Author: admin

ನಮ್ಮ ದೇಶದಲ್ಲಿ ನ್ಯಾಯಾಲಯಗಳ ಸ್ಥಾಪನೆಯ ಪೂರ್ವದಲ್ಲೇ ತೌಳವ ನಾಡಿನಲ್ಲಿ ನೊಂದವರಿಗೆ ನ್ಯಾಯ ಕೊಡಲು ದೈವಗಳ ಧರ್ಮ ಪೀಠಗಳನ್ನು ಸ್ಥಾಪಿಸಲಾಯಿತು. ಅದು ರಾಜಾಡಳಿತದ ಕಾಲವಾಗಿತ್ತು. ರಾಜನ ಆಸ್ಥಾನದಲ್ಲೂ ವಾದಿ ಪ್ರತಿವಾದಿಗೆ ಸಮ್ಮತದ ತೀರ್ಮಾನ ಲಭಿಸದೆ ಇದ್ದಾಗ ಸ್ವತಃ ರಾಜನೇ ದೈವಗಳ ಧರ್ಮ ಸನ್ನಿಧಿಯಲ್ಲೇ ಪ್ರಮಾಣ ಮಾಡಲು ಆಜ್ಞಾಪಿಸುತ್ತಿದ್ದರು. ತೌಳವ ನೆಲದ ಆಧಾರ ಸ್ಥಂಭಗಳಂತೆ ನಾಲ್ಕು ದಿಕ್ಕುಗಳಲ್ಲಿ ನೆಲೆಯಾಗಿತ್ತು. ಆ ಧರ್ಮ ದೈವಗಳ ಮೂಲ ನೆಲೆ ದೈವ ಭಾಷೆಯಲ್ಲಿ ಹೇಳುವುದಾದರೆ “ಬಡಕಾಯಿ ಬಾರಕೂರು, ತೆನ್ಕಾಯಿ ಕಾನತ್ತೂರು, ಮುಡಾಯಿ ಕುಡುಮ, ಪಡ್ಡಾಯಿ ಕೊಂಡಾಣ ಅಂಚತ್ತ ಸತ್ಯ ಪ್ರಮಾಣ” ಎಂಬ ನುಡಿ ಇತ್ತು. ಕಳೆದ 50 ವರ್ಷಗಳವರೆಗೆ ನಮ್ಮ ಹಿರಿಯರು ಈ ನಾಲ್ಕು ಸ್ಥಳಗಳ ಹೆಸರು ಅಥವಾ ಅಲ್ಲಿ ನೆಲೆಯಾಗಿದ್ದ ದೈವಗಳ ಹೆಸರನ್ನು ಹೇಳಲು ಧೈರ್ಯ ಮಾಡುತ್ತಿರಲಿಲ್ಲ. ಅಪ್ಪಿ ತಪ್ಪಿ ಹೆಸರು ಹೇಳಿದರೆ ಕೈ ಬೆರಳನ್ನು ಕಚ್ಚಿ ಕ್ಷಮೆ ಯಾಚಿಸುವಷ್ಟು ಭಯ ಭಕ್ತಿ ಇತ್ತು. ಸ್ಥಳಗಳ ಬದಲಾಗಿ ತೆನ್ಕಾಯಿ ಎಂದರೆ ಕಾನತ್ತೂರು ಮತ್ತು ಪಡ್ಡಾಯಿ ಎಂದರೆ ಕೊಂಡಾಣ…

