ನಿವೃತ್ತ ಸಹಾಯಕ ಮಹಾಪ್ರಬಂಧಕ ಶ್ರೀ ಮೋಹನ್ದಾಸ್ ಶೆಟ್ಟಿಯವರಿಗೆ ಆತ್ಮೀಯ ಬೀಳ್ಕೊಡುಗೆ ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿ ಲಿ., ಮಂಗಳೂರು ಇದರ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗಳು, ಸಂಸ್ಥೆಯಲ್ಲಿ 29 ವರ್ಷಗಳ ಅಮೂಲ್ಯ ಸೇವೆಯನ್ನು ಸಲ್ಲಿಸಿ 30.06.2025 ರಂದು ನಿವೃತ್ತರಾದ ಸಹಾಯಕ ಮಹಾಪ್ರಬಂಧಕ ಶ್ರೀ ಮೋಹನ್ದಾಸ್ ಶೆಟ್ಟಿಯವರನ್ನ ಸನ್ಮಾನಿಸಿ ಆತ್ಮೀಯವಾಗಿ ಬೀಳ್ಕೊಟ್ಟರು. ಸಂಘದ ಅಧ್ಯಕ್ಷರಾದ ಶ್ರೀ ಕೆ. ಜೈರಾಜ್ ಬಿ. ರೈಯವರು, ನಿವೃತ್ತರು ಸಂಘಕ್ಕೆ ನೀಡಿರುವ ಸೇವೆಯನ್ನು ಅಭಿಮಾನಪೂರ್ವಕವಾಗಿ ಸ್ಮರಿಸಿ ನಿವೃತ್ತ ಜೀವನವು ಶುಭಕರವಾಗಲೆಂದು ಹಾರೈಸಿದರು.ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಡಾ. ಸುಭಾಶ್ಚಂದ್ರ ಶೆಟ್ಟಿ, ಸಿ.ಎ. ಎಚ್. ಆರ್. ಶೆಟ್ಟಿ, ಶ್ರೀ ಯಂ. ರಾಮಯ ಶೆಟ್ಟಿ, ಶ್ರೀ ಪಿ. ಬಿ. ದಿವಾಕರ ರೈ, ಶ್ರೀ ರವೀಂದ್ರನಾಥ ಜಿ. ಹೆಗ್ಡೆ, ಶ್ರೀ ಕುಂಬ್ರ ದಯಾಕರ್ ಆಳ್ವ, ಶ್ರೀ ಅರಿಯಡ್ಕ ಚಿಕ್ಕಪ್ಪ ನಾೈಕ್, ಡಾ. ಬಿ. ಸಂಜೀವ ರೈ, ಮಹಾಪ್ರಬಂಧಕರಾದ ಶ್ರೀ ಗಣೇಶ್ ಜಿ. ಕೆ. ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.
