Author: admin
ತುಳು ಸಂಘ ಪಿಂಪ್ರಿ ಚಿಂಚ್ವಾಡ್ ಆಶ್ರಯದಲ್ಲಿ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯ ಪುಣೆಯ ಹಾಗೂ ತುಳುನಾಡಿನ ನಾಮಾಂಕಿತ ಕಲಾವಿದರ ಕೂಡುವಿಕೆಯಲ್ಲಿ ಜನವರಿ ೩೦ ರಂದು ಸೋಮವಾರ ಸಂಜೆ ಗಂಟೆ ೪ ರಿಂದ ಆಚಾರ್ಯ ಅತ್ರೆ ಸಭಾಗೃಹ ವಲ್ಲಭ್ ನಗರ್ ಪಿಂಪ್ರಿ ಇಲ್ಲಿ ” ನಾಗ ಚಂದನ ” ಎಂಬ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಈ ಸಂದರ್ಭ ತುಳು ಸಂಘ ಪಿಂಪ್ರಿ ಚಿಂಚ್ವಾಡ್ ಇದರ ಅಧ್ಯಕ್ಷರಾದ ಹರೀಶ್ ಶೆಟ್ಟಿ ಕುರ್ಕಾಲ್ ಇವರ ಅಧ್ಯಕ್ಷತೆಯಲ್ಲಿ ನಡೆವ ಸಭಾಕಾರ್ಯಕ್ರಮದಲ್ಲಿ ಮೀರಾ -ಡಹಾನು ಬಂಟರ ಸಂಘದ ಅಧ್ಯಕ್ಷರಾದ ವಿರಾರ್ ಶಂಕರ ಶೆಟ್ಟಿ ಹಾಗೂ ಎನ್ ಸಿಪಿ ಕಾಮಗಾರ್ ಯೂನಿಯನ್ ಅಧ್ಯಕ್ಷರಾದ ಕಳತ್ತೂರು ವಿಶ್ವನಾಥ ಶೆಟ್ಟಿ ಇವರುಗಳನ್ನು ಸನ್ಮಾನಿಸಲಾಗುವುದು . ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಲಾಭಿಮಾನಿಗಳು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಹರೀಶ್ ಶೆಟ್ಟಿ ಕುರ್ಕಾಲ್ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು ವಿನಂತಿಸಿದ್ದಾರೆ .
ಪುಣೆ ಬಂಟರ ಸಂಘದ 42 ನೇ ವಾರ್ಷಿಕ ಮಹಾಸಭೆಯು ಓಣಿಮಜಲು ಜಗನ್ನಾಥ ಶೆಟ್ಟಿ ಬಂಟರ ಸಾಂಸ್ಕೃತಿಕ ಭವನದ ಸಭಾಂಗಣದಲ್ಲಿ ನಡೆಯಿತು. ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆ ಇವರು ದೀಪ ಪ್ರಜ್ವಲಿಸಿ ಸಭೆಗೆ ಚಾಲನೆಯಿತ್ತು ಸದಸ್ಯರನ್ನು ಸ್ವಾಗತಿಸಿದರು. ಮೊದಲಿಗೆ ಅಗಲಿದ ಸಮಾಜಬಾಂಧವರ ಆತ್ಮಕ್ಕೆ ಚಿರಶಾಂತಿ ಕೋರಿ ಶ್ರದ್ಧಾಂಜಲಿ ಅರ್ಪಿಸಲಾಯಿತು. ಸಂಘದ ಪ್ರಧಾನ ಕಾರ್ಯದರ್ಶಿ ಅಜಿತ್ ಹೆಗ್ಡೆ ಸಂಘದ ಎರಡು ವರ್ಷಗಳ ಕಾರ್ಯಚಟುವಟಿಕೆಗಳ ವರದಿಯನ್ನು ಸಭೆಯ ಮುಂದಿಟ್ಟರು. ಗೌರವ ಕೋಶಾಧಿಕಾರಿ ಶ್ರೀನಿವಾಸ ಶೆಟ್ಟಿ ಸಂಘದ ವಾರ್ಷಿಕ ಲೆಕ್ಕಪತ್ರಗಳನ್ನು ಮಂಡಿಸಿದರು. ಮುಂದಿನ ಲೆಕ್ಕಪರಿಶೋಧಕರನ್ನಾಗಿ ಸಿಎ ದಯಾನಂದ ಶೆಟ್ಟಿಯವರನ್ನು ಮರು ನೇಮಕಗೊಳಿಸಲಾಯಿತು . ಈ ಸಂದರ್ಭ ಅಧ್ಯಕ್ಷ ಸಂತೋಷ್ ಶೆಟ್ಟಿಯವರು ಮಾತನಾಡಿ ಯಾವುದೇ ಸಂಘ ಸಂಸ್ಥೆ ಯಶಸ್ಸಿನ ಹಾದಿಯಲ್ಲಿ ಸುಲಲಿತವಾಗಿ ಮುಂದುವರಿಯಬೇಕಾದರೆ ಸಮರ್ಥವಾದ ನಾಯಕತ್ವ ಅತೀ ಅಗತ್ಯವಾಗಿದೆ. ನಮ್ಮ ಹಿರಿಯರು ಯಾವ ವಿಚಾರಧಾರೆಯನ್ನು ಮುಂದಿಟ್ಟುಕೊಂಡು ಸಮಾಜದ ಒಳಿತಿಗಾಗಿ ಈ ಸಂಘವನ್ನು ಕಟ್ಟಿ ಬೆಳೆಸಿದ್ದಾರೋ ಆ ಉದ್ದೇಶವನ್ನಿಟ್ಟುಕೊಂಡು ಸಮಾಜದ ಶ್ರೇಯೋಭಿವೃದ್ಧಿಯನ್ನು ಬಯಸಿ ಅದನ್ನು…
ನಮಗೆಲ್ಲಾ ಗೋತ್ತಿರುವ ಹಾಗೆ ಆಸ್ತಿ ವಿವಾದ, ವಿಚ್ಛೇದನ ಮತ್ತು ಇತರ ಕೌಟುಂಬಿಕ ವಿವಾದಗಳ ಪ್ರಕರಣಗಳು ನ್ಯಾಯಾಲಯಗಳಲ್ಲಿ ಬರುತ್ತಲೇ ಇರುತ್ತವೆ. ಆದರೆ ಈ ಪ್ರಕರಣವು ತುಂಬಾ ವಿಭಿನ್ನವಾಗಿತ್ತು. 70 ವರ್ಷದ ತಮ್ಮನೊಬ್ಬ ತನ್ನ 80 ವರ್ಷದ ಅಣ್ಣನ ಮೇಲೆ ಮೊಕದ್ದಮೆ ಒಂದನ್ನು ಹೂಡಿದ್ದ . ಮೊಕದ್ದಮೆಯು “ನನ್ನ 80 ವರ್ಷದ ಅಣ್ಣನಿಗೆ ಈಗ ವಯಸ್ಸಾಗಿದೆ, ಆದ್ದರಿಂದ ಅವನು ತನ್ನನ್ನು ತಾನೇ ಸರಿಯಾಗಿ ನೋಡಿಕೊಳ್ಳಲು ಸಹ ಸಾಧ್ಯವಿಲ್ಲ, ಹಾಗಿದ್ದಾಗ ಅವನು ನಮ್ಮ 110 ವರ್ಷದ ತಾಯಿಯನ್ನು ಹೇಗೆ ನೋಡಿಕೊಳ್ಳುತ್ತಾನೆ? “ನಾನು ಈಗ ಚೆನ್ನಾಗಿದ್ದೇನೆ, ಹಾಗಾಗಿ ಈಗ ನನಗೆ ತಾಯಿಯ ಸೇವೆ ಮಾಡಲು ಮತ್ತು ತಾಯಿಯನ್ನು ನನ್ನ ಕೈಗೆ ಒಪ್ಪಿಸುವ ಕೆಲಸ ಕೋರ್ಟ್ ಮಾಡಬೇಕು” ಎಂದು ವಾದ ಮಾಡಿದ.. ನ್ಯಾಯಾಧೀಶರು ಅಚ್ಚರಿಯಿಂದ ಪ್ರಕರಣ ಕೈಗೆತ್ತಿಕೊಂಡರು. ನ್ಯಾಯಾಧೀಶರು ಸಹೋದರರಿಬ್ಬರಿಗೂ ಮನವರಿಕೆ ಮಾಡಿ ತಿಂಗಳಲ್ಲಿ 15-15 ದಿನಗಳಂತೆ ತಾಯಿಯನ್ನು ನೋಡಿಕೊಳ್ಳಿ ಎಂದು ಸಲಹೆ ನೀಡಿದರು. 80 ವರ್ಷದ ಅಣ್ಣ ಇದಕ್ಕೆ ಒಪ್ಪಲಿಲ್ಲ, ನನ್ನ ತಾಯಿಯನ್ನು ನನ್ನ ಸ್ವರ್ಗವನ್ನು ನನ್ನಿಂದ…
ಬೆಂಗಳೂರು ಬಂಟರ ಸಂಘ ಹಾಗೂ ಇದರ ಸಮಾಜ ಸೇವಾ ಸಮಿತಿ ಮತ್ತು ಸೇವಾದಳವು ವಿಶಿಷ್ಟ ಕಾರ್ಯಕ್ರಮಗಳಿಂದಾಗಿ ಜನಜನಿತವಾಗಿದೆ. ಮತ್ತೆ ಈ ಬಾರಿ ಸಮಾಜಕ್ಕೆ ಹಲವಾರು ಹಿತವಾದ ಆರೋಗ್ಯ ತಪಾಸಣೆ, “ನೆತ್ತರ ನೆರವು”-ರಕ್ತದಾನ ಶಿಬಿರ, ನೇತ್ರದಾನ, ಕೋವಿಡ್- 19 ಲಸಿಕೆ ಅಭಿಯಾನ – 60 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್, ಇತರೆ ಉಪಯುಕ್ತ ಕಾರ್ಡ್ ಗಳ ಮಾಹಿತಿ ಹಾಗೂ ಮಾಡುವಿಕೆ, ಮಣಿಪಾಲ, ಕಿದ್ವಾಯಿ ಮತ್ತು ಪ್ರತಿಷ್ಠಿತ ಆಸ್ಪತ್ರೆಗಳ ಸಹಯೋಗದೊಂದಿಗೆ ಹೃದಯ ಪರೀಕ್ಷೆ ಮತ್ತು ಇನ್ನಿತರ ಕಾರ್ಯಕ್ರಮಗಳ ಗುಚ್ಛ ಸೇವಾಚೇತನ-2 ಕಾರ್ಯಕ್ರಮವು ಇದೇ ಬರುವ ತಾ. 13/03/2021, ರವಿವಾರದಂದು ಬೆಂಗಳೂರು ಬಂಟರ ಸಂಘದಲ್ಲಿ ನಡೆಯಲಿದೆ. ಕಾರ್ಯಕ್ರಮಗಳ ವಿವರ: 1.ಕೇಂದ್ರ ಸರಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಅಧೀನದಲ್ಲಿರುವ ADIPS ಯೋಜನೆಯ ಅನುಸಾರ 5 ವರ್ಷದ ಒಳಗಿನ ಮಕ್ಕಳಿಗೆ ಬೆಂಗಳೂರಿನ ವಿವಿಧ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಉಚಿತವಾಗಿ ಶಸ್ತ್ರ ಚಿಕಿತ್ಸೆಯ ಮುಖಾಂತರ ಸಲಕರಣೆಯನ್ನು( Cochler Implant) ಅಳವಡಿಸಿ ಕಿವುಡುತನವನ್ನು ನಿವಾರಿಸಲಾಗುವುದು. 2. ಬೆಂಗಳೂರಿನ ಕಿದ್ವಾಯ್ ಮೆಮೋರಿಯಲ್…
