Author: admin
ಭಾಸ್ಕರ್ ಶೆಟ್ಟಿ (ಅಧ್ಯಕ್ಷ)-ಸವಿತಾ ಸುರೇಶ್ ಶೆಟ್ಟಿ (ಮಹಿಳಾಧ್ಯಕ್ಷೆ) ಮುಂಬಯಿ (ಆರ್ ಬಿ ಐ), ಆ.28: ಕರ್ನಾಟಕ ಕರಾವಳಿಯ ಮುಲ್ಕಿ ಸಮೀಪದ ಕುಬೆವೂರು ಶ್ರೀ ಜಾರಂದಾಯ ಸೇವಾ ಸಮಿತಿ ಮುಂಬಯಿ ಇದರ ವಾರ್ಷಿಕ ಮಹಾಸಭೆಯು ಇಂದಿಲ್ಲಿ ಆದಿತ್ಯವಾರ ಮುಲುಂಡ್ ಪಶ್ಚಿಮದ ಹೊಟೇಲ್ ಸ್ವಾದ್ ಇದರ ಸಭಾಗೃಹದಲ್ಲಿ ಅಡ್ವಕೇಟ್ ರಾಮಣ್ಣ ಎಂ.ಭಂಡಾರಿ ಅಧ್ಯಕ್ಷತೆಯಲ್ಲಿ ಜರುಗಿತು. ಗತವರ್ಷದ ಲೆಕ್ಕಪರಿಶೋಧನೆ ಹಾಗೂ ಅನುಮೋದನೆ, ನೂತನ ಸಮಿತಿಯ ಆಯ್ಕೆ ಪ್ರಕ್ರಿಯೆ, ಮಹಿಳಾ ವಿಭಾಗದ ರಚನೆ ಇನ್ನಿತರ ವಿಷಯಗಳೊಂದಿಗೆ ಸಭೆಯು ನಡೆಸಲ್ಪಟ್ಟಿತು. ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಲಾಗಿದ್ದು ಭಾಸ್ಕರ ಎಸ್.ಶೆಟ್ಟಿ ಅವರನ್ನು ಅಧ್ಯಕ್ಷರನ್ನಾಗಿ ಸಭೆಯು ಪುನಾರಾಯ್ಕೆಗೊಳಿಸಿತು. ಇತರ ಪದಾಧಿಕಾರಿಗಳಾಗಿ ಜಗದೀಶ್ ಎಂ. ಶೆಟ್ಟಿ (ಉಪಾಧ್ಯಕ್ಷ), ಸಂತೋಷ್ ಜೆ.ಭಂಡಾರಿ (ಕಾರ್ಯದರ್ಶಿ), ದಿವಾಕರ ಎಸ್. ಶೆಟ್ಟಿ (ಕೋಶಾಧಿಕಾರಿ), ಶಂಕರ ಎನ್.ಶೆಟ್ಟಿ (ಉಪ ಕಾರ್ಯದರ್ಶಿ), ಶ್ರೀಧರ ಪೂಜಾರಿ ( ಉಪ ಕೋಶಾಧಿಕಾರಿ) ಮತ್ತು ನ್ಯಾಯವಾದಿ ರಾಮಣ್ಣ ಎಂ.ಭಂಡಾರಿ ಅವರನ್ನು ಸಲಹೆಗಾರರಾಗಿ ಸಭೆಯು ಸರ್ವಾನುಮತದಿಂದ ನೇಮಿಸಿತು. ಸಭೆಯಲ್ಲಿ ಮಹಿಳಾ ವಿಭಾಗದ ಆಯ್ಕೆ ನಡೆದಿದ್ದು,…
ಸೋತಾಗ ಕುಗ್ಗಲಿಲ್ಲ ಗೆದ್ದಾಗ ಹಿಗ್ಗಲಿಲ್ಲ. ಸದಾ ಒಂದಿಲ್ಲೊಂದು ಪ್ರಯೋಗಗಳ ಮೂಲಕ ತುಳು ರಂಗಭೂಮಿ, ತುಳು ಚಿತ್ರರಂಗವನ್ನು ಜೀವಂತವಾಗಿರಿಸುವಲ್ಲಿ ವಿಶೇಷ ಕೊಡುಗೆ ನೀಡುತ್ತಿರುವವರು ಕಲಾಸಾಮ್ರಾಟ್, ಅಕ್ಷರಬ್ರಹ್ಮ ವಿಜಯಕುಮಾರ್ ಕೊಡಿಯಾಲ್ಬೈಲ್. ತಾನು ಬೆಳೆಯುವ ಜತೆ ಬೇರೆ ತಂಡದ ಕಲಾವಿದರನ್ನೂ ಪ್ರೋತ್ಸಾಹಿಸುತ್ತಾ, ಬೆಳೆಸುತ್ತಿರುವ ಕಲಾವಿದರ ‘ಮಾಣಿಕ್ಯ’ ಎಂದರೆ ಅತಿಶಯೋಕ್ತಿಯಿಲ್ಲ. ಬಾಲ್ಯದಲ್ಲಿ ಮಾಡಿದ ಮಲ್ಲಪ್ಪ ನಾಯಕನ ಪಾತ್ರದಿಂದ ಹಿಡಿದು ಇತ್ತೀಚಿನ ‘ಶಿವದೂತ ಗುಳಿಗೆ’ ನಾಟಕದ ತನಕವೂ ಸದಾ ಹೊಸತನ, ಹೊಸ ಪ್ರಯೋಗಗಳೊಂದಿಗೆ ನಾಡಿನ ಜೀವಂತ ಸಮಸ್ಯೆಗಳ ಸುತ್ತ ಬೆಳಕು ಚೆಲ್ಲಿ ಎಲ್ಲಾ ವರ್ಗದ ಪ್ರೇಕ್ಷಕರನ್ನೂ ಸೆಳೆದವರಿವರು. ಏಕತಾನತೆಯಲ್ಲೇ ಸಾಗುತ್ತಿದ್ದ ತುಳು ರಂಗಭೂಮಿಗೆ, ನಿಂತ ನೀರಾಗಿದ್ದ ತುಳು ಚಲನಚಿತ್ರರಂಗಕ್ಕೆ ಹೊಸ ಪ್ರಯೋಗಗಳ ಮೂಲಕ ಜೀವಂತಿಕೆ ತುಂಬಿದವರು. ಸದಾ ಹೊಸತನಗಳಿಗೆ ತೆರೆದುಕೊಳ್ಳುವ, ಬದಲಾವಣೆಗೆ ತುಡಿತ ಹೊಂದಿರುವ ಪ್ರಯೋಗಶೀಲ ಕಲೆಗಾರ ವಿಜಯ ಕುಮಾರ್ ಕೊಡಿಯಾಲ್ಬೈಲ್. 8, 9ನೇ ತರಗತಿಯಲ್ಲಿದ್ದಾಗಲೇ ಮನೆ ಮನೆಗೆ ಪೇಪರ್ ಹಾಕುವ ಕೆಲಸ ಮಾಡಿ, ನವಭಾರತ ಪತ್ರಿಕೆಯಲ್ಲಿ ಪಾಳಿಯಲ್ಲಿ ದುಡಿದು ಕಷ್ಟದ ದಿನಗಳಲ್ಲಿ ಬೆಳೆದ ಹುಡುಗ ಇಂದು ಒಬ್ಬ…
ಬೆಂಗಳೂರು ಕಂಬಳದ ತರುವಾಯ ತುಳು – ಕುಂದಕನ್ನಡ ಎನ್ನುವ ವಿಷಯದಲ್ಲಿ ನಾವು ತೌಳವರಲ್ಲ, ನೀವು ತುಳುವರಲ್ಲ, ನಿಮ್ಮ ಭಾಷೆಗೆ ಲಿಪಿ ಇಲ್ಲ, ನಮ್ಮ ಭಾಷೆ, ನಿಮ್ಮ ಸಂಸ್ಕೃತಿ ಎನ್ನುವ ಅರ್ಥದಲ್ಲಿ ಅನಗತ್ಯ ಚರ್ಚೆಗಳು ಆರಂಭಗೊಂಡಿದೆ. ಅಲ್ಲಿ ಎರಡೂ ಕಡೆಯಲ್ಲಿಯೂ ಸೂಕ್ಷ್ಮತೆಯನ್ನ ಅರಿಯದೆ ವಾದ ತನ್ನ ಸ್ವಾದ ಕಳೆದುಕೊಂಡು ಹೊಸ ವಿವಾದ ಸೃಷ್ಠಿಯಾಗುವ ಹಂತವನ್ನ ತಲುಪುತ್ತಿರುವುದನ್ನ ಗಮನಿಸುತ್ತಿದ್ದೇವೆ. ಅದು ಚರ್ಚೆಯ ವಸ್ತುವೂ, ವಿಷಯವೂ ಅಲ್ಲ. ತೌಳವ ಸೀಮೆ ಎನ್ನುವುದು ಕಲ್ಯಾಣಪುರದ ಹೊಳೆಯ ಆಚೆಗೆ ಮಾತ್ರವೇ ಸೀಮಿತವಲ್ಲ ಎನ್ನುವುದು ವಾದಕ್ಕೆ ಬಿದ್ದವರೆಲ್ಲರಿಗೂ ಗೊತ್ತಿಲ್ಲದೆಯೂ ಇರಬಹುದು! ಗೇರುಸೊಪ್ಪೆಯ ಶರಾವತಿ ನದಿಯಿಂದಲೂ ನೀಲೇಶ್ವರದ ಪಯಸ್ವಿನಿ ನದಿಯ ತನಕವೂ ತೌಳವ ಸೀಮೆ ಹಬ್ಬಿರುವ ಐತಿಹಾಸಿಕ ಉಲ್ಲೆಖಗಳಿವೆ. ಇತಿಹಾಸ ಸಂಶೋಧಕ ಬಾರ್ಕೂರು ಡಾ.ವಸಂತ ಶೆಟ್ಟರು ತೌಳವ ಸಂಸ್ಕೃತಿಯ ಬಗ್ಗೆ ಬಹಳ ಸ್ಪಷ್ಟವಾಗಿ ಉಲ್ಲೆಖಿಸುತ್ತಾ ’ತುಳು ಸಂಸ್ಕೃತಿ ಕೇವಲ ಆ ಭಾಷೆಗೆ ಮೀಸಲಾದದ್ದು ಅಲ್ಲವೇ ಅಲ್ಲ” ಎನ್ನುವುದನ್ನ ಸ್ಪಷ್ಟಪಡಿಸುತ್ತಾರೆ. ನಮ್ಮ ಭಾಗದ ಪಾಣಾರಾಟದ ಆರಂಭದಲ್ಲಿ ವಂಡ್ಸೆ ಹೋಬಳಿಯ ಕೆರಾಡಿಯ ದುರ್ಗಪ್ಪ ಪಾಣಾರರು…
ಮೋಕ್ಷ ಕ್ರಿಯೇಷನ್ಸ್ ಬ್ಯಾನರ್ ನಲ್ಲಿ ಭಾಸ್ಕರ್ ನಾಯ್ಕ್ ರಚಿಸಿ ನಿರ್ದೇಶಿಸಿ, ನಿರ್ಮಿಸಿರುವ, ಕರಾವಳಿ ಭಾಗದ ಕಥಾಹಂದರ ಹೊಂದಿರುವ “ಕುದ್ರು” ಚಿತ್ರ ಅಕ್ಟೋಬರ್ 13 ರಂದು ಕರ್ನಾಟಕದಾದ್ಯಂತ ಬಿಡುಗಡೆಯಾಗುತ್ತಿದೆ ಎಂದು ಚಿತ್ರದ ನಾಯಕ ನಟ ಹರ್ಷಿತ್ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ‘ಕುದ್ರು’ ಎಂದರೆ ನೀರಿನಿಂದ ಸುತ್ತುವರೆದ ದ್ವೀಪ. ಈ ದ್ವೀಪದಲ್ಲಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಮೂರು ಕಟುಂಬಗಳು ಸಹಬಾಳ್ವೆಯಿಂದ ಜೀವನ ನಡೆಸುತ್ತಿರುತ್ತಾರೆ. ಆ ಸಮಯದಲ್ಲಿ ವಾಟ್ಸಪ್ ಸಂದೇಶವೊಂದರಿಂದ ಎಲ್ಲರಲ್ಲೂ ಮನಸ್ತಾಪ ಬರುತ್ತದೆ. ಚಿತ್ರದ ಮೊದಲ ಭಾಗದ ಕಥೆ ಕಾಲೇಜಿನಲ್ಲಿ ನಡೆಯುತ್ತದೆ. ಆನಂತರ ಕುತೂಹಲ ಮೂಡಿಸುವ ಕಥಾಹಂದರವಿದೆ. ಅದನ್ನು ಚಿತ್ರದಲ್ಲೇ ನೋಡಬೇಕು. ಉಡುಪಿ, ಮಲೆನಾಡು, ಗೋವಾ ಹಾಗೂ ಆಯಿಲ್ ರಿಗ್ ನಲ್ಲಿ ಚಿತ್ರೀಕರಣವಾಗಿದೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಹಾಡುಗಳು ಹಾಗೂ ಟ್ರೇಲರ್ ಜನಪ್ರಿಯವಾಗಿದೆ ಎಂದರು. ಈ ಚಿತ್ರದಲ್ಲಿ ಮುಸ್ಲಿಂ ಸಮುದಾಯದ ಹುಡುಗಿಯಾಗಿ ನಟಿ ಡೈನ ಡಿಸೋಜ, ಮುಸ್ಲಿಂ ಹುಡುಗನಾಗಿ ನಟ ಫರ್ಹಾನ್, ಮಂಗಳೂರಿನ ನಮಿತಾ, ಪ್ರವೀಣ್ ಬಂಗೇರ, ಕಾಂತಾರ ಸತೀಶ್ ಆಚಾರ್ಯ ನಟಿಸಿದ್ದಾರೆ.…
ನಾಟಕ, ಚಲನಚಿತ್ರಗಳಿಗೆ ಜನರ ಮನ ಪರಿವರ್ತನೆ ಮಾಡುವ ಅದ್ಭುತ ಶಕ್ತಿ ಇದೆ. ವಿಜಯಕುಮಾರ್ ಕೊಡಿಯಾಲ್ ಬೈಲ್ ಅವರು ಶಿವದೂತೆ ಗುಳಿಗೆ ನಾಟಕದ ಮೂಲಕ ಹೊಸ ಕ್ರಾಂತಿ ಸೃಷ್ಟಿಸಿದ್ದು ಇನ್ನಷ್ಟು ಹೊಸ ಪ್ರಯೋಗ ಮಾಡಿ ಭಾಷೆ ನುಡಿಯ ಪ್ರಾತಿನಿಧ್ಯವನ್ನು ಜಗತ್ತಿಗೆ ತೋರಿಸುವಂತಾಗಲಿ ಎಂದು ಕೊಪ್ಪ ಹರಿಹರಪುರ ದತ್ತಾಶ್ರಮ ಸ್ವರ್ಣ ಪೀಠಿಕಾಪುರ ಗೌರಿಗದ್ದೆಯ ಅವಧೂತರಾದ ಶ್ರೀ ವಿನಯ ಗುರೂಜಿ ಹೇಳಿದರು. ತುಳು ರಂಗಭೂಮಿಯಲ್ಲಿ ಸಂಚಲನ ಸೃಷ್ಟಿಸಿದ ನಿರ್ದೇಶಕ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ನಿರ್ದೇಶನದ ಕಲಾಸಂಗಮ ಕಲಾವಿದರ ಅಭಿನಯದ “ಶಿವದೂತೆ ಗುಳಿಗೆ” ನಾಟಕದ 555 ನೇ ಪ್ರದರ್ಶನದ ಕಲಾ ಸಂಗಮ ಕಾರ್ಯಕ್ರಮವನ್ನು ಅಡ್ಯಾರ್ ಗಾರ್ಡನ್ನಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು. ನಾಟಕ ಬರೆಯುವುದು ನಿಲ್ಲಿಸುತ್ತೇನೆ ಎಂದವರಿಗೆ ಗುರುಗಳ ಪ್ರೇರಣೆಯಂತೆ ಎರಡು ಪೆನ್ನು ನೀಡಿದ್ದೆ. ಅದರಿಂದ ಬರೆದ “ಶಿವದೂತೆ ಗುಳಿಗೆ” ಇಂದು ಲೋಕ ಪ್ರಸಿದ್ಧವಾಗಿದೆ. ದ.ಕ. ಜಿಲ್ಲೆ ದಿವ್ಯ ಕ್ಷೇತ್ರ. ತುಳುನಾಡಿನ ಮಣ್ಣು ಕಾಶಿಯ ಮಣ್ಣು. ಕೋಟಿ ಚೆನ್ನಯ, ಗುಳಿಗ ಕೊಡಮಣಿತ್ತಾಯ, ಅಣ್ಣಪ್ಪ, ಶಿವ, ದುರ್ಗಾ ಕ್ಷೇತ್ರಗಳು…
