Author: admin
ಸಮಾಜ ಸೇವಕ ಎನ್ ಸಿ ಪಿ ಮುಖಂಡ ಕಳತ್ತೂರು ವಿಶ್ವನಾಥ ಶೆಟ್ಟಿ ಅವರನ್ನು ವಿಮಾನ ನಿಲ್ದಾಣಗಳ ವಾಯುಯಾನ ನೌಕರರ (ಎಎಇಯು) ಸಂಘದ ಕರ್ನಾಟಕ ರಾಜ್ಯ ಸಂಚಾಲಕರಾಗಿ ನೇಮಕ ಮಾಡಲಾಗಿದೆ. ಎಎಇಯು ಸಂಘದ ಅಖಿಲ ಭಾರತ ಅಧ್ಯಕ್ಷ ಡಾ. ನಿತಿನ್ ಜಾಧವ್ ಅವರು ಈ ನೇಮಕಾತಿ ಮಾಡಿದ್ದು, ಈ ಕುರಿತ ನೇಮಕಾತಿ ಪತ್ರವನ್ನು ಅಕ್ಟೋಬರ್ 15ರಂದು ವಿಶ್ವನಾಥ್ ಶೆಟ್ಟಿ ಅವರಿಗೆ ನೀಡಿದ್ದಾರೆ. ಎಎಇಯು ಸಂಘದ ಕರ್ನಾಟಕದ ಸಂಚಾಲಕರಾಗಿ ನೇಮಕವಾದ ವಿಶ್ವನಾಥ್ ಶೆಟ್ಟಿ ಅವರು ಕರ್ನಾಟಕದ ವಿಮಾನ ನಿಲ್ದಾಣಗಳಲ್ಲಿ ಎಎಇಯು ಘಟಕಗಳ ರಚನೆ ಮಾಡುವುದಕ್ಕೆ ಸಂಘವು ಸೂಚಿಸಿದೆ ಎಂದು ಎಎಇಯು ಪ್ರಕಟಣೆ ತಿಳಿಸಿದೆ.
ಕರಾವಳಿಯ ರಂಗಭೂಮಿಯಲ್ಲಿ ಸದಭಿರುಚಿಯ ಹಾಸ್ಯವನ್ನು ಮಾತ್ರ ಪ್ರೇಕ್ಷಕರು ಒಪ್ಪುತ್ತಾರೆ. ಹಾಸ್ಯ ಕಲಾವಿದರೂ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದು ತುಳುರಂಗ ಭೂಮಿ ಕಲಾವಿದ ತುಳುನಾಡಿನ ಮಾಣಿಕ್ಯ ಖ್ಯಾತಿಯ ಅರವಿಂದ ಬೋಳಾರ್ ಹೇಳಿದರು. ಮಂಗಳೂರು ಪ್ರೆಸ್ ಕ್ಲಬ್ ವತಿಯಿಂದ ಗೌರವ ಅತಿಥಿ ಕಾರ್ಯಕ್ರಮದಲ್ಲಿ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿದರು. ಕಲಾವಿದರು ಸಮಯ ಪ್ರಜ್ಞೆಯನ್ನು ಮರೆಯಬೇಕು. ಒಬ್ಬ ಕಲಾವಿದನ ಮಾತನ್ನು ಜನರು ಸ್ವೀಕರಿಸುತ್ತಾರೆ ಎಂದರೆ ಆತನಿಗೆ ಅದಕ್ಕಿಂತ ಬೇರೆ ಯಾವ ಭಾಗ್ಯ ಬೇಕು? ಕಲಾ ರಂಗದಲ್ಲಿ ನಾನು ಗರ್ಭಗುಡಿಯ ಮೂರ್ತಿಯಾಗಿಯೇ ಇರಲು ಇಷ್ಟಪಡುತ್ತೇನೆಯೇ ವಿನಃ ಉತ್ಸಹ ಮೂರ್ತಿಯಾಗಿ ಅಲ್ಲ. ರಂಗಭೂಮಿ ಕಲಾವಿದನಾಗಿ ನಿಷ್ಠೆಯಿಂದ ಕೆಲಸ ಮಾಡಿದ್ದೇನೆ. ಜನತೆಯ ಪ್ರೇರಣೆಯಿಂದಲೇ ಹಾಸ್ಯವನ್ನು ನಾನು ಸ್ವೀಕರಿಸಿದ್ದು, ಜೀವನದಲ್ಲಿ ಮುಂದುವರಿಸುತ್ತಿದ್ದೇನೆ. ಪ್ರತಿ ಬಾರಿಯೂ ಹಾಸ್ಯದಲ್ಲಿ ಹೊಸತನವನ್ನು ತರಲು ಪ್ರಯತ್ನಿಸುತ್ತೇನೆ. ಇದು ಕಲಾವಿದರಿಗೂ ದೊಡ್ಡ ಸವಾಲೇ ಸರಿ ಎಂದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತುಳು ರಂಗಭೂಮಿ…
