Author: admin

ಮಿಜಾರು: ‘ಇಂದಿನ ಡಿಜಿಟಲ್ ಕಾಲಘಟ್ಟದಲ್ಲಿ ಕನ್ನಡದ ಬೆಳವಣಿಗೆಗೆ ತಂತ್ರಜ್ಞಾನದ ಕೊಡುಗೆ ಅತ್ಯವಶ್ಯ ಹಾಗೂ ಅನಿವಾರ್ಯ’ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಕೆ. ಚಿನ್ನಪ್ಪ ಗೌಡ ಹೇಳಿದರು. ಆಳ್ವಾಸ್ ಎಂಜಿನಿಯರಿಂಗ್ಮತ್ತು ತಂತ್ರಜ್ಞಾನ ಕಾಲೇಜು ಕನ್ನಡ ಸಂಘವು ಕಾಲೇಜಿನ ಎಂಬಿಎ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ‘ಕನ್ನಡ ಹಬ್ಬ -2024’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕನ್ನಡ ಭಾಷೆಯ ಅಳಿವು- ಉಳಿವಿಗೆ ತಂತ್ರಜ್ಞಾನದ ಬಳಕೆಯೂ ಮಹತ್ತರವಾಗಿದೆ. ತಂತ್ರಜ್ಞಾನದ ಮೂಲಕ ಕನ್ನಡದ ವ್ಯಾಪ್ತಿ ಮತ್ತು ಸತ್ವವನ್ನು ಹೆಚ್ಚಿಸುವುದು ಹಾಗೂ ಕಂಪನ್ನು ಪಸರಿಸುವುದು ಬಹುಮುಖ್ಯವಾಗಿದೆ. ಭವಿಷ್ಯದ ಪೀಳಿಗೆಗೆ ಕನ್ನಡದ ಪ್ರಸ್ತುತತೆಯನ್ನು ಖಚಿತಪಡಿಸಬಹುದು ಎಂದರು. ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ.ಸತ್ಯನಾರಾಯಣ ಮಲ್ಲಿಪಟ್ಟಣ ಮಾತನಾಡಿ, ಕನ್ನಡ ಭಾಷೆಯು ಆಳವಾದ ಅರ್ಥಗಳನ್ನು ಹೊಂದಿರುವ ಪದಗಳಿಂದ ಕೂಡಿದ ಸಮೃದ್ಧ ಭಾಷೆಯಾಗಿದೆ.  ದೈನಂದಿನ ಸಂಬಂಧಗಳು ಮತ್ತು ಭಾವನೆಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ಕನ್ನಡ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಕನ್ನಡವು ನಮ್ಮ ಜೀವನದ ಹಾಗೂ ಸಂವಹನದ ಅವಿಭಾಜ್ಯ ಅಂಗ ಎಂದರು.  ಕಾಲೇಜಿನ ಪ್ರಾಂಶುಪಾಲ ಡಾ.…

