Author: admin
ಸನಾತನ ಧರ್ಮ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವಂತಹ ಕಾರ್ಯ ನಿರಂತರವಾಗಿ ನಡೆಯುತ್ತಿರಬೇಕು : ಸಿಎ ಸುರೇಂದ್ರ ಕೆ. ಶೆಟ್ಟಿ
ಸನಾತನ ಧರ್ಮ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವಂತಹ ಕಾರ್ಯ ನಿರಂತರವಾಗಿ ನಡೆಯುತ್ತಿರಬೇಕು. ಭಜನೆ, ಕುಣಿತ ಭಜನೆಗಳಂತಹ ಧಾರ್ಮಿಕ ಕಾರ್ಯಕ್ರಮಗಳನ್ನು ಸಂಘ ಸಂಸ್ಥೆಗಳು ಆಯೋಜಿಸುವುದರಿಂದ ಮಕ್ಕಳಲ್ಲಿ ಧರ್ಮ, ದೇವರ ಮೇಲೆ ಭಕ್ತಿ ಶ್ರದ್ಧೆ ಹೆಚ್ಚಾಗುತ್ತದೆ ಎಂದು ಬಾಂಬೆ ಬಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ಸಿಎ ಸುರೇಂದ್ರ ಕೆ. ಶೆಟ್ಟಿ ತಿಳಿಸಿದರು. ಬಾಂಬೆ ಬಂಟ್ಸ್ ಅಸೋಸಿಯೇಶನ್ನ ಮಹಿಳಾ ವಿಭಾಗವು ಜುಯಿ ನಗರದ ಬಂಟ್ಸ್ ಸೆಂಟರ್ ನಲ್ಲಿ ಆಯೋಜಿಸಿದ್ದ ಭಜನೆ ಮತ್ತು ಕುಣಿತ ಭಜನಾ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಬಂಟ್ಸ್ ಅಸೋಸಿಯೇಶನ್ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನಿರಂತರ ಪ್ರೋತ್ಸಾಹ ನೀಡುತ್ತಾ ಬಂದಿದೆ. ಮಹಿಳಾ ವೇದಿಕೆ ಇಂತಹ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸದಾ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿರುವುದು ಅಭಿನಂದನೀಯ. ಇಂದಿನ ಕಾಲಘಟ್ಟದಲ್ಲಿ ಇಂತಹ ಧಾರ್ಮಿಕ ಯೋಜನೆ ಅಗತ್ಯವಿದೆ. ಇಂತಹ ಕಾರ್ಯಕ್ರಮಗಳಿಗೆ ಎಲ್ಲರೂ ಪ್ರೋತ್ಸಾಹಿಸಬೇಕಾಗಿದೆ. ಇಂದಿನ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತಂಡಗಳು ಭಾಗವಹಿಸಿರುವುದು ಸಂತೋಷದ ವಿಷಯ ಎಂದು ತಿಳಿಸಿದರು. ಮುಖ್ಯ ಅತಿಥಿಯಾಗಿದ್ದ ಶ್ರೀ ವಜ್ರಮಾತಾ…
