Author: admin
ಮೂಡಬಿದಿರೆ: ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಬೆಳಗಾವಿ ಜಿಲ್ಲೆ ಮತ್ತು ಶಾಂತಿನಿಕೇತನ ಪದವಿಪೂರ್ವ ಕಾಲೇಜು ಕುಪ್ಪಟಗೇರಿ ಇವರ ಆಶ್ರಯದಲ್ಲಿ ಜರುಗಿದ ರಾಜ್ಯ ಮಟ್ಟದ ಕುಸ್ತಿ ಪಂದ್ಯಾಟದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿದ ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಹುಡುಗರ ಮತ್ತು ಹುಡುಗಿಯರ ವಿಭಾಗದಲ್ಲಿ 1 ಚಿನ್ನ, 2 ಬೆಳ್ಳಿ ಹಾಗೂ 2 ಕಂಚು ಒಟ್ಟು 5 ಪದಕ ಪಡೆದುಕೊಂಡರು. ಫಲಿತಾಂಶ : ಟೆನ್ನಿ ಕೃಷ್ಣ – 120ಕೆಜಿ ವಿಭಾಗದಲ್ಲಿ (ಪ್ರಥಮ), ಕೃಷ್ಣ – 92ಕೆಜಿ ವಿಭಾಗದಲ್ಲಿ (ದ್ವಿತೀಯ), ಸಂಕೇತ್ ಶೆಟ್ಟಿ – 74 ಕೆಜಿ ವಿಭಾಗದಲ್ಲಿ (ತೃತೀಯ), ಶಶಿಕುಮಾರ್ – 63 ಕೆಜಿ ವಿಭಾಗದಲ್ಲಿ (ತೃತೀಯ), ಊರ್ಮಿಳಾ – 62 ಕೆಜಿ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದರು. ವಿಜೇತ ಕ್ರೀಡಾಪಟುಗಳಿಗೆ ಸಂಸ್ಥೆಯ ಅಧ್ಯಕ್ಷರಾದ ಡಾ.ಎಂ ಮೋಹನ ಆಳ್ವರು ಅಭಿನಂದಿಸಿದ್ದಾರೆ.
ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕುಂತಳನಗರದ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ ನಲ್ಲಿ ಉಡುಪಿ ಗ್ರೂಪ್ ಆಫ್ ಇನ್ಸ್ಟಿಟ್ಯೂಶನ್ ಮಣಿಪಾಲದ ವಿದ್ಯಾರ್ಥಿಗಳಿಗೆ ಒಂದು ದಿನದ ಕೌಶಲ ಮತ್ತು ವೃತ್ತಿ ಅಭಿವೃದ್ಧಿ ತರಬೇತಿಯು ಅಕ್ಟೋಬರ್ 19 ರಂದು ನಡೆಯಿತು. ಸಮಾರಂಭವನ್ನು ಉದ್ಘಾಟಿಸಿದ ನಿಟ್ಟೆ ಡೀಮ್ಡ್ ಯುನಿವರ್ಸಿಟಿಯ ಉಪಾಧ್ಯಕ್ಷ ಡಾ. ಗೋಪಾಲ್ ಮೊಗೆರಾಯ ಮುಂಡ್ಕೂರು ಮಾತನಾಡಿ, ಆರಾಮ ವಲಯದಿಂದ ಹೊರ ಬಂದಾಗ ಸಾಧನೆ, ಬೆಳವಣಿಗೆ ಸಾಧ್ಯವಾಗುತ್ತದೆ. ಅದಾಗ ಅದ್ಬುತವಾದ ಜೀವನ ನಿರ್ಮಾಣವಾಗುತ್ತದೆ. ಆ ನಿಟ್ಟಿನಲ್ಲಿ ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್ ಇವರ ಮನುಕುಲದ ಸೇವೆಯು ಸ್ತುತ್ಯಾರ್ಹ ಎಂದರು. ದಿಕ್ಸೂಚಿ ಮಾತುಗಳನ್ನಾಡಿದ ಮಲ್ಪೆ ರಾಜ್ ಫಿಶ್ ಮಿಲ್ ಆಯಿಲ್ ಕಂಪನಿ ಆಡಳಿತ ನಿರ್ದೇಶಕ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ನಮ್ಮ ಜೀವನ ಯಶಸ್ಸು ಮತ್ತು ವೈಫಲ್ಯಗಳ ಮೇಲೆ ನಿರ್ಧರಿತವಾಗುತ್ತದೆ. ದೇಶದ ಸಂಸ್ಕೃತಿ, ಸಂಸ್ಕಾರ, ಪ್ರಾಮಾಣಿಕತೆಯಿಂದ ಬದುಕು ಹಸನಾಗಬಲ್ಲುದು. ಭವಿಷ್ಯದ ಗರ್ಭದಲ್ಲಿ ಯಾರು ಏನಾಗುತ್ತಾರೋ ಎಂಬುದು ಗೊತ್ತಿಲ್ಲ. ಉಡುಪಿ ಗ್ರಾಮೀಣ ಬಂಟರ…
ವಿದ್ಯಾಗಿರಿ: ‘ಔಷಧಾಲಯ ಅಥವಾ ಔಷಧ ವಿಜ್ಞಾನ ಎಂಬುದು ಕೇವಲ ಕುಳಿತು ಮಾಡುವ ವ್ಯಾಪಾರಿ ವೃತ್ತಿಯಲ್ಲ, ಅದು ವೈದ್ಯರು ಮತ್ತು ರೋಗಿಗಳ ಮಧ್ಯದ ಸೇತು’ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ ಆಳ್ವ ಹೇಳಿದರು. ಆಳ್ವಾಸ್ ಕಾಲೇಜಿನ ಧನ್ವಂತರಿ ಸಭಾಭವನದಲ್ಲಿ ಸೋಮವಾರ ನಡೆದ ಆಳ್ವಾಸ್ ಫಾರ್ಮಸಿ ಕಾಲೇಜು ಉದ್ಘಾಟನೆ ಮತ್ತು ಅಭಿವಿನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಔಷಧಾಲಯ ಪರಿಣಿತರು ವೈದ್ಯರು ಸೂಚಿಸಿ ಬರೆದ ಔಷಧಗಳ ಸಂಪೂರ್ಣ ಜ್ಞಾನ ಹೊಂದಿರಬೇಕು. ಔಷಧಾಲಯ ಪರಿಣತರಿಗೆ ಜಗತ್ತಿನಾದ್ಯಂತ ಬೇಡಿಕೆ ಹೆಚ್ಚಿದೆ. ಆಳ್ವಾಸ್ನಲ್ಲಿ ‘ಫಾರ್ಮಸಿ’ ಎಲ್ಲ ಅಗತ್ಯ ಸೌಲಭ್ಯಗಳನ್ನು ವಿದ್ಯಾರ್ಥಿಗಳಿಗೆ ನೀಡಲಾಗುವುದು. ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದು, ಅತ್ಯುನ್ನತ ಹುದ್ದೆಗಳಿಗೆ ತೆರಳಬೇಕು ಎಂದರು. ಭಾರತವು ಜಗತ್ತಿನ ಔಷಧ ಶಾಲೆ. ಕೋವಿಡ್ನಂತಹ ಸಂದರ್ಭದಲ್ಲಿ ವಿವಿಧ ದೇಶಗಳ ಔಷಧಗಳ ಬೇಡಿಕೆ ಪೂರೈಸಿದೆ ಎಂದರು. ಮೂಡುಬಿದಿರೆ ಸಿ.ಎಚ್ ಮೆಡಿಕಲ್ ಮಾಲಕ ಸಿ.ಎಚ್. ಅಬ್ದುಲ್ ಗಫೂರ್ ಮಾತನಾಡಿ, ಆಳ್ವಾಸ್ ಕಾಲೇಜು ಧನಾತ್ಮಕ ಯೋಚನೆಗಳಿಗೆ ಸಹಕಾರಿಯಾಗಿದೆ. ಫಾರ್ಮಸಿಯ ವಿಷಯಯಗಳು ಕಲಿಕೆಗೆ ಕಷ್ಟವಾಗಿದ್ದರೂ,…
