Author: admin
ರಾಕ್ ಸ್ಟಾರ್ ರೂಪೇಶ್ ಶೆಟ್ಟಿ ಅಭಿನಯ ಮತ್ತು ನಿರ್ದೇಶನದಲ್ಲಿ ಅಭಿನಯಿಸಲು ಬಾಲಿವುಡ್ ನಟ ಸುನೀಲ್ ಶೆಟ್ಟಿ ಜನವರಿ 14 ರಂದು ಮಂಗಳೂರಿಗೆ ಆಗಮಿಸುತ್ತಿದ್ದಾರೆ. ಅನೆಕ ವರ್ಷಗಳಿಂದ ತುಳು ಸಿನಿಮಾದಲ್ಲಿ ಅಭಿನಯಿಸಬೇಕೆಂಬ ಇಚ್ಛೆ ಅವರಲ್ಲಿತ್ತು. ಆದರೆ ಅದಕ್ಕೆ ಕಾಲ ಕೂಡಿ ಬರಲಿಲ್ಲ. ಈಗ ರೂಪೇಶ್ ಶೆಟ್ಟಿ ನಿರ್ದೇಶನದ “ಜೈ” ತುಳು ಸಿನಿಮಾದಲ್ಲಿ ಸುನೀಲ್ ಶೆಟ್ಟಿ ಪ್ರಮುಖ ಪಾತ್ರವೊಂದರಲ್ಲಿ ಅಭಿನಯಿಸಲಿದ್ದಾರೆ.ಜನವರಿ 15 ರಿಂದ ಸುನೀಲ್ ಶೆಟ್ಟಿ ಅವರ ಚಿತ್ರೀಕರಣ ನಡೆಯಲಿದೆ. ಇದು ಜೈ ಸಿನಿಮಾಕ್ಕೆ ಕೊನೆಯ ಹಂತದ ಚಿತ್ರೀಕರಣ ಆಗಿದೆ. “ಜೈ” ಸಿನಿಮಾ ತುಳುವಿನಲ್ಲಿ ಬಿಗ್ ಬಜೆಟ್ ನ ಸಿನಿಮಾ ಆಗಿದ್ದು, ಸಿನಿಮಾಕ್ಕೆ ಕರಾವಳಿಯನ್ನು ಕೇಂದ್ರೀಕರಿಸಿ ವಿವಿಧ ಪ್ರದೇಶಗಳಲ್ಲಿ ಚಿತ್ರೀಕರಣ ನಡೆದಿದೆ. ಮುಖ್ಯವಾಗಿ ಕುತ್ತಾರ್, ದಂಬೇಲ್, ಮರಕಡ, ಶೂಲಿನ್ ಪ್ಯಾಲೇಸ್ ಮರವೂರು, ಬೊಂದೇಲ್, ಪಣಂಬೂರು, ಬೈಕಂಪಾಡಿಯಲ್ಲಿ ಚಿತ್ರೀಕರಣ ನಡೆದಿದೆ. ಜಿಲ್ಲೆಯ ಖ್ಯಾತನಾಮ ಕಲಾವಿದರು ಸಿನಿಮಾದಲ್ಲಿದ್ದಾರೆ. ಗಿರಿಗಿಟ್, ಗಮ್ಜಾಲ್, ಸರ್ಕಸ್ ಚಿತ್ರಗಳ ಯಶಸ್ಸಿನ ಬಳಿಕ ರೂಪೇಶ್ ಶೆಟ್ಟಿ ಅವರು ಮತ್ತೊಂದು ಬಿಗ್ ಬಜೆಟ್ ನ ಸಿನಿಮಾಕ್ಕೆ…
ಕ್ರೀಡೆ ಮಾತ್ರವಲ್ಲದೇ, ಸಮಾಜಮುಖಿ ಕೆಲಸಗಳಲ್ಲಿ ಸಂಘಟನೆ ತೊಡಗಿಸಿಕೊಂಡಿರುವುದು ಶ್ಲಾಘನೀಯ : ಕರುಣಾಕರ ಎಂ. ಶೆಟ್ಟಿ ಮಧ್ಯಗುತ್ತು
ವೀರಕೇಸರಿ (ರಿ) ತಡಂಬೈಲ್ ಸುರತ್ಕಲ್ ಇದರ ಆಶ್ರಯದಲ್ಲಿ ಡಾ. ಮಂಜಯ್ಯ ಶೆಟ್ಟಿ ಗುಂಡಿಲಗುತ್ತು ಹಾಗೂ ಮಾಜಿ ಮೇಯರ್ ರಜನಿ ದುಗ್ಗಣ್ಣ ಇವರ ಸ್ಮರಣಾರ್ಥ ಪುರುಷರ ಮುಕ್ತ ರಾಷ್ಟ್ರೀಯ ಮಟ್ಟದ ಆಹ್ವಾನಿತ ಆರು