Author: admin

ವಿದ್ಯಾಗಿರಿ: ಮಂಗಳೂರು ವಿಶ್ವವಿದ್ಯಾಲಯದ 2024 – 25ನೇ ಸಾಲಿನ ಬಿ.ಕಾಂ. ಆರನೇ ಸೆಮಿಸ್ಟರ್‍ನ ಎಲ್ಲಾ ವಿಷಯಗಳಲ್ಲಿ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ದೀಕ್ಷಾ ಡಿ ಶೆಟ್ಟಿ ಪೂರ್ಣ ಅಂಕ ಗಳಿಸಿದ್ದಾಳೆ. ಮಂಗಳೂರು ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗದ ಪರೀಕ್ಷಾ ಇತಿಹಾಸದಲ್ಲೇ ಇದು ದಾಖಲೆಯಾಗಿದೆ. ಇಂಡಿಯನ್ ಅಕೌಂಟಿಂಗ್ ಸ್ಟಾಂಡರ್ಡ್-2, ಇನ್‍ವೆಸ್ಟ್‍ಮೆಂಟ್ ಮ್ಯಾನೆಜ್‍ಮೆಂಟ್, ಅಡ್ವಾನ್ಸ್ಡ್ ಫೈನಾನ್ಶಿಯಲ್ ಮ್ಯಾನೆಜ್‍ಮೆಂಟ್, ಇನ್‍ಕಂ ಟ್ಯಾಕ್ಸ್ ಲಾ ಆ್ಯಂಡ್ ಪ್ರಾಕ್ಟೀಸ್ 2, ಮ್ಯಾನೆಜ್‍ಮೆಂಟ್ ಅಕೌಂಟಿಂಗ್, ಅಸೆಸ್‍ಮೆಂಟ್ ಆಫ್ ಪರ್ಸನ್ಸ್ ಅದರ್ ದೆನ್ ಇಂಡಿವಿಜ್ಯುವಲ್ಸ್ ಆ್ಯಂಡ್ ಫೈಲಿಂಗ್ ಐಟಿಆರ್ಸ್, ಹಾಗೂ ಮಿನಿ ಪ್ರಾಜೆಕ್ಟ್ ವಿಷಯಗಳಲ್ಲಿ ಪೂರ್ಣಾಂಕ ಗಳಿಸಿದ್ದಾಳೆ. ಅವಳ ಒಟ್ಟಾರೆ ಸರಾಸರಿ ಅಂಕವು ಶೇಕಡಾ 95.54 ಇದೆ. ಕಾಲೇಜಿನ ಕ್ಯಾಂಪಸ್ ಸಂದರ್ಶನದಲ್ಲಿ ಟಿಸಿಎಸ್ ಕಂಪೆನಿಗೆ ಉತ್ತಮ ವೇತನದೊಂದಿಗೆ ಆಯ್ಕೆಯಾಗಿದ್ದಾಳೆ. ಪಠ್ಯೇತರ ಚಟುವಟಿಕೆಗಳಲ್ಲೂ ಸಕ್ರಿಯಳಾಗಿದ್ದಳು. ಮೂಡುಬಿದಿರೆ ದರೆಗುಡ್ಡೆ ನಿವಾಸಿಗಳಾದ ದಿನೇಶ ಶೆಟ್ಟಿ ಹಾಗೂ ಜಯಶ್ರೀ ಶೆಟ್ಟಿ ದಂಪತಿಗಳ ಪುತ್ರಿ. ವಿದ್ಯಾರ್ಥಿನಿಯ ಸಾಧನೆಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ ಆಳ್ವ ಶ್ಲಾಘಿಸಿದ್ದಾರೆ.

