Author: admin

ತುಳುಕೂಟ ಉಡುಪಿ(ರಿ). ಮತ್ತು ಕರ್ನಾಟಕ ತುಳುಸಾಹಿತ್ಯ ಅಕಾಡೆಮಿ ಸಹಭಾಗಿತ್ವದಲ್ಲಿ ನಡೆದ 23 ನೇ ವರ್ಷದ ಕೆಮ್ತೂರು ತುಳುನಾಟಕ ಸ್ಪರ್ಧೆ -2025 ಇದರಲ್ಲಿ ನಮ್ಮ ಮುಂಬೈಯ ರಂಗಮಿಲನ ತಂಡ ಸುಮಾರು 8 ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ ಮುಂಬೈ ರಂಗಮಿಲನ ತಂಡ ಸೋಕ್ರೆಟಿಸ್ ನಾಟಕ ಸ್ಪರ್ಧೆಯಲ್ಲಿ ಭಾಗವಹಿಸಿತ್ತು. ಮೂಲ ಆರ್ ಡಿ ಕಾಮತ್, ತುಲುವಿಗೆ ನಾರಾಯಣ ಶೆಟ್ಟಿ ನಂದಲಿಕೆ ಭಾಷಾoತರಿಸಿದ್ದಾರು. ಮನೋಹರ್ ಶೆಟ್ಟಿ ನಂದಲಿಕೆ ಅವರ ನಿರ್ದೇಶನ  ಜೊತೆಗೆ ಸಾದಯ, ನವೀನ್ ಇನ್ನ ಬಾಳಿಕೆ,ರಹೀಮ್ ಸಚ್ಚಿರಿಪೇಟೆ ಇವರ ಸಹಕಾರದಿಂದ ನಾಟಕ ಪ್ರದರ್ಶನಗೊಂಡಿತ್ತು.ಪ್ರತಿ ವರುಷದಂತೆ ಈ ವರುಷವೂ ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ನಡೆಯುವ ಉಡುಪಿ ದೊಡ್ಡಣ್ಣ ಶೆಟ್ಟಿ ಸ್ಮರಣಾರ್ಥ ತುಳುಕೂಟ ಉಡುಪಿ (ರಿ ) ಇವರು ಸ್ಪರ್ಧೆಯನ್ನು ಏರ್ಪಡಿಸಿದ್ದರು.ಸೋಕ್ರೋಟಿಸ್ ನಾಟಕದಲ್ಲಿ ಮುಂಬೈ ಕಲಾವಿದರಾದ ಸೂರಿ ಮಾರ್ನಾಡ್, ರವಿ ಹಗ್ದೆ ಹೆರ್ಮುಂಡೆ, ದೀಕ್ಷಾ ದೇವಾಡಿಗ, ಲತೇಶ್ ಪೂಜಾರಿ, ಸಚಿನ್ ಶೇರಿಗಾರ್ , ಕಿಶೋರ್ ಪಿಲಾರ್ ಮತ್ತು ಸುಶೀಲ್ ಅವ್ರು ನಟಿಸಿದ್ದಾರೆ ಜೊತೆಗೆ ಪ್ರಸಾದನದಲ್ಲಿ ಮಂಜುನಾಥ್ ಶೆಟ್ಟಿಗಾರ್, ಬೆಳಕು ಪ್ರವೀಣ್…

