Author: admin
ಬಂಟರ ಸಂಘ ಮುಂಬಯಿ ಇದರ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮಿತಿ ಆಶ್ರಯದಲ್ಲಿ ಎಪ್ರಿಲ್ 14 ರಂದು ರವಿವಾರ ಕುರ್ಲಾ ಪೂರ್ವ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ಬಂಟರ ಸಂಘದ ಅಧ್ಯಕ್ಷರಾದ ಪ್ರವೀಣ್ ಭೋಜ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷ ನವೀನ್ ಶೆಟ್ಟಿ ಇನ್ನ ಬಾಳಿಕೆಯವರ ನೇತೃತ್ವದಲ್ಲಿ ವಿಜೃಂಭಣೆಯಿಂದ ಜರಗಿದ ಬಿಸುಪರ್ಬ, ಬಂಟ ದಿನಾಚರಣೆ ಹಾಗೂ ಶ್ರೀ ಮಹಾವಿಷ್ಣು ಬಂಟ ಯಕ್ಷ ಕಲಾ ವೇದಿಕೆಯ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ, ಮುಖ್ಯ ಅತಿಥಿ, ಮಹಾದಾನಿ, ಕೃಷ್ಣ ಪ್ಯಾಲೇಸ್ ಗ್ರೂಪ್ ಆಫ್ ಹೊಟೇಲ್ಸ್ ಇದರ ಕಾರ್ಯಾಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಕೃಷ್ಣ ವೈ. ಶೆಟ್ಟಿ, ಗೌ. ಅತಿಥಿ, ಬಂಟರ ಸಂಘದ ವಿಶ್ವಸ್ಥ ಮಾತೃಭೂಮಿ ಕೋ.ಆಪ್ ಕ್ರೆಡಿಟ್ ಸೊಸೈಟಿ ಲಿ. ಇದರ ಕಾರ್ಯಾಧ್ಯಕ್ಷ ಉಳ್ತೂರು ಮೋಹನ್ ದಾಸ್ ಶೆಟ್ಟಿಯವರು ಭತ್ತದ ಕಳಸೆಯಲ್ಲಿಟ್ಟಿದ್ದ ಕಲ್ಪವೃಕ್ಷದ ಹಿಂಗಾರವನ್ನು ಅರಳಿಸುವ ಮೂಲಕ ಸಾಂಕೇತಿಕವಾಗಿ ಉದ್ಘಾಟಿಸಿದರು. ಅಧ್ಯಕ್ಷ ಪ್ರವೀಣ್…
ಮುಂಬಯಿ ವಿಶ್ವವಿದ್ಯಾಲಯದ ಕಾರ್ಯಕ್ರಮ ಎಂದರೆ ಅದು ಅತ್ಯಂತ ಸರಳ, ಸುಂದರ. ಬುದ್ಧಿಜೀವಿಗಳು, ಅಕ್ಷರಜ್ಞಾನಿಗಳು ಸೇರಿರುವ ಈ ಕಾರ್ಯಕ್ರಮಕ್ಕೆ ಬಂದಿರುವುದು ನನಗೆ ಅನ್ಯಗ್ರಹದಿಂದ ಬಂದಂತಾಗಿದೆ. ಇದೊಂದು ವಿಶೇಷ ಸಭೆ. ಮುಂಬೈ ವಿವಿ ಕನ್ನಡ ವಿಭಾಗದ ಮಹನೀಯರು