ಮೂಡುಬಿದಿರೆ: ಸಂಶೋಧನೆ ಮಾನಸಿಕ ಸದೃಢತೆ, ಶ್ರಮ, ಅಧ್ಯಯನ, ತರ್ಕ, ತಾರ್ಕಿಕ ಚಿಂತನೆಗಳ ಒಟ್ಟು ಫಲ ಎಂದು ಸಿದ್ದಕಟ್ಟೆ ಪ್ರಥಮ ದರ್ಜೆ ಕಾಲೇಜಿನ ಪ್ರಾಚರ್ಯ ಡಾ ಅಜಕ್ಕಳ ಗಿರೀಶ್ ಭಟ್ ನುಡಿದರು. ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ಫೋರಮ್ವತಿಯಿಂದ ಗುರುವಾರ ಪಿಜಿ ಸೆಮಿನಾರ್ ಹಾಲ್ ನಲ್ಲಿ ನಡೆದ ಅತಿಥಿ ಉಪನ್ಯಾಸ ಕರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಂಶೋಧನ ಕ್ಷೇತ್ರಕ್ಕೆ ಬರುವ ಮೊದಲು ವಿದ್ಯಾರ್ಥಿಗಳು ಓದು, ಚರ್ಚೆ ಮತ್ತು ಬೌದ್ಧಿಕ ಚಿಂತನೆಯ ಮೂಲಕ ಮಾನಸಿಕವಾಗಿ ತಮ್ಮನ್ನು ತಾವು ಸಿದ್ಧಪಡಿಸಿಕೊಳ್ಳಬೇಕು. ವಿಜ್ಞಾನ ಸಂಶೋಧನೆಯು ತಂತ್ರಜ್ಞಾನ ಮತ್ತು ನಾವೀನ್ಯತೆಗೆ ಕಾರಣವಾದರೆ, ಸಮಾಜ ವಿಜ್ಞಾನದ ಸಂಶೋಧನೆಗಳು ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವುದರ ಜೊತೆಗೆ ನೀತಿ ನಿಯಮಗಳ ಮೇಲೆ ಪ್ರಭಾವ ಬೀರಿ ಆಡಳಿತ, ಪರಿಸರ, ಕೈಗಾರಿಕೆ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಬದಲಾವಣೆ ತರಬಲ್ಲದು ಎಂದರು. ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬ ಉಕ್ತಿಯ ತಾತ್ಪರ್ಯ ಪ್ರಶ್ನೆ ಮಾಡಿ ಉತ್ತರ ತಿಳಿಯುವುದಾಗಿದೆಯೇ ಹೊರತು ಗುಲಾಮನಾಗಿರುವುದಲ್ಲ. ಯಶಸ್ಸಿಗೆ ಭಾಷೆ ಮುಖ್ಯ. ವಿಷಯದ ಬಗ್ಗೆ ಜ್ಞಾನವಿದ್ದರು,…
ತುಳುವೆರೆ ಗೊಬ್ಬು ಎಂದರೆ ಅದು ನಮ್ಮ ತುಳುವರ ಸಂಸ್ಕ್ರತಿಯನ್ನು ಪ್ರಚಾರ ಪಡಿಸುವ ಕಾರ್ಯಕ್ರಮ. ಇದು ಇಂದಿನ ದಿನಗಳಲ್ಲಿ ಬಹಳ ಮುಖ್ಯವಾಗಿ ಬೇಕು. ಮಕ್ಕಳಿಗೆ ಹಿಂದಿನ ಕಾಲದ ಆಟಗಳ ಬಗ್ಗೆ ತಿಳಿಸಿಕೊಡುವ ಕಾರ್ಯ ಆಗಬೇಕು. ಸಮಾಜದ ಒಳಿತಿಗಾಗಿ ನಾವು ತುಳುವರೆಲ್ಲರೂ ಕೂಡಿ ಬಾಳುವ ಮತ್ತು ಸಂಘಟನಾತ್ಮಕವಾಗಿ ಬೆಳೆಯುವ ದ್ಯೇಯ ನಮ್ಮದಾಗಿರಬೇಕು. ಸೋಲು ಗೆಲುವನ್ನು ಸಮಾನಾಂತರವಾಗಿ ಸ್ವೀಕರಿಸುವ ಮನೋಬಲ ಕೂಡಾ ನಮಲ್ಲಿರಬೇಕು. ಒಗ್ಗಟ್ಟಿಗೆ ಇಂತಹ ಕ್ರೀಡಾಕೂಟಗಳಿಂದ ಬಲ ಬರುತ್ತದೆ. ತುಳುಕೂಟದ ರಜತ ಮಹೋತ್ಸವದ ಕಾರ್ಯಕ್ರಮಗಳು ನಡೆಯುತ್ತಿದೆ. ನವೆಂಬರ್ 10ರಂದು ನಡೆಯುವ ಸಂಭ್ರಮಕ್ಕೆ ಶುಭ ಹಾರೈಸುತ್ತೇನೆ ಎಂದು ಪುಣೆ ಶ್ರೀ ಗುರುದೇವ ಸೇವಾ ಬಳಗದ ಅಧ್ಯಕ್ಷರಾದ ಪ್ರಭಾಕರ್ ಶೆಟ್ಟಿ ನುಡಿದರು. ಅಕ್ಟೋಬರ್ 13ರಂದು ಮಹಾರಾಷ್ಟ್ರ ಮಂಡಲದ ಕಟಾರಿಯ ಕಾಲೇಜ್ ಮೈದಾನದಲ್ಲಿ ಪುಣೆ ತುಳುಕೂಟದ ಅಧ್ಯಕ್ಷರಾದ ದಿನೇಶ್ ಶೆಟ್ಟಿ ಕಳತ್ತೂರು, ರಜತ ಮಹೋತ್ಸವ ಸಮಿತಿಯ ಅಧ್ಯಕ್ಷರಾದ ಪ್ರವೀಣ್ ಶೆಟ್ಟಿ ಪುತ್ತೂರುರವರ ಅಧ್ಯಕ್ಷತೆಯಲ್ಲಿ, ಕ್ರೀಡಾ ಕಾರ್ಯಾಧ್ಯಕ್ಷ ನಾರಾಯಣ ಹೆಗ್ಡೆಯವರ ಆಯೋಜನೆಯಲ್ಲಿ ಕ್ರೀಡಾಕೂಟದ ಉದ್ಘಾಟನಾ ಸಮಾರಂಭವು ನಡೆಯಿತು. ಗೌರವ ಅತಿಥಿಗಳಾಗಿ…
ಮಂದಾರ್ತಿ ಸೇವಾ ಸಹಕಾರಿ ಸಂಘದ ಶತಮಾನೋತ್ಸವ ಶತಸಾರ್ಥಕ್ಯ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆಗೊಂಡಿತು. ಶ್ರೀ ಕ್ಷೇತ್ರ ಮಂದಾರ್ತಿಯ ಪ್ರಧಾನ ಅರ್ಚಕ ವೇದಮೂರ್ತಿ ಎಂ ಶ್ರೀಪತಿ ಅಡಿಗ ಅವರು ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಸಂಘದ ಅಧ್ಯಕ್ಷ ಎಚ್. ಗಂಗಾಧರ ಶೆಟ್ಟಿ, ಉಪಾಧ್ಯಕ್ಷ ಕೆ. ಶಂಭುಶಂಕರ ರಾವ್, ನಿರ್ದೇಶಕರಾದ ಎಚ್. ವಿಠಲ ಶೆಟ್ಟಿ, ನಿತ್ಯಾನಂದ ಶೆಟ್ಟಿ, ಪ್ರವೀಣ್ ಶೆಟ್ಟಿ, ಬಸವ ಮರಾಠಿ, ಗುರುಪ್ರಸಾದ್, ಅರುಣ್ ಕುಮಾರ್ ಶೆಟ್ಟಿ ಕಾರ್ಯನಿರ್ವಹಣಾಧಿಕಾರಿ ರಾಮಕೃಷ್ಣ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಶತಸಾರ್ಥಕ್ಯ ಸಮಾರೋಪ ಸಮಾರಂಭ ನವೆಂಬರ್ 3ರ ಬೆಳಗ್ಗೆ 10:30ಕ್ಕೆ ಜರಗಲಿದೆ. ಸಹಕಾರಿ ಧುರೀಣರು, ಸಚಿವರು, ಜನಪ್ರತಿನಿಧಿಗಳು ಇಲಾಖಾ ಅಧಿಕಾರಿಗಳು, ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.