Read More

ವಿದ್ಯಾಗಿರಿ: ‘ವಿದ್ಯಾರ್ಥಿಗಳ ಪ್ರತೀ ಹೆಜ್ಜೆಯಲ್ಲೂ ಗುರುವಿನ ಸ್ಥಾನ ಇರಬೇಕು’ ಇನ್ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟ್ರೀಸ್ ಆಫ್ ಇಂಡಿಯಾದ (ಐಸಿಎಸ್‌ಐ) ಕೇಂದ್ರ ಸಮಿತಿ ಸದಸ್ಯ ಸಿ.ಎಸ್. ದ್ವಾರಕಾನಂದ್ ಹೇಳಿದರು. ಇನ್ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟ್ರೀಸ್ ಆಫ್ ಇಂಡಿಯಾ ಸಹಯೋಗದಲ್ಲಿ ಆಳ್ವಾಸ್ (ಸ್ವಾಯತ್ತ) ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಗುರುವಾರ ನಡೆದ ‘ಶಿಕ್ಷಣ ತಜ್ಞರ ಸಶಕ್ತೀಕರಣ- ಶಿಕ್ಷಕರ ಸಮ್ಮೇಳನ’ದಲ್ಲಿ ಅವರು ಮಾತನಾಡಿದರು. ಇಷ್ಟಪಟ್ಟು ಓದಬೇಕು. ಕಷ್ಟ ಪಟ್ಟು ಓದುವ ಹಾಗೆ ಆಗಬಾರದು. ವಿದ್ಯಾರ್ಥಿಗಳಿಗೆ ಗುರಿ ಅತಿ ಮುಖ್ಯ. ಯಾವುದಕ್ಕಾಗಿ ಓದುತ್ತಿದ್ದೇವೆ ಎನ್ನುವ ಜ್ಞಾನ ನಿಮ್ಮಲ್ಲಿರಬೇಕು. ನಿಮ್ಮ ಸಮಯವನ್ನು ಓದಿಗೆ ಮೀಸಲಿಡಬೇಕು. ಇಷ್ಟ ಪಟ್ಟು ಕೆಲಸ ಮಾಡಿದಾಗ ಅದು ಕಷ್ಟ ವೆನಿಸುವುದಿಲ್ಲ’ ಎಂದರು. ಎಸ್. ಕೆ. ಎಫ್. ಎಲಿಕ್ಸರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನಿರ್ದೇಶಕ ಪ್ರಜ್ವಲ್ ಆಚಾರ್ ಮಾತನಾಡಿ, ಶಿಕ್ಷಕರು ತುಂಬಾ ಸವಾಲುಗಳನ್ನು ಎದುರಿಸಬೇಕಾಗಿದೆ.  ಶಿಕ್ಷಣ ನೀಡುವ ಜೊತೆಗೆ ತಂತ್ರಜ್ಞಾನಕ್ಕೆ ಸ್ಪಂದಿಸಬೇಕು.  ನಾಳೆಯ ಸಮಾಜಕ್ಕೆ ನಾಯಕರನ್ನು ನೀಡುವ ದೊಡ್ಡ ಜವಾಬ್ದಾರಿ ಶಿಕ್ಷಕರ ಹೆಗಲ ಮೇಲೆ ಇದೆ ಎಂದರು.…

Read More

ಯುಎಇ ಬಂಟ್ಸ್ ನ 47 ನೇ ವರ್ಷದ ಬಂಟರ ಕೂಡು ಕಟ್ಟ್ “ಗಲ್ಫ್ ಬಂಟೋತ್ಸವ -2024” ಕಾರ್ಯಕ್ರಮವು ನವೆಂಬರ್ 24 ರಂದು ಅಲ್ ನಸರ್ ಲೆದರ್ ಲ್ಯಾಂಡ್ ನ ಐಸ್ ರಿಂಕ್ ನ ಸಭಾಂಗಣದಲ್ಲಿ ಅದ್ದೂರಿಯಾಗಿ ನಡೆಯಿತು. ಯುಎಇ ರಾಜ್ಯದ ಸಾವಿರಾರು ಬಂಟ ಬಾಂಧವರು ಮತ್ತು ಯುಎಇಯ ತುಳು ಕನ್ನಡ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಇನ್ನಿತರ ಸಮಾಜ ಬಾಂಧವರು ಪಾಲ್ಗೊಂಡಿದ್ದರು. ಬೆಳಿಗ್ಗೆಯಿಂದ ರಾತ್ರಿ ಎಂಟು ಗಂಟೆಯವರೆಗೆ ಸಭಾಂಗಣ ತುಂಬಿ ತುಳುಕುತಿದ್ದ ಕಾರ್ಯಕ್ರಮದಲ್ಲಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು, ಸಭಾ ಕಾರ್ಯಕ್ರಮಗಳು ಮತ್ತು ಪ್ರಶಸ್ತಿ ಪ್ರಧಾನ ಕಾರ್ಯಕ್ರಮಗಳು ವ್ಯವಸ್ಥಿತ ರೂಪದಲ್ಲಿ ಜರಗಿ ನೋಡುಗರಿಗೆ ಸಂತೋಷವನ್ನು ಉಂಟು ಮಾಡಿತ್ತು. ಕೇರಳದ ಚೆಂಡೆ ವಾಲಗ, ಹೆಂಗಳೆಯರು ಕುಂಭ ಕಳಶದೊಂದಿಗೆ, ತುಳುನಾಡಿನ ಪುರಾತನ ವಸ್ತುಗಳನ್ನು ಹಿಡಿದುಕೊಂಡು ಹುಲಿ ವೇಷ ಕುಣಿತದೊಂದಿಗೆ ಮೆರವಣಿಗೆಯ ಮೂಲಕ ಗಣ್ಯಾತಿ ಗಣ್ಯರನ್ನು ಸಭಾಂಗಣಕ್ಕೆ ಬರಮಾಡಿ ಕೊಳ್ಳಲಾಯಿತು. “ಗಲ್ಫ್ ಬಂಟೋತ್ಸವ -2024” ಕಾರ್ಯಕ್ರಮದ ಉದ್ಘಾಟನೆಯನ್ನು ಯುಎಇ ಬಂಟ್ಸ್ ನ ಮಹಾ ಪೋಷಕ ಡಾ| ಬಿ‌.ಆರ್ ಶೆಟ್ಟಿ…

