೂ ಸ್ನೇಹಭಾವದಿಂದ ಕಾಣುವ ಇವರ ಸ್ವಭಾವ ಎಂತಹವರನ್ನೂ ಆಕರ್ಷಿಸದೆ ಇರದು. ಶ್ರೀ ಸುಭೋದ್ ಭಂಡಾರಿಯವರು ತಮ್ಮ ವೃತ್ತಿಯನ್ನು ಹೋಟೆಲಿನಲ್ಲಿ ಪ್ರಾರಂಭಿಸಿ, ಪ್ರಸ್ತುತ ಹೋಟೆಲು ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ. ಮುಂಬಯಿ ಬಂಟರ ಸಂಘದ ಭಿವಂಡಿ…

Read More

ಸೋಲಿನ ಮೂಲಕವೇ ಗೆಲುವಿನ ಮೆಟ್ಟಿಲು ಸುಲಭವಾಗುತ್ತದೆ. ನಾನು ಕೂಡ ಬಹಳಷ್ಟು ಸ್ಪರ್ಧೆಗಳಲ್ಲಿ ಸೋಲು ಕಂಡಿದ್ದೇನೆ. ಆದರೆ ಸೋಲಿಗೆ ಹೆದರಿ ನನ್ನ ಕನಸನ್ನು ಸಾಕಾರ ಮಾಡುವ ಬಗ್ಗೆಯೇ ಯೋಚಿಸುತ್ತಿದ್ದೆ. ಇದರ ಪರಿಣಾಮವೇ ಇಂದಿನ ಫಲಿತಾಂಶ ಎನ್ನುತ್ತಾರೆ ಮಿಸ್ ಇಂಡಿಯಾ ಯುನಿವರ್ಸ್ – 2022 ಆಗಿ ಆಯ್ಕೆಗೊಂಡ ಮಂಗಳೂರು ಮೂಲದ ದಿವಿತಾ ರೈ. ಮಿಸ್ ಯಿನಿವರ್ಸ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ದಿವಿತಾ ರೈ ಅವರಿಗೆ ಬಂಟರ ಯಾನೆ ನಾಡವರ ಮಾತೃ ಸಂಘ ಹಾಗೂ ಶ್ರೀ ರಾಮಕೃಷ್ಣ ವಿದ್ಯಾರ್ಥಿನಿ ವಸತಿ ನಿಲಯದ ಅಮೃತೋತ್ಸವ ಸಮಿತಿ ವತಿಯಿಂದ ಬಂಟ್ಸ್ ಹಾಸ್ಟೆಲ್ ನ ಗೀತಾ ಎಸ್. ಎಂ ಶೆಟ್ಟಿ ಮೆಮೋರಿಯಲ್ ಸಭಾಂಗಣದಲ್ಲಿ ನಡೆದ ಹುಟ್ಟೂರ ಸಮ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಸೋಲು ಸಾಮಾನ್ಯ. ಇದಕ್ಕಾಗಿ ಭಯ ಬೇಡ. ಹಿಂದೆ ಸರಿಯಲೂ ಬಾರದು. ಕನಸುಗಳ ಸಾಕಾರಕ್ಕಾಗಿ ಧೈರ್ಯದಿಂದ ಮುನ್ನುಗ್ಗುವ ಹಾಗೂ ವಿಶ್ವಾಸದಿಂದ ಗುರಿ ಮುಟ್ಟುವ ಮನೋಭಾವ ಬೇಕು. ಬಂಟರ ಸಮಾಜ ಹೋರಾಟದ ಮನೋಭಾವವನ್ನು ಮೈಗೂಡಿಸಿದೆ, ಇದೇ ಸಮುದಾಯದಲ್ಲಿ ಹುಟ್ಟಿದ ನಾನು…

