Author: admin

ಪುಣೆ ಬಂಟರ ಸಂಘದ ನವರಾತ್ರಿ ಉತ್ಸವ, ತೆನೆ ಹಬ್ಬ, ದಾಂಡಿಯಾ ಕಾರ್ಯಕ್ರಮವು ಅಕ್ಟೋಬರ್ 12ರಂದು ಬಂಟರ ಭವನದಲ್ಲಿ ಜರಗಿತು. ಪುಣೆ ಬಂಟರ ಸಂಘ ಅಧ್ಯಕ್ಷರಾದ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆಯವರ ಅಧ್ಯಕ್ಷತೆಯಲ್ಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಮಹಾರಾಷ್ಟ್ರ ಸರಕಾರದ ಉನ್ನತ ಶಿಕ್ಷಣ ಮತ್ತು ತಾಂತ್ರಿಕ ಶಿಕ್ಷಣ ಸಚಿವರಾದ ಚಂದ್ರಕಾಂತ್ ದಾದಾ ಪಾಟೀಲ್, ಕೇಂದ್ರ ಸರಕಾರದ ಸಚಿವ ಪುಣೆ ಸಂಸದರಾದ ಮುರಳಿಧರ್ ಮೊಹೊಲ್, ಗೌರವ ಅತಿಥಿಗಳಾಗಿ ಬಾರಮತಿಯ ಹೋಟೆಲ್ ಉದ್ಯಮಿ ಪುಣೆ ಬಂಟರ ಸಂಘ ಟ್ರಸ್ಟಿ ಶ್ರೀಧರ್ ಶೆಟ್ಟಿ, ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘದ ಮಹಿಳಾ ಕಾರ್ಯಾಧ್ಯಕ್ಷೆ ಪ್ರಭಾ ಎಸ್ ಶೆಟ್ಟಿ, ಬಂಟ್ಸ್ ಅಸೋಸಿಯೇಷನ್ ನ ಮಹಿಳಾ ಕಾರ್ಯಾಧ್ಯಕ್ಷೆ ರೇಷ್ಮಾ ಎಸ್ ಶೆಟ್ಟಿ, ಸಂಘದ ಸುವರ್ಣ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷ ಕುಶಲ್ ಹೆಗ್ಡೆ, ಕಾರ್ಯಾಧ್ಯಕ್ಷ ವಿಶ್ವನಾಥ್ ಶೆಟ್ಟಿ, ಸಂಘದ ಮಾಜಿ ಅಧ್ಯಕ್ಷ ಸದಾನಂದ ಕೆ ಶೆಟ್ಟಿ, ಉಪಾಧ್ಯಕ್ಷರುಗಳಾದ ಎರ್ಮಾಳ್ ಚಂದ್ರಹಾಸ್ ಶೆಟ್ಟಿ, ಪ್ರವೀಣ್ ಶೆಟ್ಟಿ…

Read More

ಮುಂಬೈ ವಿಶ್ವವಿದ್ಯಾಲಯದ 65 ವಿಭಾಗಗಳಲ್ಲಿ ಅತೀ ಹೆಚ್ಚು ಕೃತಿಗಳನ್ನು ಪ್ರಕಟಣೆ ಮಾಡಿದ ಹಿರಿಮೆ ಕನ್ನಡ ವಿಭಾಗದ್ದಾಗಿದೆ. ಕನ್ನಡದ ಪ್ರಚಾರ, ಪ್ರಸಾರದ ಕೈಂಕರ್ಯವನ್ನು ವಿಭಾಗ ಸತತವಾಗಿ ಮಾಡುತ್ತಿದೆ. ಕನ್ನಡ ಸಾಹಿತ್ಯ ಅತ್ಯಂತ ಶ್ರೀಮಂತವಾದುದು, ಸಮೃದ್ಧವಾದುದು. ವಿದ್ಯಾರ್ಥಿಗಳು ಒಳ್ಳೆಯ ಸಾಹಿತ್ಯವನ್ನು ಬೆಳೆಯುವ, ಕಟಾವು ಮಾಡುವ, ಆನಂದ ಪಡುವ ಕಾರ್ಯವನ್ನು ಮಾಡಬೇಕಾಗಿದೆ ಎಂದು ಮುಂಬೈ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಮುಖ್ಯಸ್ಥರು, ಪ್ರಾಧ್ಯಾಪಕರೂ ಆದ ಪ್ರೊ. ಜಿ. ಎನ್. ಉಪಾಧ್ಯ ಅವರು ಕರೆ ಕೊಟ್ಟರು. ಅವರು ಅಕ್ಟೋಬರ್ 19ರ ಶನಿವಾರದಂದು ಕಲೀನಾ ಕ್ಯಾಂಪಸ್ ನ ಜೆ.‌ಪಿ. ನಾಯಕ್ ಭವನದಲ್ಲಿ ನಡೆದ ಮೂರು ಕೃತಿಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಅಧ್ಯಕ್ಷ ಸ್ಥಾನವನ್ನು ವಹಿಸಿ ಮಾತನಾಡುತ್ತಿದ್ದರು. ಭರತನ ನಾಟ್ಯ ಶಾಸ್ತ್ರದಲ್ಲಿ ಹೇಳಿರುವಂತೆ ಕಾವ್ಯವನ್ನು ಓದುವುದರಿಂದ ಆಗುವ ಪ್ರಯೋಜನಗಳನ್ನು, ನಮ್ಮ ಚಿತ್ತದಲ್ಲಿ ಆಗುವ ವಿಕಾಸ, ವಿಸ್ತಾರ, ವಿಕ್ಷೋಭ ಮತ್ತು ವಿಕ್ಷೇಪ ಎಂಬ ನಾಲ್ಕು ರೀತಿಯ ಪ್ರಕ್ರಿಯೆಗಳನ್ನು ಅವರು ಈ ಸಂದರ್ಭದಲ್ಲಿ ಸವಿಸ್ತಾರವಾಗಿ ವಿವರಿಸಿದರು. ಅವರು ಅಂದು ಬಿಡುಗಡೆ ಕಂಡ ಕೃತಿಕಾರರ ಸಾಧನೆಗಳನ್ನು ಪರಿಚಯಿಸಿ…

