Author: admin
ಕಾರ್ಕಳ : ದಿನಾಂಕ 11.01.2025ರಂದು ಇನ್ಸ್ಟಿಟ್ಯೂಟ್ ಆಫ್ ಕಂಪೆನಿ ಸೆಕ್ರೇಟರೀಸ್ ಇನ್ ಇಂಡಿಯಾ ಅವರು ನಡೆಸಿದ ಸಿ.ಎಸ್.ಇ.ಇ.ಟಿ (ಕಂಪೆನಿ ಸೆಕ್ರೇಟರಿ ಎಕ್ಸಿಕ್ಯೂಟಿವ್ ಎಂಟ್ರೆನ್ಸ್ ಟೆಸ್ಟ್) ನಲ್ಲಿ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ 32 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅದರಲ್ಲಿ 28 ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದಿರುತ್ತಾರೆ. ಸಂಸ್ಥೆಯ ಕು.ರಕ್ಷಾ ರಾಮಚಂದ್ರ ಅವರು 200ರಲ್ಲಿ 163 ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಯಾಗಿರುತ್ತಾರೆ. ಜೊತೆಗೆ ಖತಿಜಾತುಲ್ ರಾಫಿಯಾ, ಹೃಷಿಕೇಶ್ ಸತೀಶ್ ಶೆಟ್ಟಿ, ಮ್ಯಾಕ್ಲಿನ್ ಜಾಕ್ ಡಿ’ಮೆಲ್ಲೊ, ಶ್ರೀಧಾ ಶೆಟ್ಟಿ, ರಕ್ಷಿತಾ ಜನ್ನೆ, ಶೋಧನ್ ಕುಮಾರ್ ಶೆಟ್ಟಿ, ಶ್ರಜಿತ್ ಕುಲಾಲ್, ಶ್ರಾವಂತ್ ಕುಮಾರ್ ಶೆಟ್ಟಿ, ಪ್ರಥಮ್ ನಾಯಕ್, ರಕ್ಷಿತ್ ಆರ್, ಪ್ರಜನ್, ಅಜಯ್ ಡಿ. ನಾಯಕ್, ಆಯುಶ್ ಶೆಟ್ಟಿ, ನಮೀಶ್ ಎನ್ ಶೆಟ್ಟಿ, ವಿಘ್ನೇಶ್, ಕೆ.ಆಂಕಿತಾ ಪೈ, ಪ್ರೇರಣಾ ಸುನಿಲ್ ಕುಮಾರ್, ಸಮರ್ಥ್ ವಿಜಯ್ ದೇವಾಡಿಗ, ಅಪೇಕ್ಷಾ, ಹುದಾಹಮ್ರಾ, ಕಾವ್ಯ ಸೆಲ್ಲಾಮುತು(100), ರಾಜೇಂದ್ರ ಎನ್.ಮಲ್ಯಾ, ಶುಧಿನ್ ಶೆಟ್ಟಿ, ಸುಭೀತ್, ಸುವೀಕ್ಷಾ,…
ಮಡ್ಗಾವ್ ರೈಲ್ವೇ ಸ್ಟೇಷನ್ ಸಮೀಪ ಲಕ್ಷ್ಮೀ ಎಂಪಾಯರ್ ಹೊಟೇಲ್ ಸಭಾಂಗಣದಲ್ಲಿ ಜನವರಿ 19 ರಂದು ದಿನ ಪೂರ್ತಿ ನಡೆಯಲಿರುವ ಗೋವಾ ಬಂಟರ ಸಂಘದ ರಜತ ಮಹೋತ್ಸವದ ವಿವಿಧ ಕಾರ್ಯಕ್ರಮಗಳು ಸಂಘದ ಅಧ್ಯಕ್ಷರಾದ ಕಾವಡಿ ಸದಾಶಿವ ಶೆಟ್ಟಿಯವರ ಘನ ಅಧ್ಯಕ್ಷತೆಯಲ್ಲಿ ಜರುಗಲಿದ್ದು, ಪರಿಸರದ ಸಮಾಜ ಬಾಂಧವರನ್ನು ಆತ್ಮೀಯವಾಗಿ ಆಮಂತ್ರಿಸಿದ್ದಾರೆ.