Author: admin

ಹೊಸನಗರ ಬಟ್ಟೆಮಲ್ಲಪ್ಪ ವಲಯ ಬಂಟರ ಸಂಘದ ಸದಸ್ಯರಾದ ಲಕ್ಷ್ಮಣ್ ಶೆಟ್ಟಿಯವರು ಮಗಳಾದ ಪಲ್ಲವಿ ಶೆಟ್ಟಿಯವರ ಮದುವೆಗೆ ಸಹಾಯ ಕೋರಿ ಜಾಗತಿಕ ಬಂಟರ ಸಂಘಕ್ಕೆ ಸಹಾಯ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಪರಿಶೀಲಿಸಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರು ನೀಡಿದ ಸಹಾಯಧನದ ಚೆಕ್ಕನ್ನು ಸಂಘದ ಅಧ್ಯಕ್ಷ ನಾಗರಾಜ್ ಶೆಟ್ಟಿಯವರು ಫಲಾನುಭವಿಯ ತಾಯಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಅಧ್ಯಕ್ಷರಾದ ನಾಗರಾಜ್ ಶೆಟ್ಟಿ, ಸಹ ಕಾರ್ಯದರ್ಶಿಯಾದ ಪ್ರವೀಣ್ ಶೆಟ್ಟಿ, ಸಂಘಟನಾ ಕಾರ್ಯದರ್ಶಿ ನವೀನ್ ಕುಮಾರ್ ಶೆಟ್ಟಿ, ನಿರ್ದೇಶಕರಾದ ಜಯರಾಮ್ ಶೆಟ್ಟಿ ಉಪಸ್ಥಿತರಿದ್ದರು.

Read More

ಮುಲ್ಕಿ ರಾಷ್ಟ್ರೀಯ ಹೆದ್ದಾರಿ ಬಳಿ ಶ್ರೀ ಕನ್ಯಾನ ಸದಾಶಿವ ಶೆಟ್ಟಿ ಸಂಕೀರ್ಣದಲ್ಲಿ ಎಪ್ರಿಲ್ 5 ರಂದು ಸಂಜೆ 5 ಗಂಟೆಗೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದ “ಶ್ರೀ ಪ್ರವೀಣ್ ಭೋಜ ಶೆಟ್ಟಿ” ಆಡಳಿತ ಕಚೇರಿಯ ಉದ್ಘಾಟನೆ ನಡೆಯಲಿದೆ. ಸಮಾರಂಭದಲ್ಲಿ ಒಡಿಯೂರು ಶ್ರೀ ಕ್ಷೇತ್ರದ ಗುರು ದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ವಹಿಸಲಿದ್ದಾರೆ. ಸಮಾರಂಭದಲ್ಲಿ ಒಕ್ಕೂಟದ ಮಹಾದಾನಿ ಕನ್ಯಾನ ಸದಾಶಿವ ಶೆಟ್ಟಿ, ಒಕ್ಕೂಟದ ಮಹಾ ನಿರ್ದೇಶಕರಾದ ತೋನ್ಸೆ ಆನಂದ ಶೆಟ್ಟಿ, ಶಶಿಧರ ಶೆಟ್ಟಿ ಬರೋಡಾ, ರಾಜೇಶ್ ಶೆಟ್ಟಿ ರಾಕ್ಷಿ ಬಿಲ್ಡಸ್೯ ಮೊದಲಾದವರು ಭಾಗವಹಿಸಲಿದ್ದಾರೆ. ಸಮಾರಂಭದಲ್ಲಿ ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ ಜಯಕರ ಶೆಟ್ಟಿ ಇಂದ್ರಾಳಿ ಮತ್ತು ಒಕ್ಕೂಟದ ಮಹಾ ನಿರ್ದೇಶಕ ಪ್ರವೀಣ್ ಭೋಜ ಶೆಟ್ಟಿ ಅವರನ್ನು ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಗುವುದು. ಸಮಾರಂಭದಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಬಂಟ ಪ್ರತಿಷ್ಠಾನದ ಅಧ್ಯಕ್ಷ ಎ.ಜೆ. ಶೆಟ್ಟಿ,…

Read More

ಮೀರಾರೋಡ್ ಸೆಕ್ಟರ್ 4 ರ ಸಿ 19, ನಂ. 002 ನ ಪ್ರೇಮ್ ಜೋತ್ ಸೊಸೈಟಿ ಮೀರಾರೋಡ್ ಇಲ್ಲಿನ ಶ್ರೀ ಚಾಮುಂಡೇಶ್ವರೀ ಪ್ರಸನ್ನ ಇದರ 18ನೇ ವಾರ್ಷಿಕ ಉತ್ಸವ ಹಾಗೂ ಮಹಾಪೂಜೆಯು ಇತ್ತೀಚೆಗೆ ಬಹು ವಿಜೃಂಭಣೆಯಿಂದ ನೆರವೇರಿತು. ಮಹಾಪೂಜೆಯು ಬೆಳಿಗ್ಗೆ 8 ರಿಂದ ಅಲಕಾರ ಸೇವೆ, ಪಂಚಾಮೃತ ಅಭಿಷೇಕ, ಪ್ರಸನ್ನ ಪೂಜೆ, ವಿಜಯ್ ಶೆಟ್ಟಿ ಮೂಡುಬೆಳ್ಳೆ ತಂಡದವರಿಂದ ಭಜನಾಮೃತ ಮುಂತಾದ ಹಲವಾರು ಧಾರ್ಮಿಕ ಕಾರ್ಯಕ್ರಮಗಳು ನೆರೆದ ಭಕ್ತರನ್ನು ತನ್ಮಯಗೊಳಿಸಿದವು. ತದನಂತರ ದರ್ಶನ ಸೇವೆ, ಮಹಾಮಂಗಳಾರತಿ ಹಾಗೂ ಪ್ರಸಾದ ವಿತರಣೆ ಮತ್ತು ಅನ್ನ ಪ್ರಸಾದ ಸಂತರ್ಪಣೆ ನಡೆಯಿತು. ಸ್ಥಳೀಯ ಹಲವಾರು ಭಜನಾ ಮಂಡಳಿ, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ವಾರ್ಷಿಕೋತ್ಸವದಲ್ಲಿ ಉಪಸ್ಥಿತರಿದ್ದರು. ಭಕ್ತಾಧಿಗಳಿಗೆ ಅರ್ಚಕ ಲಕ್ಷ್ಮಣ ಜೆ. ಶೆಟ್ಟಿಯವರು ಪ್ರಾರ್ಥನಾ ಪ್ರಸಾದವನ್ನು ನೀಡಿದರು. ಕಾರ್ಯಕ್ರಮದ ಯಶಸ್ವಿಯಲ್ಲಿ ವಿರಾರ್ ಶಂಕರ್ ಶೆಟ್ಟಿ, ಆನಂದ ಶೆಟ್ಟಿ ಕುಕ್ಕುಂದೂರು, ಆನಂದ ಶೆಟ್ಟಿ ಹೊಟೇಲ್ ಮಿಲಿ, ಮಧುಕರ್ ಶೆಟ್ಟಿ, ಉಮೇಶ್ ಶೆಟ್ಟಿ, ವೈ.ಟಿ. ಶೆಟ್ಟಿ ಹೆಜಮಾಡಿ, ವಿಶ್ವನಾಥ್ ಉಚ್ಚಿಲ್,…