ಈ ಜಗತ್ತು ದಿನದಿನವೂ ನವನವೀನ. ಪುರಾಣದ ಉಲ್ಲೇಖಗಳಂತೆ ಮತ್ತು ಅಥರ್ವ ವೇದದಲ್ಲಿ ಹದಿನಾಲ್ಕು ಲೋಕಗಳನ್ನು ಹೆಸರಿಸಲಾಗಿದೆ. ಏಳು ಮೇಲಿನ ಲೋಕಗಳು (ವ್ಯಾಹೃತಿಗಳು) ಮತ್ತು ಏಳು ಕೆಳಗಿನ ಲೋಕಗಳು (ಪಾತಾಳಗಳು), ಅವೆಂದರೆ ಮೇಲೆ ಭೂ, ಭುವಸ್, ಸ್ವರ, ಮಹಸ್, ಜನಸ್, ತಪಸ್, ಹಾಗೂ ಸತ್ಯ ಮತ್ತು ಕೆಳಗೆ ಅತಳ, ವಿತಳ, ಸುತಳ, ರಸಾತಳ, ತಲಾತಳ, ಮಹಾತಳ, ಪಾತಾಳ ಹಾಗೂ ನರಕ ಎಂಬವುಗಳು. ಆದರೆ ಲೋಕಗಳಲ್ಲಿ ಈ ನಮ್ಮ ಭೂಲೋಕದಂತಹ ಬದಲಾವಣೆ ಬೇರೆಲ್ಲೂ ಇಲ್ಲವಂತೆ. ಬಾಕಿ ಲೋಕಗಳಲ್ಲಿ ನಿತ್ಯವೂ ಅದೇ ಸ್ಥಿರವಾದ ಸುಂದರತೆ. ಇದು ಭೂಲೋಕ ವಾಸಿಗಳಾದ ನಮಗೆ ಸಂತೋಷವೇ. ಪರಮಾತ್ಮ ಶ್ರೀ ಕೃಷ್ಣನಂದಂತೆ ಬದಲಾವಣೆ ಜಗದ ನಿಯಮ. ಅದು ನಿತ್ಯವೂ ನಿರಂತರವೂ ನಡೆಯುತ್ತಲೇ ಇರಬೇಕು. ಹಾಗಿದ್ದರೇನೇ ಚಂದವೂ. ಆದರೆ ಯಾವ ಕಾಲಕ್ಕೆ ಎಷ್ಟು ಬೇಕೋ ಅಷ್ಟೇ ಆದರೆ ಚಂದ ಅಲ್ವೇ? ಕ್ರಿಮಿಕೀಟಗಳಂತೆ ಯೌವನ ಬಂದ ಮಾತ್ರಕ್ಕೆ ಜೋಡಿಯಾಗಿ ಆ ಕೂಡಲೇ ಮಕ್ಕಳೂ ಆಗಿ, ಅವುಗಳು ಕ್ಷಣ ಮಾತ್ರದಲ್ಲಿ ಬೆಳೆದು, ಮತ್ತೆ ಕೆಲವೇ ದಿನದಲ್ಲಿ…
ಅಭಿವೃದ್ಧಿಯ ಪಥದತ್ತ ಸಾಗುತ್ತಿರುವ ನವಿ ಮುಂಬಯಿ ಪರಿಸರದಲ್ಲಿ ಬಂಟರ ಒಗ್ಗಟ್ಟಿನ ಶಕ್ತಿ ಕೇಂದ್ರವಾಗಿರುವ ಬಂಟ್ಸ್ ಸೆಂಟರ್ ನಲ್ಲಿ ನವೀಕೃತಗೊಂಡಿರುವ ನಮ್ಮ ಹೆಸರಿನ ಸಭಾಭವನ ಈ ಪರಿಸರದ ಎಲ್ಲಾ ಜನರಿಗೂ ಅನುಕೂಲವಾಗುವ ಭವನವಾಗಲಿ. ಅಸೋಸಿಯೇಷನ್ ನ ಅಧ್ಯಕ್ಷರಾದ ಸಿಎ ಸುರೇಂದ್ರ ಶೆಟ್ಟಿ ಮತ್ತು ಅವರ ತಂಡವು ಈ ಭವ್ಯ ಕಟ್ಟಡದ ತಳಮಹಡಿಯಲ್ಲಿರುವ ತನ್ನ ಹೆಸರಿನ ಭವನವನ್ನು ಹವಾ ನಿಯಂತ್ರಿತ ಭವನವನ್ನಾಗಿ ಪರಿವರ್ತಿಸಿದೆ. ಉತ್ತಮವಾದ ಕಾರ್ಯವನ್ನು ಹಮ್ಮಿಕೊಂಡಿದೆ. ಭವ್ಯ ಬಂಟ್ಸ್ ಸೆಂಟರ್ ಉತ್ತಮವಾದ ನಿವೇಶನವನ್ನು ಹೊಂದಿದ್ದು, ರಾತ್ರಿ ಶಾಲೆ ಹಾಗೂ ಹಗಲು ಶಾಲೆಯನ್ನು ನಡೆಸುತ್ತಿರುವುದು ಅಭಿಮಾನದ ವಿಷಯವಾಗಿದೆ. ಸಂಘಟನೆಯನ್ನು ಉನ್ನತ ಮಟ್ಟಕ್ಕೆ ತರುವಲ್ಲಿ ಎಲ್ಲರೂ ಶ್ರಮಿಸುತ್ತಿದ್ದಾರೆ. ಇಂಥಹ ಉತ್ತಮ ಕಾರ್ಯಕ್ಕೆ ಸಮಾಜ ಬಾಂಧವರ ಸಹಕಾರವು ಯಾವತ್ತೂ ಇದೆ. ಆದುದರಿಂದ ಈ ಸಂಘಟನೆಯನ್ನು ಇನ್ನೂ ಉನ್ನತ ಮಟ್ಟಕ್ಕೆ ತರುವ ಪ್ರಯತ್ನವನ್ನು ನಾವೆಲ್ಲಾ ಸೇರಿ ಮಾಡೋಣ ಎಂದು ಬಾಂಬೇ ಬಂಟ್ಸ್ ಅಸೋಸಿಯೇಷನ್ ಟ್ರಸ್ಟಿ ರಿಜೆನ್ಸಿ ಗ್ರೂಪ್ ಆಫ್ ಹೋಟೆಲ್ ನ ಆಡಳಿತ ನಿರ್ದೇಶಕ ಬಂಟ್ಸ್ ಸೆಂಟರ್ ನ…
2024 ರ ಸಾಲಿನ ಬಂಟ ವಿಭೂಷಣ ಪ್ರಶಸ್ತಿ ಪುರಸ್ಕೃತರಾದ ಉಮೇಶ್ ಶೆಟ್ಟಿ ಮಂದಾರ್ತಿ ಸಾರಥ್ಯದ ಅಭಯ ಸೇವಾ ಫೌಂಡೇಶನ್ ವತಿಯಿಂದ ಲೋಕ ಕಲ್ಯಾಣಕ್ಕಾಗಿ ಸೇವಾ ಸಂಕಲ್ಪ ಕಾರ್ಯಕ್ರಮವನ್ನು ರಾಜಾಜಿನಗರ ಶ್ರೀರಾಮ ಮಂದಿರ ಆಟದ ಮೈದಾನದಲ್ಲಿ ಕಾರ್ಯಕ್ರಮದ ಉದ್ಘಾಟನೆಯನ್ನು ಪರಮಪೂಜ್ಯ ಶ್ರೀ ಶ್ರೀ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಎಂ.ಆರ್.ಜಿ ಗ್ರೂಪ್ ಸಂಸ್ಥಾಪಕ ಡಾ| ಕೆ ಪ್ರಕಾಶ್ ಶೆಟ್ಟಿ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಯುನಿವರ್ಸಲ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ವ್ಯವಸ್ಥಾಪಕ ನಿರ್ದೇಶಕ ಆರ್. ಉಪೇಂದ್ರ ಶೆಟ್ಟಿ, ಸ್ವಾತಿ ಗ್ರೂಪ್ ನ ನಿರ್ದೇಶಕ ಮಧುಕರ್ ಶೆಟ್ಟಿ, ಡಾ. ಅಂಜನಪ್ಪ, ಡಾ. ಪದ್ಮಿನಿ ಪ್ರಸಾದ್, ರಾಜಕೀಯ ಮುಖಂಡರಾದ ಆರ್.ವಿ. ಹರೀಶ್, ಡಿ.ಸಿ.ಪಿ. ಸೈಮುಲ್ಲಾ ಅದಾಲತ್, ನಿವೃತ್ತ ಕರ್ನಲ್ ಪಿ.