Author: admin

ಉಡುಪಿ: ನಿವೃತ್ತ ಪ್ರಾಂಶುಪಾಲ ಜಾನಪದ ವಿದ್ವಾಂಸ ಡಾ. ಗಣನಾಥ ಎಕ್ಕಾರು ಅವರಿಗೆ ಕರ್ನಾಟಕ ರಾಜ್ಯ ಯುವ ಸಂಘಟನೆಗಳ ಒಕ್ಕೂಟ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವಿಜಯಪುರ ಇವರ ವತಿಯಿಂದ ರಾಜ್ಯ ಮಟ್ಟದ ಸ್ವಾಮಿ ವಿವೇಕಾನಂದ ಸದ್ಭಾವನಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವಿಜಯಪುರದ ಮುದ್ದೇಬಿಹಾಳದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾಜಿ ಸಚಿವ ಸಿ.ಎಸ್. ನಾಡಗೌಡ ಅಪ್ಪಾಜಿಯವರು ಪ್ರಶಸ್ತಿ ಪ್ರದಾನ ಮಾಡಿದರು. ಕಾಲಜ್ಞಾನ ಮಠದ ಶ್ರೀ ಅಪ್ಪಯ್ಯ ಮಹಾಸ್ವಾಮಿಗಳು, ಆಹಾರ ಮತ್ತು ನಾಗರೀಕ ಸರಬರಾಜು ನಿಗಮದ ಅಧ್ಯಕ್ಷರಾದ ಎ.ಎಸ್. ಪಾಟೀಲ್, ರಾಜ್ಯ ಒಕ್ಕೂಟದ ಅಧ್ಯಕ್ಷ ಡಾ. ಎಸ್. ಬಾಲಾಜಿ ಉಪಸ್ಥಿತರಿದ್ದರು. ರಾಜ್ಯದ 31 ಜಿಲ್ಲೆಯ 31 ಸಾಧಕರನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ. ಡಾ. ಎಕ್ಕಾರು ಅವರು ಕಳೆದ ಮೂರು ದಶಕಗಳಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಕಾರಣರಾಗಿದ್ದಾರೆ ಎಂದು ಪ್ರಶಂಸಿಸಿ ಪ್ರಶಸ್ತಿ ನೀಡಲಾಯಿತು. ಅವರ ಸಾಧನೆಗೆ ಈ ಹಿಂದೆ ಎರಡು ಬಾರಿ ರಾಜ್ಯ…

Read More

ಬಾಲಿವುಡ್ ನಟಿ ಆಥಿಯಾ ಶೆಟ್ಟಿ ಮತ್ತು ಕ್ರಿಕೆಟಿಗ ಕೆಎಲ್ ರಾಹುಲ್ ಕೊನೆಗೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಖಂಡಾಲದಲ್ಲಿರುವ ಸುನೀಲ್ ಶೆಟ್ಟಿ ಅವರ ಫಾರ್ಮ್‌ಹೌಸ್‌ನಲ್ಲಿ ವಿವಾಹವಾದರು. ಅಥಿಯಾ ಮತ್ತು ಕೆಎಲ್ ರಾಹುಲ್ ಅವರು ಕೇವಲ 100 ಅತಿಥಿಗಳ ಸಮ್ಮುಖದಲ್ಲಿ ವಿವಾಹವಾದರು. ಇವರಲ್ಲಿ ಬಾಲಿವುಡ್ ಮತ್ತು ಕ್ರಿಕೆಟ್ ಪ್ರಪಂಚದ ಅನೇಕ ಸೆಲೆಬ್ರಿಟಿಗಳನ್ನು ಒಳಗೊಂಡಿದ್ದರು. ಮದುವೆಯ ನಂತರ, ಕೆಎಲ್ ಮತ್ತು ಅಥಿಯಾ ಅವರು ಬಾಲಿವುಡ್ ಮತ್ತು ಕ್ರಿಕೆಟ್ ಸೆಲೆಬ್ರಿಟಿ ಗಳಿಗಾಗಿ ವಿಶೇಷ ಭವ್ಯವಾದ ಆರತಕ್ಷತೆಯನ್ನು ಆಯೋಜಿಸಿದ್ದಾರೆ. ಅಲ್ಲದೆ ಅನೇಕ ಕೈಗಾರಿಕೋದ್ಯಮಿಗಳು ಮತ್ತು ರಾಜಕಾರಣಿಗಳು ಸಹ ಆರತಕ್ಷತೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಮದುವೆ ಸಮಾರಂಭದಲ್ಲಿ ಸುನೀಲ್ ಶೆಟ್ಟಿ, ”ಕೆಎಲ್ ರಾಹುಲ್ ನನ್ನ ಅಳಿಯನಲ್ಲ, ಅವರ ಮಗ. ಸಂಬಂಧದಿಂದ ನಾನು ಅವರ ಮಾವ ಆಗಿದ್ದರೂ, ಸಹ ಅವರು ನನ್ನ ಮಗನೇ. ಅಥಿಯಾ ಮತ್ತು ಕೆಎಲ್ ರಾಹುಲ್ ಅವರ ಆರತಕ್ಷತೆ ಐಪಿಎಲ್ ನಂತರ ನಡೆಯಲಿದೆ. ಮದುವೆಯ ನಂತರ, ಸುನೀಲ್ ಶೆಟ್ಟಿ ಹಾಗೂ ಅವರ ಮಗ ಅಹಾನ್ ಶೆಟ್ಟಿಯೊಂದಿಗೆ ಪೋಸ್ ನೀಡಿದರು. ಅಲ್ಲದೆ ಸಿಹಿ…

Read More

ಪುಣೆಯ ಮಕ್ಕಳ ತಜ್ಞ ಬೇಬಿ ಫ್ರೆಂಡ್ ಪೀಡಿಯಾಟ್ರಿಕ್‍ನ ಮೂಲಕ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಅಪಾರ ಸಾಧನೆಗೈದ ಪುಣೆಯ ತುಳು-ಕನ್ನಡಿಗ, ಮೂಲತಃ ಮೂಡಬಿದ್ರೆಯ ಡಾ| ಸುಧಾಕರ ಶೆಟ್ಟಿ ಅವರು 2022 ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯಿಂದ ಪುರಸ್ಕೃತರಾಗಿದ್ದಾರೆ. ಸುಮಾರು 34 ವರ್ಷಗಳ ದೀರ್ಘಕಾಲದಿಂದ ಪುಣೆಯಲ್ಲಿ ವೈದ್ಯಕೀಯ ರಂಗದಲ್ಲಿ ಸೇವೆ ಸಲ್ಲಿಸುತ್ತಿರುವ ಇವರು ಮಕ್ಕಳ ಡಾಕ್ಟರ್ ಎಂದೇ ಪ್ರಸಿದ್ದರು. ನ. 1 ರಂದು ಮಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಇಂಧನ ಮತ್ತು ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮತ್ತು ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಕೊರೊನಾ ಸಂದರ್ಭ ಡಾ| ಸುಧಾಕರ ಶೆಟ್ಟಿ ಮತ್ತು ಅವರ ವೈದ್ಯಕೀಯ ತಂಡ ಪುಣೆ ಕಂಟೋನ್ಮೆಂಟ್ ಪರಿಸರದಲ್ಲಿ ಪಿಸಿಆರ್ ಪರೀಕ್ಷೆ, ಕೋವಿಡ್ ಐಸೋಲೇಶನ್ ವಾರ್ಡ್, ಕೋವಿಡ್ ಐಸಿಯು ಸಹಿತ ಸಾವಿರಾರು ಮಂದಿ ಕೊರೊನಾ ಪೀಡಿತರಿಗೆ ಬೆಡ್ ವ್ಯವಸ್ಥೆ, ಆಕ್ಸಿಜನ್, ತುರ್ತು ಚಿಕಿತ್ಸೆ, ಪ್ಲಾಸ್ಮಾ ವ್ಯವಸ್ಥೆ…

Read More

ದ.ಕ.ಹಾಲು ಒಕ್ಕೂಟದ ಉಪಾಧ್ಯಕ್ಷರಾಗಿ ಕೆಯ್ಯೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎಸ್.ಬಿ.ಜಯರಾಮ ರೈ ಅವರು ಆಯ್ಕೆಯಾಗಿದ್ದಾರೆ. ಒಕ್ಕೂಟದ ಅಧ್ಯಕ್ಷರಾದ ರವಿರಾಜ ಹೆಗ್ಡೆ ಅವರು ಈಗಾಗಲೇ ರಾಜೀನಾಮೆ ನೀಡಿದ್ದು, ಉಪಾಧ್ಯಕ್ಷರೂ ರಾಜಿನಾಮೆ ನೀಡಿದ ಹಿನ್ನೆಲೆಯಲ್ಲಿ ಎಸ್.ಬಿ.ಜಯರಾಮ ರೈ ಅವರನ್ನು ಆಯ್ಕೆ ಮಾಡಲಾಗಿದೆ.