Read More

ಗ್ರಾಹಕರಿಗೆ ಉತ್ತಮ ಸೇವೆ ನೀಡುವುದರೊಂದಿಗೆ ಆರ್ಥಿಕ ರಂಗದಲ್ಲಿ ಮಾತೃಭೂಮಿ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಯು ಪ್ರತಿಷ್ಠಿತ ಸ್ಥಾನಮಾನದೊಂದಿಗೆ ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗಿದೆ. ಸೊಸೈಟಿ ಸ್ಥಾಪನೆಯಾದಾಗಿನಿಂದ ಈವರೆಗಿನ ಕಾರ್ಯಾಧ್ಯಕ್ಷರು, ನಿರ್ದೇಶಕ ಮಂಡಳಿ ಮತ್ತು ಸಕಲ ಸಮಿತಿ ಸದಸ್ಯರ ಸೇವೆಯನ್ನು ಮರೆಯುವಂತಿಲ್ಲ. ಸಿಬ್ಬಂದಿಯ ನಿರಂತರ ಪರಿಶ್ರಮದಿಂದ ಸೊಸೈಟಿಯು ಮಹಾನಗರದಲ್ಲಿ ಪ್ರತಿಷ್ಠಿತ ಸ್ಥಾನದಲ್ಲಿ ನಿಂತಿದೆ ಎಂದು ಮಾತೃಭೂಮಿ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಕಾರ್ಯಾಧ್ಯಕ್ಷ ಉಳ್ತೂರು ಮೋಹನ್ ದಾಸ್ ಶೆಟ್ಟಿ ಹೇಳಿದರು. ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ.ಭಂಡಾರಿ ಸಭಾಗೃಹದಲ್ಲಿ ಆಗಸ್ಟ್ 31ರಂದು ಜರಗಿದ ಮಾತೃಭೂಮಿ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಯ 36 ನೇಯ ವಾರ್ಷಿಕ ಮಹಾಸಭೆಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾರ್ವಜನಿಕ ಹಿತದೃಷ್ಟಿ ಮುಂದಿಟ್ಟುಕೊಂಡು ಬೆಳೆದಿರುವ ಮಾತೃಭೂಮಿ ಕೋ ಆಪರೇಟಿವ್ ಸೊಸೈಟಿಯ ಕಾರ್ಯ ವ್ಯಾಪ್ತಿಯು ಮುಂಬಯಿ ಮಹಾನಗರ ಹಾಗೂ ಉಪನಗರ ಸಾಕಿನಾಕ, ಥಾಣೆ, ವಸಾಯಿ, ವಾಶಿ, ಕಲ್ಯಾಣ್, ಪುಣೆ, ನಾಸಿಕ್, ರಾಯಗಢ ಜಿಲ್ಲೆಗಳಿಗೂ ವಿಸ್ತರಿಸಲಾಗಿದೆ. ನಿರಂತರ ಉತ್ತಮ ಸೇವೆ ನೀಡುವುದರೊಂದಿಗೆ…

Read More

ಸಹಕಾರಿ ಕ್ಷೇತ್ರದ ಮೂಲಕ ಸರಕಾರದ ಅನೇಕ ಅನುದಾನಗಳು ನೇರವಾಗಿ ರೈತರ ಖಾತೆಗೆ ಜಮಾ ಆಗುತ್ತದೆ. ಸಹಕಾರ ಸಂಘಗಳು ರೈತರ ಕಷ್ಟ ಸುಖಗಳಲ್ಲಿ ಭಾಗಿಯಾಗುತ್ತವೆ. ಆದ್ದರಿಂದ ಸಹಕಾರ ಕ್ಷೇತ್ರ ಗ್ರಾಮೀಣ ಜನರ ಭರವಸೆಯ ಕ್ಷೇತ್ರವಾಗಿದೆ ಎಂದು ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಹೇಳಿದರು. ಸೆಪ್ಟೆಂಬರ್ 1 ರಂದು ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕೊಡಿಯಾಲ ಶಾಖಾ ಕಟ್ಟಡದ ಲೋಕಾರ್ಪಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಕೊಡಿಯಾಲ ಶಾಖೆಗೆ ಸ್ಥಳ ಮಂಜೂರಾತಿ ಮಾಡಿಸಿದ ಹಿರಿಯ ಸಹಕಾರಿ ಧುರೀಣ ದಿವಂಗತ ಪಿ. ಭಾಸ್ಕರ ರೈಯವರ ಭಾವಚಿತ್ರ ಅನಾವರಣಗೊಳಿಸಲಾಯಿತು. ಸಂಘದ ನೂತನ ಸಭಾಂಗಣವನ್ನು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕ ಎಸ್.ಎನ್. ಮನ್ಮಥ ಉದ್ಘಾಟಿಸಿದರು. ಗ್ರಾಹಕ ಸೇವಾ ಕೇಂದ್ರವನ್ನು ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ನಮಿತಾ ಎಲ್. ರೈ ಉದ್ಘಾಟಿಸಿದರು. ಬೆಳ್ಳಾರೆ ಸಹಕಾರಿ ಸಂಘದ ಅಧ್ಯಕ್ಷ ಶ್ರೀರಾಮ ಪಾಟಾಜೆ ಅಧ್ಯಕ್ಷತೆ ವಹಿಸಿದ್ದರು. ಸಂಘದ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಡಿ. ವಿಜಯ…