ಜೆ.ಡಿ.ಎಸ್ ನ ರಾಜ್ಯ ಉಪಾಧ್ಯಕ್ಷರು, ಮೈಸೂರಿನ ಜ್ಞಾನಸರೋವರ ರೆಸಿಡೆನ್ಸಿಯಲ್ ಸ್ಕೂಲ್ ನ ಛೇರ್ಮನ್ ಸುಧಾಕರ ಶೆಟ್ಟಿಯವರು ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದು, ಯು.ಎ.ಇ ಬಂಟರ ಸಂಘದ ಅಧ್ಯಕ್ಷ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ ಅವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಡಾ| ಗಣನಾಥ ಶೆಟ್ಟಿ ಎಕ್ಕಾರ್ ಅವರು ಸಾಂದರ್ಭಿಕ ಭಾಷಣ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಿಐಡಿ ಖ್ಯಾತಿಯ ದಯಾನಂದ ಶೆಟ್ಟಿ, ಉದ್ಯಮಿ, ಕಲಾವಿದ ಹರೀಶ್ ವಾಸು ಶೆಟ್ಟಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಕೋಶಾಧಿಕಾರಿ ಉಳ್ತೂರು ಮೋಹನದಾಸ ಶೆಟ್ಟಿ, ಪತ್ರಕರ್ತ, ವಾಗ್ಮಿ ಶ್ರೀಕಾಂತ ಶೆಟ್ಟಿ ಕಾರ್ಕಳ ಮೊದಲಾದ ಗಣ್ಯರು ಉಪಸ್ಥಿತರಿದ್ದು ಸಭೆಯ ಶೋಭೆಯನ್ನು ಹೆಚ್ಚಿಸಲಿದ್ದಾರೆ.ಸಾಂಸ್ಕೃತಿಕ…
ಬೆಂಗಳೂರು ಬಂಟರ ಸಂಘದ ಅಧಿದೇವತೆ ಶ್ರೀ ವರಸಿದ್ಧಿ ವಿನಾಯಕ ಪ್ರಾರ್ಥನಾ ಮಂದಿರ ಜನವರಿ 19, 2000ರಲ್ಲಿ ಪ್ರತಿಷ್ಠಾಪನೆಗೊಂಡಿದ್ದು, ಇದೇ ಬರುವ 19, 2025 ರಂದು 25 ವರ್ಷವಾಗುತ್ತದೆ. ಇದರ ರಜತ ಮಹೋತ್ಸವವನ್ನು 19 ರಂದು ವಿಜೃಂಭಣೆಯಿಂದ ಆಚರಿಸಲು ತಯಾರಿ ನಡೆಯುತ್ತಿದೆ. ರಾಜ್ಯಗಳ ಪುನರ್ ವಿಂಗಡಣೆಯೊಂದಿಗೆ ಮೈಸೂರು ರಾಜ್ಯ 1956ರಲ್ಲಿ ಉದಯವಾಯಿತು. ಇದರೊಂದಿಗೆ ದಕ್ಷಿಣ ಕನ್ನಡ ಜಿಲ್ಲೆ, ಮದ್ರಾಸ್ ಹಾಗೂ ಹೈದರಾಬಾದ್ ನಿಂದ ಬೆಂಗಳೂರಿಗೆ ಹೆಚ್ಚು ಹೆಚ್ಚು ಜನರು ಬರುವಂತಾಯಿತು. ಇದರಲ್ಲಿ ಅಧಿಕಾರಿಗಳು, ನ್ಯಾಯವಾದಿಗಳು ಹಾಗೂ ವಿವಿಧ ಕೈಗಾರಿಕೆಗಳನ್ನು ಪ್ರಾರಂಭಿಸಲು ಬರುವವರು ಸೇರಿದ್ದರು. ಇಂತಹ ಜನರಿಗೆ ಸಹಾಯ, ಸಲಹೆ ನೀಡುವ ಸದುದ್ದೇಶದಿಂದ ಬಂಟರ ಸಂಘವನ್ನು ಪ್ರಾರಂಭಿಸಬೇಕೆಂದು ಇಲ್ಲಿ ಮೊದಲೇ ನೆಲೆಸಿದ್ದ ಡಾ. ಕೆ.ಕೆ. ಹೆಗ್ಡೆ, ಸಿ.ಎಲ್ ನಾಯಕ್, ಡಾ. ನಾಗಪ್ಪ ಆಳ್ವ ಮೊದಲಾದ ಮುಖಂಡರು ಬಂಟರ ಸಂಘವನ್ನು 1957- 58 ರಲ್ಲಿ 31 ಸದಸ್ಯರ ನೋಂದಾಣಿಯೊಂದಿಗೆ ಸಂಘ ಪ್ರಾರಂಭಿಸಿದರು. ಇದಾದ ನಂತರ ಸಂಘ ಬೆಳೆದು ಸದಸ್ಯರ ಸಂಖ್ಯೆ ಹೆಚ್ಚಾಗುತ್ತಾ, ಸಂಘಕ್ಕೆ ತನ್ನದೇ ಸ್ವಂತ…
ಆರ್ ಜೆ ಪ್ರೊಡಕ್ಷನ್ ನಿರ್ಮಾಣದ ರೋಶನ್ ಆರ್ ಆಳ್ವ ನಿರ್ದೇಶನದ ನೂತನ ತುಳು ಚಿತ್ರದ ಮುಹೂರ್ತ ಸಮಾರಂಭ ಐಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಜರಗಿತು. ಆರಂಭದಲ್ಲಿ ಸ್ಕ್ರಿಪ್ಟ್ ಪೂಜೆಯು ನೆರವೇರಿತು. ಆರ್ ಜೆ ಪ್ರೊಡಕ್ಷನ್ನ ರಮೇಶ್ ಆಳ್ವ ತಿಂಬರ ಮತ್ತು ಜಯಶ್ರೀ ಆರ್ ಆಳ್ವ ತಿಂಬರ ಕ್ಯಾಮೆರಾ ಚಾಲನೆಗೈದರು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಉದ್ಯಮಿಗಳಾದ ಸಂಜೀವ ಶೆಟ್ಟಿ ತಿಂಬರ ಮುಂಬಯಿ, ಐಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ನಾರಾಯಣ ಹೆಗ್ಡೆ, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.