Read More

ವಿದ್ಯಾಗಿರಿ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಮೂಡಬಿದಿರೆ ರೋಟರಿ ಕ್ಲಬ್‌ನ ಸಹಯೋಗದಲ್ಲಿ ಪ್ರತಿಷ್ಠಾನದ ಎಲ್ಲಾ ಸಂಸ್ಥೆಗಳ ವಿದ್ಯಾರ್ಥಿನಿಯರಿಗೆ ಗರ್ಭಕಂಠದ ಕ್ಯಾನ್ಸರ್ ಮತ್ತು ಎಚ್‌ಪಿವಿ ಲಸಿಕೆ ಕುರಿತು ಜಾಗೃತಿ ಕಾರ್ಯಕ್ರಮವನ್ನು ಅಕ್ಟೋಬರ್15 ರಿಂದ 22ರವರೆಗೆ ಹಮ್ಮಿಕೊಂಡು ಯಶಸ್ವಿಗೊಳಿಸಲಾಯಿತು. ಆಳ್ವಾಸ್ (ಸ್ವಾಯತ್ತ) ಪದವಿ ವಿದ್ಯಾರ್ಥಿನಿಯರಿಗೆ ಎಚ್‌ಪಿವಿ (ಹ್ಯೂಮನ್ ಪ್ಯಾಪಿಲೋಮ ವೈರಸ್) ಲಸಿಕೆ ಜಾಗೃತಿ ಕುರಿತು ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಡಾ. ಮರಿಯಾ ನೆಲ್ಲಿಯನಿಲ್ ಮತ್ತು ಡಾ ಸುಶಾಂತ ಪೆರ್ಡೂರು, ಆಳ್ವಾಸ್ ಆಯುರ್ವೇದ ವಿದ್ಯಾರ್ಥಿನಿಯರಿಗೆ ಡಾ ರಮ್ಯಾ ಎನ್ ಆರ್, ಇಂಜಿನಿಯರಿಂಗ್ ಕಾಲೇಜಿನಲ್ಲಿ ಡಾ ಸುಪ್ರಜ್ಯಾ ಶೆಟ್ಟಿ ಮತ್ತು ಡಾ ಸೌಧ, ನ್ಯಾಚುರೋಪತಿ ಹಾಗೂ ಹೋಮಿಯೋಪತಿ ವಿದ್ಯಾರ್ಥಿನಿಯರಿಗೆ ಡಾ ಅದಿತಿ ಶೆಟ್ಟಿ, ಫಿಸಿಯೋಥೆರಫಿ ಮತ್ತು ಅಲೈಡ್ ಹೆಲ್ತ್ ಸೈನ್ಸ್ಸ್ ವಿದ್ಯಾರ್ಥಿನಿಯರಿಗೆ ಡಾ ನಿಶಿತ ಶೆಟ್ಟಿಯಾನ್ ಫೆರ್ನಾಂಡಿಸ್, ಬಿಪಿಎಡ್, ಎಂಪಿಎಡ್, ಬಿ.ಎಡ್ ಹಾಗೂ ಆಳ್ವಾಸ್ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಡಾ ಹನಾ ಶೆಟ್ಟಿ, ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳಿಗೆ ಡಾ ಸಹನಾ ಜಿ, ಡಾ ಮಾನಸಿ ಪಿ ಎಸ್ ರವರಿಂದ ಜಾಗೃತಿ ಕರ‍್ಯಕ್ರಮ…

Read More

ಬ್ರಹ್ಮಾವರ ಜಿ ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್ ನಲ್ಲಿ ಅಕ್ಟೋಬರ್ 25 ರಂದು ಚಿಣ್ಣರ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು. ಜಿ ಎಮ್ ಛತ್ರಛಾಯದಲ್ಲಿ ಪ್ರಿ ನರ್ಸರಿಯಿಂದ ಎರಡನೇ ತರಗತಿಯವರೆಗಿನ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಅತ್ಯಂತ ಆಸಕ್ತಿಯಿಂದ ಪಾಲ್ಗೊಂಡು ಕ್ರೀಡಾಸ್ಫೂರ್ತಿಯನ್ನು ಮೆರೆದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಉಡುಪಿಯ ಮಿತ್ರ ಆಸ್ಪತ್ರೆಯಲ್ಲಿ ದಂತ ತಜ್ಞೆಯಾಗಿ ಕಾರ್ಯನಿರ್ವಹಿಸುತ್ತಿರುವ ಜಿ ಎಮ್ ನ ಹಳೆ ವಿದ್ಯಾರ್ಥಿನಿ ಡಾ. ತ್ರಿಶಾ ಹೆಗ್ಡೆ ಆಗಮಿಸಿದ್ದರು. ಅವರು ಜ್ಯೋತಿಯನ್ನು ಬೆಳಗಿಸಿ ಕ್ರೀಡಾಕೂಟಕ್ಕೆ ಚಾಲನೆಯನ್ನು ನೀಡಿ ಮಾತನಾಡಿ, ಮಕ್ಕಳು ಬಾಲ್ಯದಲ್ಲಿ ತಮ್ಮನ್ನು ತಾವು ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಲು ಪೆÇೀಷಕರು ಉತ್ತೇಜಿಸಬೇಕೆಂದರು. ಶಾಲಾ ಪ್ರಾಂಶುಪಾಲರಾದ ಜಾರ್ಜ್ ಕುರಿಯನ್ ಶಾಲಾ ಧ್ವಜವನ್ನು ಅರಳಿಸಿ ಮಾತನಾಡಿ ಕ್ರೀಡೆಗಳಿಂದ ಸಾಮಾಜಿಕ, ನೈತಿಕ ಮೌಲ್ಯಗಳ ಕಲಿಕೆಯಾಗುತ್ತದೆ ಜೊತೆಗೆ ಬದುಕಿಗೆ ಬೇಕಾದ ಜೀವನ ಮೌಲ್ಯಗಳು ವೃದ್ಧಿಯಾಗುತ್ತದೆ ಎಂದರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿ ಎಲ್ಲಾ ಪುಟಾಣಿ ಮಕ್ಕಳಿಗೆ ಶುಭಹಾರೈಸಿ, ತಮ್ಮ ಮಕ್ಕಳನ್ನು ಪೆÇ್ರೀತ್ಸಾಹಿಸಲು ಆಗಮಿಸಿದ ಪೆÇೀಷಕರಿಗೆ ಅಭಿನಂದನೆ ಸಲ್ಲಿಸಿದರು. ನಂತರ ವಿದ್ಯಾರ್ಥಿಗಳ ಜೀವನದಲ್ಲಿ…

