Author: admin
ಕುಂದಾಪುರದ ಎಸ್.ಎಸ್. ಶೆಟ್ಟಿ ಸಮೂಹ ಸಂಸ್ಥೆಗಳ ಅಂಗ ಸಂಸ್ಥೆಯಾದ ಶ್ರೀ ಸನ್ನಿಧಿ ಟ್ರಾವೆಲ್ಸ್ ಬಸ್ಸುಗಳು ಮಾರ್ಚ್ 2 ರಂದು ಆರಂಭಗೊಂಡಿದೆ. ಉದ್ಯಮಿ ಸತೀಶ್ ಶೆಟ್ಟಿ ಹಾಗೂ ಸನ್ನಿಧಿ ಎಸ್. ಶೆಟ್ಟಿ ಮಾಲಕತ್ವದ ಶ್ರೀ ಸನ್ನಿಧಿ ಟ್ರಾವೆಲ್ಸ್ ನ ಬಸ್ಸುಗಳು ಕುಂದಾಪುರ, ಬೈಂದೂರು, ಕೊಕ್ಕರ್ಣೆ, ಕೊಲ್ಲೂರಿನಿಂದ ಬೆಂಗಳೂರಿಗೆ ಮಾರ್ಚ್ 2 ರಿಂದ ಪ್ರಯಾಣ ಆರಂಭಿಸಿದ್ದು, ವೆಬ್ಸೈಟ್, ರೆಡ್ಬಸ್, ಅಬಿಬಸ್, ಟ್ರಾವೆಲ್ಯಾರಿ, ಪೇಟಿಎಂ, ಫ್ಲಿಪ್ಕಾರ್ಟ್ ಮೂಲಕ ಮುಂಗಡ ಟಿಕೆಟ್ ಕಾದಿರಿಸಬಹುದು. ಸನ್ನಿಧಿ ಟ್ರಾವೆಲ್ಸ್ ಆಪ್ ಮೂಲಕ ಟಿಕೆಟ್ ಮಾಡಿದರೆ ಶೇ.15, ಸನ್ನಿಧಿ ಟ್ರಾವೆಲ್ಸ್ ವೆಬ್ಸೈಟ್ ಮೂಲಕ ಮುಂಗಡ ಟಿಕೆಟ್ ಕಾದಿರಿಸಿದರೆ ಶೇ.10 ರಿಯಾಯಿತಿ ಪಡೆಯಬಹುದು.ವಾರಾಂತ್ಯ, ಹಬ್ಬ ಹರಿ ದಿನಗಳಲ್ಲಿ ಕೂಡಾ ಪ್ರಯಾಣ ದರದಲ್ಲಿ ಏರಿಕೆ ಇರುವುದಿಲ್ಲ. ಬಸ್ಗಳು ಶಿವಮೊಗ್ಗ, ಧರ್ಮಸ್ಥಳ, ಮಂಗಳೂರು ಮಾರ್ಗದಲ್ಲಿ ಸಂಚರಿಸಲಿವೆ. ಸ್ಲೀಪರ್ ಕೋಚ್ ರಾಜ್ಯದಲ್ಲೇ ಪ್ರಥಮ ಬಾರಿಗೆ ಅತ್ಯಧುನಿಕ ಸೌಲಭ್ಯಗಳೊಂದಿಗೆ ವಿಶೇಷವಾಗಿ ವಿನ್ಯಾಸಪಡಿಸಿ ಮೂತ್ರಾಲಯದೊಂದಿಗೆ ಶೌಚಾಲಯವನ್ನೂ ಒಳಗೊಂಡಿರುವುದು ಈ ಬಸ್ಗಳ ವಿಶೇಷವಾಗಿದೆ. ಪ್ರಯಾಣಿಕರ ಸುರಕ್ಷತೆಗೆ ಗರಿಷ್ಟ ಆದ್ಯತೆ ನೀಡಲಾಗಿದ್ದು, ೨೪…
ಸುಮಾರು 65 ಕೋಟಿ ರೂಪಾಯಿ ವೆಚ್ಚದಲ್ಲಿ ಇಳಕಲ್ ಕೆಂಪು ಶಿಲೆಯ ಗರ್ಭಗುಡಿ ಸಹಿತ ಸಂಪೂರ್ಣ ಪುನರ್ ನಿರ್ಮಾಣಗೊಂಡಿರುವ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಭಾನುವಾರ ಶ್ರೀ ಉಚ್ಚಂಗಿ ಹಾಗೂ ಸ್ವರ್ಣ ಗದ್ದುಗೆಯಲ್ಲಿ ಕಾಪು ಶ್ರೀ ಮಾರಿಯಮ್ಮನ ಪುನರ್ ಪ್ರತಿಷ್ಠೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನೆರವೇರಿತು. ರತ್ನ ಖಚಿತ ಸ್ವರ್ಣ ಗದ್ದುಗೆಯಲ್ಲಿ ಕಾಪು ಶ್ರೀ ಮಾರಿಯಮ್ಮ ವಿರಾಜ ಮಾನಳಾಗುವುದರೊಂದಿಗೆ ಕಾಪು ಮಾರಿಯಮ್ಮನ ಕ್ಷೇತ್ರದಲ್ಲಿ ಸ್ವರ್ಣ ಯುಗ ಆರಂಭಗೊಂಡಿತು. ಕೊರಂಗ್ರಪಾಡಿ ವೇದಮೂರ್ತಿ ಕೆ.ಜಿ. ರಾಘವೇಂದ್ರ ತಂತ್ರಿ ಮಾರ್ಗದರ್ಶನದಲ್ಲಿ ಪ್ರಧಾನ ತಂತ್ರಿಗಳಾದ ಜ್ಯೋತಿಷ್ಯ ವಿದ್ವಾನ್ ಕೆ.ಪಿ. ಕುಮಾರಗುರು ತಂತ್ರಿ ನೇತೃತ್ವದಲ್ಲಿ ದೇವಳದ ಪ್ರಧಾನ ಆರ್ಚಕ ವೇದಮೂರ್ತಿ ಕಲ್ಯ ಶ್ರೀನಿವಾಸ ತಂತ್ರಿ ಹಾಗೂ ವೈದಿಕ ವೃಂದದವರು ಬೆಳಗ್ಗೆ 11.05ರ ವೃಷಭ ಲಗ್ನ ಸುಮೂಹೂರ್ತದಲ್ಲಿ ಭಕ್ತಾದಿಗಳ ಸ್ವರ್ಣ ಕಾಣಿಕೆಯ ಮೂಲಕ ನಿರ್ಮಾಣಗೊಂಡಿರುವ ಸುಮಾರು 15 ಕೋಟಿ ರೂ. ವೆಚ್ಚದ ರತ್ನ ಖಚಿತ ಸ್ವರ್ಣಗದ್ದಿಗೆ (ಮಹಾಸ್ವರ್ಣಪೀಠ)ಯಲ್ಲಿ ಶ್ರೀ ಮಾರಿಯಮ್ಮನನ್ನು ಪುನರ್ ಸ್ಥಾಪಿಸಲಾಯಿತು.ಇದಕ್ಕೂ ಮೊದಲು ಬಾಲಾಲಯ ತೆರವುಗೊಳಿಸಿ ಉಚ್ಚಂಗಿ ಸಹಿತ…
ಆರೋಗ್ಯ ಕಾಳಜಿ ಹಾಗೂ ರಕ್ಷಣೆಯ ಧ್ಯೇಯದೊಂದಿಗೆ ನಮ್ಮ ಕ್ಲಿನಿಕ್ ತೆರೆಯಲಾಗುತ್ತಿದ್ದು, ಗ್ರಾಮಸ್ಥರು ಹಾಗೂ ಅರ್ಹರು ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಹೇಳಿದರು. ಭಾನುವಾರ ಉಪ್ಪುಂದ ಗ್ರಾಮದ ತಾರಪತಿ ಹಾಗೂ ತಗ್ಗರ್ಸೆಯ ವಸ್ರೆಯಲ್ಲಿ ನಮ್ಮ ಕ್ಲಿನಿಕ್ ಉದ್ಘಾಟಿಸಿ ಮಾತನಾಡಿದರು. ಸಮೃದ್ಧ ಜನಸೇವಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಬಿ. ಎಸ್. ಸುರೇಶ್ ಶೆಟ್ಟಿ ಮಾತನಾಡಿ, ಇಂದು ಅನೇಕ ಸೌಲಭ್ಯಗಳು ನಮ್ಮ ಬಳಿಗೆ ಬರುತ್ತಿದೆ. ಅದರ ಸದುಪಯೋಗ ಮಾಡಿಕೊಳ್ಳಬೇಕು. ವ್ಯವಸ್ಥೆಯನ್ನು ಒದಗಿಸುವುದು ಎಷ್ಟು ಮುಖ್ಯವೋ ಅದನ್ನು ಅಷ್ಟೇ ಚೆನ್ನಾಗಿ ಬಳಸಿಕೊಳ್ಳುವುದು ಅವಶ್ಯಕ ಎಂದರು. ನಮ್ಮ ಕ್ಲಿನಿಕ್ ನಲ್ಲಿ ಸಮಗ್ರ ಪ್ರಾಥಮಿಕ ಆರೋಗ್ಯ ಸೇವೆಗಳ 12 ಪ್ಯಾಕೇಜ್ ಗಳು ಲಭ್ಯವಿರಲಿದೆ. ಗರ್ಭಿಣಿ ಮತ್ತು ಜನನ ಸಮಯದ ಆರೈಕೆ, ನವಜಾತ ಮತ್ತು ಶಿಶುವಿನ ಸಮಗ್ರ ಆರೋಗ್ಯ ಆರೈಕೆ, ಬಾಲ್ಯ ಮತ್ತು ಹದಿ ಹರೆಯದವರ ಸಮಗ್ರ ಆರೋಗ್ಯ ಸೇವೆಗಳು, ಸಾರ್ವತ್ರಿಕ ಲಸಿಕೆಗಳು, ಕುಟುಂಬ ಕಲ್ಯಾಣ, ಗರ್ಭನಿರೋಧಕ ಸೇವೆಗಳು ಮತ್ತು ಇತರ ಸಂತಾನೋತ್ಪತ್ತಿ ಆರೋಗ್ಯ ಸೇವೆಗಳು,…
ಮೂಡುಬಿದಿರೆ: 2024 ಡಿಸೆಂಬರ್ ನಲ್ಲಿ ನಡೆದ ಸಿ.ಎಸ್. ಎಕ್ಸಿಕ್ಯೂಟಿವ್ ಪರೀಕ್ಷೆಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಬಿ.ಕಾಂ. ವಿದ್ಯಾರ್ಥಿಗಳಾದ ಅನನ್ಯ ಕೆ.ಎ.(258), ಬಿ ಸುಹಾಸ್ ರಾವ್ (230), ವಂದನಾ ಎಸ್.ಸಿ.(213), ನಿತ್ಯಾ ಸಂಜೀವ ಕುಲಕರ್ಣಿ (204), ನಿಶಿತಾ ಸಿ ಶೆಟ್ಟಿ (203) ಮತ್ತು ತಸ್ಮಯ್ ಎಮ್ (201) ಸಿ.ಎಸ್. ಎಕ್ಸಿಕ್ಯೂಟಿವ್ ಮೊಡ್ಯುಲ್ 1 ರಲ್ಲಿ ಮೊದಲ ಪ್ರಯತ್ನದಲ್ಲಿ ಉತ್ತಮ ಫಲಿತಾಂಶದೊAದಿಗೆ ಉತ್ತೀರ್ಣರಾಗಿದ್ದಾರೆ. ಜೊತೆಯಲ್ಲಿ ಧನ್ವಿ ಹೆಚ್ ಪೈ (150) ಸಿ.ಎಸ್. ಎಕ್ಸಿಕ್ಯೂಟಿವ್ ಮೊಡ್ಯುಲ್ 2 ರಲ್ಲಿ ಉತ್ತಮ ಫಲಿತಾಂಶದೊಂದಿಗೆ ಉತ್ತೀರ್ಣರಾಗಿರುತ್ತಾರೆ. ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳಿಗೂ ಸಂಸ್ಥೆಯ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಮತ್ತು ಪ್ರಾಂಶುಪಾಲ ಡಾ.ಕುರಿಯನ್ ಹಾಗೂ ಸಿ.ಎಸ್. ಸಂಯೋಜಕರು ಅಭಿನಂದಿಸಿದ್ದಾರೆ.
ಮೂಡುಬಿದಿರೆ: ಆಳ್ವಾಸ್ ಫಿಸಿಯೋಥೆರಪಿ ಕಾಲೇಜು ಹಾಗೂ ಸಂಶೋಧನಾ ಕೇಂದ್ರದ ವತಿಯಿಂದ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ಫಿಸಿಯೋ ಕನೆಕ್ಟ್ – 2025 ವಿದ್ಯಾಗಿರಿಯ ವಿ. ಎಸ್ ಆಚಾರ್ಯ ಸಭಾಂಗಣದಲ್ಲಿ ಶನಿವಾರ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತೇಜಸ್ವಿನಿ ಆಸ್ಪತ್ರೆಯ ಆರ್ಥೋಸ್ಕೊಪಿ ಹಾಗೂ ಸ್ಪೋರ್ಟ್ಸ್ ಮೆಡಿಸಿನ್ ವಿಭಾಗದ ಮುಖ್ಯಸ್ಥ ಡಾ. ಸುಮಂತ್ ನಾಯಕ್, ಶಸ್ತçಚಿಕಿತ್ಸೆಯು ಆರೋಗ್ಯದ ಸಮಸ್ಯೆಗೆ ಪರಿಹಾರ ನೀಡಬಲ್ಲದು ಆದರೆ ನಿಜವಾದ ಸವಾಲು ರೋಗಿಯ ಚೇತರಿಕೆಯಲ್ಲಿ ಕಂಡುಬರುತ್ತದೆ. ಫಿಸಿಯೋತೆರಪಿಸ್ಟ್ಗಳು ಅಂತಹ ಸವಾಲುಗಳನ್ನು ಬಗೆಹರಿಸುವಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದರು. ಅದ್ಯಕ್ಷತೆ ವಹಿಸಿದ್ದ ಆಳ್ವಾಸ್ ಹೆಲ್ತ್ ಸೆಂಟರ್ನ ಪ್ರಸೂತಿ ತಜ್ಞೆ ಡಾ. ಹನಾ ಶೆಟ್ಟಿ ಮಾತನಾಡಿ, ಕಲಿಯುವಿಕೆಯು ಒಂದು ನಿರಂತರ ಪ್ರಕ್ರಿಯೆ.ಈ ವಿಚಾರ ಸಂಕಿರಣದ ಮೂಲಕ ಪ್ರತಿಯೊಬ್ಬರು ಸವಾಲನ್ನು ಅರಿಯುವ ಜೊತೆಗೆ, ಹೊಸ ವಿಷಯಗಳನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಿ. ಜ್ಞಾನದ ವಿನಿಮಯವಾಗುವುದು ಅಗತ್ಯ ಎಂದರು. ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ನ ಪ್ರಾಧ್ಯಪಕ ಡಾ. ಪ್ರಭು ರಾಜ ಗಾಯಗಳ ಚೇತರಿಕೆಯಲ್ಲಿ…