ಸನಾತನ ಹಿಂದೂ ಧರ್ಮ ಎಲ್ಲರಿಗೂ ಅವರವರ ಸ್ವಭಾವ, ಸಾಮರ್ಥ್ಯಗಳಿಗೆ ಅನುಸಾರವಾದ ಆರಾಧನೆಯ ವ್ಯವಸ್ಥೆಗಳನ್ನು ನೀಡಿದೆ. ಯಜ್ಞಯಾಗ ತಪಸ್ಸುಗಳ ಕ್ಲಿಷ್ಟ ಮಾರ್ಗಗಳಿದ್ದಂತೆ, ಜನ ಸಾಮಾನ್ಯರು ತಮ್ಮ ವ್ಯಾವಹಾರಿಕ ಜೀವನದ ಜತೆ ಜತೆಯಲ್ಲಿ ಸುಲಭವಾಗಿ ನಡೆಸಬಹುದಾದ ವ್ರತಗಳನ್ನು ಶಾಸ್ತ್ರ ಪುರಾಣಗಳು ಬೋಧಿಸುತ್ತವೆ. ಈಗ ನಡೆಯುತ್ತಿರುವ ಶ್ರಾವಣ ಮಾಸವು ಸುಲಭವಾದ, ಸಾರ್ವತ್ರಿಕವಾದ, ವಿಶೇಷವಾಗಿ ಮಹಿಳೆಯರಿಗೆ ಹೆಚ್ಚು ಸಂಭ್ರಮ ನೀಡುವ ವ್ರತಗಳ ಪರ್ವಕಾಲ. ವ್ರತ ಎಂದರೆ ‘ಆವೃಣೋತಿ ಕರ್ತಾರಂ’ ಎಂದು ದೇವತಾ ಕಾರ್ಯವನ್ನು ನಿಯಮ ನಿಷ್ಠೆಯಿಂದ ಮಾಡಿ ಅದರ ಪುಣ್ಯದ ರಕ್ಷಾ ಕವಚದಿಂದ ನಮ್ಮ ಜೀವನವನ್ನು ಸಂರಕ್ಷಿಸಿಕೊಳ್ಳುವುದು ಎಂದು ಅರ್ಥ. ವ್ರತಗಳ ಆಚರಣೆಯಿಂದ ನಮಗೆ ಇರುವ ಕಂಟಕಗಳು ದೂರವಾಗಿ ನಮ್ಮ ಇಷ್ಟಾರ್ಥಗಳು ಸಿದ್ಧಿಸುವುದು ತಾತ್ಕಾಲಿಕ ಫಲ. ವ್ರತಾಚರಣೆಗಳಿಂದ ನಮ್ಮ ತ್ರಿಕರಣಗಳು ಶುದ್ಧಿಯಾಗಿ ನಮ್ಮ ಜೀವನ ಯೋಗ್ಯತೆ ವೃದ್ಧಿಯಾಗುವುದು ಶಾಶ್ವತ ಫಲ. ಗೀತಾ ಭಾಷ್ಯಾದಲ್ಲಿ ಶ್ರೀಮನ್ ಮಧ್ವಾಚಾರ್ಯರು ಹೇಳುವಂತೆ ‘ಯಥಾ ದರ್ಶೋ ಮಲೇನಾವೃತಃ ತಥಾ ಅಂತಃಕರಣಂ ಪರಮಾತ್ಮದೇಃ ವ್ಯಕ್ತಿಹೇತುರ್ನ ಭವತಿ’. ಕನ್ನಡಿ ಕೊಳೆಯಾಗಿದ್ದರೆ ಪ್ರತಿಬಿಂಬ ಕಾಣದೇ ಹೋಗುವಂತೆ ಅಂತಃಕರಣ…
ಬಂಟರ ಸಂಘ (ರಿ) ಸುರತ್ಕಲ್ ಮತ್ತು ಮಹಿಳಾ ವೇದಿಕೆ ಬಂಟರ ಸಂಘ ಇದರ ಸಹಯೋಗದಲ್ಲಿ ಆಟಿದ ಪೊರ್ಲು ಮತ್ತು ಅಭಿನಂದನಾ ಕಾರ್ಯಕ್ರಮ ಆಗೋಸ್ಟ್ 13 ರಂದು ಭಾನುವಾರ ಬೆಳಿಗ್ಗೆ 9.30 ಕ್ಕೆ ಸುರತ್ಕಲ್ ಬಂಟರ ಭವನದಲ್ಲಿ ನಡೆಯಲಿದೆ. ಸಮಾರಂಭದ ಅಧ್ಯಕ್ಷತೆಯನ್ನು ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಲೋಕಯ್ಯ ಶೆಟ್ಟಿ ಮುಂಚೂರು ವಹಿಸಲಿದ್ದಾರೆ. ಸಂಘದ ಮಾಜಿ ಅಧ್ಯಕ್ಷ ಎಂ ದೇವಾನಂದ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮಂಗಳೂರು ಸಂಧ್ಯಾ ಕಾಲೇಜು ವಿಶ್ವವಿದ್ಯಾನಿಲಯ ತುಳು ಸ್ನಾತಕೋತ್ತರ ಅಧ್ಯಯನ ವಿಭಾಗದ ಉಪನ್ಯಾಸಕಿ ಜಯಲಕ್ಷ್ಮೀ ಆರ್ ಶೆಟ್ಟಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಿವಮೊಗ್ಗ ಕುವೆಂಪು ವಿಶ್ವ ವಿದ್ಯಾನಿಲಯದ ಗೌರವ ಡಾಕ್ಟರೇಟ್ ಪುರಸ್ಕೃತರಾದ ಎ ಸದಾನಂದ ಶೆಟ್ಟಿ, ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ ವೈ ಭರತ್ ಶೆಟ್ಟಿ, ಮುಲ್ಕಿ-ಮೂಡಬಿದ್ರೆ ಕ್ಷೇತ್ರದ ಶಾಸಕ ಉಮಾನಾಥ ಎ ಕೋಟ್ಯಾನ್, ಪುತ್ತೂರು ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ ಕೋಡಿಂಬಾಡಿ, ಕಾಪು ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಭಾಗವಹಿಸಲಿದ್ದಾರೆ.…
ಇತ್ತೀಚಿನ ದಿನಗಳಲ್ಲಿ ಎಲ್ಲ ವಯಸ್ಸಿನವರಲ್ಲೂ ಗ್ಯಾಸ್ಟ್ರಿಕ್, ಹೈಪರ್ ಆ್ಯಸಿಡಿಟಿ, ಅಲ್ಸರ್ಗಳು ಸಾಮಾನ್ಯವಾಗಿ ಕಾಡುತ್ತಿವೆ. ಗ್ಯಾಸ್ಟ್ರಿಕ್ ಎಂದರೆ ಜಠರಕ್ಕೆ ಸಂಬಂಧಿಸಿದ್ದಾಗಿದೆ. ಯೋಗ, ಪ್ರಾಣಾಯಾಮ, ಧ್ಯಾನದ ಮೂಲಕ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ. ಈ ರೀತಿಯ ತೊಂದರೆಗೆ ಮಾನಸಿಕ ನೆಮ್ಮದಿ ಕಾಯ್ದುಕೊಳ್ಳುವುದು ಅತ್ಯುತ್ತಮ ಚಿಕಿತ್ಸೆಯಾಗಿರುತ್ತದೆ. ಭಾವನಾತ್ಮಕ ವಿಷಯಗಳು ಅಧಿಕವಾದಾಗ ಮಾನಸಿಕ ಒತ್ತಡ ಹೆಚ್ಚಿ ಅದು ಮೆದುಳಿನ ಲಿಂಬಿಕ್ ಸೆಂಟರ್ನ ಮೇಲೆ ಪ್ರಭಾವ ಬೀರುತ್ತದೆ. ಈ ಲಿಂಬಿಕ್ ಸೆಂಟರ್ ಹೈಪೋಥೆಲಾಮಸ್ನ ಮೇಲೆ ಒತ್ತಡ ಹೇರಲಾರಂಭಿಸಿ ತನ್ಮೂಲಕ ನರಗಳ ಮೇಲೆ ಪ್ರಭಾವ ಬೀರುತ್ತದೆ. 