Read More

ಬಂಟರ ಸಂಘ ಮುಂಬಯಿ ಇದರ ನೂತನ ಟ್ರಸ್ಟಿಯಾಗಿ ಸರ್ವಾನುಮತದಿಂದ ನೇಮಕಗೊಂಡಿರುವ ಮಾತೃಭೂಮಿ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಕಾರ್ಯಾಧ್ಯಕ್ಷ ಉಳ್ತೂರು ಮೋಹನ್‌ದಾಸ್ ಶೆಟ್ಟಿಯವರನ್ನು ಸೊಸೈಟಿಯ ಮಾಸಿಕ ಸಭೆಯಲ್ಲಿ ಮಾತೃಭೂಮಿ ಕ್ರೆಡಿಟ್ ಸೊಸೈಟಿಯ ಆಡಳಿತ ಮಂಡಳಿಯ ಉಪ ಕಾರ್ಯಾಧ್ಯಕ್ಷ ಡಾ ಆರ್ ಕೆ ಶೆಟ್ಟಿ, ಗೌರವ ಕಾರ್ಯದರ್ಶಿ ಕಿಶೋರ್ ಕುಮಾರ್ ಕುತ್ಯಾರ್, ಗೌರವ ಕೋಶಾಧಿಕಾರಿ ಸಿಎ ಹರೀಶ್ ಶೆಟ್ಟಿಯವರು ಗೌರವಿಸಿದರು. ಈ ಸಂದರ್ಭದಲ್ಲಿ ಮಾತೃಭೂಮಿ ಸೊಸೈಟಿಯ ನಿರ್ದೇಶಕರಾದ ಮಹೇಶ್ ಶೆಟ್ಟಿ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Read More

ಅಧ್ಯಾತ್ಮಿಕತೆಯೊಂದಿಗೆ ಕೂಡಿ ಬದುಕುವ ಕಲೆ, ಜೀವನ ಮೌಲ್ಯ, ಆದರ್ಶಗಳಿಂದ ಸಂಸ್ಕಾರಯುತವಾದ ಜೀವನ ಸಾಧ್ಯ. ನಮ್ಮ ಪೌರಾಣಿಕ ಹಿನ್ನಲೆಯ ಯಕ್ಷಗಾನದಿಂದ ಭಾಷಾ ಶುದ್ದತಿ, ತತ್ವ ಮತ್ತು ಚರಿತ್ರೆಯನ್ನು ತಿಳಿದಂತೆ ಭಕ್ತಿ ಮತ್ತು ಸಂಸ್ಕಾರ ಪಾಠವನ್ನು ಭಜನೆ ಕಳಿಸುತ್ತದೆ. ಸುಜ್ಞಾನದಿಂದ ಕೂಡಿದ ಉತ್ತಮ ವಿಚಾರಗಳೊಂದಿಗೆ ಮಕ್ಕಳಿಗೆ ಸಂಸ್ಕಾರ, ಧರ್ಮದ ಪ್ರಜ್ಞೆಯನ್ನು ಕಳಿಸುವ ಕಾರ್ಯ ಆಗಬೇಕು. ಅದು ಇಂದು ಇಲ್ಲಿ ಉತ್ತಮ ಕಾರ್ಯ ಸೇವಾ ಬಳಗದಿಂದ ನಡೆದಿದೆ. ಭಾರತದ ಮೂಲ ಕೃಷಿ ಸಂಸ್ಕ್ರತಿಯಿಂದ ಹಳ್ಳಿಯಿಂದ ದೇಶದ ಪ್ರಗತಿಯಾದಂತೆ ಋಷಿ ಪರಂಪರೆಯಿಂದ ಸಂಸ್ಕ್ರತಿ, ಧರ್ಮ ಸಂರಕ್ಷಣೆ ಕಾರ್ಯ ಆಗುತ್ತಿದೆ. ತ್ಯಾಗ ಮತ್ತು ಸೇವೆಯಿಂದ ಸಮಾಜದ ಅಭಿವೃದ್ಧಿ ಸಾದ್ಯ. ಪ್ರತಿಯೊಂದು ಉತ್ತಮ ವಿಚಾರಗಳು ಸಂಸ್ಕಾರಯುತವಾಗಿ ನಡೆದರೆ ಸದೃಡ ಸಮಾಜ ನಿರ್ಮಾಣ ಆಗಬಹುದು ಎಂದು ಒಡಿಯೂರು ಶ್ರೀ ಗುರುದೇವ ಸಂಸ್ಥಾನದ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಜಿಯವರು ಆಶೀರ್ವಚನ ನೀಡಿದರು. ನವೆಂಬರ್ 26 ರಂದು ಪುಣೆಯ ಬಾಣೇರ್ ನಲ್ಲಿರುವ ಬಂಟರ ಭವನದ ಓಣಿಮಜಲು ಜಗನ್ನಾಥ್ ಶೆಟ್ಟಿ ಸಾಂಸ್ಕ್ರತಿಕ ಕೇಂದ್ರದಲ್ಲಿ ಜರಗಿದ ಪುಣೆ…