ಉದ್ಯಮಿ ಸೀತಾರಾಮ ಶೆಟ್ಟಿ ತಿಂಬರ, ನೀರಜ್ ಶೆಟ್ಟಿ, ಮಂಗಲ್ಪಾಡಿ ಪಂಚಾಯತ್ ನ ಮಾಜಿ ಸದಸ್ಯರಾದ ವಲ್ಸರಾಜ್, ಪಿಎನ್ ಆರ್ ಪ್ರೊಡಕ್ಷನ್ನ ರಾಘವೇಂದ್ರ ಹೊಳ್ಳ ತಿಂಬರ ಹಾಗೂ ಇತರರು ಉಪಸ್ಥಿತರಿದ್ದರು. ನಿರ್ದೇಶಕರಾದ ರೋಷನ್ ಆರ್ ಆಳ್ವ ತಿಂಬರ, ಛಾಯಾಗ್ರಾಹಕ ಅರುಣ್ ರೈ ಪುತ್ತೂರು, ನಾಯಕ ನಟ ನವೀನ್, ನಾಯಕಿ ಅಮೃತ ಹಾಗೂ ಇತರ ಕಲಾವಿದರು ಹಾಗೂ ತಂತ್ರಜ್ಞರು ಹಾಜರಿದ್ದರು. ಹರ್ಷರಾಜ್ ನಾವೂರು ಕಾರ್ಯಕ್ರಮವನ್ನು ನಿರೂಪಿಸಿದರು. ಚಿತ್ರದಲ್ಲಿ ದೀಪಕ್ ರೈ…
ಪುರಾಣದ ಕಥೆಯೊಂದು ಉಲ್ಲೇಖಿಸಲ್ಪಡುವಂತೆ ತ್ರಿಪುರಾಸುರನ ಬಾಧೆ ಹೆಚ್ಚಿದಾಗ ದೇವತೆಗಳು ಶಿವನ ಮೊರೆ ಹೋಗುತ್ತಾರೆ. ಸುರರ ಮೊರೆ ಆಲಿಸಿದ ಪರಮೇಶ್ವರ ದೈತ್ಯನೊಡನೆ ಸಮರ ಸಾರುತ್ತಾನೆ. ಪರಿಣಾಮ ಪ್ರತಿದಿನವೂ ಸಮರದಲ್ಲಿ ಶಿವ ಸೋಲುತ್ತಾನೆ. ಒಂದು ದಿನ ಶಿವ ಯುದ್ಧಕ್ಕೆ ಹೊರಟು ನಿಂತಾಗ ಗಣಪತಿ ಎದುರಾಗುತ್ತಾನೆ. ಮೊದಲೇ ಕೋಪಿಷ್ಠನಾದ ಶಿವ ಗಣಪತಿಯನ್ನು ಪಕ್ಕಕ್ಕೆ ತಳ್ಳುತ್ತಾನೆ. ಆಗ ಗಣಪತಿಯು ಜೇನು ತುಪ್ಪದ ಕೊಪ್ಪರಿಗೆಯಲ್ಲಿ ಬೀಳುತ್ತಾನೆ. ಮಧುಪಾನದಿಂದ ಸಂತೃಪ್ತನಾದ ಗಣಪತಿ ‘ಸರ್ವತ್ರ ವಿಜಯವಾಗಲಿ’ ಎಂದು ಹೇಳುತ್ತಾನೆ. ಪರಿಣಾಮವಾಗಿ ಆ ದಿನದ ಯುದ್ಧದಲ್ಲಿ ಶಿವನಿಗೆ ವಿಜಯವಾಗುತ್ತದೆ. ಸಂತೋಷಗೊಂಡ ಶಿವ ಗಣಪತಿಗೆ ಆದಿ ಪೂಜ್ಯನಾಗು, ಮಧುಪಾನದ ಉಷ್ಣತೆಯ ನಿವಾರಣೆಗಾಗಿ ಜಲಾಧಿವಾಸನಾಗು. ನಿನ್ನ ರಕ್ಷಣೆಗೆ ಪ್ರಮಥ ಗಣ ಸಹಿತನಾಗಿ ನಾನು ಬರುವೆ ಎಂದು ಅನುಗ್ರಹಿಸುತ್ತಾನೆ. ಶಿವಾನುಗ್ರಹವನ್ನು ಪಡೆದ ಗಣಪತಿ ಭೂಲೋಕದ ಈ ಕ್ಷೇತ್ರಕ್ಕೆ ಸಮೀಪವಿರುವ ಗುಡ್ಡಟ್ಟುವಿನಲ್ಲಿ ಆಯಿರ ಕೊಡ (ಸಹಸ್ರ ಕುಂಭಾಬೀಷೇಕ) ಎಂಬ ಸೇವೆಯೊಂದಿಗೆ ಜಲಾಧಿವಾಸನಾಗುತ್ತಾನೆ. ಹೀಗೆಯೇ ಅವಿಭಾವಗೊಂಡ ವಿನಾಯಕನ ರಕ್ಷಣೆಗೆ ಬಂದ ಪ್ರಮಥ ಗಣ ಸಹಿತನಾದ ಶಿವನ ಸಾನಿಧ್ಯವೇ ಸಪರಿವಾರ ಹಳ್ಳಾಡಿ-…