Read More

ಹೊಸತನಕ್ಕೆ ಇನ್ನೊಂದು ಹೆಸರಾಗಿರುವ ವಿಜಯಕುಮಾರ್‌ ಶೆಟ್ಟಿ ಕೊಡಿಯಾಲ್‌ಬೈಲ್‌ ಅವರಿಂದ ತುಳು ನಾಟಕ ರಂಗಕ್ಕೆ ಮತ್ತೊಂದು ವಿನೂತನ ಅದ್ದೂರಿ ನಾಟಕ ಸದ್ಯವೇ ಸೇರ್ಪಡೆಯಾಗಲಿದೆ. ಆ ಮೂಲಕ ತುಳು ರಂಗಭೂಮಿಯ ಕಲಾಮಾತೆಗೆ ಮತ್ತೊಂದು ಚಿನ್ನದ ಕಿರೀಟ ಸಮರ್ಪಣೆಯಾಗಲಿದೆ. ಈಗಾಗಲೇ “ಶಿವದೂತೆ ಗುಳಿಗೆ” ನಾಟಕದ ಮೂಲಕ ಹೊಸ ದಾಖಲೆ ಬರೆದಿರುವ ಹಾಗೂ ಬೇರೆ ಭಾಷೆಯ ರಂಗಕರ್ಮಿಗಳು ತುಳು ರಂಗಭೂಮಿಯನ್ನು ಬೆರಗುಗಣ್ಣಿನಿಂದ ನೋಡುವಂತೆ ಮಾಡಿರುವ ವಿಜಯ ಕುಮಾರ್‌ ಶೆಟ್ಟಿ ಕೊಡಿಯಾಲ್‌ಬೈಲ್‌ ಅವರು ಈ ಬಾರಿ ಚಾರಿತ್ರಿಕ ನಾಟಕದತ್ತ ದೃಷ್ಟಿ ನೆಟ್ಟಿದ್ದಾರೆ. ಈ ಹಿಂದೆ ಸಾಕಷ್ಟು ಹಿಟ್‌ ಸಾಮಾಜಿಕ ನಾಟಕಗಳನ್ನು ನೀಡಿರುವ ಅವರು, ಐತಿಹಾಸಿಕ ಮತ್ತು ಪೌರಾಣಿಕ ನಾಟಕಗಳ ಮೂಲಕ ತುಳು ರಂಗಭೂಮಿಯನ್ನು ಶ್ರೀಮಂತಗೊಳಿಸಿದ್ದಾರೆ. ಇವರು ಶಿವದೂತೆ ಗುಳಿಗನ ನಾಟಕ ಮಾಡಿದ ಬಳಿಕ ಹಲವಾರು ದೈವಪ್ರಧಾನ ನಾಟಕಗಳು, ಸಿನಿಮಾಗಳು ಬಿಡುಗಡೆಗೊಂಡು ಪ್ರದರ್ಶನ ಕಂಡವು. ಬಳಿಕ ದೈವಗಳನ್ನು ನಾಟಕ, ಸಿನಿಮಾಗಳನ್ನು ತೋರಿಸುವುದು ಎಷ್ಟು ಸರಿ ಎಂಬ ಬಗ್ಗೆ ಪರ ವಿರೋಧ ಚರ್ಚೆಗಳೂ ಆರಂಭವಾದವು. ಇದಕ್ಕೆಲ್ಲಾ ತಲೆಕೆಡಿಸಿಕೊಳ್ಳದ ವಿಜಯ ಕುಮಾರ್‌ ಕೊಡಿಯಾಲ್‌ಬೈಲ್‌…

