Author: admin

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಸಿಎನ್ ಜಿ ಉತ್ಪಾದನೆ ಘಟಕವನ್ನು ತನ್ನ ಒಡ್ಡೂರು ಫಾರ್ಮ್ಸ್ ನಲ್ಲಿ ಆರಂಭಿಸಿದ್ದು, ನಿರ್ಮಾಣ ಕಾರ್ಯ ಮುಕ್ತಾಯ ಹಂತದಲ್ಲಿದೆ. ಈ ಕುರಿತು ಒಡ್ಡೂರು ಫಾರ್ಮ್ಸ್ ನಲ್ಲಿ ಗುರುವಾರ ಸುದ್ಧಿಗಾರರೊಂದಿಗೆ ಮಾತನಾಡಿ ಶಾಸಕ ರಾಜೇಶ್ ನಾಯ್ಕ್, ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ಈ ಘಟಕ ಅನುಷ್ಠಾನಗೊಂಡಿದ್ದು, ಶೀಘ್ರ ಕೇಂದ್ರ ಸಚಿವರು ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು. ಶಾಸಕ ರಾಜೇಶ್ ನಾಯ್ಕ್ ಮಾರ್ಗದರ್ಶನದಲ್ಲಿ ಅವರ ಪುತ್ರ ಉನ್ನತ್ ಆರ್. ನಾಯ್ಕ್ ಘಟಕದ ಉಸ್ತುವಾರಿ ನೋಡಿಕೊಳ್ಳಲಿದ್ದು ರೀಟ್ಯಾಪ್ ಸೊಲ್ಯೂಷನ್ ಸಂಸ್ಥೆ ಇದರ ಪೂರ್ತಿ ನಿರ್ವಹಣೆ ಮಾಡಲಿದೆ. ಸುಮಾರು 60 ಸೆಂಟ್ಸ್ ಜಮೀನಿನಲ್ಲಿ ಘಟಕ ಸುಸಜ್ಜಿತ ಹಾಗೂ ವೈಜ್ಞಾನಿಕವಾಗಿ ನಿರ್ಮಾಣಗೊಂಡಿದ್ದು, ಈಗಾಗಲೇ ಪ್ರಾಯೋಗಿಕವಾಗಿ ಸಾವಯವ ಗೊಬ್ಬರ ಮತ್ತು ಅನಿಲ ಉತ್ಪಾದನೆ ಆರಂಭಗೊಂಡಿದೆ. ಸದ್ಯಕ್ಕೆ ನಗರ ಮತ್ತು ಗ್ರಾಮೀಣ ಸ್ಥಳೀಯಾಡಳಿತ ಸಂಸ್ಥೆಗಳ ಹಸಿ ತ್ಯಾಜವನ್ನು ಬಳಸಿಕೊಂಡು ಸಾವಯವ ಗೊಬ್ಬರ ಮತ್ತು ಅನಿಲ ಉತ್ಪಾದನೆ ಮಾಡಲಾಗುತ್ತಿದ್ದು, ಇದರ ಮಾರಾಟಕ್ಕಾಗಿ ಪೆಸೊ (ಪೆಟ್ರೋಲಿಯಂ ಮತ್ತು…