ತಂಡಗಳ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ ವೀರಕೇಸರಿ ಟ್ರೋಫಿ-2025 ಇದರ ಉದ್ಘಾಟನಾ ಸಮಾರಂಭ ಶನಿವಾರ ಸಂಜೆ ಸುರತ್ಕಲ್ ಬಂಟರ ಭವನದ ಬಳಿ ನಡೆಯಿತು. ಕಾರ್ಯಕ್ರಮವನ್ನು ಉದ್ಯಮಿ ಕರುಣಾಕರ ಎಂ ಶೆಟ್ಟಿ ಮಧ್ಯಗುತ್ತು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತಾಡಿದ ಅವರು, “ನನಗೆ ಕ್ರೀಡೆಯಲ್ಲಿ ಬಾಲ್ಯದಿಂದಲೂ ಹೆಚ್ಚಿನ ಆಸಕ್ತಿ. ಹೀಗಾಗಿ ಕ್ರೀಡಾ ಚಟುವಟಿಕೆಗಳಿಗೆ ನನ್ನಿಂದಾದ ಸಹಕಾರ ನೀಡುತ್ತಾ ಬಂದಿದ್ದೇನೆ. ಬರೀ ಕ್ರೀಡೆ ಮಾತ್ರವಲ್ಲದೇ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ವೀರಕೇಸರಿ ಸಂಘಟನೆ ಮುಂದಿನ ದಿನಗಳಲ್ಲಿ ಇನ್ನಷ್ಟು ಸಮಾಜಪರ ಕಾಳಜಿಯೊಂದಿಗೆ ಕೆಲಸ ಮಾಡಲಿ“ ಎಂದರು.ಜಿಲ್ಲಾ ವಾಲಿಬಾಲ್ ಅಸೋಸಿಯೇಷನ್ ಅಧ್ಯಕ್ಷ ಸತೀಶ್ ಮಾತನಾಡಿ, “ರಾಜ್ಯದಲ್ಲಿ ಬೇರೆಲ್ಲೂ ನಮ್ಮ ಜಿಲ್ಲೆಯಲ್ಲಿ ನಡೆಯುವಂತೆ ಶಿಸ್ತುಬದ್ಧವಾಗಿ ವಾಲಿಬಾಲ್ ಪಂದ್ಯಾಟ ನಡೆಯುವುದಿಲ್ಲ. ಕೇರಳದಲ್ಲಿ ಕ್ರೀಡಾಕೂಟಗಳು ಸಾಮಾನ್ಯವಾಗಿ…
ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು ವತಿಯಿಂದ ಯಕ್ಷಧ್ರುವ ಯುವ ಯಕ್ಷಗಾನ ಸ್ಫರ್ಧೆಯು 2025 ರ ಏಪ್ರಿಲ್ ತಿಂಗಳಾಂತ್ಯದಲ್ಲಿ ನಡೆಯಲಿದೆ. ಇದು ತೆಂಕು- ಬಡಗುತಿಟ್ಟುವಿನ ಯುವ ಯಕ್ಷಗಾನ ಕಲಾವಿದರ ಬಯಲಾಟ ಸ್ಪರ್ಧೆಯಾಗಿದ್ದು ಪ್ರಸಕ್ತ ಸ್ಪರ್ಧೆಯಲ್ಲಿ ಮೇಳದಲ್ಲಿ ತಿರುಗಾಟ ಮಾಡಿದ, ತಿರುಗಾಟ ಮಾಡುತ್ತಿರುವ ಕಲಾವಿದರು ಭಾಗವಹಿಸಬಹುದಾಗಿದೆ. ಯಕ್ಷಧ್ರುವ ಪಟ್ಲ ಪ್ರಕಾಶನ ಪ್ರಕಟಿಸಿದ ಶಿಮಂತೂರು, ಬಲಿಪ, ಬೊಟ್ಟಿಕೆರೆ, ಕೊಲೆಕಾಡಿ ಪ್ರಸಂಗ ಸಂಪುಟದ ಪ್ರಸಂಗಗಳನ್ನು ಮಾತ್ರ ಸ್ಪರ್ಧೆಗೆ ಬಳಸಬೇಕಾಗಿದ್ದು ಸ್ಫರ್ಧಾಳುಗಳ ವಯೋಮಿತಿಯು 15ರಿಂದ 25 ವರ್ಷದೊಳಗಿನ ಕಲಾವಿದರಿಗೆ ಮಾತ್ರ ಸೀಮಿತವಾಗಿದೆ. ಹಿಮ್ಮೇಳದ ಕಲಾವಿದರಿಗೆ ವಯೋಮಿತಿಯ ನಿರ್ಬಂಧವಿರದಿದ್ದರೂ ಒಂದು ತಂಡದಲ್ಲಿ ಭಾಗವಹಿಸಿದ ಹಿಮ್ಮೇಳ ಕಲಾವಿದರು ಇನ್ನೊಂದು ತಂಡದಲ್ಲಿ ಭಾಗವಹಿಸಲು ಅವಕಾಶವಿರುವುದಿಲ್ಲ. ಶಾಲೆ, ಕಾಲೇಜು, ಸಂಘ, ಬಳಗದ ತಂಡಗಳಿಗೆ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದ್ದು, ಕನಿಷ್ಠ 10, ಗರಿಷ್ಠ 15 ಕಲಾವಿದರನ್ನು ಒಳಗೊಂಡು ಒಂದು ಗಂಟೆ ಕಾಲಾವಧಿಯಾಗಿದೆ. ಅರ್ಹತಾ ಸುತ್ತು ಮತ್ತು ಅಂತಿಮ ಸುತ್ತು ಎನ್ನುವ ಎರಡು ಸುತ್ತುಗಳಿದ್ದು ಅರ್ಹತಾ ಸುತ್ತಿನಲ್ಲಿ ಆಯ್ಕೆಯಾದ ಎರಡು ತಿಟ್ಟುಗಳ ತಲಾ 4…
ತುಳುಕೂಟ ಉಡುಪಿ(ರಿ). ಮತ್ತು ಕರ್ನಾಟಕ ತುಳುಸಾಹಿತ್ಯ ಅಕಾಡೆಮಿ ಸಹಭಾಗಿತ್ವದಲ್ಲಿ ನಡೆದ 23 ನೇ ವರ್ಷದ ಕೆಮ್ತೂರು ತುಳುನಾಟಕ ಸ್ಪರ್ಧೆ -2025 ಇದರಲ್ಲಿ ನಮ್ಮ ಮುಂಬೈಯ ರಂಗಮಿಲನ ತಂಡ ಸುಮಾರು 8 ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ ಮುಂಬೈ ರಂಗಮಿಲನ ತಂಡ ಸೋಕ್ರೆಟಿಸ್ ನಾಟಕ ಸ್ಪರ್ಧೆಯಲ್ಲಿ ಭಾಗವಹಿಸಿತ್ತು. ಮೂಲ ಆರ್ ಡಿ ಕಾಮತ್, ತುಲುವಿಗೆ ನಾರಾಯಣ ಶೆಟ್ಟಿ ನಂದಲಿಕೆ ಭಾಷಾoತರಿಸಿದ್ದಾರು. ಮನೋಹರ್ ಶೆಟ್ಟಿ ನಂದಲಿಕೆ ಅವರ ನಿರ್ದೇಶನ ಜೊತೆಗೆ ಸಾದಯ, ನವೀನ್ ಇನ್ನ ಬಾಳಿಕೆ,ರಹೀಮ್ ಸಚ್ಚಿರಿಪೇಟೆ ಇವರ ಸಹಕಾರದಿಂದ ನಾಟಕ ಪ್ರದರ್ಶನಗೊಂಡಿತ್ತು.ಪ್ರತಿ ವರುಷದಂತೆ ಈ ವರುಷವೂ ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ನಡೆಯುವ ಉಡುಪಿ ದೊಡ್ಡಣ್ಣ ಶೆಟ್ಟಿ ಸ್ಮರಣಾರ್ಥ ತುಳುಕೂಟ ಉಡುಪಿ (ರಿ ) ಇವರು ಸ್ಪರ್ಧೆಯನ್ನು ಏರ್ಪಡಿಸಿದ್ದರು.