Author: admin

ಕಲೆ, ಸಂಸ್ಕೃತಿ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ತಮ್ಮ ವಿಶಿಷ್ಟ ಯೋಗದಾನಗಳ ಮೂಲಕ ಗುರುತಿಸಿಕೊಂಡ ಬಂಟ್ಸ್ ಕತಾರ್ ಇತ್ತೀಚೆಗೆ ಜನವರಿ ಒಂಬತ್ತರಂದು ಬಂಟೋತ್ಸವ ಶೀರ್ಷಿಕೆಯಡಿ ಅದ್ದೂರಿಯ ಕಲೆ ಸಾಂಸ್ಕೃತಿಕ ಕಾರ್ಯಕ್ರಮ ವೈವಿಧ್ಯಗಳನ್ನು ಆಯೋಜಿಸುವ ಮೂಲಕ ವಿಶ್ವದ ತುಳು ಕನ್ನಡಿಗರ ಚಿತ್ತವನ್ನು ಅತ್ತ ಆಕರ್ಷಿಸಿ ವ್ಯಾಪಕ ಶ್ಲಾಘನೆಗೆ ಪಾತ್ರವಾಗಿದೆ. ಅಂದು ವಾಕ್ರಾದ ಡಿ.ಪಿ.ಎಸ್.ಮಿಸ್ ಶಾಲಾ ಸಭಾಂಗಣದಲ್ಲಿ ಜರಗಿದ ಈ ಉತ್ಸವದಲ್ಲಿ ಅಸಂಖ್ಯಾತ ಬಂಟ ಗಣ್ಯರು ಭಾಗವಹಿಸಿ ಸಂಭ್ರಮಕ್ಕೆ ಕಳೆಯೇರಿಸಿದರು. ಗಾನ ವೈಭವ, ಕಲಾವೈಭವ, ಹಾಸ್ಯ ವೈಭವ ಎಂದು ವಿಭಾಗಿಸಲ್ಪಟ್ಟ ವಿಶೇಷ ಕಾರ್ಯಕ್ರಮಗಳು ಉತ್ಸವದಲ್ಲಿ ಒಳಗೊಂಡಿದ್ದವು. ಕತಾರ್ ಬಂಟ್ಸ್ ನ ಸದಸ್ಯರು, ಮಕ್ಕಳು ಹಾಗೂ ಪರಿವಾರದ ಮಹಿಳೆಯರು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿ ತಮ್ಮ ವಿಶೇಷ ಪ್ರತಿಭೆಗಳ ಪ್ರದರ್ಶನ ನೀಡಿದರು. ಸಂಜೆ 4.30ಕ್ಕೆ ಸಾಂಪ್ರದಾಯಿಕ ರೀತಿಯಲ್ಲಿ ವಿಧಿವತ್ತಾಗಿ ದೀಪ ಪ್ರಜ್ವಲನೆ ಕಾರ್ಯಕ್ರಮವನ್ನು ಅಧ್ಯಕ್ಷರಾದ ನವೀನ್ ಶೆಟ್ಟಿ ಇರುವೈಲು ಸೇರಿದಂತೆ ಆಹ್ವಾನಿತ ಅತಿಥಿ ಗಣ್ಯರು ನೆರವೇರಿಸಿದರು. ಶ್ರೀಮತಿ ಅಕ್ಷಿನಿ ವಿ ಶೆಟ್ಟಿ ಅವರು ಪ್ರಾಸ್ತವಿಕ ಭಾಷಣ ಮಾಡಿ ನೆರೆದ…