ವಿ ಹರಿ, ವಿಶ್ವ ಹಿಂದೂ ಪರಿಷತ್ತು ಪ್ರಾಂತ್ಯ ಕಾರ್ಯದರ್ಶಿಗಳಾದ ಜಗನ್ನಾಥ ಶಾಸ್ತ್ರೀರವರು ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು. ಶ್ರೀ ಶ್ರೀ ಶ್ರೀ ರಾಜಶೇಖರಾನಂದ ಸ್ವಾಮೀಜಿಯವರು ಮಾತನಾಡಿ, ಸಂಸ್ಕೃತಿ ಸಂಪ್ರದಾಯ ಉಳಿಯಬೇಕು ಎಂದರೆ ನಾವೆಲ್ಲರೂ…
ಯಾಂತ್ರೀಕೃತ ಜೀವನ ನಡೆಸುತ್ತಿರುವ ಸಹಕಾರಿ ಸಿಬ್ಬಂದಿಗಳು ಗೆಲುವು ಸೋಲು ಪ್ರಾಮುಖ್ಯತೆಯನ್ನು ತೆಗೆದುಕೊಳ್ಳದೆ ಕ್ರೀಡಾಕೂಟದಲ್ಲಿ ಭಾಗವಹಿಸಿ ಸಂಘಟನಾತ್ಮಕವಾಗಿ ಸಹಕಾರಿಗಳು ಬಲಿಷ್ಠರು ಎಂದು ತೋರಿಸಿ ಕೊಟ್ಟಿದ್ದೇವೆ ಎಂದು ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಹೇಳಿದರು. ಮಂದಾರ್ತಿ ಸೇವಾ ಸಹಕಾರಿ ಸಂಘದ ಶತಮಾನೋತ್ಸವದ ಪ್ರಯುಕ್ತ ಶತಸಾರ್ಥರ್ಕ್ಯ ಕಾರ್ಯಕ್ರಮದ ಅಂಗವಾಗಿ ಮಂದಾರ್ತಿ ಪ್ರೌಢಶಾಲಾ ಮೈದಾನದಲ್ಲಿ ಅದ್ದೂರಿಯಾಗಿ ನಡೆದ ಸಹಕಾರಿ ಕ್ರೀಡಾಕೂಟದಲ್ಲಿ ಕ್ರೀಡಾ ಧ್ವಜಾರೋಹಣ ಮಾಡಿ, ಧ್ವಜ ವಂದನೆ ಸ್ವೀಕರಿಸಿ ಮಾತನಾಡಿದರು. ಮಂದಾರ್ತಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಚ್. ಗಂಗಾಧರ ಶೆಟ್ಟಿ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಳದ ಅನುವಂಶಿಕ ಮೊಕ್ತೇಸರ ಎಚ್. ಧನಂಜಯ ಶೆಟ್ಟಿ ಕ್ರೀಡಾ ಜ್ಯೋತಿ ಪ್ರಜ್ವಲನೆ ಮಾಡಿ ಮತ್ತು ಸಭಾ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಉಡುಪಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ, ಉದ್ಯಮಿ ಪ್ರತಾಪ ಹೆಗ್ಡೆ ಮಾರಾಳಿ ಪಥ ಸಂಚಲನ ಗೌರವ ಸ್ವೀಕರಿಸಿದರು. ಡಾ. ನಾಗಾನಂದ ಭಟ್ ಕ್ರೀಡಾ ದ್ಯೋತಕವಾಗಿ ಪಾರಿವಾಳಗಳನ್ನು ಹಾರಿಸಿಬಿಟ್ಟರು.…
