Author: admin
ನಾವು ನಿಂತ ತುಂಡು ನೆಲ ನಮ್ಮದಾಗಬೇಕು ಎನ್ನುವುದು ಪ್ರತಿಯೊಬ್ಬರ ಕನಸು ಅದು ಆತ್ಮಕಂಟಿದ ತಪನೆ! ಆ ಕನಸುಗಳು ನಸಾಗುವಾಗ ಆ ಕುಟುಂಬದವರ ಕಣ್ಣಲ್ಲಿ ಆನಂದ ಭಾಷ್ಪ! ಅವರ ನೆಮ್ಮದಿಯ ನಿಟ್ಟುಸಿರು ಹೊರ ಹಾಕುವ ಆಶಿರ್ವಾದದ ಭಾವವೇ ನಮ್ಮ ನೆತ್ತಿಕಾಯುತ್ತದೆ. ಕೋಡಿ ಕನ್ಯಾನ ಮತ್ತು ಹೊಸಬೆಂಗ್ರೆಯ ಜನರ ಭೂಮಿ ಹಕ್ಕಿನ ಕನಸು ಮೊನ್ನೆ ನನಸಾಯಿತು. ಒಟ್ಟು ನೂರಾ ಎಪ್ಪತ್ತೆರಡು ಕುಟುಂಬದ ಕೈಗೆ ಹಕ್ಕು ಪತ್ರಗಳು ದಕ್ಕಿದವು. ಆ ನೆಲದ ಪಹಣಿಯಲ್ಲಿ ಮೊನ್ನೆ ಮೊನ್ನೆ ತನಕ ಸರ್ಕಾರ ಎಂದಿದ್ದರೆ ನಾಳೆಯಿಂದ ಆಯಾ ಕುಟುಂಬದ ಸದಸ್ಯರ ಹೆಸರಿರುತ್ತದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯ ಶಕ್ತಿ. ಅದೆಲ್ಲದಕ್ಕೂ ಕಾರಣವಾದದ್ದು ಕುಂದಾಪುರದ ಶಾಸಕ ಹಾಲಾಡಿ. ಮತ್ತು ಸಚಿವ ಕೋಟ. ಈ ಶ್ರೀನಿವಾಸ ಧ್ವಯರಿಗೆ ಅಭಿಮಾನದ ನಮಸ್ಕಾರಗಳು. ಹಿಂದೆ 1993 ರಲ್ಲೇ ಉಡುಪಿ ಪಡುಕರೆಯ ಜನತೆಯ ಬೂಮಿ ಹಕ್ಕಿನ ಬಗ್ಗೆ ಕಾರ್ಯನಿರತರಾಗಿ ಅದರಲ್ಲಿ ಯಶ ಕಂಡವರು ಉಡುಪಿ ಜಿಲ್ಲೆ ಕಂಡ ಮತ್ತೊಬ್ಬ ಅದ್ಭುತ ರಾಜಕಾರಣಿ ಯು.ಆರ್.ಸಭಾಪತಿ. ಮುಂದೆ ಸಭಾಪತಿಯವರನ್ನ ಜಿಲ್ಲೆಯೇ ಮರೆತು…
ಫೆ. 19ರಂದು ಮುಂಬಯಿಯಲ್ಲಿ ಚಿಣ್ಣರಬಿಂಬದ ಇಪ್ಪತ್ತನೆಯ ವಾರ್ಷಿಕ ಮಕ್ಕಳ ಉತ್ಸವ ಪ್ರತಿಭಾ ಸ್ಪರ್ಧೆ, ಸಾಂಸ್ಕೃತಿಕ ಉತ್ಸವದ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮ
ಮುಂಬಯಿ:- ಚಿಣ್ಣರಬಿಂಬದ ಇಪ್ಪತ್ತನೆಯ ವರ್ಷದ ಮಕ್ಕಳ ಉತ್ಸವವು ದಿನಾಂಕ 19/2/2023ರ ಭಾನುವಾರದಂದು ಬೆಳಿಗ್ಗೆ 10ರಿಂದ ಕುರ್ಲಾ ಪೂರ್ವದ ಬಂಟರ ಭವನದ ರಾಧಾಬಾಯಿ.ಟಿ.ಭಂಡಾರಿ ಸಭಾಂಗಣದಲ್ಲಿ ದಿನಪೂರ್ತಿ ನಡೆಯಲಿದ್ದು ಚಿಣ್ಣರ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಅಂದು 3 ಗಂಟೆಯಿಂದ ಬಹುಮಾನ ವಿತರಣೆ ಹಾಗೂ ಸಮಾರೋಪ ಸಮಾರಂಭ ನಡೆಯಲಿದ್ದು ಆಲ್ ಕಾರ್ಗೋ ಲಾಜಿಸ್ಟಿಕ್ಸ್ನ ಆಡಳಿತ ನಿರ್ದೇಶಕರಾಗಿರುವ ಶ್ರೀ ಶಶಿಕಿರಣ್ ಶೆಟ್ಟಿ ಅವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕರ್ನಾಟಕ ಸರಕಾರದ ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಶ್ರೀ. ವಿ. ಸುನಿಲ್ ಕುಮಾರ್ ಅವರು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಹೇರಂಬ ಇಂಡಸ್ಟ್ರೀಸ್ನ ಆಡಳಿತ ನಿರ್ದೇಶಕರಾದ ಶ್ರೀ ಕನ್ಯಾನ ಸದಾಶಿವ ಶೆಟ್ಟಿ ಅವರು ಆಗಮಿಸಲಿದ್ದಾರೆ. ಗೌರವಾನ್ವಿತ ಅತಿಥಿಗಳಾಗಿ ಬಂಟರ ಸಂಘದ ಅಧ್ಯಕ್ಷರಾಗಿರುವ ಶ್ರೀ ಚಂದ್ರಹಾಸ.ಕೆ.ಶೆಟ್ಟಿ, ಬಂಟರ ಸಂಘದ ಗೌ.ಪ್ರಧಾನ ಕಾರ್ಯದರ್ಶಿಗಳಾಗಿರುವ ಡಾ.ಆರ್.ಕೆ.ಶೆಟ್ಟಿ, ಕರ್ನಾಟಕ ಮಲ್ಲ ಪತ್ರಿಕೆಯ ಸಂಪಾದಕರಾದ ಚಂದ್ರಶೇಖರ ಪಾಲೆತ್ತಾಡಿ, ಬಾಬಾಸ್ ಗ್ರೂಪ್ ಆಫ್ ಕಂಪನೀಸ್ ನ ಆಡಳಿತ ನಿರ್ದೇಶಕರಾಗಿರುವ ಶ್ರಿ ಮಹೇಶ್ ಎಸ್.ಶೆಟ್ಟಿ…
ಗಣರಾಜ್ಯೋತ್ಸವದ ಪ್ರಯುಕ್ತ 2023 ರ ಜನವರಿ 26 ರಂದು ರಾಷ್ಟ್ರರಾಜಧಾನಿ ದೆಹಲಿಯ ಇಂಡಿಯಾ ಗೇಟ್ ಮತ್ತು ರಾಷ್ಟ್ರಪತಿ ಭವನದ ನಡುವಿನ ಕರ್ತವ್ಯ ಪಥದಲ್ಲಿ ನಡೆದ ಕರ್ನಾಟಕದ ಮೂವರು ಮಾತೆಯರ ಕಥನ ಬಿಂಬಿಸುವ ಮನ ಮುಟ್ಟುವ ಮನಸ್ಸು ಅರಳುವ, ಸ್ಪೂರ್ತಿ ತುಂಬುವ ನಾರಿ ಶಕ್ತಿ ಸ್ತಬ್ಧ ಚಿತ್ರ ಪಥಸಂಚಲನದ ಭವ್ಯ ಮೆರವಣಿಗೆಯ ಪೆರೇಡ್ ಗೆ ಆಯ್ಕೆ ಆಗಿರುವುದನ್ನು ವಾರ್ತಾ ಇಲಾಖೆ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಟ್ಯಾಬ್ಲೊ ತಯಾರಾಗಿಸಿದೆ. ನಾರಿ ಶಕ್ತಿಯ ಪರಿಚಯ= ಅಜಾದಿಕಾ ಅಮೃತ ಮಹೋತ್ಸವದ ಹೊತ್ತಲ್ಲಿ ನಾಡಿನ ಹೆಮ್ಮೆಯ ಪ್ರತೀಕವಾಗಿರುವ ಪದ್ಮ ಶ್ರೀ ಪುರಸ್ಕೃತ ನಾರಿ ಶಕ್ತಿ ಪರಿಕಲ್ಪನೆಯಲ್ಲಿ ಸ್ತಬ್ಧ ಚಿತ್ರಸಿದ್ದಗೊಳಿಸಿ ಈ ಮೂಲಕ ಭಾರತದ ನಾರಿ ಅದರಲ್ಲೂ ಕರ್ನಾಟಕದ ನಾರಿ ಶಕ್ತಿಯ ಮೂಲಬೇರನ್ನು ಪ್ರಪಂಚಕ್ಕೆ ತೋರಿಸುವ ಕೆಲಸ ಆಗಿದೆ. ಈ ಸಲ ಗಣರಾಜ್ಯೋತ್ಸವ ಪರೇಡ್ ನಲ್ಲಿ ನಾರಿಶಕ್ತಿ ಮುಖ್ಯ ಥಿಮ್ ಆಗಿದ್ದು ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಮಹಿಳೆಯರ ಕುರಿತು ಟ್ಯಾಬೋಗಳ ಗಮನಸೆಳೆದಿದೆ. ಸ್ತಬ್ಧ ಚಿತ್ರದಲ್ಲಿ ಮುಖ್ಯವಾಗಿ 3 ಭಾಗಗಳಿದ್ದು…
ಮೀರಾ ಭಯಂಧರ್ ಪರಿಸರದ ಹೆಸರಾಂತ ಸಮಾಜ ಸೇವಕಿ, ವಿಧ್ಯಾಧರ ಕನ್ನಡ ಪ್ರತಿಷ್ಠಾನ ಜಯದೇವಿ ತಾಯಿ ಲಿಗಾಡೆ ಪ್ರಶಸ್ತಿ ಪುರಸ್ಕ್ರತೆ, ಬಂಟರ ಸಂಘ ಮುಂಬೈ ಇದರ ಮೀರಾ ಭಯಂದರ್ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ, ಶ್ರೀ ಶಕ್ತಿ ಫೌಂಡೇಶನ್ ಮಹಾರಾಷ್ಟ್ರದ ಅಧ್ಯಕ್ಷೆ , ಕನ್ನಡ ಜಾನಪದ ಪರಿಷತ್ ನ ಮಹಾರಾಷ್ಟ್ರದ ಮಹಿಳಾ ಕಾರ್ಯಾಧ್ಯಕ್ಷೆಯಾಗಿ ಮಾತ್ರವಲ್ಲದೆ ಹಲವಾರು ಸಂಘ-ಸಂಸ್ಥೆಗಳಲ್ಲಿ ಪುರಸ್ಕೃತೆಯಾಗಿ ಸಕ್ರೀಯವಾಗಿ ನಿರಂತರ ಸಮಾಜ ಸೇವೆಗೈಯ್ಯುತ್ತಿರುವ ಸಚ್ಚೇರಿಗುತ್ತು ಶಾಲಿನಿ ಎಸ್. ಶೆಟ್ಟಿಯವರಿಗೆ ಪ್ರತಿಷ್ಠಿತ ದಾದಾ ಸಾಹೇಬ್ ಪಾಲ್ಕೆ ಅವಾರ್ಡ್ ನ್ನು ಪಡೆದಿದ್ದಾರೆ. ಅಂಧೇರಿ ಕಂಟ್ರಿ ಕ್ಲಬ್ ಇಲ್ಲಿ ನಡೆದ ಸಮಾರಂಭದಲ್ಲಿ ದಾದಾ ಸಾಹೇಬ್ ಪಾಲ್ಕೆ ಮೆಮೋರಿಯಲ್ ಫೌಂಡೇಶನ್ ವತಿಯಿಂದ ಈ ಪ್ರಶಸ್ತಿಯನ್ನು ಇದರ ಉನ್ನತ ಅಧಿಕಾರಿಗಳು ಪ್ರಶಸ್ತಿಯನ್ನು ಪ್ರಧಾನಿಸಿದರು. ಮಹಾರಾಷ್ಟ್ರದಲ್ಲಿ ತುಳು – ಕನ್ನಡಿಗರ ಪರವಾಗಿ ಬಂಟ ಮಹಿಳೆಯೋರ್ವರು ಇಂತಹ ಮಹಾನ್ ಪ್ರಶಸ್ತಿಗೆ ಭಾಜನರಾಗಿರುವುದು ನಮ್ಮೆಲ್ಲರಿಗೆ ಹೆಮ್ಮೆಯ ವಿಷಯ.