Read More

ಮುಂಬಯಿ:- ಮುಂಬಯಿ ವಿಶ್ವವಿದ್ಯಾಲಯ ಸ್ಥಾಪನೆಯಾಗಿ 165 ವರ್ಷವಾಗಿದೆ. ದೇಶದ ಹಳೆಯ ವಿಶ್ವವಿದ್ಯಾಲಯಗಳಲ್ಲಿ ನಮ್ಮ ಮುಂಬಯಿ ವಿಶ್ವವಿದ್ಯಾಲಯವೂ ಒಂದು. ಕನ್ನಡ ವಿಭಾಗ ಆರಂಭವಾಗಿ 45 ವರ್ಷಗಳು ಕಳೆದು ನಲ್ವತ್ತಾರರ ಹರೆಯಕ್ಕೆ ಪಾದಾರ್ಪಣೆ ಮಾಡುತ್ತಿದೆ. ಇಂತಹ ಒಂದು ಶುಭ ಸಂದರ್ಭದಲ್ಲಿ ನಮ್ಮ ವಿಭಾಗದಲ್ಲಿ ಆರು ಕೃತಿಗಳು ಲೋಕಾರ್ಪಣೆಗೊಳ್ಳುತ್ತಿರುವುದು ಸಂತೋಷದ ಸಂಗತಿ. ಕನ್ನಡವು ಕನ್ನಡವ ಕನ್ನಡಿಸುತ್ತಿರಬೇಕು ಎಂಬ ಬೇಂದ್ರೆಯವರ ಮಾತಿನಂತೆ ಕನ್ನಡ ವಿಭಾಗ ಅಹರ್ನಿಶಿ ಕೆಲಸ ಮಾಡುತ್ತಿದೆ. ನಮ್ಮಲ್ಲಿ ವಿಜ್ಞಾನ, ತಂತ್ರಜ್ಞಾನದ ಹಿನ್ನೆಲೆಯಿಂದ ಬಂದ ವಿದ್ಯಾರ್ಥಿಗಳು ಕನ್ನಡದಲ್ಲಿ ಹೆಚ್ಚಿನ ಅಧ್ಯಯನದಲ್ಲಿ ನಿರತರಾಗಿರುವುದು ದಾಖಲೆಯೇ ಸರಿ. ಕರ್ನಾಟಕದ ಯಾವ ವಿಶ್ವವಿದ್ಯಾಲಯದಲ್ಲಿಯೂ ಇಂತಹ ಅವಕಾಶಗಳು ದೊರೆಯುತ್ತಿಲ್ಲ. ಸಾಹಿತ್ಯವಲಯವಾಗಿ ಮುಂಬಯಿ ಬೆಳೆಯುತ್ತಿದೆ. ಕನ್ನಡ ವಿಭಾಗದ ಕೃತಿಗಳ ಸಂಖ್ಯೆ ಶತಕವನ್ನು ದಾಟುವ ಹಂತದಲ್ಲಿದೆ. ತಿಳುವಳಿಕೆಗೆ ಬೇಕಾದ ಪರಿಪ್ರೇಕ್ಷೆಯನ್ನು ಕಟ್ಟಿಕೊಡುವುದು ಕನ್ನಡ ವಿಭಾಗದ ಮುಖ್ಯ ಕೆಲಸ ಎಂದು ನಾವು ಭಾವಿಸಿದ್ದೇವೆ. ನಮ್ಮ ವಿದ್ಯಾರ್ಥಿಗಳು ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ಸವಿತಾ ಅರುಣ್ ಶೆಟ್ಟಿ ಅವರು ಪ್ರತಿಭಾವಂತ ವಿದ್ಯಾರ್ಥಿಯಾಗಿ ವಿಶ್ವವಿದ್ಯಾಲಯದ ಬಂಗಾರದ ಪದಕದೊಂದಿಗೆ…