Read More

ಕುಂದಾಪುರ ಮೂಲದ ಮುವಾಯ್ ಥಾಯ್ ಫೈಟರ್​ಗೆ ಮತ್ತೊಂದು ಅಂತಾರಾಷ್ಟ್ರೀಯ ಜಯ ಸಿಕ್ಕಿದೆ. ಕುಂದಾಪುರ ಮೂಲದ ಅನೀಶ್ ಶೆಟ್ಟಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಮುವಾಯ್ ಥಾಯ್ ಫೈಟರ್ ಆಗಿದ್ದು, ಥಾಯ್ಲೆಂಡ್​ನ ಪುಕೆಟನ್​ ರವಾಯ್ ಸ್ಟೇಡಿಯಂನಲ್ಲಿ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ಮುವಾಯ್ ಥಾಯ್ ಕಿಕ್ ಬಾಕ್ಸಿಂಗ್ ಪಂದ್ಯದಲ್ಲಿ ಜಯಭೇರಿ ಬಾರಿಸಿದ್ದಾರೆ. 68 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಅನೀಶ್ ಶೆಟ್ಟಿ ಮುವಾಯ್ ಥಾಯ್ ಫೈಟ್​ನಲ್ಲಿ ಸಾಕಷ್ಟು ಅನುಭವವಿರುವ ಎದುರಾಳಿಯನ್ನು ಮಣಿಸಿ ಜಯಗಳಿಸಿದ್ದಾರೆ. ಪ್ರಥಮ ಸುತ್ತಿನಲ್ಲೇ ಫ್ಲೈಯಿಂಗ್ ಕಿಕ್ ಮೂಲಕ ಎದುರಾಳಿಯನ್ನು ನಾಕೌಟ್​ ಮಾಡುವ ಮೂಲಕ ಅನೀಶ್ ಭರ್ಜರಿ ಜಯಗಳಿಸಿದ್ದಾರೆ.

Read More

ಕುಂದಾಪುರ ತಾಲೂಕಿನ ಯಡಮೋಗೆ ಗ್ರಾಮದ ಕೊಳಾಲಿ ಗೋವಿಂದ ಶೆಟ್ಟಿ ಮತ್ತು ಶ್ರೀಮತಿ ಸದಿಯಮ್ಮ ಶೆಟ್ಟಿ ಇವರ ಕಿರಿಯ ಪುತ್ರನಾಗಿ ಕೃಷ್ಣ ಶೆಟ್ಟಿ ದಿನಾಂಕ 09-08-1967 ರಂದು ಜನಿಸಿದರು. ಇವರು ತಂದೆಯಂತೆ ಸಭ್ಯತೆ, ವಿನಯತೆ, ಶಿಸ್ತನ್ನು ಪಾಲಿಸಿಕೊಂಡು ಬಂದವರು. ಶೀಲಾವತಿ ಎಂಬವರೊಡನೆ ವೈವಾಹಿಕ ಜೀವನಕ್ಕೆ ಕಾಲಿರಿಸಿದ ಇವರು ಪವಿತ್ರ ಮತ್ತು ಪ್ರಸಾದ್ ಎಂಬ ಇಬ್ಬರು ಮಕ್ಕಳನ್ನು ಪಡೆದು ಸುಖ ಜೀವನವನ್ನು ನಡೆಸುತ್ತಿದ್ದಾರೆ. ಇವರಿಗೆ ಸಿದ್ದಾಪುರ, ಕುಂದಾಪುರ, ಉಡುಪಿ, ಮಂಗಳೂರು, ಬೆಂಗಳೂರು, ಇನ್ನು ಕೆಲವು ಕಡೆ ಇವರ ಸೇವೆಗೆ ಸನ್ಮಾನ ಸಮಾರಂಭಗಳು ಇವರ ಮುಡಿಯೇರಿದೆ. ಹೊರ ರಾಜ್ಯದ ಮುಂಬೈ, ಹೈದ್ರಾಬಾದ್ನಲ್ಲಿ ಯಕ್ಷಗಾನ ಪ್ರದರ್ಶನ ನೀಡಿ ಜನ ಮನ್ನಣೆಗೆ ಪಾತ್ರರಾದರು. ಇವರು ಹುಟ್ಟೂರಿನಲ್ಲಿಯೇ 5ನೇ ತರಗತಿ ಪೂರೈಸಿ ಮನೆಯ ಕಷ್ಟವನ್ನು ನೋಡಲಾರದೆ ಮನೆಯ ಜವಾಬ್ದಾರಿಯನ್ನು ಹೊರಲು ಮುಂದಾಗುತ್ತಾರೆ. ಒಂದು ಕಡೆ ಮೂಲಭೂತ ಅವಶ್ಯಕತೆಗಳ ಕೊರತೆ ಇನ್ನೊಂದೆಡೆ ಮನೆಯ ಜವಾಬ್ದಾರಿ ಇವರನ್ನು ಯಾವುದಾದರು ಒಂದು ಕೆಲಸಕ್ಕೆ ಪ್ರೇರೆಪಿಸಿತು. 5ನೇ ತರಗತಿಯಲ್ಲಿಯೇ ಮನೆಯ ಆರ್ಥಿಕತೆಯ ತೊಂದರೆಗೆ ಸಿಲುಕಿ ಯಕ್ಷಗಾನಕ್ಕೆ…

Read More

‘ ಸಮಾಜಸೇವೆ ಒಂದು ದುಬಾರಿ ವ್ಯಸನ ‘ ಎಂದು ಹೇಳುವ ಹಲವರನ್ನು ನೋಡಿದ್ದೇನೆ! ನನಗೂ ಈ ಕ್ಷೇತ್ರದಲ್ಲಿ ಹಲವು ಕಹಿ ಅನುಭವಗಳು ಆಗಿವೆ. ಆದರೆ ನನ್ನೂರು ಕಾರ್ಕಳದ ಈ ಮೂವತ್ತೆರಡು ವರ್ಷದ ಯುವಕ ಅವಿನಾಶ್ ಶೆಟ್ಟಿಯವರು ಸಮಾಜಸೇವೆಯನ್ನು ಉಸಿರು ಮಾಡಿಕೊಂಡು ಓಡಾಟ ಮಾಡುವುದನ್ನು ನೋಡುವಾಗ ಯಾರಿಗಾದರೂ ಪ್ರೀತಿ, ಅಭಿಮಾನ ಮೂಡುತ್ತದೆ. ಅವಿನಾಶ್ ತುಂಬಾ ಶ್ರೀಮಂತ ಕುಟುಂಬದಿಂದ ಬಂದವರು ಅಲ್ಲ. ಅವರು ಕಳೆದ ಕೆಲವು ವರ್ಷಗಳಿಂದ ಕಾರ್ಕಳದಲ್ಲಿ ‘ಅಮ್ಮಾ ಕನ್ಸಟ್ರಕ್ಷನ್ ‘ ಎಂಬ ಕಟ್ಟಡ ನಿರ್ಮಾಣದ ಉದ್ಯಮ ಮುನ್ನಡೆಸುತ್ತಿದ್ದಾರೆ. ಆರಂಭದಿಂದಲೂ ಸ್ವಂತಕ್ಕೆ ಸ್ವಲ್ಪ, ಸಮಾಜಕ್ಕೆ ಬಹಳಷ್ಟು ಅನ್ನೋದು ಅವಿನಾಶ್ ಮನಸ್ಥಿತಿ! ಅಶಕ್ತರ ಸೇವೆಯಲ್ಲಿ ಸದಾ ಮುಂದು. ————————————– ಅಶಕ್ತರಿಗೆ, ದುರ್ಬಲರಿಗೆ, ಬಡ ವಿದ್ಯಾರ್ಥಿಗಳಿಗೆ ಅವರದ್ದು ಪ್ರಚಾರ ಇಲ್ಲದ ಸೇವೆ. ತನ್ನ ಸಂಪಾದನೆಯ ಬಹು ದೊಡ್ಡ ಭಾಗ ಮತ್ತು ತನ್ನ ಮೇಲೆ ನಂಬಿಕೆ ಇರುವ ದಾನಿಗಳ ನೆರವು ಪಡೆದು ಅವರು ತನ್ನ ಬಳಿ ಸಹಾಯ ಕೇಳಿ ಬಂದವರಿಗೆ ನೆರವು ನೀಡುತ್ತ ಬಂದಿದ್ದಾರೆ. ದುರ್ಬಲ ರೋಗಿಗಳನ್ನು…

