Author: admin
ಇದೇನು ಐತಿಹಾಸಿಕ ಸಂಗತಿಯೋ ಜನಪದ ಕಥನವೊ ಹೇಳುವುದಕ್ಕೆ ಹೊರಟಿಲ್ಲ ನಾನು. ಗುತ್ತಿನ ಮನೆಗಳಲ್ಲಿ ವಾರ್ಷಿಕ ನೇಮ, ತಂಬಿಲಗಳು ನಡೆಯುವಾಗ ಆಚರಣೆಯ ಕೌತುಕ ಒಂದು ಕಡೆಯಾದರೆ, ಇನ್ನೊಂದು ಕಡೆ ಕೆಲವು ತಮಾಷೆಯ ಮತ್ತು ಯೋಚಿಸುವ ಸಂಗತಿಗಳು ನಮ್ಮ ಗಮನಕ್ಕೆ ಬರುತ್ತವೆ. ಬಂಟ ಮನೆತನದ ವಾರ್ಷಿಕ ಆಚರಣೆಯ ಸಂದರ್ಭದಲ್ಲಿ ಇತ್ತೀಚೆಗೆ ಒಂದು ವಿಚಾರವನ್ನು ಸೂಕ್ಷ್ಮವಾಗಿ ನಾನು ಗಮನಿಸಿದ್ದೇನೆ. ಯುವ ತಲೆಮಾರಿನಲ್ಲಿ ಗಂಡನ ತರವಾಡಿನ ಕಾರ್ಯಕ್ರಮಕ್ಕೆ ಹೆಂಡತಿ ಮಕ್ಕಳು ಬರುವಷ್ಟು ಹೆಂಡತಿಯ ತರವಾಡಿನ ಮನೆಯ ಕಾರ್ಯಕ್ರಮಕ್ಕೆ ಗಂಡನ ಪೂರ್ಣ ಹಾಜರಾತಿ ಇರುವುದಿಲ್ಲ. ಹೊತ್ತಿಗೆ ಬಂದು ಹಿಂದಿರುಗುವ ಅವರಲ್ಲಿ ಸಣ್ಣ ಪರಕೀಯ ಭಾವ. ಗಂಡನ ಜೊತೆ ಹೆಂಡತಿಯೂ ವಾಪಸ್. ಮನೆ ಅಳಿಯಂದಿರಿಗೆ ಇದು ಅನ್ವಯ ಆಗದು. ವಯಸ್ಸಾದ ಹಾಗೆ ಹೆಂಗಳೆಯರ ಆಸಕ್ತಿ ಬದಲಾಗುತ್ತದೆ. ಅವರು ಖಡ್ಡಾಯವಾಗಿ ತಮ್ಮ ತರವಾಡಿನ ಕಾರ್ಯಕ್ರಮದಲ್ಲಿ ಸಕ್ರೀಯರು. ಮಕ್ಕಳನ್ನು ನಾಲ್ಕು ದಿನ ಮೊದಲೇ ಹೊರಡಿಸಲು ಶುರು ಮಾಡುತ್ತಾರೆ. ಅದುವರೆಗೆ ಅಮ್ಮ ಹೋಗ್ತಾರೆ ಅಜ್ಜಿ ಹೋಗುತ್ತಾರೆ, ನಾವು ಹೋದ ಹಾಗೆ ಅಲ್ವಾ ಎನ್ನುವ ನೆಪ.…
ಸಾಗರ ತಾಲೂಕಿನ ದಾಸರಕೊಪ್ಪ ಗ್ರಾಮದ ಚಂದನ ಶೆಟ್ಟಿ ಎಂಬ ಮಹಿಳೆಗೆ ಸಾಗರ ಬಂಟರ ಸಂಘದ ವತಿಯಿಂದ ಟೈಲರಿಂಗ್ ಯಂತ್ರವನ್ನು ಎಪ್ರಿಲ್ 24 ರಂದು ವಿತರಿಸಲಾಯಿತು. ಅಂಗವಿಕಲ ಮಹಿಳೆಯ ಸ್ವಾವಲಂಬಿ ಜೀವನ ನಿರ್ವಹಣೆಗಾಗಿ ಕಷ್ಟ ಪಡುತ್ತಿರುವ ಸುದ್ದಿ ಸಾಗರ ಬಂಟರ ಸಂಘದ ಪದಾಧಿಕಾರಿಗಳ ಗಮನಕ್ಕೆ ಬಂದಿತ್ತು. ಪದಾಧಿಕಾರಿಗಳು ದಾನಿಗಳ ಗಮನಕ್ಕೆ ಈ ವಿಷಯ ತಂದಿದ್ದರು. ಈ ಸಂಧರ್ಭದಲ್ಲಿ ಬೆಂಗಳೂರು ಬಂಟರ ಸಂಘದ ಕೋಶಾಧಿಕಾರಿ ಹಾಗೂ ಸ್ಮಾರ್ಟ್ ಲೈನರ್ಸ್ ಕಂಪನಿ ಮುಖ್ಯಸ್ಥರಾದ ಅಮರನಾಥ್ ಶೆಟ್ಟಿ ಅವರಿಗೆ ವಿಷಯ ತಿಳಿಸಿದಾಗ ತಕ್ಷಣ ಸ್ಪಂದಿಸಿ ಸಾಗರ ಬಂಟರ ಸಂಘದ ಸಮಾಜಮುಖಿ ಕಾರ್ಯಕ್ಕೆ ನಾನು ಯಾವತ್ತೂ ನಿಮ್ಮೊಂದಿಗೆ ಇದ್ದೇನೆ ಎಂದು ಹೇಳಿ ಸಹಾಯ ಮಾಡಿದ್ದರು. ಸಾಗರ ಬಂಟರ ಸಂಘ ಹೊಲಿಗೆ ಯಂತ್ರವನ್ನು ಅಮರನಾಥ್ ಶೆಟ್ಟಿ ಅವರ ಪರವಾಗಿ ವಿತರಿಸಿತು. ಈ ಸಂಧರ್ಭದಲ್ಲಿ ಸಾಗರ ಬಂಟರ ಸಂಘದ ಅಧ್ಯಕ್ಷರಾದ ಸುಧೀರ್ ಕುಮಾರ್ ಶೆಟ್ಟಿ, ಉಪಾಧ್ಯಕ್ಷರಾದ ರಘುಪತಿ ಶೆಟ್ಟಿ, ಖಜಾಂಚಿ ಅಣ್ಣಪ್ಪ ಶೆಟ್ಟಿ, ಸಹ ಕಾರ್ಯದರ್ಶಿ ಪ್ರಕಾಶ ಶೆಟ್ಟಿ, ನಿರ್ದೇಶಕರಾದ ಶ್ರೀಧರ್…
ರಕ್ತದಾನ ಎನ್ನುವುದು ಅತ್ಯಂತ ಪವಿತ್ರವಾದ ದಾನ. ಒಬ್ಬ ವ್ಯಕ್ತಿ ರಕ್ತದಾನ ಮಾಡುವುದರಿಂದ ಮತ್ತೊಬ್ಬ ವ್ಯಕ್ತಿಯ ಜೀವ ಉಳಿಸಿದಂತಾಗುತ್ತದೆ. ಆ ಕಾರಣದಿಂದಲೇ ರಕ್ತದಾನ ಎಂದರೆ ಜೀವದಾನ ಹಾಗೂ ಅದು ಒಂದು ಕೋಟಿ ದೇಣಿಗೆ ನೀಡುವ ದಾನಕ್ಕಿಂತ ಶ್ರೇಷ್ಠ ಎನ್ನುತ್ತೇವೆ ಎಂದು ಬಂಟರ ಸಂಘ ಮುಂಬಯಿ ಇದರ ಅಧ್ಯಕ್ಷರಾದ ಪ್ರವೀಣ್ ಭೋಜ ಶೆಟ್ಟಿಯವರು ಹೇಳಿದರು. ಮೀರಾ- ಭಾಯಂದರ್ ಪ್ರಾದೇಶಿಕ ಸಮಿತಿಯ ವತಿಯಿಂದ ಕಾರ್ಯಾಧ್ಯಕ್ಷರಾದ ಗುತ್ತಿನಾರ್ ರವೀಂದ್ರ ಶೆಟ್ಟಿ ಇವರ ನೇತೃತ್ವದಲ್ಲಿ ಮೀರಾರೋಡ್ ಪೂರ್ವದ ಕನಕಿಯ ರಸ್ತೆ, ಸಿನೆಮ್ಯಾಕ್ಸ್ ಬಳಿ ಇರುವ ಶಹನಾಯಿ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಸಂಘದ ಆರೋಗ್ಯ ಸಮಿತಿಯ ಕಾರ್ಯಾಧ್ಯಕ್ಷರಾದ ಡಾ. ಸ್ವರೂಪ್ ಹೆಗ್ಡೆ ಇವರ ಮಾರ್ಗದರ್ಶನದಲ್ಲಿ ಹಾಗೂ ಪ್ರಾದೇಶಿಕ ಸಮಿತಿಯ ಅರೋಗ್ಯ ಸಮಿತಿ ಕಾರ್ಯಾಧ್ಯಕ್ಷೆ ಡಾ. ರಿಯಾ ಶೆಟ್ಟಿಯವರ ಉಸ್ತುವಾರಿಯಲ್ಲಿ ರಕ್ತದಾನ ಶಿಬಿರ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಸರಕಾರೇತರ ಸಂಸ್ಥೆಯಾದ ಥಿಂಕ್ ಫೌಂಡೇಶನ್ ಇದರ ಸಹಯೋಗದಲ್ಲಿ ಇತ್ತೀಚೆಗೆ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, ದೀಪ ಬೆಳಗಿಸಿ ಉದ್ಘಾಟಿಸಿದ ಪ್ರವೀಣ್ ಭೋಜ…
ಮಾನವ ಬೇಸಾಯ ಮಾಡಲು ಆರಂಭಿಸಿದ. ಮಣ್ಣಿನಿಂದ ಮಡಕೆ ತಯಾರಿಸಿದ. ಅದರಲ್ಲಿ ತಾನು ಬೆಳೆದ ಧಾನ್ಯ ತರಕಾರಿಗಳನ್ನು ಬೇಯಿಸಿ ತಿನ್ನಲು ಆರಂಭಿಸಿದ ಕಾಲವನ್ನು ನಾಗರಿಕತೆಯ ಉಗಮ ಎನ್ನಬಹುದು. ಪ್ರಪ್ರಥಮವಾಗಿ ಮಣ್ಣಿನಿಂದ ನಿರ್ಮಿಸಿದ ವಸ್ತುವೇ ಮಡಕೆ. ಬಯಲಿನ ನಯವಾದ ಮಣ್ಣಿನಿಂದ ಮಡಕೆ ತಯಾರಿಸಿ ಅದನ್ನು ಬೆಂಕಿಯಲ್ಲಿ ಸುಟ್ಟಾಗ ಗಟ್ಟಿಯಾದ ಮಡಕೆ ನಿರ್ಮಾಣವಾಯಿತು. ಅದನ್ನು ನೀರು ತುಂಬಿಡಲು, ಅಡುಗೆ ಮಾಡಿ ಉಣ್ಣಲು ಬಳಸಬಹುದು ಎಂದು ತಿಳಿದಾಗ ಅವನ ಸಂತೋಷಕ್ಕೆ ಪಾರವಿದೆಯೇ? ಉತ್ತರ ಬಾರಕೂರಿನಿಂದ ದಕ್ಷಿಣದ ನಿಲೇಶ್ವರದವರೆಗಿನ ಕರಾವಳಿ ಭೂಮಿಯೇ ಆಗಿನ ತೌಳವ ದೇಶ. ಇಲ್ಲಿ ವಾಸಿಸುತ್ತಿದ್ದ ತುಳುವರು ಆ ಕಾಲದ ಅತಿ ಪುರಾತನ ಪ್ರಕೃತಿ ಆರಾಧನೆಯೇ ಮೂರ್ತಿ ನಲ್ಕೆ. ತುಳುವಿನಲ್ಲಿ ಮೂರಿ ಎಂದರೆ ಮಣ್ಣಿನ ಮಡಕೆ. ಭೂಮಾತೆ ನೀಡಿದ ಅನ್ನದ ಅಕ್ಷಯ ಪಾತ್ರೆಯಾದರೆ ನೀರು ಪ್ರಕೃತಿ ಕೊಟ್ಟ ಜೀವ ಜಲ ಎಂಬ ನಂಬಿಕೆಯ ಪ್ರತೀಕವಾಗಿ ಗುಡಿ ನಿರ್ಮಿಸಿ ಮೂರಿಯಲ್ಲಿ ನೀರು ತುಂಬಿಸಿಡುವ ಸ್ಥಳವೇ ಮೂರ್ಲೆ ಬದಿ ಅಥವಾ ಮೂರ್ಲೆ ಮಂಟಪ ಎನ್ನುವರು. ಈಗಲೂ ಗತಕಾಲದ ಪ್ರಸಿದ್ಧ…
