Author: admin
ಅದು ಯಾವುದೇ ಕ್ಷೇತ್ರ ಇರಲಿ, ಕಾಂಗ್ರೆಸ್ ಅಭ್ಯರ್ಥಿ ಯಾರು? ಎಂದು ಊಹಿಸುವುದು ತುಸು ಕಷ್ಟಸಾಧ್ಯವೇ. ಕಾರಣ ಪಕ್ಷದ ಟಿಕೆಟ್ಗಾಗಿ ಈ ಬಾರಿ ಕನಿಷ್ಠ 2-3 ಅಭ್ಯರ್ಥಿಗಳಾದರೂ ಬಿರುಸಿನ ಪೈಪೋಟಿ ನಡೆಸುತ್ತಿದ್ದಾರೆ. ಪಕ್ಷದ ಹೈಕಮಾಂಡ್ ತನ್ನ ಅಭ್ಯರ್ಥಿಗಳನ್ನು ಅಖೈರುಗೊಳಿಸಿ ಯಾದಿಯನ್ನು ಬಿಡುಗಡೆಗೊಳಿಸಿದಾಗಲೇ ಕುತೂಹಲಕ್ಕೆ ತೆರೆ ಬೀಳುತ್ತದೆ. ಆದರೆ ಈ ಬಾರಿ ಮೂಡುಬಿದರೆ ಕ್ಷೇತ್ರದಲ್ಲಿ ಮಿಥುನ್ ರೈ ಹೆಸರು ಬಹುತೇಕ ಪಕ್ಕಾ ಆದಂತಿದೆ. ಅಧಿಕೃತವಾಗಿ ಘೋಷಣೆ ಆಗಬೇಕಿದೆ. 2018ರಲ್ಲೇ ಮಿಥುನ್ ಈ ಕ್ಷೇತ್ರದಿಂದ ಸ್ಪರ್ಧಿಸಲು ಆಕಾಂಕ್ಷಿಯಾಗಿ ತೀವ್ರ ಪ್ರಯತ್ನ ನಡೆಸಿದ್ದರು. ಆದರೆ ಅಭಯಚಂದ್ರರಿಗೆ ಟಿಕೆಟ್ ಕೊಟ್ಟಿದ್ದರ ಹಿನ್ನೆಲೆಯಲ್ಲಿ ಮಿಥುನ್ ರೈ ಅವರಿಗೆ ಅವಕಾಶ ಕೈ ತಪ್ಪಿತ್ತು. ಅಭಯಚಂದ್ರ ಜೈನ್ ಈಗಾಗಲೇ ತಾವು ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕಳೆದ 2018ರ ಚುನಾವಣೆ ಸಂದರ್ಭದಲ್ಲೂ ಇದೇ ಮಾತು ಹೇಳಿದ್ದರೂ ಕೊನೆಯಲ್ಲಿ ಸಿದ್ದರಾಮಯ್ಯ ಸೂಚನೆ ಮೇರೆಗೆ ಸ್ಪರ್ಧಿಸಿದ್ದರು. 2019ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಮಂಗಳೂರು ಕ್ಷೇತ್ರದ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದ ಮಿಥುನ್ ರೈ, ಬಿಜೆಪಿಯ ನಳಿನ್ ಕುಮಾರ್ ಕಟೀಲು…
ಸೇವಾ ಶಿಖರ್ ಫೌಂಡೇಶನ್ ಮಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಹಾಗೂ ಮಂಗಳೂರು ತಾಲೂಕು ಕಬಡ್ಡಿ ಅಸೋಸಿಯೇಷನ್ ಇದರ ಸಹಯೋಗದಲ್ಲಿ “ಕುಡ್ಲ ಕಬಡ್ಡಿ-2023” ಇದರ ಉದ್ಘಾಟನಾ ಸಮಾರಂಭ ಪಣಂಬೂರಿನ ಎನ್ಎಂಪಿಎ ಮೈದಾನದಲ್ಲಿ ಜರುಗಿತು. ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದ ಶಾಸಕ ಡಾ. ಭರತ್ ಶೆಟ್ಟಿ ವೈ. ಅವರು ಮಾತಾಡುತ್ತಾ, “ಕಬಡ್ಡಿಯಂತಹ ದೇಶೀಯ ಕ್ರೀಡೆ ಇಂದು ಅಳಿವಿನ ಅಂಚಿನಲ್ಲಿದೆ. ಆದರೆ ಯುವಕರು ಇಂತಹ ಕ್ರೀಡೆಗಳತ್ತ ಅಕರ್ಷಿತರಾಗುತ್ತಿರುವುದು ಒಳ್ಳೆಯ ಬೆಳವಣಿಗೆ. ಕಬಡ್ಡಿ ಟೂರ್ನಮೆಂಟ್ ಹಮ್ಮಿಕೊಂಡಿರುವ ಸಂಘಟನೆ ಇನ್ನಷ್ಟು ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಮಾಜಕ್ಕೆ ಮಾದರಿಯಾಗಲಿ” ಎಂದು ಶುಭ ಹಾರೈಸಿದರು. ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಮಾತನಾಡುತ್ತಾ, “ಸಮಾಜಕ್ಕೆ ಸೇವೆ ಸಲ್ಲಿಸಲು ಯಾವ ಜಾತಿ ಧರ್ಮವೂ ಬೇಕಾಗಿಲ್ಲ. ಸೇವೆಗಾಗಿ ನಿರ್ಮಿಸಿರುವ ಸೇವಾ ಶಿಖರ್ ಸಂಘಟನೆ ಸಾಮಾಜಿಕ ಕಳಕಳಿಯ ಮೂಲಕ ಸೇವೆಯ ಶಿಖರವನ್ನು ಏರಲಿ” ಎಂದರು. ಇತ್ತೀಚಿಗೆ ಕರ್ತವ್ಯ ಸಂದರ್ಭ ವೀರ ಮರಣವನ್ನಪ್ಪಿದ ಶಕ್ತಿನಗರದ…
ತುಳುನಾಡಿನ ಭಾಷಿಕ , ಸಾಂಸ್ಕೃತಿಕ, ಹಾಗೂ ಧಾರ್ಮಿಕ ಆಸ್ಮಿತೆಗಳನ್ನು ಜಾಗೃತ ಗೊಳಿಸಿ ತುಳುನಾಡಿನ ಮೂಲ ಧರ್ಮ ಮಾತೃಮೂಲೀಯ ಅವೈದಿಕ ತೌಳವ ಧರ್ಮದ ಮೂರು ಮೂಲ ಧಾರ್ಮಿಕ ಆಚರಣೆಗಳಾದ ಬೆರ್ಮೆರಾಧನೆ , ಬೂತಾರಾಧನೆ ಹಾಗೂ ನಾಗಾರಾಧನೆಗಳನ್ನು ಅವುಗಳ ಮೂಲ ಸ್ವರೂಪದಲ್ಲಿ ಉಳಿಸಿಕೊಳ್ಳಲು ಆ ಆರಾಧನೆಗಳ ಹಿಂದಿರುವ ಮೂಲ ಧಾರ್ಮಿಕ ನಂಬಿಕೆಗಳ ಬಗ್ಗೆ ತಿಳುವಳಿಕೆ ಹಾಗೂ ಜಾಗೃತಿಯನ್ನು ಮೂಡಿಸುವುದು ಅನಿವಾರ್ಯ ಎಂದಾದಾಗ “ತುಳುನಾಡು ಬೆರ್ಮೆರ್ ನ ಸೃಷ್ಟಿ” ಎಂಬ ತುಳುನಾಡಿನ ಅನಾದಿಕಾಲದ ಮೂಲ ಧಾರ್ಮಿಕ ನಂಬಿಕೆಯ ಬಗ್ಗೆ ಹಾಗೂ “ಬೆರ್ಮೆರ್” ಎಂಬ ತುಳುವರ ಮೂಲ ದೈವದ ಪರಿಕಲ್ಪನೆ ಹಾಗೂ ಸ್ವರೂಪದ ಬಗ್ಗೆ ಸಹಜವಾಗಿಯೇ ತೌಳವರ ಗಮನ ಕೇಂದ್ರೀಕರಿಸಲ್ಪಟ್ಟಿತ್ತು. ತುಳುನಾಡಿನ “ಮೂಲ ಧರ್ಮ” ಅಂದರೆ ತುಳುನಾಡಿನ ಮೂಲನಿವಾಸಿಗಳ ಧರ್ಮದ ಈ ಮೂಲ ಧಾರ್ಮಿಕ ನಂಬಿಕೆಗೆ ಗ್ರಹಣ ಹಿಡಿಸಿದ “ತುಳುನಾಡು ಪರಶುರಾಮ ಸೃಷ್ಟಿ” ಎಂಬ ವಾದದ ಹಿಂದಿರುವ ತಾರ್ಕಿಕ ಅಂಶ ಹಾಗೂ ಆಧಾರಗಳ ಶೋಧನೆಗೆ ಈ ವಿಚಾರವನ್ನು ಸಹಜವಾಗಿಯೇ ಸಂವಾದದ ವಿಷಯನ್ನಾಗಿ ಮಾಡುವ ಅನಿವಾರ್ಯತೆ ಎದುರಾಯಿತು .…
ಸರಳ, ಸಜ್ಜನಿಕೆಯ ರಮಾಕಾಂತ್ ಶೆಟ್ಟಿಯವರು ಬೆಂಗಳೂರಿನ ಸುಂದರರಾಮ್ ಶೆಟ್ಟಿ ನಗರ ಬಿಳೇಕಹಳ್ಳಿಯಲ್ಲಿ ಪೆರೋಡಿ ಬಿಲ್ಡರ್ಸ್ ಎಂಬ ಸಂಸ್ಥೆಯನ್ನು ನಡೆಸಿಕೊಂಡು ಬರುತ್ತಿದ್ದು, ತನ್ನ ಉದ್ಯಮದೊಂದಿಗೆ ಸಮಾಜಸೇವೆಯನ್ನು ಮಾಡುತ್ತಾ ಬರುತ್ತಿದ್ದಾರೆ. ರಮಾಕಾಂತ್ ಶೆಟ್ಟಿಯವರಿಗೆ ಭಗವಂತ ಸುಖ ಶಾಂತಿ ನೆಮ್ಮದಿ ಐಶ್ವರ್ಯ ಆರೋಗ್ಯವನ್ನಿತ್ತು ಹರಸಲಿ ಎಂದು ಸಮಸ್ತ ಬಂಟ ಸಮಾಜದ ಪರವಾಗಿ ಶುಭ ಹಾರೈಸುತ್ತಿದ್ದೇವೆ.
ಇಂದಿನ ಹೆಸರುವಾಸಿ ಕಲಾವಿದರ ಹಿಂದೆ ಒಂದು ದಿನ ಕಳೆಯುವುದು ಕಷ್ಟ ಎಂಬ ಪರಿಸ್ಥಿತಿಯಿತ್ತು. ಯಕ್ಷಗಾನ ಕ್ಷೇತ್ರದಲ್ಲಿ 23 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದೇನೆ. ಕಲಾವಿದರ ಕಷ್ಟವನ್ನು ಬಹಳ ಹತ್ತಿರದಿಂದ ಗಮನಿಸಿದವ ನಾನು. ಕಲಾವಿದರಿಗೆ ಆರ್ಥಿಕ ನೆರವು ನೀಡುವ ನಿಟ್ಟಿನಲ್ಲಿ ಪಟ್ಲ ಫೌಂಡೇಶನ್ ಟ್ರಸ್ಟ್ ಸ್ಥಾಪಿಸಲಾಯಿತು. ಟ್ರಸ್ಟ್ ನ ಕಾರ್ಯವೈಖರಿಯಲ್ಲಿ ನಾನು ಕೇವಲ ನಿಮಿತ್ತ. ಎಲ್ಲವೂ ಕಟೀಲು ಅಮ್ಮನವರ ಕೃಪೆ. ಹೃದಯ ಶ್ರೀಮಂತ ದಾನಿಗಳಿಂದ ನಮ್ಮ ಯಕ್ಷಧ್ರುವ ಪಟ್ಲ ಫೌಂಡೇಶನ್ ಕಲಾಸೇವೆಯಲ್ಲಿ ಮುಂದುವರಿಯುತ್ತಿದೆ ಎಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಸ್ಥಾಪಕಾಧ್ಯಕ್ಷ ಸತೀಶ್ ಶೆಟ್ಟಿ ಪಟ್ಲ ಅಭಿಪ್ರಾಯಪಟ್ಟರು. ಅವರು ನವೆಂಬರ್ 2 ರಂದು ಗೋವಾ ಪಣಜಿ ಇನ್ಸ್ಟಿಟ್ಯೂಟ್ ಮೆನೇಜಸ್ ಬ್ರಗಾನ್ಸ ಸಭಾಗೃಹದಲ್ಲಿ ನಡೆದ ಯಕ್ಷಧ್ರುವ ಪಟ್ಲ ಫೌಂಡೇಶನ್ ಗೋವಾ ಘಟಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾರ್ಯಕ್ರಮ ಉದ್ಘಾಟಿಸಿದ ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಗುರುರಾಜ್ ಗಂಟಿಹೊಳೆ ಮಾತನಾಡಿ, ಯಕ್ಷಗಾನ ನಮ್ಮ ಕರಾವಳಿಗೆ ದೇವರು ನೀಡಿದ ಕಾಣಿಕೆ. ಯಕ್ಷಗಾನ ಸಂಸ್ಕಾರವನ್ನು ಕಲಿಸುತ್ತವೆ. ಇದು ಒಳಿತು…
‘ತಾರಾ’ ಭಾರತೀಯ ಸಮಾಜದ ಹೆಣ್ಣಿನ ಬಿಂಬ’ ವಿದ್ಯಾಗಿರಿ : ಪಿತೃ ಪ್ರಧಾನ ಸಮಾಜವು ಮಹಿಳೆಯನ್ನು ಹೇಗೆ ಬಿಂಬಿಸಿದೆ ಎನ್ನುವುದೇ ‘ತಾರಾ’ ನಾಟಕದ ಅಂತಸತ್ವ ಎಂದು ಹೆಬ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇಂಗ್ಲಿಷ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ವಿಷ್ಣು ಮೂರ್ತಿ ಪ್ರಭು ಹೇಳಿದರು. ಆಳ್ವಾಸ್ ಕಾಲೇಜು ಪದವಿ ಇಂಗ್ಲಿಷ್ ವಿಭಾಗವು ಕುವೆಂಪು ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡ ಮಹೇಶ್ ದತ್ತಣಿ ಅವರ ಕೃತಿ ‘ತಾರಾ’ ಅವಲೋಕನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಾಂಪ್ರದಾಯಿಕ ಸಮಾಜವು ಪುರಷನೇ ಎಲ್ಲದಕ್ಕೂ ಆಧಾರ. ಹೆಣ್ಣು ಪರಾವಲಂಬಿ ಎಂಬಂತೆ ಬದುಕನ್ನು ರೂಪಿಸಿತ್ತು. ಆದರೆ, ಕೈಗಾರೀಕರಣದ ಬಳಿಕ ಮಹಿಳೆಗೆ ತನ್ನ ಸಾಮಥ್ರ್ಯ ಪ್ರದರ್ಶನದ ಜೊತೆ ಕುಟುಂಬ ಹಾಗೂ ಸಮಾಜಕ್ಕೆ ಕೊಡುಗೆ ನೀಡಲು ಸಾಧ್ಯವಾಯಿತು ಎಂದರು. ಮಹೇಶ್ ದತ್ತಣಿ ಅವರು ‘ತಾರಾ’ ಕೃತಿ ಮೂಲಕ ಭಾರತೀಯ ಸಮಕಾಲೀನ ಸಮಾಜದಲ್ಲಿನ ಲಿಂಗ ತಾರತಮ್ಯದ ಬಗ್ಗೆ ವಿವರವಾಗಿ ಚರ್ಚಿಸಿದ್ದಾರೆ ಎಂದರು. ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್, ಆಳ್ವಾಸ್ ಕಾಲೇಜು ಪದವಿ ಕಂಪ್ಯೂಟರ್ ವಿಭಾಗದ ಮುಖ್ಯಸ್ಥೆ…