Read More

ಗುರುಪುರ ಬಂಟರ ಮಾತೃ ಸಂಘದ ವ್ಯಾಪ್ತಿಯ ಪ್ರತಿ ಗ್ರಾಮಗಳಲ್ಲಿ ಬಂಟ ಯುವ ಸಮಾಜವನ್ನು ಸಂಘಟಿಸುವ ದೃಷ್ಟಿಯಿಂದ ಯುವ ಬಂಟರ ಸಭೆಯು ಕುಳವೂರು, ಕಿಲೆಂಜಾರು, ಮುತ್ತೂರು ಗ್ರಾಮಗಳಲ್ಲಿ ದಿನಾಂಕ 12-06-2022 ರವಿವಾರ ಯುವ ವಿಭಾಗದ ಅಧ್ಯಕ್ಷರಾದ ದೀಪಕ್ ಶೆಟ್ಟಿ ಲಿಂಗ ಮಾರ್ ಗುತ್ತು ಇವರ ನೇತ್ರತ್ವದಲ್ಲಿ ನಡೆಯಿತು. ಈ ಸಭೆಯಲ್ಲಿ ಗ್ರಾಮದ ಹೆಚ್ಚಿನ ಯುವಕರು ಆಸಕ್ತಿಯಿಂದ ಭಾಗವಹಿಸಿದರು. ಈ ಸಭೆಯಲ್ಲಿ ಸಂಘದ ವಾರ್ಷಿಕ ಸಮಾವೇಶ ವಿದ್ಯಾರ್ಥಿ ವೇತನ ಹಾಗೂ ಸಂಘದ ನಿವೇಶನ ಖರೀದಿ ಹಾಗೂ ಸಂಪನ್ಮೂಲ ಕ್ರೂಡಿಕರಣ ಬಗ್ಗೆ ಮಾಹಿತಿನೀಡಲಾಯಿತು. ಎಲ್ಲಾ ಯುವಕರು ಸಕಾರಾತ್ಮಕವಾಗಿ ಸ್ಪಂದಿಸಿದ ಸಭೆಯ ಯಶಸ್ವಿಗೆ ಕೈಜೋಡಿಸಿದರು. ಯುವ ವಿಭಾಗದ ಗ್ರಾಮದ ಸಂಚಾಲಕರನ್ನು ಹಿರಿಯರ ಉಪಸ್ಥಿತಿಯಲ್ಲಿ ಆಯ್ಕೆ ಮಾಡಲಾಯಿತು. ಈ ಸಭೆಯಲ್ಲಿ ಸಂಘದ ಉಪಾಧ್ಯಕ್ಷರಾದ ಪ್ರವೀಣ್ ಆಳ್ವ ಗುಂಡ್ಯ,ಸಂಚಾಲಕರಾದ ಚಂದ್ರಹಾಸ್ ಶೆಟ್ಟಿ ನಾರಳ,ಕಾರ್ಯದರ್ಶಿ ಹರೀಶ್ ಶೆಟ್ಟಿ, ಕೃಷ್ಣಕಾಂತ್ ಸೇನವ, ಪ್ರಖ್ಯಾತ್ ಶೆಟ್ಟಿ, ಶ್ರವಣ್ ಶೆಟ್ಟಿ,ಗ್ರಾಮಗಳ ಹಿರಿಯರು,ಯುವಕರು, ಉಪಸ್ಥಿತರಿದ್ದರು