Read More

ತುಳು ಪರಿಷತ್ ಇದರ ನೂತನ ಅಧ್ಯಕ್ಷರಾಗಿ ಕಂಚಿಲ ಶುಭೋದಯ ಆಳ್ವ ಅವರು ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ಮಂಗಳೂರಿನ ಮ್ಯಾಪ್ಸ್ ಕಾಲೇಜಿನಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಉಪಾಧ್ಯಕ್ಷರಾಗಿ ಧರಣೇಂದ್ರ ಕುಮಾರ್, ಡಾ. ಮೀನಾಕ್ಷಿ ರಾಮಚಂದ್ರ, ಚಂದ್ರಕಲಾ ರಾವ್, ಸುಮತಿ ಹೆಗ್ಡೆ ಹಾಗೂ ಗಣೇಶ್ ಪೂಜಾರಿ ಅವರು ಆಯ್ಕೆಯಾದರು. ಪ್ರಧಾನ ಕಾರ್ಯದರ್ಶಿಯಾಗಿ ಬೆನೆಟ್ ಜಿ .ಅಮ್ಮನ್ನ, ಜೊತೆ ಕಾರ್ಯದರ್ಶಿಯಾಗಿ ಜಿನೇಶ್ ಪ್ರಸಾದ್, ರಾಜಶ್ರೀ ಜೆ. ಪೂಜಾರಿ, ಉಮರ್ ಕುಂಞ ಸಾಲೆತ್ತೂರು, ಕೋಶಾಧಿಕಾರಿಯಾಗಿ ಯೋಗೀಶ್ ಕುಮಾರ್, ಕಾರ್ಯಕಾರಿ ಸಮಿತಿಗೆ ಡಾ.ವಾಸುದೇವ ಬೆಳ್ಳೆ, ಭರತೇಶ್ ಅಮೀನ್, ಇಸ್ಮಾಯಿಲ್ ಪೆರಿಂಜೆ, ಶಾಂತಲಾ ಗಟ್ಟಿ, ಕವಿತಾ, ವೀಣಾ ಕಾಮತ್, ವೃಂದಾ ಪ್ರಭು, ಅಲ್ತಾಫ್, ವಿನುತಾ ಶೆಟ್ಟಿ, ಶಾಲಿನಿ ರೈ, ರಮೇಶ್ ಮಂಚಕಲ್, ಡೋನಾಲ್ಡ್ ಪಿರೇರಾ, ಪ್ರೇಮನಾಥ್ ಶೆಟ್ಟಿ ಬಾಳ್ತಿಲ, ಓಸ್ವಾಲ್ಡ್ ಫೆರ್ನಾಂಡೀಸ್ , ರಾಜ ಚಂಡ್ತಿಮಾರ್, ದುರ್ಗಾ ಪ್ರಸಾದ್, ವಿನಯ್ ಟಿ.ಎಸ್, ರಘು ಇಡ್ಕಿದು, ನ್ಯಾನ್ಸಿ ನೋರೋಹ್ನ, ರಾಕೇಶ್ ಕುಂದರ್ ಅವರು ಆಯ್ಕೆಯಾಗಿದ್ದಾರೆ. ಗೌರವ ಅಧ್ಯಕ್ಷರಾಗಿ ಡಾ.…