Read More

“ತುಳುನಾಡು” ಪರಶುರಾಮ ಸೃಷ್ಟಿ ಎಂಬುದು ಲೋಕ ಪ್ರತೀತಿ. ದ್ರಾವಿಡ ಮೂಲದ ಜನರು ಹೆಚ್ಚಾಗಿ ವಾಸಿಸುತ್ತಿರುವ ತುಳುನಾಡಿನಲ್ಲಿ ಬಂಟರು ಮೂಲ ಹಾಗೂ ಪ್ರಮುಖ ಪಂಗಡದವರಾಗಿ ಕಂಡು ಬರುತ್ತಾರೆ. ಬಂಟರ ಮಾತೃಭಾಷೆ ತುಳು. ತುಳುನಾಡಿನ ಬಲಿಷ್ಟ ಕುಲ ಕುಟುಂಬದವರಾಗಿ ಬಂಟರು ಹಲವಾರು ಪೌರುಷಗಳನ್ನು ಮೆರೆದಿದ್ದಾರೆ. ಬಂಟರು ತುಳುನಾಡಿನ ರಕ್ಷಣೆಗಾಗಿ ಪರಶುರಾಮರ ಆಣತಿಯಂತೆ ನೆಲೆನಿಂತ “ನಾಗವಂಶಿ ಕ್ಷತ್ರಿಯರು” ಎಂದು ತಿಳಿದುಬರುತ್ತದೆ. ತುಳು ನಾಡಿನ ಬಂಟರು ನಾಗವಂಶಿ ಕ್ಷತ್ರಿಯರಾಗಿದ್ದು ನಾಗಬ್ರಹ್ಮ ದೇವರನ್ನು ಮೂಲ ಮತ್ತು ಕುಲ ದೇವರಾಗಿ ನಂಬುತ್ತಾರೆ. ತುಳು ನಾಡಿನಲ್ಲಿ ನಾಗರಪಂಚಮಿ ಬಹಳ ವಿಶೇಷವಾದ ಹಾಗೂ ಪರ್ವಗಳ ಸಾಲಿನಲ್ಲಿ ಬರುವ ಪ್ರಥಮ ಹಬ್ಬ. ಇದಲ್ಲದೆ ತುಳುನಾಡಿನ ಬಂಟರು ನಾಗಮಂಡಲ, ಆಶ್ಲೇಷ ಬಲಿ, ದಕ್ಕೆದ ಬಲಿ ಎಂಬಿತ್ಯಾದಿ ವಿಶೇಷ ನಾಗದೇವರ ಆರಾಧನೆಗಳನ್ನು ಮಾಡುತ್ತಾರೆ. ನಾಗರ ಪಂಚಮಿಯಂದು ಎಲ್ಲಾ ಕುಲ ಕುಟುಂಬದವರು ಮೂಲದ ನಾಗದೇವರಿಗೆ ಹಾಲೆರೆಯುತ್ತಾರೆ. ವಿಶೇಷವಾಗಿ ಬಂಟರ ಮೂಲಸ್ಥಾನಗಳಿಗೆ ಆದಿ ಎಂದು ಹೇಳುತ್ತಾರೆ. ಇದರಿಂದ ಬಂಟರ ಮೂಲಸ್ಥಾನ ತುಳುನಾಡು ಎಂಬುದಕ್ಕೆ ಪೂರ್ಣ ಸ್ಪಟೀಕರಣ ಸಿಕ್ಕಂತಾಗುತ್ತದೆ. ಹಲವಾರು ಸಹಸ್ರ…