ವಿದ್ಯಾಗಿರಿ: ‘ನಮಗೆ ಸಮಯವಿಲ್ಲ ಎಂಬ ನೆಪ ಹೇಳದೆ ಓದಬೇಕು. ಓದುವ ಜೊತೆ ಇತರರು ಓದುವಂತೆ ಮಾಡಬೇಕು. ಪುಸ್ತಕಗಳು ಕೇವಲ ಅಲಂಕಾರಕ್ಕೆ ಇಡಲು ಅಲ್ಲ, ಅದು ಅಧ್ಯಯನಕ್ಕೆ’ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಹೇಳಿದರು. ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಮಂಗಳವಾರ ಕನ್ನಡ ವಿಭಾಗ ಹಾಗೂ ಗ್ರಂಥಾಲಯದ ಸಹಯೋಗದಲ್ಲಿ ನಡೆದ ಪ್ರೊ. ನಾಗರಾಜ ಜವಳಿ ಅವರ ಗ್ರಂಥಗಳ ಸ್ವೀಕಾರ ಸಮಾರಂಭ’ದಲ್ಲಿ ಅವರು ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಪುಸ್ತಕ ಓದುಗರ ಸಂಖ್ಯೆ ಇಳಿಮುಖವಾಗಿದ್ದು, ವಿದ್ಯಾರ್ಥಿಗಳಿಗೆ ಓದಿಸುವ ನಿಟ್ಟಿನಲ್ಲಿ ಗಮನ ಸೆಳೆಯುವ ಚಟುವಟಿಕೆಯನ್ನು ಮಾಡಬೇಕು. ನಾಗರಾಜ ಜವಳಿ ಅವರು ಸಂಗ್ರಹ ಮಾಡಿದ ಪುಸ್ತಕಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಯಾವುದೇ ವಿಚಾರದ ಪುಸ್ತಕವಾದರೂ, ಕಾಪಾಡುವುದು ಮುಖ್ಯ ಎಂದರು. ತುಳುನಾಡಿನಲ್ಲಿ 11 ವರ್ಷಗಳ ಸಾಹಿತ್ಯ ಮತ್ತು ಸಾಂಸ್ಕøತಿಕ ಕ್ಷೇತ್ರವನ್ನು ಅರ್ಥಪೂರ್ಣ ಗೊಳಿಸಿದ್ದರಲ್ಲಿ ಜವಳಿ ಹಾಗೂ ಅವರ ಸ್ನೇಹಿತರ ‘ದಾಸಜನ’ ಕೂಟ ಮುಖ್ಯ ಪಾತ್ರ ವಹಿಸಿದೆ ಎಂದರು. ನನ್ನ ಮತ್ತು ಜವಳಿಯವರ ಅಭಿರುಚಿಯಲ್ಲಿ…
ಸಾಧನೆ ಎನ್ನುವುದು ಹುಟ್ಟಿನಿಂದಲೇ ಬರುವುದಿಲ್ಲ. ಅದು ನಿರಂತರ ಪ್ರಯತ್ನ, ಪರಿಶ್ರಮದ ಫಲಶ್ರುತಿಯಾಗಿರುತ್ತದೆ. ಹುಟ್ಟಿದ ಮಗುವಿಗೆ ಮುಂದೆ ತಾನೇನಾಗುತ್ತೇನೆ ಎಂಬ ಕಲ್ಪನೆಯೂ ಇರುವುದಿಲ್ಲ. ಆದರೆ ಆ ಮಗು ಬೆಳೆಯುತ್ತಾ ಹೋದಂತೆ ಸನ್ಮಾರ್ಗದಲ್ಲಿ ನಡೆದಾಗ, ನಿರ್ದಿಷ್ಟ ಗುರಿಯನ್ನು ಮುಟ್ಟುವ ಛಲವಿದ್ದಾಗ ಏನಾದರೂ ಸಾಧನೆ ಮಾಡುವುದು ಸಾಧ್ಯವಾಗುತ್ತದೆ. ಇದಕ್ಕೆ ಕಷ್ಟಪಡಬೇಕು. ನಾವು ಕನಸು ಕಾಣಬೇಕು. ಅದನ್ನು ನನಸಾಗಿಸುವ ಹಂಬಲವಿರಬೇಕು. ನಮ್ಮಲ್ಲಿ ಆಕಾಂಕ್ಷೆಗಳಿರಬೇಕು. ವಿದ್ಯಾಕಾಂಕ್ಷಿ, ಉದ್ಯೋಗಾಕಾಂಕ್ಷಿ, ಉದ್ಯಮಕಾಂಕ್ಷಿ ರವಿ ಶೆಟ್ಟಿಯವರಲ್ಲಿ ಈ ಎಲ್ಲಾ ಮಹತ್ವಾಕಾಂಕ್ಷೆಗಳು ಇದ್ದುದರಿಂದಲೇ ಅವರು ಇಷ್ಟು ಎತ್ತರಕ್ಕೆ ಏರುವುದು ಸಾಧ್ಯವಾಯಿತೆನ್ನಬಹುದು. ಸಾಧನೆಯ ಹಾದಿಯಲ್ಲಿ ಕಷ್ಟ ಸುಖವೆಂಬ ಕಲ್ಲುಮುಳ್ಳುಗಳನ್ನು ತುಳಿದು ತನ್ನ ಜೀವನದ ಹಾದಿಯನ್ನು ಹೂವಿನ ಹಾಸಿಗೆಯನ್ನಾಗಿ ಮಾಡಿಕೊಂಡವರು ಪರಿಶ್ರಮಿ ಶ್ರೀಯುತ ಡಾ ರವಿ ಶೆಟ್ಟಿ ಕತಾರ್ ಅವರು. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮೂಡಂಬೈಲ್ ತಿಮ್ಮಪ್ಪ ಶೆಟ್ಟಿ ಹಾಗೂ ದೋಣಿಂಜೆ ಗುತ್ತು ಸರೋಜಿನಿ ಶೆಟ್ಟಿಯವರ 5 ಮಕ್ಕಳಲ್ಲಿ ಹಿರಿಯ ಪುತ್ರನಾಗಿ 1963 ರಲ್ಲಿ ಜನಿಸಿದರು. ಮನೆಯಲ್ಲಿ ಹಿರಿ ಮಗನಾದ್ದರಿಂದ ಜವಾಬ್ದಾರಿ ಎಂದರೇನು ಎನ್ನುವುದನ್ನು…
ಬದುಕಿನ ಅವಧಿ ಸೀಮಿತವಾದುದು. ಈ ಅವಧಿಯನ್ನು ಸಮರ್ಥವಾಗಿ ಬಳಸಿಕೊಂಡಾಗ ಬದುಕು ಸಾರ್ಥಕವಾಗುತ್ತದೆ. ಬದುಕಿನಲ್ಲಿ ನಾನಾ ಅವಕಾಶಗಳು ಸಿಗುತ್ತಲೇ ಇರುತ್ತದೆ. ಆದರೆ ಬಹಳಷ್ಟು ಮಂದಿ ಈ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳುವ ಜಾಣತನ ಪ್ರದರ್ಶಿಸುವುದಿಲ್ಲ. ಮುಂದೊಂದು ದಿನ ಇಂತಹ ಅವಕಾಶ ಬಳಸಿಕೊಂಡರಾಯಿತು ಎಂಬ ಉದಾಸೀನ ಮನೋಭಾವದಿಂದಲೋ, ಇಂತಹ ಅವಕಾಶ ತಮ್ಮಂತಹವರಿಗಿಲ್ಲ ಎಂಬ ಕೀಳರಿಮೆಯಿಂದಲೋ, ಆಗಾಗ ಇಂತಹ ಅವಕಾಶಗಳು ಬರುತ್ತಲೇ ಇರುತ್ತವೆ ಎಂಬ ಅಪನಂಬಿಕೆ ಅಥವಾ ಅತಿ ವಿಶ್ವಾಸದಿಂದಲೋ ನಿರಾಯಾಸವಾಗಿ ದೊರೆತ ಚಿನ್ನದಂತಹ ಅವಕಾಶಗಳನ್ನು