Read More

2024ರಲ್ಲಿ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ನಿರ್ಮಿಸಿದ ತುಳುನಾಡಿನ ಸಾಕ್ಷ್ಯಚಿತ್ರ ಪಿಲಿವೇಷ (ಹುಲಿವೇಷ), ಟೋಕಿಯೊ ಸಾಕ್ಷ್ಯಚಿತ್ರ ಚಲನಚಿತ್ರೋತ್ಸವ (TDFF) 2024 ರಲ್ಲಿ ಅಧಿಕೃತ ಆಯ್ಕೆಯನ್ನು ಗಳಿಸಿದೆ. ಈ ಚಲನಚಿತ್ರವನ್ನು ದೃಶ್ಯ ಮಾನವಶಾಸ್ತ್ರ ಮತ್ತು ಎಥ್ನೋಗ್ರಾಫಿಕ್ ಫಿಲ್ಮ್ ವರ್ಗದಲ್ಲಿ ಪ್ರದರ್ಶಿಸಲು ಆಯ್ಕೆ ಮಾಡಲಾಗಿದೆ. ಪ್ರಪಂಚದಾದ್ಯಂತದ 800 ಕ್ಕೂ ಹೆಚ್ಚು ಆಯ್ಕೆಗಳಲ್ಲಿ, ಭಾರತದಿಂದ ಆಯ್ಕೆಯಾದ ಎರಡು ಚಲನಚಿತ್ರಗಳಲ್ಲಿ ಒಂದಾಗಿದೆ. ಇದು ಮಾಹೆ ಮತ್ತು ಅದು ಪ್ರತಿನಿಧಿಸುವ ಪ್ರದೇಶಕ್ಕೆ ಗಮನಾರ್ಹ ಸಾಧನೆಯಾಗಿದೆ. ಸಾಕ್ಷ್ಯಚಿತ್ರವನ್ನು ಡಿಸೆಂಬರ್ 5, 2024 ರಂದು ಉತ್ಸವದ ಭಾಗವಾಗಿ ಪ್ರದರ್ಶಿಸಲು ನಿರ್ಧರಿಸಲಾಗಿದೆ. ಇದು ನವೆಂಬರ್ 30 ರಿಂದ ಡಿಸೆಂಬರ್ 13, 2024 ರವರೆಗೆ ನಡೆಯುವ ಕಾರ್ಯಕ್ರಮವಾಗಿದೆ. ಇಂಟರ್ ಕಲ್ಚರಲ್ ಸ್ಟಡೀಸ್ ಮತ್ತು ಡೈಲಾಗ್ ಕೇಂದ್ರದ (CISD) ಸಂಯೋಜಕ ಡಾ. ಪ್ರವೀಣ್ ಕೆ ಶೆಟ್ಟಿ ಹಾಗೂ CISD ನಲ್ಲಿ ಸಂಶೋಧನಾ ಸಹವರ್ತಿ ಶ್ರೀ ನಿತೇಶ್ ಅಂಚನ್ ನಿರ್ದೇಶಿಸಿದ್ದಾರೆ. ಚಿತ್ರವು ಕರಾವಳಿ ಕರ್ನಾಟಕ ಪ್ರದೇಶಕ್ಕೆ ಸ್ಥಳೀಯವಾದ ಸಾಂಪ್ರದಾಯಿಕ ಜಾನಪದ ನೃತ್ಯವಾದ ಪಿಲಿವೇಷದ ಅನ್ವೇಷಣೆಯನ್ನು…

Read More

ಸಂಜ್ಞಾದೇವಿ ಸೂರ್ಯನ ಪತ್ನಿ ಸೂರ್ಯನ ದೇಹ ತಾಪವನ್ನು ತಾಳಲಾರದೆ ಈಕೆ ತನ್ನ ಶರೀರದಿಂದ ತನ್ನಂತೆ ಇರುವ ಒಬ್ಬ ತರುಣಿಯನ್ನು ಸೃಜಿಸಿ, ಆಕೆಗೆ ಛಾಯೆಯೆಂದು ಹೆಸರಿಟ್ಟು ತನ್ನ ಪತಿಯೊಂದಿಗೆ ಸಂಸಾರ ಮಾಡಿಕೊಂಡಿರುವಂತೆಯೂ, ತನ್ನ ಮಕ್ಕಳನ್ನು ಮಾತೃ ವಾತ್ಸಲ್ಯದಿಂದ ಕಾಣುವಂತೆಯೂ ಗುಟ್ಟನ್ನು ರಟ್ಟು ಮಾಡದಂತೆಯೂ ಹೇಳಿ ತಪಸ್ಸಿಗೆ ಹೋದಳು. ಇತ್ತ ಸೂರ್ಯನೂ ಛಾಯೆಯನ್ನು ಸಂಜ್ಞೆಯಂದೇ ತಿಳಿದ. ಛಾಯೆ ಸೂರ್ಯನಿಂದ ಮನುವಿನಂತೆಯೇ ಇರುವ ಸಾವರ್ಣಿ ಮನುವನ್ನೂ ಶನಿ ಮತ್ತು ತಪತಿಯರನ್ನೂ ಹೆತ್ತಳು. ಕ್ರಮೇಣ ಛಾಯೆ, ಸಂಜ್ಞೆಯ ಮಕ್ಕಳನ್ನು ಅಸಡ್ಡೆ ಮಾಡತೊಡಗಿದಳು. ಇದನ್ನು ಸಹಿಸದ ಯಮ ತನ್ನ ಬಲಗಾಲನ್ನು ಎತ್ತಿ ತೋರಿಸಿ ಛಾಯೆಯನ್ನು ಹೆದರಿಸಿದ. ಆಗ ಛಾಯೆ ನಿನ್ನ ಕಾಲಲ್ಲಿ ಹುಳು ಬಿದ್ದು ವಾಸನೆ ಹಿಡಿಯಲಿ ಎಂದು ಶಾಪವಿತ್ತಳು. ಅನಂತರ ಯಮ ಸೂರ್ಯನಿಗೆ ಈ ವಿಚಾರ ತಿಳಿಸಿ ಛಾಯೆ ತನ್ನ ತಾಯಿ ಅಲ್ಲ ಎಂದು ಹೇಳಿದ. ಸೂರ್ಯ ಹುಳು ಬಿದ್ದ ಯಮನ ಕಾಲಿಗೆ ಪರಿಹಾರ ಹೇಳಿ, ಸಂಜ್ಞೆಯ ತಂದೆ ತ್ವಷ್ಟೃವನ್ನು ಕಂಡು ನಡೆದ ವೃತ್ತಾಂತವನ್ನು ತಿಳುಹಿದ. ತ್ವಷ್ಟೃ…