Read More

ಮುಂಬಯಿ: ಮಹಾರಾಷ್ಟ್ರದ ಪೊಂಜಿ ಸ್ಕೀಮ್ ಆಪರೇಟರುಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಾಜಿ ಶಾಸಕ ಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿ ಶ್ರೀ ದೇವೇಂದ್ರ ಫಡ್ನವೀಸ್ ಜಿ ಅವರಿಗೆ ಪತ್ರ ಬರೆದಿದ್ದಾರೆ. ಬ್ಲಿಸ್ ಕನ್ಸಲ್ಟೆಂಟ್ಗಳು, ಗುಡ್ವಿನ್ ಜ್ಯುವೆಲರ್ಸ್, ಅಂಬರ್ ದಲಾಲ್ ಮತ್ತು ಟೊರೆಸ್ ಜ್ಯುವೆಲರ್ಗಳು ಹೆಚ್ಚಿನ ಆದಾಯದ ಭರವಸೆ ನೀಡುವ ಮೂಲಕ ಅಥವಾ ಸಂಪೂರ್ಣ ಮೋಸದ ಯೋಜನೆಗಳನ್ನು ನಡೆಸುವ ಮೂಲಕ ಸಾವಿರಾರು ಹೂಡಿಕೆದಾರರನ್ನು ಹತ್ತಾರು ಸಾವಿರ ಕೋಟಿಗಳಷ್ಟು ವಂಚಿಸಿದ್ದಾರೆ. ಕೆಲವರ ವಿರುದ್ಧ ಕ್ರಮ ಕೈಗೊಳ್ಳಲಾಗಿದ್ದು, ಕೆಲವರು ಜಾಮೀನಿನ ಮೇಲೆ ಹಾಗೂ ಇನ್ನು ಕೆಲವರು ತಲೆಮರೆಸಿಕೊಂಡಿದ್ದಾರೆ. ಹಲವಾರು ಪೊಂಜಿ ಸ್ಕೀಮ್ ಆಪರೇಟರುಗಳು ಹೂಡಿಕೆದಾರರನ್ನು ವಂಚಿಸುತ್ತಿದ್ದಾರೆ ಅಲ್ಲದೆ ಅವರು ಇನ್ನೂ ಸಕ್ರಿಯರಾಗಿದ್ದಾರೆ ಮತ್ತು ಪೋಲಿಸರು ಕ್ರಮ ತೆಗೆದು ಕೊಳ್ಳಬೇಕಾಗಿದೆ. ಅಸ್ತಿತ್ವದಲ್ಲಿರುವ ಪೊಂಜಿ ಸ್ಕೀಮ್ ಆಪರೇಟರ್ಗಳು ಹೆಚ್ಚು ಅನುಮಾನಾಸ್ಪದ ಹೂಡಿಕೆದಾರರನ್ನು ವಂಚಿಸುವ ಮೊದಲು ತಕ್ಷಣವೇ ಶಿಸ್ತುಕ್ರಮಕ್ಕೆ ನಿರ್ದೇಶನ ನೀಡುವಂತೆ ಹೆಗ್ಡೆ ಅವರು ಮಾನ್ಯ ಸಿಎಂಗೆ ಮನವಿ ಮಾಡಿದ್ದಾರೆ. ಹೆಗ್ಡೆ ಅವರು ಸರ್ಕಾರದ ಸಹಾಯದಿಂದ ಬ್ಯಾಂಕ್ನಲ್ಲಿ ಫ್ರೀಜ್ ಮಾಡಿರುವ ಆಸ್ತಿ…