2 ಮುಖ್ಯ ನರಗಳ ವ್ಯವಸ್ಥೆಗಳಾದ ಸಿಂಪಥೆಟಿಕ್ ಮತ್ತು ಪ್ಯಾರಾಸಿಂಪಥೆಟಿಕ್ ನರಗಳಲ್ಲಿ ಏರು-ಪೇರಾಗುತ್ತದೆ. ಈ ಪ್ಯಾರಾಸಿಂಪಥೆಟಿಕ್ ಏರು-ಪೇರಿನಿಂದ ಇದು 2 ರೀತಿಯಲ್ಲಿ ಜಠರ ಹಾಗೂ ಜಠರ ರಸಗಳ ಮೇಲೆ ಪ್ರಭಾವ ಬೀರುತ್ತದೆ. ಪ್ಯಾರಾಸಿಂಪಥೆಟಿಕ್ ನರವಾದ ವೇಗಸ್ ನರವು ಹೆಚ್ಚಿನ ಗ್ಯಾಸ್ಟ್ರಿಕ್ ಹಾರ್ಮೋನ್ನ್ನು ಉತ್ಪಾದಿಸಲು ಪ್ರಚೋದಿಸಿ ಇದು ಹೆಚ್ಚಿನ ಹೈಡ್ರೋಕ್ಲೋರಿಕ್ ಆಮ್ಲವನ್ನು ಉತ್ಪತ್ತಿಗೊಳಿಸುತ್ತದೆ. ಪ್ಯಾರಾಸಿಂಪಥೆಟಿಕ್ ನರಗಳು ನೇರವಾಗಿ ಆಕ್ಸಿಂಟಿಕ್ ಜೀವಕೋಶಗಳನ್ನು ಪ್ರಚೋದಿಸಿ ಹೆಚ್ಚಿನ ಹೈಡ್ರೋಕ್ಲೋರಿಕ್ ಆಮ್ಲದ ಉತ್ಪಾದಿಸುತ್ತದೆ.…
ಬಂಟರ ಸಂಘ (ರಿ) ಸುರತ್ಕಲ್, ಬಂಟರ ಯಾನೆ ನಾಡವರ ಮಾತೃ ಸಂಘ (ರಿ) ಮಂಗಳೂರು ಹಾಗೂ ಜಾಗತಿಕ ಬಂಟರ ಸಂಘಗಳ ಒಕ್ಕೂಟ ಮಂಗಳೂರು ಇದರ ಸಹಯೋಗದೊಂದಿಗೆ ಬಂಟರ ಕ್ರೀಡೋತ್ಸವವು ರವಿವಾರ ಇಲ್ಲಿನ ಗೋವಿಂದದಾಸ ಕಾಲೇಜ್ ಕ್ರೀಡಾಂಗಣದಲ್ಲಿ ಜರುಗಿತು. ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತಾಡಿದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರು, “ಸುರತ್ಕಲ್ ಬಂಟರ ಸಂಘ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಇತರ ಸಂಘಟನೆಗಳಿಗೆ ಮಾದರಿಯಾಗಿ ಬೆಳೆದಿದೆ. ಸಂಘದ ಕಾರ್ಯ ಚಟುವಟಿಕೆಗಳು ಇದೇ ರೀತಿ ನಿತ್ಯ ನಿರಂತರವಾಗಿ ಮುಂದುವರಿಯಲಿ” ಎಂದು ಶುಭ ಹಾರೈಸಿದರು. ಬಳಿಕ ಮಾತಾಡಿದ ಬಂಟರ ಯಾನೆ ನಾಡವರ ಮಾತೃ ಸಂಘದ ಪ್ರಧಾನ ಕಾರ್ಯದರ್ಶಿ ಕೆಎಂ ಶೆಟ್ಟಿ ಮಾತನಾಡಿ ಕ್ರೀಡೆಗೆ ಉತ್ತೇಜನ ನೀಡುವ ಅಗತ್ಯ ಇದೆ. ಕ್ರೀಡೆಯಲ್ಲಿ ಬಹಳಷ್ಟು ಮಂದಿ ಬಂಟ ಪ್ರತಿಭಾವಂತರಿದ್ದಾರೆ ಎಂದರು. ಇಂಟರ್ ನ್ಯಾಷನಲ್ ಬಂಟ್ಸ್ ವೆಲ್ಪೇರ್ ಟ್ರಸ್ಟ್ ನ ಸಂಘಟನಾ ಕಾರ್ಯದರ್ಶಿ ರಾಜ್ ಗೋಪಾಲ್ ರೈ ಅವರು, “ಬಂಟರಲ್ಲಿ…