ಒಳ್ಳೆಯತನವೆನ್ನುವುದು ಸರಾಗವಾಗಿ ಬಂದು ನಮ್ಮ ಕಾಲಡಿ ಬೀಳುವುದಿಲ್ಲ. ಅದನ್ನು ನಾವೇ ಬೆನ್ನತ್ತಿಕೊಂಡು ಹೋಗಬೇಕು. ಆದರೆ ನನ್ನೀ ಗೆಳೆಯ ಬದುಕಿನ ಉರಿ ಬಿಸಿಲಿನ ವೇಳೆ ತಂಗಾಳಿಯಂತೆ ಸಿಕ್ಕಿ ಬಿಟ್ಟವ. ಅವನ ಬೆನ್ನನ್ನು ನಾನು ಬಿದ್ದೆನಾ? ನನ್ನ ಬೆನ್ನನ್ನು ಅವನು ಬಿದ್ದನಾ? ಗೊತ್ತಿಲ್ಲ. ಆದರೆ ನಮ್ಮಿಬ್ಬರನ್ನೂ ಆ ಸ್ನೇಹ ಬೆಂಬಿಡದೆ ಕಾಯುತ್ತಿರುವುದಂತೂ ಸತ್ಯವೇ. ದೂರ ಬಹುದೂರ ನಡೆದು ಬಂದವನಿಗೆ ಅಸ್ಪಷ್ಟ ಎನ್ನಿಸಿ ಬಿಡುವ ರಸ್ತೆಯ ತಿರುವು, ಸುತ್ತಲೂ ಕಾಣುವ ಪರಿಚಿತ ಅನ್ನಿಸಿಕೊಳ್ಳುವ ಅಪರಿಚಿತ ಮುಖಗಳು, ಹೊಳೆ ದಾಟಿ ಆಚೆ ಹೋಗೋಣ ಎಂದರೇ ಮುರಿದುಬಿದ್ದ ಸೇತುವೆಯ ನಿಸ್ಸಾಯಕತೆ, ನಿಂತ ನೆಲದ ಕಾವು ಇಡೀಯ ದೇಹ ವ್ಯಾಪಿಸಿದ ಬೆವರ ಕುದಿತದ ಬಳಲಿಕೆ, ಬೇಸರದ ಸಂಜೆಗಳಿಗೆ ಬೇಕೆನಗೆ ಹಿತದ ಮಾತೊಂದು ಎಂಬ ತನ್ಮಯದ ಕ್ಷಣಗಳಿಗೆ, ನಂಬಿಕೆ ದ್ರೋಹ ಎನ್ನುವ ಮರಮೋಸದ ಬಿಗಿಬಲೆಯ ಹಿಡಿತಕ್ಕೆ ಅಲುಗಾಡಲಾರದೆ ಮನಸು ನೀರಿಗೆ ಬಿದ್ದ ಗುಬ್ಬಚ್ಚಿ ಆದಾಗಲೆಲ್ಲ ನೆನಪಿಗೆ ಬಂದು ಬಿಡುವ ಗೆಳೆಯ ದಿವಾಕರ್ ಶೆಟ್ಟಿ ಅಡ್ಯಾರು. “ಉದಯ್ ನಮ್ಮದು ಭಾವುಕ ಪ್ರಪಂಚ ಕಣೋ,…
“ಹಸಿದವರು ವ್ಯಾಕರಣವನ್ನು ಉಣ್ಣಲಾರರು ; ಬಾಯಾರಿದವರು ಕಾವ್ಯರಸದಿಂದ ತಣಿಯಲಾರರು ವೇದಗಳನ್ನೋದಿ ಯಾರೂ ಕುಲೊದ್ಧಾರ ಮಾಡಿಕೊಂಡವರಿಲ್ಲ. ಆದ್ದರಿಂದ ಹಣ ಗಳಿಸು ಅದಿಲ್ಲದೆ ಗುಣಗಳಿಗೆ ಬೆಲೆಯಿಲ್ಲ” ಬಹುಶಃ ಹಳ್ಳಿ ಬಿಟ್ಟು ಪಟ್ಟಣ ಸೇರಿದ ಹೆಚ್ಚಿನವರ ಬದುಕಿನ ಹೆಜ್ಜೆಗುರುತನ್ನು ಅರಸುತ್ತ ಸಾಗಿದಾಗ ಮೇಲಿನ ಸುಭಾಷಿತದ ಆಳ ಅರಿವಾಗುತ್ತದೆ. ಉಳ್ತೂರು ಮೋಹನ್ದಾಸ್ ಶೆಟ್ಟಿ ಬಂಟರ ಪ್ರತಿಷ್ಠಿತ ಆರ್ಥಿಕ ಸಂಸ್ಥೆ ಮಾತೃ ಭೂಮಿ ಕೋ. ಆಪರೇಟಿವ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್ನಲ್ಲಿ ಉಪಕಾರ್ಯಾಧ್ಯಕ್ಷರಾಗಿ ಇದೀಗ ಕಾರ್ಯಾಧಕ್ಷರಾಗಿ ಆಯ್ಕೆಯಾಗಿರುವುದು ಅವರ ಸಾಧನೆಗೆ ಸಂದ ದೊಡ್ಡ ಗೌರವ. ಇವರು ಕಳೆದ 15 ವರ್ಷಗಳಿಂದ ಈ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿ ಸಂಸ್ಥೆಗೆ ಶೇರು ಬಂಡವಾಳ ಸಂಗ್ರಹಿಸುವುದರಲ್ಲಿ ಮೈಲಿಗಲ್ಲು ನಿರ್ಮಿಸಿದವರು. ಇವರ ಸಮಾಜ ಸೇವೆಯ ತುಡಿತಕ್ಕೆ ಸಂಘಟನಾ ಶಕ್ತಿಯ ಚಾತುರ್ಯಕ್ಕೆ ಇದು ಒಂದು ಉತ್ತಮ ಉದಾಹರಣೆ. ಉಳ್ತೂರು ಕಟ್ಟೆ ಮನೆ ಶ್ರೀ ದಾರಪ್ಪ ಶೆಟ್ಟಿ ಮತ್ತು ಶ್ರೀಮತಿ ಭಾಗೀರಥಿ ಶೆಟ್ಟಿಯವರ ಸುಪುತ್ರರಾದ ಇವರು ಉಳ್ತೂರಿನಲ್ಲಿ ತಮ್ಮ ಪ್ರಾಥಮಿಕ ವಿಧ್ಯಾಭ್ಯಾಸವನ್ನು ಪಡೆದರು. ನಂತರ 1982ರಲ್ಲಿ ಕುಂದಾಪುರದ…
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಮೂಲ್ಕಿ ಕನ್ಯಾನ ಸದಾಶಿವ ಶೆಟ್ಟಿ ಸಂಕೀರ್ಣದಲ್ಲಿ ತೋನ್ಸೆ ಶಶಿರೇಖಾ ಆನಂದ ಶೆಟ್ಟಿ ಓಪನ್ ಏರ್ ಗಾರ್ಡನ್
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಮಹತ್ವಕಾಂಕ್ಷಿ ಯೋಜನೆಯಾದ ಮೂಲ್ಕಿ ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ಕನ್ಯಾನ ಸದಾಶಿವ ಶೆಟ್ಟಿ ಸಂಕೀರ್ಣದಲ್ಲಿ ನಿಶ್ಚಿತಾರ್ಥ, ಮೆಹೆಂದಿ, ಮದುವೆ, ಔತನಕೂಟ, ಹುಟ್ಟುಹಬ್ಬ ಹಾಗೂ ಇತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು ಅನುಕೂಲವಾಗುವಂತೆ ಶ್ರೀಮತಿ ತೋನ್ಸೆ ಶಶಿರೇಖಾ ಆನಂದ ಶೆಟ್ಟಿ ಓಪನ್ ಏರ್ ಗಾರ್ಡನ್ ಎಂಬ ಹೆಸರಿನಲ್ಲಿ ತೆರೆದ ವೇದಿಕೆ ನಿರ್ಮಾಣವಾಗಲಿದೆ. ಈ ಓಪನ್ ಏರ್ ಗಾರ್ಡನ್ ನ ಸಂಪೂರ್ಣ ಪ್ರಾಯೋಜಕತ್ವವನ್ನು ಒಕ್ಕೂಟದ ವಿಶೇಷ ಮಹಾ ನಿರ್ದೇಶಕರಾದ ಮುಂಬಯಿಯ ಆರ್ಗಾನಿಕ್ ಗ್ರೂಪ್ ಆಫ್ ಇಂಡಸ್ಟ್ರೀಸ್ ಇದರ ಸಿ.