Author: admin

ವಿದ್ಯಾಗಿರಿ: ಯಾವುದೇ ಉತ್ತಮ ಕಾರ್ಯವು ಎಲ್ಲರಿಗೆ ತಲುಪುವುದು ಬಹುಮುಖ್ಯ ಎಂದು ಆಳ್ವಾಸ್ ಶಿಕ್ಷಣ ಪ್ರತಿμÁ್ಠನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಹೇಳಿದರು. ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಆಸ್ಪತ್ರೆ, ಮಂಗಳೂರಿನ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ನೇತ್ರಾಜ್ಯೋತಿ ಚಾರಿಟೇಬಲ್ ಟ್ರಸ್ಟ್ ಮಂಗಳೂರು, ಆದಿ ದ್ರಾವಿಡ ಸಮಾಜ ಸೇವಾ ಸಂಘ(ರಿ.) ಮೂಡುಬಿದಿರೆ, ಸಮಗಾರ ಸಮಾಜ, ಮರಾಟಿ ಸಮಾಜ ಸೇವಾ ಸಂಘ(ರಿ.) ಮೂಡುಬಿದಿರೆ, ಪಾಣಾರ ಅಜಲಯಾನೆ ನಲಿಕೆಯವರ ಸಮಾಜ ಸೇವಾ ಸಂಘ(ರಿ.) ಮೂಡುಬಿದಿರೆ ತಾಲೂಕು, ದಕ್ಷಿಣ ಕನ್ನಡ ಜಿಲ್ಲಾ ಪರವನ್ ಸಮಾಜ ಸುಧಾರಕರ ಸಂಘ(ರಿ.) ಹಂಡೆಲು, ಪುತ್ತಿಗೆ ಮೂಡುಬಿದಿರೆ, ಮುಗೇರ ಸಮುದಾಯ ಮತ್ತು ಕೊರಗ ಸಮುದಾಯ ಇವರ ಸಂಯುಕ್ತ ಆಶ್ರಯದಲ್ಲಿ ಆಳ್ವಾಸ್ ಆಯುರ್ವೇದ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ನಡೆದ ಉಚಿತ ನೇತ್ರ ತಪಾಸಣಾ ಶಿಬಿರ ಮತ್ತು ಕನ್ನಡಕ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಯಾವುದೇ ಒಂದು ಒಳ್ಳೆಯ ಕೆಲಸವನ್ನು ಮಾಡುವಾಗ ಒಂದು ಸಮುದಾಯಕ್ಕೆ ಸೀಮಿತವಾಗಿರದೆ ಎಲ್ಲರಿಗೂ ತಲುಪುವಂತೆ ಮಾಡುವುದು ನಮ್ಮ…