Read More

ವಿದ್ಯಾಗಿರಿ: ಬದುಕಿದ ಮೇಲೆ ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು. ಹುಟ್ಟಿದರೂ- ಸತ್ತರೂ ಗೊತ್ತಾಗದ ಸೆಗಣಿಯ ಹುಳುವಿನಿಂತೆ ನಮ್ಮ ಬದುಕು ಆಗಬಾರದು ಬೆಂಗಳೂರಿನ ಸಾಧನಾ ಕೋಚಿಂಗ್ ಸೆಂಟರ್- ಐಎಎಸ್ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ನಿರ್ದೇಶಕಿ ಡಾ. ಜ್ಯೋತಿ ಹೇಳಿದರು. ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಬೆಂಗಳೂರಿನ ಸಾಧನಾ ಕೋಚಿಂಗ್ ಸೆಂಟರ್ ವತಿಯಿಂದ ಗುರುವಾರ ನಡೆದ ಯುಪಿ ಎಸ್‍ಸಿ/ ಕೆಪಿಎಸ್‍ಸಿ ನಾಗರಿಕ ಸೇವೆಗಳ ಪರೀಕ್ಷೆಗಳಿಗೆ ತರಬೇತಿಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ‘ನಾವು ಐತಿಹಾಸಿಕ ಹೆಜ್ಜೆ ಇಡಲು ಬಯಸಿದ್ದೇವೆ. ಕೊಟ್ಟ ನಂಬಿಕೆ, ಇಟ್ಟ ಜವಾಬ್ದಾರಿಯನ್ನು ಸಾಧನಾ ಸಂಸ್ಥೆ ಉಳಿಸಿಕೊಂಡು ಬಂದಿದೆ’ ಎಂದರು. ‘ಪ್ರತಿಯೊಂದು ಪರೀಕ್ಷೆಗಳಿಗೂ ಕಷ್ಟ ಪಡಲೇಬೇಕು. ಐಎಎಸ್ -ಐಪಿಎಸ್ ಸುಲಭದ ಮಾತಲ್ಲ. ಪ್ರತಿಯೊಂದು ವಿಷಯ, ಹಲವಾರು ಹೊಸ ಮಾಹಿತಿಗಳನ್ನು ಅಧ್ಯಯನ ಮಾಡಬೇಕು. ವಿದ್ಯಾರ್ಥಿಗಳು ಬುದ್ಧಿವಂತರಾಗಿರುವಾಗ, ಶಿಕ್ಷಕರು ಅದಕ್ಕಿಂತ ಹೆಚ್ಚಿನ ಬುದ್ಧಿವಂತಿಕೆಯನ್ನು ಹೊಂದಿರಬೇಕು. ಸಾಧನೆ ಮಾಡುವ ಉದ್ದೇಶ ಇದ್ದಾಗ, ತರಬೇತಿ ಸಾರ್ಥಕತೆ ಪಡೆಯುತ್ತದೆ ಎಂದರು. ಪರೀಕ್ಷೆ ತೇರ್ಗಡೆ ಹೊಂದಿದರೆ ಉನ್ನತ ಅಧಿಕಾರಿಗಳ ಸಾಲಿನಲ್ಲಿ…