Read More

ವಿಕ್ರೋಲಿ ಪರಿಸರದಲ್ಲಿ ತಮ್ಮ ಪೂರ್ವಜರು, ತುಳು ಕನ್ನಡಿಗರು ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕವಾಗಿ ನಾವೆಲ್ಲರೂ ಒಗ್ಗಟ್ಟಿನಲ್ಲಿದ್ದು ಯಾವುದೇ ಸಮಸ್ಯೆಗಳನ್ನು ಸಂಘಟಿತರಾಗಿ ಎದುರಿಸಲು ದೂರದರ್ಶಿತ್ವದ ಮುಂದಾಲೋಚನೆಯೊಂದಿಗೆ ಕನ್ನಡ ಸಂಘದ ಸ್ಥಾಪನೆಗೆ ನಾಂದಿಯಾಡಿದರು. ಅವರ ಸಾಧನೆ ಸ್ಮರಣೀಯವಾದದು. ಇದೀಗ ನಾವೆಲ್ಲರೂ 37ನೇ ವಾರ್ಷಿಕ ಮಹಾಸಭೆಯಲ್ಲಿ ಇದ್ದೇವೆ. ಯಾವುದೇ ಸಂಘಟನೆ ಪ್ರಗತಿ ಕಾಣಬೇಕಾದರೆ ಆರ್ಥಿಕವಾಗಿ ಸದೃಢರಾಗಿರಬೇಕು. ನಮ್ಮ ಪೂರ್ವಜರು ಸ್ಥಾಪನೆ ಮಾಡಿದ ವೀಕೇಸ್ ಇಂಗ್ಲಿಷ್ ಹೈಸ್ಕೂಲ್ ನಲ್ಲಿ ಇದೀಗ 1,100 ವಿದ್ಯಾರ್ಥಿಗಳು ವಿದ್ಯಾರ್ಜನೆಗೈಯುತ್ತಿದ್ದು ನಮ್ಮ ಸಂಘಕ್ಕೆ ಭೀಮ ಬಲ ಬಂದಂತಾಗಿದೆ. ನಮ್ಮ ಸಂಘದಲ್ಲಿ 425 ಸದಸ್ಯರಿದ್ದರೂ ಮಹಾಸಭೆಗೆ ಹೆಚ್ಚಿನವರು ಗೈರು ಹಾಜರಾಗಿರುವುದು ಶೋಚನೀಯ. ಇಂದು ನನ್ನನ್ನು ಮುಂದಿನ ಅವಧಿಗೆ ಅಧ್ಯಕ್ಷರನ್ನಾಗಿ ಮರು ಆಯ್ಕೆ ಮಾಡಿದ್ದೀರಿ. ತಮ್ಮೆಲ್ಲರಿಗೂ ಕೃತಜ್ಞತೆಗಳು. ವೀಕೇಸ್ ಹೈಸ್ಕೂಲ್ ಹಾಗೂ ಕನ್ನಡ ಸಂಘಕ್ಕೆ ಎಲ್ಲರ ಒಮ್ಮತದ ಸಹಕಾರವಿರಲಿ ಎಂದು ವಿಕ್ರೋಲಿ ಕನ್ನಡ ಸಂಘದ ಅಧ್ಯಕ್ಷ ಉದಯ ಎಲ್. ಶೆಟ್ಟಿ ಪೇಜಾವರ ನುಡಿದರು. ಅವರು ಜನವರಿ 5ರಂದು ವಿಕ್ರೋಲಿ ಪೂರ್ವ ಠಾಗೋರ್ ನಗರದ ವೀಕೇಸ್ ಹೈಸ್ಕೂಲ್ ನ…

Read More

ಯಕ್ಷಧ್ರುವ ಪಟ್ಲ ಫೌಂಡೇಶನ್ ಸರಕಾರಿ ಶಾಲಾ ಮಕ್ಕಳಿಗೆ ಯಕ್ಷಗಾನ ತರಬೇತಿ ನೀಡಿ, ಮುಂದಿನ ಪೀಳಿಗೆಗೆ ಯಕ್ಷಗಾನ ಕಲೆಯ ಸೊಗಡು ಪಸರಿಸುತ್ತಿರುವುದು ಸಂತೋಷದ ಸಂಗತಿ. ಫೌಂಡೇಶನ್‌ನಿಂದ ಇಂತಹ ಕೆಲಸಗಳು ನಿರಂತರ ನಡೆಯಲಿ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಹೇಳಿದರು. ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ಹಾಗೂ ಪ್ರಾದೇಶಿಕ ಘಟಕಗಳ ಸಹಯೋಗದೊಂದಿಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಮತ್ತು ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ಅವರ ನೇತೃತ್ವದಲ್ಲಿ ಗಂಜಿಮಠದ ಒಡ್ಡೂರು ಫಾರ್ಮ್‌ನಲ್ಲಿ ಆಯೋಜಿಸಿದ ಯಕ್ಷಧ್ರುವ- ಯಕ್ಷಶಿಕ್ಷಣ ವಿದ್ಯಾರ್ಥಿಗಳಿಂದ ಯಕ್ಷಗಾನ ಕಾರ್ಯಕ್ರಮದ ಸಮಾರೋಪದಲ್ಲಿ ಮಾತನಾಡಿದರು. ಯಕ್ಷಧ್ರುವ ಪಟ್ಲ ಬಂಟ್ವಾಳ ಘಟಕದ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ರಂಗೋಲಿ ಅಧ್ಯಕ್ಷತೆ ವಹಿಸಿದ್ದರು. ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಪಟ್ಟ ಫೌಂಡೇಶನ್‌ನ ಪದಾಧಿಕಾರಿ ಪುರುಷೋತ್ತಮ ಭಂಡಾರಿ ಅಡ್ಯಾರು ಸ್ವಾಗತಿಸಿದರು. ವಿಧಾನ ಪರಿಷತ್ ಸದಸ್ಯ ಡಾ. ಮಂಜುನಾಥ ಭಂಡಾರಿ, ಯಕ್ಷಧ್ರುವ- ಯಕ್ಷಶಿಕ್ಷಣದ ಪ್ರಧಾನ ಸಂಚಾಲಕ ಪಣಂಬೂರು ವಾಸುದೇವ ಐತಾಳ, ಸರಪಾಡಿ…

Read More

ಬಂಟರ ಯಾನೆ ನಾಡವರ ಸಂಘ ಬೈಂದೂರು ಇದರ ವತಿಯಿಂದ ಆಯೋಜಿಸಲಾದ ಬಂಟರ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಸ್ಪರ್ಧೆ, ಪ್ರತಿಭಾ ಸಂಭ್ರಮ -2025 ಬೈಂದೂರು ಬಂಟರ ಭವನದಲ್ಲಿ ಸಂಘದ ಅಧ್ಯಕ್ಷ ಶಶಿಧರ ಶೆಟ್ಟಿ ಸಾಲ್ಗದ್ದೆಯವರ ನೇತೃತ್ವದಲ್ಲಿ ಜರುಗಿತು. ಉದ್ಯಮಿ ಗಾಯಾಡಿ ಗೋಕುಲ ಶೆಟ್ಟಿ ಉಪ್ಪುಂದ ದೀಪ ಬೆಳಗಿಸಿ ಉದ್ಘಾಟಿಸಿದರು. ಬೈಂದೂರು ಶಾಸಕ ಗುರುರಾಜ ಶೆಟ್ಟಿ ಗಂಟಿಹೊಳೆ ಕಾರ್ಯಕ್ರಮಕ್ಕೆ ಆಗಮಿಸಿ ಶುಭ ಹಾರೈಸುತ್ತಾ, ಎಳೆಯ ಪ್ರತಿಭೆಗಳಿಂದ ಗ್ರಾಮೀಣ ಮಹಿಳೆಯರಲ್ಲಿ ಅಂತರ್ಗತವಾದ ಸೂಕ್ತ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ನೀಡಿದ ಈ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಾ ಶ್ಲಾಘಿಸಿದರು. ವೇದಿಕೆಯಲ್ಲಿ ಉದ್ಯಮಿ ನೆಲ್ಯಾಡಿ ದಿವಾಕರ ಶೆಟ್ಟಿ, ಕುದ್ರುಕೊಡು ಜಗದೀಶ್ ಶೆಟ್ಟಿ, ಶ್ರೀಮತಿ ಚಂದ್ರಕಲಾ ಶೆಟ್ಟಿ, ಚಂದ್ರಶೇಖರ್ ಶೆಟ್ಟಿ, ಆಲೂರು ಸಂತೋಷ್ ಶೆಟ್ಟಿ, ಗೌರವ ಗಾರ್ಮೆಂಟ್ಸ್ ಸತೀಶ್ ಶೆಟ್ಟಿ ಸೂರ್ಕುಂದ, ಮನೋಹರ ಶೆಟ್ಟಿ ಉಪ್ಪುಂದ, ಜಯರಾಮ ಶೆಟ್ಟಿ ಗಂಟಿಹೊಳೆ, ಶಿಲ್ಪಾ ಶೆಟ್ಟಿ, ಮಮತಾ ಶೆಟ್ಟಿ ಉಪ್ಪುಂದ, ಖಜಾಂಚಿ ಜಯರಾಮ ಶೆಟ್ಟಿ, ಬಿಜೂರು ರಾಜಿವ ಶೆಟ್ಟಿ, ಕುರ್ಸಿ ಪ್ರಭಾಕರ ಶೆಟ್ಟಿ, ಉಪ್ಪುಂದ…

