Author: admin
ವಿಜಯಾ ಬ್ಯಾಂಕಿನ ( ಈಗಿನ ಬ್ಯಾಂಕ್ ಅಫ್ ಬರೋಡಾ) ನಿವೃತ್ತ ಅಧಿಕಾರಿಗಳ ಕ್ಷೇಮಾಭಿವೃಧ್ಧಿ ಸಂಘದ 2022-23 ನೇ ಸಾಲಿನ ವಾರ್ಷಿಕ ಮಹಾ ಸಭೆಯು ಇತ್ತೀಚೆಗೆ ಬ್ರಹ್ಮಾವರದ ಆಶ್ರಯ ಹೋಟೆಲಿನಲ್ಲಿ ಸಂಘದ ಅಧ್ಯಕ್ಷರಾದ ಶ್ರೀಯುತ ಅಣ್ಣಪ್ಪ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯದರ್ಶಿ ವೇಣುಗೋಪಾಲ ಶಟ್ಟಿಯವರು ವರದಿ ವಾಚನ ಮಾಡುತ್ತಾ ಹಿಂದಿನ ಸಾಲಿನಲ್ಲಿ ಸಂಘವು ಹಲವಾರು ದುರ್ಬಲರಿಗೆ ನೀಡಿದ ಆರ್ಥಿಕ ಸಹಾಯ ಮತ್ತಿತರ ಸಮಾಜಮುಖಿ ಕಾರ್ಯಕ್ರಮಗಳ ವಿವರ ನೀಡಿದರು. 400 ಕ್ಕೂ ಮಿಕ್ಕಿ ನಿವೃತ್ತ ಅಧಿಕಾರಿಗಳ ಸದಸ್ಯತ್ವ ಹೊಂದಿರುವ ಸಂಘದ 2023-25 ಸಾಲಿಗೆ ಅವಿರೋಧವಾಗಿ ಆಯ್ಕೆಯಾದ ಪದಾಧಿಕಾರಿಗಳ ಹೆಸರನ್ನು ಚುನಾವಣಾಧಿಕಾರಿಯಾಗಿ ಆಗಮಿಸಿದ ಶ್ರೀಯುತ ವಸಂತ ಹೆಗ್ಡೆಯವರು ಘೋಷಿಸಿದರು. ಮುಂದಿನ ಎರಡು ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾದ ಬಸ್ರೂರು ರಾಜೀವ ಶೆಟ್ಟಿ, ಕಾರ್ಯದರ್ಶಿ ಕೆ. ಸಂಕಯ್ಯ ಶೆಟ್ಟಿ, ಖಜಾಂಚಿ ಕೆ. ಬಾಲಕೃಷ್ಣ ಶೆಟ್ಟಿ, ಉಪಾಧ್ಯಕ್ಷ ಎಸ್. ಜಯರಾಮ ಹಗ್ಡೆ, ಮತ್ತಿತರ 9 ಜನರ ಕಾರ್ಯಕಾರಿ ಸಮಿತಿ ಸದಸ್ಯರು ಅಧಿಕಾರ ಸ್ವೀಕಾರ ಮಾಡಿದರು. ಸಂಘದ ಮಾಜಿ ಅಧ್ಯಕ್ಷರುಗಳು,…
” 2023 ವಿಧಾನಸಭಾ ಚುನಾವಣೆಯಿಂದ ದೂರ ಉಳಿದ ಕರಾವಳಿಯ ಬಿಜೆಪಿಯ ರಾಜಕೀಯ ಭೀಷ್ಮ, ಕುಂದಾಪುರದ ವಾಜಪೇಯಿ -” ಹಾಲಾಡಿ ಶ್ರೀನಿವಾಸ್ ಶೆಟ್ಟಿ….!”