Read More

ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ ನ ಆಶ್ರಯದಲ್ಲಿ ಪ್ರತಿ ವರ್ಷದಂತೆ ಜಿಲ್ಲೆಯ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಈಜು ಮತ್ತು ಲಾನ್ ಟೆನಿಸ್ ನಲ್ಲಿ ಬೇಸಗೆ ತರಬೇತಿ ಶಿಬಿರವನ್ನು ಎಪ್ರಿಲ್ 1 ರಿಂದ ಮೇ 31ರವರೆಗೆ ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ಅತ್ಲೆಟಿಕ್ ಅಸೋಸಿಯೇಷನ್ ಅಧ್ಯಕ್ಷ ಹರಿಪ್ರಸಾದ್ ರೈ ಉದ್ಘಾಟಿಸಿ ಮಕ್ಕಳು ತಮ್ಮ ರಜಾ ದಿನಗಳನ್ನು ಇಂತಹ ಶಿಬಿರದಲ್ಲಿ ಭಾಗವಹಿಸಿ, ತಮ್ಮ ಅಮೂಲ್ಯವಾದ ಸಮಯವನ್ನು ಸದುಪಯೋಗಗೊಳಿಸಬೇಕು. ಕ್ರೀಡೆಯು ಮಕ್ಕಳಲ್ಲಿ ಶಿಸ್ತು ಮತ್ತು ಸಂಯಮವನ್ನು ಕಲಿಸುವುದಲ್ಲದೇ ಅವರ ಜೀವನದ ಯಶಸ್ಸಿಗೂ ಕೂಡ ಕಾರಣವಾಗುತ್ತದೆ ಎಂದರು. ಮುಖ್ಯ ಅತಿಥಿ ಆರೂರು ಶ್ರೀ ವಿಷ್ಣುಮೂರ್ತಿ ಪ್ಯೂಯೆಲ್ಸ್ ಮತ್ತು ಸರ್ವಿಸಸ್ ನ ಮೂಲಕ ಶ್ರೀಧರ್ ವಿ. ಶೆಟ್ಟಿ ಶುಭ ಕೋರಿದರು. ಕ್ಲಬ್ ನ ಅಧ್ಯಕ್ಷ ಎ. ಮಹೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ಎಂ. ಚಂದ್ರಶೇಖರ್ ಹೆಗ್ಡೆ ಸ್ವಾಗತಿಸಿ, ಕ್ರೀಡಾ ಕಾರ್ಯದರ್ಶಿ ವಿಕ್ರಂ ಪ್ರಭು ಕಾರ್ಯಕ್ರಮ ಸಂಯೋಜಿಸಿದರು. ಕಾರ್ಯದರ್ಶಿ ಮೇಜರ್ ಜಿ. ಬಾಲಕೃಷ್ಣ ಶೆಟ್ಟಿ ವಂದಿಸಿದರು. ಪದಾಧಿಕಾರಿಗಳು, ಕಾರ್ಯಾಕಾರಿ ಸಮಿತಿಯ ಸದಸ್ಯರು, ಪೋಷಕರು…

Read More

‘ಪೆತ್ತನೊಂಜಿ ಪಿದಾಯಿ ಕೊನೊದು ಮೇಪುಗು ಕಟ್ಟ್’ ಪಂಡೆರ್ ಅಪ್ಪೆ. ಪೆತ್ತದ ಕೆಕ್ಕಿಲ್ ಗ್ ಅಲಸ್ ಬಲ್ಲ್ ಪಾಡ್ದ್ , ಕೊನೊದು ಕಿದೆ ಬಾಕಿಲ್ದ ಬೀಜದ ತಯಿಕ್ ಕಟ್ ದ್, ಪಾರ್ ಬತ್ತ್ ದ್ ಕತೆ ಪುಸ್ತಕ ಪತ್ ದ್ ಕುಲ್ಲಿಯೆ. ಎನ್ನಪ್ಪೆ ಜಾಲ್ ದ ಕೋಡಿಗ್ ಪೋದು ತೂಯಿನಾರ್ “ನಂಕ್ ದತ್ತ್ ಕಯಿ ಪೀಂಕನ್ ಗ್ ಮುಟ್ಟ. ಮೂಜಿ ದಿನೊಡ್ದಿಂಚಿ ಕೊನೊದ್ ಆ ಬೀಜದ ತೈಕ್ ಅಕ್ಕುಡುವ ಅತ್ತಾ, ಅಲ್ಪ ದಾದ ಅವು ಮೂತಾಯಿದ ಮನ್ನ್ ಗರ್ಪುನಾ?” ಪಂದ್, ಪೆತ್ತನ್ ಬುಡ್ದ್ ಅಕರ ಕುಲೆಂಜಿಗ್ ದೇರೊಂದು ಪೋಯೆರ್. ಒವುಲ ಒಂಜಿ ಸುಲಬೊಡು ಕಯಿಕ್ ತಿಕಿನ ವಸ್ತ್ ಲೆನ್ ಗಲಸುವ ನಮ. ಮುಟ್ಟದ ಅಂಗಡಿಡ್ದ್ ಸಾಮಾನ್ ಕನಪ. ಗಿಲೀಟ್ (ಮದನ ಕಯಿ)ಡ್ ಅತ್ತ್ ಡ ಅಜೆಟ್ ಪಾಡ್ದಿನ (ಮೆಯಿಕ್ ಪಾಡ್ದ್ ಗೆತ್ತ್ ದೀಯಿನ) ಅಂಗಿ ಕುಂಟು ತಿಕ್ಕಾವೊಂಬ. ಇಂಚ ಪೂರಾ ಸುಲಬೊಡು ಬೇಲೆ ಸುದಾರ್ಪೆರೆ ತೂಪ. ಸುಕ ನಾಡುವ. ಉಂದೆನೇ ಅಬ್ಬೇಸ (ಅಭ್ಯಾಸ…

Read More

ಆಕೆಗೆ ಅಂದು 20ರ ಹರೆಯ. ಹಾಗೂ ಹೀಗೂ ಡಿಗ್ರಿ ಕಂಪ್ಲೀಟ್‌ ಆಯ್ತು. ಮುಂದೇನು ಅನ್ನೋದು ಅವಳ ಪ್ರಶ್ನೆಯಾಗಿತ್ತು. ಅಷ್ಟರಲ್ಲೇ ದೂರದ ಊರಿನಿಂದ ಒಂದು ಕೆಲಸ ಅವಳನ್ನರಸಿಕೊಂಡು ಬಂತು. ಆದರೆ ಒಬ್ಬಳೇ ಹೋಗುವುದು ಆಕೆಗೆ ಸ್ವಲ್ಪ ಸವಾಲಾಗಿತ್ತು. ಗೊತ್ತಿಲ್ಲದ ಭಾಷೆ, ಪರಿಚಯವಿಲ್ಲದ ಜನ, ಹೊಸ ಊರು ಹೇಗೋ ಏನೋ ಎಂಬ ಭಯ ಆಕೆಯ ಮನಸ್ಸಲ್ಲಿತ್ತು. ಆದರೆ ಮನೆಯಲ್ಲಿನ ಆರ್ಥಿಕ ಸಮಸ್ಯೆ ಆಕೆಯನ್ನು 800 ಕಿ.ಮೀ. ದೂರದ ಊರಿಗೆ ಕೊಂಡೊಯ್ದಿತು. ಅದೊಂದು ದೊಡ್ಡ ಆಫೀಸ್‌. ಸಾವಿರಾರು ಜನ ಉದ್ಯೋಗಿಗಳು. ಸಣ್ಣಪುಟ್ಟ ಕಚೇರಿಗಳನ್ನು ನೋಡಿದ್ದ ಅವಳಿಗೆ ಮೊದಲನೇ ಸಲ ಅಷ್ಟು ದೊಡ್ಡ ಆಫೀಸ್‌ ಕಂಡು ತಲೆ ತಿರುಗಿದಂತಾಗಿತ್ತು. ಮನಸ್ಸಲ್ಲೇ ಧೈರ್ಯ ಮಾಡಿ ಪ್ರವೇಶಿಸಿದಳು. ಕೆಲಸ ಕಲಿಯಲು ಶುರು ಮಾಡಿದಳು. ಹೀಗೆ ನೋಡ ನೋಡುತ್ತಿದ್ದಂತೆ ಆರು ತಿಂಗಳು ಕಳೆದೇ ಬಿಟ್ಟಿತ್ತು. ನಗುನಗುತ್ತಾ ಎಲ್ಲರ ಜತೆ ಮಾತನಾಡುತ್ತಿದ್ದ ಆಕೆಗೆ ಅಲ್ಲಿ ಇಬ್ಬರು ಅಣ್ಣಂದಿರು ಸಿಕ್ಕರು. ಯಾವುದೇ ಪ್ರಣಯ ಪ್ರೀತಿ ಅಂತ ಹೋಗದ ಆ ನಿಷ್ಕಲ್ಮಶ ಜೀವಕ್ಕೆ ಈ ಅಣ್ಣಂದಿರ…