ಎಂ.ಡಿ ತೋನ್ಸೆ ಆನಂದ್ ಎಂ. ಶೆಟ್ಟಿಯವರು ನೋಡಿಕೊಳ್ಳಲಿದ್ದಾರೆ. ತೋನ್ಸೆ ಆನಂದ್ ಎಂ.ಶೆಟ್ಟಿಯವರಿಗೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಪರವಾಗಿ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ, ವಿಶೇಷ ಮಹಾ ನಿರ್ದೇಶಕರಾದ ಪ್ರವೀಣ್ ಭೋಜ ಶೆಟ್ಟಿ ಹಾಗೂ ಕೋಶಾಧಿಕಾರಿಯಾದ ಉಳ್ತೂರು ಮೋಹನ್ ದಾಸ್ ಶೆಟ್ಟಿಯವರು ಜೊತೆ ಸೇರಿ ಗೌರವ ಪೂರ್ವಕವಾಗಿ ಅಭಿನಂದಿಸಿ ಕೃತಜ್ಞತೆ ಸಲ್ಲಿಸಿದರು. ಓಪನ್ ಏರ್ ಗಾರ್ಡನ್ ಯೋಜನೆಯ ಪೂರ್ತಿ ಜವಾಬ್ದಾರಿಯನ್ನು ಮತ್ತು…
ಅಧ್ಯಾತ್ಮಿಕತೆಯೊಂದಿಗೆ ಕೂಡಿ ಬದುಕುವ ಕಲೆ ,ಜೀವನ ಮೌಲ್ಯ,ಆದರ್ಶಗಳಿಂದ ಸಂಸ್ಕಾರ ಯುತವಾದ ಜೀವನ ಸಾಧ್ಯ, ನಮ್ಮ ಪೌರಾಣಿಕ ಹಿನ್ನಲೆಯ ಯಕ್ಷಗಾನದಿಂದ ಭಾಷಾ ಶುದ್ದತಿ .ತತ್ವ ಮತ್ತು ಚರಿತ್ರೆಯನ್ನು ತಿಳಿದಂತೆ , ಭಕ್ತಿ ಮತ್ತು ಸಂಸ್ಕಾರ ಪಾಠವನ್ನು ಭಜನೆ ಕಳಿಸುತ್ತದೆ. ಸುಜ್ಞಾನದಿಂದ ಕೂಡಿದ ಉತ್ತಮ ವಿಚಾರಗಳೊಂದಿಗೆ ಮಕ್ಕಳಿಗೆ ಸಂಸ್ಕಾರ, ಧರ್ಮದ ಪ್ರಜ್ಞೆಯನ್ನು ಕಳಿಸುವ ಕಾರ್ಯ ಆಗಬೇಕು ,ಅದು ಇಂದು ಇಲ್ಲಿ ನಡೆದಿದೆ, ಉತ್ತಮ ಕಾರ್ಯ ಸೇವಾ ಬಳಗದಿಂದ ನಡೆದಿದೆ . ಭಾರತದ ಮೂಲ ಕೃಷಿ ಸಂಸ್ಕ್ರತಿಯಿಂದ ಹಳ್ಳಿಯಿಂದ ದೇಶದ ಪ್ರಗತಿಯಾದಂತೆ ಋಷಿ ಪರಂಪರೆಯಿಂದ, ಸಂಸ್ಕ್ರತಿ ,ಧರ್ಮ ಸಂರಕ್ಷಣೆ ಕಾರ್ಯ ಆಗುತಿದೆ. ತ್ಯಾಗ ಮತ್ತು ಸೇವೆಯಿಂದ ಸಮಾಜದ ಅಭಿವ್ರದ್ದಿ ಸಾದ್ಯ .