Read More

ರೈ ಎಸ್ಟೇಟ್ಸ್ ಎಜ್ಯುಕೇಷನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಮುಖಾಂತರ ಸಾವಿರಾರು ಕುಟುಂಬಗಳಿಗೆ ಆಸರೆಯಾಗಿ ನಿಂತ ಉದ್ಯಮಿ ಅಶೋಕ್ ಕುಮಾರ್ ರೈ ಅವರು ಉಪ್ಪಿನಂಗಡಿ ವಿಜಯ – ವಿಕ್ರಮ ಕಂಬಳ ಸಮಿತಿಯ ಅಧ್ಯಕ್ಷರಾಗಿಯೂ, ಶ್ರೀ ಮಹಿಷಮರ್ದಿನಿ ದೇವಸ್ಥಾನ ಮಠಂತಬೆಟ್ಟು ಕೋಡಿಂಬಾಡಿ ಇಲ್ಲಿಯ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ರೈ ಬಿಲ್ಡರ್ಸ್ ಮಾಲಕ ಅಶೋಕ್ ರೈ ಅವರಿಗೆ ಭಗವಂತ ಆಯುಷ್ಯ, ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಸಮಸ್ತ ಬಂಟ ಸಮಾಜದ ಪರವಾಗಿ ಶುಭ ಹಾರೈಸುತ್ತಿದ್ದೇವೆ.

Read More

ಸಾಧಾರಣವಾಗಿ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ನಾವು ಓದುವ ಅಂಶಗಳು ಹುಡುಗ ಹುಡುಗಿಯ ಹಿರಿಯರ, ಕುಟುಂಬಿಕರ ಮನೆ ಯಾವುದು? ಯಾವ ಮನೆತನದವರು ಎಂಬಿತ್ಯಾದಿ ಅಂಶವನ್ನು. ಆದರೆ ಇತ್ತೀಚಿಗಿನ ಮದುವೆ ಆಮಂತ್ರಣದ ಪತ್ರಿಕೆಯಲ್ಲಿ ಕೇವಲ ತಂದೆ ತಾಯಿಯ ಹೆಸರು ಮಾತ್ರ ಇದ್ದಲ್ಲಿ ಆಗ ನಾವು ಊಹಿಸಬಹುದಾಗಿದೆ ಇದು ಅಂತರ್ಜಾತಿ ವಿವಾಹ ಎಂದು. ಇಂದಿನ ಈ ದಿನಗಳಲ್ಲಿ ಇದೇನು? ಅಂತರ್ಜಾತಿ ವಿವಾಹಗಳು ಏಕೆ ಹೆಚ್ಚುತ್ತಿವೆ? ಇದಕ್ಕೆ ಮೂಲ ಕಾರಣರಾರು? ಪಾಲಕರಿಗೆ ಮಕ್ಕಳ ಮೇಲೆ ಇರುವ ಅತೀ ಪ್ರೀತಿ, ಮಮತೆ, ಇದಕ್ಕೆ ದಾರಿ ಮಾಡಿಕೊಟ್ಟೀತೇ? ಅಥವಾ ಮಿತಿಮೀರಿ ಕೊಟ್ಟ ಸ್ವಾತಂತ್ರ್ಯದ ದುರುಪಯೋಗವೇ? ಹೆಚ್ಚಿನ ವಿದ್ಯಾಭ್ಯಾಸ, ಉನ್ನತ ವ್ಯಾಸಂಗದ ಪ್ರಭಾವವೋ? ವಿದೇಶಗಳ ಸಂಸ್ಕೃತಿಯನ್ನು ನಾವು ಅನುಕರಣೆ ಮಾಡುತ್ತಿದ್ದೇವೆಯೋ? ಎಂಬಿತ್ಯಾದಿ ಪ್ರಶ್ನೆಗಳ ಸರಮಾಲೆಯೇ ಉದ್ಭವವಾಗುತ್ತಿದೆ. ಆದರೆ ಇದಕ್ಕೆಲ್ಲಾ ಉತ್ತರವನ್ನು ನಾವು ಕಂಡುಕೊಂಡಲ್ಲಿ ಪರಿಹಾರವೂ ಅದರ ಜತೆಗಿದೆ. ನಮ್ಮ ಮಕ್ಕಳು ಅಂತರ್ಜಾತಿ ವಿವಾಹ ಎಂದೊಡನೆ ಮೊದ ಮೊದಲು ಸಂಬಂಧಿಕರು ಸಿಕ್ಕರೆ ಮುಜುಗರ, ಏನು ಹೇಳಿ ಬಿಡುತ್ತಾರೋ ಎಂಬ ಅಂಜಿಕೆ. ಇದೀಗ ಎಲ್ಲರ…