Read More

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಮಹಾದಾನಿ ಡಾ| ಕನ್ಯಾನ ಸದಾಶಿವ ಶೆಟ್ಟಿಯವರು ಮನ ನೊಂದು ಇನ್ನು ಮುಂದೆ ಸಮಾಜ ಸೇವೆಗೆ ತನ್ನ ಯಾವುದೇ ಕೊಡುಗೆ ಇಲ್ಲವೆಂದು ಹೇಳಿಕೆ ನೀಡಿರುವ ವಿಡಿಯೋ ಸಾಮಾಜಿಕವಾಗಿ ಪರ ವಿರೋಧ ಚರ್ಚೆಗೆ ಕಾರಣವಾಗಿದ್ದು, ಈ ಬಗ್ಗೆ ಮಾಜಿ ಸಂಸದರಾದ ಗೋಪಾಲ್ ಶೆಟ್ಟಿ, ಬರೋಡ ಶಶಿಧರ ಶೆಟ್ಟಿ, ಮಹೇಶ್ ಶೆಟ್ಟಿ ತೆಳ್ಳಾರ್, ರಾಜೇಶ್ ಶೆಟ್ಟಿ ರಾಕ್ಷಿ ಬಿಲ್ಡರ್ಸ್, ಪಟ್ಲ ಸತೀಶ್ ಶೆಟ್ಟಿ, ಕೆ.ಕೆ ಶೆಟ್ಟಿ ಅಹ್ಮದ್ ನಗರ, ಅಶೋಕ್ ಶೆಟ್ಟಿ ಬೆಳ್ಳಾಡಿ, ಅರವಿಂದ್ ಆನಂದ್ ಶೆಟ್ಟಿ, ಗಿರೀಶ್ ಶೆಟ್ಟಿ ತೆಳ್ಳಾರ್, ಶಶಿಧರ ಶೆಟ್ಟಿ ಇನ್ನಂಜೆ, ಉಳ್ತೂರು ಮೋಹನದಾಸ ಶೆಟ್ಟಿ, ಅಶೋಕ್ ಶೆಟ್ಟಿ ಕಲ್ಪವೃಕ್ಷ ಇವರುಗಳ ಉಪಸ್ಥಿತಿಯಲ್ಲಿ ಮುಂಬೈಯಲ್ಲಿ ನಡೆದ ಸಭೆಯಲ್ಲಿ ಮಾತುಕತೆ ನಡೆಸಿ ಕನ್ಯಾನ ಸದಾಶಿವ ಶೆಟ್ಟಿ ಹಾಗೂ ಐಕಳ ಹರೀಶ್ ಶೆಟ್ಟಿಯವರ ನಡುವಿನ ಮನಸ್ತಾಪ ಸುಖಾಂತ್ಯ ಕಂಡಿದೆ.

Read More

ದೈವ ಪಂಜುರ್ಲಿ ನಮ್ಮ ತುಳುನಾಡ್ ನ್ ಮಿತ್ತ ಲೋಕಡ್ ಸೂರ್ಯ ದೇವೆರ್ ಉಂಡಾನಗ ತಿರ್ತ್ ಭೂಮಿ ಉಂಡಾದ್ ಏಳ್ ಕಡಲ್ದ ನಡುಟು ಉಂಡಾಯಿನ ಬೆರ್ಮೆರ್ ಸೃಷ್ಟಿ ಮಲ್ತೆರ್ ಪಂದ್ ಕೆಲವು ಪರ ಸಂಧಿ ಪಾರ್ದನೊಲು ಪನ್ಪುಂಡು. ಈ ಸಂಧಿ ಪಾರ್ದನೊಲೆ ತುಳುನಾಡ್ಡ್ ನಡತಿನ ಸತ್ಯ ಚರಿತ್ರೆಲೆಗ್ ಪತ್ತಿನ ಕೈ ಕನ್ನಡಿ. ಇಂಚ ಭೂಮಿ ಉಂಡಾನಗ ಉಂಡಾಯಿನ ಬೆರ್ಮೆರ್ ತಾನ್ ಉಂಡಾನಗ ತನ್ನ ಒಟ್ಟಿಗೆ ನಾಗನಕ್ಲೆನ್, ಸರ್ಪನಕ್ಲೆನ್, ಎಳ್ವೆರ್ ಸಿರಿಕುಲು ಒರಿ ಕುಮಾರೆರೆನ್, ನಾಲ್ ಕಾರ ನಂದಿ ಗೋಣನ್, ಭೂಮಿ ಬಾರಗೆ ಬಾಲೆ ಕನ್ಯಾವು ಲೆಕ್ಕಿಸಿರಿನ್, ಅಂಚನೆ ಕದಿಕೆ ಉಂಡಾನಗ ಪಂಜುರ್ಲಿ, ಪಿಲಿ ಚಂಡಿ, ಜುಮಾದಿ, ಉಲ್ಲಾಯ ಉಳ್ಳಾಲ್ದಿನ್ ಉಂಡು ಮಲ್ತೆರ್ ಪಂದ್ ಪಾರ್ದನ ಪನ್ಪುಂಡು. ಆ ಪ್ರಕಾರ ಬೆರ್ಮೆರೆ ನಿರ್ಧಾರಡ್ ಪಂಜುರ್ಲಿ ಕದಿಕೆ ಉಂಡಾನಗ ಉಂಡಾದ್ ಕಾಡ್ ಪೊಗ್ಗುದು ಮುರ್ಗಂದ್ ಪನ್ಪಾವುಂಡು ಊರುಗು ಜತ್ತುದ್ ದೈವಂದ್ ಪನ್ಪಾವುಂಡು. ಇಂಚೆನೆ ದೈವ ಪಂಜುರ್ಲಿ ತುಳುನಾಡ್ ಒರ್ಮೆಲಾ ಅವೆತೋ ಬೇತೆ ಬೇತೆ ಚರಿತ್ರೆಲೆನ್ ಉಂಡು…

Read More

ಇಂದಿನ‌ ವಿದ್ಯಾರ್ಥಿಗಳು ಭಾರತ ದೇಶದ ಭವಿಷ್ಯ ರೂಪಿಸುವವರಾಗಿದ್ದಾರೆ. ಪರಿಶ್ರಮ ಪಟ್ಟರೆ ಭವಿಷ್ಯದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯ ಎಂದು ಬಿ.ಎ.ಎಸ್.ಎಫ್ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ಹಿರಿಯ ಪ್ರಭಂದಕರಾದ ಸಂತೋಷ್ ಪೈ ನುಡಿದರು. ಅವರು ಮಧ್ಯ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಗೆ ಬಿ.ಎ.ಎಸ್.ಎಫ್ ಸಂಸ್ಥೆಯ ವತಿಯಿಂದ ಸುಮಾರು 3.50 ಲಕ್ಷ ವೆಚ್ಚದಲ್ಲಿ ಶುದ್ದ ಕುಡಿಯುವ ನೀರಿನ ಘಟಕವನ್ನು ನಿರ್ಮಾಣ ಮಾಡಿದ್ದು ಅದರ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ನಮ್ಮ ಸಂಸ್ಥೆಯು ಅದ್ಯತೆ ನೆಲೆಯಲ್ಲಿ ಪರಿಸರದ ಸುತ್ತಲಿನ ಗ್ರಾಮಗಳ ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಗ್ರಾಮೀಣ ಭಾಗದ ಸರಕಾರಿ ಶಾಲೆಯು ಅತೀ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿದ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒಳಗೊಂಡ ಶಾಲೆಯಾಗಿರುವುದು ಶ್ಲಾಘನೀಯ ಎಂದರು. ಜೆಸಿಐ ವಲಯ 15 ರ ವಲಯಾಧ್ಯಕ್ಷ ಸಂತೋಷ್ ಶೆಟ್ಟಿ, ವಲಯ ಉಪಾಧ್ಯಕ್ಷ ಜೀತೇಶ್ ಪಿರೇರಾ, ಮಧ್ಯ ಶಾಲೆಯ ವಿದ್ಯಾನಿಧಿ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ, ಕೋಶಾಧಿಕಾರಿ ವಿಠಲ‌…