“ರಾಜಕೀಯದ ಪಡಸಾಲೆಯಿಂದ ಹಿಂದೆ ಸರಿದ ಹಾಲಾಡಿ ಶ್ರೀನಿವಾಸ್ ಶೆಟ್ಟಿ…!” ನೂತನ ಅಭ್ಯರ್ಥಿಗೆ ಅವಕಾಶ ಮಾಡಿಕೊಡಲು ಕುಂದಾಪುರ ಕ್ಷೇತ್ರ ಬಿಟ್ಟುಕೊಟ್ಟ ಶಾಸಕ…!” ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳ ಬೇಸರದ ಆಕ್ರೋಶ…!” – ಕೆ. ಸಂತೋಷ್ ಶೆಟ್ಟಿ, ಮೊಳಹಳ್ಳಿ ಕುಂದಾಪುರ. ಸುದ್ದಿ:ಹಾಲಾಡಿ ” ಅವರು ಸಾಮಾನ್ಯರಲ್ಲಿ ಅಸಮಾನ್ಯ ವ್ಯಕ್ತಿ, ಕೈಯಲ್ಲಿ ಒಂದು ಕೀಪ್ಯಾಡ್ ಮೊಬೈಲ್, ಬಾಯಿ ತುಂಬಾ ಎಲೆ ಅಡಿಕೆ ತುಂಬಿಕೊಂಡು ವಾದ ವಿವಾದ, ಕರಾವಳಿಯ ಶೆಟ್ಟರ ಗತ್ತು, ಶುಭ್ರತೆಯ ಸಂಕೇತ ಎಂಬತ್ತೆ ಬಿಳಿ ಪಂಚೆ ಮತ್ತು ಬಿಳಿ ಶರ್ಟ್ ಧರಿಸುವ ಹಾಲಾಡಿ ಅವರ ವರ್ಚಸ್ಸು ,ಸ್ಥಳದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಮಾತು, ಬಡವರಿಗೆ ಅನಾರೋಗ್ಯದವರಿಗೆ ,ವಿದ್ಯಾರ್ಥಿಗಳಿಗೆ, ಕಡುಬಡತನದಲ್ಲಿ ಸಿಲುಕಿದವರಿಗೆ ವರದಾನವಾಗಿ ಸಿಗುವ ಇವರ ಮಾತು ಅಷ್ಟೇ ದಷ್ಟಪುಷ್ಟ….!” ಆದರೆ ರಾಜಕಾರಣಿಗೆ ಬರುವಂತ ಅಭ್ಯರ್ಥಿಗಳು ತನಗೂ ತನ್ನವರಿಗೂ ಹಾಗೂ ತನ್ನ ವಂಶಪಾರಂಪರಿವಾಗಿ ಆಸ್ತಿಗಳನ್ನ ಮಾಡುವಂತಹ ರಾಜಕಾರಣಿಗಳು ಮಧ್ಯೆ ಹಾಲಾಡಿ ಅವರು ವಿಭಿನ್ನ, ವಿಶೇಷ..! ಐಷಾರಾಮಿ ಜೀವನವನ್ನು ತ್ಯಜಿಸಿ ಸಾಮಾನ್ಯರಂತೆ ಬದುಕುವಂತ ಶಾಸಕರು ಕುಂದಾಪುರಕ್ಕೆ ಮಾದರಿಯಾಗುವುದಲ್ಲದೆ .ಇತರ…
ರಾಜ್ಯ ವಿಧಾನಸಭಾ ಚುನಾವಣೆ ಅಭ್ಯರ್ಥಿ ಆಯ್ಕೆಗಾಗಿ ಅನ್ಯ ರಾಜ್ಯಗಳ “ಮಾದರಿ’ ಹುಡುಕುತ್ತಿರುವ ಬಿಜೆಪಿಗೆ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಈಗ ದೊಡ್ಡ “ಮಾಡೆಲ್’ ಆಗಿ ಪರಿಣಮಿಸಿದ್ದಾರೆ. ಶಾಸಕ, ಸಂಸದ, ಸಚಿವರಾಗಿಯೇ “ಕೊನೆಯ ಉಸಿರಾಡಬೇಕು’ ಎಂಬ ಹಪಹಪಿಕೆಯ ರಾಜಕಾರಣಿಗಳ ಮಧ್ಯೆ ಹಾಲಾಡಿಯವರ ಈ ನಡೆ ಹೊಸ ಮಾರ್ಗವನ್ನು ಸೃಷ್ಟಿಸಿದ್ದು, ರಾಜಕಾರಣದಲ್ಲಿ ಇಂಥವರು ಇರುತ್ತಾರೆಯೇ ಎಂಬ ಪ್ರಶ್ನೆಗೆ ಉತ್ತರವಾಗಿ ನಿಂತಿದ್ದಾರೆ. ಹಾಲಾಡಿ ಸತತ ಐದು ಬಾರಿಗೆ ಗೆಲುವು ಕಂಡವರು. ಬಿಜೆಪಿಯ ಅಧಿಕಾರ ರಾಜಕಾರಣದ ಲಾಬಿಯಲ್ಲಿ ಅವರಿಗೆ “ಮಂತ್ರಿ’ಯಾಗುವ ಅವಕಾಶ ಲಭಿಸದೇ ಇದ್ದರೂ ಜನರ ಮನ್ನಣೆಗೆ ಪಾತ್ರರಾದವರು. ಸ್ಪರ್ಧಿಸಿದ್ದೇ ಹೌದಾದರೆ ಈ ಬಾರಿಯೂ ಗೆಲುವು ನಿಶ್ಚಿತವಾಗಿತ್ತು. ಹಾಗಿದ್ದೂ ಉಡುಪಿ ಜಿಲ್ಲೆಯಲ್ಲಿ ಈ ಬಾರಿ ಒಂದಿಷ್ಟು ಬದಲಾವಣೆ ನಿರೀಕ್ಷಿತ ಎಂಬ ಸುದ್ದಿ ಹೊರಬಿದ್ದಾಗ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಈ ಸಲ ಟಿಕೆಟ್ ಇಲ್ಲ ಎಂಬ ಚರ್ಚೆ ಕುಂದಾಪುರ ಕ್ಷೇತ್ರದಲ್ಲಿ ಗಾಢವಾಗಿತ್ತು. ಈ ವರ್ಷ ಅವರಿಗಂತೆ, ಇವರಿಗಂತೆ ಎಂಬ ವದಂತಿ ಜೀವಂತ ವಾಗಿರುವಾಗಲೇ “ನಾನು ಸ್ಪರ್ಧಿಸುವುದಿಲ್ಲ’…
ತಾರೀಕು 30-04-2023ನೇ ಭಾನುವಾರದಂದು ಯು.ಎ.ಇ ಬಂಟ್ಸ್ ಇವರ 46ನೇ ವಾರ್ಷಿಕೋತ್ಸವ ಸಮಾರಂಭ ನಡೆಯಲಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯು.ಎ.ಇ ಬಂಟ್ಸ್ ನ ಅಧ್ಯಕ್ಷರಾದ ಶ್ರೀಯುತ ಸರ್ವೋತ್ತಮ ಶೆಟ್ಟಿಯವರು ವಹಿಸಿಕೊಳ್ಳಲಿದ್ದಾರೆ. ಈ ಕಾರ್ಯಕ್ರಮದ ಅತಿಥಿ ಸಮನ್ವಯಕಾರರಾಗಿ ಮುಂಬಯಿಯ ಉದ್ಯಮಿ, ಕಾರ್ಯಕ್ರಮ ಸಂಘಟಕ, ನಿರೂಪಣೆಕಾರ ಶ್ರೀ ಅಶೋಕ ಪಕ್ಕಳರವರು ಭಾಗವಹಿಸಲಿದ್ದಾರೆ. ಪ್ರತಿ ವರ್ಷ ಕೊಡಲ್ಪಡುವ “ಬಂಟ ವಿಭೂಷಣ ಪ್ರಶಸ್ತಿಯನ್ನು ಈ ವರ್ಷ ಆಳ್ವಾಸ್ ಶಿಕ್ಷಣ ಸಂಸ್ಥೆ ಮೂಡಬಿದ್ರೆಯ ಚೇರ್ ಮಾನ್ ಆಗಿರುವ ಡಾ. ಮೋಹನ್ ಆಳ್ವ ಅವರಿಗೆ ಗೌರವ ಪ್ರಧಾನ ಮಾಡಲಿದ್ದಾರೆ. ಏಪ್ರಿಲ್ 30 ರಂದು ಬೆಳಿಗ್ಗೆ 10.00 ರಿಂದ ಸಂಜೆ 6.00 ರವರೆಗೆ ದುಬೈಯ ಬಿಸ್ಟಲ್ ಹೋಟೆಲ್ ನಲ್ಲಿ ನಡೆಯಲಿರುವ ಈ ಸಮಾರಂಭಕ್ಕೆ ಅತಿಥಿ ಅಭಾಗ್ಯತರನ್ನು ಗೌರವದಿಂದ ಬರಮಾಡಿಕೊಳ್ಳಲಿದ್ದೇವೆ ಎಂದು ಶ್ರೀ ಸರ್ವೋತ್ತಮ ಶೆಟ್ಟಿ, ಪ್ರವೀಣ್ ಕುಮಾರ್ ಶೆಟ್ಟಿ, ದೇವೇಶ್ ಆಳ್ವ. ಅನಿತಾ ದಯಾನಂದ ಶೆಟ್ಟಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಣ್ಣದಿರುವಾಗ ಅಜ್ಜಿ ಹೇಳಿದ ಕಾಗಕ್ಕ ಗುಬ್ಬಕ್ಕ ಕಥೆ ನಿಮಗೂ ನೆನಪಿರಬಹುದು. ಅದೊಂದೂರಲ್ಲಿ ಕಾಗಕ್ಕ ಮತ್ತು ಗುಬ್ಬಕ್ಕ ಅನ್ಯೋನ್ಯತೆಯಿಂದ ವಾಸವಾಗಿದ್ದರು. ಕಾಗಕ್ಕನನ್ನು ಕಂಡರೆ ಗುಬ್ಬಕ್ಕನಿಗೆ ಇಷ್ಟ, ಗುಬ್ಬಕ್ಕನನ್ನು ಕಂಡರೆ ಕಾಗಕ್ಕನಿಗೆ ಇಷ್ಟ. ತಿಂಡಿಗಳನ್ನು ಹಂಚಿಕೊಂಡೇ ತಿನ್ನುತ್ತಿದ್ದರು. ಒಂದು ದಿನ ಪಟ್ಟಣದ ಕಡೆ ಹೋಗಿ ಬರೋಣವೇ ಎಂದು ಕಾಗಕ್ಕ ಅಂದಾಗ ಗುಬ್ಬಕ್ಕ ‘ಎಸ್’ ಅಂದು ಒಟ್ಟಿಗೆ ಹೋಗಿದ್ದವು. ತಿರುಗಿ ಮನೆಗೆ ಬರೋ ಹೊತ್ತಲ್ಲಿ ರಣಚಂಡಿ ಗಾಳಿ ಮಳೆ. ಹಾಗೋ ಹೇಗೋ ಸಾವರಿಸಿಕೊಂಡು ಬಂದು ನೋಡಿದಾಗ ಗುಬ್ಬಚ್ಚಿಯ ಗೂಡು ಗಾಳಿ ಮಳೆಗೆ ನಾಶವಾಗಿ ಹೋಗಿತ್ತು. ನೇರ ಕಾಗಕ್ಕನ ಮನೆಗೆ ಹೋಗಿ ” ಕಾಗಕ್ಕ ಕಾಗಕ್ಕ ನಾಲ್ಕು ದಿನಕ್ಕೆ ನನಗೆ ನಿನ್ನ ಮನೆಯಲ್ಲಿ ವಾಸ ಮಾಡಲು ಅವಕಾಶ ಕೊಡುವೆಯಾ” ಎಂದು ಕೇಳಿಕೊಂಡಿತು. ಕಾಗಕ್ಕನ ಇನ್ನೊಂದು ಮುಖ ಗುಬ್ಬಕ್ಕನಿಗೆ ಗೊತ್ತಿರಲಿಲ್ಲ. ನನ್ನ ಮನೆಯಲ್ಲಿ ನನಗೇ ಸರಿಯಾಗಿ ಜಾಗವಿಲ್ಲ. ನಿನ್ನನ್ನು ಹೇಗೆ ಕೂಡಿಸಿಕೊಳ್ಳಲಿ ಎಂದು ಜಾಣ್ಮೆಯಿಂದ ಜಾರಿ ಕೊಂಡಿತು. ಆದರೂ ಬೇಸರಿಸದ ಗುಬ್ಬಕ್ಕ ತನ್ನಪಾಡಿಗೆ ತಾನೆ ಕಷ್ಟಪಟ್ಟು ಗೂಡನ್ನು ಕಟ್ಟಿಕೊಂಡಿತು.…