Read More

ಪುಣೆ ; ಪುಣೆಯ ಹೆಸರಾಂತ ಸಮಾಜ ಸೇವಕ ,ಕಲಾ ಸಂಘಟಕ ಅಪತ್ಭಾಂದವ ಎಂದೇ ಹೆಸರು ಪಡೆದಿರುವ ಪುಣೆಯ – ಖ್ಯಾತ ಉದ್ಯಮಿ ಪ್ರವೀಣ್ ಶೆಟ್ಟಿ ಪುತ್ತೂರು ರವರಿಗೆ 2023 ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಒಲಿದು ಬಂದಿದೆ . .ವಿವಿದ ಕ್ಷೇತ್ರಗಳಲ್ಲಿ ಕಾರ್ಯ ಗೈದ, ಮಹಾನ್ ಸಾಧನೆ ಮಾಡಿದ ಸಾಧಕರಿಗೆ ಹೊರನಾಡ ಕನ್ನಡಿಗರ ಮಟ್ಟದಲ್ಲಿ ಕೊಡಮಾಡುವ ಈ ಉಡುಪಿ ಜಿಲ್ಲೆಗೆ ಅನ್ವಯಿಸುವಂತೆ ಈ ಬಾರಿ ಪ್ರಶಸ್ತಿ ಪುಣೆಯ ಪ್ರವೀಣ್ ಶೆಟ್ಟಿ ಪುತ್ತೂರುವರಿಗೆ ಲಭಿಸಿದೆ . ನವೆಂಬರ್ ಒಂದರಂದು ಉಡುಪಿ ಅಜ್ಜರ ಕಾಡು ಮೈದಾನದಲ್ಲಿ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಲ್ಕರ್ ರವರು ಪ್ರವೀಣ್ ಶೆಟ್ಟಿ ಯವರು ಪ್ರಶಸ್ತಿ ಪ್ರದಾನ ಮಾಡಿದರು . ಪೂನಾದಲ್ಲಿ ಅರ್ .ಬಿ ಐ ಪ್ರವೀಣಣ್ಣ ಎಂದೇ ಪ್ರಸಿದ್ದಿ ಪಡೆದ ಪ್ರವೀಣ್ ಶೆಟ್ಟಿ ಯವರು ,ಜನ್ಮ ಭೂಮಿ ತುಳುನಾಡಿನ ಪ್ರೀತಿಯಿಂದ ,ಕರ್ಮ ಭೂಮಿ ಪುಣೆಯಲ್ಲಿ ಸಾಮಾಜಿಕ ಜೀವನದಲ್ಲಿ ತನ್ನದೊಂದು ಕಾರ್ಯವೆಂದು ಸಮಾಜ…

Read More

ಹರ್ಯಾಣ ಛೋಟು ರಾಮ್ ನಗರದ ಕಾಳಿದಾಸ್ ಧಾಮ ಸಂಪ್ಲಾ ಆಶ್ರಮದ ಸಿದ್ಧಯೋಗಿ ಗುರುದೇವ್ ಬಾಬಾ ಕಾಳಿದಾಸ್ ಮಹಾರಾಜ್ ಶಿವಭಕ್ತಿ ಬಾಬಾ ಅವರು ಕಳೆದ ಮಂಗಳವಾರ ಶ್ರೀ ಗಣೇಶ ಚತುರ್ಥಿ ಶುಭ ದಿನದಂದು ಮುಂಬಯಿಗೆ ಚರಣಸ್ಪರ್ಶಗೈದರು. ಮುಂಬಯಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪಾದರ್ಪಣೆಗೈದ ಬಾಬಾ ಅವರನ್ನು ಮುಂಬಯಿ ಬಿಜೆಪಿ ದಕ್ಷಿಣ ಭಾರತೀಯ ಘಟಕದ ಪ್ರಧಾನ ಕಾರ್ಯದರ್ಶಿ ವಿಜಯ್ ಎಸ್. ಶೆಟ್ಟಿ (ಪಣಕಜೆ ಬೆಳ್ತಂಗಡಿ) ಪುಷ್ಪ ಮಾಲೆಯನ್ನಿತ್ತು ಭಕ್ತಿ ಪೂರ್ವಕವಾಗಿ ಬೃಹನ್ಮುಂಬಯಿಗೆ ಬರಮಾಡಿಕೊಂಡರು. ಬಳಿಕ ಬಾಬಾ ಅವರು ವಿಜಯ್ ಶೆಟ್ಟಿ ಅವರ ಮಾಲಿಕತ್ವದ ವಿಮಾನ ನಿಲ್ದಾಣದ ಟರ್ಮಿನಲ್ ಒಂದರ ಬಾಬಾಸ್ ಹಾಸ್ಪಿಟಾಲಿಟಿ ಆಂಡ್ ಫುಡ್ ಸರ್ವಿಸಸ್ ಸಂಸ್ಥೆಗೆ ಭೇಟಿಯನ್ನಿತ್ತು ಆಶೀರ್ವಾಚನ ನೀಡಿದರು. ಬಾಬಾಜೀ ಬಳಿಕ ಪ್ರಭಾದೇವಿ ಅಲ್ಲಿನ ಶ್ರೀ ಸಿದ್ಧಿವಿನಾಯಕ ಮಂದಿರಕ್ಕೆ ಭೇಟಿ ನೀಡಿ ವಿಶೇಷ ಪೂಜೆಗೈದರು. ಬಳಿಕ ಲಾಲ್ ಬಾಗ್ ಕಾ ರಾಜಾ, ಕಿಂಗ್ ಸರ್ಕಲ್ ಅಲ್ಲಿನ ಜಿಎಸ್ ಬಿ ಗಣಪತಿ ಮಂಡಲಗಳಿಗೆ ಭೇಟಿಯನ್ನಿತ್ತು ದೇವರ ದರ್ಶನಗೈದರು. ಬಾಬಾ ಅವರ ಆಗಮನದ ವೇಳೆ…

Read More

ನಿಜವಾದ ಪ್ರೀತಿಗೆ ಬಣ್ಣ ಬಣ್ಣದ ಮಾತುಗಳು ಬೇಕಾಗಿಲ್ಲ, ಸರ್‌ಪ್ರೈಸ್‌ ಗಿಫ್ಟ್ ಗಳ ಆಗತ್ಯವಿಲ್ಲ, ಆಸ್ತಿ – ಅಂತಸ್ತು ಲೆಕ್ಕಕ್ಕೇ ಬರೋದಿಲ್ಲ. ಅಲ್ಲಿ ಬೇಕಾಗಿರೋದು ಪರಸ್ಪರ ಪ್ರೀತಿ, ನಂಬಿಕೆ, ವಿಶ್ವಾಸ. ಜೊತೆಗೊಂದು ಭವಿಷ್ಯದ ಭರವಸೆ. ಈ ಅಂಶಗಳನ್ನು ಮೂಲವಾಗಿಟ್ಟುಕೊಂಡು ಅದನ್ನು ಅಚ್ಚುಕಟ್ಟಾಗಿ ಮನಮುಟ್ಟುವಂತೆ ಕಟ್ಟಿ ಕೊಟ್ಟಿರುವ ಚಿತ್ರ ‘ಸಪ್ತಸಾಗರದಾಚೆ ಎಲ್ಲೋ’. ಈ ಸಿನಿಮಾದ ಬಗ್ಗೆ ಒಂದೇ ಮಾತಲ್ಲಿ ಹೇಳಬೇಕಾದರೆ ನೋಡ ನೋಡುತ್ತಲೇ ಕಾಡುವ ಸಿನಿಮಾ. ಆ ಮಟ್ಟಿಗೆ ನಿರ್ದೇಶಕ ಹೇಮಂತ್‌ ಒಂದು ಸುಂದರವಾದ ಕಥೆಯನ್ನು ಅಷ್ಟೇ ಸೊಗಸಾಗಿ ಹೆಣೆದು ಪ್ರೇಕ್ಷಕರ ಮಡಿಲಿಗೆ ಹಾಕಿದ್ದಾರೆ. ‘ಸಪ್ತಸಾಗರದಾಚೆ ಎಲ್ಲೋ’ ಒಂದು ಔಟ್‌ ಅಂಡ್‌ ಔಟ್‌ ಲವ್‌ಸ್ಟೋರಿ. ಹಾಗಂತ ಇದು ಸಾದ – ಸೀದಾ ಲವ್‌ಸ್ಟೋರಿ ಯಲ್ಲ, ಇಂಟೆನ್ಸ್‌ ಲವ್‌ಸ್ಟೋರಿ. ಈ ಲವ್‌ ಸ್ಟೋರಿಗೆ ಹಲವು ಮಗ್ಗುಲುಗಳಿವೆ. ಪ್ರೀತಿ, ದ್ವೇಷ, ಸ್ವಾರ್ಥ, ಮೋಸ. ಹೀಗೆ ವಿವಿಧ ಆಯಾಮಗಳೊಂದಿಗೆ ಸಿನಿಮಾ ಸಾಗುವುದು ವಿಶೇಷ. ಹಾಗಂತ ಯಾವುದನ್ನೂ ಇಲ್ಲಿ ಅತಿಯಾಗಿ ತೋರಿಸಿಲ್ಲ. ಎಲ್ಲವೂ ಮೂಲಕಥೆಯಲ್ಲಿ ಹಾಸುಹೊಕ್ಕಾಗಿದೆ. ಮನು-ಪ್ರಿಯಾಳ ಸರಳ ಸುಂದರ…

