Author: admin
ಎಂ.ಆರ್.ಜಿ.ಗ್ರೂಪ್ ಮತ್ತು ಮ್ಯಾರಿಯೆಟ್ ಹೊಟೇಲ್ಸ್ ಸಹಯೋಗದಲ್ಲಿ ನವಿ ಮಂಬಯಿಯಲ್ಲಿ ಹೊಸ ಹೋಟೆಲ್ ‘ಮ್ಯಾರಿಯಟ್ ನವಿ ಮುಂಬಯಿ’
ಆತಿಥ್ಯ ಕ್ಷೇತ್ರದಲ್ಲಿ ಮತ್ತು ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಹೆಸರಾಗಿರುವ ಎಂ.ಆರ್.ಜಿ.ಗ್ರೂಪ್ ಮತ್ತು ಮ್ಯಾರಿಯೆಟ್ ಹೊಟೇಲ್ಸ್ ಗಳು ನವ ಮುಂಬಯಿಯಲ್ಲಿ ಜಂಟಿಯಾಗಿ ಆತಿಥ್ಯೋದ್ಯಮಕ್ಕೆ ಶುಭಾರಂಭ ಮಾಡಿವೆ. ಛತ್ರಪತಿ ಶಿವಾಜಿ ಮಹಾರಾಜ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 26 ಕಿ.ಮೀ. ದೂರದಲ್ಲಿರುವ ನವಿ ಮುಂಬಯಿ ಮ್ಯಾರಿಯೆಟ್ ಹೊಟೇಲ್ ವ್ಯಾಪಾರೋದ್ಯಮಿ ಪ್ರವಾಸಿಗರು ಮತ್ತು ರಜೆ ಸಮಯ ಕಳೆಯುವ ಪ್ರವಾಸಿಗರಿಗೆ ಅನುಕೂಲಕರ ತಾಣವಾಗಿದೆ. ದೇಶೀಯ ಮತ್ತು ಅಂತರಾಷ್ಟ್ರೀಯ ಅತಿಥಿಗಳಿಗೂ ಇದು ಅಡೆ ತಡೆ ರಹಿತ ಪ್ರಯಾಣಕ್ಕೆ ಅನುಕೂಲಕರವಾದಂತಹ ಸ್ಥಳದಲ್ಲಿದೆ. ಮಹಾರಾಷ್ಟ್ರದ ಕಡಲ ಕಿನಾರೆ ಇಲ್ಲಿ ಅತ್ಯಂತ ರಮಣೀಯವಾಗಿ ಅನಾವರಣಗೊಂಡಿದೆ. ಈ ಹೊಟೇಲು ಅತ್ಯಾಧುನಿಕ ಸವಲತ್ತುಗಳನ್ನು ಒಳಗೊಂಡಿದೆ. “ಎಂ.ಆರ್.ಜಿ.ಗ್ರೂಪಿನ ಹೊಸ ಸಾಧನೆ ಇದು. ನಾವು ಆತಿಥ್ಯೋದ್ಯಮದ ಬಗ್ಗೆ ಎಷ್ಟು ಕಾಳಜಿ ವಹಿಸುತ್ತೇವೆ ಎಂಬುದಕ್ಕೆ ಇದೊಂದು ನಿದರ್ಶನ. ಎಂ.ಆರ್.ಜಿ. ಗ್ರೂಪಿನ ದೇಶೀಯ ತಜ್ಞತೆ ಮತ್ತು ಮ್ಯಾರಿಯೆಟ್ ನ ಜಾಗತಿಕ ಪ್ರತಿಷ್ಠೆ ಜೊತೆಗೂಡಿ ಅತಿಥಿಗಳ ಪ್ರಯಾಣವನ್ನು ಮರುಕಲ್ಪಿಸುವ ಯತ್ನ ಇದು” ಎಂದು ಎಂ.ಆರ್.ಜಿ. ಗ್ರೂಪಿನ ಛೇರ್ಮನ್ ಕೆ.ಪ್ರಕಾಶ್ ಶೆಟ್ಟಿ ತಿಳಿಸಿದ್ದಾರೆ. …