ಅರಿಶಿಣ ಪ್ರಮುಖ ವಾಣಿಜ್ಯ ತೋಟಗಾರಿಕೆಯ ಬೆಳೆಗಳಲ್ಲಿ ಒಂದು. ಹೇರಳ ಔಷಧೀಯ ಗುಣಗಳನ್ನು ಹೊಂದಿರುವ ಮಸಾಲೆ ಬಂಗಾರ ಎಂದೇ ಹೆಸರಿರುವ ಅರಶಿನ ಒಂದು ಪ್ರಮುಖ ಸಾಂಬಾರು ಪದಾರ್ಥ. ತೆಂಗು, ಕಂಗು, ಬಾಳೆ, ತೋಟಗಳಲ್ಲಿ ಉಪಬೆಳೆಯಾಗಿ ಬೆಳೆಯುವುದರಿಂದ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಆದಾಯ ಪಡೆಯಬಹುದು. ಅರಶಿಣ ಅಲ್ಪಾವಧಿಯ ಬೆಳೆ. ಅತ್ಯಂತ ಕಡಿಮೆ ಅವಧಿಯಲ್ಲಿ ಅಧಿಕ ಇಳುವರಿ ಪಡೆಯಬಹುದು. ಬೆಳೆ ಸ್ಥಿರತೆ ಹಾಗೂ ಉತ್ತಮ ಲಾಭಕ್ಕಾಗಿ ಅರಶಿಣ ಬೆಳೆಯನ್ನು ಆಶ್ರಯಿಸುತ್ತಾರೆ. ಅರಶಿಣ ಎಲೆಯ ಮಹತ್ವರ ಪ್ರಯೋಜನಗಳು : ಗಡ್ಡೆ ಕಟಾವಿಗೆ ಬರುವ ಮುನ್ನ ಅರಶಿಣದ ಎಲೆಯನ್ನು ಮಾರಾಟ ಮಾಡಿ ಹಣ ಸಂಪಾದಿಸಬಹುದು. ಶ್ರಾವಣ, ದೀಪಾವಳಿ, ನಾಗರ ಪಂಚಮಿ, ನೂಲು ಹುಣ್ಣುಮೆ, ಕೃಷ್ಣ ಜನ್ಮಾಷ್ಟಮಿ ಹೀಗೆ ಅನೇಕ ಹಬ್ಬಗಳ ಖಾದ್ಯದಲ್ಲಿ ಅರಶಿಣ ಎಲೆ ಬಳಸುತ್ತಾರೆ. ಅರಶಿಣ ಎಲೆಗೆ ಕಡೆದ ಕೊಚ್ಚಲಕ್ಕಿ ಬಂದ ಹಚ್ಚಿದ ಎಲೆಗೆ ಬೆಲ್ಲ ತೆಂಗಿನ ತುರಿ ಪಸರಿಸಿ ಆವಿಯಲ್ಲಿ ಬೇಯಿಸಿದರೆ ಬರುವ ರುಚಿ ಹಾಗೂ ಪರಿಮಳಕ್ಕೆ ಸಾಟಿ ಇಲ್ಲ. ಹಬ್ಬ ಹರಿದಿನಗಳಲ್ಲಿ ಬಳಸುವ ಅರಶಿಣ…
15.10 2023 ರಂದು ಬೆಳಿಗ್ಗೆ ಕರ್ನಾಟಕ ಸಂಘ ಸಯನ್ ಇದರ ಉದ್ಘಾಟನಾ ಸಮಾರಂಭವು ನಿತ್ಯಾನಂದ ಸಭಾಗೃಹದಲ್ಲಿ ಅರ್ಥಪೂರ್ಣವಾಗಿ ಅದ್ದೂರಿಯಾಗಿ ನಡೆಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ಸಯನ್ ಪರಿಸರದ ರಾಮ್ ದೇವ್ ಹೋಟೇಲ್ ನ ಮಾಲಕ, ಮಹಾದಾನಿ, ಹೃದಯವಂತ, ಸುಂದರ ಶೆಟ್ಟಿ ಹಾಗೂ ಗೌರವ ಅತಿಥಿಯಾಗಿ ಆಗಮಿಸಿದ್ದ ಅಂತರಾಷ್ಟ್ರೀಯ ಖ್ಯಾತಿಯ ಹೃದಯ ತಜ್ಞ ಡಾ. ಸದಾನಂದ ಶೆಟ್ಟಿ, ಕರ್ನಾಟಕ ಸಂಘ ಸಯನ್ ನ ಅಧ್ಯಕ್ಷ ಪ್ರವೀಣ್ ಭಟ್ ಅವರು ಸಂಘದ ಬ್ಯಾನರನ್ನು ಅನಾವರಣಗೊಳಿಸಿ ರಿಬ್ಬನ್ ಕತ್ತರಿಸಿ ಸಂಘವನ್ನು ಉದ್ಘಾಟಿಸಿದರು. ಗೌರವ ಅತಿಥಿಗಳಾದ ರಾಜಕೀಯ ನೇತಾರ ಅಮಿತ್ ಜೆ.ಶೆಟ್ಟಿ, ಖ್ಯಾತ ನಾಟಕ ನಿರ್ದೇಶಕ ವಿಜಯ ಕುಮಾರ್ ಶೆಟ್ಟಿ ಕೊಡಿಯಲ್ ಬೈಲ್, ಸಂಘದ ಗೌರವಾಧ್ಯಕ್ಷ, ಅಜಂತ ಕ್ಯಾಟರರ್ಸ್ ನ ಮಾಲಕ ಶ್ರೀ ಜಯರಾಮ್ ಶೆಟ್ಟಿ, ಸಲಹೆಗಾರ, ರಾಜಕೀಯ ಮುಂದಾಳು ಭಾಸ್ಕರ್ ಶೆಟ್ಟಿ, ಗಿರೀಶ್ ಬಿ.ಸಾಲ್ಯಾನ್, ಪ್ರದೀಪ್ ಶೆಟ್ಟಿ, ಸುಂದರ್ ಶೆಟ್ಟಿ, ಉಪಾಧ್ಯಕ್ಷರುಗಳಾದ ಸತೀಶ್ ಆರ್.ಶೆಟ್ಟಿ, ದಿನೇಶ್ ಶೆಟ್ಟಿ, ಸದಾಶಿವ ಬಿ ಎನ್ ಶೆಟ್ಟಿ, ಸದಾನಂದ ಶೆಟ್ಟಿ,…
ಬೆಳ್ತಂಗಡಿ ತಾಲೂಕಿನ ಸವಣಾಲು ಡಿ.ದೇವಪ್ಪ ಶೆಟ್ಟಿ ಮತ್ತು ಲಕ್ಷ್ಮೀ ಶೆಟ್ಟಿ ದಂಪತಿಗೆ 01-06-1948 ರಂದು ಜನಿಸಿದ ದಯಾನಂದ ಶೆಟ್ಟರು ಕಲಿತದ್ದು ಎರಡನೇ ತರಗತಿ. ಯಕ್ಷಗಾನದ ಸಾಮಾನು ಸರಂಜಾಮುಗಳನ್ನು ಎತ್ತಿನ ಗಾಡಿಯಲ್ಲಿ ಸಾಗಿಸುತ್ತಿದ್ದ ಕಾಲದಲ್ಲಿ 12 ನೇ ವರ್ಷ ಪ್ರಾಯದ ದಯಾನಂದ ಕುಮಾರ ವೇಣೂರು ದೇಲಂಪುರಿ ಮೇಳದಲ್ಲಿ ಬಾಲ ಕಲಾವಿದರಾಗಿ ಸೇರಿಕೊಂಡರು. ದಶಾವತಾರಿ ಸೂರಿಕುಮೇರು ಗೋವಿಂದ ಭಟ್ಟರಿಂದ ಯಕ್ಷಗಾನದ ಪ್ರಾಥಮಿಕ ಹೆಜ್ಜೆಗಳನ್ನು ಕಲಿತ ಅವರು ಮುಂದೆ ತಮ್ಮ ನೃತ್ಯಾಭಿನಯವನ್ನು ವಿಸ್ತರಿಸಿಕೊಂಡದ್ದು ಇತರರನ್ನು