Read More

ಮೂಡುಬಿದಿರೆ: ಕಾಲೇಜು ಜೀವನವು ವಿದ್ಯಾರ್ಥಿ ಜೀವನದ ಒಂದು ವಿಶಿಷ್ಟವಾದ ಹಂತ. ಇದು ಸಂಪೂರ್ಣವಾಗಿ ತಾರುಣ್ಯವು ಅಲ್ಲದ ಸಂಪೂರ್ಣವಾಗಿ ವಯಸ್ಕರು ಅಲ್ಲದ ಸಮಯ. ಇಲ್ಲಿ ಸಾಕಷ್ಟು ಸವಾಲು ನಮ್ಮ ಮುಂದೆ ಇರುತ್ತದೆ. ನಾವು ಸ್ವಾತಂತ್ರ‍್ಯವನ್ನು ಬಯಸುತ್ತಿರುವಾಗ, ಆರ್ಥಿಕವಾಗಿ ಹೆತ್ತವರ ಮೇಲೆ ಅವಲಂಬಿತರಾಗುತ್ತೇವೆ. ನಮ್ಮ ಮನಸ್ಸು ಹಲವಾರು ಹೊಸ ಸಾಧ್ಯತೆಗಳನ್ನು ಅನ್ವೇಷಿಸುವ ಹಂತವಿದು ಎಂದು ಖ್ಯಾತ ಮನೋವೈದ್ಯ ಡಾ ಪಿ ವಿ ಭಂಡಾರಿ ನುಡಿದರು. ಅವರು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಂಸ್ಥೆಗಳಾದ ಫಿಸಿಯೋಥೆರಪಿ ಕಾಲೇಜು ಹಾಗೂ ಅಲೈಡ್ ಹೆಲ್ತ್ ಸೈನ್ಸ್ಸ್ ಕಾಲೇಜುಗಳ 2024-25 ಸಾಲಿನ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಅಭಿವಿನ್ಯಾಸ ಕರ‍್ಯಕ್ರಮದಲ್ಲಿ ಮಾತನಾಡಿದರು. ಸಮತೋಲನ ಕಾಪಾಡಿಕೊಳ್ಳುವುದು ಅಗತ್ಯ. ಶೈಕ್ಷಣಿಕ ಜೀವನದಲ್ಲಿ ವಿದ್ಯಾರ್ಥಿಗಳು ಸಾಮಾನ್ಯವಾಗಿ ಮೂರು ರೀತಿಯ ಒತ್ತಡಗಳನ್ನು ಅನುಭವಿಸುತ್ತಾರೆ. ಮೊದಲನೆಯದಾಗಿ ಶೈಕ್ಷಣಿಕ ಒತ್ತಡ, ಎರಡನೆಯದು ಕಾಲೇಜಿನ ನಿಯಮ, ನಿಬಂಧನೆಗಳನ್ನು ಪಾಲಿಸುವ ಒತ್ತಡ, ಮೂರನೆಯದು, ಸಹಪಾಠಿಗಳ ಜೊತೆಗೆ ಹೊಂದಿಕೊಳ್ಳುವ ಒತ್ತಡ. ಈ ರೀತಿಯ ಒತ್ತಡಗಳು ಅಗತ್ಯ. ಆದರೆ ಇವುಗಳ ನಡುವೆ ಸಮತೋಲನವನ್ನು ಕಾಪಾಡಿಕೊಳ್ಳುವ ಕೌಶಲವನ್ನು ಬೆಳೆಸಿಕೊಳ್ಳಬೇಕು ಎಂದರು.…