ಕೃತಿರಚನೆಗಳನ್ನು ಮಾಡುತ್ತಾ ಬಂದಿದ್ದಾರೆ. ಜೀವನವನ್ನು ಹತ್ತಿರದಿಂದ ನೋಡಿದರೆ ಮಾತ್ರ ಒಳ್ಳೆಯ ಪುಸ್ತಕ ಬರೆಯಬಹುದು ಎಂದು ಮುಂಬಯಿ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ಅವರು ಅಭಿಪ್ರಾಯ ಪಟ್ಟರು. ಅವರು ಏಪ್ರಿಲ್ 13 ರ ಶನಿವಾರದಂದು, ಕಲೀನಾ ಕ್ಯಾಂಪಸ್ ನ ಜೆ ಪಿ ನಾಯಕ್ ಭವನದಲ್ಲಿ ಮುಂಬೈ ವಿವಿ ಕನ್ನಡ ವಿಭಾಗ ಆಯೋಜಿಸಿದ್ದ ವಿಭಾಗದ 46ರ ಸಂಭ್ರಮ, ನಿರಂಜನ ಶತಮಾನೋತ್ಸವ, ಉಪನ್ಯಾಸ ಹಾಗೂ ಆರು ಕೃತಿಗಳ ಬಿಡುಗಡೆ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಿಭಾಗ ಪ್ರಮುಖರು ಮತ್ತು ಪ್ರಾಧ್ಯಾಪಕರೂ ಆದ ಪ್ರೊ . ಜಿ ಎನ್ ಉಪಾಧ್ಯ ಅವರು ಮಾತನಾಡಿ, ಕನ್ನಡವು ಕನ್ನಡವ ಕನ್ನಡಿಸುತಿರಲಿ ಎಂಬ ಕವಿವಾಣಿಯ ಆಶಯದಂತೆ ಕನ್ನಡ ವಿಭಾಗವು ನಲ್ವತ್ತಾರು…
ಎ.ಸಿ.ಸಿ.ಎ – ಯು. ಕೆ ಮತ್ತು ಸಿ.ಎಂ.ಎ- ಯು.ಎಸ್, ಪರೀಕ್ಷಾ ಫಲಿತಾಂಶ ಪ್ರಕಟ ಆಳ್ವಾಸ್ನ 15 ವಿದ್ಯಾರ್ಥಿಗಳು ಉತ್ತೀರ್ಣ
ಮೂಡುಬಿದಿರೆ: ಮಾರ್ಚ್2024ರಲ್ಲಿ ನಡೆದ ಎ.ಸಿ.ಸಿ.ಎ – ಯು. ಕೆ ಪರೀಕ್ಷೆಯ ವಿವಿಧ ಪತ್ರಿಕೆಗಳಲ್ಲಿ ಆಳ್ವಾಸ್ ಕಾಲೇಜಿನ 15 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಿದ್ಯಾರ್ಥಿಗಳಾದ ಹಸನ್ ಸುಹೈಲ್, ಶೇಖ್ ಮೊಹಮ್ಮದ್ ಸೈಮ್, ಸಲ್ಮಾನ್ ಸಲೀಂ, ಶಮ್ಲಾ ಪಿ.ಹೆಚ್, ಕಾರ್ತಿಕ್ ಶೆಟ್ಟಿ, ಬಿಂದಿಯಾ ಎನ್ ಇವರು ಎ.ಸಿ.ಸಿ.