ನೋಡಿಯೇ. ಕುಂಡಾವು ಮೇಳದಲ್ಲಿ ಅರುವ ಕೊರಗಪ್ಪ ಶೆಟ್ಟರ ಸಾಂಗತ್ಯದಲ್ಲಿ ಅದು ಸ್ಪುಟಗೊಂಡಿತು. ಮುಂದೆ ಕರ್ನಾಟಕ ಮೇಳವೊಂದರಲ್ಲೇ 36 ವರ್ಷ ವ್ಯವಸಾಯ ಮಾಡಿದ ಹಿರಿಮೆ ಅವರದು. ದಾಮೋದರ ಮಂಡೆಚ್ಚ, ಅಳಿಕೆ, ಬೋಳಾರ, ಮಂಕುಡೆ, ಸಾಮಗ, ಕ್ರಿಶ್ಚನ್ ಬಾಬು, ಮಿಜಾರು, ಕೋಳೂರು ಮೊದಲಾದ ದಿಗ್ಗಜರ ಒಡನಾಟದಲ್ಲಿ ಕಲ್ಲಾಡಿ ಮನೆತನದ ಮೂವರು ಯಜಮಾನರನ್ನು ಕಂಡ ದಯಾನಂದ, ಕಲ್ಲಾಡಿ ಕೊರಗ ಶೆಟ್ಟರಿಂದಾಗಿ ಮಂಗಳೂರಿನ ಜಪ್ಪಿನ ಮೊಗರಿನಲ್ಲಿ ನೆಲೆಸಿ ಜಪ್ಪು ದಯಾನಂದ ಶೆಟ್ಟಿ ಎಂದಾದರು. ಖಚಿತ ಲಯ…
ಬಂಟರ ಯಾನೆ ನಾಡವರ ಮಾತೃ ಸಂಘ, ಶ್ರೀ ಸಿದ್ಧಿವಿನಾಯಕ ಪ್ರತಿಷ್ಠಾನ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ದ.ಕ., ಉಡುಪಿ ಹಾಗೂ ಕಾಸರಗೋಡಿನ ವಿವಿಧ ಬಂಟರ ಸಂಘಗಳ ಸಹಭಾಗಿತ್ವದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಅಂಗವಾಗಿ ಬಂಟ್ಸ್ ಹಾಸ್ಟೇಲ್ ನ ಓಂಕಾರ ನಗರದಲ್ಲಿ ನಡೆದ ಗಣೇಶೋತ್ಸವ ಕಾರ್ಯಕ್ರಮದ ಉದ್ಘಾಟನೆ ನಡೆಯಿತು. ರಾಮಕೃಷ್ಣ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಕೆ ಜೈರಾಜ್ ಬಿ ರೈ ಮತ್ತು ಸೌಮ್ಯ ಜೆ ರೈ ಕಾರ್ಯಕ್ರಮ ಉದ್ಘಾಟಿಸಿದರು. ಸಮಾಜವನ್ನು ಒಂದುಗೂಡಿಸಲು ಇಂತಹ ಸಾರ್ವಜನಿಕ ಗಣೇಶೋತ್ಸವ ಪ್ರೇರಣೆಯಾಗುತ್ತದೆ ಎಂದರು. ಅಜಿತ್ ಕುಮಾರ್ ರೈ ಮಾಲಾಡಿ ಹಲವಾರು ಯೋಜನೆಗಳನ್ನು ಕೈಗೆತ್ತಿಕೊಂಡಿದ್ದಾರೆ. ಅದೆಲ್ಲವೂ ಕಾರ್ಯಗತಗೊಳ್ಳಲಿ ಎಂದವರು ತಿಳಿಸಿದರು. ಶ್ರೀ ವೈಷ್ಣವಿ ದುರ್ಗಾ ದೇವಸ್ಥಾನ ದಶರಥ ನಗರ ಮಣಿಪಾಲದ ಆಡಳಿತ ಮೊಕ್ತೇಸರ ಬಿ ಜಯರಾಜ್ ಹೆಗ್ಡೆ, ಅಮ್ಮಣ್ಣಿ ಜೆ ಹೆಗ್ಡೆ ತೆನೆ ವಿತರಿಸಿದರು. ಈಎಸ್ ಎಂ ಸಬ್ ಮೇಜರ್ ಶಶಿಧರ ಆಳ್ವ ಧ್ವಜಾರೋಹಣಗೈದರು. ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ, ಸಿದ್ದಿ…
ಶ್ರೀ ರಾಮಕೃಷ್ಣ ಸೊಸೈಟಿ:29ನೇ ವಾರ್ಷಿಕ ಮಹಾಸಭೆ 2022-23ನೇ ಸಾಲಿಗೆ ರೂ. 9.84 ಕೋಟಿ ಲಾಭ, ಶೇ. 25 ಡಿವಿಡೆಂಡ್: ಕೆ. ಜೈರಾಜ್ ಬಿ. ರೈ, ಆಧ್ಯಕ್ಷರು
ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿಯ 29ನೇ ವಾರ್ಷಿಕ ಮಹಾಸಭೆ, ಸ0ಘದ ಅಧ್ಯಕ್ಷರಾದ ಶ್ರೀ ಕೆ. ಜೈರಾಜ್ ಬಿ. ರೈಯವರ ಅಧ್ಯಕ್ಷತೆಯಲ್ಲಿ ಮ0ಗಳೂರಿನ ಉರ್ವ ಸೆ0ಟನರಿ ಚರ್ಚ್ ಹಾಲ್ನಲ್ಲಿ ದಿನಾ0ಕ 27.08.2023ರ0ದು ಜರಗಿತು. ಸ0ಘವು 31.03.2023ಕ್ಕೆ ಅ0ತ್ಯವಾದ, 2022-23ನೇ ಸಾಲಿನಲ್ಲಿ ರೂ.9.84ಕೋಟಿ ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ. 25 ಡಿವಿಡೆ0ಡ್ನ್ನು ನೀಡಲು ಮಹಾಸಭೆಯಲ್ಲಿ ನಿರ್ಧರಿಸಿದೆ. ಸಂಘದ ಅಧ್ಯಕ್ಷರಾದ ಶೀ ಕೆ. ಜೈರಾಜ್ ಬಿ. ರೈಯವರು2022-23ನೇ ಸಾಲಿನ ಆಡಳಿತ ಮಂಡಳಿಯ ವರದಿ ಮತ್ತು ಕಾರ್ಯಯೋಜನೆಗಳನ್ನು ಮಂಡಿಸಿ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ,ಠೇವಣಾತಿ ಮತ್ತು ಸಾಲ ಸೇರಿದಂತೆ ಒಟ್ಟು ಸಾರ್ವಕಾಲಿಕ ದಾಖಲೆಯರೂ. 145ಕೋಟಿ ವೃದ್ಧಿಯನ್ನು ದಾಖಲಿಸಿ,31/03/2023ಕ್ಕೆ ರೂ.453 ಕೋಟಿ ಠೇವಣಾತಿ,ರೂ.382 ಕೋಟಿಸಾಲ, ರೂ.835 ಕೋಟಿಮೀರಿದ ಒಟ್ಟು ವ್ಯವಹಾರ, ರೂ.9.84ಕೋಟಿ ನಿವ್ವಳ ಲಾಭ ಹಾಗೂರೂ. 3089 ಕೋಟಿ ಒಟ್ಟು ವಹಿವಾಟನ್ನು ಸಾಧಿಸಿದೆ.