Read More

ಬಂಟ್ಸ್ ಕತಾರ್ ಆಡಳಿತ ಮಂಡಳಿಯು ಆಟಿಡೊಂಜಿ ದಿನ ಕಾರ್ಯಕ್ರಮವನ್ನು ಕತಾರ್ ನಲ್ಲಿ ಮೊದಲ ಬಾರಿಗೆ ಆಗಸ್ಟ್ 15 ರಂದು ಕತಾರಿನ ಲಯನ್ ಗಾರ್ಡನ್ ಕ್ಲಬ್ ಹೌಸ್ ನಲ್ಲಿ ಬಹಳ ವಿಜೃಂಭಣೆಯಿಂದ ಆಯೋಜಿಸಿತ್ತು. ಜತೆ ಕಾರ್ಯದರ್ಶಿ ಚಿದಾನಂದ ರೈಯವರು ನೆರೆದ ಸದಸ್ಯರನ್ನು ಸ್ವಾಗತಿಸುವುದರೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಸಂಪ್ರದಾಯದಂತೆ ದೀಪ ಪ್ರಜ್ವಲನೆಯೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಕತಾರ್ ನಲ್ಲಿ ನೆಲೆಸಿರುವ ಎಲ್ಲರ ಒಗ್ಗೂಡುವಿಕೆಯಿಂದ ಇಂತಹ ವಿನೂತನ ಕಾರ್ಯಕ್ರಮದ ಮುಖಾಂತರ ತುಳುನಾಡಿನ ಕಲೆ ಮತ್ತು ಸಂಸ್ಕೃತಿಯನ್ನು ಕತಾರ್ ನಲ್ಲಿ ಪರಿಚಯಿಸಲು ಸಾಧ್ಯವೆಂದು ಅಧ್ಯಕ್ಷರಾದ ನವೀನ ಶೆಟ್ಟಿ ಇರುವೈಲ್ ರವರು ಅಭಿಪ್ರಾಯಪಡಿಸಿ, ಸಹಕರಿಸಿದ ಎಲ್ಲರಿಗೂ ಕೃತಜ್ಞತೆಯನ್ನು ವ್ಯಕ್ತಪಡಿಸಿದರು. ಸೌರಭ್ ಶೆಟ್ಟಿಯವರು ವಿಶಿಷ್ಟ ರೀತಿಯಲ್ಲಿ ಆಟಿ ತಿಂಗಳ ಮಹತ್ವವನ್ನು ತಿಳಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಸ್ಥಾಪಕಾಧ್ಯಕ್ಷರಾದ ಡಾ| ಮೂಡಂಬೈಲ್ ರವಿ ಶೆಟ್ಟಿ ಹಾಗೂ ಮಾಜಿ ಅಧ್ಯಕ್ಷರಾದ ನವನೀತ್ ಶೆಟ್ಟಿಯವರು ಮಾತನಾಡಿ, ವಿನೂತನವಾಗಿ ಕಾರ್ಯಕ್ರಮವನ್ನು ಆಯೋಜಿಸಿ ಪರಿಚಯಿಸಿದ ಆಡಳಿತ ಮಂಡಳಿಯ ಕಾರ್ಯವೈಖರಿಯನ್ನು ಪ್ರಶಂಸಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಆಟಿ ತಿಂಗಳ ವಿಶಿಷ್ಟ ರೀತಿಯ…

Read More

2023-24ನೇ ಸಾಲಿಗೆ ರೂ. 12.01 ಕೋಟಿ ಲಾಭ, ಶೇ. 25 ಡಿವಿಡೆಂಡ್: ಕೆ. ಜೈರಾಜ್ ಬಿ. ರೈ, ಆಧ್ಯಕ್ಷರು ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿಯ 30ನೇ ವಾರ್ಷಿಕ ಮಹಾಸಭೆ, ಸ0ಘದ ಅಧ್ಯಕ್ಷರಾದ          ಶ್ರೀ ಕೆ. ಜೈರಾಜ್ ಬಿ. ರೈಯವರ ಅಧ್ಯಕ್ಷತೆಯಲ್ಲಿ ಮ0ಗಳೂರಿನ ಉರ್ವ ಸೆ0ಟನರಿ ಚರ್ಚ್ ಹಾಲ್‍ನಲ್ಲಿ ದಿನಾ0ಕ 01.09.2024ರ0ದು ಜರಗಿತು. ಸ0ಘವು 31.03.2024ಕ್ಕೆ ಅ0ತ್ಯವಾದ, 2023-24ನೇ ಸಾಲಿನಲ್ಲಿ ರೂ.12.01 ಕೋಟಿ ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ  ಶೇ. 25 ಡಿವಿಡೆ0ಡ್‍ನ್ನು ನೀಡಲು ಮಹಾಸಭೆಯಲ್ಲಿ ನಿರ್ಧರಿಸಿದೆ. ಸಂಘದ ಅಧ್ಯಕ್ಷರಾದ ಶೀ ಕೆ. ಜೈರಾಜ್ ಬಿ. ರೈಯವರು 2023-24ನೇ ಸಾಲಿನ ಆಡಳಿತ ಮಂಡಳಿಯ ವರದಿ ಮತ್ತು ಕಾರ್ಯಯೋಜನೆಗಳನ್ನು ಮಂಡಿಸಿ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ, ಠೇವಣಾತಿ ಮತ್ತು ಸಾಲ ಸೇರಿದಂತೆ ಒಟ್ಟು ಸಾರ್ವಕಾಲಿಕ ದಾಖಲೆಯ ರೂ. 151 ಕೋಟಿ ವೃದ್ಧಿಯನ್ನು ದಾಖಲಿಸಿ, 31/03/2024ಕ್ಕೆ ರೂ.533 ಕೋಟಿ ಠೇವಣಾತಿ, ರೂ.453 ಕೋಟಿ ಸಾಲ, ರೂ.986 ಕೋಟಿ ಮೀರಿದ ಒಟ್ಟು ವ್ಯವಹಾರ,…