ಎ – ಎಫ್-7 ಫೈನಾನ್ಶಿಯಲ್ ರಿಪೋರ್ಟಿಂಗ್ ಪತ್ರಿಕೆಯಲ್ಲಿ ಉತ್ತೀರ್ಣರಾಗಿ ಶೇಕಡಾ 85.71 ಫಲಿತಾಂಶ ದಾಖಲಾಗಿದೆ. ಜಾಗತಿಕ ಮಟ್ಟದಲ್ಲಿ ಈ ಪತ್ರಿಕೆಯಲ್ಲಿ 52 ಶೇಕಡಾ ಫಲಿತಾಂಶ ಬಂದಿದ್ದು, ಆಳ್ವಾಸ್ 85.71 ಶೇಕಡಾ ಫಲಿತಾಂಶ ಪಡೆಯುವುದರ ಮೂಲಕ ಗಮನ ಸೆಳೆದಿದೆ. ಆಳ್ವಾಸ್ನ ದ್ವಿತೀಯ ಬಿ.ಕಾಂ. ಎ.ಸಿ.ಸಿ.ಎ.ಯ ವಿದ್ಯಾರ್ಥಿ ಹಸನ್ ಸುಹೈಲ್ ಶೇಕಡಾ 91 ಅಂಕಗಳನ್ನು ಪಡೆದುಕೊಂಡಿದ್ದು, ಇದುವರೆಗೆ ಈ ಪತ್ರಿಕೆಯಲ್ಲಿ ಆಳ್ವಾಸ್ ವಿದ್ಯಾರ್ಥಿ ಪಡೆದ ಅತ್ಯುತ್ತಮ ಅಂಕವಾಗಿದೆ. ಆಳ್ವಾಸ್ನ ತೃತೀಯ ಬಿ.ಕಾಂ. ವಿದ್ಯಾರ್ಥಿಗಳಾದ ವಸುಂಧರಾ ಪ್ರಮೋದ್ ವಿ., ಚಂದನಾ ಎಸ್.ಡಿ, ಲಿಯೋನಾ ವಿಯೋಲಾ ಡಿಸೋಜಾ, ಲಿಯೋನಾ ರೋಜ್ನಾ ರೋಡ್ರಿಗಸ್, ಶ್ರೇಷ್ಠಾ ಪಿ.ಜೆ, ಮೋನಿಶ್ ಮತ್ತು ಲೀಜಾ ರೇಗೊ ಎ.ಸಿ.ಸಿ.ಎ – ಎಫ್-9…
ರಚನಾತ್ಮಕ ಸಂಬಂಧ ಏರ್ಪಡಿಸಲು ಕಾರ್ಯ ಮತ್ತು ಸಮಾಜದ ವ್ಯಕ್ತಿಗಳ ಪರಸ್ಪರ ಸಂಬಂಧ ಬೆಳೆಯಲು ಮರದ ರೆಂಬೆಗಳಂತೆ ಸಂಘದ ವಲಯ ಸಮಿತಿಗಳು ರಚನೆಯಾಗಬೇಕು. ಅದೇ ರೀತಿ ನಮ್ಮ ಬಂಟರ ಸಂಘದ ಪೂರ್ವ ವಲಯ ಸ್ಥಾಪನೆಯಾಗಿ ಸಂಘಕ್ಕೆ ಮತ್ತೊಂದು ಕೈ ಬಲ ದೊರಕಿದೆ. ಸಮಾಜದ ಅಭಿವೃದ್ದಿಗಾಗಿ ಮಾಡುವ ಕಾರ್ಯ ಯೋಜನೆಗಳು ಸಂಘದ ಉದ್ದೇಶದಂತೆ ಸಂಘಟಿತರಾಗಿ ನಾವೆಲ್ಲರೂ ಒಂದೇ ಕಾರ್ಯ ಮಾರ್ಗದಲ್ಲಿ ನಡೆಯಬೇಕು. ನಮ್ಮ ಸಂಘದ ಮುಖಾಂತರ ನಡೆಯುವ ಕಾರ್ಯಕ್ರಮದಲ್ಲಿ ತಾವೆಲ್ಲರೂ ಭಾಗಿಗಲಾಬೇಕು. ಯಾವುದೇ ರೀತಿಯ ಕಾರ್ಯಕ್ರಮವಿರಲಿ ನಮ್ಮ ಕಾರ್ಯಕ್ರಮ ಎಂಬ ಭಾವನೆ ನಿಮ್ಮಲ್ಲಿರಲಿ. ಪೂರ್ವ ವಲಯ ಪ್ರಥಮ ಬಾರಿಗೆ ಅರಶಿನ ಕುಂಕುಮ ಕಾರ್ಯಕ್ರಮ ಆಯೋಜನೆಯ ಮೂಲಕ ಶುಭ ಕಾರ್ಯವನ್ನು ಮಾಡಿದೆ. ಅರಶಿನ ಕುಂಕುಮ ಹಿಂದೂ ಸಂಸ್ಕ್ರತಿಯ ಮಹಿಳೆಯರು