Author: admin
ರಕ್ಷಾ ರಾಮ್ಚಂದ್ರ 597 ಅಂಕಗಳೊಂದಿಗೆ ರಾಜ್ಯಕ್ಕೆ 3ನೇ ಹಾಗೂ ಜಿಲ್ಲೆಗೆ ಮೊದಲ ಸ್ಥಾನ ಗಣಿತ ನಗರ : ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ನಡೆಸಿದ 2025ರ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1ರ ಮರುಮೌಲ್ಯಮಾಪನ ಫಲಿತಾಂಶದಲ್ಲಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ನಾಯಕ್ ರಕ್ಷಾ ರಾಮಚಂದ್ರ 597 ಅಂಕ ಪಡೆದು ರಾಜ್ಯಕ್ಕೆ 3ನೇ ಹಾಗೂ ಜಿಲ್ಲೆಗೆ ಪ್ರಥಮ ಸ್ಥಾನಿಯಾಗಿ ಹೊರ ಹೊಮ್ಮಿರುತ್ತಾರೆ. ಇವರು ಮೂಲಗಣಿತ, ವ್ಯವಹಾರ ಅಧ್ಯಯನ, ಲೆಕ್ಕಶಾಸ್ತ್ರ ಮತ್ತು ಸಂಖ್ಯಾಶಾಸ್ತ್ರದಲ್ಲಿ ನೂರಕ್ಕೆ ನೂರು ಅಂಕವನ್ನು, ಇಂಗ್ಲಿಷ್ನಲ್ಲಿ 98 ಹಾಗೂ ಹಿಂದಿಯಲ್ಲಿ 99 ಅಂಕ ಪಡೆದಿದ್ದಾರೆ. ಈಕೆ ಬೈಲೂರು ನಿವಾಸಿಯಾದ ರಾಮ್ಚಂದ್ರ ನಾಯಕ್ ಮತ್ತು ಅನುಪಮ ನಾಯಕ್ ದಂಪತಿಗಳ ಸುಪುತ್ರಿ. ವಿಜ್ಞಾನ ವಿಭಾಗದಲ್ಲಿ ಆಸ್ತಿ ಎಸ್ ಶೆಟ್ಟಿ 596 ಅಂಕಗಳೊಂದಿಗೆ ರಾಜ್ಯಕ್ಕೆ ನಾಲ್ಕನೇ ಹಾಗೂ ಜಿಲ್ಲೆಗೆ ಮೊದಲ ಸ್ಥಾನಿಯಾಗಿ ಹೊರಹೊಮ್ಮಿದ್ದರು. ಸಂಸ್ಥೆಯು ಮರುಮೌಲ್ಯಮಾಪನದ ಮೂಲಕ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ 37 ವಿದ್ಯಾರ್ಥಿಗಳು ರಾಜ್ಯಮಟ್ಟದಲ್ಲಿ ಮೊದಲ ಹತ್ತು…
ಮೂಡುಬಿದಿರೆ: ಭಾರತ ದೇಶ ಮಾತ್ರವಲ್ಲದೇ ಇಡೀ ಜಗತ್ತಿಗೆ ಡ್ರಗ್ಸ್ ಅತ್ಯಂತ ಅಪಾಯಕಾರಿ ವ್ಯವಸ್ಥೆಯಾಗಿ ಮಾರ್ಪಟ್ಟಿದೆ. ಇಂದಿನ ಯುವಕರು, ವಿದ್ಯಾರ್ಥಿಗಳು ನಶೆಗಾಗಿ ಸೇವನೆ ಮಾಡುವುದರಿಂದ ತಮ್ಮ ಜೀವನವನ್ನು ತಾವೇ ಹಾಳು ಮಾಡುಕೊಳ್ಳುತ್ತಿದ್ದಾರೆ. ಭಾರತದ ಶಕ್ತಿಯೇ ಯುವಕರು. ದೇಶದ ಯುವಶಕ್ತಿಯನ್ನು ಡ್ರಗ್ಸ್ ಮುಕ್ತರನ್ನಾಗಿಸಲು ಎಲ್ಲರೂ ಕೈ ಜೋಡಿಸಿಬೇಕು ಎಂದು ಕರ್ನಾಟಕ ಸರ್ಕಾರದ ಮಾಜಿ ಸಚಿವ ಅಭಯಚಂದ್ರ ಜೈನ್ ಹೇಳಿದರು. ಆಳ್ವಾಸ್ (ಸ್ವಾಯತ್ತ) ಕಾಲೇಜಿನ ಸಮಾಜಕಾರ್ಯ ವಿಭಾಗದ ‘ರಜತ ಮಹೋತ್ಸವ’ದ ಅಂಗವಾಗಿ ಸುಂದರಿ ಆನಂದ ಆಳ್ವ ಕ್ಯಾಂಪಸ್ನಿಂದ ಮೂಡುಬಿದಿರೆ ತಾಲೂಕು ಕಚೇರಿಯವರೆಗೆ ಮಂಗಳವಾರ ನಡೆದ “ಮಾದಕ- ದ್ರವ್ಯ ವಿರೋಧಿ ಜಾಗೃತಿ ಜಾಥಾ” ದಲ್ಲಿ ಪಾಲ್ಗೊಂಡು ಮಾತನಾಡಿದರು. ಮೂಡುಬಿದಿರೆಯ ವಿವಿಧ ಕಾಲೇಜು ಮತ್ತು ಆಳ್ವಾಸ್ ಕಾಲೇಜು ವಿದ್ಯಾರ್ಥಿಗಳು ಡ್ರಗ್ಸ್ ಮುಕ್ತ ಜಾಥಾ ನಿರ್ಮಿಸಲು ನಡೆಸಿದ ಮಾದಕ ದ್ರವ್ಯ ವಿರೋಧಿ ಜಾಗೃತಿ ಜಾಥಾದಲ್ಲಿ ಕಾಲ್ನಡಿಗೆಯ ಮೂಲಕ ಪಾಲ್ಗೊಂಡಿದ್ದಕ್ಕಾಗಿ ಅಭಿನಂದನೆ ಸಲ್ಲಿಸಿದರು. ಡ್ರಗ್ಸ್ನಿಂದ ವಿದ್ಯಾರ್ಥಿಗಳು ಸಂಪೂರ್ಣವಾಗಿ ದೂರವಿದ್ದು ಡ್ರಗ್ಸ್ ಸೇವನೆ ಮಾಡುವವರನ್ನು ವಿರೋಧಿಸಬೇಕು ಎಂದು ತಿಳಿಸಿದರು. ಮೂಡುಬಿದಿರೆ ಸರ್ಕಲ್ ಇನ್ಸ್ಪೆಕ್ಟರ್…
ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ ನ ವತಿಯಿಂದ ಯಡಾಡಿ ಮತ್ಯಾಡಿಯ ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆ ಮತ್ತು ಸುಜ್ಞಾನ್ ಪಿ.ಯು ಕಾಲೇಜಿನ ವಿದ್ಯಾರಣ್ಯ ಕ್ಯಾಂಪಸ್ ನಲ್ಲಿ ನಡೆಯುತ್ತಿರುವ ಮಂಥನ ಬೇಸಿಗೆ ಶಿಬಿರ ನಾಲ್ಕನೇ ದಿನದ ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಷನಲ್ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಬಾರ್ಕೂರು ಇದರ ಪ್ರಾಂಶುಪಾಲರಾದ ಪ್ರೊ. ಭಾಸ್ಕರ ಶೆಟ್ಟಿ ಮಾತನಾಡಿ, ನಮ್ಮ ಬದುಕಿಗೆ ಅಗತ್ಯವಾದ ಕಲೆಗಳನ್ನು, ತತ್ವಗಳನ್ನು, ಕೌಶಲಗಳನ್ನು, ಬೇಸಿಗೆ ಶಿಬಿರದಲ್ಲಿ ಕಲಿಸಿ ಕೊಡುತ್ತಾರೆ. ಅವುಗಳನ್ನು ಮಕ್ಕಳು ಜೀವನದುದ್ದಕ್ಕೂ ಅಳವಡಿಸಿಕೊಂಡು ಬದುಕನ್ನು ಇನ್ನಷ್ಟು ಸರಳವಾಗಿಸಿ ಉಲ್ಲಾಸಮಯವಾಗಿರಿಸಿಕೊಳ್ಳಬಹುದು. ಶಿಕ್ಷಣದಲ್ಲಿ ಪಾಠ ಅಧ್ಯಯನದ ಜೊತೆ ಬದುಕನ್ನು ಕಟ್ಟಿ ಕೊಡುವ ಪಠ್ಯೇತರ ಚಟುವಟಿಕೆಗಳ ಕಲಿಕೆ ಅತ್ಯಗತ್ಯ. ಮಕ್ಕಳ ಸರ್ವತೋಮುಖ ಪ್ರಗತಿಗೆ ಪಠ್ಯೇತರ ಚಟುವಟಿಕೆಗಳು ಅತ್ಯಗತ್ಯವಾಗಿದೆ. ಈ ತರಬೇತಿ ಕಾರ್ಯಕ್ರಮಗಳು, ಮಾಹಿತಿ ಕಾರ್ಯಕ್ರಮಗಳು, ಚಟುವಟಿಕೆಗಳು ನಮ್ಮ ಬದುಕನ್ನು ಪರಿಪೂರ್ಣತೆಯತ್ತ ಕೊಂಡೊಯ್ಯಲು ಸಹಕಾರಿಯಾಗುತ್ತದೆ. ಈ ಸಂಸ್ಥೆಯು ಇಂತಹ ಒಂದು ಉತ್ಕೃಷ್ಟ ಮಟ್ಟದ ಬೇಸಿಗೆ ಶಿಬಿರವನ್ನು…
ನಿಮ್ಮ ಪ್ರೀತಿ ಪಾತ್ರರೊಂದಿಗೆ ಶಾಂತತೆಯಿಂದ ಸಮಯ ಕಳೆಯಲು ತಕ್ಕ ಸ್ಥಳವನ್ನು ಹುಡುಕುತ್ತಿದ್ದೀರಾ? ಮಂಗಳೂರಿನ ಪ್ರಸಿದ್ಧ ಕಟೀಲು ದೇವಾಲಯದ ಬಳಿ ಇರುವ ಎಸ್ಬಿಎಸ್ ಫಾರ್ಮ್ಹೌಸ್ (ಸುಗಂಧಿ ಬೋಜ ಶೆಟ್ಟಿ ಫಾರ್ಮ್ಹೌಸ್) ನಿಮಗೆ ಸರಿಯಾದ ಆಯ್ಕೆ. ಇದು ನಗರದ ಓಡಾಟದಿಂದ ದೂರವಿದ್ದು, ನಿಸರ್ಗದ ಸೌಂದರ್ಯವನ್ನು ಅನುಭವಿಸಲು ಮತ್ತು ಕುಟುಂಬ ಹಾಗೂ ಸ್ನೇಹಿತರೊಂದಿಗೆ ಅಮೂಲ್ಯ ಕ್ಷಣಗಳನ್ನು ರಚಿಸಲು ಶಾಂತವಾದ ಪರಿಸರವನ್ನು ನೀಡುತ್ತದೆ. ನಿಸರ್ಗದ ಸೌಂದರ್ಯದಲ್ಲಿ ವಿಶ್ರಾಂತಿ : ಎಸ್ಬಿಎಸ್ ಫಾರ್ಮ್ಹೌಸ್ ಹಸಿರು ಹೊಲಗಳು, ಎತ್ತರದ ಮರಗಳು ಮತ್ತು ತಾಜಾ ಗಾಳಿಯಿಂದ ಆವರಿತವಾಗಿದೆ. ಇಲ್ಲಿ ನೀವು ದಿನನಿತ್ಯದ ಒತ್ತಡ ಮತ್ತು ಗದ್ದಲವನ್ನು ಮರೆತು, ನಿಜವಾದ ವಿಶ್ರಾಂತಿಯ ಅನುಭವ ಪಡೆಯಬಹುದು. ಮರಗಳ ನೆರಳಿನಲ್ಲಿ ಕುಳಿತುಕೊಳ್ಳುವುದು ಅಥವಾ ಹುಲ್ಲಿನ ಮೇಲೆ ನಡೆಯುವುದು, ಇದಕ್ಕೆಲ್ಲ ನಿಸರ್ಗದ ಶಾಂತಿಯೇ ಸಾಥಿ. ಇದು ಶಾಂತವಾದ ಸ್ಥಳವಾದರೂ, ತುಂಬಾ ಸುಲಭವಾಗಿ ತಲುಪಬಹುದಾಗಿದೆ. ಕಿನ್ನಿಗೋಳಿ, ಮುಲ್ಕಿ ಮತ್ತು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಬಜ್ಪೆ) ಇವೆಲ್ಲದರ ಹತ್ತಿರವಿರುವ ಈ ಸ್ಥಳ ಸ್ಥಳೀಯರು ಹಾಗೂ ಪ್ರವಾಸಿಗರಿಗೆ ಸಹ ಸುಲಭವಾದ…
ಟೀಚರ್ರು ಬುಕ್ ಹಿಡ್ಕೊಂಡ್ ಏನೋ ಹೇಳ್ಕೊಡ್ತಾ ಇದಾರೆ. ನಾವ್ ಓದುತ್ತ ಇದ್ದೇವೆ ಅನ್ನೋ ಮೈಂಡ್ ಸೆಟ್. ಓದಿದ್ವಾ.. ಪರೀಕ್ಷೆ ಬರೆದ್ವಾ… ಮಾರ್ಕ್ಸ್ ಬಂತಾ… ಅಷ್ಟೇ… ಅಷ್ಟೇ… (ಬರಿಯ ಓದಿನಿಂದ ಏನೇನೂ ಪ್ರಯೋಜನವಿಲ್ಲ ಎಂಬುದನ್ನರಿಯದ ಮಕ್ಕಳು) ಕೌಶಲ್ಯ ಹೀನತೆ : ಸ್ಕಿಲ್ ಸೆಟ್ ಎಂಬ ಪದ ಪರಿಚಯವೇ ಇಲ್ಲದ ಅಕಾಡೆಮಿಕ್ಸ್… ತತ್ಪರಿಣಾಮವಾಗಿ ಕೌಶಲ್ಯ ಹೀನರಾಗಿ ಹೊರಬರುತ್ತಿರೋ ವಿದ್ಯಾರ್ಥಿಗಳು. (ಶಿಕ್ಷಣದಲ್ಲಿ ಯಾವುದೇ ರೀತಿಯ ಸ್ಕಿಲ್ ಸೆಟ್ ಹೇಳಿಕೊಡದ ಶಾಲಾ ಕಾಲೇಜುಗಳು. ವಿದ್ಯಾರ್ಥಿ ದೆಸೆಯಲ್ಲಿ ಯಾವುದೇ ಕೆಲಸ ಕಲಿಯಲು ಆಸಕ್ತಿ ತೋರದ. ಸದಾ ಮೊಬೈಲ್ ಉಜ್ಜಿಕೊಂಡು ಬಿದ್ದಿರುವ ಹುಡುಗರು. ಎರಡು ಕತ್ತೆ ವಯಸ್ಸಾದ್ರೂ ಅವರನ್ನು ಮಗೂ… ಮಗೂ ಅಂತ ಮುದ್ದು ಮಾಡಿಕೊಂಡೇ ಇರೋ ಪೇರೆಂಟ್ಸು ಮೂವರೂ ಸಮಾನ ದ್ರೋಹಿಗಳು) ಗುರಿಹೀನ ಯುವಜನತೆ : ನೋ ಏಮ್ ಇನ್ ಲೈಫ್… ಕೆಲಸಕ್ಕೆ ಬಾರದ ಸರ್ಟಿಫಿಕೇಟುಗಳನ್ನು ಹಿಡಿದುಕೊಂಡು ಬರೋಬ್ಬರಿ ಇಪ್ಪತ್ತೊಂದು ವರ್ಷ ಶಾಲೆಗೆ ಮಣ್ಣು ಹೊತ್ತು ಹೊರಬಂದು ಒಂದು ಟೀ ಕಾಫಿ ತಯಾರಿಸಲು ಅರಿವಿಲ್ಲದೆ ಕೆಕರುಮಕರಾಗಿ ಅತ್ತಿತ್ತ ನೋಡುವ…