Read More

ವಿದ್ಯಾಗಿರಿ: ಮಂಗಳೂರು ವಿಶ್ವವಿದ್ಯಾಲಯದ 2024 – 25ನೇ ಸಾಲಿನ ಬಿ.ಕಾಂ. ಆರನೇ ಸೆಮಿಸ್ಟರ್‍ನ ಎಲ್ಲಾ ವಿಷಯಗಳಲ್ಲಿ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ದೀಕ್ಷಾ ಡಿ ಶೆಟ್ಟಿ ಪೂರ್ಣ ಅಂಕ ಗಳಿಸಿದ್ದಾಳೆ. ಮಂಗಳೂರು ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗದ ಪರೀಕ್ಷಾ ಇತಿಹಾಸದಲ್ಲೇ ಇದು ದಾಖಲೆಯಾಗಿದೆ. ಇಂಡಿಯನ್ ಅಕೌಂಟಿಂಗ್ ಸ್ಟಾಂಡರ್ಡ್-2, ಇನ್‍ವೆಸ್ಟ್‍ಮೆಂಟ್ ಮ್ಯಾನೆಜ್‍ಮೆಂಟ್, ಅಡ್ವಾನ್ಸ್ಡ್ ಫೈನಾನ್ಶಿಯಲ್ ಮ್ಯಾನೆಜ್‍ಮೆಂಟ್, ಇನ್‍ಕಂ ಟ್ಯಾಕ್ಸ್ ಲಾ ಆ್ಯಂಡ್ ಪ್ರಾಕ್ಟೀಸ್ 2, ಮ್ಯಾನೆಜ್‍ಮೆಂಟ್ ಅಕೌಂಟಿಂಗ್, ಅಸೆಸ್‍ಮೆಂಟ್ ಆಫ್ ಪರ್ಸನ್ಸ್ ಅದರ್ ದೆನ್ ಇಂಡಿವಿಜ್ಯುವಲ್ಸ್ ಆ್ಯಂಡ್ ಫೈಲಿಂಗ್ ಐಟಿಆರ್ಸ್, ಹಾಗೂ ಮಿನಿ ಪ್ರಾಜೆಕ್ಟ್ ವಿಷಯಗಳಲ್ಲಿ ಪೂರ್ಣಾಂಕ ಗಳಿಸಿದ್ದಾಳೆ. ಅವಳ ಒಟ್ಟಾರೆ ಸರಾಸರಿ ಅಂಕವು ಶೇಕಡಾ 95.54 ಇದೆ. ಕಾಲೇಜಿನ ಕ್ಯಾಂಪಸ್ ಸಂದರ್ಶನದಲ್ಲಿ ಟಿಸಿಎಸ್ ಕಂಪೆನಿಗೆ ಉತ್ತಮ ವೇತನದೊಂದಿಗೆ ಆಯ್ಕೆಯಾಗಿದ್ದಾಳೆ. ಪಠ್ಯೇತರ ಚಟುವಟಿಕೆಗಳಲ್ಲೂ ಸಕ್ರಿಯಳಾಗಿದ್ದಳು. ಮೂಡುಬಿದಿರೆ ದರೆಗುಡ್ಡೆ ನಿವಾಸಿಗಳಾದ ದಿನೇಶ ಶೆಟ್ಟಿ ಹಾಗೂ ಜಯಶ್ರೀ ಶೆಟ್ಟಿ ದಂಪತಿಗಳ ಪುತ್ರಿ. ವಿದ್ಯಾರ್ಥಿನಿಯ ಸಾಧನೆಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ ಆಳ್ವ ಶ್ಲಾಘಿಸಿದ್ದಾರೆ.