ಕಡಲ ತೀರ, ಅಲ್ಲೊಂದು ಮುದ್ದಾದ ಪ್ರೇಮ, ಹಿತವಾದ ಅಲೆಗಳ ಹಿಂದಿನ ಕ್ರೂರತೆ. ರಕ್ತ, ಜೈಲು, ಪ್ರೀತಿ ಮತ್ತು ಆ ಕಣ್ಣುಗಳು ಇದು ಹೇಮಂತ್ ರಾವ್ ಅವರ ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ಮೊದಲ ತುಣುಕಿನಲ್ಲಿ ಕಂಡಿದ್ದು. ರಕ್ಷಿತ್ ಶೆಟ್ಟಿ ಮತ್ತು ರುಕ್ಮಿಣಿ ವಸಂತ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ರಕ್ಷಿತ್ ಶೆಟ್ಟಿ ಅವರ ಪರವಂ ಪಿಕ್ಷರ್ ನಲ್ಲಿ ನಿರ್ಮಾಣ ಮಾಡಿರುವ ಚಿತ್ರದ ರಚನೆ ಮತ್ತು ನಿರ್ದೇಶನ ಹೇಮಂತ್ ರಾವ್ ಅವರದ್ದು. ಈ ಹಿಂದೆ ಗೋದಿ ಬಣ್ಣ ಸಾಧಾರಣ ಮೈಕಟ್ಟು ಮತ್ತು ಕವಲುದಾರಿ ಚಿತ್ರ ಮಾಡಿ, ನವ ನಿರ್ದೇಶಕರ ಸಾಲಿನಲ್ಲಿ ಭಿನ್ನವಾಗಿ ಕಾಣಿಸಿಕೊಂಡಿದ್ದ ಹೇಮಂತ್ ಅವರು ಇದೀಗ ಮನು ಮತ್ತು ಪ್ರಿಯಾರ ಲವ್ ಸ್ಟೋರಿ ಹೇಳಲು ಹೊರಟಿದ್ದಾರೆ. ಮನುವಿನ (ರಕ್ಷಿತ್ ಪಾತ್ರ) ಲವ್ ಸ್ಟೋರಿ ಮತ್ತು ಲೈಫ್ ಸ್ಟೋರಿಯನ್ನು ಕಡಲ ಅಲೆಗಳ ನಡುವೆ ಹೇಳುತ್ತಿದ್ದಾರೆ. ಚಿತ್ರವು ಎರಡು ಭಾಗಗಳಲ್ಲಿ ಬಿಡುಗಡೆಯಾಗುತ್ತಿದ್ದು, ಮೊದಲ ಭಾಗವು ಸೆಪ್ಟೆಂಬರ್ 1ರಂದು ಬಿಡುಗಡೆ…
ಬಂಟರ ಸಂಘ, ವಾಮದ ಪದವು ವಲಯದ ವತಿಯಿಂದ ‘ಪದವುಡು ಆಟಿದ ಕೂಟ’ ಅದ್ದೂರಿ ಕಾರ್ಯಕ್ರಮ 23-07-2023ರ ರವಿವಾರ ನಡೆಯಿತು. ವಾಮದಪದವಿನ ಆಲದಪದವಿನ ರಾಯಿ-ಮೂರ್ಜೆ ರಸ್ತೆ ಬಳಿಯ ಸಂಘದ ನಿವೇಶನದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಕಾರ್ಯಕ್ರಮ ಉದ್ಘಾಟಿಸಿದರು. ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಡಾ. ಎಂ. ಮೋಹನ್ ಆಳ್ವಾ ಅಧ್ಯಕ್ಷತೆ ವಹಿಸಿದರು. ಮಾಣಿ ವಲಯ ಬಂಟರ ಸಂಘದ ಉಪಾಧ್ಯಕ್ಷರು, ಕವಯತ್ರಿ ಹಾಗೂ ಬರಹಗಾರ್ತಿ ವಿಂದ್ಯಾ ಎಸ್. ರೈಯವರು ಮುಖ್ಯ ಭಾಷಣಕಾರರಾಗಿ ಉಪನ್ಯಾಸ ನೀಡಿದರು. ಮಾಜಿ ಸಚಿವ ಬಿ, ರಮಾನಾಥ ರೈ, ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಯ ಸಂಚಾಲಕ ಸೀತಾರಾಮ್ ರೈ ಸವಣೂರು, ಬೆಳ್ತಂಗಡಿಯ ವಿಜಯ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಜಯರಾಮ್ ಶೆಟ್ಟಿ, ವಾಮದಪದವು ಟಿಎಸ್ಎನ್ ಇಂಡಸ್ಟ್ರೀಸ್ ಮಾಲಕ ಧೀರಜ್ ನಾಯ್ಕ್, ಬಂಟ್ವಾಳ ತಾಲೂಕು ಬಂಟರ ಸಂಘದ ಕಾರ್ಯದರ್ಶಿ ಜಗನ್ನಾಥ ಚೌಟ ಬದಿಗುಡ್ಡೆ, ಕೋಶಾಧಿಕಾರಿ ಲೋಕೇಶ್ ಶೆಟ್ಟಿ, ಮಹಿಳಾ ವಿಭಾಗದ ಅಧ್ಯಕ್ಷೆ ರಮಾ ಎಸ್. ಭಂಡಾರಿ, ಮಾಜಿ…
ರಾಜ್ಯದಲ್ಲಿ ಪದವಿ ಶಿಕ್ಷಣದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅಳವಡಿಸಿ ಎರಡು ವರ್ಷಗಳು ಸಂದಿವೆ. ಜಾರಿಯಾದ ಮೊದಲ ವರ್ಷದಲ್ಲಿ ಒಂದಿಷ್ಟು ಗೊಂದಲ ಗಳು ಸೃಷ್ಟಿಯಾಗಿ ಕಾಲೇಜುಗಳೂ ಇದರ ಅನುಷ್ಠಾನಕ್ಕೆ ಹಿಂಜರಿದುದು ಸಹಜ. ಆದರೆ ಈಗ ಬಹುತೇಕ ಕಾಲೇಜುಗಳು ಹೊಸ ಶಿಕ್ಷಣ ನೀತಿಯ ಆಶಯವನ್ನು ಅರ್ಥೈಸಿಕೊಂಡು, ಹೊಸ ಪಠ್ಯ ಕ್ರಮಕ್ಕನುಗುಣವಾದ ಅಗತ್ಯ ಸೌಲಭ್ಯಗಳನ್ನು ಅಳವಡಿಸಿಕೊಂಡು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಸಫಲವಾಗಿವೆ. ಆದರೆ ಎನ್ಇಪಿ ಜಾರಿಯ ಬಳಿಕ ವಿಜ್ಞಾನ ಮತ್ತು ಕಲಾ ಪದವಿಗೆ ಸೇರ್ಪಡೆಗೊಳ್ಳುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿರು ವುದು ಜಿಜ್ಞಾಸೆ ಹುಟ್ಟುಹಾಕಿದೆ. ವಾಸ್ತವದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯಡಿ ಈ ಎರಡೂ ಪದವಿಗಳಿಗೆ ಹೆಚ್ಚಿನ ಮಹತ್ವ ಲಭಿಸಿದ್ದು ಇದನ್ನು ವಿದ್ಯಾರ್ಥಿ ಗಳು ಮತ್ತವರ ಹೆತ್ತವರು ಮನಗಾಣಬೇಕು. ಕೊರೊನಾದಿಂದಾಗಿ ಪದವಿ ಶಿಕ್ಷಣದ ವೇಳಾ ಪಟ್ಟಿಯಲ್ಲಿ ಆಗಿರುವ ಏರುಪೇರು ಇನ್ನೂ ಸರಿಯಾಗಿಲ್ಲ. ಹಿಂದಿನ ಪ್ರಕಾರ ಈಗ ಸೆಮ್ ಎಂಡ್ ಪರೀಕ್ಷೆ ಮುಗಿದು ವಿದ್ಯಾರ್ಥಿಗಳಿಗೆ ರಜಾದಿನಗಳಾಗಬೇಕಿತ್ತು. ಆದರೆ ಉರಿ ಬೇಸಗೆಯ ಈ ದಿನಗಳಲ್ಲೂ ಈಗ ಎರಡನೆಯ ಸೆಮ್ನ ಪಾಠಪ್ರವಚನಗಳು…
ಯುವ ಬಂಟರ ಸಂಘ (ರಿ.) ಕಂಬಳಕಟ್ಟ-ಕೊಡವೂರು ಇದರ ದಶಮ ಸಂಭ್ರಮವು ಕಂಬಳಕಟ್ಟ ಕಂಬಳಮನೆ ವಠಾರದಲ್ಲಿ ಶ್ರೀ ಸತ್ಯನಾರಾಯಣ ಪೂಜೆಯೊಂದಿಗೆ ಪ್ರಾರಂಭಗೊಂಡಿತು. ದಶಮಾನೋತ್ಸವ ಸಮಾರಂಭದ ಉದ್ಘಾಟನಾ ಸಮಾರಂಭವು ಮಜಲುಮನೆ ಶ್ರೀಮತಿ ವನಜ ನಾರಾಯಣ ಶೆಟ್ಟಿ ವೇದಿಕೆಯಲ್ಲಿ ಸಮಾರಂಭದ ಅತಿಥಿ ಅಭ್ಯಾಗತರೊಡಗೂಡಿ ದೀಪ ಪ್ರಜ್ವಲನೆ ಮಾಡವುದರ ಮೂಲಕ ನೆರವೇರಿಸಿದರು. ಸಮಾರಂಭದ ಮುಖ್ಯ ಅತಿಥಿ ತುಳುನಾಡಿನ ಸಂಸೃತಿಯ ವಿಮರ್ಶಕರು,ನಟ -ನಿರ್ಮಾಪಕ ಶ್ರೀ ತಮ್ಮಣ್ಣ ಶೆಟ್ಟಿ ಮಾತನಾಡಿ ದೈವಾರಾಧನೆಯು ಮೂಲ ಸ್ವರೂಪ ಕಳಕೊಂಡಿದೆ, ತುಳುನಾಡ ಆಚಾರ ವಿಚಾರಗಳು ಈಗ ಶೋಕಿ ಹಾಗೂ ಶೋಪೀಸ್ ವಸ್ತುಗಳಾಗಿ ಬಿಟ್ಟಿವೆ.ಇವುಗಳನ್ನು ಸುವ್ಯವಸ್ಥಿತಗೊಳಿಸಲು ಬಂಟಸಮಾಜದ ಪ್ರತಿಯೋರ್ವನು ಚಿಂತಿಸುವಂತಾಗಬೇಕು ಎಂದರು. ಇನ್ನೋರ್ವ ಮುಖ್ಯ ಅತಿಥಿ ನಮ್ಮ ಕುಡ್ಲ ವಾಹಿನಿಯ ವಾರ್ತಾವಾಚಕಿ ಡಾl ಪ್ರಿಯಾ ಹರೀಶ್ ಶೆಟ್ಟಿ ಮಾತಾನಾಡಿ ವೈವಿದ್ಯತೆಯಿಂದ ಕೂಡಿದ ಬಂಟರು ಎಲ್ಲಾ ಕ್ಷೇತ್ರಗಳಲ್ಲಿನ ಸಾಧಕರು. ನಮ್ಮ ಸಮಾಜದ ಅಭಿಮಾನ, ಆಚಾರವಿಚಾರಗಳನ್ನು ಇಂದಿನ ಮಕ್ಕಳಲ್ಲಿ ತಿಳಿಯಪಡಿಸಬೇಕಾಗಿದೆ ಎಂದರು. ಜಾಗತಿಕ ಬಂಟರ ಸಂಘಗಳ ಒಕ್ಕೂಟ(ರಿ.) ಇದರ ಪ್ರಧಾನ ಕಾರ್ಯದರ್ಶಿ ಶ್ರೀ ಬಿ. ಜಯಕರ ಶೆಟ್ಟಿ ಇಂದ್ರಾಳಿ…