Read More

ಉಡುಪಿ ಸಮೀಪದ ಕಾಪು ಹೊಸ ಮಾರಿಗುಡಿಯ ಅಭಿವೃದ್ಧಿ ಕಾರ್ಯ ಭರಪೂರವಾಗಿ ನಡೆಯುತ್ತಿದ್ದು ಇದರ ಯಶಸ್ವಿಗಾಗಿ ಅಂತರಾಷ್ಟ್ರೀಯ ಘಟಕವನ್ನು ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದ ಬೋಸ್ಟನ್‌ನಲ್ಲಿ ಉದ್ಘಾಟಿಸಲಾಯಿತು. ದೇವಾಲಯಗಳ ನಾಡು ‘ತುಳುನಾಡ್’ ತನ್ನ ಕಿರೀಟಕ್ಕೆ ಮತ್ತೊಂದು ಸೇರ್ಪಡೆಯಾಗಿ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಜೀರ್ಣೋದ್ದಾರವಾಗುತ್ತಿದ್ದು ಹದಿನೇಳನೇ ಶತಮಾನದ ಕೆಳದಿ ಅರಸರ ಕಾಲದ ಬೇರುಗಳನ್ನು ಹೊಂದಿರುವ ಐತಿಹಾಸಿಕ ದೇವಾಲಯವನ್ನು ಭರಪೂರವಾಗಿ ನವೀಕರಿಸಲಾಗುತ್ತಿದೆ. ದೇವಿಯ ಭಕ್ತರು ಪ್ರಪಂಚದಾದ್ಯಂತ ಹರಡಿಕೊಂಡಿದ್ದಾರೆ ಮತ್ತು ಹೊಯ್ಸಳ ವಾಸ್ತುಶಿಲ್ಪದಲ್ಲಿ ನಿರ್ಮಿಸಲಾಗುತ್ತಿರುವ ದೇವಾಲಯದ ಜೀರ್ಣೋದ್ಧಾರಕ್ಕೆ ಸಹಾಯ ಮಾಡಲು 18 ಕ್ಕೂ ಹೆಚ್ಚು ದೇಶಗಳಲ್ಲಿ ಸಮಿತಿಗಳನ್ನು ರಚಿಸಲಾಗಿದೆ. ಒಂಬತ್ತು ಸದಸ್ಯರ ಯು ಎಸ್ ಎ ಸಮಿತಿಯನ್ನು ಶ್ರೀ ಭಾಸ್ಕರ್ ಶೇರಿಗಾರ್ ದೀಪ ಬೆಳಗಿಸುವ ಮೂಲಕ ಧಾರ್ಮಿಕ ಸಮಾರಂಭದಲ್ಲಿ ಉದ್ಘಾಟಿಸಿದರು. ಶೈಲಶ್ರೀ ಶೇರಿಗಾರ್, ಕಾಪು ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಶ್ರೀ ವಾಸುದೇವ ಶೆಟ್ಟಿ, ಅಮೇರಿಕಾ ಸಮಿತಿಯ ಸದಸ್ಯರಾದ ಶ್ರೀ ಶರತ್ ಅಮೀನ್ ಮತ್ತು ಬೋಸ್ಟನ್ ತುಳುಕೂಟದ ಸಂಸ್ಥಾಪಕ ಅಧ್ಯಕ್ಷರು, ಬೋಸ್ಟನ್ ಕನ್ನಡ…

Read More

ಭಾರತ ಸಹಿತ ಏಷ್ಯಾ ಖಂಡದಲ್ಲಿ ಪ್ರಸಕ್ತ ವರ್ಷ ತಾಪಮಾನ ಒಂದೇ ಸಮನೆ ಹೆಚ್ಚುತ್ತಿದ್ದು ಆತಂಕಕಾರಿ ಸ್ಥಿತಿಯನ್ನು ತಲುಪಿದೆ. ಭಾರತವಂತೂ ಕಂಡರಿಯದಂಥ ಸುಡುಬಿಸಿಲಿನಿಂದ ಕಂಗೆಟ್ಟಿದೆ. ತಾಪಮಾನ ಹೆಚ್ಚಳದ ಜತೆಜತೆಯಲ್ಲಿ ಉಷ್ಣಹವೆ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿದ್ದು ದೇಶದ ಸರಿಸುಮಾರು ಶೇ. 90ರಷ್ಟು ಪ್ರದೇಶ ಉಷ್ಣಹವೆಯ ಅಪಾಯದಲ್ಲಿದ್ದು ಇದನ್ನು ಅಪಾಯಕಾರಿ ವಲಯ ಎಂದು ಗುರುತಿಸಲಾಗಿದೆ ಎಂದು ಅಧ್ಯಯನ ವರದಿಯೊಂದು ತಿಳಿಸಿದೆ. ಈಗ ದೇಶದ ಬಹುತೇಕ ಭಾಗಗಳು ಬಿಸಿಲಿನ ಝಳದಿಂದ ತತ್ತರಿಸುತ್ತಿದ್ದು ಹಲವೆಡೆ ಬಿಸಿಲಿನ ತೀವ್ರತೆಯ ಕಾರಣದಿಂದ ಜನರು ಸಾವನ್ನಪ್ಪುತ್ತಿರುವ ಬಗೆಗೆ ವರದಿಯಾಗುತ್ತಿದೆ. ಇದೇ ವೇಳೆ ರಬಿ ಋತುವಿನ ಬೆಳೆಗಳ ಮೇಲೆ ಈ ವಿಪರೀತ ಬಿಸಿಲು ಮತ್ತು ಧಗೆ ವ್ಯತಿರಿಕ್ತ ಪರಿಣಾಮ ಬೀರಿದ್ದು ಇಳುವರಿ ಕುಂಠಿತವಾಗಿದೆ. ಅಕಾಲಿಕ ಮಳೆ ಮತ್ತು ತಾಪಮಾನ ಹೆಚ್ಚಳ ರೈತಾಪಿ ವರ್ಗ ಮತ್ತು ಜನಸಾಮಾನ್ಯರ ಮೇಲೆ ತೀವ್ರತೆರನಾದ ಪರಿಣಾಮವನ್ನು ಬೀರತೊಡಗಿದೆ. ದಿನಗೂಲಿ ಕಾರ್ಮಿಕರ ಮೇಲಂತೂ ಬಿಸಿಲಿನ ಝಳ ನೇರ ಪರಿಣಾಮವನ್ನು ಬೀರಿದೆ. ಇದೇ ವೇಳೆ ನಿರ್ಮಾಣ ಕಾಮಗಾರಿಗಳಿಗೂ ಇದು ಹೊಡೆತ ನೀಡಿದ್ದು ನಿರೀಕ್ಷಿತ…

Read More

ರಿಷಬ್ ಶೆಟ್ಟಿ ಮಾತ್ರವಲ್ಲದೆ ತುಳುನಾಡಿನ ಸಮಸ್ತ ಚಿತ್ರ ನಿರ್ದೇಶಕ ನಿರ್ಮಾಪಕರಿಗೆ ನನ್ನದೊಂದು ವಿನಂತಿ. ಕಾಂತಾರ ಸಿನಿಮಾದಂತಹ ಚಿತ್ರ ಮೇಲ್ನೋಟಕ್ಕೆ ಉತ್ತಮವಾಗಿ ಕಂಡು ಬಂದರೂ. ಇಂದು ಬೀದಿ ಬೀದಿಗಳಲ್ಲಿ ಕಾಂತಾರ ಸಿನಿಮಾದ ದೃಶ್ಯಗಳು ಮನರಂಜನೆಗೆ ಒಳಗಾಗಿರುವುದು ಕಂಡಾಗ ನನ್ನಂತಹ ದೈವ ಭಕ್ತರಿಗೆ ತುಂಬಾ ಬೇಸರವಾಗುವುದು ಸಹಜ. ಮೇಲಿಂದ ಮೇಲೆ ದೈವಗಳಿಗೆ ಅವಮಾನ ಆಗುತ್ತಿದ್ದರೂ ತುಳುವರು ಸಹಿಸಿಕೊಂಡಿರುವುದು ನಮ್ಮ ದುರಾದೃಷ್ಟ. ಬೆರ್ಮರೆ ಸೃಷ್ಠಿ ! ತುಳುನಾಡಿನ ದೈವಾರಾಧನೆ ನೇಮ ಕೋಲಗಳಂತಹ ಆಚರಣೆಗಳಿಗೆ ಇರುವ ಮಹತ್ವ ಪ್ರಪಂಚದ ಬೇರೆ ಯಾವುದೇ ಆಚರಣೆಗೆ ಇಷ್ಟೊಂದು ಮಹತ್ವ ಇಲ್ಲಾ ಎಂದರೆ ತಪ್ಪಾಗಲಾರದು. ಹೇಗೆಂದರೆ ಸಿನಿಮಾದಲ್ಲಿ ಬಂದ ದೈವಗಳ ದೃಶ್ಯ ಇಂದು ದೇಶದಾದ್ಯಂತ ವೇದಿಕೆಗಳಲ್ಲಿ ಆಕರ್ಷಣೆ ಮತ್ತು ಮನರಂಜನೆಗಾಗಿ ಮೊದಲ ಆಯ್ಕೆ ಪಡೆದುಕೊಂಡಿರುವುದೇ ಇದಕ್ಕೆ ಸಾಕ್ಷಿ. ಕಾಂತಾರ ಸಿನಿಮಾ ಒಂದು ದೈವಗಳನ್ನು ದೇಶದಾದ್ಯಂತ ಪರಿಚಯಿಸುವ ಸಿನಿಮಾ ಆದರೂ ಅದರಿಂದ ಸಾಧಕಕ್ಕಿಂತಲೂ ಬಾಧಕ ಫಲಿತಾಂಶ ದೈವಾರಾಧಕರ ಮುಂದೆ ಇರುವುದು ಸತ್ಯ ಸಂಗತಿ. ನಮ್ಮ ತುಳುನಾಡಿನ ದೈವ ಸಂಸ್ಕ್ರತಿಯನ್ನು ಹೊರಗಿನವರಿಗೆ ಪರಿಚಯಿಸುವ ಕಾರ್ಯ…