ಆಚರಿಸುವ ಶುಭ ಪರ್ವ. ಇದರ ಮಹತ್ವವನ್ನು ಅರಿತು ನಾವೆಲ್ಲರೂ ಭಾಗಿಗಳಾಗಿ ಉತ್ತಮ ಕಾರ್ಯಕ್ರಮ ಮೂಡಿ ಬಂದಿದೆ. ಪೂರ್ವ ವಲಯಕ್ಕೆ ಶುಭವನ್ನು ಕೋರುತ್ತೇನೆ ಎಂದು ಪುಣೆ ಬಂಟರ ಸಂಘದ ಮಹಿಳಾ ಕಾರ್ಯಾಧ್ಯಕ್ಷೆ ಸುಲತಾ ಎಸ್ ಶೆಟ್ಟಿ ನುಡಿದರು.…
ಬ್ರಹ್ಮಾವರದ ಎಸ್ಎಂಎಸ್ ಶಿಕ್ಷಣ ಸಂಸ್ಥೆಯ ಮಕ್ಕಳ ಮಂಟಪದಲ್ಲಿ ಸಾಂಸ್ಕೃತಿಕ ಸಂಘಟನೆ ಭೂಮಿಕಾ ಹಾರಾಡಿ ಸಂಸ್ಥೆಯ ಹತ್ತನೇ ವರ್ಷದ ನಾಟಕೋತ್ಸವ ‘ಬಣ್ಣ’ದ ಉದ್ಘಾಟನಾ ಕಾರ್ಯಕ್ರಮದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿಗೆ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರಿಗೆ ರಂಗ ಗೌರವ ಸಮರ್ಪಣೆ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರು, ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸುವ ಕಾರ್ಯ ಸಮಾಜದ ಕರ್ತವ್ಯವಾಗಬೇಕು ಎಂದರು. ಈ ಮಣ್ಣಿನ ಜಾನಪದ ಕಲೆಗಳನ್ನು ಬೆಳೆಸುವ ಉದ್ದೇಶದಿಂದಲೇ ಹಿರಿಯ ವಿದ್ವಾಂಸರಾದ ಏರ್ಯ ಲಕ್ಷ್ಮಿ ನಾರಾಯಣ ಆಳ್ವ, ಎ.ಜಿ.ಕೊಡ್ಗಿ, ಡಾ.ತಿಮ್ಮೇ ಗೌಡ ಅವರ ಕೋರಿಕೆಯ ಮೇರೆಗೆ ಕರ್ನಾಟಕ ಜಾನಪದ ಪರಿಷತ್ತಿನ ಉಡುಪಿ ಜಿಲ್ಲಾಧ್ಯಕ್ಷನಾಗಲು ಒಪ್ಪಿದೆ. ಕಳೆದ ೬ ವರ್ಷಗಳಲ್ಲಿ ನಾಡಿನಾದ್ಯಂತ ೨೭ಕ್ಕೂ ಅಧಿಕ ಜಾನಪದ ವೈಭವ ಕಾರ್ಯಕ್ರಮಗಳನ್ನು ನಡೆಸಿ, ಈ ಮೂಲಕ ಜಾನಪದ ಕಲೆಯ ಬೆಳವಣಿಗೆಯ ಜೊತೆಗೆ ಜಾನಪದ ಕಲಾ ತಂಡಗಳಿಗೆ ಪ್ರೋತ್ಸಾಹಿಸುವ ಕಾರ್ಯ ನಡೆಸಲಾಗಿದೆ. ಅಲ್ಲದೇ ಜಾನಪದ ಸಾಧಕ ಕಲಾವಿದರು, ಕಲಾ ಸಂಘಟಕರು ಹಾಗೂ ಕಲಾ…