ಡಾ. ಎಂ. ಮೋಹನ್ ಅಳ್ವ ನಮ್ಮ ಕಾಲಮಾನದ ಒಬ್ಬ ಮಹಾನ್ ಸಾಂಸ್ಕೃತಿಕ ರಾಯಭಾರಿ ಎಂಬುದು ವಿದ್ವತ್ ವಲಯದಿಂದ ಜನ ಸಾಮಾನ್ಯನವರೆಗೆ ಎಲ್ಲರೂ ಒಪ್ಪುವ ಮಾತು. ಮೋಹನ ಆಳ್ವರು ಮೂಲತಃ ಆಯುರ್ವೇದ ವೈದ್ಯರು. ಮೂಡುಬಿದಿರೆಯಲ್ಲಿ ಪುಟ್ಟ ಕ್ಲಿನಿಕ್ ತೆರೆದು ರೋಗಿಗಳಿಗೆ ಮದ್ದು ನೀಡಲಾರಂಭಿಸಿದ್ದ ಅವರು ವೃತ್ತಿಯ ಜತೆಗೆ ಪ್ರವೃತ್ತಿಯನ್ನೆಲ್ಲಾ ನಿರಂತರ ವಿಸ್ತರಿಸಿಕೊಂಡು ಸಾಹಿತ್ಯ, ಕಲೆ, ಸಂಸ್ಕೃತಿ ಹೀಗೆ ಸಾಮಾಜಿಕ, ಸಾಂಸ್ಕೃತಿಕ ಚಿಕಿತ್ಸಕರಾಗಿ ಬೆಳೆದಿದ್ದಾರೆ. ಅವರ ಸಾಹಿತ್ಯ ಪ್ರೇಮ, ಸಾಂಸ್ಕೃತಿಕ ಸಂಘಟನೆ, ಶಿಸ್ತು, ಸೌಂದರ್ಯ ಪ್ರಜ್ಞೆ, ಸಮಯ ಪ್ರಜ್ಞೆ ಹೀಗೆ ಸೃಜನಶೀಲತೆಯ ವಿಸ್ತಾರ ಬಹು ದೊಡ್ಡದು. ವಿರಾಸತ್, ನುಡಿಸಿರಿಗಳ ಮೂಲಕ ಒಂದೆಡೆ ಸಾಹಿತ್ಯ – ಸಂಸ್ಕೃತಿ ಹಾಗೂ ಇನ್ನೊಂದೆಡೆ ಶಿಕ್ಷಣ, ಆರೋಗ್ಯ, ಕ್ರೀಡೆ ಹೀಗೆ ಬಹುಮುಖೀ ಸಾಧಕರಾಗಿದ್ದಾರೆ. ಮೋಹನ ಆಳ್ವರು 1952ರ ಮೇ 31 ರಂದು ಜನಿಸಿದರು. ತಂದೆ ಮಿಜಾರುಗುತ್ತು ಆನಂದ ಆಳ್ವ. ತಾಯಿ ಸುಂದರಿ ಆಳ್ವ. ಮೋಹನ ಆಳ್ವರು ಹುಟ್ಟು ಕೃಷಿಕರು. ಅವರು ವೈದ್ಯರಾಗಲು ಮನಸ್ಸು ಮಾಡಿದ್ದು ಕೊಂಚ ವಿಳಂಬವಾಗಿಯೇ. ಅಯುರ್ವೇದ ವೈದ್ಯರಾಗಿ…
ಕಲೆ – ಕರಕುಶಲ, ಕಲಿಕೆಯ ಉತ್ಸಾಹವಿರಲಿ ಫ್ಯಾಷನ್ ಡಿಸೈನಿಂಗ್ ವಿಭಾಗದ ವತಿಯಿಂದ ನಡೆದ ‘ಆಳ್ವಾಸ್ ಎಲೇಷಿಯಾ’ ಕಾರ್ಯಕ್ರಮ
ವಿದ್ಯಾಗಿರಿ: ಕಲೆ ಮತ್ತು ಕರಕುಶಲ ಉತ್ಪನ್ನಗಳು ತನ್ನ ಸೌಂದರ್ಯದಿಂದಲೇ ಎಲ್ಲರನ್ನೂ ಸೆಳೆಯವ ಶಕ್ತಿ ಹೊಂದಿದೆ ಎಂದು ಪೇವಿಕ್ರಿಲ್ ಪಿಡಿಲೈಟ್ ಇಂಡಸ್ಟ್ರಿಯ ಪ್ರದೇಶ ಮಾರಾಟ ವ್ಯವಸ್ಥಾಪಕ ಸಂಗಮೇಶ ಮಾರಿಗುಡ್ಡಿ ಹೇಳಿದರು. ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣಲ್ಲಿ ಫ್ಯಾಷನ್ ಡಿಸೈನಿಂಗ್ (ವಸ್ತ್ರ ವಿನ್ಯಾಸ) ವಿಭಾಗದ ವತಿಯಿಂದ ನಡೆದ ‘ಆಳ್ವಾಸ್ ಎಲೇಷಿಯಾ’ ಕಾರ್ಯಕ್ರಮದಲ್ಲಿ ಗುರುವಾರ ಅವರು ಮಾತನಾಡಿದರು. ಕಲೆ ಮತ್ತು ಕರಕುಶಲ ಉತ್ಪನ್ನಗಳು ಎಲ್ಲರನ್ನೂ ತನ್ನ ಸೌಂದರ್ಯದಿಂದಲೇ ಆಕರ್ಷಿಸುತ್ತದೆ. ನೀವು ಅಂಗಡಿಗಳಲ್ಲಿ ಬೇಕಾದ ಕಲಾಕೃತಿ ಮತ್ತು ಕರಕುಶಲ ವಸ್ತುಗಳನ್ನು ಕೊಂಡುಕೊಳ್ಳಬಹುದು. ಆದರೆ ನಿಮಗೆ ಬೇಕಾದ ವಸ್ತುವನ್ನು ನೀವೇ ಕಲಿತು, ತಯಾರಿಸಿದಾಗ ಅದು ಹೆಚ್ಚಿನ ಖುಷಿಯನ್ನು ಕೊಡುತ್ತದೆ ಎಂದರು. ಆಳ್ವಾಸ್ ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಎಲ್ಲರೂ, ಎಲ್ಲರಿಗೂ ಚೆನ್ನಾಗಿ ಕಾಣಬೇಕು, ಎಲ್ಲರಿಗೂ ವಿಭಿನ್ನ ಶೈಲಿಯಲ್ಲಿ ಕಾಣಬೇಕು ಎನ್ನುವ ಹುಮ್ಮಸ್ಸು ಇರುತ್ತದೆ. ಕಾಲಕ್ಕೆ ತಕ್ಕಂತೆ ನಾವು ಕಾಣಬೇಕು ಎನ್ನುವುದು ಎಲ್ಲರ ಆಸೆಯಾಗಿರುತ್ತದೆ. ಬಾಲ್ಯದಲ್ಲಿ ನಮ್ಮಲ್ಲಿದ್ದ ಕಲೆ ಹಾಗೂ ಕರಕುಶಲ ಕಲಿಕೆಯ ಉತ್ಸಾಹ ನಮ್ಮಲ್ಲಿನ…
ಹೋಟೆಲ್ ಉದ್ಯಮದಲ್ಲಿ ದಕ್ಷಿಣ ಭಾರತದಾದ್ಯಂತ ಹೆಸರು ಮಾಡಿರುವ ಗೋಲ್ಡ್ ಫಿಂಚ್ ಗ್ರೂಪ್ ಆಫ್ ಹೋಟೆಲ್ಸ್ ಇದೀಗ ಮುಂಬಯಿಯಲ್ಲಿ ಪಂಚತಾರಾ ಹೋಟೆಲ್ ಆರಂಭಿಸಿದೆ. ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಮುಂಬಯಿ ಹೊರವಲಯದ ವಾಶಿಯಲ್ಲಿ ಈ ನೂತನ ಹೋಟೆಲ್ ಆರಂಭಗೊಂಡಿದೆ. ಮುಂಬಯಿ ನಗರಕ್ಕೆ ಪ್ರತಿಸ್ಪರ್ಧೆ ನೀಡುವುದರ ಜೊತೆ ಜೊತೆಗೆ ಯೋಜನಾಬದ್ಧ ನಗರವಾಗಿ ರೂಪುಗೊಳ್ಳುತ್ತಿರುವ ವಾಶಿಯಲ್ಲಿ ಆರಂಭಗೊಂಡಿರುವ ಈ ಪಂಚತಾರಾ ಹೋಟೆಲ್ ನ ನಿರ್ವಹಣೆಯನ್ನು ವಿಶ್ವದಾದ್ಯಂತ ಸರಣಿ ಹೋಟೆಲ್ ಗಳನ್ನು ನಡೆಸುತ್ತಿರುವ “ಜೆ ಡಬ್ಲ್ಯೂ ಮ್ಯಾರಿಯೆಟ್ ಗ್ರೂಪ್” ಮಾಡಲಿದೆ. ಅತ್ಯುತ್ತಮ ದರ್ಜೆಯ ವಿನ್ಯಾಸ, ಒಳಾಂಗಣಗಳನ್ನು ಹೊಂದಿರುವ ಈ ಹೋಟೆಲ್ ನಲ್ಲಿ, ಪ್ರೈವೇಟ್ ಬಾರ್ ಮತ್ತು ಪ್ಯಾಂಟ್ರಿ ಹೊಂದಿರುವ ಮ್ಯಾರಿಯೆಟ್ ಪೆಂಟ್ ಹೌಸ್ ಸೂಟ್, 8 ಮ್ಯಾರಿಯೆಟ್ ಎಕ್ಸಿಕ್ಯೂಟಿವ್ ರೂಮ್, 45 ಮ್ಯಾರಿಯೆಟ್ ಕ್ಲಬ್ ರೂಮ್, 98 ಪ್ರೀಮಿಯಂ ರೂಂ ಸಹಿತ ಒಟ್ಟು 152 ರೂಂಗಳಿವೆ. ಸ್ಥಳೀಯ ಹಾಗೂ ದೇಶ ವಿದೇಶಗಳ ಖಾದ್ಯಗಳ ಮೂರು ರೆಸ್ಟೋರೆಂಟ್ ಗಳಿವೆ. ಮೂರು ಬ್ಯಾಂಕ್ವೆಟ್ ಹಾಲ್ ಗಳನ್ನು ಹೋಟೆಲ್ ಒಳಗೊಂಡಿದೆ. ಜಿಮ್, ಫಿಟ್ನೆಸ್…
ಪ್ರಪಂಚಾದ್ಯಂತ ನೆಲೆಸಿರುವ ಜನರು ಕಾಪು ಮಾರಿಗುಡಿಯನ್ನೊಮ್ಮೆ ನೋಡಬೇಕು : ಶಿರೂರು ಶ್ರೀ ಶ್ರೀ ವೇದವರ್ಧನ ಸ್ವಾಮೀಜಿ
ಉಡುಪಿಯ ಅಷ್ಟಮಠಗಳಲ್ಲಿ ಒಂದಾಗಿರುವ ಶ್ರೀ ಶಿರೂರು ಮಠದ ಮಠಾಧೀಶರಾದ ಶ್ರೀ ಶ್ರೀ ವೇದವರ್ಧನ ಸ್ವಾಮೀಜಿ ಮತ್ತು ಮಠದ ದಿವಾನರಾದ ಉದಯ ಸರಳತ್ತಾಯ ಹಾಗೂ ಶ್ರೀಶ ಭಟ್ ಕಡೆಕಾರ್ ಅವರು ಮೇ 29 ರಂದು ಜಿರ್ಣೋದ್ಧಾರಗೊಳ್ಳುತ್ತಿರುವ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಆಗಮಿಸಿ ಕಾಪುವಿನ ಅಮ್ಮನ ದರುಶನವನ್ನು ಪಡೆದು ಶ್ರೀದೇವಿಗೆ ದೀಪ ಬೆಳಗಿ, ನವದುರ್ಗಾ ಮಂಟಪದಲ್ಲಿ ಆಶೀರ್ವಚನ ನೀಡಿದರು. ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿಯವರ ಸಮ್ಮುಖದಲ್ಲಿ ಜಿರ್ಣೋದ್ಧಾರ ಕಾಮಗಾರಿಗಳನ್ನು ವೀಕ್ಷಿಸಿದರು. ಮಾಧ್ಯಮದೊಂದಿಗೆ ಮಾತನಾಡಿದ ಅವರು ಭಕ್ತರು ಬರೇ ಭಾರತ ದೇಶದಲ್ಲಿ ಮಾತ್ರ ಅಲ್ಲ, ಪ್ರಪಂಚಾದ್ಯಂತ ನೆಲೆಸಿದ್ದಾರೆ. ದೇವರ ಸೇವೆ ಮಾಡಲು ಇದೊಂದು ಅವಕಾಶ. ಇಲ್ಲಿಗೆ ಬಂದು ಕಣ್ತುಂಬಿಕೊಳ್ಳಬೇಕು. ನಿರ್ಮಾಣ ಕಾರ್ಯಕ್ಕೆ ಸಹಕರಿಸಬೇಕು. ಎಲ್ಲರಿಗೂ ಇದು ನಮ್ಮ ದೇವಸ್ಥಾನ ಎಂಬ ಭಾವನೆ ಬರಬೇಕು. ಪರಮಾತ್ಮನ ಅನುಗ್ರಹವಿರಲಿ ಎಂದರು. ದೇವಳದ ಪ್ರಧಾನ ಅರ್ಚಕರಾದ ವೇ. ಮೂ. ಶ್ರೀನಿವಾಸ ತಂತ್ರಿ ಕಲ್ಯಾ, ಜಿರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯಾ, ಗೌರವಾಧ್ಯಕ್ಷ…
ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿಕೇಷನ್ ವತಿಯಿಂದ ಮೇ 31 ಸಂಸ್ಥೆಯ ಆವರಣದಲ್ಲಿ ‘ನಿಟ್ಟೆ ಕ್ರಿಯೇಟಿವಿಟಿ ಫೆಸ್ಟಿವಲ್‘‘ ಅನ್ನು ಹಮ್ಮಿಕೊಂಡಿದೆ. ದಿನವಿಡೀ ನಡೆಯುವ ಈ ಕಾರ್ಯಕ್ರಮದಲ್ಲಿ ಉಪನ್ಯಾಸಗಳು ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಇರಲಿವೆ. ಕೊಗ್ಗಾ ಭಾಸ್ಕರ್ ಕಾಮತ್ ಮತ್ತು ತಂಡದಿಂದ ಯಕ್ಷಗಾನ ಬೊಂಬೆ ಪ್ರದರ್ಶನವು ಈ ಕಾರ್ಯಕ್ರಮದ ಆಕರ್ಷಣೆಗಳಲ್ಲಿ ಒಂದಾಗಿರಲಿದೆ. ನಿಟ್ಟೆ ಕ್ರಿಯೇಟಿವಿಟಿ ಫೆಸ್ಟ್ನ ಎರಡನೇ ಆವೃತ್ತಿಯನ್ನು ಎಂ.ಎ (ಎರಡನೇ ವರ್ಷ) ವಿದ್ಯಾರ್ಥಿಗಳು ಈವೆಂಟ್ ಮ್ಯಾನೇಜ್ಮೆಂಟ್ ವಿಷಯದಲ್ಲಿ ತಮ್ಮ ಅಧ್ಯಯನದ ಭಾಗವಾಗಿ ಆಯೋಜಿಸುತ್ತಿದ್ದಾರೆ. ಕಾರ್ಯಕ್ರಮಕ್ಕೆ ಆಗಮಿಸುವ ಸಂಪನ್ಮೂಲ ವ್ಯಕ್ತಿಗಳ ಮಾಹಿತಿ ಹೀಗಿದೆ: ಕಾರ್ತಿಕ್ ವೆಂಕಟೇಶ್ – ಸಂಪಾದಕರು, ಪೆಂಗ್ವಿನ್ ಇಂಡಿಯಾ ಮೊಹಮ್ಮದ್ ಇಸ್ಮಾಯಿಲ್ – ಉಪಾಧ್ಯಕ್ಷರು, ಜಿಯೋ ಸಿನಿಮಾ ರಿತ್ವಿಕ್ ಕಾಯ್ಕಿಣಿ – ಸಂಗೀತ ಸಂಯೋಜಕರು ಮಮತಾ ರೈ – ಸಂಸ್ಥಾಪಕ ಅಧ್ಯಕ್ಷರು, ಕೇದಿಕೆ ಟ್ರಸ್ಟ್ ಚಂಡೆ ಮತ್ತು ಪಿಟೀಲು ಜುಗಲ್ಬಂದಿ – ಶ್ರೀ ಗುರು ಚಂಡೆ ಸೆಟ್ ಮತ್ತು ಆದ್ಯಾ ವಿಜಯನ್, ಮಂಗಳೂರು. ಭಾಸ್ಕರ್ ಕೊಗ್ಗಾ ಕಾಮತ್ ಅವರಿಂದ ಯಕ್ಷಗಾನ…