Read More

ಸಮಾಜ ಸೇವಕ ಎನ್ ಸಿ ಪಿ ಮುಖಂಡ ಕಳತ್ತೂರು ವಿಶ್ವನಾಥ ಶೆಟ್ಟಿ ಅವರನ್ನು ವಿಮಾನ ನಿಲ್ದಾಣಗಳ ವಾಯುಯಾನ ನೌಕರರ (ಎಎಇಯು) ಸಂಘದ ಕರ್ನಾಟಕ ರಾಜ್ಯ ಸಂಚಾಲಕರಾಗಿ ನೇಮಕ ಮಾಡಲಾಗಿದೆ. ಎಎಇಯು ಸಂಘದ ಅಖಿಲ ಭಾರತ ಅಧ್ಯಕ್ಷ ಡಾ. ನಿತಿನ್ ಜಾಧವ್ ಅವರು ಈ ನೇಮಕಾತಿ ಮಾಡಿದ್ದು, ಈ ಕುರಿತ ನೇಮಕಾತಿ ಪತ್ರವನ್ನು ಅಕ್ಟೋಬರ್ 15ರಂದು ವಿಶ್ವನಾಥ್ ಶೆಟ್ಟಿ ಅವರಿಗೆ ನೀಡಿದ್ದಾರೆ. ಎಎಇಯು ಸಂಘದ ಕರ್ನಾಟಕದ ಸಂಚಾಲಕರಾಗಿ ನೇಮಕವಾದ ವಿಶ್ವನಾಥ್ ಶೆಟ್ಟಿ ಅವರು ಕರ್ನಾಟಕದ ವಿಮಾನ ನಿಲ್ದಾಣಗಳಲ್ಲಿ ಎಎಇಯು ಘಟಕಗಳ ರಚನೆ ಮಾಡುವುದಕ್ಕೆ ಸಂಘವು ಸೂಚಿಸಿದೆ ಎಂದು ಎಎಇಯು ಪ್ರಕಟಣೆ ತಿಳಿಸಿದೆ.

Read More

ಕರಾವಳಿಯ ರಂಗಭೂಮಿಯಲ್ಲಿ ಸದಭಿರುಚಿಯ ಹಾಸ್ಯವನ್ನು ಮಾತ್ರ ಪ್ರೇಕ್ಷಕರು ಒಪ್ಪುತ್ತಾರೆ. ಹಾಸ್ಯ ಕಲಾವಿದರೂ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದು ತುಳುರಂಗ ಭೂಮಿ ಕಲಾವಿದ ತುಳುನಾಡಿನ ಮಾಣಿಕ್ಯ ಖ್ಯಾತಿಯ ಅರವಿಂದ ಬೋಳಾರ್ ಹೇಳಿದರು. ಮಂಗಳೂರು ಪ್ರೆಸ್ ಕ್ಲಬ್ ವತಿಯಿಂದ ಗೌರವ ಅತಿಥಿ ಕಾರ್ಯಕ್ರಮದಲ್ಲಿ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿದರು. ಕಲಾವಿದರು ಸಮಯ ಪ್ರಜ್ಞೆಯನ್ನು ಮರೆಯಬೇಕು. ಒಬ್ಬ ಕಲಾವಿದನ ಮಾತನ್ನು ಜನರು ಸ್ವೀಕರಿಸುತ್ತಾರೆ ಎಂದರೆ ಆತನಿಗೆ ಅದಕ್ಕಿಂತ ಬೇರೆ ಯಾವ ಭಾಗ್ಯ ಬೇಕು? ಕಲಾ ರಂಗದಲ್ಲಿ ನಾನು ಗರ್ಭಗುಡಿಯ ಮೂರ್ತಿಯಾಗಿಯೇ ಇರಲು ಇಷ್ಟಪಡುತ್ತೇನೆಯೇ ವಿನಃ ಉತ್ಸಹ ಮೂರ್ತಿಯಾಗಿ ಅಲ್ಲ. ರಂಗಭೂಮಿ ಕಲಾವಿದನಾಗಿ ನಿಷ್ಠೆಯಿಂದ ಕೆಲಸ ಮಾಡಿದ್ದೇನೆ. ಜನತೆಯ ಪ್ರೇರಣೆಯಿಂದಲೇ ಹಾಸ್ಯವನ್ನು ನಾನು ಸ್ವೀಕರಿಸಿದ್ದು, ಜೀವನದಲ್ಲಿ ಮುಂದುವರಿಸುತ್ತಿದ್ದೇನೆ. ಪ್ರತಿ ಬಾರಿಯೂ ಹಾಸ್ಯದಲ್ಲಿ ಹೊಸತನವನ್ನು ತರಲು ಪ್ರಯತ್ನಿಸುತ್ತೇನೆ. ಇದು ಕಲಾವಿದರಿಗೂ ದೊಡ್ಡ ಸವಾಲೇ ಸರಿ ಎಂದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತುಳು ರಂಗಭೂಮಿ…