Read More

ಮುಂಬಯಿ ಮಹಾನಗರದ ಸೇವಾ ಸಂಸ್ಥೆ ಶಿವಾಯ ಫೌಂಡೇಶನ್ ವತಿಯಿಂದ ವಾಸಕ್ಕಾಗಿ ರಸ್ತೆ ಮತ್ತು ಬೀದಿ ಬದಿಯ ಫುಟ್ಪಾತ್ ಗಳನ್ನು ಆಶ್ರಯಿಸಿರುವ ನಿರಾಶ್ರಿತರಿಗೆ ಕಂಬಳಿ ವಿತರಿಸುವ ಮೂಲಕ 2025 ರ ಹೊಸ ವರ್ಷವನ್ನು ವಿಭಿನ್ನವಾಗಿ ಆಚರಿಸಲಾಯಿತು. ಬೈಕಲಾ, ಲಾಲ್ ಭಾಗ್, ಕಾಲಾ ಚೌಕಿ, ಪರೇಲ್, ಮಜ್ಗಾಂವ್, ನವಿಮುಂಬಯಿಯ ಕೆಲವು ಪ್ರದೇಶಗಳಲ್ಲಿ ಶಿವಾಯ ಫೌಂಡೇಶನ್ ಸ್ವಯಂ ಸೇವಕರು ರಾತ್ರಿ ಸುತ್ತಾಡಿ ಅರ್ಹ ನಿರಾಶ್ರಿತರಿಗೆ ಕಂಬಳಿಗಳನ್ನು ವಿತರಿಸಿದರು. ಮುಂಬಯಿ ಪರಿಸರದ ಸೇವಾ ಚಟುವಟಿಕೆಗಳಲ್ಲಿ ಮಧುಸೂದನ್ ಶೆಟ್ಟಿ ಹಿರಿಯಡ್ಕ, ಪ್ರಶಾಂತ್ ಶೆಟ್ಟಿ ಪಲಿಮಾರು, ಡಾ. ಸ್ವರ್ಣಲತಾ ಶೆಟ್ಟಿ, ಪ್ರಶಾಂತ್ ಶೆಟ್ಟಿ ಪಂಜ, ಪ್ರಶಾಂತ್ ಎ ಶೆಟ್ಟಿ ಬೈಕಲಾ, ರಾಜೇಶ್ ಶೆಟ್ಟಿ ಕಟಪಾಡಿ ಉಪಸ್ಥಿತರಿದ್ದರು. ನವಿ ಮುಂಬಯಿ ಪರಿಸರದ ಸೇವಾ ಚಟುವಟಿಕೆಗಳಲ್ಲಿ ಹರೀಶ್ ಕೋಟ್ಯಾನ್ ಪಡು ಇನ್ನ, ಕೆ. ವಾಸುದೇವ ಶೆಟ್ಟಿ ಕಟಪಾಡಿ, ಸಂಗೀತಾ ಶೆಟ್ಟಿ, ಪ್ರಭಾವತಿ ಶೆಟ್ಟಿ ಭಾಗವಹಿಸಿದ್ದರು.

Read More

ನಮ್ಮ ನಾಡ ಮಡಿಲಲ್ಲಿ ಅದೆಷ್ಟೋ ಸುಂದರ, ವಿಸ್ಮಯ ಹಾಗೂ ವಿಶಿಷ್ಟ, ಬೆರಗು ಮೂಡಿಸುವ ಅಚ್ಚರಿಯ ತಾಣಗಳಿವೆ. ಈ ಅದ್ಭುತ ಆಗರಗಳ ಸಾಲಿನಲ್ಲಿ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೋಟ ಗ್ರಾಮದ ಶ್ರೀ ಅಮೃತೇಶ್ವರಿ, ಹಲವು ಮಕ್ಕಳ ತಾಯಿ ದೇವಸ್ಥಾನ. ಸೃಷ್ಟಿಯ ವಿಚಿತ್ರಗಳೆಲ್ಲವೂ ಪರಮಾತ್ಮನ ಲೀಲಾ ಕಲ್ಪನೆಯ ಸಾಕಾರ ರೂಪಗಳಿದ್ದು, ಮಾನವನ ಬದುಕಿನ ಔನ್ನತ್ಯಕ್ಕೆ ಒಂದೊಂದು ಬಗೆಯಲ್ಲಿ ಕ್ರಿಯಾತ್ಮಕ ಪೋಷಣೆಗಳಾಗಿವೆ ಎಂಬಂತೆ ಇಂದಿಗೂ ಪ್ರತಿ ಮೂರು ವರ್ಷಗಳಿಗೊಮ್ಮೆ ಒಂದು ಲಿಂಗಾಕೃತಿಯ ಕಲ್ಲು ಮೂಡಿ ಬರುವುದು ಇಲ್ಲಿನ ವಿಸ್ಮಯ. ಎಣಿಸಲಾರದಷ್ಟು ಲಿಂಗ ರೂಪದ ಮಕ್ಕಳಿಗೆ ಜನ್ಮ ನೀಡಿದ, ನೀಡುತ್ತಿರುವ ಚಿರಯೌವನ ಮಹಾತಾಯಿ ಅಮೃತೇಶ್ವರಿ. ಇದಕ್ಕೆ ಸಾಕ್ಷಿಯಾಗಿ ದೇವಸ್ಥಾನದ ಸುತ್ತಾ ಮೂಡಿಬಂದ ಲಿಂಗ ರೂಪದ ಕಲ್ಲು ಗೋಚರಿಸುತ್ತದೆ. ಯೂನಿಯನ್ ಆಫ್ ಸಾಯಿಲ್‍ಸೈನ್ಸ್ ಸಂಸ್ಥೆಯೊಂದು ಇಲ್ಲಿನ ಮಣ್ಣಿನ ಪರೀಕ್ಷೆ ನಡೆಸಿ ಇಲ್ಲಿ ನಿರಂತರವಾಗಿ ಲಿಂಗರೂಪದ ಕಲ್ಲು ಮೂಡಿ ಬರುತ್ತಿರುವ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದೆ.ಐತಿಹಾಸಿಕವಾಗಿ ಮಹತ್ವ ಹೊಂದಿರುವ ಭಕ್ತರ ಇಷ್ಟಾರ್ಥ ಸಿದ್ಧಿ ಕ್ಷೇತ್ರದಲ್ಲಿ ಜನವರಿ ಹತ್ತರಂದು ಗೆಂಡ ಸೇವೆ…

Read More

ಹಿರಿಯ ಸಾಹಿತಿ, ಲೇಖಕ, ಪ್ರಾಧ್ಯಾಪಕ ಡಾ.ವಿಶ್ವನಾಥ ಕಾರ್ನಾಡ್ ಪ್ರತಿಷ್ಠಾನವು ಮುಂಬಯಿ ಕನ್ನಡ ಪುಸ್ತಕ ಸಂಸ್ಕೃತಿಯನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಕೊಡಮಾಡುತ್ತಾ ಬಂದಿರುವ ಪುಸ್ತಕ ಬಹುಮಾನ ಯೋಜನೆಯಂತೆ 2023-24ರ ಸಾಲಿನ ವಿಕಾಸ’ ಪುಸ್ತಕ ಬಹುಮಾನಕ್ಕೆ ಯು.ವೆಂಕಟ್ರಾಜ ರಾವ್, ಅಶೋಕ ಪಕ್ಕಳ, ಅನಿತಾ ತಾಕೋಡೆ ಅವರ ಕೃತಿಗಳು ಆಯ್ಕೆಯಾಗಿವೆ. ಅದೇ ರೀತಿ ಡಾ. ವಿಶ್ವನಾಥ ಕಾರ್ನಾಡ್ ವಾರ್ಷಿಕ ಸಾಹಿತ್ಯ ಪುರಸ್ಕಾರಕ್ಕೆ ಹಿರಿಯ ಬರಹಗಾರರು, ನಿವೃತ್ತ ಪ್ರಾಂಶುಪಾಲರಾದ ಡಾ.ಉಮಾ ರಾಮರಾವ್ ಅವರು ಆಯ್ಕೆಯಾಗಿರುತ್ತಾರೆ. ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಜಿ.ಎನ್.ಉಪಾಧ್ಯ, ಪ್ರತಿಷ್ಠಾನದ ಸಂಸ್ಥಾಪಕರಾದ ಡಾ. ವಿಶ್ವನಾಥ ಕಾರ್ನಾಡ್, ಕೋಶಾಧಿಕಾರಿ ಶರತ್ ಕಾರ್ನಾಡ್ ಅವರ ಉಪಸ್ಥಿತಿಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು.ಹಿರಿಯ ಸಾಹಿತಿ ಯು. ವೆಂಕಟ್ರಾಜ್ ಅವರ ‘ಪಟೇಲರ ಹುಲಿ ಬೇಟೆ’ (ಕಥಾ ಸಂಕಲನ), ಅಂಕಣಕಾರ ಅಶೋಕ ಪಕ್ಕಳ ಅವರ ‘ಶತಾಮೃತಧಾರೆ’ (ಅಂಕಣ ಬರಹಗಳ ಸಂಗ್ರಹ) ಹಾಗೂ ಅನಿತಾ ತಾಕೋಡೆ ಅವರ ‘ಸುವರ್ಣಯುಗ’ ಜಯ ಸುವರ್ಣ ಯಶೋಗಾಥೆ ಕೃತಿಗಳು ಈ ಬಾರಿಯ ಬಹುಮಾನಕ್ಕೆ ಆಯ್ಕೆಯಾಗಿವೆ ಎಂಬುದಾಗಿ ಪ್ರತಿಷ್ಠಾನದ ಕಾರ್ಯದರ್ಶಿ ಡಾ.ಪೂರ್ಣಿಮಾ.ಎಸ್.ಶೆಟ್ಟಿ ಅವರು…