ಕಡೆಗಣಿಸುವುದು ಮೂರ್ಖತನದ ಪರಮಾವಧಿಯಲ್ಲದೆ ಮತ್ತಿನ್ನೇನು? ಅವಕಾಶಗಳು ಯಾರಿಗಾಗಿಯೂ ಕಾಯುವುದಿಲ್ಲ. ಅವು ಬಂದಾಗ ಬಳಸಿಕೊಳ್ಳಬೇಕು. ಬದುಕಿನಲ್ಲಿ ಯಶಸ್ಸು ಗಳಿಸಿದವರೆಲ್ಲ ಈ ರೀತಿ ಅವಕಾಶಗಳನ್ನು ಬಳಸಿಕೊಂಡೇ ಮುಂದೆ ಬಂದಿರುತ್ತಾರೆ. ರಜಾ ದಿನಗಳಲ್ಲಿ ಬಂಧುಗಳ ಮನೆಗೆ ತೆರಳಿದಾಗ ಅಲ್ಲಿ ಒಂದು ವಿಶಿಷ್ಟ ಕಾರ್ಯಕ್ರಮ ನಡೆಯುತ್ತದೆ ಅನ್ನಿ ನೀವೂ ಅದರಲ್ಲಿ ಆಸಕ್ತಿಯಿಂದ ಭಾಗವಹಿಸಿ ನಿಮಗೊಂದು ಅಪೂರ್ವ ಅನುಭವವನ್ನು ಆ ಭಾಗವಹಿಸುವಿಕೆ ಕೊಡುತ್ತದೆ. ನಿಮ್ಮ ಮನೆಯ ಸಮೀಪ ಸಂಗೀತ, ನೃತ್ಯ, ಕರಕುಶಲ ವಸ್ತುಗಳ ತಯಾರಿ, ಯೋಗಾಭ್ಯಾಸ, ವ್ಯಕ್ತಿತ್ವ…
ಮೂಡುಬಿದಿರೆ: ನಾಳೆ ಎಂಬುದಿಲ್ಲ, ಇಂದಿಗಾಗಿ ಬದುಕಿ. ಯಾವುದೇ ಕಾರ್ಯ ಮಾಡುವುದಾದರೂ ಇಂದೇ ಮಾಡಿ, ಇವತ್ತು ಎನ್ನುವುದು ಮಾತ್ರ ನಿಮ್ಮದು ಎಂದು ಸಿಂಗಾಪುರದ ವ್ಯಾನ್ಸ್ ಗ್ರೂಪ್ ಆಫ್ ಕಂಪನಿಯ ಸ್ಥಾಪಕ ಮತ್ತು ಸಿಇಓ ವೆಂಕಟೇಶ್ ಮೂರ್ತಿ ನುಡಿದರು. ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಆಳ್ವಾಸ್ ಕಾಲೇಜಿನ ಎನ್ಎಸ್ ಎಸ್ ಹಾಗೂ ಆಳ್ವಾಸ್ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ಅಭಿವ್ಯಕ್ತಿ ವೇದಿಕೆಯ ಜಂಟಿ ಆಶ್ರಯದಲ್ಲಿ ನಡೆದ ‘ಈ- ವೇಸ್ಟ್ ಮ್ಯಾನೇಜ್ ಮೆಂಟ್’ ವಿಷಯದ ಕುರಿತಾದ ಅತಿಥಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸರಿಯಾದ ಗುರಿಯನ್ನು ಇಟ್ಟುಕೊಳ್ಳಿ, ಸಾಧನೆಯ ಮಾರ್ಗದಲ್ಲಿ ನೀವು ಚಲಿಸಿದಾಗ ಗುರಿ ಸಾಧಿಸಲು ಸಾಧ್ಯ. ಇಲ್ಲದೇ ಹೋದಲ್ಲಿ ಗುರಿ ಎನ್ನುವುದು ಕಲ್ಪನೆಯಲ್ಲಿಯೇ ಉಳಿದುಬಿಡುತ್ತದೆ. ನಾವು