ಕ್ರೀಡೆ, ಸಾಂಸ್ಕೃತಿಕ, ಸಾಮಾಜಿಕ ಸೇವೆಯಲ್ಲಿ ನಿರಂತರ ಕಾರ್ಯಚಟುವಟಿಕೆಗಳನ್ನು ನಡೆಸುವ ಮೂಲಕ ಸಾರ್ವಜನಿಕರಿಂದ ಪ್ರಶಂಸೆಗೆ ಒಳಪಟ್ಟ ತಡಂಬೈಲ್ ನ ವೀರ ಕೇಸರಿ ಸೇವಾಸಂಸ್ಥೆಯನ್ನು ದಕ್ಷಿಣ ಕನ್ನಡ ಜಿಲ್ಲಾಡಳಿತ ಗುರುತಿಸಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸುವಂತಾಗಲಿ ಎಂದು ಕರ್ನಾಟಕ ಮಾಧ್ಯಮ ಅಕಾಡೆಮಿಯ ಸದಸ್ಯ, ಹಿರಿಯ ಪತ್ರಕರ್ತ ಬಾಳ ಜಗನ್ನಾಥ ಶೆಟ್ಟಿ ತಿಳಿಸಿದರು. ಮಾರಿಗುಡಿ ಶ್ರೀ ಮಹಮ್ಮಾಯಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಮಾರಿಗುಡಿ ಬಳಿ ವೀರ ಕೇಸರಿ ಹಮ್ಮಿಕೊಂಡ ಸಾಂಸ್ಕೃತಿಕ ಕಾರ್ಯಕ್ರಮದ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ವೀರ ಕೇಸರಿ ಸೇವಾ ಸಂಸ್ಥೆ ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿದೆ. ಕ್ರೀಡೆ, ಶೈಕ್ಷಣಿಕ ಸಾಂಸ್ಕೃತಿಕ ಚಟುವಟಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ, ಪ್ರತಿಭಾವಂತರನ್ನು ಗುರುತಿಸಿ ಗೌರವಿಸುತ್ತಿದೆ. ಈ ಸಂಸ್ಥೆಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ದೊರೆಯಲು ಸ್ಥಳೀಯ ಮಹಾನಗರ ಪಾಲಿಕೆ ಸದಸ್ಯೆಯರು ಪ್ರಾಮಾಣಿಕ ಪ್ರಯತ್ನ ನಡೆಸಲಿ ಎಂದರು. ಮನಪಾ ಸದಸ್ಯೆ ಶ್ವೇತಾ ಪೂಜಾರಿ ಮಾತನಾಡಿ ವೀರಕೇಸರಿ ಸಂಸ್ಥೆ ಕೋರೊನಾ ಸಂದರ್ಭದಲ್ಲಿ ಬಹಳಷ್ಟು ಕುಟುಂಬಗಳಿಗೆ ಮಾನವೀಯತೆಯ ನೆಲೆಯಲ್ಲಿ…