Read More

ಪುಣೆ ಬಂಟರ ಸಂಘದ ವತಿಯಿಂದ ಜರಗಿದ ಅಂತರಾಷ್ಟ್ರೀಯ ಬಂಟರ ಕ್ರೀಡಾಕೂಟದಲ್ಲಿ ಗುರುಪುರ ಬಂಟರ ಮಾತೃ ಸಂಘವು ತ್ರೋಬಾಲ್ ವಿಭಾಗದಲ್ಲಿ ತೃತೀಯ ಸ್ಥಾನವನ್ನು ಪಡೆದು ಕೆ.ಎಸ್.ಎಚ್ ಟ್ರೋಫಿ ಹಾಗು ನಗದನ್ನು ತನ್ನದಾಗಿಸಿಕೊಂಡಿದೆ. ಈ ಕ್ರೀಡಾಕೂಟದಲ್ಲಿ ಅಂತರಾಷ್ಟ್ರೀಯ ಮಟ್ಟದ 14 ಬಂಟರ ಸಂಘಗಳ ತ್ರೋಬಾಲ್ ತಂಡಗಳು ಸ್ಪರ್ಧಿಸಿದ್ದವು. ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನಾ ಕುರ್ಕಿಲ್ ಬೆಟ್ಟು ಬಾಳಿಕೆಯವರ ಅಧ್ಯಕ್ಷತೆಯಲ್ಲಿ ಜರಗಿದ ಈ ಕ್ರೀಡಾಕೂಟದಲ್ಲಿ ಪುಣೆ ಮಹಾನಗರದ ಬಂಟ ಸಮಾಜದ ಹಿರಿಯರಾದ ಕುಶಾಲ್ ಹೆಗ್ಡೆ, ಕ್ರೀಡಾಕೂಟದ ಸಂಚಾಲಕ ಚಂದ್ರಹಾಸ ಶೆಟ್ಟಿ ಎರ್ಮಾಳು, ಮಹಿಳಾ ವಿಭಾಗದ ಅಧ್ಯಕ್ಷೆ ಸುಲತಾ ಶೆಟ್ಟಿ, ಸುನೀಲ್ ಶೆಟ್ಟಿ, ಪ್ರಸನ್ನ ಶೆಟ್ಟಿ, ಪಡುಬಿದ್ರಿ ಬಂಟರ ಸಂಘದ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ದಕ್ಷಿಣ ಕನ್ನಡ ಜಿಲ್ಲಾ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಸುಚರಿತ ಶೆಟ್ಟಿ, ಮುಂಬಯಿ ಬಂಟರ ಸಂಘದ ಕ್ರೀಡಾ ಕಾರ್ಯದರ್ಶಿ ಗಿರೀಶ್ ಶೆಟ್ಟಿ ತೆಳ್ಳಾರು, ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘದ ಮಾಜಿ ಅಧ್ಯಕ್ಷ ರಾಕೇಶ್ ಶೆಟ್ಟಿ ಬೆಳ್ಳಾರೆ, ಪುಣೆ…