ಸೋಕ್ರೋಟಿಸ್ ನಾಟಕದಲ್ಲಿ ಮುಂಬೈ ಕಲಾವಿದರಾದ ಸೂರಿ ಮಾರ್ನಾಡ್, ರವಿ ಹಗ್ದೆ ಹೆರ್ಮುಂಡೆ, ದೀಕ್ಷಾ ದೇವಾಡಿಗ, ಲತೇಶ್ ಪೂಜಾರಿ, ಸಚಿನ್ ಶೇರಿಗಾರ್ , ಕಿಶೋರ್ ಪಿಲಾರ್ ಮತ್ತು ಸುಶೀಲ್ ಅವ್ರು ನಟಿಸಿದ್ದಾರೆ ಜೊತೆಗೆ ಪ್ರಸಾದನದಲ್ಲಿ ಮಂಜುನಾಥ್ ಶೆಟ್ಟಿಗಾರ್, ಬೆಳಕು ಪ್ರವೀಣ್…
ಮುಂಬಯಿ: ಮಹಾರಾಷ್ಟ್ರದ ಪೊಂಜಿ ಸ್ಕೀಮ್ ಆಪರೇಟರುಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಾಜಿ ಶಾಸಕ ಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿ ಶ್ರೀ ದೇವೇಂದ್ರ ಫಡ್ನವೀಸ್ ಜಿ ಅವರಿಗೆ ಪತ್ರ ಬರೆದಿದ್ದಾರೆ. ಬ್ಲಿಸ್ ಕನ್ಸಲ್ಟೆಂಟ್ಗಳು, ಗುಡ್ವಿನ್ ಜ್ಯುವೆಲರ್ಸ್, ಅಂಬರ್ ದಲಾಲ್ ಮತ್ತು ಟೊರೆಸ್ ಜ್ಯುವೆಲರ್ಗಳು ಹೆಚ್ಚಿನ ಆದಾಯದ ಭರವಸೆ ನೀಡುವ ಮೂಲಕ ಅಥವಾ ಸಂಪೂರ್ಣ ಮೋಸದ ಯೋಜನೆಗಳನ್ನು ನಡೆಸುವ ಮೂಲಕ ಸಾವಿರಾರು ಹೂಡಿಕೆದಾರರನ್ನು ಹತ್ತಾರು ಸಾವಿರ ಕೋಟಿಗಳಷ್ಟು ವಂಚಿಸಿದ್ದಾರೆ. ಕೆಲವರ ವಿರುದ್ಧ ಕ್ರಮ ಕೈಗೊಳ್ಳಲಾಗಿದ್ದು, ಕೆಲವರು ಜಾಮೀನಿನ ಮೇಲೆ ಹಾಗೂ ಇನ್ನು ಕೆಲವರು ತಲೆಮರೆಸಿಕೊಂಡಿದ್ದಾರೆ. ಹಲವಾರು ಪೊಂಜಿ ಸ್ಕೀಮ್ ಆಪರೇಟರುಗಳು ಹೂಡಿಕೆದಾರರನ್ನು ವಂಚಿಸುತ್ತಿದ್ದಾರೆ ಅಲ್ಲದೆ ಅವರು ಇನ್ನೂ ಸಕ್ರಿಯರಾಗಿದ್ದಾರೆ ಮತ್ತು ಪೋಲಿಸರು ಕ್ರಮ ತೆಗೆದು ಕೊಳ್ಳಬೇಕಾಗಿದೆ. ಅಸ್ತಿತ್ವದಲ್ಲಿರುವ ಪೊಂಜಿ ಸ್ಕೀಮ್ ಆಪರೇಟರ್ಗಳು ಹೆಚ್ಚು ಅನುಮಾನಾಸ್ಪದ ಹೂಡಿಕೆದಾರರನ್ನು ವಂಚಿಸುವ ಮೊದಲು ತಕ್ಷಣವೇ ಶಿಸ್ತುಕ್ರಮಕ್ಕೆ ನಿರ್ದೇಶನ ನೀಡುವಂತೆ ಹೆಗ್ಡೆ ಅವರು ಮಾನ್ಯ ಸಿಎಂಗೆ ಮನವಿ ಮಾಡಿದ್ದಾರೆ. ಹೆಗ್ಡೆ ಅವರು ಸರ್ಕಾರದ ಸಹಾಯದಿಂದ ಬ್ಯಾಂಕ್ನಲ್ಲಿ ಫ್ರೀಜ್ ಮಾಡಿರುವ ಆಸ್ತಿ…
