ಪುಣೆ ಬಂಟರ ಸಂಘದ ಶಕುಂತಲಾ ಜಗನ್ನಾಥ್ ಶೆಟ್ಟಿ ಕಲ್ಪವೃಕ್ಷ ಸಮಾಜ ಕಲ್ಯಾಣ ಯೋಜನೆ ವತಿಯಿಂದ ವಿದ್ಯಾರ್ಥಿಗಳಿಗೆ ಅರ್ಥಿಕ ಸಹಾಯ ವಿತರಣಾ ಸಮಾರಂಭ, ಪ್ರತಿಭಾನ್ವಿತ ವಿಧ್ಯಾರ್ಥಿಗಳ ಸತ್ಕಾರ ಮತ್ತು ಆಟೀಡ್ ಒಂಜಿ ದಿನ ಆಚರಣೆಯು ಅಗಸ್ಟ್ 3 ರಂದು ನಡೆಯಲಿದೆ. ಸಂಘದ ಮಹತ್ವದ ಯೋಜನೆಯಾದ ಕಲ್ಪವೃಕ್ಷ ಸಮಾಜ ಕಲ್ಯಾಣ ಯೋಜನೆಯಡಿಯಲ್ಲಿ ಅರ್ಥಿಕ ಸಹಾಯ ನಡೆಯಲಿದೆ. ಎಂ.ಅರ್.ಜಿ ಗ್ರೂಪ್ ಸಿ.ಎಂ.ಡಿ ಡಾ| ಕೆ ಪ್ರಕಾಶ್ ಶೆಟ್ಟಿ ಪ್ರಾಯೋಜಿತ ವಿದ್ಯಾದಾತ ಯೋಜನೆಯಡಿಯಲ್ಲಿ ಬಂಟರ ಸಂಘದ ವತಿಯಿಂದ ಪ್ರತಿವರ್ಷ ವಿಧ್ಯಾರ್ಥಿಗಳಿಗೆ ಸುಮಾರು 20 ಲಕ್ಷಗಳಿಗಿಂತ ಮೇಲ್ಪಟ್ಟು ನೆರವನ್ನು ನೀಡುತ್ತಾ ಬರುತ್ತಿದೆ. ಈ ಬಾರಿ ಆಗಸ್ಟ್ 3ರಂದು ನಡೆಯಲಿರುವ ಈ ಮಹತ್ವಾಕಾಂಕ್ಷೆಯ ಸಮಾಜಮುಖಿ ಕಾರ್ಯಕ್ರಮವು ಸಂಘದ ಗೌರವಾಧ್ಯಕ್ಷರಾದ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆಯವರ ಗೌರವ ಉಪಸ್ಥಿತಿಯಲ್ಲಿ, ಅಧ್ಯಕ್ಷರಾದ ಅಜಿತ್ ಹೆಗ್ಡೆ ಕೆಂಜಾರು ಗುತ್ತುರವರ ಅಧ್ಯಕ್ಷತೆಯಲ್ಲಿ, ಕಲ್ಪವೃಕ್ಷ ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಪುತ್ತೂರುರವರ ಆಯೋಜನೆಯಲ್ಲಿ ಅತಿಥಿ ಆಭ್ಯಾಗತರ ಗಣ ಉಪಸ್ಥಿತಿಯೊಂದಿಗೆ ನಡೆಯಲಿದೆ.