ಸಂಘದ ಸಾಧನೆಯ ಪ್ರಮುಖ ಮತ್ತೊಂದು ಅಂಶವೆಂದರೆ ಒಟ್ಟು ಅನುತ್ಪಾದಕ ಆಸ್ತಿಯು ಹೊರಬಾಕಿ ಸಾಲದ ಶೇ. 0.08ಗೆಸೀಮಿತವಾಗಿದ್ದು, ಕಳೆದ 16ವರ್ಷಗಳಿಂದ ನಿವ್ವಳ ಅನುತ್ಪಾದಕ ಆಸ್ತಿಯು ಶೂನ್ಯ ಪ್ರಮಾಣದಲ್ಲಿದೆ.…
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಆಯೋಜನೆಯಲ್ಲಿ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರ ನೇತೃತ್ವ ಹಾಗೂ ಮಾರ್ಗದರ್ಶನದೊಂದಿಗೆ ಅಕ್ಟೋಬರ್ ತಿಂಗಳಿನಲ್ಲಿ ದಿನಾಂಕ 28 ಮತ್ತು 29ರಂದು ಉಡುಪಿ ಅಜ್ಜರಕಾಡು ಮೈದಾನದಲ್ಲಿ ದಿನಪೂರ್ತಿ ನಡೆಯಲಿರುವ “ವಿಶ್ವ ಬಂಟರ ಕ್ರೀಡಾಕೂಟ” “ವಿಶ್ವ ಬಂಟರ ಸಮ್ಮಿಲನ” ವಿಶ್ವ ಬಂಟರ ಸಾಂಸ್ಕೃತಿಕ ವೈಭವ ನಡೆಯಲಿದ್ದು ಇದರ ಪ್ರಯುಕ್ತ ಪೂರ್ವಭಾವಿ ಸಭೆಯು ಆ.26 ರ ಶನಿವಾರ ಬಂಟರ ಸಂಘ ಮುಂಬಯಿಯ ರಂಜನಿ ಸುಧಾಕರ ಹೆಗ್ಡೆ ಸಮಾಜ ಕಲ್ಯಾಣ ಎನೆಕ್ಸ್ ಸಭಾಂಗಣದಲ್ಲಿ ನಡೆಯಿತು. ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ, ಮಾತನಾಡುತ್ತಾ ಪ್ರತಿಯೊಂದು ಕಾರ್ಯಕ್ರಮ ಮಾಡುವ ಮುನ್ನ ಕಟೀಲಿನ ದುರ್ಗಾಪರಮೇಶ್ವರಿಯನ್ನು ಮುಂದಿಟ್ಟು ಎಲ್ಲಾ ಕಾರ್ಯಗಳನ್ನು ಮಾಡುತ್ತಿದ್ದೇವೆ. ನಾವು ಸಮಾಜದ ಸೇವಕರಾಗಿ ಸೇವೆ ಮಾಡುತ್ತಿದ್ದೇವೆ. ಮಾಡಿಸುವವರೆಲ್ಲಾ ಆ ಜಗನ್ಮಾತೆ. ಈ ಸಭೆಯಲ್ಲಿ ನಮ್ಮ ಬಾಂಧವರು ಬಂಟ ಸಮಾಜದ ಮೇಲಿನ ಸ್ವಾಭಿಮಾನದಿಂದ ಪಾಲ್ಗೊಂಡಿದ್ದಾರೆ. ಒಕ್ಕೂಟದ ಈ ಹಿಂದೆ ನಡೆದ ಸಮ್ಮಿಲನ ಎಲ್ಲವೂ ಇತಿಹಾಸವಾಗಿದೆ. ಅದರಲ್ಲಿ ಸಿನಿಮಾ ನಟ ನಟಿಯರು, ಕ್ರೀಡಾಪಟುಗಳು, ಹಿರಿಯ ಉದ್ಯಮಿಗಳನ್ನು ಸಮಾಜ…