Author: admin

ತುಳು ರಂಗಭೂಮಿಯಲ್ಲಿ ದಾಖಲೆ ಬರೆದ ವಿಜಯ್‌ ಕುಮಾರ್‌ ಕೊಡಿಯಾಲ್‌ಬೈಲ್‌ ನಿರ್ದೇಶನದ “ಶಿವದೂತೆ ಗುಳಿಗೆ’ ತುಳು ನಾಟಕ ಈಗ ಸೀಮೋಲ್ಲಂಘನಕ್ಕೆ ಅಣಿಯಾಗಿದೆ. ಕರಾವಳಿಯಾದ್ಯಂತ ಜನಮೆಚ್ಚುಗೆ ಪಡೆದಿದ್ದ “ಶಿವದೂತೆ ಗುಳಿಗೆ’ ನಾಟಕ ಬಳಿಕ ರಾಜ್ಯದ ವಿವಿಧ ಭಾಗಗಳು, ಇತ್ತೀಚೆಗೆ ಹೊರರಾಜ್ಯದಲ್ಲಿಯೂ ಯಶಸ್ವಿಯಾಗಿದ್ದು, ಈಗ ವಿದೇಶದಲ್ಲಿ ಪ್ರದರ್ಶನಕ್ಕೆ ಸಿದ್ಧವಾಗಿದೆ. 2020 ಜ. 2ರಂದು ಮೊದಲ ಪ್ರದರ್ಶನ ಕಂಡ ಈ ನಾಟಕದ 423 ಹಾಗೂ 424ನೇ ಪ್ರದರ್ಶನ ಮಾ. 19ರಂದು ಅಪರಾಹ್ನ 2.30 ಹಾಗೂ ಸಂಜೆ 6 ಗಂಟೆಗೆ ದುಬಾೖಯ ಅಲ್‌ ನಸರ್‌ ಲಿಸರೆಲ್ಯಾಂಡ್ ನ‌ಲ್ಲಿ ನಡೆಯಲಿದೆ. ಜತೆಗೆ ಕುವೈತ್‌, ಕತಾರ್‌, ಬಹ್ರೈನ್‌ನಲ್ಲಿಯೂ ಪ್ರಯೋಗಕ್ಕೆ ಸಿದ್ಧತೆ ನಡೆಯುತ್ತಿದೆ. ಮಸ್ಕತ್‌ನಲ್ಲಿ 480ನೇ ಪ್ರದರ್ಶನ ನಾಟಕ ಮೇ 12ರಂದು ಮಸ್ಕತ್‌ನ ರೂಮಿಯ ಅಲ್‌ ಫಲಾಜ್‌ ಹೊಟೇಲ್‌ನ ಗ್ರಾÂಂಡ್‌ ಹಾಲ್‌ನಲ್ಲಿ ಕನ್ನಡ ಹಾಗೂ ತುಳುವಿನಲ್ಲಿ 2 ಪ್ರದರ್ಶನ ಕಾಣಲಿದೆ. ಇದು 479 ಹಾಗೂ 480ನೇ ಪ್ರದರ್ಶನ. “ಕಾಂತಾರ’ ಸಿನೆಮಾದಲ್ಲಿ “ಗುರುವ’ ನಾಗಿ ಮಿಂಚಿರುವ ಸ್ವರಾಜ್‌ ಶೆಟ್ಟಿ ಶಿವದೂತೆ ಗುಳಿಗೆ ನಾಟಕದಲ್ಲಿ “ಗುಳಿಗ’ನಾಗಿ…

Read More

ಮುಂಬಯಿ (ಆರ್‍ಬಿಐ), ಜ.25: ಬೃಹನ್ಮುಂಬಯಿ ಚೆಂಬೂರು ಛೆಡ್ಡಾ ನಗರದಲ್ಲಿನ ಶ್ರೀನಾಗ ಸುಬ್ರಹ್ಮಣ್ಯ ಪ್ರತಿಷ್ಠಾಪಿತ ಶ್ರೀ ಸುಬ್ರಹ್ಮಣ್ಯ ಮಠದಲ್ಲಿ ಜರುಗುತ್ತಿರುವ ಬ್ರಹ್ಮಕಲಶಾಭಿಷೇಕ ಸಮಾರಂಭದಲ್ಲಿ ಉತ್ತರ ಮುಂಬಯಿ ಲೋಕಸಭಾ ಕ್ಷೇತ್ರದ ಸಂಸದ ಗೋಪಾಲ್ ಸಿ.ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾಸಂಸ್ಥಾನವಾದ ಶ್ರೀ ಸಂಪುಟ ನರಸಿಂಹಸ್ವಾಮೀ ಶ್ರೀ ಕ್ಷೇತ್ರ ಸುಬ್ರಹ್ಮಣ್ಯದ ಪೀಠಾಧಿಪತಿ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಅವರು ಗೋಪಾಲ್ ಶೆಟ್ಟಿ ಮತ್ತು ಉಷಾ ಜಿ.ಶೆಟ್ಟಿ ದಂಪತಿ ಹಾಗೂ ಅತಿಥಿಯಾಗಿದ್ದ ಶ್ರೀ ಗೋಪಾಲ್ ಸಿ.ಶೆಟ್ಟಿ (ಸಂಸದ) ತುಳು ಕನ್ನಡಿಗರ ಅಭಿಮಾನಿ ಬಳಗದ ಸಂಚಾಲಕ, ಮಹಾನಗರದಲ್ಲಿನ ಹೆಸರಾಂತ ಸಂಘಟಕ ಎರ್ಮಾಳ್ ಹರೀಶ್ ಶೆಟ್ಟಿ, ಕನ್ನಡ ಸಂಘ ಸಾಂತಾಕ್ರೂಜ್ ಅಧ್ಯಕ್ಷೆ ಸುಜತಾ ಆರ್.ಶೆಟ್ಟಿ ಉಪಸ್ಥಿತರಿದ್ದು ಗಣ್ಯರನ್ನು ಶಾಲು ಹೊದಿಸಿ, ಫಲಪುಷ್ಪ, ಸ್ಮರಣಿಕೆಗಳನ್ನೀಡಿ ಸನ್ಮಾನಿಸಿ ಶುಭಾರೈಸಿ ಮಂತ್ರಾಕ್ಷತೆಯನ್ನಿತ್ತು ಅನುಗ್ರಹಿಸಿದರು. ಅರುಣಾ ನಾಗೇಂದ್ರ ಆಚಾರ್ಯ ದಂಪತಿ ಸಂಸದರನ್ನು ಬರಮಾಡಿ ಕೊಂಡರು. ವಿದ್ವಾನ್ ಹೆರ್ಗ ರವೀಂದ್ರ ಭಟ್ ಕಾರ್ಯಕ್ರಮ ನಿರೂಪಿಸಿದರು. ಶ್ರೀಪ್ರಸಾದ್ ಭಟ್ ಉಪಸ್ಥಿತರಿದ್ದು ಸುಬ್ರಹ್ಮಣ್ಯ ಮಠದ ಮುಂಬಯಿ ಶಾಖೆಯ…

