Author: admin
ಕೆ. ಸಂತೋಷ್ ಶೆಟ್ಟಿ ಮೊಳಹಳ್ಳಿ ,ಕುಂದಾಪುರ ಉಡುಪಿ ಜಿಲ್ಲೆ. (ಪತ್ರಕರ್ತರು & ಮಾಧ್ಯಮ ವಿಶ್ಲೇಷಕರು) “ಗುರು ಬ್ರಹ್ಮ -ಗುರು ವಿಷ್ಣು – ಗುರು ದೇವೋ -ಮಹೇಶ್ವರ ಗುರು ಸಾಕ್ಷಾತ್ ಪರಬ್ರಹ್ಮ – ತಸ್ಮೈ ಶ್ರೀ ಗುರುವೇ ನಮಃ..” ಇದು ನಾವು ಗುರುಗಳಿಗೆ ಕೊಡುವಂತಹ ಶ್ರೇಷ್ಠವಾದಂತ ಗೌರವ, ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ವಿಧ್ಯರ್ಜನೆ ಮಾಡುವಂತಹ ಶಿಕ್ಷಕರು ದೇವರೆಂದು ಪೋಷಕರು ನಂಬಿರುತ್ತಾರೆ . ಬುದ್ಧಿವಂತರ ಜಿಲ್ಲೆಯ, ಉಡುಪಿ ಜಿಲ್ಲೆಯಲ್ಲಿ ಶಿಕ್ಷಕರಿಗೆ ಅವಮಾನವಾಗುವಂತಹ ರೀತಿಯಲ್ಲಿ ಈ ಶಿಕ್ಷಕರ ವರ್ತನೆ ಸಮಾಜಕ್ಕೆ ಮುಜುಗರ ತಂದಿದೆ. ಅದಲ್ಲದೆ ಶ್ರೇಷ್ಠ ಶಿಕ್ಷಕರ ಪಾಲಿಗೆ ಇದು ಕಳಂಕವಾಗಿದೆ. ಆದರೆ ಪಾನಮುಕ್ತರಾದಂತಹ ಶಿಕ್ಷಕರು ಶಾಲೆಯಲ್ಲಿ ಈ ರೀತಿ ವರ್ತನೆ ಮಾಡಿರುವುದು ಸಮಾಜ ತಲೆತಗ್ಗಿಸುವಂತಹಾಗಿದೆ. ಮಕ್ಕಳಿಗೆ ಬೇಕಾದ ಹಲವಾರು ಪಠ್ಯಪುಟ್ಯಂತರ ಸೂಟಿಕೆಗಳನ್ನ ಕಾಲಕ್ಕೆ ತಕ್ಕಂತೆ ಸಮರ್ಪಕವಾಗಿ ನೀಡುವ ಶಿಕ್ಷಕರ ಪಾಡು ಹೀಗಾದರೆ ವಿದ್ಯಾರ್ಥಿಗಳ ಪರಿಸ್ಥಿತಿಯಂತೂ ಎಂದು ಪೋಷಕರು ಮರುಮರು ಮರುಗುತ್ತಿದ್ದಾರೆ ಉಡುಪಿ ಜಿಲ್ಲೆಯಲ್ಲಿ ನಡೆದಂತಹ ಘಟನೆ ದೇಶಾದ್ಯಂತ ಸಾಮಾಜಿಕ ಜಾಲತಾಣಗಳಲ್ಲಿ ಚುಂಗಮಹಾಗೆ ಎಳೆಯಲಾಗುತ್ತಿದೆ ಆದರೆ ಉಡುಪಿ…
ಉಡುಪಿ ಜಿಲ್ಲೆಯ ಪುಟ್ಟ ಹಳ್ಳಿಯೊಂದರ ಬಡ ಕುಟುಂಬವೊಂದರಲ್ಲಿ ಜನಿಸಿದ ರಾಜೇಂದ್ರ ವಿ ಶೆಟ್ಟಿ ಬಾಲ್ಯದಲ್ಲೇ ಬಡತನದ ಬೇಗೆ ಅನುಭವಿಸಿದರು. ಅವರ ತಂದೆ ತಾಯಿ ಕುಟುಂಬದೊಂದಿಗೆ ಉಡುಪಿಯಿಂದ ಹುಬ್ಬಳ್ಳಿಗೆ ವಲಸೆ ಬಂದಾಗ ರಾಜೇಂದ್ರ ಶೆಟ್ಟಿಯವರು ಬಾಲಕನಾಗಿದ್ದರು. ಹೇಗೋ ಕಷ್ಟಪಟ್ಟು 8ನೇ ತರಗತಿಯವರೆಗೆ ಓದಿದ ಅವರು ಉದ್ಯೋಗಕ್ಕಾಗಿ ಮನೆಯಲ್ಲಿ ಯಾರಿಗೂ ಹೇಳದೆ ರೈಲು ಹತ್ತಿದರು. ಅದು ಹೋಗಿ ನಿಂತದ್ದು ಮುಂಬೈಯಲ್ಲಿ, ಅಲ್ಲಿ ರೈಲ್ವೇ ಸ್ಟೇಷನ್ ಅಕ್ಕಪಕ್ಕದಲ್ಲಿ ಚಹಾ ಮಾರುವ ಕೆಲಸ ಮಾಡಿದರು. ಆರಂಭದಲ್ಲಿ ಬೀದಿಬದಿಯಲ್ಲಿ ಮಲಗಿ ಕೆಲಸ ಹುಡುಕುತ್ತಾ ಅಲ್ಲಿನ ಹೊಟೇಲ್ಗಳಿಗೆ ಕೆಲಸಕ್ಕಾಗಿ ಅಲೆದಾಡಿದರು. ಮುಂದೆ ಅವರಿಗೆ ಹೊಟೇಲ್ನಲ್ಲಿ ಕ್ಲೀನರ್ ಕೆಲಸ ಸಿಗುತ್ತದೆ. ವಿವಿಧ ಹೋಟೆಲ್ಗಳಲ್ಲಿ ಅಡುಗೆ ಮನೆಯ ಕೆಲಸ, ಕ್ಲೀನರ್, ವೈಟರ್, ಕ್ಯಾಪ್ಟನ್ನಂತಹ ನಾನಾ ತರಹದ ಕೆಲಸಗಳನ್ನು ಮಾಡಿದರು. ಆ ಬಳಿಕ ದೇವತಾ ಮನುಷ್ಯರಂಥ ಮಾಲಕರೊಬ್ಬರು ಸಿಕ್ಕಿದ್ದರಿಂದ ಅವರ ಹೊಟೇಲ್ನಲ್ಲಿ 12 ವರ್ಷಗಳ ಕಾಲ ಮ್ಯಾನೇಜರ್ ಆಗಿ ದುಡಿದರು. ಮುಂಬೈಗೆ ಬಂದಾಗ ಅವರಿಗೆ 13ರಿಂದ 14 ವರ್ಷ ಆಗಿತ್ತು. ಅಲ್ಲಿ 18 ವರ್ಷಗಳ…
” ಅನ್ನ ವನ್ನ ನೋಡಿದ್ದಿರಾ ” ? ಅಂತ ಯಾರಲ್ಲಾದರೂ ಪ್ರಶ್ನೆ ಮಾಡಿದರೆ ಇಲ್ಲ ಅನ್ನುವವರು ಯಾರೂ ಸಿಗಲಾರರು. ಭತ್ತ ನೋಡಿದ್ದಿರಾ ? ಅಂದರೆ ಶೇಖಡಾ ತೊಂಬತ್ತೈದು ಜನ “ಎಸ್ ” ಅನ್ನಬಹುದು. ಗದ್ದೆಯಲ್ಲಿ ಭತ್ತದ ತೆನೆ ನೋಡಿದ್ದೀರಾ ? ಅಂದಾಗ ಶೇಖಡಾ ಎಂಬತ್ತೊಂಬತ್ತು ಜನ ಚಿತ್ರದಲ್ಲಾದರೂ ನೋಡಿದ್ದೇನೆ ಅನ್ನಬಹುದು. ಭತ್ತದ ಹೂ ನೋಡಿದ್ದೀರಾ ಅದು ಎಲ್ಲಿರುತ್ತದೆ, ಹೂ ಎಲ್ಲಿಂದ ಅರಳುತ್ತದೆ, ಹೂವಿಗೆ ಎಷ್ಟು ಎಸಳುಗಳಿರುತ್ತವೆ ಎಷ್ಟು ದಿನ ಅರಳಿರುತ್ತದೆ ಅಂತ ಕೇಳಿದರೆ ಬೆರಳೆಣಿಕೆಯಷ್ಟು ಜನ ಮಾತ್ರ ಉತ್ತರಿಸಿಯಾರೋ ಎನೋ. ಬೇಡುವಿನ ಕಥೆಯನ್ನು ನೀವು ಓದಿರಬಹುದು. ಆತ ಗದ್ದೆ ಬಿತ್ತಿದ್ದು ಜುಲೈ 19 ಮಂಗಳವಾರ ಮಧ್ಯಾಹ್ನ 1.53 ಕ್ಕೆ. ಅಂದರೆ ಬಿತ್ತಿದ ದಿನದಿಂದ ಎಂಭತ್ತೆರಡು ದಿನಗಳಿಂದ ಒಂದು ವಾರ ಈ ಭತ್ತದ ತಳಿ ಹೂ ಬಿಟ್ಟಿದೆ ಅಂದಾಯಿತು. ಭತ್ತ ಹೂಬಿಡುವ ಒಂದೆರಡು ವಾರ ಮೊದಲೇ ಅದರ ಗರ್ಭದಲ್ಲಿ ಎಳೆ ತೆನೆ ಸುಪ್ತಾವಸ್ತೆಯಲ್ಲಿರುತ್ತದೆ. ಆಡುಭಾಷೆಯಲ್ಲಿ ” ಭತ್ತ ಪೊಟ್ಟೆಯದ್ದೇ ” ಅಂತ ಕೇಳುವ…
ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಸಮಾಜ ಮುಖಿ ಕಾರ್ಯ ಶ್ಲಾಘನೀಯ. ವರ್ಷಕ್ಕೊಮ್ಮೆ ಆರ್ಥಿಕ ಸಂಕಷ್ಟದಲ್ಲಿರುವವರನ್ನು ಗುರುತಿಸುವ ಸಂಘಟನೆಗಳು ಇವೆ. ಆದರೆ ಪ್ರತೀ ತಿಂಗಳು ಜಾಗತಿಕ ಬಂಟರ ಸಂಘಗಳ ಒಕ್ಕೂಟವು ಸಮಾಜಕಲ್ಯಾಣ ಯೋಜನೆಯಡಿಯಲ್ಲಿ ಬಡವರನ್ನು ಗುರುತಿಸುವ ಕೆಲಸ ಮಾಡುತ್ತಿದೆ. ಸಾಧಕರನ್ನು ಕೂಡಾ ಗೌರವಿಸುತ್ತಿದೆ. ಇಂದು ಎಲ್ಲಾ ಕಡೆ ಅತೀ ಹೆಚ್ಚು ಬಂಟರ ಸಮುದಾಯದ ಭವನಗಳಿವೆ. ಇದನ್ನು ಎಲ್ಲಾ ಸಮುದಾಯ ಅನುಕರಣೆ ಮಾಡಬೇಕಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತರಾದ ಎನ್ ಶಶಿಕುಮಾರ್ ತಿಳಿಸಿದರು. ಜಾಗತಿಕ ಬಂಟರ ಸಂಘಗಳ ಒಕ್ಕೂಟ ಮಂಗಳೂರು ಇದರ ಆಶ್ರಯದಲ್ಲಿ ಬಂಟ್ಸ್ ಹಾಸ್ಟೇಲ್ನ ಅಮೃತೋತ್ಸವ ಕಟ್ಟಡದ ಸಭಾಂಗಣದಲ್ಲಿ ಜರಗಿದ ಸಮಾಜ ಕಲ್ಯಾಣ ಯೋಜನೆಯ ಕಾರ್ಯಕ್ರಮ ಮತ್ತು ಸಾಧಕರಿಗೆ ಗೌರವ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಎಲ್ಲಾ ಕಡೆ ಹೋಗಿ ಸರಕಾರಿ ಕೆಲಸ ಮಾಡಲು ಸಾಧ್ಯವಿಲ್ಲ. ಅಂತಹ ಸಂದರ್ಭ ಸಂಘಟನೆಗಳು ಒಟ್ಟಾಗಿ ಕೆಲಸ ಮಾಡಿದಾಗ ಸಮಾಜಕ್ಕೆ ಸಹಾಯವಾಗುತ್ತದೆ. ಇಂತಹ ಸಮಾಜಮುಖಿ ಕಾರ್ಯಕ್ರಮ ಮಾಡುತ್ತಿರುವ ಜಾಗತಿಕ ಬಂಟರ ಸಂಘಗಳ ಒಕ್ಕೂಟದ…