Read More

ವಿದ್ಯಾಗಿರಿ: ಸ್ವಯಂ ಜಾಗೃತಿ ಹಾಗೂ ಸ್ವಯಂ ವಿಶ್ಲೇಷಣೆಯಿಂದ ತನ್ನನ್ನು ತಾನು ಅರಿತುಕೊಳ್ಳಲು ಸಾಧ್ಯ. ನಮ್ಮ ಶಾಂತ ಮನಸ್ಸನ್ನೇ ನಿಗ್ರಹಿಸಿಕೊಂಡರೆ, ಮಾನಸಿಕ ಸಮಸ್ಯೆ ಉಲ್ಬಣಿಸಲು ಅವಕಾಶವಿಲ್ಲ ಎಂದು ಬೆಂಗಳೂರಿನ ಮನೋಶಾಸ್ತ್ರಜ್ಞ ನವೀಣ್ ಎಲ್ಲಂಗಳ ಹೇಳಿದರು. ಮೂಡುಬಿದಿರೆ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಪ್ರೆಸ್ ಕ್ಲಬ್ ಮೂಡುಬಿದರೆ ಸಹಯೋಗದಲ್ಲಿ ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದಲ್ಲಿ ಗುರುವಾರ ಹಮ್ಮಿಕೊಂಡ ‘ದೈನಂದಿನ ಜೀವನದಲ್ಲಿ ಮನೋವಿಜ್ಞಾನ’’ ವಿಶೇಷ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಮ್ಮ ಮನಸ್ಸಿನ ಬಗ್ಗೆ ನಾವು ತಿಳಿದುಕೊಳ್ಳಲು ಯತ್ನಿಸಬೇಕು. ಮನಸ್ಸನ್ನು ಬುದ್ಧಿ ನಿಯಂತ್ರಿಸಬೇಕು. ಚಿಂತೆ ಬೇಡ, ಚಿಂತನೆ ಇರಲಿ ಎಂದರು. ನಮ್ಮ ಆಲೋಚನೆಗೆ ಭಾವನೆ ಸೇರಿದಾಗ ನಂಬಿಕೆಯು ಸೃಜಿಸುತ್ತದೆ. ಜಾಗೃತ ಮನಸ್ಸು ನಮ್ಮನ್ನು ಯಶಸ್ಸಿನೆಡೆಗೆ ಕರೆದೊಯ್ಯುತ್ತದೆ. ಸ್ವಯಂ ಉನ್ನತೀಕರಣ ಬಹುಮುಖ್ಯ ಎಂದರು. ಯಾವಾಗಲೂ ಧನಾತ್ಮಕ ಮತ್ತು ವರ್ತಮಾನದ ಬಗ್ಗೆ ಯೋಚಿಸಿ. ಭೂತಕ್ಕೆ ಚಿಂತಿಸುವ, ಭವಿಷ್ಯಕ್ಕೆ ಭಯ ಪಡುವ ಅಗತ್ಯವಿಲ್ಲ. ನಿಮ್ಮ ಆತ್ಮಬಲಸದೃಢವಾಗಿರಲಿ ಎಂದರು. ಪ್ರಾರ್ಥನೆ ಚರ್ವಿತ ಚರ್ವಣ ಆಗಬಾರದರು. ಪ್ರಾರ್ಥನೆ…

Read More

ಬಂಟರ ಸಂಘ ಮುಂಬಯಿ ಇದರ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮಿತಿ ಆಶ್ರಯದಲ್ಲಿ ಎಪ್ರಿಲ್ 14 ರಂದು ರವಿವಾರ ಕುರ್ಲಾ ಪೂರ್ವ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ಬಂಟರ ಸಂಘದ ಅಧ್ಯಕ್ಷರಾದ ಪ್ರವೀಣ್ ಭೋಜ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷ ನವೀನ್ ಶೆಟ್ಟಿ ಇನ್ನ ಬಾಳಿಕೆಯವರ ನೇತೃತ್ವದಲ್ಲಿ ವಿಜೃಂಭಣೆಯಿಂದ ಜರಗಿದ ಬಿಸುಪರ್ಬ, ಬಂಟ ದಿನಾಚರಣೆ ಹಾಗೂ ಶ್ರೀ ಮಹಾವಿಷ್ಣು ಬಂಟ ಯಕ್ಷ ಕಲಾ ವೇದಿಕೆಯ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ, ಮುಖ್ಯ ಅತಿಥಿ, ಮಹಾದಾನಿ, ಕೃಷ್ಣ ಪ್ಯಾಲೇಸ್ ಗ್ರೂಪ್ ಆಫ್ ಹೊಟೇಲ್ಸ್ ಇದರ ಕಾರ್ಯಾಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಕೃಷ್ಣ ವೈ. ಶೆಟ್ಟಿ, ಗೌ. ಅತಿಥಿ, ಬಂಟರ ಸಂಘದ ವಿಶ್ವಸ್ಥ ಮಾತೃಭೂಮಿ ಕೋ.ಆಪ್ ಕ್ರೆಡಿಟ್ ಸೊಸೈಟಿ ಲಿ. ಇದರ ಕಾರ್ಯಾಧ್ಯಕ್ಷ ಉಳ್ತೂರು ಮೋಹನ್ ದಾಸ್ ಶೆಟ್ಟಿಯವರು ಭತ್ತದ ಕಳಸೆಯಲ್ಲಿಟ್ಟಿದ್ದ ಕಲ್ಪವೃಕ್ಷದ ಹಿಂಗಾರವನ್ನು ಅರಳಿಸುವ ಮೂಲಕ ಸಾಂಕೇತಿಕವಾಗಿ ಉದ್ಘಾಟಿಸಿದರು. ಅಧ್ಯಕ್ಷ ಪ್ರವೀಣ್…

Read More

ಮುಂಬಯಿ ವಿಶ್ವವಿದ್ಯಾಲಯದ ಕಾರ್ಯಕ್ರಮ ಎಂದರೆ ಅದು ಅತ್ಯಂತ ಸರಳ, ಸುಂದರ. ಬುದ್ಧಿಜೀವಿಗಳು,  ಅಕ್ಷರಜ್ಞಾನಿಗಳು ಸೇರಿರುವ ಈ ಕಾರ್ಯಕ್ರಮಕ್ಕೆ ಬಂದಿರುವುದು ನನಗೆ ಅನ್ಯಗ್ರಹದಿಂದ ಬಂದಂತಾಗಿದೆ. ಇದೊಂದು ವಿಶೇಷ ಸಭೆ. ಮುಂಬೈ ವಿವಿ ಕನ್ನಡ ವಿಭಾಗದ ಮಹನೀಯರು  ಕೃತಿರಚನೆಗಳನ್ನು ಮಾಡುತ್ತಾ ಬಂದಿದ್ದಾರೆ. ಜೀವನವನ್ನು ಹತ್ತಿರದಿಂದ ನೋಡಿದರೆ ಮಾತ್ರ ಒಳ್ಳೆಯ ಪುಸ್ತಕ ಬರೆಯಬಹುದು ಎಂದು ಮುಂಬಯಿ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ಅವರು ಅಭಿಪ್ರಾಯ ಪಟ್ಟರು.  ಅವರು ಏಪ್ರಿಲ್ 13 ರ ಶನಿವಾರದಂದು, ಕಲೀನಾ ಕ್ಯಾಂಪಸ್ ನ ಜೆ ಪಿ ನಾಯಕ್ ಭವನದಲ್ಲಿ  ಮುಂಬೈ ವಿವಿ ಕನ್ನಡ ವಿಭಾಗ ಆಯೋಜಿಸಿದ್ದ ವಿಭಾಗದ 46ರ ಸಂಭ್ರಮ, ನಿರಂಜನ ಶತಮಾನೋತ್ಸವ,  ಉಪನ್ಯಾಸ ಹಾಗೂ ಆರು ಕೃತಿಗಳ ಬಿಡುಗಡೆ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ  ವಿಭಾಗ ಪ್ರಮುಖರು ಮತ್ತು ಪ್ರಾಧ್ಯಾಪಕರೂ ಆದ ಪ್ರೊ . ಜಿ ಎನ್ ಉಪಾಧ್ಯ ಅವರು ಮಾತನಾಡಿ,  ಕನ್ನಡವು ಕನ್ನಡವ ಕನ್ನಡಿಸುತಿರಲಿ  ಎಂಬ ಕವಿವಾಣಿಯ ಆಶಯದಂತೆ ಕನ್ನಡ ವಿಭಾಗವು ನಲ್ವತ್ತಾರು…