ಮುಂಬಯಿ ಕುರ್ಲಾ ಪೂರ್ವ ಬಂಟರ ಭವನದ ಎನೆಕ್ಸ್ ಕಿರು ಸಭಾಗೃಹದಲ್ಲಿ ಜನವರಿ 15 ರಂದು ಪ್ರಭಾಕರ ಬೆಳುವಾಯಿ ಸಾರಥ್ಯದ ನಮನ ಫ್ರೆಂಡ್ಸ್ ಮುಂಬಯಿ ಇದರ 20ನೇಯ ವಾರ್ಷಿಕೋತ್ಸವ “ನಮನೋತ್ಸವ -2025” ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರು ಬಿಡುಗಡೆಗೊಳಿಸಿದರು. ವಿಭಿನ್ನ ರೀತಿಯಲ್ಲಿ ಜರಗಲಿರುವ ನಮನೋತ್ಸವ ಕಾರ್ಯಕ್ರಮದಲ್ಲಿ ವೀರ ಯೋಧನಿಗೆ ವಿಶೇಷ ಸನ್ಮಾನ ಹಾಗೂ ವಿವಿಧ ಕ್ಷೇತ್ರದ ಸಾಧಕರುಗಳಿಗೆ ಸನ್ಮಾನ ಕಾರ್ಯಕ್ರಮವು ಜರಗಲಿದ್ದು, ಮಹಾರಾಷ್ಟ್ರ ಸರಕಾರದ ಉಪ ಮುಖ್ಯಮಂತ್ರಿಗಳಾದ ಏಕನಾಥ ಶಿಂದೆಯವರು ಭಾಗವಹಿಸುವ ನಿರೀಕ್ಷೆಯಿದೆ. ಈ ಕಾರ್ಯಕ್ರಮಕ್ಕೆ ತುಳು ಕನ್ನಡಿಗರೆಲ್ಲರ ಸಹಕಾರವಿರಲಿ ಹಾಗೂ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಲಿ ಎಂದು ಶುಭ ಹಾರೈಸಿದರು. ಈ ಸಂಧರ್ಭದಲ್ಲಿ ಬಂಟರ ಸಂಘದ ಅಧ್ಯಕ್ಷರಾದ ಪ್ರವೀಣ್ ಭೋಜ ಶೆಟ್ಟಿ, ಗೌ ಪ್ರಧಾನ ಕಾರ್ಯದರ್ಶಿ ಡಾ| ಆರ್ ಕೆ. ಶೆಟ್ಟಿ, ಜೊತೆ ಕೋಶಾಧಿಕಾರಿ ಶಶಿಧರ ಶೆಟ್ಟಿ ಇನ್ನಂಜೆ, ಬಂಟರ ಸಂಘ ಮುಂಬಯಿ ಇದರ ಸಮನ್ವಯಕರಾದ ರವೀಂದ್ರನಾಥ ಭಂಡಾರಿ, ಬಂಟರ ಸಂಘ ಮುಂಬಯಿ…
ಬೋಂಬೆ ಬಂಟ್ಸ್ ಅಸೋಸಿಯೇಷನ್ ಇದರ ಮಹಿಳಾ ವಿಭಾಗದ ವತಿಯಿಂದ ಜನವರಿ 18ರಂದು ಶನಿವಾರ ಮಧ್ಯಾಹ್ನ ಗಂಟೆ 2ಕ್ಕೆ ನವಿಮುಂಬಯಿ ಜೂಹಿನಗರದಲ್ಲಿರುವ ಬಂಟ್ಸ್ ಸೆಂಟರ್ ನ ಸೌಮ್ಯಲತಾ ಸದಾನಂದ ಶೆಟ್ಟಿ ಸಭಾಗೃಹದಲ್ಲಿ ‘ಹಳದಿ ಕುಂಕುಮ’ ಕಾರ್ಯಕ್ರಮ ನಡೆಯಲಿದೆ. ಅಸೋಸಿಯೇಷನ್ ಅಧ್ಯಕ್ಷ ಸಿಎ ಸುರೇಂದ್ರ ಕೆ. ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ತೇಜಾಕ್ಷಿ ಎಸ್. ಶೆಟ್ಟಿ ಅವರ ನೇತೃತ್ವದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬಂಟರ ಸಂಘದ ನವಿ ಮುಂಬಯಿ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಗೀತಾ ಎಸ್.ಶೆಟ್ಟಿ, ಸಮಾಜ ಸೇವಕಿ ನೀನಾ ಕುರ್ಕಾಲ್ ಮತ್ತು ಕನ್ನಡ ವೆಲ್ಫೇರ್ ಸೊಸೈಟಿ ಘಾಟ್ಕೋಪರ್ ಇದರ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಜಲಾ ಅಜಿತ್ ಶೆಟ್ಟಿ ಆಗಮಿಸಲಿದ್ದಾರೆ. ಮಧ್ಯಾಹ್ನ ಗಂಟೆ 2ರಿಂದ 2.30 ರವರೆಗೆ ಭಜನೆ, 2:30 ರಿಂದ ಶ್ರೀ ಮಹಾಲಕ್ಷ್ಮೀ ಬಂಟ ಮಹಿಳಾ ಯಕ್ಷಕಲಾ ಬಳಗ ಮುಂಬಯಿ ಇವರಿಂದ ಯಕ್ಷಗುರು ದೇವಲ್ಕುಂದ ಭಾಸ್ಕರ ಶೆಟ್ಟಿಯವರ ನಿರ್ದೇಶನದಲ್ಲಿ ‘ಸೀತಾಪಹರಣ’ ಎಂಬ ಯಕ್ಷಗಾನ ತಾಳಮದ್ದಳೆಯನ್ನು…
ಬಂಟ್ಸ್ ಅಸೋಸಿಯೇಶನ್ ಪುಣೆ ವತಿಯಿಂದ ಸಮಾಜ ಕಲ್ಯಾಣ ಸೇವಾ ಕಾರ್ಯದ ಪ್ರಯುಕ್ತ ಪುಣೆಯ ಸಮಸ್ತ ಬಂಟ ಸಮಾಜ ಬಾಂಧವರಿಗಾಗಿ ಮಲ್ಟಿಸ್ಪೆಷಾಲಿಟಿ ಉಚಿತ ಆರೋಗ್ಯ ತಪಾಸಣ ಶಿಬಿರವು ಜನವರಿ 19ರಂದು ಬೆಳಿಗ್ಗೆ 9ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಗುರುನಾನಕ್ ಮೆಡಿಕಲ್ ಫೌಂಡೇಶನ್ನ ಗುರುನಾನಕ್ ದರ್ಬಾರ್ ಹಾಲ್, ಹಾಲಿವುಡ್ ಗುರುದ್ವಾರ ಕ್ಯಾಂಪ್ ಪುಣೆ ಇಲ್ಲಿ ನಡೆಯಲಿದೆ. ಪುಣೆ ಬಂಟ್ಸ್ ಅಸೋಸಿಯೇಶನ್ ಅಯೋಜನೆಯಲ್ಲಿ ಗುರುನಾನಕ್ ಮೆಡಿಕಲ್ ಫೌಂಡೇಶನ್ ಸಹಯೋಗದೊಂದಿಗೆ ನಡೆಯಲಿರುವ ಈ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಸ್ತ್ರೀರೋಗ ಶಾಸ್ತ್ರ, ಮಕ್ಕಳ ರೋಗ ತಪಾಸಣೆ, ಕಣ್ಣು ಹಲ್ಲು ತಪಾಸಣೆ, ಔಷಧ ಮತ್ತು ರೋಗಶಾಸ್ತ್ರದ ಬಗ್ಗೆ ಮಾಹಿತಿ, ತುರ್ತು ರೋಗಿಗಳಿಗೆ ಉಚಿತ ಈಸಿಜಿ ಮತ್ತು ಉಚಿತ ಸಕ್ಕರೆ ತಪಾಸಣೆ ನಡೆಯಲಿದೆ.ಪುಣೆ ಬಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ರೋಹಿತ್ ಶೆಟ್ಟಿ ನಗ್ರಿಗುತ್ತು ಮತ್ತು ಕಾರ್ಯಕಾರಿ ಸಮಿತಿ, ಮಹಿಳಾ ವಿಭಾಗ, ಯುವ ವಿಭಾಗದವರ ಆಯೋಜನೆಯಲ್ಲಿ ನಡೆಯಲಿರುವ ಶಿಬಿರವು ಬಂಟ್ಸ್ ಅಸೋಸಿಯೇಶನ್ ಉಪಾಧ್ಯಕ್ಷ ಡಾ. ಸುಧಾಕರ್ ಶೆಟ್ಟಿಯವರ ಸಂಯೋಜನೆಯಲ್ಲಿ ನಡೆಯಲಿದೆ. ಆರೋಗ್ಯ ತಪಾಸಣಾ…
“ನಾನು ತುಳುನಾಡಿನವ, ಮೂಲ್ಕಿ ಬಳಿಯ ಬಪ್ಪನಾಡು ನನ್ನ ಹುಟ್ಟೂರು. ನಾನು ವರ್ಷಕ್ಕೆ ನಾಲ್ಕು ಬಾರಿ ಇಲ್ಲಿಗೆ ಭೇಟಿ ಕೊಡುತ್ತೇನೆ. ನಾನು ತುಳುವ ಎನ್ನುವುದೇ ನನಗೆ ಹೆಮ್ಮೆ. ತುಳು ಸಿನಿಮಾದಲ್ಲಿ ಅಭಿನಯಿಸಬೇಕು ಅನ್ನುವ ಆಸೆ ಹಿಂದಿನಿಂದಲೂ ಇತ್ತು. ಆದರೆ ಕಾಲ ಕೂಡಿ ಬಂದಿರಲಿಲ್ಲ. ಈಗ ರೂಪೇಶ್ ಶೆಟ್ಟಿ ನಿರ್ದೇಶನದಲ್ಲಿ ಬರುತ್ತಿರುವ ‘ಜೈ’ ಸಿನಿಮಾ ಕಥೆ ಕೇಳಿ ಇಷ್ಟಪಟ್ಟು ನಟಿಸುತ್ತಿದ್ದೇನೆ” ಎಂದು ಬಾಲಿವುಡ್ ಸ್ಟಾರ್ ನಟ ಸುನಿಲ್ ಶೆಟ್ಟಿ ಪತ್ರಿಕಾಗೋಷ್ಟಿಯಲ್ಲಿ ಹೇಳಿದರು. “ಕಾಮಿಡಿ ಸಿನಿಮಾಗಳಲ್ಲಿ ಅಭಿನಯ ಮಾಡಬೇಕು ಅನ್ನುವ ಆಸೆ ಇದೆ. ನನಗೆ ತುಳು ಸಿನಿಮಾದಲ್ಲಿ ಪೂರ್ಣ ಪ್ರಮಾಣದಲ್ಲಿ ಕಾಮಿಡಿಯನ್ ಆಗಿ ಅಭಿನಯಿಸಬೇಕು. ಆದರೆ ಈಗ ‘ಜೈ’ ಸಿನಿಮಾದಲ್ಲಿ ಅತಿಥಿ ಪಾತ್ರ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಅವಕಾಶ ಸಿಕ್ಕರೆ ನೋಡೋಣ” ಎಂದರು.ರಾಕ್ ಸ್ಟಾರ್ ರೂಪೇಶ್ ಶೆಟ್ಟಿ ಅಭಿನಯ ಮತ್ತು ನಿರ್ದೇಶನದಲ್ಲಿ ಜೈ ತುಳು ಸಿನಿಮಾದಲ್ಲಿ, ಬಾಲಿವುಡ್ ನಟ ಸುನೀಲ್ ಶೆಟ್ಟಿ ನಟಿಸುತ್ತಿದ್ದಾರೆ. ಸದ್ಯ ಮಂಗಳೂರಿನಾದ್ಯಂತ ಶೂಟಿಂಗ್ ನಡೆಯುತ್ತಿದ್ದು ಇನ್ನು ಕೆಲವು ದಿನಗಳ ಕಾಲ ಶೂಟಿಂಗ್…
ಮುಂಬಯಿಯ ಪ್ರತಿಭಾವಂತ ಬಾಲಕ, ಐಲೇಸಾದ ಸ್ಪೀಕರ್ ಬಾಯ್ ಎಂದೇ ಪ್ರಸಿದ್ಧಿ ಪಡೆದ ಪೋರ, ಕಲಿಕೆಯ ಜೊತೆ ಇತರ ಹವ್ಯಾಸವನ್ನು ಮೈಗೂಡಿಸಿಕೊಂಡು ಸದಾ ಹೊಸತನದಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುತ್ತಾ ಜಾಹೀರಾತು ಕ್ಷೇತ್ರದಲ್ಲಿ 11 ಭಾಷೆಗಳಲ್ಲಿ ಡಬ್ಬಿಂಗ್ ಮಾಡಿದ ಹೆಗ್ಗಳಿಕೆಯ ಜೊತೆಗೆ ಹಾಡು, ಕೋಡಿಂಗ್ ಬಗ್ಗೆ ಹೆಚ್ಚಿನ ಆಸಕ್ತಿಯ ಸುವಿಧ್ ಇವರು ಇತ್ತೀಚಿಗೆ ವಾಯ್ಸ್ ಕ್ಷೇತ್ರದಲ್ಲಿ ಇಂಡಿಯಾ ವಾಯ್ಸ್ ಫೆಸ್ಟ್ ಅವಾರ್ಡ್ ಪಡೆದುಕೊಂಡಿದ್ದಾರೆ. ಜೊತೆಗೆ ಇವರು ಹಾಡಿದ ಹಾಡುಗಳು ಯೂಟ್ಯೂಬ್ ನಲ್ಲಿವೆ. ಕನ್ನಡ, ತುಳು ನಾಟಕದಲ್ಲೂ ಕೈಯಾಡಿಸಿದ್ದಾರೆ. ಡಾ| ಭರತ್ ಕುಮಾರ್ ಪೊಲಿಪು ಅವರ ಶಾಕುಂತಲಾ, ಅಹಲ್ಯಾ,ಬಲ್ಲಾಳರ ಮಾಯಾವಿ ಸರೋವರ, ಬಂಟರ ಸಂಘದ ಸಿಟಿ ರೀಜನಲ್ ನಡೆಸಿಕೊಡುವ ನಾಟಕದಲ್ಲೂ ನಟಿಸುವುದರ ಜೊತೆಗೆ 10ನೇ ತರಗತಿಯಲ್ಲಿ 94.4 ಶೇಕಡಾ ಅಂಕದೊಂದಿಗೆ ತೇರ್ಗಡೆಯಾಗಿದ್ದಾರೆ.ಇವರ ಕಿರುಪ್ರಾಯದ ಸಾಧನೆಯನ್ನು ಗುರುತಿಸಿ ನಮನೋತ್ಸವ 2025 ಸಂಭ್ರಮದಲ್ಲಿ ‘ನಮನ ಸಿರಿ ಯುವ ಪುರಸ್ಕಾರ’ ಪ್ರಶಸ್ತಿಯೊಂದಿಗೆ ಸನ್ಮಾನಿಸಿ ಗೌರವಿಸಲ್ಪಡಲಿದ್ದಾರೆ. ಸುವಿಧ್ ರಂಗಕರ್ಮಿ ಸುರೇಂದ್ರ ಕುಮಾರ್ ಶೆಟ್ಟಿ ಮಾರ್ನಾಡ್ ಮತ್ತು ಭಾಂಡೂಪ್ ನ್ಯಾಷನಲ್ ಕಾಲೇಜಿನ ಉಪನ್ಯಾಸಕಿ…