Read More

ಆಳ್ವಾಸ್ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕಾಲೇಜು, ಕೇಂದ್ರ ಆಯುಷ್ ಮಂತ್ರಾಲಯದ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಸಂಶೋಧನಾ ಮಂಡಳಿಯ ಸಹಯೋಗದಲ್ಲಿ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಮೂಲಕ ದೇಹದ ಬೊಜ್ಜು ನಿರ್ವಹಣೆ ಕುರಿತು ಒಂದು ದಿನದ ಕಾರ್ಯಾಗಾರ ಕಾಲೇಜಿನ ಆವರಣದಲ್ಲಿ ನಡೆಯಿತು. ಕಾರ್ಯಾಗಾರದ ಮುಖ್ಯ ಉದ್ದೇಶ ಸಮಾಜದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ದೇಹದ ಬೊಜ್ಜಿನ ಸಮಸ್ಯೆ ಕುರಿತು ಜಾಗೃತಿ ಮೂಡಿಸುವುದು ಹಾಗೂ ಯೋಗ ಮತ್ತು ನೈಸರ್ಗಿಕ ಚಿಕಿತ್ಸೆಯ ಮೂಲಕ ಅದನ್ನು ತಡೆಯುವ ಮತ್ತು ನಿಯಂತ್ರಿಸುವ ಮಾರ್ಗಗಳನ್ನು ಚರ್ಚಿಸಲಾಯಿತು. ಎಸ್‌ಡಿಎಮ್ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕಾಲೇಜಿನ ಡೀನ್ ಡಾ. ಶಿವಪ್ರಸಾದ್ ಶೆಟ್ಟಿಯವರು ಬೊಜ್ಜಿಗೆ ಸಂಬಂಧಿಸಿದಂತೆ ವೈದ್ಯಕೀಯ ಮತ್ತು ಜೀವನಶೈಲಿಯ ಅಂಶಗಳನ್ನು ವಿಶ್ಲೇಷಿಸಿ, ದೀರ್ಘಕಾಲಿಕ ತೂಕ ನಿಯಂತ್ರಣಕ್ಕಾಗಿ ಯೋಗಾಭ್ಯಾಸ, ಮನೋನಿಗ್ರಹ ಮತ್ತು ಮೈಂಡ್ ಬಾಡಿ ಮೆಡಿಸಿನ್ ಮಹತ್ವವನ್ನು ವಿವರಿಸಿದರು. ಯೆನಪೋಯಾ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕಾಲೇಜಿನ ಸಹಪ್ರಾಧ್ಯಾಪಕ ಡಾ. ಅಜಿತ್ ಕೆ, ಆಹಾರ ಕ್ರಮದ ಪರಿಷ್ಕರಣೆ, ನೈಸರ್ಗಿಕ ಪೌಷ್ಟಿಕ ತತ್ವಗಳು…

Read More

ಅಖಿಲ ಭಾರತ ಅಂತರ್ ವಿವಿ ಮಹಿಳಾ ಕ್ರಾಸ್‌ಕಂಟ್ರಿ ಚಾಂಪಿಯನ್‌ಶಿಪ್‌ನಲ್ಲಿ ಮಂಗಳೂರು ವಿವಿಯನ್ನು ಪ್ರತಿನಿಧಿಸಿದ್ದ ಆಳ್ವಾಸ್‌ನ ಮಹಿಳೆಯರ ತಂಡ ಸಮಗ್ರ ಚಾಂಪಿಯನ್ಸ್ ಪಟ್ಟ ಪಡೆಯಿತು. ಮಹಿಳೆಯರ ತಂಡವು ನಾಲ್ಕನೇ ಬಾರಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆದುಕೊಂಡಿತು. ಮಂಗಳೂರು ವಿವಿ ಪ್ರತಿನಿಧಿಸಿದ್ದ ಮಹಿಳೆಯರ ತಂಡದಲ್ಲಿದ್ದ 06 ಜನ ಕ್ರೀಡಾಳುಗಳು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾರ್ಥಿಗಳಾಗಿದ್ದಾರೆ. ಮಹಿಳೆಯರ ವಿಭಾಗದಲ್ಲಿ ಮಂಗಳೂರು ವಿವಿ 26 ಅಂಕಗಳೊಂದಿಗೆ ಪ್ರಥಮ ಸ್ಥಾನ ಪಡೆದರೆ, ಪುಣೆಯ ಸಾವಿತ್ರಿ ಭಾಯಿಫುಲೆ ವಿವಿ 67 ಅಂಕಗಳೊಂದಿಗೆ ದ್ವಿತೀಯ ಸ್ಥಾನ, 73 ಅಂಕಗಳೊಂದಿಗೆ ರೋಹ್ಟಕ್ ವಿವಿ ತೃತೀಯ ಸ್ಥಾನ ಗಳಿಸಿತು. ಮಹಿಳೆಯರ ವೈಯಕ್ತಿಕ ವಿಭಾಗದಲ್ಲಿ ಆಳ್ವಾಸ್‌ನ ತಾಮ್ಸಿ ಪ್ರಥಮ ಸ್ಥಾನ, ಯಾಶಿ ಸಾಚನ್ ತೃತೀಯ ಸ್ಥಾನ, ಜ್ಯೋತಿ ಒಂಬತ್ತನೇ ಸ್ಥಾನ, ಭಾಗೀರಥಿ ಹದಿಮೂರನೇ ಸ್ಥಾನ ಪಡೆದರು. ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಅಸೋಸಿಯೇಷನ್ ಆಫ್ ಇಂಡಿಯನ್ ಯುನಿವರ್ಸಿಟಿಸ್ ಸಹಯೋಗದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಳ್ವಾಸ್ ಕಾಲೇಜಿನ ಆಶ್ರಯದಲ್ಲಿ ಅಖಿಲ ಭಾರತ ಅಂತರ್ ವಿವಿ ಮಹಿಳೆಯರ ಕ್ರಾಸ್‌ಕಂಟ್ರಿ ಚಾಂಪಿಯನ್‌ಶಿಪ್…

Read More

ಪ್ರೀತಿಯ ಸಮಾಜ ಬಾಂಧವರೆ, ನಮ್ಮ ಸಮಾಜದ ಬಗ್ಗೆ ನಮಗೆಲ್ಲರಿಗೂ ಅಭಿಮಾನ ಹೆಮ್ಮೆ ಇದೆ. ಇದು ನಿಜವಾಗಲೂ ಇರಬೇಕು. ಯಾಕೆಂದರೆ ನಮ್ಮ ಸಮಾಜದಲ್ಲಿ ಹುಟ್ಟಿ ಬೆಳೆದವರು ನಾವು ದುಡಿದು ತಿನ್ನಬೇಕು. ಬೇರೆಯವರಿಗೂ ನೀಡಬೇಕು ಅನ್ನುವ ಮನೋಭಾವನೆ ಇರಬೇಕು ಮತ್ತು ಯಾರಿಗೂ ಕಡಿಮೆ ಇಲ್ಲದಂತೆ ಬದುಕಬೇಕು. ಯಾರೊಂದಿಗೂ ಬೇಡಬಾರದು. ಎಲ್ಲರಿಗೂ ತನ್ನಿಂದಾದ ಸಹಾಯ ಮಾಡಬೇಕು. ಇದು ನಮ್ಮ ಬಂಟ ಸಮಾಜದ ಹೆಗ್ಗುರುತು. ಇಂದು ಜಗತ್ತಿನಾದ್ಯಂತ ನಮ್ಮ ಸಮಾಜಕ್ಕೆ ಕೊಡುವ ಗೌರವ, ಪ್ರತಿಷ್ಠೆ, ಮುಂದಾಳತ್ವ ನೋಡಿದರೆ ತುಂಬಾ ಹೆಮ್ಮೆ ಅನಿಸುತ್ತದೆ. ಒಂದು ಸಮಾಜ ಕಟ್ಟುವುದು, ಬೆಳೆಸುವುದು ಆ ಸಮಾಜದ ಹಿರಿಯರು ಹಾಕಿಕೊಟ್ಟ ಮಾರ್ಗದರ್ಶನ ನಮ್ಮನ್ನು ಈ ಮಟ್ಟಕ್ಕೆ ಏರಿಸಿದೆ ಅಂದರೆ ಖಂಡಿತಾ ತಪ್ಪಾಗಲಾರದು. ಹಿಂದೆ ನಮ್ಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾವು ಕಡಿಮೆ ಸಂಖ್ಯೆಯಲ್ಲಿ ಇದ್ದೆವು. ಹೆಚ್ಚಿನ ಬಂಟರು ಜಮೀನ್ದಾರರಾಗಿದ್ದರು. ಆದರೆ ಭೂ ಮಸೂದೆ ಕಾನೂನಿನಲ್ಲಿ ಉಳುವವನೆ ಹೊಲದೊಡೆಯ ಅನ್ನುವ ಕಾನೂನು ನಮ್ಮಲ್ಲಿ ಕೆಲವರನ್ನು ನಿರ್ಗತಿಕರನ್ನಾಗಿ ಮಾಡಿತು. ಆದರೆ ನಮ್ಮ ಬಂಟ ಸಮುದಾಯ ಇದನ್ನು ಸವಾಲಾಗಿ…