ಕಾರ್ಯ ಪ್ರವೃತ್ತಿಯೊಂದಿಗೆ ಸರಿಯಾದ ಗುರಿ ಹೊಂದಿಲ್ಲದಿದ್ದರೆ ಗೊಂದಲಕ್ಕೊಳಗಾಗುತ್ತೇವೆ. ನಾವು ಎಲ್ಲಿದ್ದೇವೆ ಎನ್ನುವುದು ಮುಖ್ಯವಲ್ಲ. ಸಾಧನೆಯ ಹಾದಿಯಲ್ಲಿ ನಾವೆಷ್ಟು ಶ್ರಮ ಪಡುತ್ತಿದ್ದೇವೆ ಎನ್ನುವುದು ಮುಖ್ಯ.ಒಂದು ಕಾಲದಲ್ಲಿ ಪ್ರಕೃತಿ ಮಾನವನನ್ನೇ ಬೆದರಿಸುತ್ತಿತ್ತು. ಆದರೆ ಇಂದು ಮಾನವನೇ ಪ್ರಕೃತಿಯನ್ನೇ ಬೆದರಿಸುವಂತಾಗಿದೆ. ಆದರೆ ಸಮಸ್ಯೆ ಪ್ರಾರಂಭವಾದದ್ದು ನಮ್ಮಿಂದ.…
ಯಾರು ಆಳಿದರೇನು ನಾವು ರಾಗಿ ಬೀಸುವುದು ತಪ್ಪುವುದೇ? ಎಂಬ ಮಾತಿಗೆ ಸರಿಯಾಗಿ ಯಾರು ಊಳಿದರೇನು ಹಸಿವು ನೀಗುವಷ್ಟು ಸಮೃದ್ಧವಾಗಿದೆಯೇ? ದೇಶದ ಪರಿಸ್ಥಿತಿ. ಆಗಿಲ್ಲವೆಂದಾದ ಮೇಲೆ ನಮಗೆ ನಾವೇ ಶಿಲ್ಪಿಗಳು ಯಾಕಾಗಬಾರದು? ಹೌದು, ಪ್ರತಿಯೊಬ್ಬ ಮಾನವನ ಉನ್ನತಿ ಮತ್ತು ಅವನತಿ ಅವರವರ ಕೈಯಲ್ಲಿಯೇ ಇರುವುದರಿಂದ ನಮ್ಮ ನಮ್ಮ ಪ್ರಗತಿಗೆ ಅಡಿಗಲ್ಲು ನಾವೇ ಹಾಕಿಕೊಳ್ಳಬೇಕು. ಯಾರಿಂದಲೂ ಯಾವುದೇ ತರದ ನಿರೀಕ್ಷೆಗಳನ್ನು ಇಟ್ಟುಕೊಳ್ಳುವುದು ಸರಿಯಲ್ಲ. ಇಂದು ನಮ್ಮ ದೇಶದಲ್ಲಿ ಸರಿಪಡಿಸಲಾರದ ಅನೇಕ ಅನಾಹುತ, ಅನಾಚಾರಗಳಿಗೆ ಕಾರಣರು ಯಾರು? ಅದರಲ್ಲಿ ಮುಖ್ಯವಾಗಿ ನಮ್ಮ ನೆಲದ ಭಾಷೆ, ಸಂಸ್ಕೃತಿ, ಆಚಾರ, ವಿಚಾರ, ಉಡುಗೆ, ತೊಡುಗೆ, ಆಹಾರ, ಹಬ್ಬ ಹರಿದಿನಗಳಲ್ಲಿ ತಂದುಕೊಂಡ ಬದಲಾವಣೆಯ ಅಗತ್ಯ ನಮಗಿತ್ತೇ? ಆ ನಿಟ್ಟಿನಲ್ಲಿ ಬುದ್ದಿ ಜೀವಿಗಳಾದವರು ಯೋಚಿಸಬೇಕು. ಇಂದು ಪ್ರಜಾಪ್ರಭುತ್ವದಲ್ಲಿ ನಾವಿದ್ದೇವೆ. ನಮಗೆ ನಾವೇ ದೊರೆಗಳು. ಪ್ರಜೆಗಳು ಪ್ರಜೆಗಳಿಗಾಗಿ ಪ್ರಜೆಗಳಿಂದಲೇ ದೇಶ ಆಳಲಾಗುತ್ತಿದೆ. ವಿದ್ಯಾವಂತ ಬುದ್ದಿವಂತರ ನಾಡಿನಲ್ಲಿ ಅತ್ಯಾಚಾರಕ್ಕೆ ಕೊನೆಯಿಲ್ಲ ಎಂಬಂತೆ ಕಂಡು ಕೇಳಿ ಬರುತ್ತಿದೆ. ವಿದ್ಯಾವಂತ ನಾಗರಿಕ ಸಮಾಜ ತಲೆ ತಗ್ಗಿಸುವ ರೀತಿಯಲ್ಲಿ…