Read More

ಮೂಡುಬಿದಿರೆ: ಮಾರ್ಚ್2024ರಲ್ಲಿ ನಡೆದ ಎ.ಸಿ.ಸಿ.ಎ – ಯು. ಕೆ ಪರೀಕ್ಷೆಯ ವಿವಿಧ ಪತ್ರಿಕೆಗಳಲ್ಲಿ ಆಳ್ವಾಸ್ ಕಾಲೇಜಿನ 15 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಿದ್ಯಾರ್ಥಿಗಳಾದ ಹಸನ್ ಸುಹೈಲ್, ಶೇಖ್ ಮೊಹಮ್ಮದ್ ಸೈಮ್, ಸಲ್ಮಾನ್ ಸಲೀಂ, ಶಮ್ಲಾ ಪಿ.ಹೆಚ್, ಕಾರ್ತಿಕ್ ಶೆಟ್ಟಿ, ಬಿಂದಿಯಾ ಎನ್ ಇವರು ಎ.ಸಿ.ಸಿ.ಎ – ಎಫ್-7 ಫೈನಾನ್ಶಿಯಲ್ ರಿಪೋರ್ಟಿಂಗ್ ಪತ್ರಿಕೆಯಲ್ಲಿ ಉತ್ತೀರ್ಣರಾಗಿ ಶೇಕಡಾ 85.71 ಫಲಿತಾಂಶ ದಾಖಲಾಗಿದೆ. ಜಾಗತಿಕ ಮಟ್ಟದಲ್ಲಿ ಈ ಪತ್ರಿಕೆಯಲ್ಲಿ 52 ಶೇಕಡಾ ಫಲಿತಾಂಶ ಬಂದಿದ್ದು, ಆಳ್ವಾಸ್ 85.71 ಶೇಕಡಾ ಫಲಿತಾಂಶ ಪಡೆಯುವುದರ ಮೂಲಕ ಗಮನ ಸೆಳೆದಿದೆ. ಆಳ್ವಾಸ್‍ನ ದ್ವಿತೀಯ ಬಿ.ಕಾಂ. ಎ.ಸಿ.ಸಿ.ಎ.ಯ ವಿದ್ಯಾರ್ಥಿ ಹಸನ್ ಸುಹೈಲ್ ಶೇಕಡಾ 91 ಅಂಕಗಳನ್ನು ಪಡೆದುಕೊಂಡಿದ್ದು, ಇದುವರೆಗೆ ಈ ಪತ್ರಿಕೆಯಲ್ಲಿ ಆಳ್ವಾಸ್ ವಿದ್ಯಾರ್ಥಿ ಪಡೆದ ಅತ್ಯುತ್ತಮ ಅಂಕವಾಗಿದೆ. ಆಳ್ವಾಸ್‍ನ ತೃತೀಯ ಬಿ.ಕಾಂ. ವಿದ್ಯಾರ್ಥಿಗಳಾದ ವಸುಂಧರಾ ಪ್ರಮೋದ್ ವಿ., ಚಂದನಾ ಎಸ್.ಡಿ, ಲಿಯೋನಾ ವಿಯೋಲಾ ಡಿಸೋಜಾ, ಲಿಯೋನಾ ರೋಜ್ನಾ ರೋಡ್ರಿಗಸ್, ಶ್ರೇಷ್ಠಾ ಪಿ.ಜೆ, ಮೋನಿಶ್ ಮತ್ತು ಲೀಜಾ ರೇಗೊ ಎ.ಸಿ.ಸಿ.ಎ – ಎಫ್-9…