Read More

ಮತದಾನ ಮಾಡೋಣ ಬನ್ನಿ ಗೆಳೆಯರೇ ಹಿತವಾದ ಸರಕಾರ ನಾವು ರಚಿಸೋಣ. ಮತ ಬೇಟೆಯಾಡುವವರ ತಿಳಿದು ಓಟು ನೀಡಿರಿ ಜತನದಿಂದ ಯೋಗ್ಯರನ್ನು ಗುಪಿತದಿಂದ ಆರಿಸಿರಿ ಬನ್ನಿ ಮತ ಭಾಂದವರೇ ನಾವು ಮತ ಹಾಕೋಣ ಮನ್ನಿಸುತ ನಮ್ಮ ಹಕ್ಕ ಒಮ್ಮತದಿ ಬಾಳೋಣ ಅಣ್ಣ ಬನ್ನಿ ಅಕ್ಕ ಬನ್ನಿ ಹಿಂಜರಿಯ ಬೇಡಿರಿ ಹೆಣ್ಣು ಗಂಡು ಭೇದವಿಲ್ಲ ಮತದಾನ ಮಾಡಿರಿ. ಓಟು ಎಂಬುದೊಂದು ನಮ್ಮ ಜನ್ಮಸಿದ್ಧ ಹಕ್ಕದು ನೋಟಿಗಾಗಿ ಓಟನೆಂದು ಮಾರಿಕೊಳ್ಳಬೇಡಿರೋ ಸೂಟು ಬೂಟು ಹಾಕಿದವರು ರಾಜರಲ್ಲ ತಿಳಿಯಿರಿ ಓಟು ಹಾಕುವವರೆ ಇಲ್ಲಿ ರಾಜ ಮಹಾರಾಜರು ಐದು ವರ್ಷಕ್ಕೊಂದು ಹಬ್ಬ ಚುನಾವಣೆ ಬಂದಿದೆ ಕೈದುವಿದು ನಮ್ಮ ಕೈಲಿ ಭ್ರಷ್ಟತೆಯ ತಡೆಯಲು ಹೊಸ ಮತದಾರರೇ ಹುರುಪಿನಿಂದ ನುಗ್ಗಿರಿ ಕೊಸರದಿರಿ ಹಿರಿಯರೇ ಭವಿಷ್ಯವನ್ನು ಬರೆಯಿರಿ ಹಣ ಹೆಂಡ ಸೀರೆ ಎಂದು ಮರುಳಾಗಬೇಡಿ ನೀವು ಸುಳ್ಳು ಸುದ್ಧಿ ಕೇಳಿ ನಂಬಿ ಮತ ಹಾಳು ಮಾಡದಿರಿ ಓಟು ಹಾಕಿ ಮತ್ತೆ ನಿಮ್ಮ ಕೆಲಸದತ್ತ ನಡೆಯಿರಿ ಸುಭದ್ರ ದೇಶಕ್ಕಾಗಿ ಸ್ವಾರ್ಥ ಬಿಟ್ಟು ಬಾಳಿರಿ ಭಾಸ್ಕರ…

