Author: admin
ಮಧ್ಯ ಕುಲ್ಲಂಗಾಲು ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ನೂತನ ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷರಾಗಿ ಮನೋಹರ ಶೆಟ್ಟಿ ಸೂರಿಂಜೆ ಆಯ್ಕೆಯಾಗಿದ್ದಾರೆ. ಮನೋಹರ ಶೆಟ್ಟಿ ಅವರು ಸುರತ್ಕಲ್ ಬಂಟರ ಸಂಘದ ನಿರ್ದೇಶಕರಾಗಿ, ಸುರತ್ಕಲ್ ಸ್ಪೋಟ್ಸ್೯ ಮತ್ತು ಕಲ್ಚರಲ್ ಸಂಸ್ಥೆಯ ಅಧ್ಯಕ್ಷರಾಗಿ, ಅನೇಕ ಸಂಘ ಸಂಸ್ಥೆಗಳಲ್ಲಿ ದುಡಿದು ಸಮಾಜ ಸೇವೆ, ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದ್ದಾರೆ. ಅವರ ಧಾರ್ಮಿಕ ಸೇವಾ ಮನೋಭಾವನೆಯಿಂದ ಈಗ ಕುಲ್ಲಂಗಾಲು ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಜೀರ್ಣೋದ್ದಾರ ಸಮಿತಿಯ ಕಾರ್ಯಾಧ್ಯಕ್ಷರನ್ನಾಗಿ ಮಾಡಲಾಗಿದೆ. ಮುಂಬಯಿ ಸಮಿತಿ ಅಧ್ಯಕ್ಷರಾಗಿ ಪ್ರವೀಣ್ ಜಯರಾಮ ಶೆಟ್ಟಿ ಕುಲ್ಲಂಗಾಲು, ಮಹಿಳಾ ಸಮಿತಿ ಅಧ್ಯಕ್ಷೆಯಾಗಿ ಪೂರ್ಣಿಮಾ ಯತೀಶ್ ರೈ ಕುಲ್ಲಂಗಾಲು ಅಯ್ಕೆಯಾದರು.
ಶರನ್ನವರಾತ್ರಿ ಪ್ರಯುಕ್ತ ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ಸೆಪ್ಟೆಂಬರ್ 22 ರಿಂದ ಮೊದಲ್ಗೊಂಡು ನವರಾತ್ರಿ ಮಹೋತ್ಸವ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಅಕ್ಟೋಬರ್ 2 ಗುರುವಾರ ವಿಜಯ ದಶಮಿಯಂದು ಸಾಯಂಕಾಲ ಗಂ. 4:30 ರಿಂದ ‘ದಸರಾ ಕವಿಗೋಷ್ಠಿ – 2025’ ನವರಸ ರಂಜನೆಯ ಬಹುಭಾಷಾ ಕವಿ ಮೇಳವನ್ನು ಏರ್ಪಡಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಎಸ್ ಪ್ರದೀಪ ಕುಮಾರ್ ಕಲ್ಕೂರ ಕವಿಗೋಷ್ಠಿಯನ್ನು ಉದ್ಘಾಟಿಸುವರು. ಕವಿ, ಸಾಹಿತಿ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಅವರ ಅಧ್ಯಕ್ಷತೆಯಲ್ಲಿ ಜಿಲ್ಲೆಯ 10 ಮಂದಿ ಪ್ರಮುಖ ಕವಿಗಳು ಗೋಷ್ಠಿಯಲ್ಲಿ ಭಾಗವಹಿಸುವರು. ಕವಿಗಳಾದ ಡಾ. ಸುರೇಶ್ ನೆಗಳಗುಳಿ (ಕನ್ನಡ ಗಝಲ್), ಮಹಮ್ಮದ್ ಬಡ್ಡೂರು (ಬ್ಯಾರಿ), ಗುಣಾಜೆ ರಾಮಚಂದ್ರ ಭಟ್ (ಕನ್ನಡ), ಡಾ. ಮೀನಾಕ್ಷಿ ರಾಮಚಂದ್ರ (ಮಲೆಯಾಳಂ), ಅಕ್ಷತಾ ರಾಜ್ ಪೆರ್ಲ (ಹವ್ಯಕ), ಡಾ. ಕವಿತಾ ಸುವರ್ಣ (ಹಿಂದಿ), ಅಕ್ಷಯ ಆರ್. ಶೆಟ್ಟಿ, ವಿಜಯಲಕ್ಷ್ಮಿ ಕಟೀಲು, ವಸಂತಿ ನಿಡ್ಲೆ…
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಮಧ್ಯ ಇಲ್ಲಿಗೆ ವಿಧಾನ ಸಭೆಯ ಸ್ಪೀಕರ್ ಯು.ಟಿ ಖಾದರ್ ಅವರ ಶಿಫಾರಸ್ಸಿನ ಮೇರೆಗೆ ನೂತನವಾಗಿ ಪ್ರೌಢಶಾಲೆ ಮಂಜೂರಾಗಿದ್ದು, ಆ ಪ್ರಯುಕ್ತ ವಿದ್ಯಾನಿಧಿ ಎಜುಕೇಶನ್ ಟ್ರಸ್ಟ್ ಮಧ್ಯ ಶಾಲೆಯ ವತಿಯಿಂದ ಸ್ಪೀಕರ್ ಅವರನ್ನು ಮಂಗಳೂರು ಕಚೇರಿಯಲ್ಲಿ ಅಭಿನಂದಿಸಲಾಯಿತು. ವಿದ್ಯಾನಿಧಿ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ ಮಧ್ಯ, ಖ್ಯಾತ ಉದ್ಯಮಿಗಳಾದ ಶಿವಪ್ರಸಾದ್ ಶೆಟ್ಟಿ, ರಂಜನ್ ಚೌಟ ಮಧ್ಯ ಉಪಸ್ಥಿತರಿದ್ದರು.
ಮುಂಬಯಿ ವಿಶ್ವವಿದ್ಯಾಲಯ, ಕನ್ನಡ ವಿಭಾಗ ಹಾಗೂ ಡಾ. ವಿಶ್ವನಾಥ ಕಾರ್ನಾಡ್ ಪ್ರತಿಷ್ಠಾನ ಇವರ ಜಂಟಿ ಆಶ್ರಯದಲ್ಲಿ ಮೂರು ಕೃತಿಗಳ ಬಿಡುಗಡೆ ಕಾರ್ಯಕ್ರಮ
ಮುಂಬಯಿ:- ವಿಶ್ವ ವಿದ್ಯಾಲಯ, ಕನ್ನಡ ವಿಭಾಗ ಹಾಗೂ ಡಾ. ವಿಶ್ವನಾಥ ಕಾರ್ನಾಡ್ ಪ್ರತಿಷ್ಠಾನ ಜಂಟಿಯಾಗಿ ಆಯೋಜಿಸಿರುವ ಮೂರು ಕೃತಿಗಳ ಬಿಡುಗಡೆ ಕಾರ್ಯಕ್ರಮವು ಸೆಪ್ಟೆಂಬರ್ 26ರಂದು ಶುಕ್ರವಾರ ಬೆಳಿಗ್ಗೆ 11.30ರಿಂದ ಮುಂಬೈ ವಿಶ್ವವಿದ್ಯಾಲಯದ ಜೆ.