Read More

ತುಳುನಾಡಿನ ಶ್ರೇಷ್ಠ ಕಲೆಯೆಂದು ಪ್ರಖ್ಯಾತವಾದ ಯಕ್ಷಗಾನ ಎಲ್ಲಾ ಜನರು ಜಾತಿ, ಮತ, ಭೇದವೆನಿಸದೆ ನಂಬಿದ ದೈವಿಕ ಕಲೆಯಾಗಿದೆ. ಯಕ್ಷ ಕಲಾಮಾತೆಯ ಸೇವೆಗೈದ ಅದೆಷ್ಟೋ ಶ್ರೇಷ್ಠ ಕಲಾವಿದರಿಗೆ ಜನ್ಮಕೊಟ್ಟ ಪುಣ್ಯಭೂಮಿ ನೆಲ್ಲಿಕುಂಜದ ನಡುಮನೆ ಎಂಬಲ್ಲಿ ಜನಿಸಿದ ಶೀನಪ್ಪ ಭಂಡಾರಿಯವರು ಮಾವನವರಾದ ಜತ್ತಪ್ಪ ರೈಗಳ ಬಳಿ ಯಕ್ಷಗಾನ ನಾಟ್ಯಾಭ್ಯಾಸ ಮಾಡಿ ಯಕ್ಷರಂಗದ ಸವ್ಯಸಾಚಿ ವೇಷಧಾರಿಯಾಗಿ ಮಿಂಚಿದರು. 25 ವರ್ಷಗಳು ಅದೆಷ್ಟೋ ಮೇಳಗಳಲ್ಲಿ ತಿರುಗಾಟ ಮಾಡಿ, ತಮ್ಮದೇ ಆದ ಬೆಳ್ಳಂಬೆಟ್ಟು ಹಾಗೂ ಆದಿಸುಬ್ರಹ್ಮಣ್ಯ ಎಂಬ ಡೇರೆ ಮೇಳವನ್ನು 50 ವರ್ಷಗಳ ಕಾಲ ನಿರ್ವಹಿಸಿ, ಶ್ರೇಷ್ಠ ಗುರುಸ್ಥಾನದಲ್ಲಿ ನಿಂತು, ಯಕ್ಷಗಾನವನ್ನು ಅದೆಷ್ಟೋ ಶಿಷ್ಯರಿಗೆ ಬೋಧಿಸಿ, ಸಾಮಾಜಿಕ, ಧಾರ್ಮಿಕ ಮತ್ತು ಜಾನಪದ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡವರು 2013ನೇ ಜೂನ್ 6 ರಂದು ದೈವಾಧೀನರಾದರು. ಶೀನಪ್ಪ ಭಂಡಾರಿಯವರ 95 ವರ್ಷಗಳ ಯಕ್ಷ ಪ್ರಯಾಣದ ಘಟ್ಟವನ್ನು ನೆನಪಿನಲ್ಲಿ ಇಟ್ಟುಕೊಂಡು ಅವರ ಸ್ಮರಣಾರ್ಥ ಮಕ್ಕಳು, ಮೊಮ್ಮಕ್ಕಳು, ಶಿಷ್ಯವೃಂದ ಮತ್ತು ಕುಟುಂಬ ವರ್ಗದ ನೇತೃತ್ವದಲ್ಲಿ ಡಿಸೆಂಬರ್ 01ನೇ ತಾರೀಕು ರವಿವಾರದಂದು ಪುತ್ತೂರು ಬನ್ನೂರಿನ…