ತುಳು ಭಾಷೆಯ ಉಳಿವಿಗಾಗಿ ಮತ್ತು ಔನ್ನತ್ಯಕ್ಕಾಗಿ ಅಮೆರಿಕಾದ ಎಲ್ಲಾ ತುಳುವರನ್ನು ಸೇರಿಸಿಕೊಂಡು ಸ್ಥಾಪನೆಯಾದ ಆಲ್ ಅಮೆರಿಕಾ ತುಳು ಅಸೋಸಿಯೇಷನ್ AATA ಎಂದಿನಂತೆ ಈ ವರ್ಷದ ಬಿಸು ಆಚರಣೆಯನ್ನು ಎಪ್ರಿಲ್ 21ನೇ ತಾರೀಕು ಆದಿತ್ಯವಾರದಂದು ಹಮ್ಮಿಕೊಂಡಿದೆ. ಡಿಜಿಟಲ್ ವರ್ಚುಯಲ್ ವೇದಿಕೆಯಲ್ಲಿ ನಡೆಯುವ ಈ ಬಿಸು ಪರ್ಬ ಕಾರ್ಯಕ್ರಮ ಅಮೇರಿಕಾದ ಸಮಯ ಬೆಳಿಗ್ಗೆ 11:00 ಗಂಟೆಗೆ ನಡೆಯಲಿದ್ದು ಭಾರತದಲ್ಲಿ ತುಳುವರು ರಾತ್ರಿ 8.30 ರ ಸಮಯದಲ್ಲಿ YOUTUBE ನ ನೇರಪ್ರಸಾರದಲ್ಲಿ https://www.aa tana.org/bisu _parba_2024 ಮೂಲಕ ನೋಡಬಹುದಾಗಿದೆ. ಪರಮ ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಒಡಿಯೂರು ಕ್ಷೇತ್ರ ಇವರ ಶುಭ ಅಶೀರ್ವಚನದೊಂದಿಗೆ ಆರಂಭವಾಗುವ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ NETK ಮತ್ತು ಕಲಾತರಂಗಿಣಿ ಸ್ಥಾಪಕರಾದ ಹಾಗೂ AATA ಸಂಸ್ಥೆಯ ಮಹಾಪೋಷಕರಾದ ಅಮೆರಿಕಾದ ಹೆಮ್ಮೆಯ ತುಳುವ ಡಾ. ಸುಧಾಕರ್ ರಾವ್ ಮತ್ತು ತುಳು ಸಂಗೀತ ಸಾಹಿತ್ಯ ಅಭಿವೃದ್ಧಿಗಾಗಿ ಹುಟ್ಟಿಕೊಂಡ ಸಂಸ್ಥೆ ಐಲೇಸಾ ದಿ ವಾಯ್ಸ್ ಆಫ್ ಓಷನ್ (ರಿ) ಇದರ ಸ್ಥಾಪಕ ಸದಸ್ಯರಾದ ತುಳು…
ಬಂಟರ ಚಾವಡಿ ಪರ್ಕಳದ 2024-26ನೇ ಸಾಲಿನ ಪದಾಧಿಕಾರಿಗಳ ಪದಪ್ರದಾನ ಸಮಾರಂಭವು ದಿನಾಂಕ 14-04-2024 ನೇ ಆದಿತ್ಯವಾರದಂದು ಪರ್ಕಳದ ಸುರಕ್ಷಾ ಸಭಾಂಗಣದಲ್ಲಿ ಸಂಘದ ಅಧ್ಯಕ್ಷರಾದ ಶ್ರೀ ತಾರನಾಥ ಹೆಗ್ಡೆಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಕುಮಾರಿ ದೃತಿ ಶೆಟ್ಟಿ ಮತ್ತು ಕುಮಾರಿ ಅನಿಷಾ ಶೆಟ್ಟಿಯವರು ಪ್ರಾರ್ಥನೆ ಮಾಡಿದರು. ಪ್ರಧಾನ ಕಾರ್ಯದರ್ಶಿ ವಸಂತ ಶೆಟ್ಟಿ ಹಿರೆಬೆಟ್ಟು ಸ್ವಾಗತಿಸಿ, ಕಾರ್ಯಾಧ್ಯಕ್ಷ ವಸಂತ ಶೆಟ್ಟಿ ಚೆನ್ನಿಬೆಟ್ಟು ಪ್ರಸ್ತಾವಿಕವಾಗಿ ಮಾತನಾಡಿದರು. ಅಧ್ಯಕ್ಷರಾದ ಶ್ರೀ ತಾರನಾಥ ಹೆಗ್ಡೆಯವರು ಮಾತನಾಡಿ, ಬಂಟರು ಸಂಘಟಿತರಾಗುವ ಅವಶ್ಯಕತೆಯ ಬಗ್ಗೆ ಸದಸ್ಯರಿಗೆ ಮನವರಿಕೆ ಮಾಡಿದರು. 2024-26ನೇ ಸಾಲಿನ ಅಧ್ಯಕ್ಷರಾಗಿ ಶ್ರೀ ಅರುಣಾಚಲ ಹೆಗ್ಡೆಯವರು ಅಧಿಕಾರ ವಹಿಸಿಕೊಂಡರು. ಕಾರ್ಯಾಧ್ಯಕ್ಷರಾಗಿ ವಸಂತ ಶೆಟ್ಟಿ ಹಿರೆಬೆಟ್ಟು, ಪ್ರಧಾನ ಕಾರ್ಯದರ್ಶಿಯಾಗಿ ದಿನೇಶ್ ಹೆಗ್ಡೆ, ಕೋಶಾಧಿಕಾರಿಯಾಗಿ ವಸಂತ ಶೆಟ್ಟಿ ಚೆನ್ನಿಬೆಟ್ಟು, ಸಂಘಟನಾ ಕಾರ್ಯದರ್ಶಿಯಾಗಿ ದಿವಾಕರ ಶೆಟ್ಟಿ ಹೆರ್ಗ ಅಧಿಕಾರ ವಹಿಸಿಕೊಂಡರು. ದ್ವಿತೀಯ ಪಿ ಯು ಸಿ ಯಲ್ಲಿ ರಾಜ್ಯಕ್ಕೆ 5ನೇ ಸ್ಥಾನ ಪಡೆದ ಕುಮಾರಿ ಖುಷಿ ಹೆಗ್ಡೆ ಆತ್ರಾಡಿಯವರನ್ನು ಸನ್ಮಾನಿಸಲಾಯಿತು. ಅಕಾಲಿಕ ನಿಧನರಾದ ಸಂಘದ ಸಂಘಟನಾ…
ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಇದರ ಸುರತ್ಕಲ್ ಘಟಕದ ಚತುರ್ಥ ವಾರ್ಷಿಕೋತ್ಸವ ಕಾರ್ಯಕ್ರಮವು ಸುರತ್ಕಲ್ ಬಂಟರ ಭವನದಲ್ಲಿ ನಡೆಯಿತು.ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು. ದೀಪ ಪ್ರಜ್ವಲನೆಗೈದ ಯಕ್ಷಧ್ರುವ ಯಕ್ಷ ಶಿಕ್ಷಣ ಪ್ರಧಾನ ಸಂಚಾಲಕ ವಾಸುದೇವ ಐತಾಳ್ ಯುಎಸ್ ಎ ಮಾತನಾಡಿ, “ಅಮೇರಿಕದಲ್ಲಿ ಯಕ್ಷಗಾನ ಮಾಡಿಸುವ ಮೂಲಕ ಅಲ್ಲಿನ ಜನರಿಗೂ ನಮ್ಮ ಕರಾವಳಿಯ ಸಂಸ್ಕೃತಿಯ ಪರಿಚಯ ಮಾಡಿದ ಕೀರ್ತಿ ಪಟ್ಲ ಸತೀಶ್ ಶೆಟ್ಟಿ ಅವರಿಗೆ ಸಲ್ಲಬೇಕು. ಯಕ್ಷಧ್ರುವ ಟ್ರಸ್ಟ್ ಈ ಮೂಲಕ ಸಾಗರದಾಚೆಗೂ ಯಕ್ಷಪ್ರೇಮಿಗಳ ಬಾಂಧವ್ಯವನ್ನು ಬೆಸೆದಿದೆ. ಯುರೋಪ್ ರಾಷ್ಟ್ರಗಳಲ್ಲಿ ಪಟ್ಲ ತಂಡದೊಂದಿಗೆ ಸಂಚಾರ ನಡೆಸಿರುವುದು ನನ್ನ ಜೀವನದ ಅವಿಸ್ಮರಣೀಯ ದಿನಗಳು. ಮುಂದೆಯೂ ಅಮೇರಿಕದಲ್ಲಿ ಪಟ್ಲರ ಕಾರ್ಯಕ್ರಮಕ್ಕೆ ಸಹಕಾರ ನೀಡುತ್ತೇನೆ” ಎಂದು ಹೇಳಿದರು. ಬಳಿಕ ಮಾತನಾಡಿದ ಯಕ್ಷಧ್ರುವ ಪಟ್ಲ ಫೌಂಡೇಶನ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಅವರು, “ನನ್ನನ್ನು ತಾಯಿ ಕಟೀಲು ದುರ್ಗೆ ಯಕ್ಷಗಾನ ಕಲಾವಿದರ ಸೇವೆ ಮಾಡುವಂತೆ ಅನುಗ್ರಹ ನೀಡಿದ್ದಾಳೆ. ಅವಳ ಅಣತಿಯಂತೆ ನಾನಿಂದು ಯಕ್ಷಗಾನ ಕಲಾವಿದರಿಗೆ ನೆರವು…
ನೀರಿನಿಂದಲೇ ಜನನ, ನೀರಿನಿಂದಲೇ ಮರಣ ಹೊಂದುವ ಉಪ್ಪು ನಮ್ಮ ದಿನ ನಿತ್ಯ ಜೀವನದಲ್ಲಿ ಹಲವಾರು ರೀತಿಯಲ್ಲಿ ಉಪಯೋಗಿಸುವ ಅವಶ್ಯಕ ವಸ್ತು. ರುಚಿಯ ಇನ್ನೊಂದು ಅರ್ಥವೇ ಉಪ್ಪು. ಗ್ರಹ ಬಳಕೆ ಹಾಗೂ ಕೈಗಾರಿಕಾ ಬಳಕೆಗಾಗಿ ಉಪ್ಪು ಉತ್ಪಾದಿಸುವ ರಾಷ್ಟ್ರಗಳಲ್ಲಿ ಭಾರತವೂ ಒಂದು. ಆವಿಯಾಗುವ ಮೂಲಕ ನೀರಿನಿಂದ ಬೇರ್ಪಡಿಸಲಾಗುವ ನೈಸರ್ಗಿಕ ಉಪ್ಪು ನಿಸರ್ಗದ ಅದ್ಬುತವೆಂದೇ ಹೇಳಬಹುದು. ಸಂಸ್ಕರಿಸಿದ ಉಪ್ಪಿಗೂ, ನೈಸರ್ಗಿಕ ಉಪ್ಪಿಗೂ ತುಂಬಾ ವ್ಯತಾಸವಿದ್ದು, ಉಪ್ಪಿಗಿಂತ ರುಚಿಯಿಲ್ಲ ತಾಯಿಗಿಂತ ಬಂಧುವಿಲ್ಲ. ಉಪ್ಪಿನ ಋಣ ತೀರಿಸಲು ಸಾಧ್ಯವೇ ಎಂಬ ಭಾವನಾತ್ಮಕ ಬಂಧವೂ ಜನಪದಗಳು ಉಪ್ಪಿನ ಮಹತ್ವವನ್ನು ತಿಳಿಸುತ್ತದೆ. ಭಾಯಂದರನ ಉಪ್ಪು ತಯಾರಿಕಾ ಪ್ರದೇಶಕ್ಕೆ ಭೇಟಿ ನೀಡಿದಾಗ ಬೃಹತ್ ಗಾತ್ರದ ಬಣವೆಗಳು ಗಮನ ಸೆಳೆದವು. ನಮ್ಮ ಊರಿನಲ್ಲಿ ಅಕ್ಕಿ ಭತ್ತದ ರಾಶಿ ಹಾಕಿದಂತೆ ಉಪ್ಪು ಸಂಗ್ರಹಿಸಿದ ಬಳಿಕ ಅದನ್ನು ಗುಪ್ಪೆ ಹಾಕಿ ಬಿಸಿಲು ಇಬ್ಬನಿ ಮತ್ತು ದೂಳಿನಿಂದ ರಕ್ಷಿಸಲು ಅದರ ಮೇಲೆ ಹುಲ್ಲು, ಪ್ಲಾಸ್ಟಿಕ್ ಪರದೆ ಹಾಸುತ್ತಾರೆ. ಎಕರೆಗಟ್ಟಲೇ ಭೂಮಿಯಲ್ಲಿ ಹಿಮದ ರಾಶಿಯಂತೆ ಅಲ್ಲಲ್ಲಿ ಚದುರಿದ ಪುಟ್ಟ…
31 ವರ್ಷಗಳ ಸುದೀರ್ಘ ಸೇವೆಯನ್ನು ದೇಶಕ್ಕಾಗಿ ಅರ್ಪಿಸಿದ ವೀರ ಯೋಧ, ದೇಶಭಕ್ತ ಶ್ರೀ ಕರ್ನಲ್ ಅಗರಿ ಜಗಜೀವನ್ ಭಂಡಾರಿಯವರಿಗೆ ಮೇ 19 ರಂದು ಮಂಗಳೂರು ಪುರಭವನದಲ್ಲಿ ಶತಾಯುಷಿ ಮಿಜಾರುಗುತ್ತು ಆನಂದ ಆಳ್ವ ವೇದಿಕೆಯಲ್ಲಿ ಬಂಟ್ಸ್ ನೌ ಮಾಧ್ಯಮ ಸಂಸ್ಥೆ ಪ್ರಸ್ತುತ ಪಡಿಸುವ ಅನುಬಂಧ ಕಾರ್ಯಕ್ರಮದಲ್ಲಿ 2024 ರ ಸಾಲಿನ ಬಂಟ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನಿವೃತ್ತ ಲೋಕಾಯುಕ್ತ ನ್ಯಾ. ಸಂತೋಷ್ ಎನ್ ಹೆಗ್ಡೆ, ಮಣಿಪಾಲ ವಿದ್ಯಾಸಂಸ್ಥೆಯ ಉಪಕುಲಪತಿ ಡಾ. ಎಚ್ ಎಸ್ ಬಲ್ಲಾಳ್, ಮುಂಬಯಿ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ, ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿ ಡಾ ಎಂ ಜಯಕರ್ ಶೆಟ್ಟಿ, ಇಂಟರ್ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ಸ್ಥಾಪಕಾಧ್ಯಕ್ಷ ಡಾ ಎ ಸದಾನಂದ ಶೆಟ್ಟಿ, ಹಿರಿಯ ಉದ್ಯಮಿ ಚಿಕ್ಕಪ್ಪ ನಾಯ್ಕ್, ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಬಿ ಅಪ್ಪಣ್ಣ ಹೆಗ್ಡೆ, ಎ ಜೆ ಸಮೂಹ…