ವಿದ್ಯಾಗಿರಿ: ಕಡಲ ಕಿನಾರೆಯಲ್ಲಿ ಬಂದು ಬೀಳುವ ಯಾವುದೇ ಕಸ ಅದು ಇಲ್ಲಿನ ಜನರು ಹಾಕುವ ಕಸವಲ್ಲ ಬದಲಾಗಿ ನಾವೇ ನೀರಿನ ಮೂಲಗಳಿಗೆ ಎಸೆಯುವ ಕಸ ಬಂದು ಸಾಗರ ಸೇರುತ್ತದೆ. ಈ ರೀತಿಯ ನಿರಂತರ ಸ್ವಚ್ಛತಾ ಅಭಿಯಾನ ಮಾಡುವ ಉದ್ದೇಶ ಅದು ಹೊರಗೆ ಕಾಣುವ ಸ್ವಚ್ಚತೆಗಿಂತ ನಮ್ಮ ಒಳಗಿನ ಮನಸ್ಸು ಸ್ವಚ್ಛವಾಗಬೇಕು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಹೇಳಿದರು. ಸ್ವಚ್ಛತೆಯಲ್ಲಿ ಭಾಗಿಯಾಗಿ ಯುವಕರಂತೆ ಸಕ್ರಿಯವಾಗಿ ಭಾಗವಹಿಸಿದ ಶಾಲಾ ವಿದ್ಯಾರ್ಥಿಗಳು ಎಲ್ಲಾ ದೊಡ್ಡವರಿಗೆ ತೋರಿದ ಒಂದು ಉತ್ತಮ ನಿದರ್ಶನ ಎಂದು ನುಡಿದರು. ಸಸಿಹಿತ್ಲು ಕಡಲ ಕಿನಾರೆಯಲ್ಲಿ 14ನೇ ದ್ವೈವಾರ್ಷಿಕ ಕೆರೆ ಸಮ್ಮೇಳನದ-2024ರ ಕೊನೆಯ ದಿನ ಬೀಚ್ ಕ್ಲೀನಿಂಗ್ಅ ಭಿಯಾನವನ್ನು ಕೆರೆ ಸಮ್ಮೇಳನದಲ್ಲಿ ಭಾಗವಹಿಸಲು ರಾಜ್ಯ, ರಾಷ್ಟ್ರ, ವಿದೇಶದಿಂದ ಆಗಮಿಸಿದ್ದ ವಿವಿಧ ಶಿಕ್ಷಣ ಸಂಸ್ಥೆಗಳ 120ಕ್ಕೂ ಹೆಚ್ಚು ಪ್ರತಿನಿಧಿಗಳು, ವಿದ್ಯಾರ್ಥಿಗಳು, ಆಳ್ವಾಸ್ನ ,ಎನ್.ಎಸ್.ಎಸ್.ನ ವಿದ್ಯಾರ್ಥಿಗಳು ಪಾಲ್ಗೊಂಡು ಸುಮಾರು 100 ಚೀಲದಷ್ಟು ಕಸವನ್ನು ವೈಜ್ಞಾನಿಕವಾಗಿ ಸಂಗ್ರಹಿಸಿದರು. ಈ ಸಂದರ್ಭದಲ್ಲಿ ನೇಪಾಳದಿಂದ ಕೆರೆ…
ಕರ್ನಾಟಕ ರಾಜ್ಯ ಮಾನ್ಯತೆ ಪಡೆದ ಅನುದಾನರಹಿತ ಶಾಲೆಗಳ ಸಂಘ (Recognized Unaided private schools’ Association of Karnataka) ಪ್ರಧಾನ ಮಾಡುವ ರಾಜ್ಯ ಮಟ್ಟದ ಉತ್ತಮ ಶಾಲಾ ಆಡಳಿತಗಾರ ಪ್ರಶಸ್ತಿಯು ಸವಣೂರಿನ ಶಿಲ್ಪಿ, ಸಹಕಾರ ರತ್ನ ಸವಣೂರು ಸೀತಾರಾಮ ರೈಯವರಿಗೆ ಒಲಿದು ಬಂದಿದೆ. ಅಕ್ಟೋಬರ್ 21ರಂದು ಬೆಂಗಳೂರಿನ ಜುಬ್ಲಿ ಅಂತರಾಷ್ಟ್ರೀಯ ಶಾಲಾ ಆಡಿಟೋರಿಯಂನಲ್ಲಿ ನಡೆಯಲಿರುವ ಅದ್ದೂರಿ ಸಮಾರಂಭದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮತ್ತು ಇತರ ಗಣ್ಯರು ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ. ಸವಣೂರು ಸೀತಾರಾಮ ರೈ ಅವರು ಸವಣೂರಿನಲ್ಲಿ 2001 ರಲ್ಲಿ ವಿದ್ಯಾರಶ್ಮಿ ವಿದ್ಯಾಲಯ ಸ್ಥಾಪನೆ ಮಾಡಿದ್ದು, ಆರಂಭದ ಹಂತದಲ್ಲಿ ಎಲ್ ಕೆ ಜಿ ಯಿಂದ ಪಿಯುಸಿ ತನಕ ಶಿಕ್ಷಣ ಆರಂಭಿಸಿದರು. 2012ರಲ್ಲಿ ವಿದ್ಯಾ ರಶ್ಮಿ ಪ್ರಥಮ ದರ್ಜೆ ಕಾಲೇಜಿನ ಸ್ಥಾಪನೆ ಮಾಡಿದ್ದಾರೆ. ಸವಣೂರಿನ ಗ್ರಾಮೀಣ ಪ್ರದೇಶದಲ್ಲಿ ಸುಮಾರು 27 ಎಕ್ರೆ ಜಾಗದಲ್ಲಿ ಶಿಕ್ಷಣ ಸಂಸ್ಥೆಗಳು ಕಾರ್ಯಾಚರಿಸುತ್ತಿದ್ದು, ಬಳಿಕ ಬಿಎಡ್ ಹಾಗೂ ನರ್ಸಿಂಗ್ ಕೋರ್ಸ್ ಆರಂಭಿಸಿದ್ದರು. ಪ್ರಸ್ತುತ ಈ ಕೋರ್ಸ್ ಗಳು…
ನಮ್ಮ ಹಿಂದೂ ಸನಾತನ ಧರ್ಮದ ವೈವಿಧ್ಯಮಯ ಜನ ಸಮುದಾಯ ವಿಭಿನ್ನ ಸಂಪ್ರದಾಯ, ಸಂಸ್ಕ್ರತಿ ಆಚರಣೆಗಳು ನಮ್ಮವರ ಹಿಂದಿನ ಪರಂಪರೆಯಿಂದ ನಡೆದಿಕೊಂಡು ಬಂದಿದೆ. ನಮ್ಮ ಶ್ರೇಷ್ಠ ಧಾರ್ಮಿಕ ಆಚರಣೆಗಳು ಆಯಾಯ ರೀತಿಯ ನಂಬಿಕೆ, ಪದ್ಧತಿಗಳ ಮೂಲಕ ಅನನ್ಯತೆಗೆ ಸಾಕ್ಷಿಯಾಗಿವೆ. ನವರಾತ್ರಿಯ ಶುಭ ಸಂದರ್ಭದಲ್ಲಿ ಪುಣೆ ಬಂಟ ಸಮಾಜದ ಮೂಲಕ ನವರಾತ್ರಿ ದಸರಾ ಉತ್ಸವ ತಮ್ಮ ರೂಢಿಗತವಾದ ಸಂಪ್ರದಾಯ ಮತ್ತು ಭಕ್ತಿ ಶ್ರದ್ದೆಯೊಂದಿಗೆ ಇಲ್ಲಿ ನಡೆದಿದೆ. ಶ್ರೀ ದುರ್ಗಾ ದೇವಿಯ ಆರಾಧನೆ ಪೂಜೆ ಪುರಸ್ಕಾರದಿಂದ ಮನ ಶಾಂತಿ, ಸಂತೃಪ್ತಿ, ಸಮೃದ್ದಿ ಹೊಂದಲು ಸಾದ್ಯ. ಸಮಾಜಕ್ಕೆ ನಾವು ತೋರುವ ಪ್ರೀತಿ ವಿಶ್ವಾಸ ಸೇವೆ, ಉಪಕಾರ ತಿರುಗಿ ಪರೋಪಕಾರ ರೂಪದಲ್ಲಿ ಸಿಗಲು ಸಾದ್ಯ ಮತ್ತು ಅದನ್ನೇ ನಾವು ಜೀವನದಲ್ಲಿ ಖಂಡಿತವಾಗಿ ಮರಳಿ ಪಡೆಯುತ್ತೇವೆ ಎಂದು ಕೇಂದ್ರ ಸರಕಾರದ ಸಚಿವ ಪುಣೆ ಸಂಸದರಾದ ಮುರಳೀಧರ್ ಮೊಹೊಲ್ ನುಡಿದರು. ಪುಣೆ ಬಂಟರ ಸಂಘದ ನವರಾತ್ರಿ ಉತ್ಸವ, ತೆನೆ ಹಬ್ಬ, ದಾಂಡಿಯಾ ಕಾರ್ಯಕ್ರಮವು ಅಕ್ಟೋಬರ್ 12ರಂದು ಬಹಳ ವಿಜ್ರಂಭಣೆಯಿಂದ ಜರಗಿತು. ಈ…
ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಗೋವಾ ತುಳುಕೂಟದ ಉದ್ಘಾಟನಾ ಕಾರ್ಯಕ್ರಮವು ಅಕ್ಟೋಬರ್ 20 ರ ಆದಿತ್ಯವಾರ ಪೊರ್ವರಿಮ್ ನಾರ್ತ್ ನ ಪುಂಡಲೀಕ ದೇವಸ್ಥಾನದ ಸಭಾಗೃಹದಲ್ಲಿ ಜರಗಲಿದೆ. ಸ್ಥಾಪಕಾಧ್ಯಕ್ಷರಾದ ಹೋಟೆಲ್ ಉದ್ಯಮಿ, ಕಾರ್ಕಳ ಇರ್ವತ್ತೂರಿನ ಗಣೇಶ್ ಶೆಟ್ಟಿ ಮುಂದಾಳತ್ವದಲ್ಲಿ ಜರಗಲಿರುವ ಈ ಕಾರ್ಯಕ್ರಮವು ಮಧ್ಯಾಹ್ನ 2:30 ರಿಂದ ಆರಂಭಗೊಳ್ಳಲಿದೆ. ಉದ್ಘಾಟನೆಯನ್ನು ಕಾರ್ಕಳದ ಶಾಸಕ, ಕರ್ನಾಟಕ ಸರಕಾರದ ಇಂಧನ ಮತ್ತು ಸಂಸ್ಕೃತಿ ಇಲಾಖೆಯ ಮಾಜಿ ಸಚಿವ ವಿ. ಸುನಿಲ್ ಕುಮಾರ್ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಶಶಿಧರ ಶೆಟ್ಟಿ ಬರೋಡಾ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಗೋವಾ ಸರಕಾರ ಪ್ರವಾಸ ಮತ್ತು ಮಾಹಿತಿ ತಂತ್ರಜ್ಞಾನದ ಸಚಿವ ರೋಹನ್ ಅಶೋಕ್ ಕೌಂಟೆ ಆಗಮಿಸಲಿದ್ದು, ಅತಿಥಿಗಳಾಗಿ ಕೆ. ಗುಣಪಾಲ ಕಡಂಬ (ಕಾರ್ಯಾಧ್ಯಕ್ಷ : ಜಿಲ್ಲಾ ಕಂಬಳ ಸಮಿತಿ), ವಿಜಯಕುಮಾರ್ ಕೊಡಿಯಲ್ ಬೈಲ್ (ರಂಗಭೂಮಿ ಮತ್ತು ತುಳು ಚಿತ್ರರಂಗದ ನಿರ್ದೇಶಕ), ಸುಧಾಕರ ಶೆಟ್ಟಿ ನೆಲ್ಲಿಕಟ್ಟೆ (ಪ್ರಾಧ್ಯಾಪಕ : ಪುರಾತನ ವಸ್ತು ಸಂಗ್ರಹ, ಎಸ್. ಎನ್. ಎಸ್ ಕಾಲೇಜು…
ಕಲೆ, ಸಾಹಿತ್ಯ, ಸಂಸ್ಕೃತಿ ಸೇರಿದಂತೆ ಬೈಂದೂರಿನ ಸಾಧನೆ ಜಗತ್ತಿನಾದ್ಯಂತ ಪಸರಿಸಿದೆ. ಊರಿನ ಸಾಧನೆ ಸಂಭ್ರಮವಾಗಬೇಕಾದರೆ ಸಂಘಟಿತ ಶ್ರಮ ಅಗತ್ಯ. ಇಲ್ಲಿನ ಶಾಸಕ ಗುರುರಾಜ ಗಂಟಿಹೊಳೆಯವರು ಸರಕಾರದ ಪೂರಕ ಸ್ಪಂದನೆ ದೊರೆಯದಿದ್ದರೂ ದಾನಿಗಳ ನೆರವಿನಿಂದ ಮಾದರಿಯ ಅಭಿವೃದ್ಧಿ ಕಾರ್ಯ ನಡೆಸಿದ್ದಾರೆ. ಬೈಂದೂರು ಉತ್ಸವದ ಮೂಲಕ ಸಾಂಸ್ಕೃತಿಕ ಕಲ್ಪನೆಯಲ್ಲಿ ಕಂಡಿರುವ ಅಭಿವೃದ್ಧಿ ಕನಸು ಸರ್ವರ ಸಹಕಾರದಲ್ಲಿ ಸಂಪನ್ನಗೊಳ್ಳಬೇಕಿದೆ ಎಂದು ಉದ್ಯಮಿ ರಾಮಕೃಷ್ಣ ಶೇರಿಗಾರ್ ಹೇಳಿದರು. ಅವರು ಸಮೃದ್ಧ ಜನಸೇವಾ ಟ್ರಸ್ಟ್ ಬೈಂದೂರು ಸಹಭಾಗಿತ್ವದಲ್ಲಿ ಬೈಂದೂರು ಉತ್ಸವ -2024 ಅಂಗವಾಗಿ ಯಡ್ತರೆ ಜೆ.