Read More

ಇತ್ತೆದ ಕಾಲೊಡು ಮದ್ಮೆದ ಆಮಂತ್ರಣ ಪತ್ರೊಡು ” ಆಶೀರ್ವಾದವೇ ಉಡುಗೊರೆ ” ಅತ್ತಿಡಾ “ಉಡುಗೊರೆ ಸ್ವೀಕರಿಸುವುದಿಲ್ಲ” ಪನ್ಪಿನ ಒಂಜಿ ವಾಕ್ಯ ಉಪ್ಪೊಂಡೇ. ಅಂಚಾದುಪ್ಪುನಗ ಉಡುಗೊರೆದ ಬಗ್ಗೆ ಒಂತೆ ಅಜಕೆ ಪಾತೆರುವೆ. ದುಂಬುದ ಬಂಗದ ಕಾಲೊಡು ಪೊಣ್ಣಗ್ ಆವಾಡ್ ಆಣಗ್ ಆವಡ್ ಮದ್ಮೆ ಮಲ್ಪರೆ ಭಾರೀ ಬಂಗ ಪಂಡ್ಡಾ ದೊಡ್ಡುದ ಸಮಸ್ಯೆ ಇತ್ತಿಂಡ್. ಅಯಿಡ್ದಾತ್ರ” ಹನಿಗೂಡಿ ಹಳ್ಳ” ಪನ್ಪಿನ ಗಾದೆದಲೆಕ ಮದ್ಮೆದ ಲೇಸ್ ದೆಪ್ಪುನಕಲೆಗ್ ಎಂಕಲೆರ್ದಿಲಾ ಒಂತೆ ಸಹಾಯ ಆವಾಡ್ ಪನ್ದ್ ಮದ್ಮೆಮೆದ ಮಂಟಪೊಡು ಮದ್ಮೆಯೆ, ಮದ್ಮಲೆಗ್ ದೊಡ್ಡು ಕೊರ್ಪಿನ ಪದ್ಧತಿ ಜಾರಿಡ್ ಬೈದಿಂಡ್. ದುಂಬು ದೊಡ್ಡು ಎಂಚಾ ಕೊರೊಂದಿತ್ತಿನಿ ಪಂಡ್ಡಾ ” ಕಂಚಿ ದೀಪಿನಿ ” ಪಂಡ್ದ್ ಹರಿವಾಣ ದೀದ್ ಅಯಿತ ಕೈತಲ್ ರಡ್ಡ್ ಜನ ಕುಲ್ಲುನು. ದೊಡ್ಡು ದೀಪನಕುಲು ಒರಿಯಡ ದೊಡ್ಡು ಕೊರ್ಪಿನಿ, ಆಯೆ ಮಾತೆರ್ಗ್ಲಾ ಕೇನುಲೆಕ ಜೋರುಡು ಲೆತ್ತಿದ್ ಪನ್ಪಿನಿ. ( ಉದಾಹರಣೆಗೆ- ಪಂಜ-ಮೊಗಪಾಡಿ ಶಿವಪ್ಪ ಶೆಟ್ರೆನ ರಡ್ಡ್ ರೂಪಾಯಿ😃) ಅವೊನು ಬೊಕ್ಕೊರಿ ಬೂಕುಡು ಬರೆಪಿನಿ. ಏರ್ ದೊಡ್ಡು…