ಕುಂದಾಪುರ ತಾಲೂಕು ಯುವ ಬಂಟರ ಸಂಘದ ಗೃಹ ಚೇತನ ಯೋಜನೆಯಡಿ ಆಯ್ಕೆಯಾದ ಕುಂದಾಪುರ ತಾಲೂಕು ಕಮಲಶಿಲೆ ಗ್ರಾಮದ ಶ್ರೀಮತಿ ಸ್ವಾತಿ ಶೆಟ್ಟಿ ಇವರಿಗೆ ಸಂಘದ ದಶಮ ಸಂಭ್ರಮದ ಮಹಾಪೋಷಕರಾದ ಶ್ರೀ ಎಚ್. ಚಂದ್ರ ಶೆಟ್ಟಿ ಹೋಟೆಲ್ ಉದ್ಯಮಿ ಹೈದರಾಬಾದ್ ಇವರ ಶಿಫಾರಸಿನ ಮೇರೆಗೆ 50,000 ರೂಪಾಯಿ ಹಣವನ್ನು ಹಾಗೂ ಕುಂದಾಪುರ ತಾಲೂಕು ಕೊರ್ಗಿ ಗ್ರಾಮದ ದಬ್ಬೆಕಟ್ಟೆ ನಿವಾಸಿ ಶ್ರೀಮತಿ ಕುಸುಮ ಶೆಟ್ಟಿ ಇವರಿಗೆ ಸಂಘದ ದಶಮ ಸಂಭ್ರಮದ ಪೋಷಕರಾದ ಹೈದರಾಬಾದ್ ಹೋಟೆಲ್ ಉದ್ಯಮಿಗಳಾದ ಶ್ರೀ ಸಳ್ವಾಡಿ ಚಂದ್ರಶೇಖರ್ ಶೆಟ್ಟಿ ಅವರ ಶಿಫಾರಸ್ಸಿನ ಮೇರೆಗೆ ಸಂಘದ ವತಿಯಿಂದ 30000 ರೂಪಾಯಿ ಹಣವನ್ನು ಚೆಕ್ ಮೂಲಕ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷರಾದ ಬಿ. ಉದಯ್ ಕುಮಾರ್ ಶೆಟ್ಟಿ, ದಶಮ ಸಂಭ್ರಮದ ಮಹಾ ಪೋಷಕರಾದ ಹೈದರಾಬಾದ್ ಹೋಟೆಲ್ ಉದ್ಯಮಿಗಳಾದ ಶ್ರೀ ಹೆಚ್ ಚಂದ್ರ ಶೆಟ್ಟಿ, ಪೋಷಕರಾದ ಅಲ್ತಾರು ಸುಧಾಕರ ಶೆಟ್ಟಿ, ಶ್ರೀ ಸಳ್ವಾಡಿ ಚಂದ್ರಶೇಖರ್ ಶೆಟ್ಟಿ ಹಾಗೂ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ನಿತೀಶ್…
2024 ರ ಪಟ್ಲ ಸಂಭ್ರಮವು ನಿಜ ಅರ್ಥದಲ್ಲಿ ಸಾರ್ಥಕ್ಯ ಪಡೆದಿದೆ ಎಂದರೆ ಖಂಡಿತವಾಗಿ ಅತಿಶಯದ ಮಾತಲ್ಲ. ಸದಾ ಮಂಗಲಮಯನಾದ ಅಡ್ಯಾರ್ ನ ಮಹಾಲಿಂಗೇಶ್ವರನ ಸನ್ನಿಧಾನದ ಪಕ್ಕದಲ್ಲಿ ನಡೆದ ಈ ಕಾರ್ಯಕ್ರಮವು ಸದಾಶಿವ ಶಶಿಧರನ ಅನುಗ್ರಹದಿಂದ ಹರಿ ಈಶರ ಪೂರ್ಣಾನುಗ್ರಹದೊಂದಿಗೆ ನಮ್ಮೆಲ್ಲರ ನಿರೀಕ್ಷೆಯಂತೆ ಸಂಪೂರ್ಣ ಯಶಸ್ಸಾಯಿತು ಎಂಬುದು ಎಲ್ಲರ ಉದ್ಘಾರ. ಕೇವಲ ಹಣವನ್ನು ವ್ಯಯಿಸಿ ದುಂದುವೆಚ್ಚ ಮಾಡಿ ಹೆಸರು ಕೇಳುವ ಗೀಳಿನ ಅದೆಷ್ಟೋ ಸಂಘ ಸಂಸ್ಥೆಗಳು ಇದ್ದಿರಬಹುದು. ಆದರೆ ಪಟ್ಲ ಫೌಂಡೇಶನ್ ಟ್ರಸ್ಟ್ ನ ಧ್ಯೇಯೋದ್ದೇಶಗಳು ಸ್ಪಷ್ಟ. ಇಲ್ಲಿ ಕಲಾವಿದರ ಯೋಗಕ್ಷೇಮದ ಮತ್ತು ಅವರ ನಾಳಿನ ಭವಿಷ್ಯದ ಬಗೆಗಿನ ಚಿಂತನೆ ಮತ್ತು ಕಾಳಜಿಯೇ ಮುಖ್ಯ ಹೊರತು ಕೇವಲ ಆಡಂಬರವಲ್ಲ. ಈ ಧ್ಯೇಯದೊಂದಿಗೆ ಕಳೆದ ಒಂಬತ್ತು ವರ್ಷಗಳಿಂದ ಈ ಸಂಸ್ಥೆಗೆ ಬೆನ್ನೆಲುಬಾಗಿ ನಿಂತ ದಾನಿಗಳನ್ನು ಒಂದೇ ವೇದಿಕೆಯಲ್ಲಿ ಗುರುತಿಸಿ, ಗೌರವಿಸುವುದು ಮತ್ತು ಅವರ ಮಾರ್ಗದರ್ಶನ ಪಡೆದು ಮುಂದುವರಿಯುವುದೇ ನಮ್ಮೀ ಕಾರ್ಯಕ್ರಮದ ಮುಖ್ಯ ಉದ್ದೇಶ. ಅದರೊಂದಿಗೆ ಯಕ್ಷಗಾನ, ನಾಟಕ, ಭೂತಾರಾಧನೆ, ಹರಿಕಥೆ, ಲೇಖಕ, ಸಮಾಜಸೇವಕ, ದೇಶಸೇವೆ,…
ಮಾತೃಮೂಲ ಪದ್ಧತಿಯ ಶಕ್ತಿಯ ಪ್ರಭಾವವನ್ನು ಅರ್ಥ ಮಾಡಿದ ನಮ್ಮ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕುಟುಂಬದ ಯಜಮಾನನ ಹಕ್ಕನ್ನು ಸ್ತ್ರೀಗಳಿಗೆ ನೀಡಿತು. ಇದರಿಂದಾಗಿ ಕುಟುಂಬದ ಸರ್ವತೋಮುಖ ಅಭಿವೃದ್ಧಿಗೆ ನಾಂದಿಯಾಯಿತು. ಪ್ರತೀ ಮನೆಯ ರೇಷನ್ ಕಾರ್ಡಿನಲ್ಲಿ ಯಜಮಾನನ ಸ್ಥಾನದಲ್ಲಿ ಮನೆಯೊಡತಿಗೆ ಸ್ಥಾನ ನೀಡಲಾಯಿತು. ಅವಳೇ ಕುಟುಂಬದ ಪ್ರಧಾನಿಯಾದಳು. ಪಡಿತರ ವ್ಯವಸ್ಥೆ ಮಾತ್ರವಲ್ಲ ಆ ಕುಟುಂಬಕ್ಕೆ ಸರಕಾರದಿಂದ ನೀಡುವ ಯಾವುದೇ ಪರಿಹಾರ ಸಹಾಯಧನ ಇದ್ದರೂ ಅವಳ ಹೆಸರಿನಲ್ಲಿರುವ ಬ್ಯಾಂಕ್ ಖಾತೆಗೆ ಇಂದು ಜಮೆಯಾಗುತ್ತಿದೆ. ಇದ್ದ ಆದಾಯದಲ್ಲಿ ಕುಟುಂಬವನ್ನು ಹೇಗೆ ವ್ಯವಸ್ಥಿತವಾಗಿ ನಡೆಸಿಕೊಳ್ಳಬೇಕೆಂಬ ಬುದ್ಧಿವಂತಿಗೆ ಮಾತೆಯರಿಗೆ ಇದ್ದೇ ಇದೆ. ನಮ್ಮ ದೇಶದಾದ್ಯಂತ ಪಡಿತರ ಚೀಟಿಯನ್ನು ಮನೆಯ ಒಡತಿಯ ಭಾವಚಿತ್ರ ರಾರಾಜಿಸಲು ಮೂಲ ಕಾರಣ ತುಳುನಾಡಿನ ಮಾತೃ ಪ್ರಧಾನ ಪದ್ಧತಿ ಎಂದರೆ ಆಶ್ಚರ್ಯ ಪಡಬೇಕಾಗಿಲ್ಲ. ತುಳುನಾಡಿನಲ್ಲಿ ಮಾತ್ರ ಜಾರಿಯಲ್ಲಿ ಅಳಿಯ ಕಟ್ಟು ಸಂಪ್ರದಾಯಕ್ಕೆ ಅದೆಷ್ಟು ಶತಮಾನಗಳ ಇತಿಹಾಸವಿದೆ. ಬಾರ್ಕೂರು ಸಂಸ್ಥಾನವನ್ನು ಆಳಿದ ಭೂತಾಳ ಪಾಂಡ್ಯನು, ತನ್ನೆಲ್ಲಾ ಆಸ್ತಿಯನ್ನು ತಂಗಿಯ ಮಗನಿಗೆ ಕೊಟ್ಟಂದಿನಿಂದ ಇದು ಜಾರಿಯಾಯಿತು ಎನ್ನುತ್ತಾರೆ. ಸಮುದ್ರ…
ನಾನು ಅಲೆಮಾರಿ! ಹಿಂದಿನ ಜನ್ಮದಲ್ಲೆಲ್ಲೋ ನಾನು ಊರೂರು ಅಲೆದೇ ಬದುಕಿದ್ದ ಬರಿಗಾಲ ಪಕೀರನೋ? ಜೋಳಿಗೆಯ ಜೋಗಿಯೋ ಆಗಿರಬೇಕೇನೊ! ಸಂಚಾರವೇ ನನ್ನ ಚೈತನ್ಯಶೀಲತೆ. ಮೊನ್ನೆ ಹಾಗೆ ಹೋದದ್ದು ಧಾರವಾಡಕ್ಕೆ. ಅಲ್ಲಿನ ಎಸ್.ಡಿ.ಎಂ. ಅಂಗಳಕ್ಕೆ ಹೋದೆ. ಉತ್ತರಕ್ಕೆ ಹೋಗಲಿಕ್ಕೆ ಕೆಲಸವೂ ಇತ್ತು. ಅದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಿಶ್ವವಿದ್ಯಾನಿಲಯ! ಪೂಜ್ಯ ಖಾವಂದರ ಕನಸು. ಅಲ್ಲಿ ಡಾ. ನಿರಂಜನ್ ಇದ್ದಾರೆ. ಅವರು ಅದರ ವೈಸ್ ಚಾನ್ಸಲರ್. ಜಗತ್ತಿನ ಸರ್ವಶ್ರೇಷ್ಠ ಪ್ಲಾಸ್ಟಿಕ್ ಸರ್ಜನ್ ಸಾಲಿನಲ್ಲಿ ಅವರೂ ಒಬ್ಬರಾಗಿ ನಿಂತಿದ್ದರು. ಅವರು ಯು.ಕೆಯಲ್ಲಿ ಅತ್ಯಂತ ಪ್ರಸಿದ್ದ ವೈದ್ಯರಾಗಿದ್ದವರು, ಜಗತ್ತಿನ ನಾನಾ ದೇಶಗಳು ಅವರನ್ನ ಆಹ್ವಾನಿಸುತ್ತಿದ್ದವು. ಡಾಕ್ಟರು 1993 ರ ಹೊತ್ತಿಗೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಬಂದದ್ದೇ ಸುದ್ದಿಯಾಗಿತ್ತು! ಆಗಲೇ ಅವರು ಸೆಲೆಬ್ರಿಟಿ ಪ್ಲಾಸ್ಟಿಕ್ ಸರ್ಜನ್! 2003 ರಲ್ಲಿ ನಿರಂಜನ್ ಸರ್ ಧಾರವಾಡಕ್ಕೆ ಬಂದಿಳಿದರು. ಅಲ್ಲಿ ವೀರೆಂದ್ರ ಹೆಗ್ಗಡೆಯವರು ಮೆಡಿಕಲ್ ಕಾಲೇಜು ಕಟ್ಟಿಸುವ ಕನಸು ಕಂಡಿದ್ದರು, ಅದಕ್ಕೆ ಕಸುವು ತುಂಬಲು, ಹೆಗಲು ನೀಡಲು ಡಾ.ನಿರಂಜನ್ ಬೇಕಿತ್ತು. ಇಂದು ಧಾರವಾಡದ ಸತ್ತೂರಿನ…