Read More

ಒಂದೇ ದಿನದ ಎರಡು ಪ್ರದರ್ಶನದಲ್ಲಿ ಯುಎಇಯ ಐದು ಸಾವಿರ ತುಳುವರು ನೋಡಿದ ನಾಟಕ “ಶಿವದೂತೆ ಗುಳಿಗೆ” ವೀಕ್ಷಕರನ್ನು ವಿಸ್ಮಿತರನ್ನಾಗಿಸಿತು. ಉದ್ ಮೇತದ ಅಲ್ ನಸರ್ ಲ್ಯಾಂಡ್ ನ ಆಡಿಟೋರಿಯಂನ ಸಭಾಂಗಣದಲ್ಲಿ ಮಾರ್ಚ್ 19 ರಂದು ಕಲಾ ಸಂಗಮ ಕಲಾವಿದರು ಕುಡ್ಲ ಅಭಿನಯಿಸಿದ “ಶಿವದೂತೆ ಗುಳಿಗೆ” ನಾಟಕದ 423 ಮತ್ತು 424 ನೇ ಪ್ರದರ್ಶನಕ್ಕೆ ಜನ ಜಾತ್ರೆಯಾಗಿತ್ತು. ಮಧ್ಯಾಹ್ನ 2.30 ಮತ್ತು ಸಂಜೆ 6.30 ಕ್ಕೆ ಪ್ರದರ್ಶನವಾದ ನಾಟಕದ ಎರಡು ಪ್ರದರ್ಶನಕ್ಕೆ ಯುಎಇಯಲ್ಲಿ ಎಲ್ಲಾ ರಾಜ್ಯದಲ್ಲಿರುವ ತುಳುವರು ಆಗಮಿಸಿ ನಾಟಕದ ಯಶಸ್ವಿ ಪ್ರದರ್ಶನಕ್ಕೆ ಸಾಕ್ಷಿಯಾದರು. ಆರಂಭದಿಂದ ಅಂತ್ಯದವರೆಗೂ ಕೂತುಹಲ ಸೃಷ್ಟಿಸಿ, ಅಬ್ಬರದ ವೇದಿಕೆ, ಕಣ್ಮನ ಸೆಳೆಯುವ ಬೆಳಕು, ಮೈ ರೋಮಾಂಚನಗೊಳ್ಳುವ ಧ್ವನಿ, ತೆಂಬೆರೆಯ ಸದ್ದು, ಪಾಡ್ದನದ ಕಂಪನ, ಇಂಪಿನ‌ ಜೊತೆಗೆ ಹುರುಪು ತಂಬುವ ಸಂಗೀತ ದೊಂದಿಗೆ “ಶಿವದೂತೆ ಗುಳಿಗೆ” ನಾಟಕ ಮೂಡಿಬಂತು. ತುಳುನಾಡಿನ ಕಾರಣಿಕದ ಶಕ್ತಿ ಗುಳಿಗೆ ದೈವದ ಹುಟ್ಟು ಬದುಕು ಶಕ್ತಿಯ ಕಥೆಯೊಂದಿಗೆ ನಾಟಕ ಸಾಗುತ್ತವೆ. ಅಲ್ಲದೆ ತುಳುವ ಮಣ್ಣಿನ ನಂಬಿಕೆಗಳ…