Read More

ಕಲ್ಯಾಣ್ ಪರಿಸರದ ಪ್ರತಿಷ್ಠಿತ ಸಂಸ್ಥೆ ಆಯೋಜಿಸಿದ ಕರ್ನಾಟಕ ರಾಜ್ಯೋತ್ಸವ ಮತ್ತು ಸಂಸ್ಥೆಯ 22ನೇ ವಾರ್ಷಿಕೋತ್ಸವ ಆಚರಣೆ ಬಹಳ ಅದ್ಭುತವಾಗಿ ನಡೆದಿದೆ. ಈ ಸಂಭ್ರಮದಲ್ಲಿ ಮಹಿಳೆಯರು ಸಂಖ್ಯೆಯ ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದು ಇದನ್ನು ಕಂಡಾಗ ನಿಜವಾಗಿಯೂ ಅವರು ಕನ್ನಡ ಭಾಷೆ, ಕಲೆ, ಸಾಹಿತ್ಯ, ಸಂಸ್ಕಾರ, ಸಂಸ್ಕೃತಿಯ ಆರಾಧಕರೆಂದು ತಿಳಿಯುತ್ತದೆ. ಜಾತಿ ಮತ ಭೇದವನ್ನೆಲ್ಲಾ ಬದಿಗೆ ಸರಿಸಿ ನಾವೆಲ್ಲಾ ಸನಾತನ ಧರ್ಮದ ಮತ್ತು ಕರ್ನಾಟಕದ ರಾಯಭಾರಿಗಳಂತೆ ಇಲ್ಲಿ ಎಲ್ಲರೊಳಗೊಂದಾಗಿ ಬದುಕುವುದಕ್ಕೆ ಪ್ರಯತ್ನಿಸೋಣ ಎಂದು ಬಿಲ್ಲವರ ಅಸೋಸಿಯೇಷನ್ ನ ಮಾಜಿ ಅಧ್ಯಕ್ಷ ಚಂದ್ರಶೇಖರ ಪೂಜಾರಿ ಅವರು ಹೇಳಿದರು. ನವೆಂಬರ್ 17ರಂದು ಅಪರಾಹ್ನ ಕಲ್ಯಾಣ್ ಪಶ್ಚಿಮದ ಪಾಟೀದಾರ್ ನಿಯಂತ್ರಿತ ಸಭಾಗೃಹದಲ್ಲಿ ಕನ್ನಡ ಸಾಂಸ್ಕೃತಿಕ ಕೇಂದ್ರ ಕಲ್ಯಾಣ್ ಆಯೋಜಿಸಿದ ಕರ್ನಾಟಕ ರಾಜ್ಯೋತ್ಸವ ಮತ್ತು ಸಂಸ್ಥೆಯ 22ನೇ ವಾರ್ಷಿಕೋತ್ಸವ ಸಂಭ್ರಮವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಮಾತನಾಡಿದ ಅವರು, ಇಲ್ಲಿಯ ಮತ್ತು ಪರಿಸರದ ಮಹಿಳೆಯರಲ್ಲಿರುವ ಈ ಉತ್ಸಾಹ ಮುಂದಿನ ದಿನಗಳಲ್ಲಿ ಇಮ್ಮಡಿಯಾಗಲಿ. ಶ್ರೀ ಶಕ್ತಿಯ ಕೃಪೆ, ಸಹಕಾರ, ನಾಯಕತ್ವದ ಮಾರ್ಗದರ್ಶನ ನಮ್ಮ…

Read More

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರ ಘನ ಅಧ್ಯಕ್ಷತೆಯಲ್ಲಿ ಡಿಸೆಂಬರ್ 7 ರಂದು ಕುರ್ಲಾ ಪೂರ್ವದ ಬಂಟರ ಭವನದಲ್ಲಿ ವಿಶ್ವ ಬಂಟರ ಸಮಾಗಮ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಗುಜರಾತಿನ ಸೂರತ್ ನ ಜೀವನ್ ಭಾರತಿ ಸಭಾಂಗಣ ನಾನ್ಪುರ ಇಲ್ಲಿ ನವೆಂಬರ್ 24ರಂದು ಒಕ್ಕೂಟದ ಮಹಾ ನಿರ್ದೇಶಕ, ಬರೋಡಾದ ಶಶಿಧರ ಶೆಟ್ಟಿ ಮತ್ತು ನಿರ್ದೇಶಕ ಅಂಕಲೇಶ್ವರದ ರವಿನಾಥ್ ಶೆಟ್ಟಿ, ಸ್ವಾಗತ ಸಮಿತಿಯ ಸಂಚಾಲಕ ರತ್ನಾಕರ್ ಶೆಟ್ಟಿ ಮುಂಡ್ಕೂರು ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಸೂರತ್ ನ ಶಿವರಾಮ ಶೆಟ್ಟಿ, ಅಂಕಲೇಶ್ವರದ ಅಜಿತ್ ಶೆಟ್ಟಿ, ಕರ್ನಾಟಕ ಸಂಘ ಸೂರತ್ ಅಧ್ಯಕ್ಷ ರಾಧಾಕೃಷ್ಣ ಶೆಟ್ಟಿ ಮತ್ತು ಭಾರತ್ ಬ್ಯಾಂಕ್ ಅಧ್ಯಕ್ಷ ಸೂರ್ಯಕಾಂತ್ ಸುವರ್ಣ, ಗುಜರಾತ್ ಬಂಟರ ಸಂಘದ ಪದಾಧಿಕಾರಿಗಳು, ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು, ಹೋಟೆಲ್ ಉದ್ಯಮಿಗಳು, ಸಮಾಜ ಸೇವಕರು ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