Read More

ಉಡುಪಿ ಹಳೆ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ಬಳಿ ಇರುವ ಉಡುಪಿಯ ಪ್ರಖ್ಯಾತ ಶಾಂಭವಿ ಹೋಟೆಲ್ಸ್ ನ ಅಂಗಸಂಸ್ಥೆಯಾದ ಸಂಪೂರ್ಣ ನವೀಕೃತಗೊಂಡ “ಮನ್ ಪಸಂದ್ ಫ್ಯಾಮಿಲಿ ರೆಸ್ಟೋರೆಂಟ್” ಭಾನುವಾರ ಉದ್ಘಾಟನೆಗೊಂಡಿತು. ಉಜ್ವಲ್ ಡೆವಲರ್ಪ್ ಪ್ರವರ್ತಕ ಪುರುಷೋತ್ತಮ ಶೆಟ್ಟಿ ಹಾಗೂ ಉದ್ಯಮಿ ತಲ್ಲೂರು ಶಿವರಾಮ ಶೆಟ್ಟಿ ನವೀಕೃತ ಹೋಟೆಲ್ ಅನ್ನು ಉದ್ಘಾಟಿಸಿ ಶುಭಹಾರೈಸಿದರು. ಚಿತ್ರನಟ ಅರವಿಂದ ಬೋಳಾರ್ ಮಾತನಾಡಿ, ಗ್ರಾಹಕರಿಗೆ ಉತ್ತಮ ಸೇವೆ ನೀಡುವುದರ ಜೊತೆಗೆ ನೌಕರರ ಹಿತ ಕಾಪಾಡಿದಾಗ ಒಂದು ಸಂಸ್ಥೆ ಅಭಿವೃದ್ಧಿ ಹೊಂದಲು ಸಾಧ್ಯ. ಮನ್ ಪಸಂದ್ ರೆಸ್ಟೋರೆಂಟ್ ಗ್ರಾಹಕರ ಮನಸ್ಸು ಗೆಲ್ಲಬೇಕು. ಆಗ ಹೋಟೆಲ್ ಉತ್ತರೋತ್ತರ ಅಭಿವೃದ್ಧಿಯಾಗುತ್ತದೆ. ರವೀಂದ್ರ ಶೆಟ್ಟಿ ಒಡೆತನದ ಈ ಹೋಟೆಲ್ ಗ್ರಾಹಕರ ಮನಸ್ಸು ಗೆದ್ದು ಯಶಸ್ಸುಗಳಿಸಲಿ ಎಂದು ಹಾರೈಸಿದರು. ಡೈಜಿವರ್ಲ್ಡ್ ಮೀಡಿಯಾ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ವಾಲ್ಟರ್ ಡಿಸೋಜಾ ನಂದಳಿಕೆ ಶುಭಹಾರೈಸಿದರು. ವಿವಿಧ ಗಣ್ಯರು ಭಾಗವಹಿಸಿದ್ದರು. ಹೋಟೆಲ್ ನ ವಿಶೇಷತೆ: ಸೌತ್ ಇಂಡಿಯನ್ ಹಾಗೂ ನೌರ್ತ್ ಇಂಡಿಯನ್ ಶೈಲಿಯ ರುಚಿಕರ ಖಾದ್ಯಗಳು…