ನವೆಂಬರ್ 13 ರ ರೈ ಎಸ್ಟೇಟ್ನವೆಂಬರ್ 13 ರ ರೈ ಎಸ್ಟೇಟ್ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಸಮಾವೇಶದ ಸಿದ್ಧತೆ ಸಭೆ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಸಮಾವೇಶದ ಸಿದ್ಧತೆ ಸಭೆ
ರೈ ಎಸ್ಟೇಟ್ಸ್ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಇದರ ವತಿಯಿಂದ ನಡೆಯಲಿರುವ ಟ್ರಸ್ಟಿನ ಮಹಾಸಭೆ ಹಾಗೂ ಟ್ರಸ್ಟಿನ ಫಲಾನುಭವಿಗಳಿಗೆ ವಸ್ತ್ರ ವಿತರಣೆ, ಸಮಾವೇಶ ಕಾರ್ಯಕ್ರಮ ನ.13 ರಂದು ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಸುಮಾರು 50 ಸಾವಿರಕ್ಕೂ ಮಿಕ್ಕಿ ಫಲಾನುಭವಿಗಳು ಭಾಗವಹಿಸುವ ನಿರೀಕ್ಷೆ ಇದ್ದು ಈಗಾಗಲೇ ಎಲ್ಲಾ ಸಿದ್ಧತೆಗಳು ನಡೆಯುತ್ತಿದೆ ಎಂದು ಟ್ರಸ್ಟಿನ ಅಧ್ಯಕ್ಷ ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ. ಶಾಸಕರ ಸಭಾಭವನದಲ್ಲಿ ನಡೆದ ಟ್ರಸ್ಟಿನ ಪ್ರಮುಖರ ಸಭೆಯಲ್ಲಿ ಈ ಮಾಹಿತಿ ನೀಡಿದರು. ಸಭೆಯಲ್ಲಿ ಭಾಗವಹಿಸುವ ಎಲ್ಲರಿಗೂ ವಸ್ತ್ರ ವಿತರಣೆ ನಡೆಯಲಿದೆ. ಅದರ ಜತೆ ಸಹಭೋಜನವೂ ನಡೆಯಲಿದೆ. ಗ್ರಾಮ ಗ್ರಾಮಗಳಲ್ಲಿ ಸ್ವಾಗತ ಸಮಿತಿಯನ್ನು ರಚಿಸಲಾಗಿದ್ದು ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಫಲಾನುಭವಿಗಳು ಭಾಗವಹಿಸುವಂತೆ ಶಾಸಕರು ಮನವಿ ಮಾಡಿದರು. ಸಭೆಯಲ್ಲಿ ಟ್ರಸ್ಟಿನ ಕಾರ್ಯಾಧ್ಯಕ್ಷ ಸುದೇಶ್ ಶೆಟ್ಟಿ, ಪ್ರಮುಖರಾದ ಸುಮಾ ಅಶೋಕ್ ರೈ, ನಿಹಾಲ್ ಶೆಟ್ಟಿ, ರಾಕೇಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು
ಇನ್ನಂಜೆ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಲಕ್ಷ್ಮಣ ಕೆ. ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಇನ್ನಂಜೆ ಎಸ್. ವಿ. ಎಚ್. ಪ.ಪೂ ಕಾಲೇಜಿನ ಸಭಾಭವನದಲ್ಲಿ ನಡೆಯಿತು. 2022-2023 ನೇ ಸಾಲಿನಲ್ಲಿ ಗಳಿಸಿದ ನಿವ್ವಳ ಲಾಭ 4,08,675.72 ರೂ. ಯನ್ನು ವಿಂಗಡಣೆ ಮಾಡಲಾಯಿತು. ಶೇ 15 ಶೇರು ಡಿವಿಡೆಂಟ್ ಘೋಷಿಸಲಾಯಿತು. ಸದ್ರಿ ವರ್ಷದಲ್ಲಿ ಹಾಲು ಸರಬರಾಜು ಮಾಡಿದ ಸದಸ್ಯರಿಗೆ 1,75,721 ರೂ. ಬೋನಸ್ ವಿತರಿಸಲಾಯಿತು. ಶೇ 1 ರಂತೆ 85,784 ರೂ. ಪ್ರೋತ್ಸಾಹ ಧನ ವಿತರಿಸಲಾಯಿತು. ಸಂಘದ ಸಕ್ರಿಯ ಹಿರಿಯ ಸದಸ್ಯರಾದ ವೇದಾವತಿ ಪೂಜಾರ್ತಿ, ಸಂಜೀವಿ ಮತ್ತು ವಿಟ್ಟಲ ಮೂಲ್ಯ ಅವರನ್ನು ಸನ್ಮಾನಿಸಲಾಯಿತು. ಇನ್ನಂಜೆ ಅಂಚೆ ಕಚೇರಿಯಲ್ಲಿ 11 ವರ್ಷ ಸೇವೆ ಸಲ್ಲಿಸಿ ಮುಂಬಡ್ತಿ ಹೊಂದಿರುವ ಪ್ರಕಾಶ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಉತ್ತಮ ಗುಣಮಟ್ಟದ ಹಾಲು ಪೂರೈಸಿದ ಎಲಿಜಬೆತ್ ಡಿ‘ಸೋಜಾ – ಪ್ರಥಮ ಆಶಾ – ದ್ವಿತೀಯ ಮತ್ತು ಜಯಂತಿ ಕೆ. ಶೆಟ್ಟಿ – ತೃತೀಯ ಬಹುಮಾನ ನೀಡಿ…
ಸೆ. 05 ಬ್ರಹ್ಮಾವರದ ಜಿ ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್ ನಲ್ಲಿ ಶಿಕ್ಷಕರ ದಿನಾಚರಣೆಯಂದು ಶಾಲಾ ಆಡಳಿತ ಮಂಡಳಿಯು ಗುರುವಂದನಾ ಕಾರ್ಯಕ್ರಮವನ್ನು ಆಯೋಜಿಸಿತ್ತು. ಎಲ್ಲಾ ಪ್ರಧಾನ ಶಿಕ್ಷಕರಿಗೂ ಗ್ರೀಟಿಂಗ್ಸ್ ಕಾರ್ಡ್ ನೀಡುವುದರ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಕಾರ್ಕಳ ಕುಕ್ಕುಜೆ ಸರಕಾರಿ ಪದವಿ ಪೂರ್ವ ಕಾಲೇಜಿನ ಶಿಕ್ಷಕ, ರಾಷ್ಟ್ರಪ್ರಶಸ್ತಿ ವಿಜೇತ ಶ್ರೀ ಸುರೇಶ್ ಮರಕಾಲ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಅವರು ಮಾತನಾಡಿ ಮಾಜಿ ರಾಷ್ಟ್ರಪತಿ ದಿ. ಡಾ. ಶಂಕರ್ ದಯಾಳ್ ಶರ್ಮಾ ರವರು ತನ್ನ ಶಿಷ್ಯ ಅರಬ್ ದೇಶದ ದೊರೆಯಿಂದ ವಿದೇಶದಲ್ಲಿ ರಾಜ ಮರ್ಯಾದೆಯನ್ನು ಪಡೆದುಕೊಂಡಿದ್ದರು. ಇದು ಗುರು ಮತ್ತು ಶಿಷ್ಯರ ಉತ್ತಮ ಸಂಬಂಧಕ್ಕೆ ಉದಾಹರಣೆಯಾಗಿದೆ. ಜಿ ಎಮ್ ಒಂದು ಅತ್ಯದ್ಭುತ ವಿದ್ಯಾ ಸಂಸ್ಥೆ. ಇಲ್ಲಿರುವ ಎಲ್ಲಾ ವಿದ್ಯಾರ್ಥಿಗಳು, ಶಿಕ್ಷಕರು ಅದೃಷ್ಟವಂತರು. ಇಲ್ಲಿನ ಮಕ್ಕಳ ಶಿಸ್ತು, ಸಂಸ್ಕಾರವನ್ನು ನೋಡುವಾಗ ತುಂಬಾ ಸಂತೋಷವಾಗುತ್ತದೆ ಎಂದರು. ಶಾಲಾ ಪ್ರಾಂಶುಪಾಲರಾದ ಜಾರ್ಜ್ ಕುರಿಯನ್ ಮಾತನಾಡಿ ಪ್ರತಿಯೊಂದು ಮಗುವಿನ ಯಶಸ್ಸಿನ ಹಿಂದೆ ಶಿಕ್ಷಕರು ಇರುತ್ತಾರೆ. ತಂದೆ ತಾಯಿಯರು ನಮ್ಮ…
ಮುಂಬೈ,ಜು:25: ಧಾರಣೆಗೆ ಯೋಗ್ಯವಾಗಿರುವಂಥದ್ದು ಧರ್ಮ. ಧರ್ಮವಿರುವುದೇ ಅನುಷ್ಠಾನ ಮಾಡವುದಕ್ಕಾಗಿ. ಮನುಷ್ಯ ಮಾನವ ಧರ್ಮವನ್ನು ಬಿಟ್ಟರೆ ದಾನವನಾಗುತ್ತಾನೆ. ಮನುಷ್ಯ ಮಾಡುವ ಸತ್ಕರ್ಮಗಳಿಗೆ ಸತ್ಪಲ ಹಾಗೂ ದುಷ್ಕರ್ಮಗಳಿಗೆ ದುಷ್ಪಲ ಸಿಗುತ್ತದೆ. ಮನುಷ್ಯನ ಜೀವನವೇ ಒಂದು ರಥ. ಆ ರಥಕ್ಕೆ ಒಂದು ಪಥವೆಂದರೆ ಅದು ಧರ್ಮ. ಧರ್ಮ ಮತ್ತು ಸಂಸ್ಕೃತಿ ಒಂದೇ ನಾಣ್ಯದ ಎರಡು ಮುಖಗಳು. ಸಂಸ್ಕೃತಿ ಬೆಳೆಯಲು ಧರ್ಮ ಬೇಕು. ಸಂಸ್ಕೃತಿಯನ್ನು ಉಳಿಸಿಕೊಂಡರೆ ಧರ್ಮ ಉಳಿಯುತ್ತದೆ ಎಂದು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ನುಡಿದರು. ಅವರು ಜುಲೈ 22 ರಂದು ಕಲಿನಾ ಕ್ಯಾಂಪಸ್, ಜೆ.ಪಿ.