Read More

ಮೂಡುಬಿದಿರೆ: ರಾಷ್ಟ್ರೀಯ ಸೇವಾ ಯೋಜನೆ ನೀಡುವಂತಹ ಕೌಟುಂಬಿಕ ಅನುಭವ ಬೇರೆ ಯಾವುದೇ ಸಂಘಟನೆ ನೀಡಲಾರದು ಎಂದು ಮೂಡುಬಿದರೆ ಶ್ರೀ ಧವಲಾ ಕಾಲೇಜಿನ ನಿವೃತ್ತ ಪ್ರಾಚಾರ್ಯ ಪ್ರೋಅಜಿತ್ ಪ್ರಸಾದ್ ಅಭಿಪ್ರಾಯಪಟ್ಟರು. ಅವರು ಶಿವರಾಮ ಕಾರಂತ ವೇದಿಕೆಯಲ್ಲಿ, ಶನಿವಾರ ಆಳ್ವಾಸ್ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಪ್ರಸಕ್ತ ವರ್ಷದ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿ ಸಮುದಾಯದ ಸಾಮಥ್ರ್ಯವನ್ನು ಸರಿಯಾಗಿ ಬಳೆಸಿಕೊಳ್ಳಲು ಆರಂಭಗೊಂಡಿದ್ದೇ ರಾಷ್ಟ್ರೀಯ ಸೇವಾ ಯೋಜನೆ ಮೂಲಕ. 1969 ರಲ್ಲಿ ಎನ್.ಎಸ್.ಎಸ್ ಶುರುವಾದಾಗ ಅಂದಿನ ಯುವಕರ ಪ್ರಮುಖ ಆಕರ್ಷಣೆ ಎನ್‍ಎಸ್‍ಎಸ್ ಆಗಿತ್ತು. ಸಾಮಾಜಿಕ ಕಳಕಳಿ, ಬದ್ಧತೆ ಮತ್ತು ಉತ್ತರದಾಯಿತ್ವದ ಗುಣಗಳನ್ನು ಎನ್.ಎಸ್.ಎಸ್ ನೀಡುತ್ತದೆ. ವ್ಯಕ್ತಿತ್ವ ವಿಕಸನವೆಂದರೆ ದೌರ್ಬಲ್ಯಗಳನ್ನು ಕಡಿಮೆಗೊಳಿಸಿ ಧನಾತ್ಮಕ ಚಿಂತನೆಯನ್ನು ಹೆಚ್ಚಿಸಿಕೊಳ್ಳುವುದಾಗಿದೆ. ಜೀವನವೆಂದರೆ ನಮಗಾಗಿ ಬದುಕೋದಲ್ಲ. ಇತರರ ಜೊತೆಗೆ ಬದುಕುತ್ತಾ, ಬೆಳೆಯುತ್ತಾ ಹೋಗುವ ವಿಶ್ವ ಪ್ರಜ್ಞೆ. ಆಗ ಮಾತ್ರ ನಮ್ಮಲ್ಲಿ ಸಮಷ್ಟಿ ಮನೋಭಾವ ಬೆಳೆಯಲು ಸಾಧ್ಯ ಎಂದರು. ಎನ್.ಎಸ್.ಎಸ್. ಸ್ವಯಂಸೇವಕನ ಪ್ರಾಥಮಿಕ ಅರ್ಹತೆಯೇ 120 ಘಂಟೆಗಳ ಕಾರ್ಯಕ್ರಮದಲ್ಲಿ ಕ್ರಿಯಾತ್ಮಕವಾಗಿ ಭಾಗಿಯಾಗುವುದರ ಜೊತೆಗೆ…

Read More

ಗಣೇಶ ಚತುರ್ಥಿಯನ್ನು ತುಳುನಾಡಿನ ಜನರು “ಚೌತಿ ಹಬ್ಬ’ ಎಂದು ಸಂಭ್ರಮದಿಂದ ಆಚರಿಸುತ್ತಾರೆ . ಇದು ತುಳುನಾಡಿನ ಪ್ರದೇಶದ ಜನತೆಗೂ , ಗಣಪತಿ ದೇವರಿಗೂ ಪ್ರೀತಿಯ ಕೊಂಡಿಯಾಗಿದೆ . ಇದು ಊರಿನ ಎಲ್ಲಾ ದೈವ – ದೇವಸ್ಥಾನಕ್ಕೆ ಸಲ್ಲುವ ಪರ್ವ . ಈ ಸಂದರ್ಭದಲ್ಲಿ ಈ ಪ್ರದೇಶದ ವಿಶಿಷ್ಟವಾದ ಸಂಪ್ರದಾಯವೆಂದರೆ ಚೌತಿ ಆಚರಣೆಯಲ್ಲಿ ಗಣೇಶನನ್ನು ಸಂಕೇತಿಸಲು ಯಾವುದೇ ಕೃತಕ ರಾಸಾಯನಿಕ ಮೂರ್ತಿಯನ್ನಿಡದೆ ಕಬ್ಬನ್ನು ಬಳಸಿ ಅದನ್ನೇ ದೇವರು ಎಂದು ಪ್ರತಿನಿಧಿಸುವುದು. ತುಳುನಾಡು ಪ್ರದೇಶದ ಹಲವಾರು ಪದ್ಧತಿಗಳಂತೆ ಇದು ಕೂಡ ಕೃಷಿ ಪದ್ಧತಿಗಳಿಗೆ ಬಲವಾದ ಸಂಬಂಧವನ್ನು ಹೊಂದಿದೆ ಮತ್ತು  ಪ್ರಕೃತಿ ಮಾತೆಯ ಗೌರವಕ್ಕೆ ಕಾರಣವಾಗಿದೆ . ಈ ಎಲ್ಲಾ ಆಚರಣೆಗಳನ್ನು ಜೈವಿಕ ವಿಘಟನೆಯ ವಸ್ತುಗಳೊಂದಿಗೆ ನಡೆಸಲಾಗುತ್ತದೆ .ಇದರಿಂದ ಸಾಮಾನ್ಯವಾಗಿ ಸುತ್ತು ಮುತ್ತಲಿನ ಪರಿಸರಕ್ಕೆ ಯಾವುದೇ ಹಾನಿಯಾಗುವುದಿಲ್ಲ. ಚೌತಿ ಆಚರಣೆಯಲ್ಲಿ ಕಬ್ಬಿನ ಗಣೇಶ : ಚೌತಿ ಆಚರಣೆಯ ಅಂಗವಾಗಿ ತುಳುವರು ಕಬ್ಬಿನ ತುಂಡುಗಳಿಂದ ಪಿರಮಿಡ್ ರಚನೆಯನ್ನು ರಚಿಸಿ ,ಅದರಲ್ಲಿ ಭಗವಂತನನ್ನು ಪ್ರತಿನಿಧಿಸುತ್ತಾರೆ. ಕಬ್ಬು ಗಣಪತಿಗೆ ಅತಿ…

Read More

ಗ್ರಾಮೀಣ ಪ್ರದೇಶದ ಶಿಕ್ಷಣ ವ್ಯವಸ್ಥೆಯೊಂದಿಗೆ, ಉದ್ಯೋಗ ಕ್ಷೇತ್ರದಲ್ಲಿ ಹತ್ತಾರು ಉದ್ಯೋಗ ಮೇಳಗಳನ್ನು, ವಿವಿಧ ಕ್ಷೇತ್ರದಲ್ಲಿ ಲಭ್ಯವಿರುವ ಖಾಸಗಿ ಉದ್ಯೋಗ ಅವಕಾಶಗಳಿಗೆ ಸಾವಿರಾರು ನೇರ ಸಂದರ್ಶನಗಳ ಮೂಲಕ ಯುವ ಜನತೆಗೆ ಉದ್ಯೋಗ ಕೊಡಿಸುವಲ್ಲಿ ವಿದ್ಯಾಮಾತಾ ಅಕಾಡೆಮಿ ತುಂಬಾನೇ ಮಹತ್ತರ ಕಾರ್ಯನಿರ್ವಹಿಸುವ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಪ್ರಸಿದ್ಧಿ ಪಡೆದಿರುವ ಸಂಸ್ಥೆಯಾಗಿ ಹೊರ ಹೊಮ್ಮಿದೆ. ರಾಜ್ಯ ಮಟ್ಟದಲ್ಲಿ ಮೂರು ಉದ್ಯೋಗ ಮೇಳವನ್ನು ಆಯೋಜಿಸಿ, ಹತ್ತಕ್ಕೂ ಮಿಕ್ಕಿದ ಗ್ರಾಮೀಣ ಉದ್ಯೋಗ ಮೇಳದ ಜೊತೆಗೆ ಸಾವಿರಾರು ಸಂದರ್ಶನದೊಂದಿಗೆ ನೂರಾರು ಕಾರ್ಯಗಾರ ಮೂಲಕ ಕಳೆದ ಆರು ವರ್ಷಗಳಲ್ಲಿ ಅತೀ ಕಡಿಮೆಯೆಂದರೂ ಆರು ಸಾವಿರ ಮೀರಿ ಉದ್ಯೋಗಕಾಂಕ್ಷಿಗಳಿಗೆ ವಿದ್ಯಾಮಾತಾ ಮೂಲಕ ಉದ್ಯೋಗ ಲಭಿಸಿದ್ದು, ಇವೆಲ್ಲವೂ ಅಕಾಡೆಮಿಯ ಪರಿಶ್ರಮಕ್ಕೆ ಸಿಕ್ಕ ಅಮೂಲ್ಯ ಉಡುಗೊರೆಯಾಗಿದೆ. ಗ್ರಾಮೀಣ ಭಾಗದ ಬಹುತೇಕ ವಿದ್ಯಾರ್ಥಿಗಳು ಸರಕಾರಿ ಹುದ್ದೆಯನ್ನೇರುವ ಅವರ ಪುಟ್ಟ ಕನಸುಗಳನ್ನು ನನಸಾಗಿಸಲು ವಿಫಲರಾಗುತ್ತಿರುವುದನ್ನು ಮನಗಂಡು ವಿದ್ಯಾಮಾತಾ ಫೌಂಡೇಶನ್ ಇದರ ಆಶ್ರಯದಲ್ಲಿ ವಿದ್ಯಾಮಾತಾ ಅಕಾಡೆಮಿ ಪ್ರಾರಂಭಿಸಲಾಗಿತ್ತು. ಈ ಅಕಾಡೆಮಿ ಮೂಲಕ ಸರಕಾರಿ ಮತ್ತು ಸರ್ಕಾರಿ ಸ್ವಾಮ್ಯದ ಉದ್ಯೋಗ…