Read More

ಪುತ್ತೂರು ತಾಲೂಕು ಅರಿಯಡ್ಕ ಗ್ರಾಮದ ಹೊಸಗದ್ದೆ ನಿವಾಸಿ ಸುಶೀಲಾ ರೈ ಅವರ ಮನೆಯ ಛಾವಣಿ ಬಿದಿರುಗಳು ಹಳೆಯದಾಗಿ ಮನೆ ಮಹಡಿ ಬೀಳುವ ಹಂತದಲ್ಲಿ ಇದ್ದು ಟರ್ಫಾಲ್ ಹೊದಿಕೆ ಹಾಕಿ ದಿನದೂಡುತ್ತಿದ್ದರು. ಸುಶೀಲಾ ರೈ ಅವರು ಪುತ್ತೂರು ತಾಲೂಕು ಯುವ ಬಂಟರ ಸಂಘದಲ್ಲಿ ತಮ್ಮ ಅಳಲನ್ನು ತೋಡಿಕೊಂಡಿದ್ದರು. ಯುವ ಬಂಟರ ಸಂಘವು ಇದಕ್ಕಾಗಿ ಸಹಾಯ ಯಾಚಿಸಿ ಸರಿಪಡಿಸಿಕೊಡುವ ಪ್ರಯತ್ನಕ್ಕೆ ಮುಂದಾಗಿರುವ ಸಂದರ್ಭದಲ್ಲಿ ಯುವ ಬಂಟರ ಸಂಘದ ಉಪಾಧ್ಯಕ್ಷರಾದ ನೆಲ್ಲಿಕಟ್ಟೆ ಗಣೇಶ್ ಶೆಟ್ಟಿ ಅವರು ಈ ವಿಷಯವನ್ನು ಅಭಿಮತ ಟಿವಿ ಚಾನೆಲ್ ನ ಮುಖ್ಯಸ್ಥೆ ಮಮತಾ ಪಿ ಶೆಟ್ಟಿ ಅವರಲ್ಲಿ ಹೇಳಿಕೊಂಡ ಮೇರೆಗೆ ತಕ್ಷಣವೇ ಮನವಿಗೆ ಸ್ಪಂದಿಸಿದ ಮಮತಾ ಶೆಟ್ಟಿ ಅವರು ಸುಶೀಲಾ ರೈ ಅವರ ಮನೆಗೆ ನೇರ ಭೇಟಿ ಇತ್ತು ಪರಿಶೀಲಿಸಿ ಕೂಡಲೇ ಈ ವಿಷಯವನ್ನು ಜಾಗತಿಕ ಬಂಟರ ಸಂಘದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಅವರ ಗಮನಕ್ಕೆ ತಂದರು. ಮಮತಾ ಶೆಟ್ಟಿ ಅವರ ಶಿಫಾರಸ್ಸಿಗೆ ಸ್ಪಂದಿಸಿದ ಐಕಳ ಹರೀಶ್ ಶೆಟ್ಟಿ ಅವರು…