Read More

ರಾಜ್ಯದ ಪ್ರತಿಷ್ಠಿತ ಸಂಸ್ಥೆಯಾದ ಎನ್‌ಐಟಿಕೆ ಸುರತ್ಕಲ್ ಇದರ ಆಡಳಿತ ಮಂಡಳಿಗೆ ಉದ್ಯಮಿ ಮತ್ತು ಸುಪ್ರಜಿತ್ ಗ್ರೂಪ್‌ನ ಸಂಸ್ಥಾಪಕ ಮತ್ತು ಅಧ್ಯಕ್ಷರಾದ ಕೆ. ಅಜಿತ್ ಕುಮಾರ್ ರೈ ಇವರನ್ನು ರಾಜ್ಯ ಸರಕಾರದ ಪ್ರತಿನಿಧಿಯಾಗಿ ನಾಮನಿರ್ದೇಶನ ಮಾಡಲಾಗಿದೆ. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್‌ನಲ್ಲಿ ಪದವಿ ಹಾಗೂ ಕೆನಡಾದ ಡಾಲ್‌ಹೌಸಿ ವಿಶ್ವವಿದ್ಯಾಲಯದಿಂದ ಕೈಗಾರಿಕಾ ಇಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರುತ್ತಾರೆ. ಇವರ ನೇತೃತ್ವದ ಸುಪ್ರಜಿತ್ ಗ್ರೂಪ್ ಆಫ್ ಕಂಪೆನಿಯು ಆಟೋಮೋಟಿವ್ ಲೈಟಿಂಗ್, ಹ್ಯಾಲೊಜೆನ್ ಬಲ್ಬ್‌ಗಳು ಮತ್ತು ಕೇಬಲ್ ತಯಾರಕ ಮತ್ತು ದ್ವಿಚಕ್ರ ಕೇಬಲ್ ಮಾರುಕಟ್ಟೆಯಲ್ಲಿ ಜಾಗತಿಕ ನಾಯಕ ಸಂಸ್ಥೆಯಾಗಿದ್ದು ಚೀನಾ, ಯುಎಸ್‌ಎ, ಮೆಕ್ಸಿಕೊ, ಇಂಗ್ಲೆಂಡ್, ಹಂಗೇರಿ, ಸ್ಲೊವೇನಿಯಾ, ಲಕ್ಸೆಂಬರ್ಗ್ ಮತ್ತು ಜರ್ಮನಿ ಸೇರಿದಂತೆ ವಿವಿಧ ದೇಶಗಳಲ್ಲಿ ವ್ಯವಹಾರ ಹೊಂದಿದೆ. ವಿದ್ಯಾರ್ಥಿ ವೇತನದ ಮೂಲಕ ಶಿಕ್ಷಣವನ್ನು ಮುಂದುವರಿಸಲು ವಿದ್ಯಾರ್ಥಿಗಳಿಗೆ ಹಣಕಾಸಿನ ನೆರವು, ಶಾಲೆಗಳು ಮತ್ತು ಅಂಗನವಾಡಿ ಕೇಂದ್ರಗಳ ಉನ್ನತೀಕರಣದಲ್ಲಿ ನೆರವು, ವಿಟ್ಲದ ಶಾಲೆಗೆ ಪೀಟೋಪಕರಣ ಸಹಿತ ಕಟ್ಟಡ ನಿರ್ಮಾಣ, ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಬೆಂಬಲ, ವಿವಿಧ…

Read More

ಮೂಡುಬಿದಿರೆ: ‘ಹಾಸ್ಯ ಬದುಕನ್ನು ಹಗುರವಾಗಿಸುತ್ತದೆ. ಸೈಬರ್ ಹಾಸ್ಯವು ನಗು ಮತ್ತು ಅರಿವಿನ ಕಾರ್ಯಕ್ರಮವಾಗಿದೆ’ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಹೇಳಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಳ್ವಾಸ್ಎಂ ಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜು, ಆಳ್ವಾಸ್ ಪದವಿ ಕಾಲೇಜು, ಆಳ್ವಾಸ್ ಹೋಮಿಯೋಪತಿ ಕಾಲೇಜುಗಳ ಕನ್ನಡ ಸಂಘ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ(ಕೆಎಸ್‍ಸಿಎಸ್‍ಟಿ) ಹಾಗೂ ಸೈಸೆಕ್ ಸಹಯೋಗದಲ್ಲಿ ಭಾನುವಾರ ಸಂಜೆ ಕಾಲೇಜು ಆಡಿಟೋರಿಯಂನಲ್ಲಿ ನಡೆದ ‘ಸೈಬರ್ ಹಾಸ್ಯ ಸಂಜೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ‘ಸಾಮಾಜಿಕ ಮಾಧ್ಯಮಕ್ಕೆ ಸಮಾಜ ಕಟ್ಟುವ ಹೊಣೆಗಾರಿಕೆ ಇದೆ. ಆದರೆ, ಕೆಲವೊಮ್ಮೆ ಹಾಲಿಗೆ ಹುಳಿ ಹಿಂಡುವ ಕೆಲಸ ನಡೆಯುವುದೇ ಹೆಚ್ಚು’ ಎಂದು ಅಭಿಪ್ರಾಯಪಟ್ಟ ಅವರು, ‘ಕೆಎಸ್‍ಸಿಎಸ್‍ಟಿ ಹಾಗೂ ಸೈಸೆಕ್ ಸಹಯೋಗದಲ್ಲಿ ಆಳ್ವಾಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕಾರ್ಯಕ್ರಮ ನಡೆದಿರುವುದು ಸಂತಸ ನೀಡಿದೆ’ ಎಂದರು. ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿ ಸುಳ್ಳು ರಾರಾಜಿಸುತ್ತಿದ್ದು, ಇಂತಹ ಸುದ್ದಿಗೆ ವಿದ್ಯಾರ್ಥಿಗಳು ಬಲಿಪಶು ಆಗಬಾರದು. ಎಚ್ಚರಿಕೆ ಅವಶ್ಯ ಎಂದರು.…