ಅಚ್ಲ್ಯಾಡಿ ವಿದ್ಯಾರ್ಥಿ ಮಿತ್ರ ಸೇವಾ ಟ್ರಸ್ಟ್ (ರಿ) ಅಚ್ಲಾಡಿ ಇವರ ಆಶ್ರಯದಲ್ಲಿ ಲಯನ್ಸ್ ಕ್ಲಬ್ ಬನ್ನಾಡಿ ವಡ್ದರ್ಸೆ ಇವರ ಪ್ರಾಯೋಜಕತ್ವದಲ್ಲಿ ವಿವೇಕ ಪದವಿ ಪೂರ್ವ ಕಾಲೇಜು ಕೋಟ ಇಲ್ಲಿಯ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಪರೀಕ್ಷಾ ಆತಂಕ ಮತ್ತು ಪರಿಹಾರೋಪಾಯಗಳು ಕುರಿತು ಆಪ್ತ ಸಮಾಲೋಚನೆ ಮತ್ತು ಕಾರ್ಯಗಾರವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಬನ್ನಾಡಿ ವಡ್ದರ್ಸೆಯ ಕಾರ್ಯದರ್ಶಿ ಹಾಗೂ ವಿದ್ಯಾರ್ಥಿ ಮಿತ್ರ ಸೇವಾ ಟ್ರಸ್ಟ್ನ ಸದಸ್ಯರು ಆದ ಅಜಿತ್ ಶೆಟ್ಟಿ ಕೊತ್ತಾಡಿ, ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಗಿರೀಶ್ ಎಂ ಎನ್ , ವಿವೇಕ ಜೂನಿಯರ್ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಜಗದೀಶ್ ನಾವಡ ಸ್ವಾಗತಿಸಿ, ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ವೆಂಕಟೇಶ ಉಡುಪ ಧನ್ಯವಾದ ಸಮರ್ಪಿಸಿದರು.
ಪತ್ರಕರ್ತರ ದಿನಾಚರಣೆ ಸಂಭ್ರಮಿಸಿದ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಪತ್ರಕರ್ತರು ಅಂದರೆ ಘನತೆ ಮತ್ತು ಮಾನ್ಯತೆ : ಸಚಿವ ನಾರಾಯಣ ಗೌಡ