ತುಳುವರ ಸಭೆ ಸಮಾರಂಭಗಳಲ್ಲಿ ಕೈಗೆ ಮೈಕ್ ಸಿಕ್ಕ ಕೂಡಲೇ- ‘‘ನಮ್ಮದು ಪರಶುರಾಮ ಸೃಷ್ಟಿ’’ ಎಂದು ಹೇಳುತ್ತಲೇ ಭಾಷಣ ಶುರು ಮಾಡುವವರು ಹಲವರಿದ್ದಾರೆ. ಆದರೆ ಈ ಕಥೆಯನ್ನು ಅವರೆಂದೂ ವಿಶ್ಲೇಷಿಸಿರುವುದಿಲ್ಲ. ನಿಜವಾಗಿ ತುಳುನಾಡನ್ನು ಪರಶುರಾಮ ಸೃಷ್ಟಿಸಿದ್ದು ಎಂಬ ಪೌರಾಣಿಕ ಕಥೆಗೆ ಯಾವುದೇ ಐತಿಹಾಸಿಕ ಅಥವಾ ವೈಜ್ಞಾನಿಕ ಆಧಾರಗಳಿಲ್ಲ. ಕೇರಳದ ತ್ರಿವೇಂದ್ರಂನಿಂದ ಹಿಡಿದು ಗುಜರಾತ್ನ ಉಮರ್ಗಾಮ್ವರೆಗಿನ ನಮ್ಮ ಪಶ್ಚಿಮ ಕರಾವಳಿ ಸೃಷ್ಟಿಯಾಗಿದ್ದು, ಸುಮಾರು ನಾಲ್ಕರಿಂದ ಆರು ಕೋಟಿ ವರ್ಷಗಳ ಹಿಂದೆ, ಅದೂ ಆಫ್ರಿಕಾ ಖಂಡದಿಂದ ತುಂಡಾಗಿ ಸರಿದು ಬಂದ ಭೂಭಾಗವಿದು. ಕೇರಳದಿಂದ ಮಹಾರಾಷ್ಟ್ರ-ಗುಜರಾತ್ ಗಡಿಯವರೆಗೆ ಇರುವ ಸಹ್ಯಾದ್ರಿ ಪರ್ವತ ಶ್ರೇಣಿ ಹುಟ್ಟಿಕೊಂಡಿದ್ದೇ ಆಗ ನಡೆದ ಈ ಭೂಭಾಗಗಳ ಘರ್ಷಣೆಯಿಂದ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ. ಇಂಟರ್ನೆಟ್ ಸರ್ಚ್ನಲ್ಲಿ-ಗೋಂಡ್ವಾನಾ ಲ್ಯಾಂಡ್ ಅಥವಾ ಕಾಂಟಿನೆಂಟಲ್ ಡ್ರಿಫ್ಟ್- ಎಂದು ಬರೆದು ಹುಡುಕಿದರೆ ಇದರ ಪೂರ್ಣ ಮಾಹಿತಿ ವಿಡಿಯೋದೊಂದಿಗೆ ಸಿಗುತ್ತದೆ. ಭೂ-ವಿಜ್ಞಾನಿಗಳಿಗೆ ನಮ್ಮ ಭಾರತದ ಪಶ್ಚಿಮ ಕರಾವಳಿಯಲ್ಲಿ ಸಿಕ್ಕಿರುವ ಜುರಾಸಿಕ್ ಯುಗದ ಸಸ್ಯಗಳ ಕಲ್ಲಾಗಿರುವ ಪಳೆಯುಳಿಕೆಯ ಆಧಾರದಲ್ಲಿ ಈ ಕರಾವಳಿಯ ಭೂಮಿ…