Read More

ತುಳುನಾಡ ರಕ್ಷಣಾ ವೇದಿಕೆ ಕಾಪು ವಲಯದ ಮಹಿಳಾ ಘಟಕವನ್ನು ಹಿರಿಯಡ್ಕದಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿದ ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕಾಧ್ಯಕ್ಷರಾದ ಯೋಗೀಶ್ ಶೆಟ್ಟಿಯವರು ಮಾತನಾಡುತ್ತಾ, ಪ್ರಸ್ತುತ ಜಾತಿ ಧರ್ಮ, ಪಕ್ಷ ಎನ್ನುವುದರ ಬಗ್ಗೆಯೆ ಹೋರಾಡುತ್ತೇವೆ ವಿನಃ ಪ್ರಾದೇಶಿಕವಾಗಿ ಒಂದಾಗುವಲ್ಲಿ ವಿಫಲರಾಗುತ್ತಿದ್ದೇವೆ ಅದ್ದರಿಂದ ನಮ್ಮ ತುಳುನಾಡು ರಕ್ಷಣಾ ವೇದಿಕೆ ತುಳುವರ ನೆಲ ಜನ ಹಾಗೂ ಸಂಸ್ಕತಿ ಉಳಿವಿಗಾಗಿ ಕಟಿಬದ್ಧವಾಗಿದೆ. ನಮ್ಮೂರಿನಲ್ಲಿರುವ ಬ್ಯಾಂಕುಗಳಲ್ಲಿ, ಕೈಗಾರಿಕಾ ಕ್ಷೇತ್ರದಲ್ಲಿ ನಮ್ಮವರಿಗೆ ಅವಕಾಶ ಸಿಗಬೇಕು ಆಗ ಮಾತ್ರ ನಮ್ಮ ಪ್ರಾದೇಶಿಕತೆ ಉಳಿಯುತ್ತದೆ. ಇಲ್ಲದಿದ್ದಲ್ಲಿ ನಮ್ಮ ಮುಂದಿನ ಪೀಳಿಗೆ ತುಂಬಾ ತೊಂದರೆಯನ್ನು ಅನುಭವಿಸಬೇಕಾತ್ತದೆ. ಈ ನಿಟ್ಟಿನಲ್ಲಿ ಮಾತೆಯರು ಒಂದಾಗಬೇಕು ಅನ್ನುವ ಕಿವಿಮಾತನ್ನು ಹೇಳಿದರು. ವೇದಿಕೆಯಲ್ಲಿ ತುಳುನಾಡ ರಕ್ಷಣಾ ವೇದಿಕೆಯ ಉಡುಪಿ ಜಿಲ್ಲಾ ವೀಕ್ಷಕರಾದ ಫ್ರ್ಯಾಂಕಿ ಡಿ.ಸೋಜಾ, ಕೇಂದ್ರ ತುಳುನಾಡ ರಕ್ಷಣಾ ವೇದಿಕೆಯ ಸಂಘಟನಾ ಕಾರ್ಯದರ್ಶಿ ಪ್ರಶಾಂತ್ ಭಟ್, ಪಂಚಾಯತ್ ಸದಸ್ಯರಾದ ಲತಾ, ತುಳುನಾಡ ರಕ್ಷಣಾ ವೇದಿಕೆಯ ಉಡುಪಿ ತಾಲೂಕು ಗೌರವಾಧ್ಯಕ್ಷರಾದ ರವಿ ಆಚಾರ್, ತು.ರ.ವೆ. ಉಡುಪಿ ತಾಲೂಕು ಅಧ್ಯಕ್ಷರಾದ ಕೃಷ್ಣ…