ಆಳ್ವಾಸ್ ಆಂಗ್ಲ ವಿಭಾಗದ ಗ್ಲಿಸ್ಟನ್ ವೇದಿಕೆ ಉದ್ಘಾಟನೆ ಮತ್ತು ಆಳ್ವಾಸ್ ಇಂಗ್-ಗೈಡ್ ಯೂಟ್ಯೂಬ್ ಚಾನೆಲ್ಗೆ ಚಾಲನೆ
ವಿದ್ಯಾಗಿರಿ: ನಾವೀನ್ಯತೆಯು ಜಗತ್ತಿಗೆ ಹೊಸ ವಿಷಯಗಳನ್ನು ಪರಿಚಯಿಸುತ್ತದೆ. ಈಗಾಗಲೇ ಅಸ್ತಿತ್ವದಲ್ಲಿರುವ ವಿಷಯಗಳಲ್ಲಿ ಮಾತ್ರ ನೈಪುಣ್ಯರಾಗದೆ ಹೊಸ ಹೊಸ ವಿಷಯಗಳನ್ನು ಅನ್ವೇಷಿಸುತ್ತಿರಬೇಕು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಹೇಳಿದರು. ಆಳ್ವಾಸ್ ಕಾಲೇಜಿನ ಎ.ವಿ. ಸಭಾಂಗಣದಲ್ಲಿ ಇಂಗ್ಲಿಷ್ ವಿಭಾಗ ಮತ್ತು ಐಕ್ಯೂಎಸಿ ಆಶ್ರಯದಲ್ಲಿ ‘ಗ್ಲಿಸ್ಟನ್ ಸಾಹಿತ್ಯ ವೇದಿಕೆ’ ಮತ್ತು ‘ಇಂಗ್ಲಿಷ್ ಪ್ರಾಕ್ಟಿಸ್ ಸರ್ಟಿಫಿಕೇಟ್ ಕೋರ್ಸ್’ ಹಾಗೂ ‘ಆಳ್ವಾಸ್ ಇಂಗ್-ಗೈಡ್’ ಯೂಟ್ಯೂಬ್ ಚಾನೆಲ್ ಅನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಕಲಿಕೆಯನ್ನು ಸುಲಭಗೊಳಿಸಲು ಈ ಚಾನೆಲ್ ಸಹಾಯಕವಾಗಲಿದೆ ಎಂದರು. ನಮ್ಮನ್ನು ನಾವೇ ಸರ್ವ ರೀತಿಯಲ್ಲಿ ಧೃಡಗೊಳಿಸಲು ಸಂವಹನ ಸಹಕಾರಿಯಾಗಿದೆ. ಪರಿಣಾಮಕಾರಿ ಸಂವಹನವು ಭಾಷಾ ಜ್ಞಾನವನ್ನು ಹೆಚ್ಚಿಸುತ್ತದೆ ಎಂದು ಹೇಳಿದರು. ಕರ್ಜೆ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಧ್ಯಾಪಕ ರಾಜೇಶ್ ಆನಂದ್ ಮಾತನಾಡಿ, ಸಾಹಿತ್ಯ ಮತ್ತು ಭಾಷೆ ಎರಡು ಒಂದು ನಾಣ್ಯದ ಎರಡು ಮುಖಗಳಿದ್ದಂತೆ ಸಾಹಿತ್ಯವು ಭಾಷಾ ಪರಿಪೂರ್ಣತೆಯನ್ನು ಹೆಚ್ಚಿಸುತ್ತದೆ. ಭಾಷೆಯಿಂದ ಆಲಿಸುವ ಮತ್ತು ಮಾತನಾಡುವ ಕೌಶಲ ಅಭಿವೃದ್ಧಿಯಾಗುತ್ತದೆ ಎಂದು…