ಪಿ ನಾಯಕ್ ಭವನ, ವಿದ್ಯಾನಗರಿ ಸಾಂತಾಕ್ರೂಜ್( ಪೂ) ಇಲ್ಲಿ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಂಬೈ ವಿಶ್ವವಿದ್ಯಾಲಯ, ಕನ್ನಡ ವಿಭಾಗದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾದ ಪ್ರೊ.ಜಿ.ಎನ್ ಉಪಾಧ್ಯ ಅವರ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಹಿರಿಯ ಜಾನಪದ ವಿದ್ವಾಂಸರಾದ ಡಾ. ಕಾಳೇಗೌಡ ನಾಗವಾರ ಅವರು, ಅತಿಥಿಯಾಗಿ ಬಾಂಬೆ ಬಂಟ್ಸ್, ಅಸೋಸಿಯೇಷನ್ ಮುಂಬೈ ಇದರ ಅಧ್ಯಕ್ಷರಾದ ನ್ಯಾಯವಾದಿ ಡಿ.ಕೆ ಶೆಟ್ಟಿ ಇವರು ಪಾಲ್ಗೊಳ್ಳಲಿದ್ದಾರೆ. ಅಂದು ಡಾ. ವಿಶ್ವನಾಥ್ ಕಾರ್ನಾಡರ ಅಪರಾಧಿ( ಕನ್ನಡದಿಂದ ಮರಾಠಿಗೆ ಅನುವಾದಿತ ಕಥೆಗಳು) ಹಾಗೂ ಲಿಲ್ಲಿ ಬಂದು ಹೋದಳು (ಕಥಾಸಂಕಲನ) ಕೃತಿಗಳು ಬಿಡುಗಡೆಗೊಳ್ಳಲಿವೆ. ಇದೇ ಸಂದರ್ಭದಲ್ಲಿ ಮರಾಠಿಯಿಂದ ಕನ್ನಡಕ್ಕೆ ಅನುವಾದಿಸಿರುವ ಅಂತಹ ಗಣೇಶ ಮಂಗಳಮೂರ್ತಿ (ಮೂಲ ಮರಾಠಿ ಲೇಖಕರಾದ ಮಾಧವಿ ಕುಂಠೆ, ಅನುವಾದ ಸರೋಜಿನಿ ತರೆ) ಕೃತಿಯೂ ಬಿಡುಗಡೆಗೊಳ್ಳಲಿದೆ. ಇದೇ…
ಆಳ್ವಾಸ್ ಕಾಲೇಜಿನ ಹಿರಿಯ ವಿದ್ಯಾರ್ಥಿ ಗೌರವ್ ಹೆಗ್ಡೆ ನಿರ್ದೇಶನದ ಕಿರುಚಿತ್ರ ‘ಮಾಯಾಚಕ್ರ’ದ ಪ್ರೀಮಿಯರ್ ಷೋ ಆಳ್ವಾಸ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಸಹಯೋಗದಲ್ಲಿ ಕಾಲೇಜಿನ ಆಡಿಯೋ ವೀಡಿಯೋ ಥಿಯೇಟರ್ನಲ್ಲಿ ನಡೆಯಿತು. ಕಿರುಚಿತ್ರ ವೀಕ್ಷಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜ್ಮೆಂಟ್ ಟ್ರಸ್ಟಿ ವಿವೇಕ್ ಆಳ್ವ, ಗೌರವ್ ಹೆಗ್ಡೆ ಮತ್ತು ಅವರ ತಂಡದ ಚೊಚ್ಚಲ ಪ್ರಯತ್ನವನ್ನು ಶ್ಲಾಘಿಸಿದರು. ಎಳವೆಯಲ್ಲಿಯೇ ಇಂತಹ ಸೃಜನಾತ್ಮಕ ಕಾರ್ಯಗಳನ್ನು ಕೈಗೊಳ್ಳುವುದು ಸಮಾಜಕ್ಕೆ ಪ್ರೇರಣಾದಾಯಕ. ತನಿಖಾ ಪತ್ರಿಕೋದ್ಯಮದ ಕಥಾಹಂದರ ಹೊಂದಿರುವ ಈ ಕಿರುಚಿತ್ರವು, ಪತ್ರಕರ್ತರು