ಮುಂಬಾಯಿ , ಜು.10: ಅಭಿವ್ಯಕ್ತ ̧ಸ್ವಾತಂತ್ರ್ಯಯದ ದೇಶವಾದ ̈ಭಾರತದಲ್ಲಿ ರಾಷ್ಟ್ರದ ನಾಲ್ಕನೇ ಅಂಗವಾಗಿ ಪತ್ರಿಕಾ ಮಾಧ್ಯಮವು ಕಾರ್ಯ ನಿರ್ವಹಿಸುತ್ತಿರುವುದು ಭಾರತೀಯ ಪತ್ರಕರ್ತರ ಹಿರಿಮೆಯಾಗಿದೆ . ನಮ್ಮ ಪ್ರಜಾಪ್ರಭುತ್ವ ರಾಷ್ಟ್ರದ ಶಾಸಕಾಂಗ , ಕಾರ್ಯಾಂಗ ಮತ್ತು ನ್ಯಾಯಾಂಗದ ವ್ಯವಸ್ಥೆಯನ್ನು ತಿದ್ದಿ ಸಮಾಜದ ಹಿತ ಕಾಪಾಡುವಲ್ಲಿ ಶ್ರಮಿಸುವ ಪತ್ರಕರ್ತರು ಸಮಾಜದ ಮೂರನೇ ಕಣ್ಣು ಎಂದೇ ಗುರುತಿಸಲ್ಪಟ್ಟಿದ್ದಾರೆ. ಪತ್ರಕರ್ತರು ಸಮಾಜಕ್ಕೆ ನ್ಯಾಯವನ್ನು ಒದಗಿಸುವ ಪ್ರತಿಷ್ಠಿತ ಪ್ರಜೆಗಳಾಗಿದ್ದಾರೆ . ಆದ್ದರಿಂದ ಪತ್ರಕರ್ತರು ಅಂದರೆ ಘನತೆ, ಮಾನ್ಯತೆಗೆ ಪಾತ್ರದಾಯಕರಾಗಿದ್ದಾರೆ. ಇಂತಹ ಪತ್ರಕರ್ತರು ಯಾವುದೇ ವ್ಯಕ್ತಿಗತವಾದ ವಿಷಯವನ್ನುತಮ್ಮ ಬರವಣಿಗೆಯಲ್ಲಿ ತೋರದೆ ವಸ್ತುನಿಷ್ಠವಾದ ವಾರದಿಗಾರಿಕೆಗೆ ಮಹತ್ವ ನೀಡಬೇಕು.ಸತ್ಯ ಹೇಳಿ ಸಮಾಜವನ್ನು ಎಚ್ಚರಿಸುವಲ್ಲಿ ಎಂದೂ ಪತ್ರಕರ್ತರು ಹಿಂಜರಿಯಬಾರದು ಎಂದು ಕರ್ನಾಟಕ ̧ಸರ್ಕಾರದ ಕ್ರೀಡೆ , ಯುವ ಸಬಲೀಕರಣ, ರೇಷ್ಮೆ, ಯೋಜನೆ, ಅಂಕಿ ಅಂಶ ಖಾತೆಗಳ ಸಚಿವ ಡಾ| ಕೆ.೧.ನಾರಾಯಣ ಗೌಡ ತಿಳಿಸಿದರು. ಇಂದಿಲ್ಲಿ ಭಾನುವಾರ ಪೂರ್ವಾಹ್ನ ಅಂಧೇರಿ ಪೂರ್ವದ ಸಾಲೀಟರಿ ಕಾರ್ಪೋರೆಟ್ ಪಾರ್ಕ್ಇದರ ಕ್ಲಬ್ ಹೌಸ್ ನ ಸಭಾಗೃಹದಲ್ಲಿ ಕನ್ನಡಿಗ ಪತ್ರಕರ್ತರ ಸಂಘ…
ಮುಖವಾಡ ಸರಿದಂತೆ ಸತ್ಯಮುಖ ತೋರುವುದು ಭಿತ್ತಿಯಲಿ ಪ್ರತ್ಯಕ್ಷ ನಿಜರೂಪ ಆಗ ತೋರಿಕೆಯ ಮುಖವೊಂದು ಬಾಳ ನಿಜಮುಖವೊಂದು ಮೊಗನೋಡಿ ಅಳೆಯದಿರು. ಮುದ್ದುರಾಮ. ಬರಹ ಮತ್ತು ಬರಹಗಾರ ಒಂದು ತಕ್ಕಡಿ ಸಮ ನಿಲ್ಲುವ ಎರಡು ತೂಕಗಳಾಗಬೇಕು. ಬರಹಗಾರನ ವ್ಯಕ್ತಿತ್ವ ಬರಹಕ್ಕೆ ಸರಿದೂಗುವುದಿಲ್ಲ ಅಂದರೆ ಆತನ ಬರಹಕ್ಕೆ ಸ್ಪಂದಿಸುವುದು ಸಮಂಜಸವಲ್ಲ. ಬರಹಗಾರ ಅನಿಸಿದವನು ಸಾಮಾಜಿಕ ಧೋರಣೆಗಳನ್ನು ಗಾಳಿಗೆ ತೂರಿ ಬದುಕುತ್ತಾ,ಕೇವಲ ಬರಹದಲ್ಲಿ ವಿಚಾರವಂತನಂತೆ ಅಕ್ಷರಗಳೊಂದಿಗೆ ಆಟ ಆಡಿದನೆಂದ ಮಾತ್ರಕ್ಕೆ ಅವನು ವಿಚಾರವಾದಿಯಾಗಲಾರ. ಬರಹದಂತೆ ತಾನು ಬದುಕಬಹುದಾ? ಅದು ಆತನಿಗೆ ಸಾಧ್ಯವಿಲ್ಲ ಎಂದಾದಲ್ಲಿ ಸಮಾಜಕ್ಕೆ ಬುದ್ದಿ ಹೇಳುವ ಬರಹ ಅನ್ನುವುದು ಕೇವಲ ಆತನ ದೊಂಬರಾಟಕ್ಕೆ ಸೀಮಿತ ಆಗುತ್ತದೆ. ಲೋಕದ ಜನರ ಕಳೆ ಹೆಕ್ಕುವ ಮೊದಲು ತನ್ನಲ್ಲಿರುವ ಕೊಳೆ ತೊಳೆದು ಕೊಳ್ಳಬೇಕಾದುದು ಬರಹಗಾರ ಎಂದೆಣಿಸಿಕೊಂಡವನ ಪ್ರಮುಖ ಕರ್ತವ್ಯ. ಸಾಹಿತ್ಯ ಅಂದರೆ ಹೇಳುವುದು ನ್ಯಾಯ ಇಕ್ಕುವುದು ಗಾಳ ಆಗಬಾರದು. ಸಮಾಜ ಕಂಟಕ ಶಕ್ತಿಗಳು ಯಾವತ್ತೂ ಕತ್ತಲೆಯಲ್ಲಿ ಅಡಗಿಕೊಂಡು ತನ್ನ ವಿಕೃತ ಆಲೋಚನೆಗಳಿಗೆ ಸಾಣೆ ಹಾಕುತ್ತವೆ. ಹಾಗೆಯೇ ಕೆಲವು ಬರಹಗಾರರು ಪ್ರಚಾರಕ್ಕೆ…
ಗ್ಲೋಬಲ್ ಮೀಡಿಯಾದ 2024 ರ ತುಳುನಾಡು ಪಂಚಾಂಗ ಕ್ಯಾಲೆಂಡರ್ನ್ನು ಹುಬ್ಬಳ್ಳಿಯ ಬಂಟರ ಸಂಘದ ಆವರಣದಲ್ಲಿ ಭಾವಿಪರ್ಯಾಯ ಪುತ್ತಿಗೆ ಮಠದ ಪರಮ ಪೂಜ್ಯ ಶ್ರೀ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಬಿಡುಗಡೆ ಮಾಡಿದರು. ಕರ್ನಾಟಕ ರಾಜ್ಯದ ತುಳುನಾಡು ಎಂದು ಕರೆಯಲ್ಪಡುವ ದಕ್ಷಿಣ ಕನ್ನಡ, ಉಡುಪಿ ಹಾಗೂ ಕೇರಳದ ಕಾಸರಗೋಡು ಜಿಲ್ಲೆಯ ಪ್ರಮುಖ ಯಾತ್ರಾ ಕೇಂದ್ರವಾಗಿದ್ದು ಅನೇಕ ಇತಿಹಾಸ ಪ್ರಸಿದ್ಧ ಪೌರಾಣಿಕ ಶ್ರದ್ಧಾಕೇಂದ್ರಗಳಾಗಿವೆ. 2024ರ ಕ್ಯಾಲೆಂಡರನ್ನು ಶಿವನ ದೇವಸ್ಥಾನಗಳಾದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಕರ್ಜೆ, ಉಡುಪಿ, ಶ್ರೀ ನರಹರಿ ಪರ್ವತ ಸದಾಶಿವ ದೇವಸ್ಥಾನ, ಪಾಣೆಮಂಗಳೂರು, ಬಂಟ್ವಾಳ, ಶ್ರೀ ಆದಿನಾಥೇಶ್ವರ ದೇವಸ್ಥಾನ, ಅದ್ಯಪಾಡಿ, ಮಂಗಳೂರು, ಮಹತೋಭಾರ ಕೋಟೆಕೇರಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ, ಬಾರಕೂರು, ಶ್ರೀ ಪಂಚಲಿಂಗೇಶ್ವರ ದೇವಸ್ಥಾನ, ಬಳಂಜ, ಬೆಳ್ತಂಗಡಿ, ಶ್ರೀ ಶರಭೇಶ್ವರ ದೇವರು ಶ್ರೀ ಶರವು ಮಹಾಗಣಪತಿ ದೇವಸ್ಥಾನ, ಮಂಗಳೂರು, ಇರಾ ಶ್ರೀ ಸೋಮನಾಥೇಶ್ವರ ದೇವಸ್ಥಾನ, ಕುಂಡಾವು, ಬಂಟ್ವಾಳ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಕುಕ್ಕೆಹಳ್ಳಿ, ಉಡುಪಿ, ಶ್ರೀ ಚಂದ್ರಮೌಳೀಶ್ವರ ದೇವಸ್ಥಾನ, ಉಡುಪಿ, ರುದ್ರಗಿರಿ ಶ್ರೀ ಮೃತ್ಯುಂಜಯ…
ಬಂಟರ ಯಾನೆ ನಾಡವರ ಸಂಘ ಹೆಬ್ರಿ ಅಜೆಕಾರು ವಲಯ ಇದರ ಆಶ್ರಯದಲ್ಲಿ ಸತ್ಯನಾರಾಯಣ ಪೂಜೆ, ಭಜನಾ ಕಾರ್ಯಕ್ರಮ ಹಾಗೂ ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸಹಾಯಧನ ವಿತರಣೆ ಕಾರ್ಯಕ್ರಮ ಹೆಬ್ರಿ ಬಂಟರ ಸಭಾಂಗಣದಲ್ಲಿ ನಡೆಯಿತು. ಹೆಬ್ರಿ ಅಜೆಕಾರು ವಲಯ ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ಸೀತಾನದಿ ವಿಠ್ಠಲ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಮಾತೃ ಸಂಘದ ನಿರ್ದೇಶಕ ಭೂತುಗುಂಡಿ ಕರುಣಾಕರ ಶೆಟ್ಟಿ, ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಬಾನು ಪಿ.ಬಲ್ಲಾಳ್, ಸೇವಾದಾರರಾದ ರಮಾನಂದ ಹೆಗ್ಡೆ, ಸವಿತಾ ರಮಾನಂದ ಹೆಗ್ಡೆ, ಸಂಘದ ಉಪಾಧ್ಯಕ್ಷರಾದ ವಾದಿರಾಜ್ ಶೆಟ್ಟಿ, ಹರ್ಷ ಶೆಟ್ಟಿ, ಕುಂಠಿನಿ ಭಾಸ್ಕರ್ ಶೆಟ್ಟಿ, ಆಶಾ ಬಿ.ಶೆಟ್ಟಿ, ಪ್ರಧಾನ ಕಾರ್ಯದರ್ಶಿ ನವೀನ್ ಕೆ. ಅಡ್ಯಂತಾಯ, ಕೋಶಾಧಿಕಾರಿ ರವೀಂದ್ರನಾಥ ಶೆಟ್ಟಿ, ಡಾ.ರವಿಪ್ರಸಾದ್ ಹೆಗ್ಡೆ, ಡಾ.ಸುಷ್ಮಾ ಆರ್ ಹೆಗ್ಡೆ, ಸದಾನಂದ ಶೆಟ್ಟಿ, ನಿತ್ಯಾನಂದ ಶೆಟ್ಟಿ, ಪ್ರಕಾಶ್ ಶೆಟ್ಟಿ, ಉದಯಕುಮಾರ್ ಶೆಟ್ಟಿ, ರಮೇಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.