Read More

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಶ್ರೀ ಐಕಳ ಹರೀಶ್ ಶೆಟ್ಟಿಯವರು ಒಕ್ಕೂಟದ ಸಮಾಜ ಕಲ್ಯಾಣ ಯೋಜನೆಯಡಿ ಶೇಕಡಾ 95 ಕ್ಕೂ ಮಿಕ್ಕಿ ಅಂಕ ಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನದ ಚೆಕ್ಕನ್ನು ಒಕ್ಕೂಟದ ಕಚೇರಿಯಲ್ಲಿ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಶ್ರೀ ಸಂತೋಷ್ ಶೆಟ್ಟಿ ಬೋಳ, ಒಕ್ಕೂಟದ ಆಹ್ವಾನಿತ ಸದಸ್ಯರಾದ ಶ್ರೀ ರವಿ ಶೆಟ್ಟಿ ಜತ್ತಬೆಟ್ಟು, ಇತರ ಸಂಘಗಳ ಪದಾಧಿಕಾರಿಗಳು, ಪಲಾನುಭವಿಗಳ ಕುಟುಂಬಸ್ಥರು, ಒಕ್ಕೂಟದ ಆಡಳಿತಾಧಿಕಾರಿ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

Read More

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್) ಮುಂಬಯಿ, ಜ.03: ತುಳು-ಕನ್ನಡಿಗರ ಅಭಿಮಾನದ ರಾಷ್ಟ್ರ ಕಂಡ ಲೋಕಪ್ರಿಯ ಎಂಪಿ, ಉತ್ತರ ಮುಂಬಯಿ ಲೋಕಸಭಾ ಕ್ಷೇತ್ರದ ಸಂಸದ ಗೋಪಾಲ ಸಿ.ಶೆಟ್ಟಿ ಇದೀಗ ಹಲವಾರು ಮಂದಿಗೆ ಸಾಮಾಜಿಕ ನ್ಯಾಯ ಒದಗಿಸಿ ಮತ್ತೆಸುದ್ದಿಯಾಗಿದ್ದಾರೆ. ಈ ಬಗ್ಗೆ ಫಲಾನುಭವಿ ಸಂತ್ರಸ್ತರು ಪತ್ರಕರ್ತರಲ್ಲಿ ತಮ್ಮ ಅನುಭವಗಳನ್ನು ಬಿಚ್ಚಿಟ್ಟು ಸಂಸದ ಗೋಪಾಲ ಶೆಟ್ಟಿ ಮತ್ತು ಶ್ರೀ ಗೋಪಾಲ್ ಸಿ.ಶೆಟ್ಟಿ (ಸಂಸದ) ತುಳು ಕನ್ನಡಿಗರ ಅಭಿಮಾನಿ ಬಳಗ ಮುಂಬಯಿ ಇದರ ಸಂಚಾಲಕ, ಉತ್ತರ ಮುಂಬಯಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಎರ್ಮಾಳ್ ಹರೀಶ್ ಶೆಟ್ಟಿ ಇವರನ್ನು ನಿವೇದಿತಾ ನಿತ್ಯಾನಂದ ನಾಯಕ್ ದಂಪತಿ ಹಾಗೂ ವೇದಾವತಿ ಶೆಟ್ಟಿ, ಕು| ನಿಧಿ ಶೆಟ್ಟಿ, ಮಾ| ಸೂರಜ್ ಸದಾಶಿವ ಶೆಟ್ಟಿ ಮನಸಾರೆ ಅಭಿವಂದಿಸಿದರು. ಸಂಸದ ಗೋಪಾಲ್ ಶೆಟ್ಟಿ ಪ್ರಸ್ತಾವನೆಯಂತೆ ವಿವಾಹ ಕಾನೂಬದ್ಧ ವಯಸ್ಸು ಅಂಗೀಕಾರಕ್ಕೆ ಮನ್ನಣೆ ದೊರೆತೆ ಬೆನ್ನಲ್ಲೇ ಸಂಸದರ ಸಾಮಾಜಿಕ ಕಳಕಳಿಯ ಬಗ್ಗೆ ತಡವಾಗಿ ಸಾಮಾಜಿಕ ನ್ಯಾಯ ಒದಗಿಸುತ್ತಿರುವ ವಿಚಾರ ಬೆಳಕಿಗೆ ಬಂದಿದ್ದು ಅಭಿಮಾನದಿಂದ ಶುಭೇಚ್ಛ…

Read More

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ಇದರ ಪುಂಜಾಲಕಟ್ಟೆ ಘಟಕದ 6ನೇ ವಾರ್ಷಿಕೋತ್ಸವ ಕಾರ್ಯಕ್ರಮ ಡಿ.25 ರಂದು ಸಂಜೆ ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ನಡೆಯಿತು. ಉಡುಪಿ ಜಿಲ್ಲಾ ನ್ಯಾಯಾಧೀಶರಾದ ದಿನೇಶ್ ಹೆಗ್ಡೆ ಬದ್ಯಾರು ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಯಕ್ಷಗಾನದಲ್ಲಿ ದೊಡ್ಡ ಕ್ರಾಂತಿಯನ್ನು ಮಾಡಿರುವ ಪಟ್ಲ ಸತೀಶ್ ಶೆಟ್ಟಿ ಅವರು ಕಲಾವಿದರಿಗೊಂದು ಶಕ್ತಿಯಾಗಿದ್ದಾರೆ. ಯಕ್ಷಗಾನದಿಂದ ಜ್ಞಾನದ ವೃದ್ಧಿಯಾಗುತ್ತಿದ್ದು, ಮಕ್ಕಳಲ್ಲಿ ಯಕ್ಷಗಾನದ ಅಭಿರುಚಿ ಮೂಡಿಸುವ ನಿಟ್ಟಿನಲ್ಲಿ ಪೋಷಕರು ಪ್ರೋತ್ಸಾಹಿಸಬೇಕು ಎಂದರು. ಮುಖ್ಯ ಅತಿಥಿಯಾಗಿದ್ದ ಯಕ್ಷಧ್ರುವ ಪಟ್ಲ ಫೌಂಡೇಶನ್ ಸ್ಥಾಪಕಾಧ್ಯಕ್ಷ ಪಟ್ಲಗುತ್ತು ಸತೀಶ್ ಶೆಟ್ಟಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಯಕ್ಷಗಾನದಲ್ಲಿ ಸಾಕಷ್ಟು ಪರಿವರ್ತನೆ ಕಂಡಿದೆ. ಇತ್ತೀಚಿನ ದಿನಗಳಲ್ಲಿ ನ್ಯಾಯಾಲಯದ ಅವರಣದಲ್ಲಿ ಯಕ್ಷಗಾನ ಪ್ರದರ್ಶನ ನಡೆಯುತ್ತಿರುವುದು ಹೊಸ ಬೆಳವಣಿಗೆಯಾಗಿದೆ. ಪಟ್ಲ ಪೌಂಡೇಶನ್‌ನ ಪುಂಜಾಲಕಟ್ಟೆ ಘಟಕ ಯಕ್ಷ ಶಿಕ್ಷಣದ ಮೂಲಕ ಮಕ್ಕಳನ್ನು ಯಕ್ಷಗಾನದಲ್ಲಿ ತೊಡಗಿಸಿರುವುದು ಶ್ಲಾಘನೀಯವಾಗಿದೆ ಎಂದರು. ಸರಕಾರಿ ಮತ್ತು ಖಾಸಗಿ ಸೇರಿದಂತೆ ಒಟ್ಟು 40 ಶಾಲೆಗಳ ನಾಲ್ಕು ಸಾವಿರ ವಿದ್ಯಾರ್ಥಿಗಳಿಗೆ ಯಕ್ಷ ಶಿಕ್ಷಣದ ಮೂಲಕ…

Read More