ಸಂಘದ ಸದಸ್ಯರು ಸಾಂಸ್ಕ್ರತಿಕ ಕಾರ್ಯಕ್ರಮಗಳೊಂದಿಗೆ ಈ ಸಮಾರಂಭಕ್ಕೆ ಮೆರುಗು ತರಲಿದ್ದಾರೆ. ಅಲ್ಲದೇ ಇದೇ ದಿನದಂದು ಬಂಟರ ಸಂಘದ ಮಹಿಳಾ ಕಾರ್ಯಾಧ್ಯಕ್ಷೆ ಶಮ್ಮಿ ಎ ಹೆಗ್ಡೆಯವರ ನೇತೃತ್ವದಲ್ಲಿ ಮತ್ತು ಸಮಿತಿ ಪದಾಧಿಕಾರಿಗಳು, ಪ್ರಾದೇಶಿಕ ಸಮಿತಿಗಳ ಪದಾಧಿಕಾರಿಗಳ ಸಹಕಾರದೊಂದಿಗೆ ನಮ್ಮ ತುಳುನಾಡ ವಿಶೇಷ ತಿಂಗಳಾದ ಆಟಿಯ ವಿಶೇಷತೆಯನ್ನು ಸಾರುವ ಕಾರ್ಯಕ್ರಮ ಆಟೀಡ್ ಒಂಜಿ ದಿನ ಕೂಡಾ ನಡೆಯಲಿದ್ದು, ಆಟಿ ಕಲಂಜ ನೃತ್ಯ, ತುಳುನಾಡ ಸಾಂಸ್ಕ್ರತಿಕ ಸಂಪ್ರದಾಯ ನೃತ್ಯ ಹಾಗೂ ತುಳುನಾಡ ಶೈಲಿಯ ಊಟೋಪಚಾರ ಕೂಡಾ ನಡೆಯಲಿದೆ. ಕಲ್ಪವೃಕ್ಷ ಸಮಾಜ ಕಲ್ಯಾಣ ವಿಧ್ಯಾರ್ಥಿ ವೇತನವು ಪುಣೆಯಲ್ಲಿ ನೆಲೆಸಿರುವ ಹಾಗೂ ಪುಣೆ ಬಂಟರ ಸಂಘದ ಸದಸ್ಯರಾಗಿರುವ ಪಾಲಕರ ಮಕ್ಕಳಿಗೆ ಸಿಗಲಿದೆ. ಒಂದನೇ ತರಗತಿಯಿಂದ ಹನ್ನೆರಡನೇ ತರಗತಿವರೆಗಿನ ಮಕ್ಕಳು ಈ ಸಹಾಯ ಧನಕ್ಕೆ ಅರ್ಜಿ ಸಲ್ಲಿಸಬಹುದು. ಸಮಾಜದ ಅತೀ ಹಿಂದುಳಿದ ಮಕ್ಕಳಿಗಾಗಿ ಕಲ್ಪವೃಕ್ಷ ವಿದ್ಯಾದಾತ ನೆರವಿನ ಅಡಿಯಲ್ಲಿ ಈ ಸಹಾಯಧನ ಸಿಗಲಿದೆ. ಶೈಕ್ಷಣಿಕ ವರ್ಷ 2024-25 ಸಾಲಿನಲ್ಲಿ ಹತ್ತನೇ ಮತ್ತು ಹನ್ನೆರಡನೇ ತರಗತಿಯಲ್ಲಿ ಶೇಕಡಾ 85% ಕ್ಕಿಂತ ಹೆಚ್ಚು ಅಂಕ ಪಡೆದ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸತ್ಕರಿಸಲಾಗುವುದು. ಪುಣೆಯಲ್ಲಿ ನೆಲೆಸಿ ಹೊರ ರಾಜ್ಯ, ದೇಶಗಳಲ್ಲಿ ಶಿಕ್ಷಣ ಅಥವಾ ಇತರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಮಾಜದ ಪ್ರತಿಭಾವಂತ ಪ್ರತಿಭೆಗಳನ್ನು ಸನ್ಮಾನಿಸಲಾಗುವುದು ಹಾಗೂ ಆರ್ಥಿಕವಾಗಿ ಅತೀ ಕಷ್ಟದಲ್ಲಿರುವ ವಿಧ್ಯಾಥಿಗಳ ದತ್ತು ಸ್ವೀಕಾರ ನಡೆಯಲಿದೆ.