ಮೂರು ಬೆಳೆ ಬೆಳೆಯುತ್ತಿದ್ದ ಸಮೃದ್ಧ ಗದ್ದೆ ಸಾಲು ಕಟ್ಟಪುಣಿಯಲ್ಲಿ ರಾರಾಜಿಸುತ್ತಿದ್ದ ತೆಂಗು ಕಂಗು ಪಚ್ಚೆಪೈರು ಪಲ್ಗುಣಿಯ ಅಮೃತ ಧಾರೆಯನ್ನು ಎಲ್ಲೆಮೂಲೆಗಳಿಗೆ ಹೊತ್ತು ಹರಿಸುವ ನೀರ ತೊರೆಗಳು ಬಗೆ ಬಗೆಯ ಜೀವ ವೈವಿಧ್ಯ. ಆ ಸ್ವರ್ಗ ಸದೃಶ ಪ್ರಕೃತಿಯ ನಡುವೆ ಸಿಂಹ ಗಾಂಭಿರ್ಯದಿಂದ ಕಂಗೊಳಿಸುತ್ತಿದ್ದ ನೆಲ್ಲಿದಡಿ ಗುತ್ತು. ಆ ಭೂಮಿಯ ಬುಲೆಸೆಲೆ, ಐಸಿರಿ, ಭೂಮಿ ಬಾರಗರ ಸತ್ಯ ಧರ್ಮ ನ್ಯಾಯ ಪರಿಪಾಲನೆ ಕಂಡು ಪಾರಲೆ ಗುತ್ತಿನ ದೈವ ಕಾಂತೇರಿ ಜುಮಾದಿ ಒಂದು ಕೋಣ ಕಟ್ಟುವ ಹಗ್ಗದ ನೆಪ ಹೇಳಿಕೊಂಡು ನೆಲ್ಲಿದಡಿ ಗುತ್ತಿನ ಚಾವಡಿಗೆ ಕಾಲಿಟ್ಟ. ಮುಂದೆ ನೆಲ್ಲಿದಡಿ ಗುತ್ತು ವೈಭವದ ಶಿಖರ ಚುಂಭಿಸಿತು. ಆ ಕಾಲಕ್ಕೆ ಸರ್ಪದ ವಿಷಕ್ಕೆ ಮದ್ದು ಕೊಟ್ಟು ವಿಷ ವೈದ್ಯರಾಗಿ ಪ್ರಖ್ಯಾತಿ ಪಡೆದಿದ್ದ ಸೂರಿಂಜೆ ಗುತ್ತಿನ ತ್ಯಾಂಪ ಶೆಟ್ಯಾಲ್ ತನ್ನ ಅಂತ್ಯಕಾಲದಲ್ಲಿ ಸಮಷ್ಟಿಯ ಹಿತಕ್ಕಾಗಿ ಒಂದು ಮಹತ್ ಕಾರ್ಯ ನಡೆಸಿದರು. ಅವರ ಬಳಿ ಸಾವಿರಾರು ಜನರ ಜೀವ ಉಳಿಸಿದ ವಿಷ ಹೀರುವ ಕಲ್ಲುಗಳಿದ್ದವು. ಅದರಲ್ಲಿ ಒಂದನ್ನು ಶಿಬರೂರು ಕೊಡಮಣಿತ್ತಾಯ…
ಬೇರೆಯವರ ಜೊತೆಗೆ ಯಾವ ಕಾರಣವಿಲ್ಲದೆ ಸುಮ್ಮನೆ, ಸ್ಪರ್ಧಿಸುತ್ತ, ಜಗಳವಾಡುತ್ತಾ, ಹೊಟ್ಟೆ ಕಿಚ್ಚು, ಅಸೂಯೆ ಪಡುತ್ತಾ ನಮ್ಮ ಜೀವನವನ್ನೂ, ನರಕ ಮಾಡಿಕೊಂಡು, ಇನ್ನೊಬ್ಬರ ಜೀವನವನ್ನೂ ನರಕ ಮಾಡುವುದರ ಬದಲು ಸಮಾಧಾನದಿಂದ, ತಿಳುವಳಿಕೆಯಿಂದ, ಹೊಂದಿಕೊಂಡು ಸಹಬಾಳ್ವೆಯ ಜೀವನ ನಡೆಸಿದರೆ ಎಲ್ಲರ ಜೀವನ ಸುಗಮವಾಗಿ ನಡೆಯುತ್ತದೆ. ಇಬ್ಬರು ವ್ಯಾಪಾರಿಗಳ ನಡುವೆ ಯಾವಾಗಲೂ ಪೈಪೋಟಿ ನಡೆಯುತ್ತಿತ್ತು. ಒಬ್ಬನಿಗೆ ವ್ಯಾಪಾರ ಚೆನ್ನಾಗಿ ಆದರೆ, ಇನ್ನೊಬ್ಬನಿಗೆ ಹೊಟ್ಟೆ ಉರಿ. ಇಬ್ಬರೂ ಒಬ್ಬರನ್ನೊಬ್ಬರು ಕೆಳಕ್ಕೆ ಹಾಕಲು ಸದಾ ಪ್ರಯತ್ನಿಸುತ್ತಿದ್ದರು. ಇದು ಅವರಿಬ್ಬರಲ್ಲಿ ದ್ವೇಷಕ್ಕೆ ಎಡೆ ಮಾಡಿ, ತಮ್ಮ ವ್ಯಾಪಾರವನ್ನು ಅಭಿವೃದ್ಧಿ ಪಡಿಸುವುದರ ಬದಲು ಒಬ್ಬರ ಕಾಲೆಳೆಯಲು ಇನ್ನೊಬ್ಬರು ಸದಾ ಕಾಯುತ್ತಿದ್ದರು. ಒಂದು ಸಲ ಒಬ್ಬ ವ್ಯಾಪಾರಿ, ತನ್ನ ಸ್ನೇಹಿತರೊಂದಿಗೆ, ಮತ್ತೊಂದು ಊರಿಗೆ ಹೊರಟಿದ್ದ. ಊರು ಸೇರುವ ಮೊದಲು ಅವರು ಒಂದು ದಟ್ಟವಾದ ಕಾಡನ್ನು ಹಾದು ಹೋಗಬೇಕಿತ್ತು. ಹೊರಡುವಾಗಲೇ ಸ್ವಲ್ಪ ತಡವಾದದ್ದರಿಂದ, ಕಾಡು ದಾಟುವಾಗ ಕತ್ತಲಾಗ ತೊಡಗಿತು. ಎಲ್ಲರಿಗೂ ಕಾಡು ಪ್ರಾಣಿಗಳ ಭಯವಿದ್ದಿದ್ದರಿಂದ ಬಹಳ ಹುಷಾರಾಗಿ ನಡೆಯುತ್ತಿದ್ದರು. ಇದ್ದಕ್ಕಿದ್ದಂತೆ ಭೀಕರವಾದ ಸಿಂಹದ ಘರ್ಜನೆ…
ಬಾಂಬೆ ಬಂಟ್ಸ್ ಅಸೋಸಿಯೇಷನ್ ಇದರ ಉನ್ನತ ಶಿಕ್ಷಣ ಸಂಸ್ಥೆಯ ವಾರ್ಷಿಕೋತ್ಸವ, ಬಂಟ್ಸ್ ತರಂಗ ದಿ ಯೂತ್ ವೇವ್ ಭಾರತ್ ಕಾ ಸಫರ್ ಹಾಗೂ ಪದವಿ ಪ್ರದಾನ ಸಮಾರಂಭ ಫೆ. 26ರಂದು ಅಪರಾಹ್ನ ಜೂಯಿ ನಗರದ ಬಂಟ್ಸ್ ಸೆಂಟರ್ ನ ಶಶಿಕಲಾ ಮನಮೋಹನ್ ಶೆಟ್ಟಿ ಕಾಂಪ್ಲೆಕ್ಸ್ ನ ಶ್ರೀಮತಿ ಸೌಮ್ಯಲತಾ ಸದಾನಂದ ಶೆಟ್ಟಿ ಆಡಿಟೋರಿಯಂನಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ನಡೆಯಿತು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬಾಂಬೆ ಬಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ಸಿಎ ಸುರೇಂದ್ರ ಕೆ. ಶೆಟ್ಟಿ ಮಾತನಾಡಿ, ಅಸೋಸಿಯೇಷನ್ ನ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳ ಸಂಸ್ಕೃತಿ, ಸಂಸ್ಕಾರವನ್ನು ಬಿಂಬಿಸುವ ಕಾರ್ಯಕ್ರಮಗಳನ್ನು ಕಂಡಾಗ ಸಂತೋಷವಾಗುತ್ತಿದೆ. ಶಿಕ್ಷಣ ಸಂಸ್ಥೆ ಮೂಲಕ ಅಸೋಸಿಯೇಷನ್ ಕೀರ್ತಿ ಬಹಳಷ್ಟು ಎತ್ತರಕ್ಕೆ ಬೆಳೆದಿದೆ. ಇಲ್ಲಿಯ ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಮಾಡಿ, ಉತ್ತಮ ಅಂಕ ಪಡೆಯುತ್ತಿದ್ದಾರೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸ ಪೂರ್ತಿಗೊಳಿಸಿದ ಬಳಿಕವೂ ನಮ್ಮ ಸಂಸ್ಥೆ ಜತೆ ಸಂಬಂಧ ಉಳಿಸಿ ಬೆಳೆಸಿಕೊಳ್ಳಬೇಕು. ಶಿಕ್ಷಣ ಸಮಿತಿ ಪದಾಧಿಕಾರಿಗಳು, ಸದಸ್ಯರ ಸಹಕಾರದೊಂದಿಗೆ ಶಿಕ್ಷಕ ವೃಂದದವರು, ಶಿಕ್ಷಕೇತರ ಸಿಬ್ಬಂದಿ…
ಮೂಡುಬಿದಿರೆ: ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯದ ಎಂಬಿಎ ವಿಭಾಗದ ವತಿಯಿಂದ ಕೇಂದ್ರ ಬಜೆಟ್ 2025ರ ಕುರಿತ ಚರ್ಚಾಗೋಷ್ಠಿ ವಿದ್ಯಾಗಿರಿಯ ವಿ. ಎಸ್. ಆಚಾರ್ಯ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ (ಎಸ್ಕೆಡಿಆರ್ಡಿಪಿ) ಮಾಜಿ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್ ಎಚ್ ಮಂಜುನಾಥ್, ಕೇಂದ್ರದ ಈ ಭಾರಿಯ ಬಜೆಟ್ ಹಲವು ಕ್ಷೇತ್ರಗಳ ಬೆಳವಣಿಗೆಗೆ ಸಹಕಾರಿಯಾಗಿದೆ. ಆದರೆ ಭಾರತ, 2047ರ ವೇಳೆಗೆ ವಿಕಸಿತ ಭಾರತವಾಗಿ ಬದಲಾಗಿ ಜಾಗತಿಕ ನಾಯಕನಾಗಲು ಜಿಡಿಪಿ ಬೆಳವಣಿಗೆ ದರ 6.7% ದಿಂದ 7% ರಷ್ಟು ಸಾಲುವುದಿಲ್ಲ. ಈ ದೃಷ್ಟಿಯನ್ನು ಸಾಧಿಸಬೇಕಾದರೆ, 12% ದಿಂದ 14% ವರೆಗಿನ ಜಿಡಿಪಿ ಬೆಳವಣಿಗೆ ಅಗತ್ಯ, ಇದು ಪ್ರಸ್ತುತ ಬಜೆಟ್ ನಿಂದ ಸಾಧ್ಯವಿಲ್ಲ ಎಂದರು. ಅಧಿಕಾರಶಾಹಿತ್ವವು ಪ್ರಜಾಪ್ರಭುತ್ವ ವ್ಯವಸ್ಥೆಯ ಬೆನ್ನೆಲುಬಾಗಿದ್ದು ವಿವಿಧ ಕ್ಷೇತ್ರಗಳಾದ್ಯಂತ ಏಕರೂಪದ ಬೆಳವಣಿಗೆಗೆ ಇದು ಪ್ರಮುಖ ಕೊಂಡಿಯಾಗಿದೆ ಎಂದರು. ಶಿಕ್ಷಣ ಮತ್ತು ಆರೋಗ್ಯದ ಮೇಲೆ ಸರ್ಕಾರದ ಗಮನಾರ್ಹ ವ್ಯಯದ ಹೊರತಾಗಿಯೂ, ಅಧಿಕಾರಶಾಹಿ ವ್ಯವಸ್ಥೆಯಲ್ಲಿನ ಅಸಮರ್ಥತೆಯಿಂದಾಗಿ ಪ್ರಯೋಜನಗಳು…
ಭಾರತದ ಆರ್ಥಿಕ ರಾಜಧಾನಿ ಬೃಹನ್ಮುಂಬಯಿಯ ತುಳು ಕನ್ನಡಿಗರಲ್ಲಿನ ಪ್ರತಿಷ್ಠಿತ ಹಣಕಾಸು ಸಲಹೆಗಾರರೆಂದೇ ಹೆಸರಾದ ಕರುನಾಡ ಕುವರ, ಅಂತರಾಷ್ಟ್ರೀಯ ಪ್ರಸಿದ್ಧಿಯ ಆರ್ಥಿಕ ತಜ್ಞ, ಪ್ರಸಿದ್ಧ ಜೀವ ವಿಮಾ ಸಲಹೆಗಾರ. ಮುಂಬಯಿಯಲ್ಲಿನ ಇಸ್ಸಾರ್ ಫೈನಾನ್ಸಿಯಲ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ಮತ್ತು ಆರ್. ಕೆ ಶೆಟ್ಟಿ ಆಂಡ್ ಕಂಪನಿ ಇದರ ಆಡಳಿತ ನಿರ್ದೇಶಕ ಡಾ| ಆರ್ ಕೆ ಶೆಟ್ಟಿ ಅವರು 2025ರ ಆಗಸ್ಟ್ 24-27ರ ತನಕ ಚೀನಾದ ಮಕಾವು ಇಲ್ಲಿ ನಡೆಯಲಿರುವ ಮಿಲಿಯನ್ ಡಾಲರ್ ರೌಂಡ್ ಟೇಬಲ್ (ಎಂಡಿಆರ್ ಟಿ) ಜಾಗತಿಕ ಸಮ್ಮೇಳನದಲ್ಲಿ (ಗ್ಲೋಬಲ್ ಕಾನ್ಫರೆನ್ಸ್) ಪ್ರಧಾನ ಭಾಷಣಕಾರರಾಗಿ (ಫೋಕಸ್ ಸೆಷನ್ ಸ್ಪೀಕರ್) ಆಯ್ಕೆಯಾಗಿದ್ದಾರೆ. ಸುಮಾರು ಶತಮಾನದ ಇತಿಹಾಸದಲ್ಲೇ ಎಂಡಿಆರ್ಟಿ ವಿಭಾಗೀಯ ಉಪಾಧ್ಯಕ್ಷ ಆಗಿ ಆಯ್ಕೆಯಾದ ಮೊದಲ ಭಾರತೀಯ ಡಾ| ಆರ್. ಕೆ. ಶೆಟ್ಟಿ ಇವರು ಔದ್ಯೋಗಿಕ ಮತ್ತು ಸಮಾಜ ಸೇವೆಯ ವಿವಿಧ ಸ್ತರಗಳಲ್ಲಿ ವಿವಿಧ ಸಾಧನೆಗಳೊಂದಿಗೆ ಆರ್ಥಿಕ ಕ್ಷೇತ್ರದ ಶಿಖರವೇರಿ ನಿಂತಿರುವ ರಾಷ್ಟ್ರಕಂಡ ಅಗ್ರಗಣ್ಯ ಆರ್ಥಿಕ ತಜ್ಞರಾಗಿದ್ದಾರೆ.ಜಗತ್ತಿನ ಅತೀ ಶ್ರೇಷ್ಠರಲ್ಲಿ ಶ್ರೇಷ್ಠ ವಿತ್ತೀಯ ಸಲಹೆಗಾರ…