Author: admin
ಪ್ರತಿಯೊಬ್ಬ ಭಕ್ತನೂ ಅನಾದಿ ಕಾಲದಿಂದಲೂ ತನ್ನ ನಿತ್ಯ ಜೀವನದ ಜಂಜಾಟದ ತನುಮನ ನೆಮ್ಮದಿಗಾಗಿ ಆಶ್ರಯಿಸುವ ತಾಣವೇ ದೇವಾಲಯ. ಅಲ್ಲಿನ ಪ್ರಶಾಂತತೆ, ಗರ್ಭಗುಡಿಯಲ್ಲಿರುವ ಚೈತನ್ಯ ಮೂರ್ತಿಯನ್ನು ಕಾಣುವುದರಿಂದ ಧನ್ಯತಾಭಾವ ಸಿಗುತ್ತದೆ. ಅದಕ್ಕಾಗಿ ಎಷ್ಟೇ ಕಷ್ಟ, ನಷ್ಟ, ತ್ಯಾಗವನ್ನು ಸಹಿಸಿಕೊಂಡು ಜೀವನದಲ್ಲಿ ಒಮ್ಮೆಯಾದರೂ ಪ್ರಮುಖ ದೇಗುಲಗಳಿಗೆ ಹೋಗಬೇಕು ಎಂದು ಬಯಸುವುದು ಸಹಜ. ಇತ್ತೀಚೆಗೆ ಕೆಲವು ದೇವಾಲಯಗಳ ಸಂಪತ್ತು ಬೆಳೆದು ಶ್ರೀಮಂತಿಕೆಯ ಶಿಖರ ಏರುತ್ತಿರುವುದು ಸಂತೋಷ. ಆದರೆ ದೇವರು, ದೇವಾಲಯಗಳು ಅಭಿವೃದ್ಧಿಯಾದಂತೆ ಅಲ್ಲಿ ಬಡವ ಬಲ್ಲಿದ ತಾರತಮ್ಯವನ್ನು ಗಮನಿಸುವಾಗ ದೇವರು ಕೂಡ ಬಡ ಭಕ್ತನನ್ನು ಅವಾಗಣಿಸುತ್ತಿದ್ದಾನೆಯೇ ಎಂಬ ಪ್ರಶ್ನೆ ಮೂಡುವುದು ಸಹಜ. ಕಾರಣ ಆ ಪುಣ್ಯ ಕ್ಷೇತ್ರಗಳಲ್ಲಿ ದೇವರನ್ನು ನೋಡಲು ಹಣ ಕೊಡಬೇಕಾಗಿದೆ. ಹಣವಂತಿಗೆ ವಿಐಪಿ ದರ್ಶನ ಎಂಬ ಹೆಸರಲ್ಲಿ ಶೀಘ್ರ ದರ್ಶನಕ್ಕಾಗಿ ಟಿಕೆಟ್ ವ್ಯವಸ್ಥೆ ಮಾಡಲಾಗುತ್ತಿದೆ. ದಾರಿ ಖರ್ಚಿಗೆ ಮಾತ್ರ ಹಣ ಇಟ್ಟುಕೊಂಡು ಇಂಥ ದೇಗುಲಕ್ಕೆ ಹೋಗುವ ಬಡ ಭಕ್ತರು ಧರ್ಮದರ್ಶನ ಮಾಡಲು 2-3 ದಿನ ಸರತಿ ಸಾಲಿನಲ್ಲಿ ನಿಲ್ಲಬೇಕಾಗುತ್ತದೆ. ದೇವರು ಈ ಅಸಮಾನತೆಯನ್ನು…
ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ), ಸುರತ್ಕಲ್ ಘಟಕದ ಚತುರ್ಥ ವಾರ್ಷಿಕೋತ್ಸವ ಸಮಾರಂಭವು ಎಪ್ರಿಲ್ 14 ರಂದು ಭಾನುವಾರ ಸಂಜೆ 6.30 ಕ್ಕೆ ಸುರತ್ಕಲ್ ಬಂಟರ ಭವನದಲ್ಲಿ ನಡೆಯಲಿದೆ. ಸಮಾರಂಭವನ್ನು ಯಕ್ಷಧ್ರುವ ಯಕ್ಷ ಶಿಕ್ಷಣದ ಪ್ರಧಾನ ಸಂಚಾಲಕ ಪಣಂಬೂರು ವಾಸುದೇವ ಐತಾಳ ದೀಪ ಬೆಳಗಿಸಿ ಉದ್ಘಾಟಿಸಲಿದ್ದಾರೆ. ಪಟ್ಲ ಫೌಂಡೇಶನ್ ಟ್ರಸ್ಟ್ ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿಯವರ ಗೌರವ ಉಪಸ್ಥಿತಿಯಲ್ಲಿ ನಡೆಯುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುರತ್ಕಲ್ ಘಟಕದ ಅಧ್ಯಕ್ಷ ಸುಧಾಕರ ಎಸ್ ಪೂಂಜ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಫೌಂಡೇಶನ್ ನ ಟ್ರಸ್ಟಿ, ಉದ್ಯಮಿ ಚಂದ್ರಶೇಖರ ಮಾಡ ಕುದ್ರಾಡಿಗುತ್ತು, ಕೇಂದ್ರೀಯ ಮಹಿಳಾ ಘಟಕದ ಗೌರವಾಧ್ಯಕ್ಷೆ ಆರತಿ ಆಳ್ವ, ಗೋವಿಂದ ದಾಸ ಕಾಲೇಜ್ ನ ನಿವೃತ್ತ ಉಪ ಪ್ರಾಂಶುಪಾಲ ಪ್ರೊ.ರಮೇಶ್ ಭಟ್ ಯಸ್ ಜಿ, ಲಲಿತಾ ಕಲಾ ಆರ್ಟ್ಸ್ ನ ಮಾಲಕ ಧನಪಾಲ್ ಶೆಟ್ಟಿಗಾರ್ ತಡಂಬೈಲ್ ಭಾಗವಹಿಸಲಿದ್ದಾರೆ. ಸಮಾರಂಭದಲ್ಲಿ ಹಿರಿಯ ಯಕ್ಷಗಾನ ಕಲಾವಿದ ನೆಲ್ಲಿಕಟ್ಟೆ ನಾರಾಯಣ ಹಾಸ್ಯಗಾರ್ ಅವರನ್ನು ಸನ್ಮಾನಿಸಲಾಗುವುದು. ಅದೇ ರೀತಿ ಯಕ್ಷಗಾನ…
45 ವಿದ್ಯಾರ್ಥಿಗಳಿಗೆ ರಾಜ್ಯದ ಟಾಪ್ 10 ಸ್ಥಾನ, 682 ವಿದ್ಯಾರ್ಥಿಗಳು ಶೇಕಡಾ 95 ಕ್ಕಿಂತ ಅಧಿಕ ಅಂಕ ಪಿಯುಸಿ ಇತಿಹಾಸದಲ್ಲಿ ಆಳ್ವಾಸ್ ಸಾರ್ವತ್ರಿಕ ದಾಖಲೆ
ವಿದ್ಯಾಗಿರಿ: ಕರ್ನಾಟಕ ರಾಜ್ಯ ಪದವಿ ಪೂರ್ವ ಶಿಕ್ಷಣದ ಇತಿಹಾಸದಲ್ಲೇ ಆಳ್ವಾಸ್ ಪದವಿ ಪೂರ್ವ ಕಾಲೇಜಿನ 682 ವಿದ್ಯಾರ್ಥಿಗಳು 95% ಶೇಕಡಾಕ್ಕಿಂತ ಅಧಿಕ ಅಂಕವನ್ನು ಪಡೆದು ಹೊಸ ದಾಖಲೆ ನಿರ್ಮಿಸಿದ್ದಾರೆ. ರಾಜ್ಯದ ಟಾಪ್ ಟೆನ್ ರ್ಯಾಂಕ್ನಲ್ಲಿ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ ಒಟ್ಟು 45 ವಿದ್ಯಾರ್ಥಿಗಳು ಸ್ಥಾನವನ್ನು ಪಡೆಯುವ ಮೂಲಕ ಆಳ್ವಾಸ್ ಸಂಸ್ಥೆಯು ಶೈಕ್ಷಣಿಕ ಕ್ಷೇತ್ರದಲ್ಲಿ ಮಹತ್ಸಾಧನೆ ಮೆರೆಯುವಂತೆ ಮಾಡಿದೆ. ವಿಜ್ಞಾನ ವಿಭಾಗದಲ್ಲಿ ನೂತನ ಆರ್ ಗೌಡ, 600ರಲ್ಲಿ 595 ಅಂಕ ಪಡೆದು ರಾಜ್ಯಕ್ಕೆ 4ನೇ ಸ್ಥಾನ ಪಡೆದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ತರುಣ್ ಕುಮಾರ್ ಪಾಟೀಲ್ 594 ಅಂಕ ಪಡೆದು 4ನೇ ಸ್ಥಾನ ಪಡೆದಿದ್ದಾರೆ. ಆಕಾಶ್ ಪಿಎಸ್, ಅನಿರುದ್ಧ ಪಿ ಮೆನನ್, ಸುಮಿತ್ ಸುದೀಂದ್ರ 5ನೇ ರ್ಯಾಂಕ್ ಗಳಿಸಿದರೆ, ಸಹನಾ ಕೆ, ಶಿವಷೇಶ 6ನೇ ರ್ಯಾಂಕ್, ವಾಣಿ ಕೆ, ಮೇಧಾ ವಿ, ಜೀವಿಕಾ ಎಸ್, ಹರೀಶ್ ಉದಯ್, ಭೂಮಿ, ಷಾನ್ ಪಿಂಟೋ, ಅಶೋಕ್ ಸುತಾರ್, ಮಂಜುನಾಥ್ ಡಿ. 7ನೇ ರ್ಯಾಂಕ್ ಪಡೆದ ವಿದ್ಯಾರ್ಥಿಗಳಾಗಿದ್ದಾರೆ.…
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಕರಾವಳಿ ಪ್ರದೇಶದ ಅತ್ಯಂತ ಸೂಕ್ಷ್ಮವಾದ ವ್ಯಾಪಾರ ಪ್ರದೇಶವಾಗಿ ಅದು ‘ಬಂದರು’ ಎಂದೇ ಹೆಸರುವಾಸಿಯಾಗಿದೆ. ಇಲ್ಲಿನ ಬಂದರು ಪ್ರದೇಶದ ಕಠಿಣ ಪರಿಶ್ರಮಿಗಳಿಗೆ ‘ಕಡಲಿನ ಮಕ್ಕಳು’ ಎಂಬ ಹೆಸರೂ ದಾಖಲೆಯಲ್ಲಿದೆ. ಹಗಲು ಇರುಳು ಬಂದರು ಪ್ರದೇಶದ ಚಟುವಟಿಕೆಗಳೆಂದರೆ ಮೀನುಗಾರಿಕೆ. ಈ ಮೀನುಗಾರಿಕೆಯ ಹೆಸರಿನಲ್ಲಿ ಎಲ್ಲಾ ವರ್ಗದವರು ಶಾಮೀಲಾಗಿ ವ್ಯಾಪಾರದ ದೃಷ್ಟಿಯಲ್ಲಿ ಹಣ ಸಂಪಾದಿಸಲು ಟೊಂಕಕಟ್ಟಿ ನಿಂತವರು. ಬಂದರು ಪ್ರದೇಶದಲ್ಲಿ ಪ್ರತಿಯೊಬ್ಬನ ಬದುಕೂ ಅತ್ಯಂತ ಶ್ರಮದಾಯಕವಾದುದು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಅವರ ಜೀವನಕ್ಕೆ ಆಧಾರವಾದ ಪ್ರಮುಖ ಪ್ರದೇಶ ‘ಬಂದರು’ ಯಾವ ರೀತಿಯಲ್ಲಿ ಶುಚಿತ್ವದಿಂದ ಸೊರಗುತ್ತಿದೆಯೆಂದರೆ, ಬಂದರಿನ ಅತೀ ಸೂಕ್ಷ್ಮವಾದ ಸ್ಥಳಗಳೆಲ್ಲಾ ಗಬ್ಬೆದ್ದು ನಾರುತ್ತಿದೆ. ಮೂಗು ಮುಚ್ಚಿಕೊಂಡು ಉಸಿರು ಬಿಗಿ ಹಿಡಿದುಕೊಂಡೇ ಬಂದರು ಪ್ರದೇಶವನ್ನು ಸುತ್ತಾಡುವಷ್ಟರಲ್ಲಿ ನಿಜಕ್ಕೂ ಶುಚಿತ್ವದ ಕೊರತೆ ಕಣ್ಣಿಗೆ ರಾಚುತ್ತದೆ. ದುರ್ವಾಸನೆಯ ಬಂದರು ಪ್ರದೇಶದ ಅವ್ಯವಸ್ಥೆಯನ್ನು ಅವಲೋಕಿಸುವಾಗ, ಸರಕಾರಕ್ಕೆ ಕಡಲಿನ ಮಕ್ಕಳ ಅಥವಾ ಬಂದರು ಪ್ರದೇಶದವರ ಸಂಕಟ ಅರ್ಥವಾಗದಿರುವುದು ವಿಪರ್ಯಾಸವೇ ಸರಿ. ‘ನುಡಿದಂತೆ ನಡೆದಿದ್ದೇವೆ’ ಎಂದು ಹೇಳುತ್ತಿರುವುದು…
ಸಾಮಾನ್ಯ ಅರ್ಥದಲ್ಲಿ ಗ್ರಹಣ ಅಂದರೆ ಹಿಡಿಯುವುದು ಎಂದು. ಪಾಣಿ ಗ್ರಹಣ ಅಂದರೆ ಕೈ ಹಿಡಿಯುವುದು. ಆದರೆ ನಾವು ಸೂರ್ಯ ಚಂದ್ರರಿಗೆ ಗ್ರಹಣ ಹಿಡಿಯುವುದು (ಬಿಡುವುದು) ಎನ್ನುತ್ತೇವೆ. ರಾಹುಗ್ರಸ್ತ ಸೂರ್ಯ, ಚಂದ್ರ ಅಂತಲೂ ಹೇಳುತ್ತೇವೆ. ಮೋಹಿನಿಯ ರೂಪದಲ್ಲಿ ವಿಷ್ಣು ಸುರರಿಗೆ ಅಮೃತ ಬಡಿಸುವಾಗ, ಅಸುರನಾದ ಸ್ವರ್ಭಾನು ವೇಷ ಮರೆಸಿ ಸುರ ಪಂಕ್ತಿಯಲ್ಲಿ ಕುಳಿತು ಅಮೃತ ಸೇವನೆ ಮಾಡಿದನಂತೆ. ಅದನ್ನು ಸೂರ್ಯ ಚಂದ್ರರು ವಿಷ್ಣುವಿಗೆ ತಿಳಿಸಿದ ತಕ್ಷಣ ಆತ ಚಕ್ರದಿಂದ ಇವನ ತಲೆ ಕತ್ತರಿಸಿದ. ಆಮೃತ ಕುಡಿದ ದೆಸೆಯಿಂದಾಗಿ ಆತ ಸಾಯಲಿಲ್ಲ. ರುಂಡ ರಾಹುವಿನ ಹೆಸರಲ್ಲಿ, ಮುಂಡ ಕೇತವಿನ ಹೆಸರಲ್ಲಿ ಸೌರಮಂಡಲದಲ್ಲಿ ಸುತ್ತುತ್ತಾ ಸೂರ್ಯ ಚಂದ್ರರನ್ನು ಪೀಡಿಸುತ್ತಾರೆ. ರಾಹು ನವಗ್ರಹಗಳಲ್ಲಿ ಎಂಟನೆಯವನಂತೆ. ಎಂತಹ ಮೋಸ, ಸುರಾಸುರರು ಒಟ್ಟಾಗಿ ಸಮುದ್ರ ಮಂಥನ ಮಾಡಿ, ಬಂದ ಅಮೃತ ತಾವು ಮಾತ್ರ ಸೇವಿಸಿದ್ದಲ್ಲದೆ, ಕುಡಿದ ಒಬ್ಬ ಅಸುರರನ್ನು ನಾಶಗೊಳಿಸಿದರು. ಇಂತಹ ಒಂದು ಕಟ್ಟು ಪುರಾಣದ ಅಗತ್ಯ ಏತಕ್ಕೆ ಬಂತು? ತಿಳಿಯಲಾರೆ. ಖಗೋಳಶಾಸ್ತ್ರದ ಪ್ರಕಾರ ಭೂಮಿಯ ನೆರಳು ಚಂದ್ರನ ಮೇಲೆ…
ಸಂಸ್ಕೃತ ಭಾಷೆಯನ್ನು ಅಧ್ಯಯನ ಮಾಡುವುದರಿಂದ ಅಪರಿಮಿತ ಜ್ಞಾನ ಸಿದ್ಧಿಯಾಗುತ್ರದೆ. ಸಂಸ್ಕೃತ ಭಾಷೆಯ ಸಂಭಾಷಣೆಯಿಂದ ಮನಸ್ಸಿನ ಸ್ಥಿತಿ ಅತ್ಯಂತ ಶುದ್ಧವಾಗುತ್ತದೆ. ಸಂಸ್ಕೃತ ತಿಳಿದವರು ಎಲ್ಲರ ಜತೆ ಸಂಸ್ಕೃತದಲ್ಲೇ ಸಂಭಾಷಣೆ ಮಾಡುವ ಮೂಲಕ ಭಾಷೆಯನ್ನು ಎಲ್ಲೆಡೆ ಪಸರಿಸಲು ಪ್ರಯತ್ನಿಸಬೇಕು ಎಂದು ಸಂಸ್ಕೃತ ಭಾರತೀಯ ಅಖಿಲ ಭಾರತ ಸಹಶಿಕ್ಷಣ ಪ್ರಮುಖ ಡಾ. ಸಚಿನ್ ಕಠಾಳೆ ಹೇಳಿದ್ದಾರೆ. ಸಂಸ್ಕೃತ ಭಾರತೀ ಮಂಗಳೂರು ವತಿಯಿಂದ ನಗರದ ಡೊಂಗರಕೇರಿಯ ಕೆನರಾ ಹೈಸ್ಕೂಲ್ ನ ಶ್ರೀ ಸುಧೀಂದ್ರ ಸಭಾಭವನದಲ್ಲಿ ನಡೆದ ಸಂಸ್ಕೃತ ಮಹೋದಧಿ ಜನಪದ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ ಸಂಸ್ಕೃತಿ ಮತ್ತು ಪರಂಪರೆ ಸಂಸ್ಕೃತದಲ್ಲಿದೆ. ಭಾರತದಲ್ಲಿ ಯಾವುದೆಲ್ಲ ಉತ್ತಮವಾದುದು ಇದೆಯೋ ಅದನ್ನು ರಕ್ಷಿಸಬೇಕು. ಯಾವುದು ಕೆಡುಕು ಬಯಸುತ್ತದೋ ಅದನ್ನು ನಾಶ ಮಾಡಬೇಕು. ಧರ್ಮ ಪಾಲನೆಯೇ ಧರ್ಮ ರಕ್ಷಣೆ ಎಂದರು. ಅಧ್ಯಕ್ಷತೆ ವಹಿಸಿದ್ದ ಮಂಗಳೂರು ನಗರ ಸಂಸ್ಕೃತ ಭಾರತೀ ಅಧ್ಯಕ್ಷ ಎಂ. ಆರ್. ವಾಸುದೇವ ಮಾತನಾಡಿ, ಸಂಸ್ಕೃತ ಭಾಷೆಯು ಭಾರತೀಯ ಭಾಷೆಗಳಿಗೆ ತಾಯಿ ಸ್ಥಾನದಲ್ಲಿದೆ. ಎಲ್ಲಾ ಕಲೆಗಳಿಗೂ, ವಿಜ್ಞಾನಕ್ಕೂ ಸಂಸ್ಕೃತದ…
ವಿದ್ಯಾಗಿರಿ: “ಉತ್ತಮ ಸಮಾಜವನ್ನು ಕಟ್ಟುವುದರಲ್ಲಿ ಶಿಕ್ಷಕರ ಪಾತ್ರ ಬಹು ಮುಖ್ಯ, ಶಿಕ್ಷಕರಿಗೆ ಎಲ್ಲಾ ಕ್ಷೇತ್ರಗಳಲ್ಲಿ ಆಸಕ್ತಿ ಇರಬೇಕು. ಆಗ ಮಾತ್ರ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ಕಟ್ಟಿಕೊಡಲು ಸಾಧ್ಯ” ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಹೇಳಿದರು. ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಆಳ್ವಾಸ್ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ಭಾರತ್ ಸ್ಕೌಡ್ಸ್ ಮತ್ತು ಗೈಡ್ಸ್ವತಿಯಿಂದ ನಡೆದ ಒಂದು ದಿನದ ಕಾರ್ಯಗಾರದಲ್ಲಿ ಮಾತನಾಡಿದರು. ಶಿಕ್ಷಕ ವೃತ್ತಿಯು ಶೈಕ್ಷಣಿಕ ಹಿನ್ನೆಲೆಯನ್ನು ಅವಲಂಬಿಸಿದೆಯೇ ಹೊರತು ಜಾತಿ ಧರ್ಮವನ್ನಲ್ಲ. ಪರಿಶಿಕ್ಷಣಾರ್ಥಿಗಳಾಗಿ ಮಕ್ಕಳಿಗೆ ಯಾವ ವಿಷಯವನ್ನು ಹೇಗೆ ಕಲಿಸಬೇಕು ಎಂಬುದನ್ನು ತಿಳಿಯುವುದು ಬಹು ಮುಖ್ಯ. ಇದರಿಂದ ಮಕ್ಕಳ ಕಲಿಕೆಗೆ ಸಹಕಾರಿಯಾಗುತ್ತದೆ ಎಂದರು. ಶಿಕ್ಷಕರು ತಾವು ಉತ್ತಮ ಆದರ್ಶಗಳನ್ನು ಪಾಲಿಸುತ್ತಿದ್ದಲ್ಲಿ ಮಾತ್ರ ವಿದ್ಯಾರ್ಥಿಗಳನ್ನು ಸಮಾಜದ ಮಾದರಿ ಪ್ರಜೆಗಳಾಗಿ ರೂಪಿಸಲು ಸಾಧ್ಯ ಎಂದರು. ಶಿಕ್ಷಕರಿಗೆ ಮೊದಲು ಎಲ್ಲಾ ಕ್ಷೇತ್ರಗಳಲ್ಲಿ ಆಸಕ್ತಿ ಇರಬೇಕು. ನಂತರ ವಿದ್ಯಾರ್ಥಿಗಳಿಗೆ ಅವುಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಬೇಕು ಎಂದರು. ಸ್ಕೌಡ್ಸ್ ಮತ್ತು ಗೈಡ್ಸ್ ನಮಗೆ ಸೌಹಾರ್ದತೆಯಿಂದ ಬದುಕಲು…
ಭಾರತೀಯ ಸಂಸ್ಕೃತಿಯಲ್ಲಿ ವಿವಾಹ ಸಂಸ್ಕಾರಕ್ಕೆ ತನ್ನದೇ ಆದ ಮಹತ್ವವಿದೆ. ಹುಡುಗಿ ನೋಡುವ ಶಾಸ್ತ್ರದಿಂದ ಮೊದಲುಗೊಂಡು ವಿವಾಹ ನೆರವೇರಿಸಿ ಹುಡುಗಿಯನ್ನು ಗಂಡನ ಮನೆಗೆ ಕಳುಹಿಸುವ ತನಕವೂ ಆನೇಕ ವಿಧದ ಶಾಸ್ತ್ರಗಳು, ಕಟ್ಟಳೆಗಳು ಜಾರಿಯಲ್ಲಿವೆ. ನಿಶ್ಚಿತಾರ್ಥ ಮತ್ತು ಮೆಹೆಂದಿ ಶಾಸ್ತ್ರವೂ ಇದರಲ್ಲಿ ಪ್ರಾಮುಖ್ಯವಾದುದು. ಬೇರೆ ಬೇರೆ ಜಾತಿ, ವರ್ಣಗಳಲ್ಲಿ ಮತ್ತು ಪ್ರಾದೇಶಿಕವಾಗಿ ಕೆಲವು ಭಿನ್ನತೆಗಳಿರಬಹುದಾದರೂ ಒಟ್ಟಾರೆಯಾಗಿ ಈ ಕ್ರಿಯಗಳಿಗೂ ಸಾಕಷ್ಟು ಧಾರ್ಮಿಕ ಮಹತ್ವವಿದೆ. ಎರಡೂ ಕಡೆಯ ಹಿರಿಯರಿದ್ದು ನಿಶ್ಚಿತಾರ್ಥವಾದ ಬಳಿಕ ಮದುವೆಗೆ ದಿನ ನಿಗದಿಪಡಿಸಲಾಗುತ್ತದೆ. ಮದುವೆಗೆ ಒಂದು ಅಥವಾ ಎರಡು ದಿನ ಮುಂಚಿತವಾಗಿ ನಡೆಯುವ ಒಂದು ವಿಶೇಷ ಸಮಾರಂಭವೇ ಮೆಹೆಂದಿ ಕಾರ್ಯಕ್ರಮ. ಮೆಹೆಂದಿಯನ್ನು ಅರೆದು ಸಿದ್ಧಪಡಿಸಿದ ನಂತರ ನಂಬಿದ ದೈವ ದೇವರಿಗೆ ದೀಪವಿಟ್ಟು ಎಲ್ಲರೂ ಸೇರಿ ಪ್ರಾರ್ಥನೆ ಸಲ್ಲಿಸಿದ ನಂತರ ಮನೆಯ ಚಾವಡಿಯಲ್ಲಿ ಅಥವಾ ಸೆಗಣಿ ಸಾರಿಸಿದ ಅಂಗಳದಲ್ಲಿ ತುಳಸಿಕಟ್ಟೆಯ ಎದುರು ಚಾಪೆ ಹಾಸಿ ವಧು ಅಥವಾ ವರನನ್ನು ಕುಳ್ಳಿರಿಸಿ ಬಂಧುಗಳು ಅಪ್ತರೆಲ್ಲ ಸೇರಿ ಸಂಭ್ರಮಿಸುತ್ತಿದ್ದ ಮೆಹೆಂದಿ ಕಾರ್ಯಕ್ರಮ ಸರಳ ಸಸ್ಯಾಹಾರಿ ಊಟದೊಂದಿಗೆ ಕೊನೆಗೊಳ್ಳುತ್ತಿತ್ತು.…
ವಿದ್ಯಾಗಿರಿ: ಇಲ್ಲಿನ ವಾಮದಪದವು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಏಪ್ರಿಲ್ 5 ಮತ್ತು 6ರಂದು ನಡೆದ ಮಂಗಳೂರು ವಿಶ್ವವಿದ್ಯಾಲಯ ಅಂತರ ಕಾಲೇಜು ಪುರುಷರ ಮತ್ತು ಮಹಿಳೆಯರ ಖೋ-ಖೋ ಕ್ರೀಡಾಕೂಟದಲ್ಲಿ ಆಳ್ವಾಸ್ ಕಾಲೇಜು ಸಮಗ್ರ ಪ್ರಶಸ್ತಿ ಪಡೆದಿದೆ. ಪುರುಷರ ಫೈನಲ್ ಪಂದ್ಯದಲ್ಲಿ ಆತಿಥೇಯ ವಾಮದಪದವು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತಂಡವನ್ನು ಮಣಿಸಿದ ಆಳ್ವಾಸ್ ಕಾಲೇಜು ಸತತ 16ನೇ ಬಾರಿ ಚಾಂಪಿಯನ್ ಆಯಿತು. ಮಹಿಳೆಯರ ವಿಭಾಗದಲ್ಲೂ ಆತಿಥೇಯ ಕಾಲೇಜನ್ನು ಫೈನಲ್ನಲ್ಲಿ ಮಣಿಸಿದ ಆಳ್ವಾಸ್ ಕಾಲೇಜು ಮಹಿಳಾ ತಂಡವು 12ನೇ ಬಾರಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿಕೊಂಡಿತು. ಒಟ್ಟು ಪುರುಷರ ವಿಭಾಗದಲ್ಲಿ 20 ತಂಡಗಳು ಹಾಗೂ ಮಹಿಳೆಯರ ವಿಭಾಗದಲ್ಲಿ 18 ತಂಡಗಳು ಭಾಗವಹಿಸಿದ್ದವು. ಇದರಲ್ಲಿ ಚಾಂಪಿಯನ್ ಶಿಪ್ ರೌಂಡ್ ನ ಫೈನಲ್ ಪಂದ್ಯಾಟದಲ್ಲಿ ಆಳ್ವಾಸ್ ಪುರುಷರ ತಂಡವು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಾಮದಪದವು ತಂಡವನ್ನು ಮಣಿಸಿ ಸತತ 16ನೇ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿತು ವಿಜೇತ ತಂಡದ ಆಟಗಾರರನ್ನು ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ…
ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನಲ್ಲಿ ತಂತ್ರಜ್ಞಾನ ಕೇಂದ್ರ ಶಿಕ್ಷಣದ ಜೊತೆಗೆ ಕೌಶಲ ವೃದ್ಧಿಯು ಬಹಳ ಮುಖ್ಯ
ಮೂಡುಬಿದಿರೆ: ಶಿಕ್ಷಣದ ಜೊತೆಗೆ ಕೌಶಲ ವೃದ್ಧಿಯು ಬಹಳ ಮುಖ್ಯ ಎಂದು ನವದೆಹಲಿಯ ಎಐಸಿಟಿಇ ಅಧ್ಯಕ್ಷ ಪ್ರೊ.ಟಿ. ಜಿ. ಸೀತಾರಾಮ್ ಹೇಳಿದರು. ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನಲ್ಲಿ ಶನಿವಾರ ನಡೆದ ತಂತ್ರಜ್ಞಾನ ಕೇಂದ್ರ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಾವು ಈಗ ಅಮೃತ ಕಾಲದಲ್ಲಿ ಇದ್ದೇವೆ. ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲು ಎಂಜಿನಿಯರಿಂಗ್ ಮತ್ತು ನಿರ್ವಹಣಾ ವಲಯದ ಪಾತ್ರ ಪ್ರಮುಖವಾದದ್ದು ಎಂದರು. ಸಂಶೋಧನೆ, ಆವಿಷ್ಕಾರ, ಉದ್ಯಮಶೀಲತೆ, ಸ್ಟಾರ್ಟ್ಅಪ್ಗಳ ಪ್ರಚುರತೆಯಿಂದ ವಿಕಸಿತ ಭಾರತದ ಹಾದಿ ಸುಲಭ. ಇವುಗಳ ಜೊತೆಯಲ್ಲಿ ತಂತ್ರಜ್ಞಾನ ಹಾಗೂ ನಿರ್ವಹಣೆಯಿಂದ ಭಾರತವು ವಿಶ್ವಗುರು ಆಗಲು ಸಾಧ್ಯ ಎಂದರು. ಭಾರತದಲ್ಲಿ 1.25 ಲಕ್ಷ ಸ್ಟಾರ್ಟ್ ಅಪ್ಗಳಿದ್ದು, ಪ್ರಪಂಚದಲ್ಲೆ ಮೂರನೇ ಅತೀ ದೊಡ್ಡ ಸ್ಟಾರ್ಟ್ ಅಪ್ ರಾಷ್ಟ್ರ ಎನಿಸಿಕೊಂಡಿದೆ. ಬಹುಶಿಸ್ತೀಯ ಸಂಶೋಧನಾ ಅನ್ವೇಷಣೆಯಿಂದಾಗಿ ನಮ್ಮ ದೇಶದ ಐಐಟಿಗಳು ಜಾಗತಿಕ ಮಟ್ಟದ ಗುಣಮಟ್ಟವನ್ನು ತಲುಪುವಂತಾಗಿದೆ. ನಮ್ಮ ದೇಶದಲ್ಲಿ ಪ್ರತಿ ವರ್ಷ 1.25 ಮಿಲಿಯನ್ ಇಂಜಿನಿಯರಿಂಗ್ ಪದವೀಧರರು ಶಿಕ್ಷಣ ಮುಗಿಸುತ್ತಾರೆ. ಕಾಲೇಜುಗಳು ಶಿಕ್ಷಣ ಹಂತದಲ್ಲಿ ಕೌಶಲ್ಯದ…