Read More

ಕರ್ನಾಟಕ ಪೊಲೀಸ್ ಇಲಾಖೆಯೊಳಗೆ ದಾರ್ಶನಿಕ ಮತ್ತು ಡೈನಾಮಿಕ್ ಆಗಿ ಇದ್ದ ಹಿರಿಯ ಐಪಿಎಸ್ ಅಧಿಕಾರಿ ಅಂದ್ರೆ ಇಂದಿಗೂ ಖ್ಯಾತಿ ಹೊಂದಿರುವ ಡಾ.ಕೆ.ಮಧುಕರ್ ಶೆಟ್ಟಿಯವರು 19 ವರ್ಷಗಳ ಸೇವಾ ಅವಧಿಯಲ್ಲಿ ಅಪೂರ್ವವಾದ ಹೆಜ್ಜೆ ಗುರುತುಗಳನ್ನು ಮೂಡಿಸಿದವರು. ಆಶಕ್ತರಿಗೆ ರಕ್ಷಕನಾಗಿ, ಅಧೀನ ಅಧಿಕಾರಿಗಳು ಸಿಬ್ಬಂದಿಗೆ ಮಾತೃ ಹೃದಯಿಯಾಗಿ, ಭ್ರಷ್ಟರು ಮತ್ತು ಕಾನೂನು ಬಂಜಕರಿಗೆ ಸಿಂಹ ಸ್ವಪ್ನನಾಗಿದ್ದಂತಹ ಒಬ್ಬ ನಿಷ್ಠಾವಂತ ಅಧಿಕಾರಿ. ಖ್ಯಾತ ಪತ್ರಕರ್ತ ದಿವಂಗತ ವಡ್ಡರ್ಸೆ ರಘುರಾಮ್ ಶೆಟ್ಟಿ ಅವರ ಪುತ್ರ ನೇ ಈ ಐ.ಪಿ.ಎಸ್ ಮಧುಕರ್ ಶೆಟ್ಟಿ. “ಮಗನಿಗಾಗಿ ಆಸ್ತಿ ಮಾಡುವುದಿಲ್ಲ, ಮಗನನ್ನೇ ಆಸ್ತಿ ಮಾಡುತ್ತೇನೆ” ಎಂದು ಅವತ್ತೇ ಹೇಳಿದ್ದರು. ಮತ್ತೆ ನುಡಿದಂತೆಯೇ ನಡೆದು ಬಿಟ್ಟರು ನಮ್ಮ ವಡ್ಡರ್ಸೆ ರಘುರಾಮ ಶೆಟ್ಟರು. ಈ ಸಮಾಜದ ಆಸ್ತಿಯನ್ನೇ ಮಾಡಿ ನಮಗೆಲ್ಲಾ ಬಿಟ್ಟು ಹೋದರು. ಪತ್ರಕರ್ತ ವಡ್ಡರ್ಸೆ ರಘುರಾಮ ಶೆಟ್ಟಿಯವರ ಮಗನಾದ ಮಧುಕರ ಶೆಟ್ಟಿ ಜನಿಸಿದ್ದು 1971ರ ಡಿಸೆಂಬರ್ 17 ರಂದು ಉಡುಪಿ ಜಿಲ್ಲೆಯ ವಡ್ಡರ್ಸೆ ಎಂಬಲ್ಲಿ. ದೆಹಲಿಯ ಪ್ರತಿಷ್ಠಿತ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಸಮಾಜ…

Read More

ಸಾಲಿಗ್ರಾಮ ಹಾಗೂ ಇತರ ಮೂರ್ತಿಗಳನ್ನು ಅರ್ಚಕರು ಮತ್ತು ಆಡಳಿತ ವರ್ಗದ ವೈದಿಕರು ಇರಿಸುತ್ತಾರೆ. ಇವುಗಳೆಲ್ಲ ಅವರ ಮನೆಯ ಅಥವಾ ಕುಟುಂಬಕ್ಕೆ ಸೇರಿದವುಗಳು. ಅವುಗಳಿಗೆ ಮನೆಯಲ್ಲಿ ನಿತ್ಯ ನೈವೇದ್ಯ ಪೂಜೆ ಮಾಡಬೇಕಾಗಿದೆ. ಅದಕ್ಕಾಗಿ ದೇವಸ್ಥಾನದಲ್ಲಿಟ್ಟರೆ, ದೇವರೊಂದಿಗೆ ಇವುಗಳಿಗೂ ಪೂಜೆಯಾಗುತ್ತದೆ. ಮಾತ್ರವಲ್ಲದೇ ಕೆಲವು ತಂತ್ರಿಗಳ ಮನೆದೇವರು ಕೂಡಾ ದೇವಾಲಯದಲ್ಲಿ ಆಶ್ರಿತವಾಗಿವೆ ಎಂದು ತಿಳಿಯಿತು. ವಿಚಿತ್ರ ಎಂದರೆ ಕೆಲವು ದೇವಸ್ಥಾನಗಳಲ್ಲಿ ಐದಾರು ಸಾಲಿಗ್ರಾಮ ಮೂರ್ತಿಗಳಿವೆಯಂತೆ. ಹಿಂದೆ ಪೂಜೆ ಬಿಟ್ಟು ಹೋದ ಅರ್ಚಕರದ್ದೂ ಇವೆಯಂತೆ. ವಿಚಿತ್ರವಾದರೂ ಇದು ಸತ್ಯ. ದುರಾದೃಷ್ಟವೆಂದರೆ ಹೀಗೆ ದೇವರ ಪೀಠದಲ್ಲಿ ಇಟ್ಟವರ ನಂಬಿಕೆಯಂತೆ ಖಂಡಿತವಾಗಿಯೂ ಕ್ಷೇತ್ರದ ದೇವರಿಗೂ ತೃಪ್ತಿ ಇಲ್ಲದೇ ಪರಿಣಾಮ ಸಂತಾನ ಕ್ಷಯಾದಿ ಘೋರ ದುರಿತಗಳಿಗೆ ಹೇತುವಾಗಲಿದೆ ಎಂದು ತಿಳಿದು ಬಂದಿದೆ. ಆ ಅಪ್ರಿಯ ಸತ್ಯವನ್ನು ತೆರೆದಿಟ್ಟವರು ಕೂಡ ಓರ್ವ ಸಂಸ್ಕಾರವಂತ ವಿಪ್ರೋತ್ತಮ ಕುಲದ ಯುವ ದಿಟ್ಟ ದೈವಜ್ಞರು, ಜ್ಯೋತಿಷ್ಯದಲ್ಲಿ ಪಿಎಚ್ ಡಿ ಮಾಡಿದ ಬೆರಳೆಣಿಕೆಯಲ್ಲಿ ಒಬ್ಬರಾಗಿದ್ದಾರೆ. ದೇವರು, ಪ್ರಶ್ನೆ ಕೇವಲ ಹಣ ಸಂಪಾದನೆಯಲ್ಲ, ದೇವ ಮಂದಿರದ ಅನಿಷ್ಟ ನಿವಾರಣೆಯಾಗಿ ನಾಡಿಗೆ…