ನಾಯಕ್ ಸಭಾಭವನದಲ್ಲಿ ಮುಂಬೈ ವಿಶ್ವವಿದ್ಯಾಲಯ, ಕನ್ನಡ ವಿಭಾಗ ಆಯೋಜಿಸಿದ್ದ “ಸಂಸ್ಕೃತಿ ಚಿಂತನ ಮಂಥನ” ಕಾರ್ಯಕ್ರಮದಲ್ಲಿ “ಧರ್ಮ ಮಾನವ ಧರ್ಮ” ಎಂಬ ವಿಷಯದ ಕುರಿತು ಮಾತನಾಡಿದರು. ತ್ಯಾಗ, ಸೇವೆ ಎನ್ನುವುದು ಭಾರತದ ರಾಷ್ಟ್ರೀಯ ಆದರ್ಶವಾಗಿವೆ. ಮನುಷ್ಯ ಧರ್ಮಯುಕ್ತವಾಗಿ ಗಳಿಸಬೇಕು. ಧರ್ಮಯುಕ್ತವಾಗಿ ಅದನ್ನು ಬಳಸಬೇಕು. ಧರ್ಮಯುಕ್ತವಾಗಿ ಉಳಿಸಬೇಕು. ಆಗ ಯಾವುದೇ ಅಪಾಯವೂ ಬರಲಾರದು. ನಮ್ಮನ್ನು ನಾವು ಅರಿತುಕೊಳ್ಳುವುದಕ್ಕೆ ಬೇಕಾಗಿರುವಂತಹ ಸಾಧನವೇ ಸಾಹಿತ್ಯ.…
ನಂದಳಿಕೆ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ನಂದಳಿಕೆ ಅಯನೋತ್ಸವ, ಸಿರಿಜಾತ್ರಾ ವೈಭವ ಎ. 6ರಂದು ನಡೆಯಲಿದೆ. ಕ್ಷೇತ್ರದ ಉರಿಬ್ರಹ್ಮ, ಗಣಪತಿ, ವೀರಭದ್ರ, ನಂದಿಗೋಣ, ಸಿರಿ ಕುಮಾರ, ಅಬ್ಬಗ-ದಾರಗ, ಖಡ್ಗೇಶ್ವರೀ, ರಕ್ತೇಶ್ವರೀ, ಚಾಮುಂಡಿ, ಅಣ್ಣಪ್ಪ, ಕ್ಷೇತ್ರಪಾಲ, ಭೂತರಾಜ, ಗಜಮಲ್ಲ, ಮಹಾನಾಗ ರಾಜ ಸ್ವಾಮಿ ಸನ್ನಿಧಿಗಳಲ್ಲಿ ಪೂಜೆ ನಡೆಯಲಿದೆ. ಬೆಳಗ್ಗೆ 8ರಿಂದ ಶ್ರೀ ಉರಿಬ್ರಹ್ಮ ದೇವರ ಸ್ವರ್ಣ ಪಾದುಕೆ, ಶ್ರೀ ಅಬ್ಬಗ-ದಾರಗರ ಚೆನ್ನೆಮಣೆಗಳ ಸಾಲಂಕೃತ ಮೆರವಣಿಗೆ ಪ್ರಾಕ್ತನ ಪದ್ಧತಿಯಂತೆ ಪರ್ಯಟಿಸಿ ಮಧ್ಯಾಹ್ನ ಆಲಡೆಯಲ್ಲಿ ಶ್ರೀ ಅಣ್ಣಪ್ಪ ದರ್ಶನ, ಹಸಿರು ಮಡಲು ಚಪ್ಪರ ಕಟ್ಟೆ ಪೂಜಾ ಸೇವೆ, ಶ್ರೀ ದೇವರ ಮಹೋತ್ಸವ ಬಲಿ, ಮಹಾಪೂಜೆ, ಪ್ರಸಾದ ವಿತರಣೆ, ಮಧ್ಯಾಹ್ನ 1ರಿಂದ ಸಾರ್ವಜನಿಕ ಮಹಾ ಅನ್ನಸಂತರ್ಪಣೆ, ರಾತ್ರಿ 9ಕ್ಕೆ ನಂದಳಿಕೆ ಚಾವಡಿ ಆರಮನೆಯಿಂದ ಶ್ರೀ ಹೆಗ್ಡೆಯವರ ಆಗಮನ, ರಾತ್ರಿ 10.30ರಿಂದ ಅಯನೋತ್ಸವ ಬಲಿ, ಕೆರೆ ದೀಪೋತ್ಸವ, ಕೆರೆದೀಪ ಕಟ್ಟೆಪೂಜಾ ಮಹೋತ್ಸವ, ರಾತ್ರಿ 11ರಿಂದ ಶ್ರೀ ಆಲಡೆ ಸನ್ನಿಧಿಯಲ್ಲಿ ಶ್ರೀ ಸಿರಿ ಕುಮಾರ, ಅಬ್ಬಗ ದಾರಗ ದರ್ಶನಾವೇಶಪೂರ್ವಕ ಸೂರ್ಯೋದಯ ಪರ್ಯಂತ…