Read More

ಪ್ರತಿಷ್ಠಿತ ಬಂಟ ಸಮಾಜದ ಕೃಷಿಕ ಮನೆತನದಲ್ಲಿ ಜನಿಸಿದ ಇನ್ನಾ ಕುರ್ಕಿಲ್ ಬೆಟ್ಟು ಸಂತೋಷ್ ಶೆಟ್ಟಿ ಅವರು ಹೋಟೆಲ್ ಉದ್ಯಮ ಕ್ಷೇತ್ರಗಳಲ್ಲಿ ತಮ್ಮದೇ ಛಾಪು ಮೂಡಿಸಿದವರು. ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಕ್ಷೇತ್ರಗಳಿಗೆ ಸಹಾಯ ಹಸ್ತ ನೀಡುತ್ತಾ ಬಂದಿರುವ ಸಂತೋಷ್ ಶೆಟ್ಟರು ಪ್ರಸ್ತುತ ಪುಣೆ ಬಂಟರ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಭಗವಂತ ಸಂತೋಷ್ ಶೆಟ್ಟಿ ಹಾಗೂ ಕುಟುಂಬಸ್ಥರಿಗೆ ಸುಖ, ಶಾಂತಿ, ನೆಮ್ಮದಿ, ಐಶ್ವರ್ಯ, ಆರೋಗ್ಯ ಸಕಲ ಸಂಪತ್ತನ್ನು ನೀಡಿ ಹರಸಲಿ ಎಂದು ಸಮಸ್ತ ಬಂಟ ಸಮಾಜದ ಪರವಾಗಿ ಶುಭ ಹಾರೈಸುತ್ತಿದ್ದೇವೆ. ಬಂಟ್ಸ್ ನೌ ಪೇಜ್ ಲೈಕ್ ಮಾಡಿ ಪ್ರೋತ್ಸಾಹಿಸಿ ಆಶೀರ್ವದಿಸಿ https://www.facebook.com/buntsnow/

Read More

ಐದನೇ ವರ್ಷದ ಎಂ.ಆರ್.ಜಿ. ಗ್ರೂಪ್ ಆಶಾ ಪ್ರಕಾಶ್ ಶೆಟ್ಟಿ ಸಹಾಯಹಸ್ತ “ನೆರವು” ಕಾರ್ಯಕ್ರಮ ಗೋಲ್ಡ್ ಫಿಂಚ್ ಸಿಟಿಯಲ್ಲಿ ಜರುಗಿತು. ಕಾರ್ಯಕ್ರಮವನ್ನು ಅತಿಥಿಗಳು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಪ್ರಾಸ್ತಾವಿಕ ಮಾತನ್ನಾಡಿದ ಕಾಪು ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು, “ಸಮಾಜದಲ್ಲಿ ನೊಂದವರು, ಬೆಂದವರು, ದೀನರಿಗೆ ಸಹಾಯ ಮಾಡಬೇಕು ಎಂಬ ಉದ್ದೇಶದಿಂದ ಕೆ ಪ್ರಕಾಶ್ ಶೆಟ್ಟಿ ಅವರು ಪ್ರಾರಂಭಿಸಿರುವ ನೆರವು ಕಾರ್ಯಕ್ರಮ 5 ವರ್ಷದಿಂದ ನಡೆಯುತ್ತಿದೆ. ನೂರು ಕೈಗಳಿಂದ ದುಡಿದಿದ್ದನ್ನು ಸಾವಿರ ಕೈಗಳಲ್ಲಿ ದಾನ ಮಾಡು, ಅದರ ಫಲ ನಿನಗೆ ಸಾವಿರ ಸಾವಿರ ಕೈಗಳಲ್ಲಿ ಮರಳಿ ಸಿಗುತ್ತದೆ ಎಂಬ ಮಾತಿನಂತೆ ಕೆ ಪ್ರಕಾಶ್ ಶೆಟ್ಟಿ ಅವರು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನೆರವಾಗುವ ಉದ್ದೇಶದಿಂದ ಈ ಕಾರ್ಯಕ್ರಮ ಕೈಗೊಂಡಿದ್ದಾರೆ. ಬಾಲ್ಯದಲ್ಲಿ ಅವರಿಗೆ ಸಿಕ್ಕ ಸಂಸ್ಕಾರದಿಂದ ಅವರಿಂದು ಸಮಾಜದ ಮನ್ನಣೆಗೆ ಪಾತ್ರರಾಗಿದ್ದಾರೆ. ಬದುಕು ದೇವರು ಕೊಟ್ಟ ವರ. ಬದುಕು ಸುಂದರವಾಗಲು ಗಳಿಸಿದ್ದರಲ್ಲಿ ಅಲ್ಪಭಾಗ ದಾನ ಮಾಡಬೇಕು ಎಂಬ ನುಡಿಯಂತೆ ಇಂತಹ ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ”…