Read More

ಎಲ್ಲವನ್ನೂ ವಿವರಿಸಲಾಗದಷ್ಟು ನಿಗೂಢ ರಹಸ್ಯದ ಭಿನ್ನ ವೈವಿಧ್ಯತೆಗಳನ್ನು ಹೊಂದಿರುವ ಕಾರಣೀಕ ಧಾರ್ಮಿಕ ಕ್ಷೇತ್ರ ಶ್ರೀ ಮುದುಸ್ವಾಮಿ ದೇವಸ್ಥಾನ. ನ್ಯೆಸರ್ಗಿಕವಾದ ಸಹಜ ಹುತ್ತಕ್ಕೆ ಪೂಜಾವಿಧಿಗಳನ್ನು ನಡೆಸುವವರು ಬಂಟ ಅರ್ಚಕರು ಎನ್ನುವುದು ವಿಶೇಷ. ಎರಡು ವರ್ಷಗಳಿಗೊಮ್ಮೆ ಜನವರಿ 2 ರಿಂದ ಮಕರ ಸಂಕ್ರಾಂತಿ‌ಯ ತನಕ ಹನ್ನೆರಡು ರಾತ್ರಿ ನಡೆಯುವ ಕೋಲವನ್ನು ಪಾಣರಾಟ ಎಂದು ಕರೆಯುವುದು ಇಲ್ಲಿನ ರೂಢಿ. ಸಂಪ್ರದಾಯಬದ್ಧ ಶಿಷ್ಟಾಚಾರದೊಂದಿಗೆ ಹಿರಿಯರಿಂದ ನಡೆದು ಬಂದ ಕಟ್ಟು ಪಾಡಿನಂತೆ ಪಾಣಾರು, ಅರ್ಚಕರು, ಗ್ರಾಮಸ್ಥರು ಹಾಗೂ ದೇವಳದ ಸ್ಥಳ ಮನೆಯವರು ಭಕ್ತಿ ಭರಿತ ಕರ್ತವ್ಯವನ್ನು ಜವಾಬ್ದಾರಿಯುತವಾಗಿ ನಿರ್ವಹಿಸುತ್ತಾರೆ.ಪಾಡ್ದನ : ಪಾಣರಾಟ ಪ್ರಾರಂಭಕ್ಕೆ ಮೊದಲು ‌ಪಾಣಾರು ಮಹಿಳೆಯರು ಮತ್ತು ಹೆಣ್ಣು ಮಕ್ಕಳು ಮುದ್ದುಸ್ವಾಮಿ ದೇವಳದ ಎದುರು ಸಾಲಾಗಿ ‌ನಿಂತು ಹಿರಿಯರಿಂದ ಕಲಿತ ಪಾಡ್ದನದ ಕಥಾ ಹಂದರವನ್ನು ಸನ್ನಿವೇಶದ ವರ್ಣನೆ‌ಯೊಂದಿಗೆ ನಿಯತವಾದ‌ ಲಯ, ವಿಶಿಷ್ಟವಾದ ದಾಟಿಯಲ್ಲಿ, ಭಕ್ತಿಪೂರ್ವಕವಾಗಿ ಅರ್ಥಗರ್ಭಿತವಾಗಿ ಆಯಾ ದಿನ ಸೇವೆ ನಡೆಯುವ ದೇವರನ್ನು ಹಾಡಿ ಹೊಗಳುವ ಕ್ಷೇತ್ರ ಪರಿಚಯ ಪಾಡ್ದನದಲ್ಲಿ ಹಾಡುತ್ತಾರೆ. ಅಣಿ ಸೇವೆ : ಅಪರೂಪದಲ್ಲಿ…

Read More