Read More

ಮೂಡುಬಿದಿರೆ: ಸಂಶೋಧನೆ ಮಾನಸಿಕ ಸದೃಢತೆ, ಶ್ರಮ, ಅಧ್ಯಯನ, ತರ್ಕ, ತಾರ್ಕಿಕ ಚಿಂತನೆಗಳ ಒಟ್ಟು ಫಲ ಎಂದು ಸಿದ್ದಕಟ್ಟೆ ಪ್ರಥಮ ದರ್ಜೆ ಕಾಲೇಜಿನ ಪ್ರಾಚರ‍್ಯ ಡಾ ಅಜಕ್ಕಳ ಗಿರೀಶ್ ಭಟ್ ನುಡಿದರು. ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ಫೋರಮ್‌ವತಿಯಿಂದ ಗುರುವಾರ ಪಿಜಿ ಸೆಮಿನಾರ್ ಹಾಲ್ ನಲ್ಲಿ ನಡೆದ ಅತಿಥಿ ಉಪನ್ಯಾಸ ಕರ‍್ಯಕ್ರಮದಲ್ಲಿ ಅವರು ಮಾತನಾಡಿದರು. ಸಂಶೋಧನ ಕ್ಷೇತ್ರಕ್ಕೆ ಬರುವ ಮೊದಲು ವಿದ್ಯಾರ್ಥಿಗಳು ಓದು, ಚರ್ಚೆ ಮತ್ತು ಬೌದ್ಧಿಕ ಚಿಂತನೆಯ ಮೂಲಕ ಮಾನಸಿಕವಾಗಿ ತಮ್ಮನ್ನು ತಾವು ಸಿದ್ಧಪಡಿಸಿಕೊಳ್ಳಬೇಕು. ವಿಜ್ಞಾನ ಸಂಶೋಧನೆಯು ತಂತ್ರಜ್ಞಾನ ಮತ್ತು ನಾವೀನ್ಯತೆಗೆ ಕಾರಣವಾದರೆ, ಸಮಾಜ ವಿಜ್ಞಾನದ ಸಂಶೋಧನೆಗಳು ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವುದರ ಜೊತೆಗೆ ನೀತಿ ನಿಯಮಗಳ ಮೇಲೆ ಪ್ರಭಾವ ಬೀರಿ ಆಡಳಿತ, ಪರಿಸರ, ಕೈಗಾರಿಕೆ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಬದಲಾವಣೆ ತರಬಲ್ಲದು ಎಂದರು. ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬ ಉಕ್ತಿಯ ತಾತ್ಪರ್ಯ ಪ್ರಶ್ನೆ ಮಾಡಿ ಉತ್ತರ ತಿಳಿಯುವುದಾಗಿದೆಯೇ ಹೊರತು ಗುಲಾಮನಾಗಿರುವುದಲ್ಲ. ಯಶಸ್ಸಿಗೆ ಭಾಷೆ ಮುಖ್ಯ. ವಿಷಯದ ಬಗ್ಗೆ ಜ್ಞಾನವಿದ್ದರು,…

Read More