Read More

ರಾಜ್ಯದ ಅಗ್ರಗಣ್ಯ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿಗಳಲ್ಲೊಂದಾದ ಮಂಗಳೂರಿನ ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ ಓಪರೇಟಿವ್ ಸೊಸೈಟಿಯು, 2023-24ನೇ ಸಾಲಿನ ಅರ್ಧ ವಾರ್ಷಿಕ ಅವಧಿ ದಿನಾಂಕ 30.09.2023ಕ್ಕೆ ರೂ. 900 ಕೋಟಿ ಮೀರಿದ ಒಟ್ಟು ವ್ಯವಹಾರವನ್ನು ದಾಖಲಿಸಿ ಪ್ರಗತಿ ಪಥದಲ್ಲಿ ಯಶಸ್ಸಿನ ಹೊಸ ಮೈಲಿಗಲ್ಲನ್ನು ದಾಟಿದ ಸಾಧನೆ ಮಾಡಿದೆ. ದಿನಾಂಕ30.09.2023ಕ್ಕೆಠೇವಣಾತಿಯು ರೂ.484 ಕೋಟಿ,ಹೊರಬಾಕಿ ಸಾಲ ರೂ.417 ಕೋಟಿ,ಒಟ್ಟು ವ್ಯವಹಾರ ರೂ.901 ಕೋಟಿಯನ್ನು ಮೀರಿದ್ದು ತನ್ನ “Vision 2025”ರರೂ. 1,000 ಕೋಟಿ ಒಟ್ಟು ವ್ಯವಹಾರದ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ದೃಢ ಹೆಜ್ಜೆಯೊಂದಿಗೆ ಮುನ್ನಡೆಯುತ್ತಿದೆ. ಹಿಂದಿನ ಸಾಲಿನ30.09.2022ಕ್ಕೆಹೋಲಿಸಿದಾಗ, ಠೇವಣಾತಿಯು ರೂ. 72 ಕೋಟಿ ಹೆಚ್ಚಳಗೊ0ಡು ಶೇ.18 ರಷ್ಟು ವೃದ್ಧಿಗೊ0ಡಿರುವುದು, ಹೊರಬಾಕಿ ಸಾಲವು ರೂ.75 ಕೋಟಿ ಹೆಚ್ಚಳಗೊ0ಡು ಶೇ.22ರಷ್ಟು ವೃದ್ಧಿಗೊ0ಡಿರುವುದು, ಒಟ್ಟು ವ್ಯವಹಾರವು ರೂ.148 ಕೋಟಿ ಹೆಚ್ಚಳಗೊ0ಡು ಶೇ.20 ರಷ್ಟು ವೃದ್ಧಿಯಾಗಿರುವುದು.ನಿವ್ವಳ ಅನುತ್ಪಾದಕ ಆಸ್ತಿಯು ಕಳೆದ 16 ವರ್ಷಗಳಿಂದ ಶೂನ್ಯ ಪ್ರಮಾಣದಲ್ಲಿರುವುದು.ಸ್ಥಾಪನೆಯಾದಾಗಿನಿಂದಲೂ ಡಿವಿಡೆಂಡ್ ನೀಡುತ್ತಿರುವ ಸಂಸ್ಥೆ, ಕಳೆದ 5ವರ್ಷಗಳಿಂದ ಸದಸ್ಯರಿಗೆ ನಿರಂತರವಾಗಿ ಶೇ. 25 ಡಿವಿಡೆಂಡ್ ನೀಡುತ್ತಿರುವುದು.…