ವಿಕ್ರೋಲಿ ಪರಿಸರದಲ್ಲಿ ತಮ್ಮ ಪೂರ್ವಜರು, ತುಳು ಕನ್ನಡಿಗರು ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕವಾಗಿ ನಾವೆಲ್ಲರೂ ಒಗ್ಗಟ್ಟಿನಲ್ಲಿದ್ದು ಯಾವುದೇ ಸಮಸ್ಯೆಗಳನ್ನು ಸಂಘಟಿತರಾಗಿ ಎದುರಿಸಲು ದೂರದರ್ಶಿತ್ವದ ಮುಂದಾಲೋಚನೆಯೊಂದಿಗೆ ಕನ್ನಡ ಸಂಘದ ಸ್ಥಾಪನೆಗೆ ನಾಂದಿಯಾಡಿದರು. ಅವರ ಸಾಧನೆ ಸ್ಮರಣೀಯವಾದದು. ಇದೀಗ ನಾವೆಲ್ಲರೂ 37ನೇ ವಾರ್ಷಿಕ ಮಹಾಸಭೆಯಲ್ಲಿ ಇದ್ದೇವೆ. ಯಾವುದೇ ಸಂಘಟನೆ ಪ್ರಗತಿ ಕಾಣಬೇಕಾದರೆ ಆರ್ಥಿಕವಾಗಿ ಸದೃಢರಾಗಿರಬೇಕು. ನಮ್ಮ ಪೂರ್ವಜರು ಸ್ಥಾಪನೆ ಮಾಡಿದ ವೀಕೇಸ್ ಇಂಗ್ಲಿಷ್ ಹೈಸ್ಕೂಲ್ ನಲ್ಲಿ ಇದೀಗ 1,100 ವಿದ್ಯಾರ್ಥಿಗಳು ವಿದ್ಯಾರ್ಜನೆಗೈಯುತ್ತಿದ್ದು ನಮ್ಮ ಸಂಘಕ್ಕೆ ಭೀಮ ಬಲ ಬಂದಂತಾಗಿದೆ. ನಮ್ಮ ಸಂಘದಲ್ಲಿ 425 ಸದಸ್ಯರಿದ್ದರೂ ಮಹಾಸಭೆಗೆ ಹೆಚ್ಚಿನವರು ಗೈರು ಹಾಜರಾಗಿರುವುದು ಶೋಚನೀಯ. ಇಂದು ನನ್ನನ್ನು ಮುಂದಿನ ಅವಧಿಗೆ ಅಧ್ಯಕ್ಷರನ್ನಾಗಿ ಮರು ಆಯ್ಕೆ ಮಾಡಿದ್ದೀರಿ. ತಮ್ಮೆಲ್ಲರಿಗೂ ಕೃತಜ್ಞತೆಗಳು. ವೀಕೇಸ್ ಹೈಸ್ಕೂಲ್ ಹಾಗೂ ಕನ್ನಡ ಸಂಘಕ್ಕೆ ಎಲ್ಲರ ಒಮ್ಮತದ ಸಹಕಾರವಿರಲಿ ಎಂದು ವಿಕ್ರೋಲಿ ಕನ್ನಡ ಸಂಘದ ಅಧ್ಯಕ್ಷ ಉದಯ ಎಲ್. ಶೆಟ್ಟಿ ಪೇಜಾವರ ನುಡಿದರು. ಅವರು ಜನವರಿ 5ರಂದು ವಿಕ್ರೋಲಿ ಪೂರ್ವ ಠಾಗೋರ್ ನಗರದ ವೀಕೇಸ್ ಹೈಸ್ಕೂಲ್ ನ…
ಯಕ್ಷಧ್ರುವ ಪಟ್ಲ ಫೌಂಡೇಶನ್ ಸರಕಾರಿ ಶಾಲಾ ಮಕ್ಕಳಿಗೆ ಯಕ್ಷಗಾನ ತರಬೇತಿ ನೀಡಿ, ಮುಂದಿನ ಪೀಳಿಗೆಗೆ ಯಕ್ಷಗಾನ ಕಲೆಯ ಸೊಗಡು ಪಸರಿಸುತ್ತಿರುವುದು ಸಂತೋಷದ ಸಂಗತಿ. ಫೌಂಡೇಶನ್ನಿಂದ ಇಂತಹ ಕೆಲಸಗಳು ನಿರಂತರ ನಡೆಯಲಿ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಹೇಳಿದರು. ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ಹಾಗೂ ಪ್ರಾದೇಶಿಕ ಘಟಕಗಳ ಸಹಯೋಗದೊಂದಿಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಮತ್ತು ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ಅವರ ನೇತೃತ್ವದಲ್ಲಿ ಗಂಜಿಮಠದ ಒಡ್ಡೂರು ಫಾರ್ಮ್ನಲ್ಲಿ ಆಯೋಜಿಸಿದ ಯಕ್ಷಧ್ರುವ- ಯಕ್ಷಶಿಕ್ಷಣ ವಿದ್ಯಾರ್ಥಿಗಳಿಂದ ಯಕ್ಷಗಾನ ಕಾರ್ಯಕ್ರಮದ ಸಮಾರೋಪದಲ್ಲಿ ಮಾತನಾಡಿದರು. ಯಕ್ಷಧ್ರುವ ಪಟ್ಲ ಬಂಟ್ವಾಳ ಘಟಕದ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ರಂಗೋಲಿ ಅಧ್ಯಕ್ಷತೆ ವಹಿಸಿದ್ದರು. ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಪಟ್ಟ ಫೌಂಡೇಶನ್ನ ಪದಾಧಿಕಾರಿ ಪುರುಷೋತ್ತಮ ಭಂಡಾರಿ ಅಡ್ಯಾರು ಸ್ವಾಗತಿಸಿದರು. ವಿಧಾನ ಪರಿಷತ್ ಸದಸ್ಯ ಡಾ. ಮಂಜುನಾಥ ಭಂಡಾರಿ, ಯಕ್ಷಧ್ರುವ- ಯಕ್ಷಶಿಕ್ಷಣದ ಪ್ರಧಾನ ಸಂಚಾಲಕ ಪಣಂಬೂರು ವಾಸುದೇವ ಐತಾಳ, ಸರಪಾಡಿ…
ಬಂಟರ ಯಾನೆ ನಾಡವರ ಸಂಘ ಬೈಂದೂರು ಇದರ ವತಿಯಿಂದ ಆಯೋಜಿಸಲಾದ ಬಂಟರ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಸ್ಪರ್ಧೆ, ಪ್ರತಿಭಾ ಸಂಭ್ರಮ -2025 ಬೈಂದೂರು ಬಂಟರ ಭವನದಲ್ಲಿ ಸಂಘದ ಅಧ್ಯಕ್ಷ ಶಶಿಧರ ಶೆಟ್ಟಿ ಸಾಲ್ಗದ್ದೆಯವರ ನೇತೃತ್ವದಲ್ಲಿ ಜರುಗಿತು. ಉದ್ಯಮಿ ಗಾಯಾಡಿ ಗೋಕುಲ ಶೆಟ್ಟಿ ಉಪ್ಪುಂದ ದೀಪ ಬೆಳಗಿಸಿ ಉದ್ಘಾಟಿಸಿದರು. ಬೈಂದೂರು ಶಾಸಕ ಗುರುರಾಜ ಶೆಟ್ಟಿ ಗಂಟಿಹೊಳೆ ಕಾರ್ಯಕ್ರಮಕ್ಕೆ ಆಗಮಿಸಿ ಶುಭ ಹಾರೈಸುತ್ತಾ, ಎಳೆಯ ಪ್ರತಿಭೆಗಳಿಂದ ಗ್ರಾಮೀಣ ಮಹಿಳೆಯರಲ್ಲಿ ಅಂತರ್ಗತವಾದ ಸೂಕ್ತ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ನೀಡಿದ ಈ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಾ ಶ್ಲಾಘಿಸಿದರು. ವೇದಿಕೆಯಲ್ಲಿ ಉದ್ಯಮಿ ನೆಲ್ಯಾಡಿ ದಿವಾಕರ ಶೆಟ್ಟಿ, ಕುದ್ರುಕೊಡು ಜಗದೀಶ್ ಶೆಟ್ಟಿ, ಶ್ರೀಮತಿ ಚಂದ್ರಕಲಾ ಶೆಟ್ಟಿ, ಚಂದ್ರಶೇಖರ್ ಶೆಟ್ಟಿ, ಆಲೂರು ಸಂತೋಷ್ ಶೆಟ್ಟಿ, ಗೌರವ ಗಾರ್ಮೆಂಟ್ಸ್ ಸತೀಶ್ ಶೆಟ್ಟಿ ಸೂರ್ಕುಂದ, ಮನೋಹರ ಶೆಟ್ಟಿ ಉಪ್ಪುಂದ, ಜಯರಾಮ ಶೆಟ್ಟಿ ಗಂಟಿಹೊಳೆ, ಶಿಲ್ಪಾ ಶೆಟ್ಟಿ, ಮಮತಾ ಶೆಟ್ಟಿ ಉಪ್ಪುಂದ, ಖಜಾಂಚಿ ಜಯರಾಮ ಶೆಟ್ಟಿ, ಬಿಜೂರು ರಾಜಿವ ಶೆಟ್ಟಿ, ಕುರ್ಸಿ ಪ್ರಭಾಕರ ಶೆಟ್ಟಿ, ಉಪ್ಪುಂದ…
ಮುಂಬಯಿ ಮಹಾನಗರದ ಸೇವಾ ಸಂಸ್ಥೆ ಶಿವಾಯ ಫೌಂಡೇಶನ್ ವತಿಯಿಂದ ವಾಸಕ್ಕಾಗಿ ರಸ್ತೆ ಮತ್ತು ಬೀದಿ ಬದಿಯ ಫುಟ್ಪಾತ್ ಗಳನ್ನು ಆಶ್ರಯಿಸಿರುವ ನಿರಾಶ್ರಿತರಿಗೆ ಕಂಬಳಿ ವಿತರಿಸುವ ಮೂಲಕ 2025 ರ ಹೊಸ ವರ್ಷವನ್ನು ವಿಭಿನ್ನವಾಗಿ ಆಚರಿಸಲಾಯಿತು. ಬೈಕಲಾ, ಲಾಲ್ ಭಾಗ್, ಕಾಲಾ ಚೌಕಿ, ಪರೇಲ್, ಮಜ್ಗಾಂವ್, ನವಿಮುಂಬಯಿಯ ಕೆಲವು ಪ್ರದೇಶಗಳಲ್ಲಿ ಶಿವಾಯ ಫೌಂಡೇಶನ್ ಸ್ವಯಂ ಸೇವಕರು ರಾತ್ರಿ ಸುತ್ತಾಡಿ ಅರ್ಹ ನಿರಾಶ್ರಿತರಿಗೆ ಕಂಬಳಿಗಳನ್ನು ವಿತರಿಸಿದರು. ಮುಂಬಯಿ ಪರಿಸರದ ಸೇವಾ ಚಟುವಟಿಕೆಗಳಲ್ಲಿ ಮಧುಸೂದನ್ ಶೆಟ್ಟಿ ಹಿರಿಯಡ್ಕ, ಪ್ರಶಾಂತ್ ಶೆಟ್ಟಿ ಪಲಿಮಾರು, ಡಾ. ಸ್ವರ್ಣಲತಾ ಶೆಟ್ಟಿ, ಪ್ರಶಾಂತ್ ಶೆಟ್ಟಿ ಪಂಜ, ಪ್ರಶಾಂತ್ ಎ ಶೆಟ್ಟಿ ಬೈಕಲಾ, ರಾಜೇಶ್ ಶೆಟ್ಟಿ ಕಟಪಾಡಿ ಉಪಸ್ಥಿತರಿದ್ದರು. ನವಿ ಮುಂಬಯಿ ಪರಿಸರದ ಸೇವಾ ಚಟುವಟಿಕೆಗಳಲ್ಲಿ ಹರೀಶ್ ಕೋಟ್ಯಾನ್ ಪಡು ಇನ್ನ, ಕೆ. ವಾಸುದೇವ ಶೆಟ್ಟಿ ಕಟಪಾಡಿ, ಸಂಗೀತಾ ಶೆಟ್ಟಿ, ಪ್ರಭಾವತಿ ಶೆಟ್ಟಿ ಭಾಗವಹಿಸಿದ್ದರು.