Read More

ವಿದ್ಯಾಗಿರಿ: ‘ಪಿಯುಸಿ ಶಿಕ್ಷಣವು ಬದುಕಿನ ಮಹತ್ವದ ಅಡಿಪಾಯ. ಈ ಹಂತದಲ್ಲಿ ಸಮರ್ಪಕ ಮಾರ್ಗದರ್ಶನದಿಂದ ಒಳ್ಳೆಯ ವ್ಯಕ್ತಿತ್ವ ಬೆಳೆಯಲು ಸಾಧ್ಯ’ ಎಂದು ವಾಗ್ಮಿ, ನಿವೃತ್ತ ಪ್ರಾಧ್ಯಾಪಕ ಡಾ.ಕೆ.ಪಿ.ಪುತ್ತೂರಾಯ ಹೇಳಿದರು. ಆಳ್ವಾಸ್ ಪದವಿಪೂರ್ವ ಕಾಲೇಜಿನ ಪ್ರಥಮ ಪಿಯು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಪ್ರೇರಣಾತ್ಮಕ ಕಾರ್ಯಕ್ರಮ- ‘ಸ್ಪೂರ್ತಿ’ಯಲ್ಲಿ ಅವರು ಮಾತನಾಡಿದರು. ಪೋಷಕರ ಕನಸನ್ನು ಈಡೇರಿಸುವುದೂ ವಿದ್ಯಾರ್ಥಿಗಳ ಕನಸಾಗಬೇಕು. ಪಠ್ಯದ ಜೊತೆ ಅನುಭವವೂ ನಮಗೆ ಶಿಕ್ಷಣ ನೀಡುತ್ತದೆ. ಅನುಭವವೂ ಒಳ್ಳೆಯ ಗುರು. ವಿದ್ಯಾರ್ಥಿ ಜೀವನವು ನಮ್ಮನ್ನು ಮಾನವನಾಗಿ ಪರಿವರ್ತಿಸುತ್ತದೆ ಎಂದರು. ‘ಯಶಸ್ಸಿಗೆ ಬೌದ್ಧಿಕ ಪ್ರಗತಿ ಅವಶ್ಯ. ಶಿಕ್ಷಣಕ್ಕೆ ಜಾತಿ ಇಲ್ಲ. ಜಾತಿಗೂ ಜ್ಞಾನಕ್ಕೂ ಸಂಬಂಧವಿಲ್ಲ. ಎಲ್ಲರೂ ಜ್ಞಾನ ಪಡೆಯಲು ಅರ್ಹರು. ಆದರೆ, ಕಲಿಕೆಯ ಹಸಿವು ಇರಬೇಕು. ಅದು ವ್ಯಕ್ತಿತ್ವ ವಿಕಸನಕ್ಕೂ ರಹದಾರಿಯಾಗುತ್ತದೆ’ ಎಂದರು. ಪ್ರಾಂಶುಪಾಲ ಪ್ರೋ ಎಂ ಸದಾಕತ್, ಉಪ ಪ್ರಾಂಶುಪಾಲೆ ಜಾನ್ಸಿ, ವಿವಿಧ ವಿಭಾಗಗಳ ಸಂಯೋಜಕರು ಹಾಗೂ ಡೀನ್‍ಗಳು ಇದ್ದರು. ಕನ್ನಡ ವಿಭಾಗದ ಮುಖ್ಯಸ್ಥ ವೇಣುಗೋಪಾಲ್ ಕಾರ್ಯಕ್ರಮ ನಿರ್ವಹಿಸಿದರು.