Read More

ಯುವ ಬಂಟರ ಸಂಘ ಕುಂದಾಪುರ ಹಾಗೂ ಡಾ. ಅಂಪಾರು ನಿತ್ಯಾನಂದ ಶೆಟ್ಟಿ. ಹೌದು ಬಂಟ ಸಮಾಜದಲ್ಲಿ ಸಂಚಲನ ಮೂಡಿಸಿರುವ ಸಂಘಟನೆ ಮತ್ತು ಯುವ ನಾಯಕ. ಅವಿಭಜಿತ ಕುಂದಾಪುರ ತಾಲೂಕಿನಲ್ಲಿ ಬಂಟ ಸಮುದಾಯ ವಿಶೇಷ ಸ್ಥಾನಮಾನ ಪಡೆದ ಒಂದು ಸಮುದಾಯ. 2000 ಇಸವಿಯಲ್ಲಿ ಆರಂಭವಾದ ಕುಂದಾಪುರ ಬಂಟರ ಯಾನೆ ನಾಡವರ ಸಂಘದಲ್ಲಿ ಡಾ. ಯಡ್ತರೆ ನರಸಿಂಹ ಶೆಟ್ಟಿ, ಶ್ರೀ ಬಿ. ಅಪ್ಪಣ್ಣ ಹೆಗ್ಡೆ , ಶ್ರೀ ಅರುಣ್ ಕುಮಾರ್ ಶೆಟ್ಟಿ ಅಂತಹ ಹಿರಿಯ ಮುತ್ಸದ್ದಿಗಳು ಅಧ್ಯಕ್ಷರಾಗಿ ಮಹತ್ತರವಾದ ಕೊಡುಗೆಗಳನ್ನು ಈ ಸಮಾಜಕ್ಕೆ ನೀಡಿದವರು. ಅವರ ಮುಂದುವರಿಕೆಯ ಭಾಗವಾಗಿ ಇವತ್ತು ಅಂಪಾರು ಮುಂಚೂಣಿಯಲ್ಲಿ ಇದ್ದಾರೆ. ಇಂದು ಕುಂದಾಪುರ ಬೈಂದೂರು ತಾಲೂಕಿನಲ್ಲಿ ಅತ್ಯಂತ ಪ್ರಭಾವಿ ಯುವ ನಾಯಕನಾಗಿ ಬಂಟ ಸಮುದಾಯದಲ್ಲಿ ಗುರುತಿಸಿಕೊಳ್ಳುತ್ತಿರುವ ಹೆಸರೇ ಡಾ. ಅಂಪಾರು ನಿತ್ಯಾನಂದ ಶೆಟ್ಟಿ. ಬಂಟ ಸಮುದಾಯಕ್ಕೆ ಅವರು ನೀಡಿದ ಸೇವೆಗೆ ಇಡೀ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಅವರ ಹೆಸರು ಗುರುತಿಸಲ್ಪಟ್ಟಿದೆ ಎಂದರೆ ತಪ್ಪಾಗಲಾರದು. ಅವರ ಬದುಕಿನ ದಾರಿಯನ್ನು ನೋಡಿದರೆ ಇಂದಿನ…

Read More

ನಿರಂತರ ಸಮಾಜೋಮುಖಿ ಕಾರ್ಯಗಳನ್ನೇ ತನ್ನ ಉಸಿರಾಗಿಸಿಕೊಂಡ ಪಡುಬಿದ್ರಿಯ ಆದ್ಯಾ ಫೌಂಡೇಷನ್ ವತಿಯಿಂದ ಶ್ರೀಯುತ ರಾಕೇಶ್ ಅಜಿಲ ನೇತೃತ್ವದಲ್ಲಿ ಎರಡು ದಿನಗಳ ಬೃಹತ್ ಉದ್ಯೋಗ ಮೇಳ ಪಡುಬಿದ್ರಿ ಪಾದೆಬೆಟ್ಟು ಸುಬ್ರಹ್ಮಣ್ಯ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು. ಈ ಉದ್ಯೋಗ ಮೇಳದ ಉದ್ಘಾಟನೆಯನ್ನು ಸರಳ ಸಭಾ ಕಾರ್ಯಕ್ರಮದಲ್ಲಿ ಸ್ಥಳೀಯ ಪಾದೆಬೆಟ್ಟು ಸುಬ್ರಹ್ಮಣ್ಯ ದೇವಸ್ಥಾನ ಮೊಕ್ತೇಸರರಾದ ಜಿತೇಂದ್ರ ಶೆಟ್ಟಿಯವರು ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭ ಸ್ಥಳೀಯ ಪ್ರಮುಖರಾದ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಅಶೋಕ ಪೂಜಾರಿ, ಗೀತಾ ಪ್ರಭಾಕರ್, ಶೋಭಾ ಜೆ. ಶೆಟ್ಟಿ, ಸಂದೇಶ್ ಶೆಟ್ಟಿ, ಮಕರಂದ್ ಸಾಲ್ಯಾನ್, ಪತ್ರಕರ್ತ ಸುರೇಶ್ ಎರ್ಮಾಳ್, ನಾಗರಾಜ್ ವರ್ಕಾಡಿ ಉಪಸ್ಥಿತರಿದ್ದರು.