Read More

ಶಿಬರೂರಿನಲ್ಲಿ ಇದೇ ತಿಂಗಳ ಎಪ್ರಿಲ್ 22 ರಿಂದ ಆರಂಭಗೊಳ್ಳುವ ಬ್ರಹ್ಮ‌ಕಲಶೋತ್ಸವ ಮತ್ತು ನಾಗಮಂಡಲದ ಪೂರ್ವಭಾವಿಯಾಗಿ ಚಪ್ಪರ ಮುಹೂರ್ತವನ್ನು ತಂತ್ರಿವರೇಣ್ಯ ವೇದಮೂರ್ತಿ ವೇದವ್ಯಾಸ ತಂತ್ರಿಗಳ ಪೌರೋಹಿತ್ಯದಲ್ಲಿ ಧಾರ್ಮಿಕ‌ ಮುಂದಾಳು ಶೆಡ್ಡೆ ಮಂಜುನಾಥ ಭಂಡಾರಿ ನೆರವೇರಿಸಿದರು. ಶಿಬರೂರು ಶ್ರೀ ಉಳ್ಳಾಯ ಮತ್ತು ಕೊಡಮಣಿತ್ತಾಯ ದೈವಸ್ಥಾನದಲ್ಲಿ ಎಪ್ರಿಲ್ 26 ರಂದು ಬ್ರಹ್ಮಕುಂಭಾಭಿಷೇಕ ಮತ್ತು ನಾಗಮಂಡಲ ನಡೆಯಲಿದೆ. ಬಳಿಕ ಎಪ್ರಿಲ್ 30 ರವರೆಗೆ ವಿಶೇಷ ಜಾತ್ರಾ ಮಹೋತ್ಸವ ನಡೆಯಲಿದೆ. ಶಿಬರೂರುಗುತ್ತು ಗುತ್ತಿನಾರ್ ಉಮೇಶ್ ಎನ್ ಶೆಟ್ಟಿ, ಜೀರ್ಣೋದ್ದಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಪ್ರಭಾಕರ ಎಸ್ ಶೆಟ್ಟಿ ಕೋಂಜಾಲಗುತ್ತು, ಕುಡುಂಬೂರುಗುತ್ತು ಜಯರಾಮ ಶೆಟ್ಟಿ, ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಪ್ರದ್ಯುಮ್ನ ರಾವ್ ಕೈಯೂರುಗುತ್ತು, ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ, ಮೊಕ್ತೇಸರ ಎಂ ಮಧುಕರ ಅಮೀನ್, ಜೀರ್ಣೋದ್ಧಾರ ಸಮಿತಿ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್ ಕೋರ್ಯಾರು, ತುಕರಾಮ ಶೆಟ್ಟಿ ಪರ್ಲಬೈಲ್ ಗುತ್ತು, ಶಿವಾನಂದ ಶೆಟ್ಟಿ ಪಡುಮನೆ, ಸೂರಿಂಜೆ ಪಂಚಾಯತ್ ಅಧ್ಯಕ್ಷೆ ಗೀತಾ ಶೆಟ್ಟಿ,…

Read More

‘ಪ್ರಪಂಚಕ್ಕೆ ನಾಟ್ಯ ಶಾಸ್ತ್ರವನ್ನು ಕೊಡುಗೆಯಾಗಿ ನೀಡಿದ ಭರತಮುನಿ ಸಮಸ್ತ ಮನುಕುಲವು ವೇದ ಶಾಸ್ತ್ರಗಳನ್ನು ಸುಲಭವಾಗಿ ಗ್ರಹಿಸುವಂತೆ ಮಾಡಿದ ಮಹಾ ದಾರ್ಶನಿಕ. ಚತುರ್ವೇದಗಳಿಂದ ಪಠ್ಯ, ಅಭಿನಯ, ಸಂಗೀತ ಮತ್ತು ರಸಗಳನ್ನು ಆಯ್ದು ನೃತ್ಯ ಎನ್ನುವ ಮೋಹಕ ಕಲೆಯನ್ನು ಜಗತ್ತಿಗೆ ಆತ ನಾಟ್ಯ ವೇದದ ರೂಪದಲ್ಲಿ ಪರಿಚಯಿಸಿದ್ದಾನೆ. ವೇದವನ್ನು ಓದದೇ ಇದ್ದರೂ ಭರತ ನೃತ್ಯವನ್ನು ಕಲಿತು, ಕಲಿಸಿ, ಅನುಭವಿಸುವುದರ ಮೂಲಕ ಮಾನವ ಸಮಾಜವು ವೇದದ ಸಾರವನ್ನು ತಿಳಿಯಲು ಸಾಧ್ಯವಾಗಿದೆ’ ಎಂದು ಕರ್ನಾಟಕ ಜಾನಪದ, ಯಕ್ಷಗಾನ ಮತ್ತು ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದರು. ಕರ್ನಾಟಕ ಕರಾವಳಿ ನೃತ್ಯ ಕಲಾ ಪರಿಷತ್ ವತಿಯಿಂದ ಕದ್ರಿ ಮಲ್ಲಿಕಟ್ಟೆಯ ಶ್ರೀ ಕೃಷ್ಣ ಕಲ್ಯಾಣ ಮಂಟಪದಲ್ಲಿ ಇತ್ತೀಚೆಗೆ ಜರಗಿದ ಭರತಮುನಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಂಘಟನೆ ಎಲ್ಲಾ ಕ್ಷೇತ್ರದಲ್ಲೂ ಇಂದು ಅವಶ್ಯಕ. ಬೇರೆ ಬೇರೆ ನೃತ್ಯ ಗುರುಗಳು ತಮ್ಮದೇ ತಂಡದೊಂದಿಗೆ ದೇಶ ವಿದೇಶಗಳಲ್ಲಿ ಪ್ರದರ್ಶನ ನೀಡುತ್ತಿದ್ದರೂ ಕರಾವಳಿ ಭಾಗದ ಎಲ್ಲಾ…

Read More

ಮೋಟಾರು ರ‍್ಯಾಲಿಯಲ್ಲಿ ಕಳೆದ ಎರಡೂವರೆ ದಶಕಗಳಿಂದ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಅಶ್ವಿನ್ ನಾಯ್ಕ್ ಅತ್ಯುನ್ನತ ಮಟ್ಟದ ಪ್ರದರ್ಶನ ನೀಡುತ್ತಾ ದೇಶ ಮತ್ತು ವಿದೇಶಗಳ 250 ಕ್ಕೂ ಹೆಚ್ಚು ರ‍್ಯಾಲಿಗಳಲ್ಲಿ ಭಾಗವಹಿಸಿದ ಎಲ್ಲಾ ರ‍್ಯಾಲಿಗಳಲ್ಲೂ ಪ್ರಶಸ್ತಿಗಳನ್ನು ಮುಡಿಗೆರಿಸಿಕೊಂಡಿರುವ ದಾಖಲೆಯನ್ನು ಹೊಂದಿದ್ದಾರೆ. 150ಕ್ಕೂ ಹೆಚ್ಚು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ರ‍್ಯಾಲಿಗಳಲ್ಲಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿ ಭಾರತ ಮತ್ತು ಬ್ರಿಟಿಷ್ ಹಾಗೂ ಯುರೋಪಿಯನ್ ರ‍್ಯಾಲಿಯ ಚಾಂಪಿಯನ್ ಶಿಪ್ ರೌಂಡ್ ನ ವಿನ್ನರ್ ಪಟ್ಟಕ್ಕೇರಿದ ಭಾರತದ ಪ್ರಥಮ ಹಾಗೂ ಏಕೈಕ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪ್ರಾಥಮಿಕ ಹಾಗೂ ಹೈಸ್ಕೂಲ್ ಶಿಕ್ಷಣವನ್ನು ಮಂಗಳೂರಿನ ಮಿಲಾಗ್ರಿಸ್ ಹೈಸ್ಕೂಲ್ ನಲ್ಲಿ ಪಡೆಯುತ್ತಿರುವಾಗಲೇ ಕ್ರೀಡೆಯಲ್ಲಿ (ಟ್ರ್ಯಾಕ್ & ಫೀಲ್ಡ್ ) ವಾಲಿಬಾಲ್, ಜಾವಲಿನ್ ತ್ರೋ ಮತ್ತು ಹೈ ಜಂಪ್ ಗಳಲ್ಲಿ ಜಿಲ್ಲಾ ಮತ್ತು ರಾಜ್ಯ ತಂಡವನ್ನು ಪ್ರತಿನಿಧಿಸಿದ್ದರು. 6 ಅಡಿ 2 ಇಂಚು ಎತ್ತರದ ದೃಢಕಾಯದ ಅಶ್ವಿನ್ ನಾಯ್ಕ್ ಅವರು 1995 – 1999 (ಸೈಂಟ್ ಅಲೋಶಿಯಸ್ ಪಿ.ಯು ಕಾಲೇಜಿನ ದಿನಗಳಲ್ಲಿ…

Read More