Read More

ಆಳ್ವಾಸ್ ಪತ್ರಿಕೋದ್ಯಮ ವಿಭಾಗದಲ್ಲಿ ‘ಕಲರ್ಸ್ ಕನ್ನಡ’ ಮಾತುಕತೆ ಮಾಧ್ಯಮದಲ್ಲಿ ಎಚ್ಚರ ಅಗತ್ಯ: ರಂಜಿತ್  ವಿದ್ಯಾಗಿರಿ: ‘ನಾಲ್ಕು ಗೋಡೆ ಮಧ್ಯೆ ಕುಳಿತು ಬರೆದರೂ, ನಾಲ್ಕು ಕೋಟಿ ಜನ ನೋಡುತ್ತಾರೆ ಎಂಬ ಎಚ್ಚರವು ಮಾಧ್ಯಮದಲ್ಲಿ ಅತಿಮುಖ್ಯ’ ಎಂದು ಕಲರ್ಸ್ ಕನ್ನಡದ ಕಂಟೆಂಟ್ ಡೆವಲಪರ್ ರಂಜಿತ್ ನಿಡಗೋಡು ಹೇಳಿದರು. ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ‘ಮನೋರಂಜನಾ ಮಾಧ್ಯಮ- ವ್ಯಾಪ್ತಿ ಮತ್ತು ಪ್ರವೃತ್ತಿ’ ಕುರಿತು ಅವರು ಮಾತನಾಡಿದರು. ನಿಮ್ಮ ಬದುಕು ಹಾಗೂ ವೃತ್ತಿಯನ್ನು ಪ್ರೀತಿಸಬೇಕು. ಪರಿಸರಕ್ಕೆ ಸ್ಪಂದಿಸಬೇಕು. ಸೂಕ್ಷ್ಮವಾಗಿ ಗ್ರಹಿಸುತ್ತಿರಬೇಕು. ಓದು ನಿರಂತರವಾಗಿರಬೇಕು. ಪ್ರವೃತ್ತಿಯಲ್ಲಿ ಸೃಜನಶೀಲತೆ ಇರಬೇಕು. ವೃತ್ತಿಯನ್ನು ಸರಳ ಎಂದು ತಿಳಿದು, ಕಷ್ಟಪಟ್ಟು ಶ್ರಮಿಸಿದಾಗ ಯಶಸ್ಸು ನಿಮ್ಮೆಡೆಗೆ ಬರುತ್ತದೆ ಎಂದರು. ಪತ್ರಿಕೋದ್ಯಮವು ಹಲವಾರು ಮಜಲುಗಳನ್ನು ದಾಟಿ ವ್ಯಾಪಿಸಿದೆ. ಪತ್ರಿಕೆ, ಟಿವಿ, ಸುದ್ದಿ, ಮನೋರಂಜನೆ, ನವಮಾಧ್ಯಮ ಹೀಗಾಗಿ ಸಾವಿರಾರು ಅವಕಾಶಗಳು ಸೃಷ್ಟಿಯಾಗಿವೆ. ಇಲ್ಲಿನ ಯಾವುದೇ ಕ್ಷೇತ್ರದಲ್ಲಿ ಯಶಸ್ಸು ಪಡೆಯಬೇಕಾದರೆ, ಯಶಸ್ಸು, ಪರಿಶ್ರಮ, ತಾಳ್ಮೆ ಹಾಗೂ ಸ್ಪಂದನೆ ಅತಿಮುಖ್ಯ ಎಂದರು. ಮನೋರಂಜನಾ ಮಾಧ್ಯಮದಲ್ಲಿ ಪ್ರತಿ…

Read More