Read More

ಮೇಕೋಡು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ದ.ಕ. ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ನಿರ್ದೇಶಕ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಅವರು ರಾಜ್ಯ ಸಹಕಾರ ಹಾಲು ಉತ್ಪಾದಕರ ಮಹಾಮಂಡಳಿ ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಪ್ರಕಾಶ್ಚಂದ್ರ ಶೆಟ್ಟಿ ಅವರು 2023- 24 ನೇ ಸಾಲಿನಲ್ಲಿ 1.06 ಲಕ್ಷ ಲೀಟರ್ ಹಾಲು ಪೂರೈಸಿದ್ದಾರೆ. ಮೇಕೋಡು ಸಂಘದ ಅಧ್ಯಕ್ಷರಾಗಿ 2022 ರಲ್ಲಿ ನೂತನ ಕಟ್ಟಡ, ಶೀತಲೀಕರಣ ಘಟಕ ಸ್ಥಾಪಿಸಿದ್ದರು. ಖಂಬದ ಕೋಣೆ ರೈತರ ಸೇ.ಸ ಸಂಘದ ಅಧ್ಯಕ್ಷರಾಗಿದ್ದು, ಇತ್ತೀಚೆಗಷ್ಟೇ ರಾಜ್ಯಮಟ್ಟದ ಸಹಕಾರಿ ರತ್ನ ಪ್ರಶಸ್ತಿಗೆ ಭಾಜನರಾಗಿದ್ದರು.

Read More

ದೇಶ ವಿದೇಶಗಳಲ್ಲಿ ಹೆಸರು ಗಳಿಸಿದ “ಧರ್ಮದೈವ” ಸಿನಿಮಾ ತಂಡದಿಂದ, ಇನ್ನೊಂದು ಬಹುನಿರೀಕ್ಷೆಯ ಕನ್ನಡ ತುಳು ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಡಾ.ಎಂ. ಮೋಹನ ಆಳ್ವ ಮೂಡುಬಿದಿರೆ ಅರ್ಪಿಸುವ, ಕೃಷ್ಣವಾಣಿ ಪಿಕ್ಚರ್ಸ್ ನವರ ಬಹು ನಿರೀಕ್ಷೆಯ ಕನ್ನಡ ತುಳು ಸಿನಿಮಾ ಧರ್ಮಚಾವಡಿ ಬಹುತೇಕ ತನ್ನ ಚಿತ್ರೀಕರಣವನ್ನು ಮುಗಿಸಿದ್ದು, ಇತ್ತೀಚೆಗೆ ನಡುಬೈಲು ಗುತ್ತು ಮನೆಯಲ್ಲಿ ಖ್ಯಾತ ಚಿತ್ರ ನಿರ್ಮಾಪಕ ನಿರ್ದೇಶಕ ಶಿವದೂತ ಗುಳಿಗೆ ಖ್ಯಾತಿಯ ವಿಜಯ ಕುಮಾರ್ ಕೊಡಿಯಾಲ್ ಬೈಲ್ ದೀಪ ಬೆಳಗಿಸಿ ಚಿತ್ರದ ಪೋಸ್ಟರ್ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಬೂಡಿಯಾರ್ ರಾಧಾಕೃಷ್ಣ ರೈ, ಪ್ರಗತಿ ಸ್ಟಡಿ ಸೆಂಟರ್ ಸಂಚಾಲಕ ಗೋಕುಲ್ ನಾಥ್ ಪಿವಿ, ಅಕ್ಷಯ ಕಾಲೇಜಿನ ಅಧ್ಯಕ್ಷ ಜಯಂತ ನಡುಬೈಲು, ಪುತ್ತೂರು ನಗರ ಸಭೆಯ ಮಾಜಿ ಅಧ್ಯಕ್ಷ ಮಹಮ್ಮದಾಲಿ ಸಂಪ್ಯ ಮೊದಲಾದ ಗಣ್ಯರು ಉಪಸ್ಥಿತರಿದ್ದರು. ನಿತಿನ್ ರೈ ಕುಕ್ಕುವಳ್ಳಿ ನುಳಿಯಾಲು ಕಥೆ ಬರೆದು ನಿರ್ದೇಶಿಸಿರುವ “ಧರ್ಮ ಚಾವಡಿ” ಕನ್ನಡ ತುಳು ಸಿನಿಮಾದ ನಿರ್ಮಾಪಕರು ನಡುಬೈಲು ಜಗದೀಶ್ ಅಮೀನ್, ಸಹ ನಿರ್ಮಾಣ ಸರಿತಾ…

Read More