Read More

ಪುಣೆಯಲ್ಲಿನ ದೊಡ್ಡ ಸ್ಮಶಾನ. ಸಂಜೆ 3:00 ಗಂಟೆ. ರೋಹನ್ ಅಮೆರಿಕದ ಪ್ರಮುಖ ಸಾಫ್ಟ್‌ವೇರ್ ಕಂಪನಿಯ ಉಪಾಧ್ಯಕ್ಷ ತನ್ನ ವಿಮಾನದಿಂದ ಇಳಿದು ನೇರವಾಗಿ ಸ್ಮಶಾನಕ್ಕೆ ಬಂದಿದ್ದ. ಅವರ ತಂದೆ ಸದಾಶಿವ ಹಿಂದಿನ ದಿನ ರಾತ್ರಿ ಕೊನೆಯುಸಿರೆಳೆದಿದ್ದರು. ರೋಹನ್ ದುಬಾರಿ ಲ್ಯಾಪ್‌ಟಾಪ್ ಬ್ಯಾಗ್ ಹಿಡಿದುಕೊಂಡು ರೇ-ಬ್ಯಾನ್ ಸನ್‌ಗ್ಲಾಸ್ ಧರಿಸಿದ್ದ. ಅವನು ಬೆವರುತ್ತಿದ್ದ ಮತ್ತು ನಿರಂತರವಾಗಿ ತನ್ನ ಗಡಿಯಾರವನ್ನು ಪರಿಶೀಲಿಸುತ್ತಿದ್ದ. “ಮೋಕ್ಷ ಈವೆಂಟ್ ಮ್ಯಾನೇಜ್ಮೆಂಟ್” (ಅಂತ್ಯಕ್ರಿಯೆ ಸೇವಾ ಸಂಸ್ಥೆ) ನ ಸುಮಿತ್ ಅಲ್ಲಿ ನಿಂತಿದ್ದ. ಸುಮಿತ್ ಎಲ್ಲವನ್ನೂ ವ್ಯವಸ್ಥೆ ಮಾಡಿದ್ದ. ಉರುವಲುಗಳನ್ನು ಜೋಡಿಸಲಾಗಿತ್ತು, ಪುರೋಹಿತರನ್ನು ಕರೆಯಲಾಗಿತ್ತು ಮತ್ತು ಸದಾಶಿವ ಅವರ ದೇಹವನ್ನು ಸ್ನಾನ ಮಾಡಿಸಿ ಸಿದ್ಧಪಡಿಸಲಾಗಿತ್ತು. ರೋಹನ್ ತನ್ನ ತಂದೆಯ ಮುಖವನ್ನು ನೋಡಿದ. ಒಂದು ಹನಿ ಕಣ್ಣೀರು ಅಥವಾ ಎರಡು ಅವನ ಕಣ್ಣುಗಳಿಂದ ಉರುಳಿತು. ಅವನು ಸುಮಿತ್‌ಗೆ ಕೇಳಿದ “ಮಿಸ್ಟರ್ ಸುಮಿತ್, ಎಲ್ಲವೂ ಸಿದ್ಧವಾಗಿದೆ, ಸರಿ? ನನಗೆ ಸಂಜೆ 6 ಗಂಟೆಗೆ ಹಿಂದಿರುಗುವ ವಿಮಾನವಿದೆ. ನಾಳೆ ನನಗೆ ಪ್ರಮುಖ ಸಭೆ ಇದೆ. ಇದನ್ನು ಬೇಗ ಮುಗಿಸಿ”.…

Read More

ಮೊಳಹಳ್ಳಿ ದಿನೇಶ್ ಹೆಗ್ಡೆ ಅವರ ಜನ್ಮ ದಿನದ ಶುಭ ಸಂದರ್ಭದಲ್ಲಿ, ಬಿದ್ಕಲ್‌ಕಟ್ಟೆಯ ಮೊಳಹಳ್ಳಿ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ನ ಸಭಾಂಗಣದಲ್ಲಿ ‘ಬೃಹತ್ ರಕ್ತದಾನ ಶಿಬಿರ’ಕ್ಕೆ ಚಾಲನೆ ನೀಡಲಾಯಿತು. ​ಮೊಳಹಳ್ಳಿ ದಿನೇಶ್ ಹೆಗ್ಡೆ ಜಯರತ್ನ ಟ್ರಸ್ಟ್ (ರಿ.) ಮತ್ತು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ಇವರ ಸಹಯೋಗದೊಂದಿಗೆ ನಡೆದ ಈ ಕಾರ್ಯಕ್ರಮದಲ್ಲಿ ಹಿರಿಯ ಸ್ಥಳೀಯ ಮುಖಂಡರು ಹಾಗೂ ಅಭಿಮಾನಿಗಳು ಭಾಗವಹಿಸಿ, ರಕ್ತದಾನ ಮಾಡುವ ಮೂಲಕ ದಿನೇಶ್ ಹೆಗ್ಡೆಯವರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದರು. ಕಾರ್ಯಕ್ರಮದ ಕೊನೆಗೆ ರಕ್ತದಾನ ಮಾಡಿ ಜೀವ ಉಳಿಸುವ ಈ ಪುಣ್ಯ ಕಾರ್ಯದಲ್ಲಿ ಪಾಲ್ಗೊಂಡ ಎಲ್ಲಾ ರಕ್ತದಾನಿಗಳಿಗೆ ಮತ್ತು ಹಿತೈಷಿಗಳಿಗೆ ದಿನೇಶ್ ಹೆಗ್ಡೆಯವರು ಧನ್ಯವಾದಗಳನ್ನು ಅರ್ಪಿಸಿದರು.

Read More