Read More

ರಚನಾತ್ಮಕ ಸಂಬಂಧ ಏರ್ಪಡಿಸಲು ಕಾರ್ಯ ಮತ್ತು ಸಮಾಜದ ವ್ಯಕ್ತಿಗಳ ಪರಸ್ಪರ ಸಂಬಂಧ ಬೆಳೆಯಲು ಮರದ ರೆಂಬೆಗಳಂತೆ ಸಂಘದ ವಲಯ ಸಮಿತಿಗಳು ರಚನೆಯಾಗಬೇಕು. ಅದೇ ರೀತಿ ನಮ್ಮ ಬಂಟರ ಸಂಘದ ಪೂರ್ವ ವಲಯ ಸ್ಥಾಪನೆಯಾಗಿ ಸಂಘಕ್ಕೆ ಮತ್ತೊಂದು ಕೈ ಬಲ ದೊರಕಿದೆ. ಸಮಾಜದ ಅಭಿವೃದ್ದಿಗಾಗಿ ಮಾಡುವ ಕಾರ್ಯ ಯೋಜನೆಗಳು ಸಂಘದ ಉದ್ದೇಶದಂತೆ ಸಂಘಟಿತರಾಗಿ ನಾವೆಲ್ಲರೂ ಒಂದೇ ಕಾರ್ಯ ಮಾರ್ಗದಲ್ಲಿ ನಡೆಯಬೇಕು. ನಮ್ಮ ಸಂಘದ ಮುಖಾಂತರ ನಡೆಯುವ ಕಾರ್ಯಕ್ರಮದಲ್ಲಿ ತಾವೆಲ್ಲರೂ ಭಾಗಿಗಲಾಬೇಕು. ಯಾವುದೇ ರೀತಿಯ ಕಾರ್ಯಕ್ರಮವಿರಲಿ ನಮ್ಮ ಕಾರ್ಯಕ್ರಮ ಎಂಬ ಭಾವನೆ ನಿಮ್ಮಲ್ಲಿರಲಿ. ಪೂರ್ವ ವಲಯ ಪ್ರಥಮ ಬಾರಿಗೆ ಅರಶಿನ ಕುಂಕುಮ ಕಾರ್ಯಕ್ರಮ ಆಯೋಜನೆಯ ಮೂಲಕ ಶುಭ ಕಾರ್ಯವನ್ನು ಮಾಡಿದೆ. ಅರಶಿನ ಕುಂಕುಮ ಹಿಂದೂ ಸಂಸ್ಕ್ರತಿಯ ಮಹಿಳೆಯರು ಆಚರಿಸುವ ಶುಭ ಪರ್ವ. ಇದರ ಮಹತ್ವವನ್ನು ಅರಿತು ನಾವೆಲ್ಲರೂ ಭಾಗಿಗಳಾಗಿ ಉತ್ತಮ ಕಾರ್ಯಕ್ರಮ ಮೂಡಿ ಬಂದಿದೆ. ಪೂರ್ವ ವಲಯಕ್ಕೆ ಶುಭವನ್ನು ಕೋರುತ್ತೇನೆ ಎಂದು ಪುಣೆ ಬಂಟರ ಸಂಘದ ಮಹಿಳಾ ಕಾರ್ಯಾಧ್ಯಕ್ಷೆ ಸುಲತಾ ಎಸ್ ಶೆಟ್ಟಿ ನುಡಿದರು.…

Read More

ಬ್ರಹ್ಮಾವರದ ಎಸ್‌ಎಂಎಸ್ ಶಿಕ್ಷಣ ಸಂಸ್ಥೆಯ ಮಕ್ಕಳ ಮಂಟಪದಲ್ಲಿ ಸಾಂಸ್ಕೃತಿಕ ಸಂಘಟನೆ ಭೂಮಿಕಾ ಹಾರಾಡಿ ಸಂಸ್ಥೆಯ ಹತ್ತನೇ ವರ್ಷದ ನಾಟಕೋತ್ಸವ ‘ಬಣ್ಣ’ದ ಉದ್ಘಾಟನಾ ಕಾರ್ಯಕ್ರಮದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿಗೆ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರಿಗೆ ರಂಗ ಗೌರವ ಸಮರ್ಪಣೆ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರು, ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸುವ ಕಾರ್ಯ ಸಮಾಜದ ಕರ್ತವ್ಯವಾಗಬೇಕು ಎಂದರು. ಈ ಮಣ್ಣಿನ ಜಾನಪದ ಕಲೆಗಳನ್ನು ಬೆಳೆಸುವ ಉದ್ದೇಶದಿಂದಲೇ ಹಿರಿಯ ವಿದ್ವಾಂಸರಾದ ಏರ್ಯ ಲಕ್ಷ್ಮಿ ನಾರಾಯಣ ಆಳ್ವ, ಎ.ಜಿ.ಕೊಡ್ಗಿ, ಡಾ.ತಿಮ್ಮೇ ಗೌಡ ಅವರ ಕೋರಿಕೆಯ ಮೇರೆಗೆ ಕರ್ನಾಟಕ ಜಾನಪದ ಪರಿಷತ್ತಿನ ಉಡುಪಿ ಜಿಲ್ಲಾಧ್ಯಕ್ಷನಾಗಲು ಒಪ್ಪಿದೆ. ಕಳೆದ ೬ ವರ್ಷಗಳಲ್ಲಿ ನಾಡಿನಾದ್ಯಂತ ೨೭ಕ್ಕೂ ಅಧಿಕ ಜಾನಪದ ವೈಭವ ಕಾರ್ಯಕ್ರಮಗಳನ್ನು ನಡೆಸಿ, ಈ ಮೂಲಕ ಜಾನಪದ ಕಲೆಯ ಬೆಳವಣಿಗೆಯ ಜೊತೆಗೆ ಜಾನಪದ ಕಲಾ ತಂಡಗಳಿಗೆ ಪ್ರೋತ್ಸಾಹಿಸುವ ಕಾರ್ಯ ನಡೆಸಲಾಗಿದೆ. ಅಲ್ಲದೇ ಜಾನಪದ ಸಾಧಕ ಕಲಾವಿದರು, ಕಲಾ ಸಂಘಟಕರು ಹಾಗೂ ಕಲಾ…