ಮಂಗಳೂರು: ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿಕೇಶನ್ ನ ‘ವಿಕೆಟ್ಸ್ ಫಾರ್ ವೆಲ್ಫೇರ್’ (Wickets for Welfare) ಅಂತರ ಕಾಲೇಜು ಕ್ರಿಕೆಟ್ ಪಂದ್ಯಾವಳಿಯನ್ನು ಏಪ್ರಿಲ್ 20 ಹಾಗೂ 21ರಂದು ಮಂಗಳೂರಿನ ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ವೈದ್ಯಕೀಯ ಕಾಲೇಜಿನ ಕ್ಷೇಮ ಗ್ರೌಂಡ್ಸ್ ನಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಪಂದ್ಯಾವಳಿಯನ್ನು ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿಕೇಶನ್ ವಿದ್ಯಾರ್ಥಿಗಳೇ ಏರ್ಪಡಿಸಿದ್ದು, ಈ ಕಾರ್ಯಕ್ರಮವನ್ನು ಎಚ್ಐವಿ ಸೋಂಕಿತ ಮಕ್ಕಳಿಗೆ ನೆರವು ಒದಗಿಸುತ್ತಿರುವ ಸ್ನೇಹಸದನ ಸೇಂಟ್ ಕ್ಯಾಮಿಲ್ಲಾಸ್ ಕೇರ್ ಹೋಮ್, ಗುರುಪುರ (Snehasadan St. Camillus Care Home) ಎಂಬ ಸಂಸ್ಥೆ ನೆರವಿಗಾಗಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವನ್ನು ಏಪ್ರಿಲ್ 20, 2024 ರಂದು ನಿಟ್ಟೆ ವಿಶ್ವವಿದ್ಯಾನಿಲಯದ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ (ಐಎಸ್ಆರ್) ಹಾಗೂ ಕೇಂದ್ರೀಯ ಸಂಶೋಧನಾ ಪ್ರಯೋಗಾಲಯ (ಸಿಆರ್ಎಲ್) ಉಪಾಧ್ಯಕ್ಷ ಪ್ರೊ.ಡಾ. ಸತೀಶ ಕುಮಾರ ಭಂಡಾರಿ ಮುಖ್ಯ ಅತಿಥಿಯಾಗಿ ಮತ್ತು ನಗರದ ಸ್ನೇಹಸದನ ಸಂಸ್ಥೆಯ ನಿರ್ದೇಶಕ ಸಿಬಿ ಕೈತರನ್ ಗೌರವ ಅತಿಥಿಯಾಗಿ ಭಾಗವಹಿಸಿ ಉದ್ಘಾಟಿಸಿದರು. ಏಪ್ರಿಲ್ 21ರಂದು ಅಂತಿಮ ಘಟ್ಟದ ಪಂದ್ಯಗಳು ನಡೆದಿದ್ದು…