ಜ್ಞಾನ ಎನ್ನುವುದು ಸರ್ವಶ್ರೇಷ್ಠ ಸಂಪತ್ತು. ಅ ಸಂಪತ್ತು ನಮ್ಮದಾಗಬೇಕಾದರೆ ಹೆಚ್ಚು ಹೆಚ್ಚು ಪುಸ್ತಕಗಳ ಓದು ಅಗತ್ಯ. ಎಲ್ಲ ಹವ್ಯಾಸಗಳಿಗಿಂತಲೂ ಉತ್ತಮವಾಗಿರುವಂತದ್ದು ಓದಿನ ಅಭ್ಯಾಸ. ಪುಸ್ತಕಗಳನ್ನು ನಮ್ಮ ಉತ್ತಮ ಸ್ನೇಹಿತನನ್ನಾಗಿಸಿಕೊಂಡರೆ ಬಾಳಿಗೆ ಬೆಳಕ ತೋರಿಸಬಲ್ಲದು; ಮನುಷ್ಯನನ್ನು ಯಶಸ್ಸಿನ ಉತ್ತುಂಗಕ್ಕೇರಿಸಬಲ್ಲದು; ನಮ್ಮಲ್ಲಿ ಆತ್ಮವಿಶ್ವಾಸವನ್ನೂ ಹೆಚ್ಚಿಸಬಲ್ಲದು. ಮನುಕುಲದ ಬೆಳವಣಿಗೆಯಲ್ಲಿಯೂ ಪುಸ್ತಕಗಳು ಪ್ರಮುಖ ಪಾತ್ರ ವಹಿಸುತ್ತವೆ. ಓದುವುದು ಮಾನವನ ಜೀವನದ ಚಿರಂತನ ದಾಹ.. ಒಮ್ಮೆ ಅಂಟಿದ ಓದಿನ ನಂಟು ಬಾಳ ಹೊತ್ತಗೆಯಲ್ಲಿ ಸ್ಥಿರವಾಗಿರುತ್ತದೆ. ಓದು ನಮ್ಮ ಜೀವನದ ಅವಿಭಾಜ್ಯ ಅಂಗ ಎಂದರೆ ತಪ್ಪಾಗಲಾರದು. ಬೆಳಿಗ್ಗೆ ಎದ್ದ ತಕ್ಷಣ ಪತ್ರಿಕೆ ಮನೆಬಾಗಿಲಿಗೆ ಬರುವುದು ತಡವಾದರೆ ಏನೋ ಚಡಪಡಿಕೆ. ನಮಗೆ ಬೇಕಾದ ಪುಸ್ತಕವೊಂದು ಸಿಗದೇ ಇದ್ದಾಗ ಏನೋ ಕಿರಿಕಿರಿ. ಲೈಬ್ರೆರಿಗಳಲ್ಲಿ, ಪುಸ್ತಕದ ಅಂಗಡಿಗಳಲ್ಲಿ ಸಿಗದೇ ಹೋದಾಗ ಅವರಿವರಿಗೆ ಸಂದೇಶ, ದೂರವಾಣಿ ಮಾಡಿಯಾದರೂ ಮಾಡಿ ಆ ಪುಸ್ತಕವನ್ನು ಕಷ್ಟ ಪಟ್ಟು ಸಂಗ್ರಹಿಸಿ ಓದಿದಾಗ ಆಗುವ ಆನಂದವನ್ನು ಬಣ್ಣಿಸಲಾಗದು.ಲ ಒಟ್ಟಿನಲ್ಲಿ ಈ ‘ಓದು’ ಎಂಬ ಎರಡಕ್ಷರದಲ್ಲಿ ಮಾಂತ್ರಿಕ ಶಕ್ತಿ ಇದೆ. ನಾವು ಏನೋ…
ಶ್ರೀ ಮಹಾಗಣಪತಿ ದೇವಸ್ಥಾನ ಗಣೇಶಪುರ ಕಾಟಿಪಳ್ಳ ಇಲ್ಲಿ ಎಪ್ರಿಲ್ 18 ರಿಂದ 26 ರವರೆಗೆ ಬ್ರಹ್ಮಕಲಶೋತ್ಸವ, ಬ್ರಹ್ಮ ರಥೋತ್ಸವ, ನಾಗಮಂಡಲೋತ್ಸವ ನಡೆಯುತ್ತಿದ್ದು, ಪ್ರತೀ ದಿನ ಧಾರ್ಮಿಕ ಸಮಾರಂಭ ನಡೆಯುತ್ತಿದೆ. ಎಪ್ರಿಲ್ 22 ರಂದು ನಡೆದ ಧಾರ್ಮಿಕ ಸಮಾರಂಭದಲ್ಲಿ ಮಹಾದಾನಿ, ಮುಂಬಯಿ ಉದ್ಯಮಿ, ಬಂಟ್ಸ್ ನೌ ಮಾಧ್ಯಮ ಸಂಸ್ಥೆಯ ಮಹಾಪೋಷಕ ಅನಿಲ್ ಶೆಟ್ಟಿ ತೇವು ಸೂರಿಂಜೆ ಅವರನ್ನು ಸನ್ಮಾನಿಸಲಾಯಿತು. ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ತನ್ನನ್ನು ಸಕ್ರೀಯವಾಗಿ ತೊಡಗಿಸಿಕೊಳ್ಳುತ್ತಿರುವ ಅನಿಲ್ ಶೆಟ್ಟಿ ಅವರ ಸೇವಾ ಸಾಧನೆಯನ್ನು ಗುರುತಿಸಿ ಗಣೇಶಪುರ ಮಹಾಗಣಪತಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಈ ಸಂಧರ್ಭ ಥಾಣೆ ಬಂಟ್ಸ್ ಅಸೋಸಿಯೇಷನ್ ನ ಮಾಜಿ ಅಧ್ಯಕ್ಷ ವೇಣುಗೋಪಾಲ್ ಎಲ್ ಶೆಟ್ಟಿ, ಸುರತ್ಕಲ್ ಬಂಟರ ಸಂಘದ ನಿರ್ದೇಶಕ ದೇವೇಂದ್ರ ಕೆ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು.
ಕೇಂದ್ರ ಲೋಕಸೇವಾ ಆಯೋಗವು (UPSC) 2024 ರಲ್ಲಿ ನಡೆಸಿದ ನಾಗರೀಕ ಸೇವಾ ಪರೀಕ್ಷೆಯಲ್ಲಿ ಯೂನಿವರ್ಸಲ್ ಕೋಚಿಂಗ್ ಸೆಂಟರ್ ನಲ್ಲಿ ತರಬೇತಿ ಪಡೆದ 10 ಅಭ್ಯರ್ಥಿಗಳು ತೇರ್ಗಡೆಗೊಂಡಿದ್ದಾರೆ. ರಾಜ್ಯದಲ್ಲಿ ಅತೀ ಹೆಚ್ಚಿನ ಸಂಖ್ಯೆಯ IAS/IPS/IFS ಹಾಗೂ ಇತರೆ ವರ್ಗದ 8025 ಕ್ಕೂ ಅಧಿಕ ಅಧಿಕಾರಿಗಳನ್ನು ಕಳೆದ 24 ವರ್ಷಗಳಲ್ಲಿ ಯೂನಿವರ್ಸಲ್ ಸಂಸ್ಥೆ ನೀಡಿದೆ. ಉತ್ತೀರ್ಣರಾದ ಎಲ್ಲಾ ಅಭ್ಯರ್ಥಿಗಳಿಗೆ ಯೂನಿವರ್ಸಲ್ ಕೋಚಿಂಗ್ ಸೆಂಟರ್ ನ ಆಡಳಿತ ನಿರ್ದೇಶಕ ಆರ್ ಉಪೇಂದ್ರ ಶೆಟ್ಟಿಯವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಹೋಟೆಲ್ ಉದ್ಯಮ ಕ್ಷೇತ್ರದಲ್ಲಿ ಹೆಸರು ವಾಸಿಯಾಗಿರುವ ಉಡುಪಿ ಮೂಲದ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿಯವರ ಮಾಲಕತ್ವದ ಫಾರ್ಚೂನ್ ಗ್ರೂಪ್ ಆಫ್ ಹೋಟೆಲ್ಸ್ ತನ್ನ ಇತ್ತೀಚಿನ ಪಾಕಶಾಲೆಯ ಪರಿಕಲ್ಪನೆಯ ಭವ್ಯವಾದ “ಬೋಟ್ ಮ್ಯಾನ್ ಹಬ್” ಉದ್ಘಾಟನೆಯಾಗಲಿದೆ. ಎಪ್ರಿಲ್ 23 ಸಂಜೆ 7 ಗಂಟೆಗೆ ಖುಸೈಸ್ ನಾ ಫಾರ್ಚೂನ್ ಗ್ರಾಂಡ್ ಹೋಟೆಲ್ ನಲ್ಲಿ ಎಲ್ಲಾ ರೀತಿಯಲ್ಲೂ ಬಿನ್ನವಾಗಿಸಿ ವೈಶಿಷ್ಟ್ಯಮಯ ಸಮುದ್ರಹಾರ ರೆಸ್ಟೋರೆಂಟ್ ಅಧಿಕೃತ “ಬೋಟ್ ಮ್ಯಾನ್ ಹಬ್” ಕರಾವಳಿ ಭಾಗದ ಅನುಭವ ನೀಡಲಿದೆ. ಉದ್ಯಮಿ ಡಾ. ರೊನಾಲ್ಡ್ ಕೋಲಾಸೋರವರು “ಬೋಟ್ ಮ್ಯಾನ್ ಹಬ್” ರೆಸ್ಟೋರೆಂಟ್ ನ್ನು ಉದ್ಘಾಟಿಸಲಿದ್ದಾರೆ. ಗಾಯಕಿ ಗೋವಾದ ನಟಿ ರೀಟಾ ರೋಸ್ ಮತ್ತು ಉದ್ಯಮಿ, ಸಂಘಟಕರಾದ ಸರ್ವೋತ್ತಮ ಶೆಟ್ಟಿ ಅಬುಧಾಬಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. “ಬೋಟ್ ಮ್ಯಾನ್ ಹಬ್”ರೆಸ್ಟೋರೆಂಟ್ ಮಂಗಳೂರು, ಗೋವಾ ಮತ್ತು ಮಹಾರಾಷ್ಟ್ರದ ಮಾಲ್ವನ್ ನಗರದ ಶ್ರೀಮಂತ ಕರಾವಳಿ ಸಂಪ್ರದಾಯಗಳಿಂದ ಪ್ರೇರಿತವಾಗಲಿದೆ. ಈ ಮೂರು ಪ್ರಾದೇಶಿಕ ಪಾಕ ಪದ್ದತಿಗಳ ಒಂದು ಭಕ್ಷ್ಯ ಪಟ್ಟಿ ಮತ್ಸ ಪ್ರಿಯರ ಸ್ವಾದಿಷ್ಟತೆಯ ಖಾದ್ಯಗಳನ್ನು ಆಸ್ವಾದಿಸುವರನ್ನು…
ಬೈಂದೂರು ಬಂಟರ ಸಂಘದ ವತಿಯಿಂದ ರಾಜ್ಯ ಮಟ್ಟದಲ್ಲಿ ಎಂಟನೇ ರ್ಯಾಂಕ್ ವಿಜೇತೆ ಸನ್ನಿಧಿ ಎಂ ಶೆಟ್ಟಿ ಅವರಿಗೆ ಅಧ್ಯಕ್ಷ ಸಾಲ್ಗದ್ದೆ ಶಶಿಧರ ಶೆಟ್ಟಿ ಅವರು ನಗದು ಪುರಸ್ಕಾರ ಹಾಗೂ 30ರ ಸಂಭ್ರಮದ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.ಈ ಸಂದರ್ಭದಲ್ಲಿ ಕುಂದಾಪುರ ಯುವ ಬಂಟರ ಸಂಘದ ಮಾಜಿ ಅಧ್ಯಕ್ಷ ಹೇರಿಕುದ್ರು ಸುನಿಲ್ ಕುಮಾರ್ ಶೆಟ್ಟಿ, ಉದ್ಯಮಿ ದಿಗಂತ ಶೆಟ್ಟಿ ಮತ್ತು ಸನ್ನಿಧಿಯ ಪೋಷಕರು ಉಪಸ್ಥಿತರಿದ್ದರು.