Read More

ಮಿಜಾರು: ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನ (ಎಐಇಟಿ) ಕೃಷಿ ಎಂಜಿನಿಯರಿಂಗ್ ವಿಭಾಗವು ಬೆಂಗಳೂರಿನ ಬುಲ್ಲರ್ ಇಂಡಿಯಾ ಕಂಪನಿ ಜೊತೆ ಸೋಮವಾರ ಒಡಂಬಡಿಕೆಗೆ ಸಹಿ ಹಾಕಿತು. ಬುಲ್ಲರ್ ಇಂಡಿಯಾ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕರಾದ ಪ್ರಶಾಂತ್ ಗೋಖಲೆ ಹಾಗೂ ಕಂಪೆನಿಯ ವೆಂಕಟೇಶ್ ಮತ್ತು ರವೀಂದ್ರ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ, ಕೃಷಿ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಶಶಿಕುಮಾರ್, ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಸತ್ಯನಾರಾಯಣ ಸಮ್ಮುಖದಲ್ಲಿ ಒಡಂಬಡಿಕೆ ಮಾಡಿಕೊಳ್ಳಲಾಯಿತು. ಈ ಒಡಂಬಡಿಕೆ ಪ್ರಕಾರ ಬುಲ್ಲರ್ ಇಂಡಿಯಾ ಕಂಪೆನಿಯ ರೈಸ್ ಮಿಲ್ಲಿಂಗ್ (ಅಕ್ಕಿ ಗಿರಣಿ) ತಂತ್ರಜ್ಞಾನ ತರಬೇತಿ ಮತ್ತು ಪ್ರಮಾಣೀಕರಣದ ಕೋರ್ಸ್ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ಒಪ್ಪಿಗೆ ಸೂಚಿಸಲಾಯಿತು. ಅಕ್ಕಿ ಗಿರಣಿ ತಂತ್ರಜ್ಞಾನ ಕುರಿತು ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಬುಲ್ಲರ್ ಇಂಡಿಯಾ ಕಂಪೆನಿಯು ತಾಂತ್ರಿಕ ಉಪನ್ಯಾಸ, ಕಾರ್ಯಾಗಾರ ಹಮ್ಮಿಕೊಳ್ಳುವುದು. ಆಹಾರ ಸಂಸ್ಕರಣಾ ತಂತ್ರಜ್ಞಾನದ ಕುರಿತು ಎಐಇಟಿ ವಿದ್ಯಾರ್ಥಿಗಳು ಹಾಗೂ ಮೇಳಗಳ ಸಂದರ್ಭದಲ್ಲಿ ಸಂವಾದ ನಡೆಸಲು ಬುಲ್ಲರ್…

Read More

ಕರಾವಳಿಯ ಬಹುಮುಖ ಪ್ರತಿಭೆ ನಟ, ನಿರ್ದೇಶಕ ರಾಜ್‌ ಬಿ ಶೆಟ್ಟಿ ಅವರ ಹೊಸ ಸಿನಿಮಾದ ರಿಲೀಸ್‌ ಡೇಟ್ ಅನೌನ್ಸ್‌ ಆಗಿದೆ. ಹೊಸ ಸಿನಿಮಾವೆಂದರೆ ಇದು ಪಕ್ಕಾ ರಾಜ್‌ ಬಿ ಶೆಟ್ಟಿ ಅಭಿಮಾನಿಗಳು ಇಷ್ಟಪಡುವ ಜಾನರ್‌ ವುಳ್ಳ ಚಿತ್ರ. ‘ಗರುಡ ಗಮನ ವೃಷಭ ವಾಹನʼ ಸಿನಿಮಾ ಹಿಟ್‌ ಆಗಿತ್ತು. ಸಿನಿಮಾದ ಕೆಂಟೆಂಟ್‌ ಭಿನ್ನವಾಗಿತ್ತು. ಕರಾವಳಿಯ ಹುಲಿವೇಷ, ವಾತಾವರಣ ಭಾಷಾ ಸೊಗಡು ಸಿನಿ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಇದೇ ತಂಡವನ್ನಿಟ್ಟುಕೊಂಡು ರಾಜ್‌ ಬಿ ಶೆಟ್ಟಿ ಮತ್ತೊಂದು ಸಿನಿಮಾವನ್ನು ಅನೌನ್ಸ್‌ ಮಾಡುವುದರ ಬಗ್ಗೆ ಇತ್ತೀಚೆಗಷ್ಟೇ ಹೇಳಿದ್ದರು. ರಾಜ್‌ ಬಿ ಶೆಟ್ಟಿ ಅವರ ʼ ಲೈಟರ್ಸ್ ಬುದ್ಧ ಫಿಲ್ಮ್ʼ ʼ ಅಗಸ್ತ್ಯ ಫಿಲ್ಮ್ಸ್ʼ ಅವರೊಂದಿಗೆ ಜಂಟಿಯಾಗಿ ಬರುತ್ತಿರುವ ಸಿನಿಮಾಕ್ಕೆ “ಟೋಬಿ “ ಟೈಟಲ್‌ ಇಡಲಾಗಿದೆ. ಪೋಸ್ಟರ್‌ ನಲ್ಲಿ ಮೊದಲು ತಿಳಿಸಿದಂತೆ ಇದೊಂದು ಆ್ಯಕ್ಷನ್‌ ಜಾನರ್‌ ವುಳ್ಳ ಸಿನಿಮಾವಾಗಿರಲಿದೆ. ʼಟೋಬಿ” ಸಿನಿಮಾದ ಟೈಟಲ್‌ ನ್ನು ಈ ಹಿಂದೆಯೇ ಫಿಕ್ಸ್‌ ಮಾಡಲಾಗಿತ್ತು. ಇದೀಗ ಸಿನಿಮಾದ ರಿಲೀಸ್‌ ಡೇಟ್‌ ನ್ನು ರಿವೀಲ್‌…