ಎನ್ ಆರ್ಕಲಾ ಮಂದಿರದಲ್ಲಿ ನಡೆದ ಕ್ರೀಡಾ ಹಬ್ಬ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಈ ಮಾತುಗಳನ್ನಾಡಿದರು. ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉದ್ಯಮಿ ಜಿ. ಗೋಕುಲ ಶೆಟ್ಟಿ, ಜಯಾನಂದ ಹೋಬಳಿದಾರ್, ಗೌರಿ ದೇವಾಡಿಗ, ತಂಗಪ್ಪನ್ ಮಂಜುನಾಥ ಪೂಜಾರಿ ಸಸಿಹಿತ್ಲು, ಶ್ರೀ ಗಣೇಶ ಉಪ್ಪುಂದ, ಅನಿತಾ ಆರ್. ಕೆ ಉಪಸ್ಥಿತರಿದ್ದರು. ಸಮೃದ್ಧ ಬೈಂದೂರು ಅಧ್ಯಕ್ಷ ಬಿ.ಎಸ್. ಸುರೇಶ ಶೆಟ್ಟಿ…
ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಹಾಗೂ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಸಹಯೋಗದೊಂದಿಗೆ ನಡೆಯುತ್ತಿರುವ ಲೇಕ್ 2024-14ನೇ ದ್ವೈವಾರ್ಷಿಕ ವಿಚಾರ ಸಂಕಿರಣ ಎರಡನೇ ದಿನ ಒಟ್ಟು ತಾಂತ್ರಿಕ ಅವಧಿಯಲ್ಲಿ ನಗರ ವಿಭಾಗದ ಆರರಿಂದ ಒಂಬತ್ತನೇ ತರಗತಿಯ 83 ವಿದ್ಯಾರ್ಥಿಗಳು ಹಾಗೂ ಗ್ರಾಮೀಣ ವಿಭಾಗದಿಂದ 45 ವಿದ್ಯಾರ್ಥಿಗಳ ಪ್ರಸ್ತುತಿ, 21 ಸಂಶೋಧಕರು ಮತ್ತು ಅಧ್ಯಾಪಕರಿಂದ ಪ್ರಸ್ತುತಿ, ಹತ್ತರಿಂದ ಹನ್ನೆರಡನೇ ತರಗತಿಯ 32 ವಿದ್ಯಾರ್ಥಿಗಳ ಪ್ರಸ್ತುತಿ, ಪದವಿ, ಸ್ನಾತಕೋತ್ತರ ಪದವಿ, ಸಂಶೋಧನಾ ವಿದ್ಯಾರ್ಥಿಗಳಿಂದ ಒಟ್ಟು 38 ಜನರ ವಿಚಾರ ಮಂಡನೆ ಕಾಲೇಜಿನ ವಿವಿಧ ಸಭಾಂಗಣದಲ್ಲಿ ನಡೆಯಿತು. ಜೊತೆಯಲ್ಲಿ, ಎಲ್ಲಾ ವರ್ಗಗಳಲ್ಲಿ ಒಟ್ಟು 63 ಸಂಶೋಧನಾ ಆಸಕ್ತರು ಪೆÇೀಸ್ಟರ್ ಪ್ರಸ್ತುತಿಯಲ್ಲಿ ಭಾಗಿಯಾದರು. ಮೈಕ್ರೋ ಪ್ಲಾಸ್ಟಿಕ್ ಕಾರಣ ಅಂತರರಾಷ್ಟ್ರೀಯ ಸಂಶೋಧನಾ ಪ್ರಸ್ತುತಿಯಲ್ಲಿ ರಾಜ್ಯದ ನಿಕೋಲಾಯ್ ಫಿಲೆಟೊವ್- ಹವಾಮಾನ ತಾಪಮಾನ ಮತ್ತು ಮಾನವಜನ್ಯ ಪರಿಣಾಮಗಳು: ರಾಜ್ಯದ ಕೆರೆಗಳ ಆಧುನಿಕ ಸ್ಥಿತಿ ಮತ್ತು ಬದಲಾವಣೆಗಳಲ್ಲಿ ಪರಿಸರ ಮತ್ತು ಸಾಮಾಜಿಕ, ಆರ್ಥಿಕ ಅಂಶಗಳ ಕುರಿತು ಮಾತನಾಡಿ, ರಷ್ಯಾದ ಪ್ರವಾಸೋದ್ಯಮದಿಂದಾಗಿ ಅಲ್ಲಿನ ಹೆಚ್ಚಿನ…
ವಿದ್ಯಾಮಾತಾ ಅಕಾಡೆಮಿ : ರಾಷ್ಟ್ರೀಯ ಮಿಲಿಟರಿ ಶಾಲಾ (RMS) ಪ್ರವೇಶ ಪರೀಕ್ಷೆಯ ಪೂರ್ವ ಸಿದ್ದತಾ ತರಗತಿ ಪ್ರಾರಂಭ
ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರತಿಷ್ಠಿತ ತರಬೇತಿ ಸಂಸ್ಥೆಯಾಗಿರುವ ವಿದ್ಯಾಮಾತಾ ಅಕಾಡೆಮಿಯು ರಾಷ್ಟ್ರೀಯ ಮಿಲಿಟರಿ ಶಾಲೆಯ ಪ್ರವೇಶ ಪರೀಕ್ಷೆ (RMS)ಗೆ ಪೂರ್ವಭಾವಿಯಾಗಿ ತರಬೇತಿಯನ್ನು ಪ್ರಾರಂಭಿಸಲಿದ್ದು, ಈಗಾಗಲೆ ದಾಖಲಾತಿ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ವಿದ್ಯಾಮಾತಾ ಅಕಾಡೆಮಿಯು ಈಗಾಗಲೇ ಸೈನಿಕ ಶಾಲಾ ಪ್ರವೇಶ ಪರೀಕ್ಷೆ ಸೇರಿದಂತೆ ವಿವಿಧ ವಸತಿಯುಕ್ತ ಶಾಲೆಗಳ ಪ್ರವೇಶ ಪರೀಕ್ಷೆಗಳಿಗೆ ತರಬೇತಿಯನ್ನು ನೀಡಿ ಸಂಸ್ಥೆಯ ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆಯಲ್ಲಿ ಆಯ್ಕೆಗೊಂಡಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ರಾಷ್ಟ್ರೀಯ ಮಿಲಿಟರಿ ಶಾಲೆ (RMS) ಪರೀಕ್ಷೆಯ ತರಬೇತಿ ತರಗತಿಗಳು ವಾರದಲ್ಲಿ 5 ದಿನ ರಾತ್ರಿ ಗಂಟೆ 8.00ರಿಂದ 9.00 ರ ವರೆಗೆ ಆನ್ಲೈನ್ ಮೂಲಕ ನಡೆಯಲಿದ್ದು, ಆಸಕ್ತ ಅಭ್ಯರ್ಥಿಗಳು ವಿದ್ಯಾಮಾತಾ ಅಕಾಡೆಮಿಯ ಈ ತರಗತಿಗಳ ಸದುಪಯೋಗಪಡಿಸಿಕೊಳ್ಳಲು ಸಂಸ್ಥೆಯ ಕಚೇರಿಯನ್ನು ಸಂಪರ್ಕಿಸಿ ದಾಖಲಾತಿಯನ್ನು ಪಡೆಕೊಳ್ಳಬಹುದು. ದಾಖಲಾತಿ ಪಡೆದುಕೊಳ್ಳಲು ಮತ್ತು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :- 9148935808, 9448527606, 96204 68869