Read More

ಬಂಟ ಸಮಾಜದ ಹೆಮ್ಮೆಯ ಸುಪುತ್ರ ಸರ್ವ ಸಮಾಜದ ಏಳಿಗೆಗೆ ಮಹಾನ್ ಕೊಡುಗೆ ನೀಡಿ ಪ್ರಾತಃ ಸ್ಮರಣೀಯರು ಆಗಿರುವ ಶ್ರೀ ಸುಂದರರಾಮ್ ಶೆಟ್ಟಿಯವರ ನೆನಪಿನಲ್ಲಿ ಸುಂದರ್ ರಾಮ್ ಶೆಟ್ಟಿ ಫ್ಯಾಮಿಲಿ ಟ್ರಸ್ಟ್ ಮತ್ತು ಮುಲ್ಕಿ ಬಂಟರ ಸಂಘ ಜಂಟಿಯಾಗಿ ನೀಡುವ ಸುಂದರರಾಮ್ ಶೆಟ್ಟಿ ಸ್ಮಾರಕ ಪ್ರಶಸ್ತಿಯನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಶ್ರೀ ಐಕಳ ಹರೀಶ್ ಶೆಟ್ಟಿ ಅವರಿಗೆ ಪ್ರದಾನ ಮಾಡಲಾಯಿತು. ಈ ಸಮಾರಂಭವು ಮುಲ್ಕಿ ಬಂಟರ ಸಭಾ ಭವನದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಮುಂಬಯಿ ಬಂಟರ ಸಂಘದ ಅಧ್ಯಕ್ಷರಾದ ಶ್ರೀ ಚಂದ್ರಹಾಸ ಶೆಟ್ಟಿ, ಮಾತೃಭೂಮಿ ಕೋ ಆಪರೇಟಿವ್ ಸೊಸೈಟಿ ಯ ನಿಕಟ ಪೂರ್ವ ಅಧ್ಯಕ್ಷರಾದ ಮುಡ್ಕುರು ಶ್ರೀ ರತ್ನಾಕರ ಶೆಟ್ಟಿ,ಶ್ರೀ ಸುಚರಿತ ಶೆಟ್ಟಿ, ಮುಲ್ಕಿ ಬಪ್ಪನಾಡು ದೇವಸ್ಥಾನದ ಮೊಕ್ತೇಸರ ಶ್ರೀ ಮನೋಹರ್ ಶೆಟ್ಟಿ, ಮುಲ್ಕಿ ಬಂಟರ ಸಂಘದ ಅಧ್ಯಕ್ಷರು ಶ್ರೀಪುರುಷೋತ್ತಮ ಶೆಟ್ಟಿ, ಗೌರವ ಅಧ್ಯಕ್ಷರು ಶ್ರೀ ಸಂತೋಷ್ ಕುಮಾರ್ ಹೆಗ್ಡೆ ಮತ್ತು ಇನ್ನಿತರ ಗಣ್ಯರು ಉಪಸ್ಥಿತರಿದ್ದರು. ಶುಭಾಶಂಸನೆ ಶ್ರೀ ಕುದಿ…

Read More