ಪ್ರತಿಯೊಂದು ಉತ್ತಮ ವಿಚಾರಗಳು ಸಂಸ್ಕಾರಯುತವಾಗಿ ನಡೆದರೆ ಸದೃಡ ಸಮಾಜ ನಿರ್ಮಾಣ ಆಗಬಹುದು ಎಂದು ಒಡಿಯೂರು ಶ್ರೀ ಗುರುದೇವ ಸಂಸ್ಥಾನದ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಜಿಯವರು ಆಶಿರ್ವಚನ ನೀಡಿದರು . ನವೆಂಬರ್ 26 ರಂದು ಪುಣೆಯ ಬಾಣೇರ್ ನಲ್ಲಿರುವ ಬಂಟರ ಭವನದ ಓಣಿಮಜಲು ಜಗನ್ನಾಥ್ ಶೆಟ್ಟಿ…
ಅಹಂಕಾರ ಎಂದರೆ ಜೀವದ ಸ್ವಕೃತ ಧರ್ಮ ಎನ್ನಬಹುದು. ಸ್ವಕೃತ ಎಂಬ ಶಬ್ದವನ್ನು “ಸ್ವ’ದ ಅರಿವಿನಿಂದ ಅಂದರೆ ತನ್ನತನದ ಅರಿವಿನಿಂದ ಜೀವವು ಸ್ವೀಕರಿಸಿದ ಕೃತಿಸ್ವರೂಪ ಕರ್ಮ ಎಂಬ ಅರ್ಥದಲ್ಲಿ ಬಳಸಬಹುದು. “ನನ್ನೊಳಗಿರುವ ನಾನು ಹೋದರೆ ಹೋದೇನು” ಎಂದು ಹೇಳಿದ ಕನಕದಾಸರ ಮಾತಿನಿಂದ ಮನುಷ್ಯನಲ್ಲಿನ ನನ್ನತನದ, ಅಂದರೆ ಅಹಂಭಾವದ ವ್ಯರ್ಥತೆಯು ತಿಳಿಯುತ್ತದೆ. ಅಹಂಭಾವವು ಮನುಷ್ಯನ ಲೌಕಿಕ ಮತ್ತು ಪಾರಮಾರ್ಥಿಕ ಸುಖದಲ್ಲಿನ ಒಂದು ದೊಡ್ಡ ಅಡಚಣೆಯಾಗಿದೆ. ಅಹಂ ಭಾವದ ಬೀಜವು ಮನುಷ್ಯ ಜನ್ಮದಲ್ಲಿಯೇ ಇರುವುದರಿಂದ ಇದಕ್ಕೆ ಹಿರಿಯ-ಕಿರಿಯ, ಬಡವ-ಬಲ್ಲಿದ, ಅಶಿಕ್ಷಿತ-ಸುಶಿಕ್ಷಿತ ಎಂಬ ಯಾವುದೇ ಭೇದ ಇಲ್ಲ. ಎಲ್ಲರಲ್ಲಿಯೂ ಹೆಚ್ಚು ಅಥವಾ ಕಡಿಮೆ ಪ್ರಮಾಣದಲ್ಲಿ ಅಹಂಕಾರ ಭಾವವು ಇದ್ದೇ ಇರುತ್ತದೆ. ಅಹಂಭಾವವು ಹೊಲದಲ್ಲಿ ಬೆಳೆಯುವ ಹುಲ್ಲಿನಂತೆ ಇರುತ್ತದೆ. ಎಲ್ಲಿಯವರೆಗೆ ನಾವು ಆ ಹುಲ್ಲನ್ನು ಬೇರುಸಹಿತವಾಗಿ ನಾಶ ಮಾಡುವುದಿಲ್ಲವೋ ಅಲ್ಲಿ ಯವರೆಗೆ ಆ ಹೊಲದಲ್ಲಿ ಉತ್ತಮ ಫಸಲು ಬರುವುದಿಲ್ಲ. ಆ ಹುಲ್ಲನ್ನು ಮನುಷ್ಯ ಪ್ರತೀ ದಿನವೂ ಸತತವಾಗಿ ನಾಶ ಮಾಡುತ್ತಲೇ ಇರಬೇಕಾಗುತ್ತದೆ. ಅದು ಸಾಧ್ಯವಾಗದಿದ್ದಲ್ಲಿ ಆ ಹುಲ್ಲು ಇಡೀ…