ಸಹಾಯಧನಕ್ಕೆ ಅರ್ಜಿ ಸಲ್ಲಿಸುವವರು ಜುಲೈ ತಿಂಗಳ ತಾರೀಕು 1 ರಿಂದ 15ರ ಒಳಗಾಗಿ ಸಂಘದ ನಿಯಮಗಳ ಪ್ರಕಾರ ಅರ್ಜಿಗಳನ್ನು ತುಂಬಿಸಿ ಸಲ್ಲಿಸತಕ್ಕದ್ದು. ಬಂಟರ ಸಂಘದ ಕಚೇರಿ ಅಥವಾ ಕಲ್ಪವೃಕ್ಷ ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷರಾದ ಪ್ರವೀಣ್ ಶೆಟ್ಟಿ ಪುತ್ತೂರು [9822063454], ಸಂಘದ ಜೊತೆ ಕಾರ್ಯದರ್ಶಿ ಮತ್ತು ಕಲ್ಪವೃಕ್ಷ ತ್ರೈಮಾಸಿಕ ಪತ್ರಿಕೆಯ ಕಾರ್ಯಾಧ್ಯಕ್ಷರಾದ ಚಂದ್ರಶೇಖರ್ ಶೆಟ್ಟಿ ನಿಟ್ಟೆ [9975492774], ಸಮಾಜ ಕಲ್ಯಾಣ ಸಮಿತಿಯ ಮಹಿಳಾ ಕಾರ್ಯಾಧ್ಯಕ್ಷೆ ಗೀತಾ ಅರ್ ಶೆಟ್ಟಿ [9970046112], ದಕ್ಷಿಣ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಸುಧಾಕರ್ ಶೆಟ್ಟಿ [9890077213], ಉತ್ತರ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ನಾರಾಯಣ ಹೆಗ್ಡೆ [9850986645], ಪೂರ್ವ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಸಂದೇಶ್ ಶೆಟ್ಟಿ [9665365574], ಪಶ್ಚಿಮ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷೆ ನಯನಾ ಸಿ ಶೆಟ್ಟಿ [9767729983] ಯವರನ್ನು ಸಂಪರ್ಕಿಸಿ ಅರ್ಜಿಗಳನ್ನು ಸಲ್ಲಿಸಬಹುದು. ಪುಣೆ ಬಂಟರ ಸಂಘವು ಅರ್ಥಿಕವಾಗಿ ಹಿಂದುಳಿದ ಸಮಾಜ ಬಾಂಧವರ ವಿಧ್ಯಾರ್ಥಿಗಳ ಆಶೋತ್ತರಗಳಿಗೆ ಸ್ಪಂದಿಸುವಲ್ಲಿ ಮಹತ್ತರ ಕಾರ್ಯವನ್ನು ಮಾಡುತ್ತಿದ್ದು, ಮಕ್ಕಳ ಉಜ್ವಲ ಭವಿಷ್ಯಕ್ಕೆ ಪ್ರೋತ್ಸಾಹಕವಾಗಿ ನಡೆಯಲಿರುವ ಈ ಅರ್ಥಿಕ ಸಹಾಯ ಯೋಜನೆಯ ಪ್ರಯೋಜನವನ್ನು ಆಶಕ್ತ ಬಾಂಧವರು ಪಡೆಯಬೇಕೆಂದು ಹಾಗೂ ಅಗಸ್ಟ್ 3 ರಂದು ನಡೆಯಲಿರುವ ಸಮಾರಂಭದಲ್ಲಿ ಹೆಚ್ಚಿನ ಸಂಖ್ಯೆಯ ಸಮಾಜ ಬಾಂಧವರು ಪಾಲ್ಗೊಳ್ಳುವಂತೆ ಪುಣೆ ಬಂಟರ ಸಂಘದ ಗೌರವಾಧ್ಯಕ್ಷರಾದ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು, ಅಧ್ಯಕ್ಷರಾದ ಅಜಿತ್ ಹೆಗ್ಡೆ, ಪ್ರ.ಕಾರ್ಯದರ್ಶಿ ಸುಧೀರ್ ಶೆಟ್ಟಿ ಕಣಂಜಾರು, ಕಲ್ಪವೃಕ್ಷ ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷರಾದ ಪ್ರವೀಣ್ ಶೆಟ್ಟಿ ಪುತ್ತೂರು, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಮ್ಮಿ ಎ ಹೆಗ್ಡೆ ಹಾಗೂ ಸಮಿತಿ ಪದಾಧಿಕಾರಿಗಳು, ಮಹಿಳಾ ವಿಭಾಗ, ಯುವ ವಿಭಾಗ, ಪ್ರಾದೇಶಿಕ ಸಮಿತಿಗಳ ಕಾರ್ಯಾಧ್ಯಕ್ಷರುಗಳು, ಪದಾಧಿಕಾರಿಗಳು ವಿನಂತಿಸಿಕೊಂಡಿದ್ದಾರೆ.
ವರದಿ : ಹರೀಶ್ ಮೂಡಬಿದ್ರಿ ಪುಣೆ