Read More

ಯಕ್ಷಗಾನದಲ್ಲಿ ಮಹಿಳೆಯರು, ಮಕ್ಕಳು ತೊಡಗಿಕೊಳ್ಳಬೇಕು. ಅವರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಮಹಿಳಾ ಘಟಕ ಕೆಲಸ ಮಾಡುವಂತಾಗಲಿ. ಇದಕ್ಕೆ ಪ್ರತೀ ವರ್ಷ ಪಟ್ಲ ಫೌಂಡೇಶನ್ ಟ್ರಸ್ಟ್ ಗೆ ಐದು ಲಕ್ಷ ದೇಣಿಗೆಯನ್ನು ನೀಡುವುದಾಗಿ ಪಟ್ಲ ಫೌಂಡೇಶನ್ ಟ್ರಸ್ಟ್ ನ ಪ್ರಧಾನ ಸಂಚಾಲಕ, ಉದ್ಯಮಿ ಶಶಿಧರ ಶೆಟ್ಟಿ ಬರೋಡಾ ತಿಳಿಸಿದರು. ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟಿನ ಕೇಂದ್ರೀಯ ಮಹಿಳಾ ಘಟಕದ “ಪ್ರಮುದಾ ಪ್ರಭಾ” ವಾರ್ಷಿಕ ಸಂಭ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಇನ್ನೋರ್ವ ಮುಖ್ಯ ಅತಿಥಿ ಟ್ರಸ್ಟ್ ನ ಗೌರವಾಧ್ಯಕ್ಷ ಕನ್ಯಾನ ಸದಾಶಿವ ಶೆಟ್ಟಿ ಮಾತನಾಡಿ ಪಟ್ಲ ಫೌಂಡೇಶನ್ ಟ್ರಸ್ಟ್ ಗೆ ಮಹಿಳಾ ಘಟಕ ಶಕ್ತಿ ತುಂಬುವ ಕೆಲಸ ಮಾಡುತ್ತಿದೆ. ಮಹಿಳಾ ಘಟಕ ಇನ್ನಷ್ಟು ಉತ್ತಮ ಕೆಲಸ ಕಾರ್ಯಗಳನ್ನು ಮಾಡುವಂತಾಗಲಿ ಎಂದರು. ಇನ್ನೋರ್ವ ಮುಖ್ಯ ಅತಿಥಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ, ಟ್ರಸ್ಟ್ ನ ಪ್ರಧಾನ ಸಂಚಾಲಕ ಐಕಳ ಹರೀಶ್ ಶೆಟ್ಟಿ ಮಾತನಾಡಿ ಮಹಿಳಾ ಘಟಕವು ಪಟ್ಲ…

Read More