Author: admin
ನಮ್ಮ ಸಮಾಜದ ಕಡು ಬಡತನದಲ್ಲಿರುವ 50 ಮಂದಿ ವಿದ್ಯಾರ್ಥಿಗಳಿಗೆ 5 ಲಕ್ಷ ರೂಪಾಯಿಗಳ ವಿದ್ಯಾರ್ಥಿವೇತನವನ್ನು ಲೈಫ್ ಲೈನ್ ಫೀಡ್ಸ್ ನ ಸಿಎಂಡಿ ಕಿಶೋರ್ ಕುಮಾರ್ ಹೆಗ್ಡೆ, ಇಮೇಜ್ ಲೇಬಲ್ಸ್ ನ ಸಿಎಂಡಿ ಸುಜನ್ ಶೆಟ್ಟಿ ನೈಲಾಡಿ ಹಾಗೂ ಟೈಮ್ ಆಂಡ್ ಸ್ಪೇಸ್ ನ ಸಿಎಂಡಿ ರವಿ ಶೆಟ್ಟಿಯವರ ಸಹಕಾರದೊಂದಿಗೆ ಸಂಸ್ಥೆಯ ಕಚೇರಿಯಲ್ಲಿ ಜುಲೈ 30 ರಂದು ಸರಳವಾಗಿ ವಿತರಿಸಲಾಯಿತು. ಬಂಟ್ಸ್ ನೌ ಮಾಧ್ಯಮ ಸಂಸ್ಥೆಯು ಯಶಸ್ವೀ 15 ವರ್ಷಗಳನ್ನು ಪೂರೈಸಿದ್ದು ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಿಕೊಂಡು ಬಂದಿವೆ. ಸುಮಾರು 500 ಕ್ಕೂ ಮಿಕ್ಕಿ ಅರ್ಹ ಅಭ್ಯರ್ಥಿಗಳಿಗೆ ಉದ್ಯೋಗವನ್ನು ದೊರಕಿಸಿಕೊಟ್ಟಿದೆ. 8 ಮಂದಿ ಸಹೋದರಿಯರಿಗೆ ಕರಿಮಣಿಯನ್ನು ಕೊಟ್ಟಿದೆ. 15 ಮಕ್ಕಳ ಸಂಪೂರ್ಣ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ಹೊತ್ತುಕೊಂಡು ದತ್ತು ತೆಗೆದುಕೊಂಡಿದೆ.
ಗುರಿ ಎನ್ನುವುದು ಒಂದು ಯೋಚನೆಯಲ್ಲ, ಅದು ಒಂದು ಪ್ರಯತ್ನ. ಸುಮ್ಮನೆ ಯೋಚಿಸಿಕೊಂಡು ಕೂರುವ ಬದಲು ಸತತ ಪ್ರಯತ್ನ ಪಡಬೇಕು ಆಗ ಗುರಿ ತಲುಪಲು ಸಾಧ್ಯವಾಗುತ್ತದೆ. ಶಿವ ಛತ್ರಪತಿ ಪ್ರಶಸ್ತಿ ಪುರಸ್ಕೃತ ಕ್ರೀಡಾಪಟು ಉದಯ ಶೆಟ್ಟಿ ಅವರು ಅಂತರಾಷ್ಟ್ರೀಯ ಮಟ್ಟದ ಅಪ್ರತಿಮ ಪ್ರತಿಭಾವಂತ ಕ್ರೀಡಾಪಟು. ಜುಲೈ ಒಂದರಂದು 60ನೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿರುವ ಇವರು ಮೂಲತಃ ಉಡುಪಿ ಜಿಲ್ಲೆಯ ಕಟಪಾಡಿಯ ಸಮೀಪದ ಮಣಿಪುರ ಗ್ರಾಮದವರು. ಬೆಳಿಯೂರು ಬಂಟಕಲ್ಲು ಕೋಡಿಬೆಟ್ಟು ಸದಾಶಿವ ಶೆಟ್ಟಿ ಮತ್ತು ಗಿರಿಜಾ ಶೆಟ್ಟಿ ದಂಪತಿಗಳ ಪುತ್ರರಾದ ಇವರು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಮಣಿಪುರ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಮುಗಿಸಿದರು. ಹೈಸ್ಕೂಲ್ ವಿದ್ಯಾಭ್ಯಾಸವನ್ನು ಅಲೆವೂರು ನೆಹರೂ ಹೈಸ್ಕೂಲಿನಲ್ಲಿ, ಪದವಿ ಪೂರ್ವ ಶಿಕ್ಷಣವನ್ನು ಬೆಂಗಳೂರಿನ ಕೆ.ಎಲ್. ಇ. ನಲ್ಲಿ ಪೂರೈಸಿದರು. ಮುಂಬೈಯ ಕೆ.ಪಿ.ಬಿ. ಹಿಂದುಜಾ ಕಾಲೇಜಿನಲ್ಲಿ 1983ರಲ್ಲಿ ತಮ್ಮ ಬಿಕಾಂ ಪದವಿಯನ್ನು ಪಡೆದರು. ಬಾಲ್ಯದಿಂದಲೂ ಕ್ರೀಡೆಯಲ್ಲಿ ವಿಶೇಷ ಆಸಕ್ತಿ ಹೊಂದಿದ್ದ ಶ್ರೀ ಉದಯ ಶೆಟ್ಟಿಯವರು ತಮ್ಮ ಶಾಲಾ ಶಿಕ್ಷಣದಲ್ಲಿ ಕ್ರಿಕೆಟ್, ವಾಲಿಬಾಲ್, ಅಥ್ಲೆಟಿಕ್ಸ್…
ರಾಜಕಾರಣದ ವರ್ತಮಾನದ ಬೆಳವಣಿಗೆ ವಿಕ್ಷಿಪ್ತ ಮಜಲಿಗೆ ಹೊರಳಿದೆ. ಕಂಡು ಕೇಳರಿಯದ ಉಚಿತ ಕೊಡುಗೆಗಳನ್ನು ಹಂಚುವ ವಿಪರ್ಯಾಸದ ಸನ್ನಿವೇಶಕ್ಕೆ ಸಾಕ್ಷಿಯಾಗಿದೆ. ಹೀಗೂ ಉಂಟೆ? ಎಂದು ಬೆರಗುಗಣ್ಣಿನಿಂದ ಪರಮ ಅಚ್ಚರಿಯಲ್ಲಿ ಉದ್ಗರಿಸುವ ಸರದಿ ನಮ್ಮ ಜನಮನದ್ದು. ಬೆವರು ಸುರಿಸದೆ ಕೂತು ಉಣ್ಣುವ ಕಾಲವೊಂದು ಬರಬಹುದು ಎನ್ನುವ ಊಹನಾತೀತ ಕಲ್ಪನೆ ಸಾಕಾರಗೊಂಡಿದೆ. ರಾಮರಾಜ್ಯದ ಆದರ್ಶದ ಪರಿಕಲ್ಪನೆ ಯಲ್ಲಿ ರಾಷ್ಟ್ರಕಟ್ಟುವ ಸ್ವಾತಂತ್ರೊತ್ತರ ಆಶಯಗಳು ಹರಿದು ಹಂಚಾಗಿ ಹೋದಂತೆ ಭಾಸವಾಗುತ್ತಿದೆ. ಸ್ವರಾಜ್ಯಕ್ಕಾಗಿ ನಡೆದ ಹೋರಾಟದ ಆತ್ಯಂತಿಕ ಕ್ಷಣಗಳಲ್ಲಿ ಕಣ್ಣ ಮುಂದೆ ತೇಲುತ್ತಿದ್ದದ್ದು ಉದಾತ್ತ ಆಡಳಿತ ಸೂತ್ರದ ಪ್ರಜೆಗಳ ಪ್ರಭುತ್ವ. ಬರಬರುತ್ತಾ ಅದೇ ಪ್ರಭುತ್ವ ತಮ್ಮ ಆಳ್ವಿಕೆ ಪುನರಾವರ್ತನೆ ಯಾಗಬೇಕೆಂಬ ಉತ್ಕಟತೆಯಿಂದ ಜನಪ್ರಿಯ ಪ್ರಣಾಳಿಕೆಗೆ ಜೋತು ಬಿದ್ದದ್ದು ಕಣ್ಣೆದುರಿನ ಸತ್ಯ. ಹೆಚ್ಚಿನ ರಾಜಕೀಯ ಪಕ್ಷಗಳು ಬೇಕಾಬಿಟ್ಟಿ ಯಾಗಿ ವರ್ತಿಸಿ ಬಿಟ್ಟಿ ಭಾಗ್ಯಗಳ ಮೆರವಣಿಗೆ ನಡೆಸಿದವು. ಸೈದ್ಧಾಂತಿಕ ವಾಗಿ, ನೈತಿಕವಾಗಿ, ಸಾಮಾಜಿಕವಾಗಿ ಹೊಸ ಪೀಳಿಗೆಗೆ ಉತ್ತರ ದಾಯಿತ್ವ ಹೊಂದಿರಬೇಕಾದ ರಾಜಕೀಯ ಪಕ್ಷಗಳ ದೊಂಬರಾಟ ಮುಂದಿನ ಜನಾಂಗಕ್ಕೆ ಕೇವಲ ಪ್ರಶ್ನೆಯನ್ನು ಮಾತ್ರ ಉಳಿಸಿಬಿಟ್ಟವು.…
ದೈವಾರಾಧನೆಯು ತುಳುನಾಡಿನ ಪ್ರಮುಖ ನಂಬಿಕೆಯಾಗಿದ್ದು ಅತೀ ಶ್ರದ್ಧಾ ಭಾವ ಭಕ್ತಿಯಿಂದ ಅನಾದಿ ಕಾಲದಿಂದಲೂ ನಂಬಿಕೊಂಡು ಬಂದಿರುತ್ತೇವೆ. ದೈವಾರಾಧನೆಯನ್ನು ಮಾಡಿಕೊಂಡು ಬರುವುದು ಎಲ್ಲರಿಗೂ ಸಾಧ್ಯವಾಗದ ಕೆಲಸ. ಅಂತಹ ಪುಣ್ಯ ಕೆಲಸವನ್ನು ಮಾಡಲು ಅವಕಾಶ ದೊರಕಿದರೆ ಅದುವೇ ಅದೃಷ್ಟ. ಅನಾದಿ ಕಾಲದಿಂದಲೂ ಗುತ್ತು, ಬರಿಕೆಗಳೇ ಪ್ರಧಾನ. ಕೋರ್ಟ್ ಪೋಲಿಸ್ ಸ್ಟೇಷನ್ ಗಳಿಗೆ ಮಾನ್ಯತೆಯಿದ್ದರೂ ಗುತ್ತಿನ ಯಜಮಾನ ನೀಡುವ ತೀರ್ಮಾನಕ್ಕೆ ಆದ್ಯತೆಯಿತ್ತು. ಗುತ್ತು ಬರಿಕೆಗಳಲ್ಲಿ ದೈವ ದೇವರುಗಳ ಆರಾಧನೆ ಇದ್ದೇ ಇರುತ್ತದೆ. ಬೇರೆ ಕಡೆಗಳಲ್ಲೂ ದೈವಾರಾಧನೆಯ ಸಂದರ್ಭದಲ್ಲಿ ಗುತ್ತು ಮನೆತನದವರಿಗೆ ಮೊದಲಿಗೆ ಪ್ರಸಾದ ನೀಡುವ ವಿಧಾನ ಈಗಲೂ ಇದೆ. ಪ್ರತಿಷ್ಠಿತ ಗುತ್ತು ಮನೆತನಗಳಲ್ಲಿ ಒಂದಾದ ಮಾಣಿಗುತ್ತು ಮನೆತನದಲ್ಲಿ ಜನಿಸಿ ಅತೀ ಎಳೆಯ ಪ್ರಾಯದಲ್ಲೇ ನಮ್ಮ ಸಂಸ್ಕೃತಿ, ಆಚರಣೆ, ಆರಾಧನೆಗಳ ಬಗೆಗಿನ ವಿಚಾರಧಾರೆಗಳನ್ನು ತಿಳಿದುಕೊಂಡು ಗುತ್ತಿನ ಮನೆಯ ದೈವಾರಾಧನೆಯನ್ನು ಮಾಡಿಕೊಂಡು ಬರಬೇಕೆಂಬ ಸದುದ್ದೇಶದಿಂದ ಗುರು ಹಿರಿಯರ ಮಾರ್ಗದರ್ಶನವನ್ನು ಪಡೆದುಕೊಂಡು ಮುಂಚೂಣಿಯಲ್ಲಿ ನಿಂತು ದೈವಾರಾಧನೆಯನ್ನು ಮುನ್ನಡೆಸಿಕೊಂಡು ಬರುತ್ತಿರುವವರು ಸಚಿನ್ ರೈ ಮಾಣಿಗುತ್ತು. 7- 4 -1982 ರಲ್ಲಿ ದಿ|…
ಮಹತೋಭಾರ ಎಲ್ಲೂರು ಶ್ರೀ ವಿಶ್ವೇಶ್ವರ ದೇವಸ್ಥಾನದ ವಾರ್ಷಿಕ ಶ್ರೀಮನ್ಮಹಾರಥೋತ್ಸವವು ಬುಧವಾರ ಸಂಪನ್ನಗೊಂಡಿತು. ಬೆಳಗ್ಗೆ ರಥಾರೋಹಣ, ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ನಡೆಯಿತು. ಐದು ಸಾವಿರಕ್ಕೂ ಅಧಿಕ ಮಂದಿ ಅನ್ನಪ್ರಸಾದ ಸ್ವೀಕರಿಸಿದರು. ಸಂಜೆ ಸ್ಯಾಕ್ಸಫೋನ್ ಕಛೇರಿ, ರಾತ್ರಿ ಶ್ರೀಮನ್ಮಹಾರಥೋತ್ಸವ, ಉತ್ಸವ ಬಲಿ, ಮಹಾರಂಗಪೂಜೆ, ಶ್ರೀ ಭೂತ ಬಲಿ, ಶಯನೋತ್ಸವ ನಡೆಯಿತು. ಪರ್ಯಾಯ ತಂತ್ರಿ ವೇ| ಮೂ| ಪಾದೂರು ಲಕ್ಷ್ಮೀನಾರಾಯಣ ತಂತ್ರಿಗಳ ಮಾರ್ಗದರ್ಶನದಲ್ಲಿ ಸರದಿ ಅರ್ಚಕರಾದ ವೇ| ಮೂ| ಶ್ರೀನಿವಾಸ ಭಟ್, ವೇ| ಮೂ| ವೆಂಕಟೇಶ ಭಟ್, ವೇ| ಮೂ| ಗುರುರಾಜ ಭಟ್ ಅರ್ಚಕತ್ವದಲ್ಲಿ, ಪವಿತ್ರಪಾಣಿ ಕೆ.ಎಲ್. ಕುಂಡಂತಾಯ ಅವರ ಉಪಸ್ಥಿತಿಯಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನಗೊಂಡವು. ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಅರುಣಾಕರ ಶೆಟ್ಟಿ ಕಳತ್ತೂರು, ವ್ಯವಸ್ಥಾಪನ ಸಮಿತಿ ಸದಸ್ಯರಾದ ವೆಂಕಟೇಶ್ ಭಟ್, ಜೆನ್ನಿ ನರಸಿಂಹ ಭಟ್, ಕುತ್ಯಾರು ಪ್ರಸಾದ್ ಶೆಟ್ಟಿ, ಕೆ. ಕೊರಗ, ಸುಜಾತಾ ಆರ್. ಶೆಟ್ಟಿ, ಕುಶಲ ದೇವಾಡಿಗ, ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷರಾದ ಪ್ರಫುಲ್ಲ ಶೆಟ್ಟಿ ಎಲ್ಲೂರುಗುತ್ತು, ಜಗದೀಶ ಅರಸ ಕುತ್ಯಾರು, ಕಳತ್ತೂರು…
“ಜಗತ್ತಿನ ಭಾಗ್ಯವಂತ ವ್ಯಕ್ತಿ ಯಾರೆಂದರೆ ಅವನ ಹತ್ತಿರ ಆಹಾರದ ಜೊತೆ ಹಸಿವು ಇರಬೇಕು, ಹಾಸಿಗೆ ಜೊತೆ ನಿದ್ರೆ ಇರಬೇಕು ಹಣದ ಜೊತೆ ಧರ್ಮ ಇರಬೇಕು ” ಎಂಬ ಮಾತಿದೆ. ಬಂಟ್ಸ್ ನೌ ಮಾಧ್ಯಮ ಸಂಸ್ಥೆಯ ಮಾಹಾಪೋಷಕರಗಿರುವ ಜಯಪ್ರಕಾಶ್ ರೈಯವರು 1964 ನೇ ಇಸವಿಯ ಜುಲೈ 2 ನೇ ತಾರೀಕಿನಂದು ಶ್ರೀ ಮೋನಪ್ಪ ರೈ ಮತ್ತು ಶ್ರೀಮತಿ ಮೋಹಿನಿ ರೈ ದಂಪತಿಗಳ ಸುಪುತ್ರರಾಗಿ ಜನ್ಮ ತಾಳಿದರು. ಕೊಡಗು ಜಿಲ್ಲೆ ಮಡಿಕೇರಿ ಈ ದೇಶಕ್ಕೆ ಹಲವು ವೀರ ಯೋಧರನ್ನು ಕೊಟ್ಟ ನಾಡು. ಇಲ್ಲಿಯೇ ಜನಿಸಿದ ಶ್ರೀ ಜಯರಾಮ ರೈ ಇಲ್ಲಿ 10 ನೇ ತರಗತಿಯವರೆಗೆ ಶಿಕ್ಷಣ ಪೂರೈಸಿದರು. ತಮ್ಮ 17 ನೇ ವಯಸ್ಸಿಗೆ ಭಾರತೀಯ ಭೂ ಸೇನೆಯಾದ ಮರಾಠ ಇನ್ಫೆoಟ್ರಿಗೆ 1980 ನೇ ಇಸವಿಯಲ್ಲಿ ಸೇರ್ಪಡೆಯಾದರು. ಇಲ್ಲಿ ತರಭೇತಿ ಮುಗಿಸಿ 1981 ರಲ್ಲಿ ಚೀನಾ ಗಡಿಯಾದ ಅರುಣಾಚಲ ಪ್ರದೇಶಲ್ಲಿ ತಮ್ಮ ಕರ್ತವ್ಯ ನಿಭಾಯಿಸಲು ಶುರು ಮಾಡಿದರು. ರಾಜಸ್ತಾನ ಗಡಿ ಪ್ರದೇಶ, ಜಮ್ಮು ಕಾಶ್ಮೀರ ಗಡಿ…
ದಟ್ಟ ಹಸಿರಿನ ಗಿರಿಕಂದಕಗಳ ನಡುವೆ ನಿಸರ್ಗ ದೇವತೆ ಧರೆಗಿಳಿದಂತೆ ಕಂಗಳಿಸುವ ನೈಸರ್ಗಿಕ ತಾಣ ಕರ್ನಾಟಕದ ಸುಂದರ ತಾಣ ಕೊಡಗು. ನಿತ್ಯ ಹರಿದ್ವರ್ಣದ ದಟ್ಟ ಕಾಡುಗಳ ಹಸಿರಿನ ಮಡಿಲು, ಬೆಟ್ಟಗುಡ್ಡಗಳ ಸೊಬಗು, ತುಂಬಿ ತುಳುಕುವ ಸಸ್ಯ ಸಂಪತ್ತು ವನರಾಶಿಗಳು, ಕಾಫಿತೋಟದ ಕಂಪು, ಕಿತ್ತಳೆ, ಏಲಕಿ ತೋಟಗಳ ನಡುವೆ ಹರಿವ ಹಳ್ಳ ಕೊಳ್ಳ, ಧುಮ್ಮಕಿ ಹರಿವ ಜಲಪಾತಗಳು, ಝಳುಝಳು ಹರಿವ ನದಿ ತೊರೆಗಳು , ಪಚ್ಚೆ, ಪೈರಿನಿಂದ ಆವೃತ್ತವಾದ ಕೊಡಗಿನ ಮೂಲೆ ಮೂಲೆಯಲ್ಲೂ ನೈಸರ್ಗಿಕ ಸೊಬಗಿದೆ. ಪ್ರಕೃತಿಯ ಲಾಲಿತ್ಯ ದ ಅಚ್ಚರಿಯ ತಾಣವಿದ್ದು. ಭಕ್ತಿ ಸಿಂಚನ ಗೈವ ದೇಗುಲಗಳಿವೆ ಅದರಲ್ಲಿ ಮುಖ್ಯವಾಗಿ ಓಂಕಾರೇಶ್ವರ ದೇವಳವು ಒಂದು. ಮಡಿಕೇರಿ ಪೇಟೆ ಕೇಂದ್ರಭಾಗದಲ್ಲಿಯ ಬಹುಪುರಾತನ ಐತಿಹಾಸಿಕ ಪುಣ್ಯ ಕ್ಷೇತ್ರ ಓಂಕಾರೇಶ್ವರ ದೇವಳ. ಕೊಡಗಿಗೆ ಹೋದವರು ಅಗತ್ಯ ವಾಗಿ ಬೇಟಿ ನೀಡ ಬೇಕಾದ ಸ್ಥಳ ವಿದು .ಸುತ್ತಲೂ ಆವರಣ ಹೊಂದಿದ ವಿಶಿಷ್ಟ ಆಧ್ಯಾತ್ಮಿಕ ತಾಣ. ಗೋಧಿಕ್ ಮತ್ತು ಇಸ್ಲಾಮಿಕ್ ಶೈಲಿಗಳ ಮಿಶ್ರಣದಿಂದ ನಿರ್ಮಿಸಲಾಗಿದೆ. ಸುಮಾರು 200 ವಷಗಳ ಹಿಂದೆ…
ಗುರುಪುರ ಗೋಳಿದಡಿ ಗುತ್ತು ಮನೆಯಲ್ಲಿ ಜ.17-19ರವರೆಗೆ ‘ಶ್ರೀ ವರ್ಧಮಾನ’ ಗಡಿಪಟ್ಟ ಸ್ವೀಕಾರದ 12ನೇ ಸಂಭ್ರಮಾಚರಣೆ
ಮುಂಬಯಿ (ಆರ್ ಬಿ ಐ), ಜ.08: ಮಾತಾಪಿತರು, ಪ್ರಾಜ್ಞರು ಮತ್ತು ಗುರುಹಿರಿಯರು ಹಿರಿಯರು ಹಾಕಿ ಕೊಟ್ಟಿರುವ ಪರಂಪರೆ ಅಕ್ಷರಶಃ ಪಾಲಿಸುತ್ತ, ದೇವರು ಮತ್ತು ದೈವಗಳ ಚಿತ್ತದಂತೆ ಮುಂದಡಿ ಇಟ್ಟು, ಕಳೆದ 12 ವರ್ಷಗಳಲ್ಲಿ ತುಳುನಾಡ ಸಂಸ್ಕøತಿಯ ಪಡಿಯಚ್ಚಿನಲ್ಲಿ ಗುತ್ತು-ಮನೆತನಗಳ ಹಿರಿತನ ಎತ್ತಿಹಿಡಿದ ಗತ್ತಿನ ಗುತ್ತೇ ಗುರುಪುರ ಗೋಳಿದಡಿ ಗುತ್ತು. ಗುರುಪುರ ಫಲ್ಗುಣಿ ನದಿ ತಟದಲ್ಲಿರುವ ಸಂಸ್ಕøತಿಯ ನೆಲೆವೀಡಾಗಿರುವ ಗೋಳಿದಡಿ ಗುತ್ತು 2009ರಲ್ಲಿ ಪುನರ್ನಿರ್ಮಾಣಗೊಂಡಿತ್ತು. 2010ರಲ್ಲಿ ಗುತ್ತಿನಮನೆಯ ದುರ್ಗಾಪ್ರಸಾದ ಶೆಟ್ಟಿ ಅವರು `ಶ್ರೀ ವರ್ಧಮಾನ’ ಎಂಬ ಅಭಿದಾನದೊಂದಿಗೆ ಗುತ್ತಿನ ಮನೆಯ ಗಡಿಪಟ್ಟ ಸ್ವೀಕರಿಸಿದ್ದರು. ಚಿಕ್ಕಮಗಳೂರುನ ವೇದವಿಜ್ಞಾನ ಮಂದಿರದ ಬ್ರಹ್ಮಋಷಿ ಶ್ರೀ ಕೆ.ಎಸ್ ನಿತ್ಯಾನಂದ ಅವರು ಇಲ್ಲಿನ ಈವರೆಗಿನ ಎಲ್ಲ ಶಿಷ್ಟ ಹಾಗೂ ವಿಶಿಷ್ಟ ಪರಂಪರೆಯ ಹಿಂದಿನ ಶಕ್ತಿ, ಮಾರ್ಗದರ್ಶಕರಾಗಿದ್ದಾರೆ. ಗೋಳಿದಡಿ ಗುತ್ತಿನ ಮನೆಯಲ್ಲಿ ಶ್ರೀ ವೈದ್ಯನಾಥ (ಶ್ರೀ ಮುಂಡಿತ್ತಾಯ), ಪಂಚದೇವತೆಗಳು ಮೇಲ್ಪಂಕ್ತಿಯಲ್ಲಿ ದ್ದು, ಕಷ್ಟ ಭಿನ್ನವಿಸಿಕೊಂಡು ಬರುವವರಿಗೆ ಇಷ್ಟಾರ್ಥ ಸಿದ್ಧಿ ಸಾನಿಧ್ಯವಾಗಿದೆ. ತಮ್ಮೆಲ್ಲ ಸತ್ಕಾರ್ಯಕ್ಕೆ ದೈವ ಪ್ರೇರಣೆಯೇ ದಿಕ್ಸೂಚಿ ಎನ್ನುವ ಶ್ರೀ ದುರ್ಗಾಪ್ರಸಾದ…
ಡಾ. ಆರ್. ಎನ್. ಶೆಟ್ಟಿ ಅವರ ಪುತ್ರ ಸುನೀಲ್ ಶೆಟ್ಟಿ ಅವರ ಕುಟುಂಬದವರು ಈ ಕಂಚಿನ ಪ್ರತಿಮೆಯನ್ನು ದೇವಸ್ಥಾನದ ಪ್ರಮುಖರು, ಊರಿನ ಪ್ರಮುಖರು ಹಾಗೂ ಸಾರ್ವಜನಿಕರ ಉಪಸ್ಥಿತಿಯಲ್ಲಿ ಅನಾವರಣಗೊಳಿಸಿದ್ದಾರೆ. ಈ ಪ್ರತಿಮೆ ಸುಮಾರು 1,560 ಕೆ. ಜಿ. ತೂಕದ ಕಂಚಿನಲ್ಲಿ ನಿರ್ಮಾಣಗೊಂಡ ಪ್ರತಿಮೆಯಾಗಿದ್ದು, 15 ಅಡಿ ಎತ್ತರವಿದೆ. ವಿಶೇಷವೆಂದರೆ, ಕಂದುಕ ಗಿರಿಯಲ್ಲಿರುವ ಮುಡೇಶ್ವರದ ಬೃಹತ್ ಶಿವನ ಮೂರ್ತಿಯನ್ನ ತಯಾರಿಸಿದ್ದ ಕಾಶೀನಾಥ ಅವರ ಪುತ್ರರಾದ ಶ್ರೀಧರ್ ಅವರೇ ಡಾ. ಆರ್. ಎನ್. ಶೆಟ್ಟಿಯವರ ಪ್ರತಿಮೆಯನ್ನ ನಿರ್ಮಾಣ ಮಾಡಿದ್ದಾರೆ. ವಿಶ್ವ ಪ್ರಸಿದ್ಧ ಪ್ರವಾಸಿ ತಾಣ ಹಾಗೂ ಪುಣ್ಯ ಕ್ಷೇತ್ರವೂ ಆಗಿರುವ ಮುರುಡೇಶ್ವರ ಅಂದಾಕ್ಷಣ ನೆನಪಿಗೆ ಬರುವುದು ಉದ್ಯಮಿ ಡಾ. ಆರ್. ಎನ್. ಶೆಟ್ಟಿ. ನವ ಮುರುಡೇಶ್ವರದ ನಿರ್ಮಾತೃ ಅಂತಲೇ ಕರೆಯಿಸಿಕೊಳ್ಳುತ್ತಿದ್ದ ಡಾ. ಆರ್. ಎನ್. ಶೆಟ್ಟಿ ಅವರು ಎಲ್ಲರನ್ನ ಅಗಲಿ ಒಂದೂವರೆ ವರ್ಷ ಕಳೆಯುತ್ತಾ ಬಂದಿದೆ. ಇದೀಗ ಅವರ ನೆನಪನ್ನ ಚಿರ ಸ್ಥಾಯಿಯಾಗಿಸಲು ಮುರುಡೇಶ್ವರದ ಬೃಹತ್ ಶಿವನ ಪ್ರತಿಮೆಯ ಎದುರು ಡಾ. ಆರ್. ಎನ್.…
ಬಜಪೆ ವಲಯ ಬಂಟರ ಸಂಘದ ಅಧ್ಯಕ್ಷರು, ಕೊಡುಗೈದಾನಿ, ಉದ್ಯಮಿಗಳು, ನಮ್ಮ ಟಿವಿ ಬಲೇ ತೆಲಿಪಾಲೆಯ ರೂವಾರಿ ವಿಜಯನಾಥ ವಿಠ್ಠಲ್ ಶೆಟ್ಟಿ
ಬಜಪೆ ವಲಯ ಬಂಟರ ಸಂಘದ ಅಧ್ಯಕ್ಷರು, ಕೊಡುಗೈದಾನಿ, ಉದ್ಯಮಿಗಳು, ಶಾಸ್ತಾವು ಶ್ರೀ ಭೂತನಾಥೆಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರು, ಭೂತನಾಥೆಶ್ವರ ಕ್ರೀಡಾ ಕೂಟದ ಮತ್ತು ನಮ್ಮ ಟಿವಿ ಬಲೇ ತೆಲಿಪಾಲೆಯ ರೂವಾರಿ ವಿಜಯನಾಥ ವಿಠ್ಠಲ್ ಶೆಟ್ಟಿಯವರಿಗೆ ಸಮಸ್ತ ಬಂಟ ಸಮಾಜದ ಪರವಾಗಿ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರುತ್ತಿದ್ದೇವೆ. ಬಂಟ ಸಮಾಜದ ಎಲ್ಲಾ ನ್ಯೂಸ್ ಅಪ್ಡೇಟ್ ಗಳಿಗೆ ಈ ಕೆಳಗಿನ ಬಂಟ್ಸ್ ನೌ ಪೇಜ್ ಲಿಂಕ್ ಓಪನ್ ಮಾಡಿ ಲೈಕ್ ಮಾಡಿ. https://www.facebook.com/buntsnow/