Read More

ಅಮ್ಮನ ನೆರವು ಚಾರಿಟೇಬಲ್ ಟ್ರಸ್ಟ್ ಮೂಲಕ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಒಟ್ಟು 10 ಲಕ್ಷ ರೂ. ಮೌಲ್ಯದ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮದ ಉದ್ಘಾಟನೆ ಬೈಲೂರಿನ ಸರಕಾರಿ ಪದವಿ ಪೂರ್ವ ಕಾಲೇಜು ಇಲ್ಲಿನ ದಿ. ಡಾ. ಉದಯ್ ಕುಮಾರ್ ಹೆಗ್ಡೆ ವೇದಿಕೆಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ಮಾಜಿ ಸಚಿವ ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿ, ಅವಿನಾಶ್ ಶೆಟ್ಟಿಯವರು ಪ್ರೇರಣಾದಾಯಕ ಕೆಲಸವನ್ನು ಮಾಡುತ್ತಿದ್ದು ಕಳೆದ ಬಾರಿಯೂ ಮಕ್ಕಳಿಗೆ ನೋಟ್ ಪುಸ್ತಕ ಬ್ಯಾಗ್ ಕೊಡುವ ಮೂಲಕ ಕೆಲಸ ಮಾಡಿದ್ದರು. ಈ ಬಾರಿ ವಿದ್ಯಾರ್ಥಿ ವೇತನವನ್ನು ನೀಡುವುದರ ಮೂಲಕ ಮತ್ತೆ ಶಿಕ್ಷಣ ಪ್ರೇಮವನ್ನು ಮೆರೆದಿದ್ದಾರೆ. ಅಮ್ಮನ ನೆರವು ಇಲ್ಲದೇ ನಾವ್ಯಾರು ಬದುಕಲು ಸಾಧ್ಯವಿಲ್ಲ. ಅಂತಹ ಅಮ್ಮನ ನೆನಪಲ್ಲಿ ಟ್ರಸ್ಟ್ ಆರಂಭ ಮಾಡಿದ್ದು ಒಳ್ಳೆಯ ಸಂಗತಿ ಎಂದು ಅವರು ಶ್ಲಾಘಿಸಿದರು. ಬಳಿಕ ಮಾತನಾಡಿದ ಕ್ರಿಯೇಟಿವ್ ಶಿಕ್ಷಣ ಸಂಸ್ಥೆ ಸ್ಥಾಪಕರಲ್ಲಿ ಓರ್ವರಾದ ಗುಣರಾಜ್ ಶೆಟ್ಟಿಯವರು, ಶಿಕ್ಷಣ ನಮಗೇನು ಕೊಟ್ಟಿದೆ ಅನ್ನುವುದಕ್ಕಿಂತ ಕಲಿತ ಶಿಕ್ಷಣದಿಂದ…

Read More