ವೃತ್ತಿಜೀವನದಲ್ಲಿ ಎದುರಿಸಬೇಕಾಗುವ ತೊಂದರೆಗಳು, ಸವಾಲುಗಳು ಮತ್ತು ಸಮಾಜದ ಒತ್ತಡಗಳ ನೈಜ ಚಿತ್ರಣವನ್ನು ನೀಡುತ್ತದೆ. ‘ಮಾಯಾಚಕ್ರ’ದ ಇನ್ನೊಂದು ವಿಶೇಷತೆ, ಚಿತ್ರದಲ್ಲಿ ಸ್ಥಳೀಯ ಸ್ಥಳಗಳು ಮತ್ತು ಪ್ರತಿಭೆಗಳನ್ನು ಬಳಸಿರುವುದು. ಈ ಮೂಲಕ ಗ್ರಾಮೀಣ ಸೌಂದರ್ಯವನ್ನು ಕಣ್ತುಂಬಿಕೊಳ್ಳುವುದರ ಜೊತೆಗೆ, ಪ್ರತಿಭಾವಂತರಿಗೆ ತಮ್ಮ ನಟನಾಕೌಶಲ್ಯವನ್ನು ತೋರಿಸಲು ವೇದಿಕೆ ಒದಗಿಸಲಾಗಿದೆ ಎಂದರು.ಸಿನಿಮಾದ ನಿರ್ದೇಶಕ ಗೌರವ್ ಹೆಗ್ಡೆ ಮಾತನಾಡಿ, “ಈಗಿನ ರೀಲ್ಸ್ ಜಮಾನದಲ್ಲಿ ದೀರ್ಘ ಅವಧಿಯ ಕಿರುಚಿತ್ರಗಳ ಮೂಲಕ ಪ್ರೇಕ್ಷಕರನ್ನು ಸೆಳೆಯುವುದು ಒಂದು…
ತಂದೆ ತಾಯಿ ನೀಡಿದ ಸಂಸ್ಕಾರ, ಗುರು ನೀಡಿದ ವಿದ್ಯೆ, ಕಲಿಕೆಯಲ್ಲಿ ಸಮರ್ಪಣೆ ಇದ್ದಾಗ ವಿದ್ಯಾರ್ಥಿಗಳು ಕಲೆಯಲ್ಲಿ ಔನ್ನತ್ಯವನ್ನು ತಲುಪಲು ಸಾಧ್ಯ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕ ವಿದ್ಯಾವತಿ ಭಜಂತ್ರಿ ಅಭಿಪ್ರಾಯ ಪಟ್ಟರು. ಬೆಳಗಾವಿಯ ಕೆ.ಎಲ್.ಇ ಸಂಸ್ಥೆಯ ಬಿಎಸ್ ಜೀರಗೆ ಸಭಾಂಗಣದಲ್ಲಿ ನಡೆದ ಅಭಿನಯ ಕಲಾಸಂಸ್ಥೆಯ ದಶಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಭರತನಾಟ್ಯ ಕಲೆ ಅಷ್ಟು ಸುಲಭದಲ್ಲಿ ಒಳಿದು ಬರುವ ಕಲೆಯಲ್ಲ. ಅತ್ಯಂತ ಪರಿಶ್ರಮದಿಂದ ಪಡೆದುಕೊಳ್ಳಬೇಕು. ಈ ಕಲೆಯಲ್ಲಿ ಶ್ರದ್ದೆ, ಏಕಾಗ್ರತೆ ತುಂಬಾ ಮುಖ್ಯ. ಇದು ಕಲೆಯಲ್ಲಿ ಅಸಾಮಾನ್ಯವಾದದು, ಅಗ್ರಮಾನ್ಯವಾದದು. ದೇಶದಲ್ಲಿ ಅಷ್ಟೇ ಅಲ್ಲ ವಿದೇಶದಲ್ಲಿಯೂ ಅದರ ವೈಭವವನ್ನು ಕಾಣುತ್ತೇವೆ ಎಂದರು. ಅಭಿನಯ ಕಲಾ ಸಂಸ್ಥೆಯನ್ನು ಸ್ಥಾಪಿಸಿದ ವಿದುಷಿ ಡಾ| ದೀಪ್ತಿ ಶೆಟ್ಟಿ ಮತ್ತು ವಿದುಷಿ ಧನ್ಯ ಶೆಟ್ಟಿ ಅವರು ಅಭಿನಂದನಾರ್ಹರು. ಭರತನಾಟ್ಯ ಸಂಸ್ಥೆಯನ್ನು ಬೆಳಗಾವಿಯಲ್ಲಿ ಸ್ಥಾಪಿಸಿ ಆ ಮೂಲಕ ಮಕ್ಕಳಿಗೆ ಕಲಾ ಸಂಸ್ಕಾರ ನೀಡುವ ಅವರ ಕಾರ್ಯ ಶ್ಲಾಘನೀಯವಾದುದು. ಬೆಳಗಾವಿಯ ರವಿ ನೃತ್ಯ ಕಲಾಮಂದಿರದ ಮುಖ್ಯಸ್ಥ…