ನಮ್ಮ ನಾಡ ಮಡಿಲಲ್ಲಿ ಅದೆಷ್ಟೋ ಸುಂದರ, ವಿಸ್ಮಯ ಹಾಗೂ ವಿಶಿಷ್ಟ, ಬೆರಗು ಮೂಡಿಸುವ ಅಚ್ಚರಿಯ ತಾಣಗಳಿವೆ. ಈ ಅದ್ಭುತ ಆಗರಗಳ ಸಾಲಿನಲ್ಲಿ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೋಟ ಗ್ರಾಮದ ಶ್ರೀ ಅಮೃತೇಶ್ವರಿ, ಹಲವು ಮಕ್ಕಳ ತಾಯಿ ದೇವಸ್ಥಾನ. ಸೃಷ್ಟಿಯ ವಿಚಿತ್ರಗಳೆಲ್ಲವೂ ಪರಮಾತ್ಮನ ಲೀಲಾ ಕಲ್ಪನೆಯ ಸಾಕಾರ ರೂಪಗಳಿದ್ದು, ಮಾನವನ ಬದುಕಿನ ಔನ್ನತ್ಯಕ್ಕೆ ಒಂದೊಂದು ಬಗೆಯಲ್ಲಿ ಕ್ರಿಯಾತ್ಮಕ ಪೋಷಣೆಗಳಾಗಿವೆ ಎಂಬಂತೆ ಇಂದಿಗೂ ಪ್ರತಿ ಮೂರು ವರ್ಷಗಳಿಗೊಮ್ಮೆ ಒಂದು ಲಿಂಗಾಕೃತಿಯ ಕಲ್ಲು ಮೂಡಿ ಬರುವುದು ಇಲ್ಲಿನ ವಿಸ್ಮಯ. ಎಣಿಸಲಾರದಷ್ಟು ಲಿಂಗ ರೂಪದ ಮಕ್ಕಳಿಗೆ ಜನ್ಮ ನೀಡಿದ, ನೀಡುತ್ತಿರುವ ಚಿರಯೌವನ ಮಹಾತಾಯಿ ಅಮೃತೇಶ್ವರಿ. ಇದಕ್ಕೆ ಸಾಕ್ಷಿಯಾಗಿ ದೇವಸ್ಥಾನದ ಸುತ್ತಾ ಮೂಡಿಬಂದ ಲಿಂಗ ರೂಪದ ಕಲ್ಲು ಗೋಚರಿಸುತ್ತದೆ. ಯೂನಿಯನ್ ಆಫ್ ಸಾಯಿಲ್ಸೈನ್ಸ್ ಸಂಸ್ಥೆಯೊಂದು ಇಲ್ಲಿನ ಮಣ್ಣಿನ ಪರೀಕ್ಷೆ ನಡೆಸಿ ಇಲ್ಲಿ ನಿರಂತರವಾಗಿ ಲಿಂಗರೂಪದ ಕಲ್ಲು ಮೂಡಿ ಬರುತ್ತಿರುವ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದೆ.ಐತಿಹಾಸಿಕವಾಗಿ ಮಹತ್ವ ಹೊಂದಿರುವ ಭಕ್ತರ ಇಷ್ಟಾರ್ಥ ಸಿದ್ಧಿ ಕ್ಷೇತ್ರದಲ್ಲಿ ಜನವರಿ ಹತ್ತರಂದು ಗೆಂಡ ಸೇವೆ…