Read More

ತುಳು ಭಾಷೆಯ ಉಳಿವಿಗಾಗಿ ಮತ್ತು ಔನ್ನತ್ಯಕ್ಕಾಗಿ ಅಮೆರಿಕಾದ ಎಲ್ಲಾ ತುಳುವರನ್ನು ಸೇರಿಸಿಕೊಂಡು ಸ್ಥಾಪನೆಯಾದ ಆಲ್ ಅಮೆರಿಕಾ ತುಳು ಅಸೋಸಿಯೇಷನ್ AATA ಎಂದಿನಂತೆ ಈ ವರ್ಷದ ಬಿಸು ಆಚರಣೆಯನ್ನು ಎಪ್ರಿಲ್ 21ನೇ ತಾರೀಕು ಆದಿತ್ಯವಾರದಂದು ಹಮ್ಮಿಕೊಂಡಿದೆ. ಡಿಜಿಟಲ್ ವರ್ಚುಯಲ್ ವೇದಿಕೆಯಲ್ಲಿ ನಡೆಯುವ ಈ ಬಿಸು ಪರ್ಬ ಕಾರ್ಯಕ್ರಮ ಅಮೇರಿಕಾದ ಸಮಯ ಬೆಳಿಗ್ಗೆ 11:00 ಗಂಟೆಗೆ ನಡೆಯಲಿದ್ದು ಭಾರತದಲ್ಲಿ ತುಳುವರು ರಾತ್ರಿ 8.30 ರ ಸಮಯದಲ್ಲಿ YOUTUBE ನ ನೇರಪ್ರಸಾರದಲ್ಲಿ https://www.aa tana.org/bisu _parba_2024 ಮೂಲಕ ನೋಡಬಹುದಾಗಿದೆ. ಪರಮ ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಒಡಿಯೂರು ಕ್ಷೇತ್ರ ಇವರ ಶುಭ ಅಶೀರ್ವಚನದೊಂದಿಗೆ ಆರಂಭವಾಗುವ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ NETK ಮತ್ತು ಕಲಾತರಂಗಿಣಿ ಸ್ಥಾಪಕರಾದ ಹಾಗೂ AATA ಸಂಸ್ಥೆಯ ಮಹಾಪೋಷಕರಾದ ಅಮೆರಿಕಾದ ಹೆಮ್ಮೆಯ ತುಳುವ ಡಾ. ಸುಧಾಕರ್ ರಾವ್ ಮತ್ತು ತುಳು ಸಂಗೀತ ಸಾಹಿತ್ಯ ಅಭಿವೃದ್ಧಿಗಾಗಿ ಹುಟ್ಟಿಕೊಂಡ ಸಂಸ್ಥೆ ಐಲೇಸಾ ದಿ ವಾಯ್ಸ್ ಆಫ್ ಓಷನ್ (ರಿ) ಇದರ ಸ್ಥಾಪಕ ಸದಸ್ಯರಾದ ತುಳು…

Read More