ನಮ್ಮ ದೇಶದ ಸಾರ್ವಜನಿಕ ವಲಯದ ದೈತ್ಯ BSNL ಒಂದು ಕಾಲದಲ್ಲಿ ದೇಶದ ದೂರಸಂಪರ್ಕ ಕ್ಷೇತ್ರದ ಹೆಮ್ಮೆಯಾಗಿತ್ತು. ಆದರೆ ಇಂದು ಖಾಸಗಿ ಕಂಪನಿಗಳ ಜೊತೆಗಿನ ಸ್ಪರ್ಧೆಯಲ್ಲಿ BSNL ಕುಸಿಯುತ್ತಿರುವುದು ಎಲ್ಲರಿಗೂ ಗೊತ್ತಿರುವ ಸತ್ಯ. ಈ ಕಥೆಯ ಹಿಂದಿನ ಕೆಲವು ಆಘಾತಕಾರಿ ಸಂಗತಿಗಳು ಜನತೆಯ ಗಮನಕ್ಕೆ ಬರಬೇಕಿದೆ. BSNL ತನ್ನ ಟವರ್ಗಳು ಮತ್ತು ಉಪಕರಣಗಳನ್ನು ಜಿಯೋಗೆ ಬಾಡಿಗೆಗೆ ಕೊಟ್ಟಿತ್ತು. ಆದರೆ ಆಶ್ಚರ್ಯಕರವಾಗಿ 10 ವರ್ಷಗಳ ಕಾಲ ಆ ಬಾಡಿಗೆಯ ಹಣವನ್ನೇ ವಸೂಲಿ ಮಾಡಲಿಲ್ಲ. ಒಂದು ಖಾಸಗಿ ಕಂಪನಿಯಾದರೆ ಒಂದು ತಿಂಗಳ ಬಾಡಿಗೆ ತಡವಾದರೂ ಕಾನೂನು ಕ್ರಮ ಕೈಗೊಳ್ಳುತ್ತಿತ್ತು. ಆದರೆ ಜನರ ಆಸ್ತಿಯಾದ BSNL ಈ ವಿಷಯದಲ್ಲಿ ಯಾಕೆ ಮೌನವಾಗಿತ್ತು? ಇದು ಕೇವಲ ಉದಾಸೀನವೋ ಅಥವಾ ಉದ್ದೇಶಪೂರ್ವಕವಾಗಿ ಜಿಯೋಗೆ ಒಲವು ತೋರಿಸಿದ್ದೋ?2013ರಲ್ಲಿ BSNL 3G ಸೇವೆಯನ್ನು ಯಶಸ್ವಿಯಾಗಿ ಆರಂಭಿಸಿತ್ತು. ಆದರೆ 4G ಸೇವೆಗೆ ಸರ್ಕಾರದಿಂದ ಅನುಮತಿ ವಿಳಂಬವಾಯಿತು. 2020ಕ್ಕೆ ತಳ್ಳಲ್ಪಟ್ಟ ಈ ಸೇವೆ ಇಂದಿಗೂ ಸಂಪೂರ್ಣವಾಗಿ ಜಾರಿಯಾಗಿಲ್ಲ. ಇದರ ಜೊತೆಗೆ, 2025 ಬಂದರೂ BSNL 5G…
ತುಳುನಾಡಿನ ಸಾಹಿತ್ಯ ಸಂಸ್ಕೃತಿ ಗಳನ್ನು ವಿದ್ಯಾರ್ಥಿ ಸಮುದಾಯಕ್ಕೆ ತಲುಪಿಸುವ ಮಹತ್ವದ ಹೊಣೆಗಾರಿಕೆ ಹಿರಿಯ ತಲೆಮಾರಿನ್ನಾದ್ದಾಗಿದೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಈ ನಿಟ್ಟಿನಲ್ಲಿ ವಿವಿಧ ಯೋಜನೆಗಳನ್ನು ರೂಪಿಸಿ ಯಶ್ವಸಿಯಾಗಿ ಅನುಷ್ಠಾನಗೊಳಿಸುತ್ತಿದೆ. ತುಳು ಭಾಷೆಯನ್ನು ರಾಜ್ಯದ ದ್ವಿತೀಯ ಅಧಿಕೃತ ಭಾಷೆಯನ್ನಾಗಿಸುವ ಪ್ರಕ್ರಿಯೆ ನಡೆಯುತ್ತಿದ್ದು, ಶೀಘ್ರವೇ ಅನುಷ್ಠಾನಗೊಳ್ಳುವ ಸಾಧ್ಯತೆಗಳಿವೆ. ಯುವ ತಲೆಮಾರು ಇಂದು ತುಳು ಸಾಹಿತ್ಯ, ಇತಿಹಾಸ ಮತ್ತು ಜಾನಪದದ ಕುರಿತು ಆಕರ್ಷಿತರಾಗುತ್ತಿದ್ದಾರೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ನುಡಿದರು. ಅವರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಸಿಂಗಾರ ಸುರತ್ಕಲ್ ಮತ್ತು ಸರಕಾರಿ ಪದವಿ ಪೂರ್ವ ಕಾಲೇಜು ಚೇಳ್ಯಾರು ಸಹಭಾಗಿತ್ವದಲ್ಲಿ ನಡೆಯುವ ನಲ್ಮೆ ಬಲ್ಮೆ ವಿದ್ಯಾರ್ಥಿಗಳಿಗೆ ಮೂರು ದಿನಗಳ ರಂಗ ಕಾರ್ಯಾಗಾರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಉದ್ಘಾಟನೆ ನೆರವೇರಿಸಿ ಮಾತನಾಡಿದ ಹಿರಿಯ ಚಲನಚಿತ್ರ ಹಾಗೂ ರಂಗ ಕಲಾವಿದೆ ಗೀತಾ ಸುರತ್ಕಲ್ ಅವರು ರಂಗಭೂಮಿ ಆತ್ಮ ವಿಶ್ವಾಸ ಮತ್ತು ಮಾನವೀಯ ಮೌಲ್ಯ ತಿಳಿಸಿ ಕೊಡುತ್ತದೆ. ಸಿಂಗಾರ…
ಮಹಿಷ ಮರ್ದಿನಿ ದೇವಾಲಯ ಮೈದಾಳಿ ನಿಲ್ಲಬೇಕಿದ್ದರೆ ಕಡಿಯಾಳಿಯ ಊರು ಕನಿಷ್ಠ ಒಂದು ತಿಂಗಳು ಇದಕ್ಕಾಗಿ ತನ್ನ ನಿದ್ದೆ ಸುಟ್ಟುಕೊಂಡಿದೆ. ಪ್ರತಿನಿತ್ಯ ಸಾವಿರ ಸಾವಿರ ಭಕ್ತರ ಧಾರೆ ದೇಗುಲಕ್ಕೆ ಹರಿದು ಬಂದರೂ ಅಲ್ಲಿನ ಗ್ರಾಮದ ಸ್ವಯಂಸೇವಕರು ಮಾತ್ರ ತೇಲುಗಣ್ಣಿನಲ್ಲಿ ತೇಲಾಡುತ್ತಲೇ ದುಡಿಯುತ್ತಿದ್ದಾರೆ. ತಾಯ ವೈಭವಕ್ಕೆ ಎಳ್ಳಷ್ಟೂ ಕುಂದಾಗಬಾರದು ಎಂಬ ಭಕ್ತಿ ಅವರದಾದರೆ, ಜನ್ಮಜನ್ಮಾಂತರದ ಮಾತೃ ಋಣವನ್ನು ಮಕ್ಕಳು ಈ ಜನ್ಮದಲ್ಲೇ ಕಳೆದು ಪುಣ್ಯ ಭಾಜನರಾಗಲಿ ಎಂಬ ಸಂಕಲ್ಪ ತಾಯಿ ಮಹಿಷಮರ್ದಿನಿಯದ್ದು. ಜೂನ್ ಒಂದನೇ ತಾರೀಕು ದೇಗುಲದ ಸುತ್ತು ಪೌಳಿ ಸಮರ್ಪಣೆಗೆ ಮುಖ್ಯಮಂತ್ರಿ ಆಗಮಿಸಿದ್ದರು. ಅದರ ಹಿಂದಿನ ರಾತ್ರಿ ಎರಡು ಗಂಟೆಯವರೆಗೂ ತಾಮ್ರದ ಮುಚ್ಚಿಗೆ ಹಾಸುವ ಕೆಲಸ ಸಮರೋಪಾದಿಯಲ್ಲಿ ನಡೆಯುತ್ತಿತ್ತು. ಆದರೆ ಇನ್ನೂ 25% ಕೆಲಸ ಬಾಕಿ ಇದ್ದಿದ್ದನ್ನು ನಾನು ಕಂಡಿದ್ದೆ. ದೇವಸ್ಥಾನದ ಮುಂಭಾಗದ ಪ್ರಾಂಗಣದಲ್ಲಿ ಮರಮಟ್ಟುಗಳು ಕಾಂಕ್ರೀಟ್ ಯಂತ್ರಗಳು 10 ಲೋಡಿಗೆ ಆಗುವಷ್ಟು ಸರಕುಗಳು ಅಡ್ಡಾದಿಡ್ಡಿ ಬಿದ್ದಿದ್ದವು. ಶುಚಿತ್ವದ ಕೆಲಸ ಭರದಿಂದ ಸಾಗುತ್ತಿತ್ತು. ಮುಂಜಾನೆಯವರೆಗೂ ಅಕ್ಕಪಕ್ಕದ ಮನೆಯವರಿಗೆ ತಗಡು ಬಡಿಯುವ ಸದ್ದು ಕೇಳಿದೆ.…
ಕಾಡ ಪೂ ತೋಡ ನೀರ್, ಅಂದರೆ ಕಾಡಿನ ಹೂ ಮತ್ತು ತೋಡಿನ ನೀರಿನಿಂದ ನನ್ನನ್ನು ಪೂಜಿಸಿದರೆ ಸಾಕು ನಾನು ಒಲಿಯುತ್ತೇನೆ ಎಂದು ದೈವಗಳು ತಮ್ಮನ್ನು ನಂಬಿದವರಿಗೆ ಅಭಯವನ್ನು ನೀಡಿದ್ದು ಪಾಡ್ದನ ಮೂಲಗಳಲ್ಲಿ ತಿಳಿದು ಬರುತ್ತದೆ. ಅಂದಿನ ಕಾಲದಲ್ಲಿ ಕಾಡ ಹೂ ಮತ್ತು ತೋಡ ನೀರ್ ಅಷ್ಟು ಶುದ್ದ, ಪವಿತ್ರವಾಗಿತ್ತು. ತುಳುನಾಡಿನ ಪ್ರತಿಯೊಂದು ದೈವವು ಅಷ್ಟೇ ಸರಳವಾದ ಪೂಜೆ ಉನ್ನತವಾದ ಭಕ್ತಿಗೆ ಒಲಿಯುತ್ತದೆ ಎಂಬುದು ಪ್ರತೀತಿ. ಆರಂಭದಲ್ಲಿ ಹೊಳೆ, ಕೆರೆಬದಿಯಲ್ಲಿ ಕಾಟು ಕಲ್ಲಿನ ಮೂಲಕವೇ ದೈವಗಳನ್ನು ಆರಾಧಿಸಲಾಯಿತು. ಆದರೆ ಇಂದು ದೈವಗಳಿಗೆ ಖರ್ಚು ಮಾಡುವ ದುಡ್ಡನ್ನು ಲೆಕ್ಕ ಹಾಕಿದಾಗ ಈ ರೀತಿಯ ಆರಾಧನೆ ಬೇಕೆ? ಎಂಬ ಜಿಜ್ಞಾಸೆಯು ಮನಸ್ಸಿನಲ್ಲಿ ಮೂಡಿದರೆ ಅಚ್ಚರಿಯೆನಲ್ಲ. ನನ್ನ ಓರ್ವ ಮಿತ್ರರು ಸಂಕ್ರಮಣದ ಮುಂಚಿನ ದಿನ ಒಂದಷ್ಟು ಹೂಗಳನ್ನು ಹಿಡಿದುಕ್ಕೊಂಡು ಹೋಗುತ್ತಿರುವಾಗ ಹೂ ಯಾಕೆ ? ಎಂದು ಕೇಳಿದೆ. ಅದಕ್ಕೆ ಅವರು ನಾಳೆ ಸಂಕ್ರಮಣ ದೈವಕ್ಕೆ ಹಾಕುವುದಕ್ಕೆ ಹೂ ಬೇಕು ಎಂದರು. ದೈವಕ್ಕೆ ದುಡ್ಡುಕೊಟ್ಟು ಹೂ ಹಾಕುವುದು ಸರಿಯೇ…