Read More

ಪುಣೆ : ಪುಣೆ ತುಳುಕೂಟದ ಸಭೆಯು ನ 5ರಂದು ಕರ್ವೆ ರೋಡ್ ನಲ್ಲಿಯ ರತ್ನ ಹೋಟೆಲ್ ನ ಬ್ಯಾಂಕ್ವೆಟ್ ಹಾಲ್ ನಲ್ಲಿ ತುಳುಕೂಟದ ಅಧ್ಯಕ್ಷರಾದ ದಿನೇಶ್ ಶೆಟ್ಟಿ ಕಳತ್ತೂರು ರವರ ಅಧ್ಯಕ್ಷತೆಯಲ್ಲಿ ಜರಗಿತು .ವೇದಿಕೆಯಲ್ಲಿ ತುಳುಕೂಟದ ಸ್ಥಾಪಕ ಅಧ್ಯಕ್ಷ ಜಯ ಕೆ .ಶೆಟ್ಟಿ ,ರಜತ ಮಹೋತ್ಸವ ಸಮಿತಿಯ ಅಧ್ಯಕ್ಷ ಪ್ರವೀಣ್ ಶೆಟ್ಟಿ ಪುತ್ತೂರು , ತುಳುಕೂಟದ ನಿಕಟ ಪೂರ್ವ ಅಧ್ಯಕ್ಷ ಮೋಹನ್ ಶೆಟ್ಟಿ ಎಣ್ಣೆಹೊಳೆ ,ಸಲಹೆಗಾರರಾದ ಮಾಧವ್ ಶೆಟ್ಟಿಯವರು ಉಪಸ್ಥಿತರಿದ್ದರು . ಈ ಸಂದರ್ಭದಲ್ಲಿ ಅಧ್ಯಕ್ಷ ದಿನೇಶ್ ಶೆಟ್ಟಿ ಕಳತ್ತೂರು ರವರು ಪುಣೆ ತುಳುಕೂಟದ ನೂತನ ಕಾರ್ಯಕಾರಿ ಸಮಿತಿಯನ್ನು ರಚಿಸಿ ಸಭೆಯಲ್ಲಿ ಪ್ರಕಟಿಸಿದರು ..ಗೌರವ ಅಧ್ಯಕ್ಷರಾಗಿ ಮೋಹನ್ ಶೆಟ್ಟಿ ಎಣ್ಣೆಹೊಳೆ ,ಉಪಾಧ್ಯಕ್ಷರುಗಳಾಗಿ ಮಾಧವ್ ಶೆಟ್ಟಿ ಆಶಿರ್ವಾದ್ ,ಉದಯ್ ಶೆಟ್ಟಿ ಕಳತ್ತೂರು ,ಶೇಖರ್ ಪೂಜಾರಿ ಅಂಬಿಕಾ ,ಪ್ರಧಾನ ಕಾರ್ಯದರ್ಶಿಯಾಗಿ ರಾಜಾರಾಮ್ ಶೆಟ್ಟಿ ,ಜೊತೆ ಕಾರ್ಯದರ್ಶಿಯಾಗಿ ಶರತ್ ಎಂ .ಭಟ್ ,ಕೋಶಾಧಿಕಾರಿಯಾಗಿ ಸಿ.ಎ.ಮನೋಹರ್ ಶೆಟ್ಟಿ ,ಜೊತೆ ಕೋಶಾಧಿಕರಿಯಾಗಿ ಪ್ರಕಾಶ್ ಪೂಜಾರಿ ಪಂಚಮಿ ,ಕಾನೂನು ಸಲಹೆಗಾರರಾಗಿ…

Read More