ಪುಣೆ; ಪುಣೆಯಲ್ಲಿ ತುಳುವರಿಗಾಗಿ ಸ್ಥಾಪನೆಯಾದ ಸಂಸ್ಥೆ ತುಳುಕೂಟ ಪುಣೆ ,ನಮ್ಮ ತುಳು ಬಾಷೆ ,ಕಲೆ ,ಸಂಸ್ಕ್ರತಿ , ಅಚಾರ . ವಿಚಾರಗಳಿಗೆ ಒತ್ತು ನೀಡುತ್ತಾ ಅದರ ಬೆಳವಣಿಗೆ ಮತ್ತು ನಮ್ಮ ತುಳುವರ ಕಷ್ಟ ಸುಖಗಳಲಿ ಬಾಗಿಯಾಗುತ್ತಾ ತುಳುವರ ಮತ್ತು ತುಳು ಬಾಷೆಯ ಅಭಿವೃದ್ದಿಗೆ ಶ್ರಮಿಸುವ ಮೂಲಕ ಸೇವಾ ಕಾರ್ಯ ಮಾಡುತಿದೆ . ಈ ಹಿಂದೆ ಹಲವಾರು ಕಾರ್ಯ ಯೋಜನೆಗಳ ಮೂಲಕ ಪುಣೆಯಲ್ಲಿ ತುಳುವರ ಸಂಘಟನೆಗೆ ಉತ್ತಮ ಜನ ಸ್ಪಂದನೆ ಸಿಕ್ಕಿದೆ , .ಈ ವರ್ಷ ರಜತ ಮಹೋತ್ಸವ ವರ್ಷವನ್ನಾಗಿ ನಾವು ಆಚರಿಸುತಿದ್ದು ಈ ಸಂದರ್ಭದಲ್ಲಿ ಪುಣೆ ತುಳುವರಿಗೆ ಪ್ರಯೋಜನವಾಗುವಂತಹ ಯೋಜನೆ ಆಗಬೇಕು ಎಂಬುದೇ ನಮ್ಮ ಉದ್ದೇಶ .ಈ ದೃಷ್ಟಿ ಕೋನ ಇಟ್ಟುಕೊಂಡು ನೂತನ ಸಮಿತಿ ರಚನೆ ಮಾಡಿ ಕಾರ್ಯೋನ್ಮುಖರಾಗಿ ತುಳುವರ ಅಭಿವ್ರದ್ದಿಗೆ ಕೆಲಸ ಮಾಡುವುದೇ ನಮ್ಮ ದ್ಯೆಯವಾಗಿದೆ ಎಂದು ತುಳುಕೂಟದ ನೂತನ ಅಧ್ಯಕ್ಷ ದಿನೇಶ್ ಶೆಟ್ಟಿ ಕಳತ್ತೂರು ನುಡಿದರು . ನ 5ರಂದು ಪುಣೆಯ ಕರ್ವೆ ರೋಡ್ ನಲ್ಲಿಯ ರತ್ನ ಹೋಟೆಲ್…
ನಮ್ಮ ಸುತ್ತಮುತ್ತ ಸಂಭವಿಸುವ ವಿದ್ಯಮಾನಗಳೇ ಹಾಗೆ. ಕೆಲವೊಂದು ವಿದ್ಯಮಾನಗಳ ಪರಿಣಾಮಗಳು ನಮ್ಮನ್ನು “ಚಿಂತಿ’ಸುವಂತೆ ಮಾಡುತ್ತವೆ. ಹಾಗೆಯೇ, ಏಕಕಾಲಕ್ಕೆ ನಮ್ಮನ್ನು “ಚಿಂತೆ’ ಮತ್ತು “ಚಿಂತನೆ’ಗೀಡು ಮಾಡುವ ವಿದ್ಯಮಾನಗಳೂ ಸಾಕಷ್ಟಿವೆ. ನಾವು ಚಿಂತನೆಗೊಳಪಟ್ಟರೆ ಜಿಜ್ಞಾಸುಗಳಾಗುತ್ತೇವೆ. ಚಿಂತೆ ನಮ್ಮನ್ನು ಮುಪ್ಪಿನತ್ತ ತಳ್ಳುತ್ತದೆ. ಇವೆರಡರಲ್ಲಿ ಆಯ್ಕೆ ನಮಗೆ ಸೇರಿದ್ದು. ಜಿಜ್ಞಾಸುಗಳಾದರೆ ನಮ್ಮ ಜ್ಞಾನ, ವಿವೇಕ ಜಾಗೃತಗೊಳ್ಳುತ್ತದೆ. ಇನ್ನು ಶಿಕ್ಷಕರಂತೂ ಮೂಲತಃ ‘ಜಿಜ್ಞಾಸು’ಗಳು. ಜ್ಞಾನದ ತೃಷೆ ಅವರನ್ನು ಸದಾಕಾಲ ಬಾಧಿಸುತ್ತಿರಬೇಕು. ಇತ್ತೀಚೆಗೆ ಆಕ್ಸ್ಫರ್ಡ್ನ ಮಾರ್ಟಿನ್ ಸ್ಕೂಲ್ ಕೈಗೊಂಡ ಸಂಶೋಧನೆ ಮತ್ತು ಅದು ಪ್ರಕಟಿಸಿದ ವರದಿ ಚಿಂತೆ ಮತ್ತು ಚಿಂತನೆಗೆ ಸಾಕಷ್ಟು ಎಡೆಮಾಡಿ ಕೊಟ್ಟಿದೆ. ವರದಿಯಲ್ಲಿ ಉಲ್ಲೇಖೀಸಿದಂತೆ, 2030ರ ಸುಮಾರಿಗೆ ಜಗತ್ತಿನಲ್ಲಿರುವ 30 ಪ್ರತಿಶತ ಉದ್ಯೋಗ ಗಳು ಪ್ರಸ್ತುತ ಚಾಲ್ತಿಯಲ್ಲಿರುವ ಉದ್ಯೋಗಗಳಿಗಿಂತ ಸಂಪೂರ್ಣವಾಗಿ ಭಿನ್ನವಾಗಿರುವುದು ಮಾತ್ರವಲ್ಲದೆ, ಈಗ ಇರುವ 30 ಪ್ರತಿಶತ ಉದ್ಯೋಗಗಳ ಆವಶ್ಯಕತೆ 2030ರಲ್ಲಿ ಕಾಣಸಿಗುವುದು ಅಸಾಧ್ಯ. ಈ ದಿಢೀರ್ ಬೆಳವಣಿಗೆಗೆ ಮುಖ್ಯ ಕಾರಣ ‘ಕೃತಕ ಬುದ್ಧಿಮತ್ತೆ’ (Artificial Inteligence)ಯ ವ್ಯಾಪಕ ಬಳಕೆ ಮತ್ತು ಅದು ತಂದೊಡ್ಡಬಹುದಾದ ಅಡ್ಡ…
ಸಮಗ್ರ ಜೀರ್ಣೋದ್ಧಾರಗೊಳ್ಳುತ್ತಿರುವ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿಯ ಕಾಪು ಕ್ಷೇತ್ರದ ಶಿರ್ವ ಗ್ರಾಮ ಸಮಿತಿ ರಚನಾ ಸಭೆಯು ಶಿರ್ವದ ಹೊಟೇಲ್ ಶಾಮ್ಸ್ ಸ್ಕ್ಡೇರ್ ಸಭಾಂಗಣದಲ್ಲಿ ನಡೆಯಿತು. ಗ್ರಾಮದ 9 ಜನ ಮಹಿಳೆಯರು ಶ್ರೀ ದೇವಿಗೆ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ಮಾತನಾಡಿ, ಲಕ್ಷಾಂತರ ಭಕ್ತರ ಭಕ್ತಿಯ ತಾಣ ಹೊಸ ಮಾರಿಗುಡಿ ದೇವಸ್ಥಾನದ ಜೀರ್ಣೋದ್ಧಾರ ನಡೆಸುವ ಕಾರ್ಯ ಚರಿತ್ರೆಗೆ ಸೇರುವಂತಾಗಿದ್ದು, ವಿಶ್ವದ 18 ದೇಶಗಳಲ್ಲಿ ಸಮಿತಿ ರಚಿಸಲಾಗಿದೆ. ಕ್ಷೇತ್ರಕ್ಕೆ ಸಂಬಂಧಪಟ್ಟ ಪ್ರತಿಯೊಂದು ಮನೆಯಲ್ಲಿಯೂ ಒಬ್ಬ ಸದಸ್ಯರಿರುವಂತೆ ಪ್ರಧಾನ ಸಮಿತಿಯ ಸಂಕಲ್ಪವಾಗಿದ್ದು, ಬೇರೆ ಬೇರೆ ಗ್ರಾಮಗಳ ಸಮಿತಿ ರಚಿಸಲಾಗಿದೆ. ಅದರಂತೆ ಶಿರ್ವ ಗ್ರಾಮ ಸಮಿತಿಯ ರಚನೆ ಮಾಡಲಾಗಿದ್ದು, ಭಕ್ತರು ಅಮ್ಮನ ಜೀರ್ಣೋದ್ಧಾರ ಕಾರ್ಯದಲ್ಲಿ ಭಾಗವಹಿಸುವಂತೆ ವಿನಂತಿಸಿದರು. ಸಮಿತಿಯ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ಅಭಿವೃದ್ಧಿ ಸಮಿತಿಯ ವಿಜ್ಞಾಪನಾ ಪತ್ರವನ್ನು ಸಾಂಕೇತಿಕವಾಗಿ ಶಿರ್ವ ಗ್ರಾ.ಪಂ. ಅಧ್ಯಕ್ಷ ರತನ್…
‘ಸಂತೋಷವಾಗಿರುವುದು ತುಂಬಾ ಸರಳ ಆದರೆ ಸರಳವಾಗಿರುವುದು ಮಾತ್ರ ತುಂಬಾ ಕಷ್ಟ.’ ಹೀಗೆಂದವರು ಗುರುದೇವ ರವೀಂದ್ರನಾಥ ಠಾಗೋರ್. ಬಂಟ್ವಾಳ ತಾಲೂಕಿನ ಕೊಳ್ನಾಡು ಗ್ರಾಮದ ಪ್ರತಿಷ್ಠಿತ ಮನೆತನ ಕುಳಾಲು. ಇಲ್ಲಿ ಕೆ ವಿಶ್ವನಾಥ ರೈ ಹಾಗೂ ಚಂದ್ರಾವತಿ ರೈ ದಂಪತಿಗಳ ಮೂರನೇ ಮಗುವಾಗಿ ಸುರೇಶ್ ರೈ ಅವರು ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನು ಕುಳಾಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಗಿಸಿದರು. ಪ್ರೌಢ ಶಿಕ್ಷಣವನ್ನು ಸರಕಾರಿ ಪ್ರೌಢ ಶಾಲೆ ಕನ್ಯಾನದಲ್ಲೂ, ಪದವಿ ಪೂರ್ವ ಶಿಕ್ಷಣವನ್ನು ಪದವಿ ಪೂರ್ವ ಕಾಲೇಜು ವಿಟ್ಲದಲ್ಲಿ ಪೂರೈಸಿದರು. ಬಿ ಎ ಪದವಿಯನ್ನು ಸಂತ ಅಲೋಶಿಯಸ್ ಕಾಲೇಜ್ ಮಂಗಳೂರು, ಸ್ನಾತಕೋತ್ತರ ಪದವಿಯನ್ನು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಇತಿಹಾಸದಲ್ಲಿ ದ್ವಿತೀಯ ಶ್ರೇಣಿಯೊಂದಿಗೆ ಮುಗಿಸಿದರು. ನಂತರ ಹಂಪಿ ಕನ್ನಡ ವಿಶ್ವವಿದ್ಯಾನಿಲಯ ಮೂಲಕ “ಜ್ಯುಡಿಶಿಯಲ್ ಸಿಸ್ಟಮ್ ಇನ್ ದ ಸೋಶಿಯಲ್ ಟ್ರೆಡಿಷನ್ ಇನ್ ತುಳುನಾಡು” ವಿಷಯದ ಬಗ್ಗೆ ಪಿ. ಎಚ್. ಡಿ ಪದವಿಯನ್ನು ಪಡೆದರು. ಸುರೇಶ್ ರೈ ಅವರು ತಮ್ಮ ವೃತ್ತಿ ಜೀವನವನ್ನು ಭಂಡಾರ್ ರ್ಕರ್ ಕಾಲೇಜ್ ಕುಂದಾಪುರ ಇಲ್ಲಿ…